ಲಿಂಗ ಸಾಮರಸ್ಯದಿಂದ ಮಹಿಳಾ ಸಬಲೀಕರಣ ಸಾಧ್ಯ ಡಾ. ಸುಷ್ಮಾ ಹೂಗಾರ
ಜಾಹೀರಾತು
Women empowerment is possible through gender harmony. Dr. Sushma Hoogara
ವಿಜಯನಗರ(ಹೊಸಪೇಟೆ): ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ ವಿಶೇಷ ವಾರ್ಷಿಕ ಶಿಬಿರದ ಮೂರನೇ ದಿನದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಪುರುಷ ತಮ್ಮ ನ್ಯೂನ್ಯತೆ ಮತ್ತು ಶಕ್ತಿಗಳನ್ನು ಅರಿತುಕೊಂಡು ಇಬ್ಬರೂ ಸಮ ಎಂದು ಸ್ವೀಕಾರ ಮಾಡಿಕೊಂಡು ಹೊಂದಾಣಿಕೆಯನ್ನು ರೂಢಿಸಿಕೊಂಡಲ್ಲಿ ಮಾತ್ರ ಬದುಕು ಅರ್ಥಪೂರ್ಣ ಎಂದು ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಮಾಹಿತಿ ನೀಡಿದರು.ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಅವರು ಮಹಿಳಾ ಸಬಲೀಕರಣ ಹಾಗೂ ಲಿಂಗಸಾಮರಸ್ಯದ ಅನಿವಾರ್ಯತೆಯ ಕುರಿತು ಮಾತನಾಡಿದರು.ಇಂದಿನ ಕಾಲದ ಮಹಿಳೆ,ಶಿಕ್ಷಣ ಪಡೆದಿದ್ದಾಳೆ,ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ. ಆದರೆ ಇವುಗಳ ಆಧಾರದ ಮೇಲೆ ಮಹಿಳೆ ಸಬಲೆಯಾಗಿದ್ದಾಳೆ ಎಂದರೆ ಅದು ಕೇವಲ ಕಲ್ಪನೆ , ಮೊದಲಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಕೇವಲ ಶೋಷಣೆ ಆಯಾಮಗಳು ಬದಲಾಗಿವೆ, ಹೊರತು ಕಡಿಮೆಯಾಗಿಲ್ಲ. ಮಹಿಳಾ ಸಬಲೀಕರಣದ ಪ್ರಕ್ರಿಯೆ ನಡೆಯಬೇಕಾಗಿರುವುದು ಸಮಾಜದಲ್ಲಲ್ಲ ಸ್ತ್ರೀ ಹಾಗೂ ಪುರುಷನ ವೈಚಾರಿಕತೆಯಲ್ಲಿ ಮತ್ತು ಅವರ ದೃಷ್ಟಿ ಕೋನದಲ್ಲಿ ಬದಲಾವಣೆ ಅನಿವಾರ್ಯತೆ ಇದೆ. ಆತ್ಮವಿಶ್ವಾಸ ಆತ್ಮ ಗೌರವ ಮನುಷ್ಯನ ಅತಿ ದೊಡ್ಡ ಸಂಪತ್ತು, ಪ್ರತಿ ಮಹಿಳೆ ಆತ್ಮವಿಶ್ವಾಸ ಮತ್ತು ಆತ್ಮ ಗೌರವದಿಂದ ಜೀವನ ನಡೆಸಬೇಕು ಹಾಗೆಯೇ ಪ್ರತಿ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸುವ ಛಲ ಹೊಂದಿರಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಿಬಸಯ್ಯ ಅವರು ಮಹಿಳೆ ಮತ್ತು ಪುರುಷ ಎಂಬ ಭೇದಭಾವನ್ನು ಮಾಡದೇ ಎಲ್ಲರೂ ಮುನ್ನಡದರೆ ಸಮಸಮಾಜವನ್ನು ಕಾಣಲು ಸಾಧ್ಯ ಎಂದು ಹೇಳಿದರು. ಈ ವೇಳೆ ಎನ್. ಎಸ್. ಎಸ್ ನ ಕಾರ್ಯಕ್ರಮಾಧಿಕಾರಿ ಡಾ.ಗಾದೆಪ್ಪ ಹಾಗೂ ಡಾ. ವಿರೇಶ್ ಉಪಸ್ಥಿತರಿದ್ದರು ಮತ್ತು ಶಿಬಿರಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.
ಇಂದಿನ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಸ್ಫೂರ್ತಿ ಅಂತರರಾಷ್ಟ್ರೀಯ ಮಹಿಳಾ ದಿನ – ವಿಜಯಲಕ್ಷ್ಮಿ
ಕೊಪ್ಪಳ: ತಾಲೂಕಿನ ಹುಲಿಗಿದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS) ಹಾಗೂ ಚಿಗುರು ಸಂಜೀವಿನಿ ಮಹಿಳಾ ಒಕ್ಕೂಟವತಿಯಿಂದ ಜಂಟಿಯಾಗಿ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ AIMSS ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ರವರು ಮಾತನಾಡುತ್ತಾ “ಮಾರ್ಚ್ 8- ಮಹಿಳಾ ದಿನವು ಒಂದು ಐತಿಹಾಸಿಕ ದಿನವಾಗಿದ್ದು, ನಮ್ಮ ಸಂಘಟನೆ ಈ ದಿನವನ್ನು ಒಂದು ಅರ್ಥಪೂರ್ಣ ದಿನವನ್ನಾಗಿ ದೇಶದಾದ್ಯಂತ ಆಚರಿಸುತ್ತಾ ಬಂದಿದೆ.
ಇಂದಿನ ದಿನಗಳಲ್ಲಿ ಮಹಿಳಾ ದಿನವನ್ನು ಕೇವಲ ಮಹಿಳೆಯರ ವೈಯಕ್ತಿಕ ಕರಕುಶಲತೆಯನ್ನು ಹಾಗೂ ಚಾಕಚಕ್ಯತೆಯನ್ನು ಹಾಡಿಹೊಗಳುವ ದಿನವಾಗಿ ವಿಜೃಂಭಿಸುತ್ತಿದ್ದಾರೆ. ಆದರೆ ಮಹಿಳಾ ದಿನದ ಇತಿಹಾಸವೆಂದರೆ ವಿಶ್ವದ ತುಳಿತಕ್ಕೊಳಗಾದ ಮಹಿಳೆಯರು ಸಂಘಟಿತ ಹೋರಾಟಕ್ಕೆ ಸಂಕಲ್ಪ ತೊಟ್ಟ ದಿನ. 1908 ಮಾರ್ಚ್ 8ರಂದು ಅಮೆರಿಕಾದ ನ್ಯೂಯಾರ್ಕಿನಲ್ಲಿ ಸಮಾನ ವೇತನಕ್ಕಾಗಿ ಹಾಗೂ ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗಳನ್ನು ಮೀರಬಾರದೆಂದು ಒತ್ತಾಯಿಸಿ ದುಡಿಯುವ ಮಹಿಳೆಯರು ಬೀದಿಗಿಳಿದರು.
20 ರಿಂದ 30 ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ 13 ವಾರಗಳ ಕಾಲ ಹೋರಾಟ ನಡೆಸಿದರು. ಈ ನಿಶ್ಯಸ್ತ್ರ ಮಹಿಳೆಯರ ಮೇಲೆ ಅಲ್ಲಿನ ಸರ್ಕಾರ ಗುಂಡಿನ ಮಳೆಗೆರೆದಿದ್ದರ ಪರಿಣಾಮ ನ್ಯೂಯಾರ್ಕ್ ನ ಬೀದಿಗಳು ಕೆಂಪಾದವು.
ಆದರೆ ಇದರಿಂದ ಮಹಿಳಾ ಹೋರಾಟ ಹಿಮ್ಮೆಟ್ಟುವ ಬದಲಿಗೆ ಇದು ಮುಂದಿನ ಅನೇಕ ಹೋರಾಟಗಳಿಗೆ ನಾಂದಿ ಹಾಡಿತು.
ಕೊನೆಗೆ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ರವರು ಕೊಪೆನ್ ಹೆಗನ್ ನಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8ನ್ನು ಅಂತರರಾಷ್ಟೀಯ ಮಹಿಳಾ ದಿನವಾಗಿ ಘೋಷಿಸಿದರು. ಅಂದಿನಿಂದ ಈ ದಿನವು ವಿಶ್ವದಾದ್ಯಂತ ಹೋರಾಟದ ದಿನವಾಗಿ ಆಚರಿಸಲ್ಪಡುತ್ತಿದೆ.
ಆದರೆ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನೈಜ ಸ್ವಾತಂತ್ರ್ಯ, ಸಮಾನತೆ, ಗೌರವ ಮರೀಚಿಕೆಯಾಗಿಯೇ ಉಳಿದಿದೆ. ಬದಲಾಗಿ ದಿನನಿತ್ಯ ಮಹಿಳೆಯರು ಗರ್ಭಾವಸ್ಥೆಯಿಂದ ಹಿಡಿದು ಮಸಣದವರೆಗೂ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಸಂಖ್ಯೆ ಮಿತಿಮೀರಿದೆ.
ಮೂರು ತಿಂಗಳ ಹಸುಗೂಸಿನಿಂದ ಹಿಡಿದು ವಯೋವೃದ್ಧರ ಮೇಲೂ ಕೂಡ ಅತ್ಯಾಚಾರ ಹಾಗೂ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಸ್ತ್ರೀ ಭ್ರೂಣ ಹತ್ಯೆ, ಮರ್ಯಾದೆಗೇಡು ಹತ್ಯೆ , ಆಸಿಡ್ ದಾಳಿ ಹಾಗೆಯೇ ಸರ್ಕಾರವೇ ಹೇಳುತ್ತಿರುವ ಸಮೀಕ್ಷೆಯಂತೆ ಇತ್ತೀಚೆಗಂತೂ ಬಾಲಗರ್ಭಿಣಿಯರ ಸಂಖ್ಯೆ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸಾಂಸ್ಕೃತಿಕ ಅಧ:ಪತನ. ಅಶ್ಲೀಲ ಸಿನಿಮಾ-ಸಾಹಿತ್ಯ ಹಾಗೂ ಮದ್ಯ-ಮಾದಕ ವಸ್ತುಗಳು.
ಸರ್ಕಾರ ಈ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಿ ಅಶ್ಲೀಲತೆಗೆ ಕಡಿವಾಣ ಹಾಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕು.
ಜೊತೆಗೆ ಮಹಾನ್ ಚೇತನಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಮೇಡಂ ಕ್ಯೂರಿ ಅವರಂತಹ ಆದರ್ಶ ವ್ಯಕ್ತಿತ್ವಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎನ್ನುತ್ತಾ, ಸಮಾಜದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸ್ತ್ರೀ-ಪುರುಷರು ಒಗ್ಗಟ್ಟಾಗಿ ಧ್ವನಿ ಎತ್ತಿದರೆ ಮಾತ್ರ ಇಂತಹ ಮಹಿಳಾ ದಿನಾಚರಣೆಗಳು ನಿಜಕ್ಕೂ ಸಾರ್ಥಕವಾಗುತ್ತವೆ.
ಇದು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ನಮ್ಮ ಮನೆ – ಮನಸ್ಸುಗಳನ್ನು ಹೊಕ್ಕು ಬದಲಾವಣೆಗೆ ನಾಂದಿ ಹಾಡಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸನ್ನದ್ಧರಾಗೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಗುರು ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಆರ್. ನಿಲ್ಲಮ್ಮ, ಪದಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಹುಸೇನ್ ಬೀ, ಯಮನೂರಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿಲ್ಲಮ್ಮ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಗಂಗಾವತಿ: ತಾಲೂಕಿನ ಹೊಸಕೇರಾ ಡಗ್ಗಿ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “HPV ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಡಾಕ್ಟರ್ ಫರ್ಜಾನಾ ಜಾಸ್ಮಿನ್ ಚಾಲನೆ ನೀಡಿದರು, ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಡಿ ಶ್ರೀನಿವಾಸ್ ಹಾಗೂ ಶ್ರೀ ಮಂಜುನಾಥ ARS ಸಮಿತಿ ಸದಸ್ಯರು ಭಾಗಿಯಾಗಿದ್ದರು, ಜ್ಯೋತಿ ಬೆಳಗಿಸುವ ಮೂಲಕ ಮಾತನಾಡಿದ ಡಾಕ್ಟರ್ ಫರ್ಜಾನಾ ಜಾಸ್ಮಿನ್ , ಇಂದು ಅಂತರಾಷ್ಟ್ರೀಯ ಕಿಡ್ನಿ ದಿನ, ” ಆರೋಗ್ಯವೇ ಭಾಗ್ಯ” ಗಾದೆಗಳು ವೇದಗಳಿಗೆ ಸಮವಾಗಿವೆ. ಗಾದೆಗಳು ಹಿರಿಯರು ನುಡಿದ ನುಡಿಮುತ್ತುಗಳಾಗಿವೆ. ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ತುಂಬಾ ಅರ್ಥಪೂರ್ಣವಾದ ಗಾದೆ ಮಾತಾಗಿದೆ.ಮನುಷ್ಯನಿಗೆ ಆರೋಗ್ಯಕ್ಕಿಂತ ಬೆಲೆ ಬಾಳುವ ವಸ್ತು ಮತ್ತೊಂದಿಲ್ಲ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳೋಣ ಎಂದು ಹೇಳಿದರು, ನಿಮ್ಮ ಜನನಾಂಗಗಳ ಮೇಲೆ ಪರಿಣಾಮ ಬೀರುವ HPV ಸಾಮಾನ್ಯವಾಗಿ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ರೋಗಲಕ್ಷಣಗಳು ಕಂಡುಬಂದಾಗ, ವೈರಸ್ನ ಸಾಮಾನ್ಯ ಲಕ್ಷಣವೆಂದರೆ ನಿಮ್ಮ ಜನನಾಂಗದ ಪ್ರದೇಶದಲ್ಲಿನ ನರಹುಲಿಗಳು. ಜನನಾಂಗದ ನರಹುಲಿಗಳು ನಿಮ್ಮ ಚರ್ಮದ ಮೇಲೆ ಬೆಳೆಯುವ ಒರಟಾದ, ಹೂಕೋಸು ತರಹದ ಉಂಡೆಗಳಾಗಿವೆ. ಅವು ಚರ್ಮದ ಟ್ಯಾಗ್ಗಳಂತೆಯೂ ಕಾಣಿಸಿಕೊಳ್ಳಬಹುದು. ನೀವು ಕಡಿಮೆ-ಅಪಾಯದ HPV ಸೋಂಕಿಗೆ ಒಳಗಾದ ವಾರಗಳು, ತಿಂಗಳುಗಳು ಅಥವಾ ವರ್ಷಗಳ ನಂತರವೂ ಅವು ಕಾಣಿಸಿಕೊಳ್ಳಬಹುದು. ಜನನಾಂಗದ ನರಹುಲಿಗಳು ಸಾಂಕ್ರಾಮಿಕವಾಗಿವೆ (ಎಲ್ಲಾ ರೀತಿಯ HPV ಗಳಂತೆ). ಅವು ತುರಿಕೆ ಮತ್ತು ತುಂಬಾ ಅನಾನುಕೂಲತೆಯನ್ನು ಉಂಟುಮಾಡಬಹುದು. ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಒಂದು ಸಾಮಾನ್ಯ ವೈರಸ್ ಆಗಿದೆ. ನಿಮ್ಮ ಕೈಗಳು, ಪಾದಗಳು ಮತ್ತು ಮುಖದ ಮೇಲೆ ನರಹುಲಿಗಳನ್ನು ಉಂಟುಮಾಡುವ HPV ತಳಿಗಳು ಸೇರಿದಂತೆ 100 ಕ್ಕೂ ಹೆಚ್ಚು ರೀತಿಯ HPVಗಳಿವೆ . ಸುಮಾರು 30 HPV ತಳಿಗಳು ನಿಮ್ಮ ಜನನಾಂಗಗಳ ಮೇಲೆ ಪರಿಣಾಮ ಬೀರಬಹುದು, ನಿಮ್ಮ ಯೋನಿ, ಯೋನಿ , ಗರ್ಭಕಂಠ, ಶಿಶ್ನ ಮತ್ತು ಸ್ಕ್ರೋಟಮ್ , ಹಾಗೆಯೇ ನಿಮ್ಮ ಗುದನಾಳ ಮತ್ತು ಗುದದ್ವಾರ ಸೇರಿದಂತೆ. ಇದು ಜನನಾಂಗದ ನರಹುಲಿಗಳನ್ನು ಉಂಟುಮಾಡುವ HPV ಪ್ರಕಾರವನ್ನು ಒಳಗೊಂಡಿದೆ ಎಂದರು. ಈ ಸಂದರ್ಭದಲ್ಲಿ ವೀರಣ್ಣ ಹರ್ತಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾಗಳು ಮತ್ತು ಶ್ರೀಮತಿ ಡಿ ಅಕ್ಕಿಮ್ಮ PHCO ಶ್ರೀಮತಿ ಸರಸ್ವತಿ PHCO ಶ್ರೀ ಮಾದಗೊಂಡ ಮಹೇಂದ್ರ HIO ಶ್ರೀ ಶರಣಪ್ಪ ಎಸ್ HIO, ಹೊಸಕೇರಾ ಗ್ರಾಮದ ಗುರು ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು, ಹಿರಿಯ ನಾಗರಿಕರು, ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಒಬ್ಬ ಮಹಾತ್ಮನ ಜೀವನವನ್ನು ಅಳೆಯುವುದು ಅವನು ಬದುಕಿದ ವರ್ಷಗಳಿಂದಲ್ಲ; ಅವನು ಬದುಕಿದ ಧ್ಯೇಯದಿಂದ. ಈ ದೃಷ್ಟಿಯಿಂದ ನೋಡಿದರೆ ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಜೀವನವು ಕೇವಲ ಒಂದು ವ್ಯಕ್ತಿಯ ಜೀವನಕಥೆಯಲ್ಲ, ಅದು ಲಿಂಗಾಯತ ಧರ್ಮದ ಪುನರುತ್ಥಾನ ಹೋರಾಟದ ಒಂದು ಮಹತ್ವದ ಅಧ್ಯಾಯ.
1946ರ ಮಾರ್ಚ್ 13ರಂದು ಜನಿಸಿದ ಅವರು, 2019ರ ಮಾರ್ಚ್ 14ರಂದು ಲಿಂಗೈಕ್ಯರಾದರು. ಹುಟ್ಟು ಮತ್ತು ಲಿಂಗೈಕ್ಯ ದಿನಾಂಕಗಳ ಈ ಸಮೀಪತೆ ಅವರ ಜೀವನದ ಒಂದು ತಾತ್ವಿಕ ಸಂಕೇತದಂತೆ ಕಾಣುತ್ತದೆ. ತಮ್ಮ ಪ್ರವಚನಗಳಲ್ಲಿ ಅವರು ಹೇಳುತ್ತಿದ್ದ ಮಾತು — “Date of Birth ಯಾವಾಗಲೂ Date of Death ಅನ್ನು ತನ್ನ ಹಿಂದೆಯೇ ಕಟ್ಟಿಕೊಂಡು ಬರುತ್ತದೆ.” — ಅವರ ಜೀವನದಲ್ಲೇ ಸಾರ್ಥಕವಾದಂತಾಗಿದೆ.
ಮಾತಾಜಿಯವರ ಜೀವನದ ಮಹತ್ವ ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಸೀಮಿತವಾಗಿಲ್ಲ. ಅದು ಸಾಮಾಜಿಕ ಜಾಗೃತಿ, ಧಾರ್ಮಿಕ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯೊಂದಿಗೂ ಆಳವಾಗಿ ಜೋಡಿಕೊಂಡಿದೆ. ತಮ್ಮ 73 ವರ್ಷಗಳ ಜೀವನದಲ್ಲಿ 54 ವರ್ಷಗಳನ್ನು ಅವರು ಧರ್ಮಸೇವೆಗೆ ಸಮರ್ಪಿಸಿದರು. ಕೇವಲ 19ನೇ ವಯಸ್ಸಿನಲ್ಲಿ ಜಂಗಮ ದೀಕ್ಷೆ ಸ್ವೀಕರಿಸಿದ ಅವರು, ನಂತರದ ಜೀವನವನ್ನೆಲ್ಲ ಗುರು ಬಸವಣ್ಣನವರ ತತ್ವದ ಪ್ರಸಾರ ಮತ್ತು ಲಿಂಗಾಯತ ಧರ್ಮದ ಸ್ವತಂತ್ರ ಗುರುತಿನ ಹೋರಾಟಕ್ಕೆ ಮೀಸಲಿಟ್ಟರು.
ಲಿಂಗಾಯತ ಧರ್ಮದಲ್ಲಿ ಸಾವು ಭಯದ ವಿಷಯವಲ್ಲ; ಅದು ಜೀವನದ ಅಂತಿಮ ಸಂಭ್ರಮ. ಆದರೆ ಮಾತಾಜಿಯವರ ಜೀವನದಲ್ಲಿ ಒಂದು ವಿಶಿಷ್ಟ ವಿರೋಧಾಭಾಸ ಕಾಣುತ್ತದೆ. ಒಂದು ಕಡೆ ಅವರು ಸಾವನ್ನು ಸ್ವಾಗತಿಸಲು ಸಮಾಧಿಯನ್ನೇ ಮುಂಚಿತವಾಗಿ ಸಿದ್ಧಮಾಡಿಕೊಂಡಿದ್ದರು; ಇನ್ನೊಂದು ಕಡೆ ಧರ್ಮಕಾರ್ಯ ಅಪೂರ್ಣವಾಗಿರುವುದರಿಂದ ಇನ್ನೂ ಬದುಕಬೇಕು ಎಂಬ ಸಂಕಲ್ಪದಿಂದ ಅವರು ಸಾವಿನೊಡನೆ ಯುದ್ಧ ಮಾಡಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ದೊರಕಿಸಬೇಕೆಂಬ ಮಹತ್ತರ ಗುರಿ ಅವರ ಮುಂದಿತ್ತು. ಅದಕ್ಕಾಗಿಯೇ ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಅವರು ದೇಹದ ಅಶಕ್ತಿಯ ನಡುವೆಯೂ ಅಸಾಧಾರಣ ಮನೋಬಲದಿಂದ ಬದುಕಿದರು.
ಮಾತಾಜಿಯವರ ತಪಸ್ಸಿನ ಆಳವನ್ನು ಅವರ ಜೀವನದ ಕೆಲವು ಘಟನೆಗಳು ಸ್ಪಷ್ಟಪಡಿಸುತ್ತವೆ. 1972ರಲ್ಲಿ ಬೆಂಗಳೂರಿನಲ್ಲಿ ಬಸವ ಮಂಟಪ ನಿರ್ಮಾಣವಾಗುವ ಸಂದರ್ಭದಲ್ಲಿ ಅವರು ಸ್ವತಃ ಕಟ್ಟಡ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ತಲೆಯ ಮೇಲೆ ಸಿಮೆಂಟಿನ ಬುಟ್ಟಿಯನ್ನು ಹೊತ್ತು ದುಡಿಯುತ್ತಿದ್ದ ಅವರ ಚಿತ್ರಗಳು ಇಂದು ಕೇವಲ ನೆನಪುಗಳಲ್ಲ; ಅವು ಒಂದು ತತ್ವದ ಜೀವಂತ ರೂಪಕ.
ಈ ಸಂದರ್ಭದಲ್ಲಿ ಸರ್ವಜ್ಞನ ವಚನ ಅನಾಯಾಸವಾಗಿ ನೆನಪಾಗುತ್ತದೆ:
ಇಂದು ಬೆಂಗಳೂರಿನ ಬಸವ ಮಂಟಪ ಕಟ್ಟಡವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ; ಅದು ತ್ಯಾಗ, ಪರಿಶ್ರಮ ಮತ್ತು ಆಧ್ಯಾತ್ಮಿಕ ದೃಢಸಂಕಲ್ಪಗಳ ಸಂಕೇತವಾಗಿದೆ.
ಮಾತಾಜಿಯವರು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರು. ಅವರ ತಂದೆ ಶರಣ ಡಾ. ಬಸಪ್ಪನವರು ಆ ನಿವೇಶನದಲ್ಲಿ ನರ್ಸಿಂಗ್ ಹೋಮ್ ನಿರ್ಮಿಸಿ ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ ಇತಿಹಾಸವು ಬೇರೆ ದಿಕ್ಕಿನಲ್ಲಿ ಸಾಗಿತು. ಆ ಸ್ಥಳದಲ್ಲಿ ಆಸ್ಪತ್ರೆಯ ಬದಲು ಬಸವ ಮಂಟಪ ನಿರ್ಮಾಣವಾಯಿತು. ಅವರು ವೈದ್ಯೆಯಾಗಲಿಲ್ಲ; ಆದರೆ ಭವರೋಗ ವೈದ್ಯೆಯಾದರು. ನಿರಾಶೆ, ನಿಸ್ಸಹಾಯಕತೆ ಮತ್ತು ಜೀವನದ ಸಂಕಟಗಳಲ್ಲಿ ಸಿಲುಕಿದ್ದ ಅನೇಕ ಜನರಿಗೆ ಅವರ ಪ್ರವಚನಗಳು ಹೊಸ ಆಶಾಕಿರಣವಾಗಿ ಪರಿಣಮಿಸಿದವು.
ಒಂದು ಪ್ರವಚನ ಕೇಳಿ ಆತ್ಮಹತ್ಯೆಯ ನಿರ್ಧಾರದಿಂದ ಹಿಂದಿರುಗಿದ ಜನರ ಕಥೆಗಳು ಅನೇಕ. ಅವರ ಮಾತುಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಬದುಕನ್ನು ಮರು ರೂಪಿಸುವ ಆಧ್ಯಾತ್ಮಿಕ ಶಕ್ತಿ ಹೊಂದಿದ್ದವು.
ಮಾತಾಜಿಯವರು ಕೇವಲ ಧರ್ಮಗುರುಗಳಲ್ಲ. ಅವರು ವಿದ್ವಾಂಸಳು, ಕ್ರಾಂತಿಕಾರಿ ಲೇಖಕಿ, ಅಪೂರ್ವ ವಾಗ್ಮಿ ಮತ್ತು ಆಳವಾದ ಅಧ್ಯಯನಶೀಲ ಚಿಂತಕಿ. ಅವರ ಗ್ರಂಥಗಳು ಮತ್ತು ಪ್ರವಚನಗಳು ಲಿಂಗಾಯತ ಧರ್ಮದ ತಾತ್ವಿಕ ಪರಂಪರೆಗೆ ಹೊಸ ಜೀವ ತುಂಬಿವೆ.
ಮಹಾತ್ಮ ಬುದ್ಧನು ಜೀವನದ ನಶ್ವರತೆಯನ್ನು ಅರಿತು ಸತ್ಯದ ಹುಡುಕಾಟಕ್ಕೆ ಹೊರಟಂತೆ, ಮಾತಾಜಿಯವರು ಕೂಡ ಒಂದು ಪ್ರವಚನದಿಂದಲೇ ಜೀವನದ ದಿಕ್ಕು ಬದಲಿಸಿಕೊಂಡರು. ಶ್ರೀಮಂತ ಜೀವನವನ್ನು ತೊರೆದು ಸರಳತೆಯನ್ನು ಆರಿಸಿಕೊಂಡು ಬಸವ ತತ್ವಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದರು.
ಅವರು ನೊಂದವರ ನಂದಾದೀಪ, ಶೋಷಿತರ ಸಂಜೀವಿನಿ, ಸ್ತ್ರೀಕುಲದ ಪ್ರೇರಣಾಸ್ವರೂಪಿ, ಧರ್ಮಕ್ರಾಂತಿಯ ದಿವ್ಯಜ್ಯೋತಿ. ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಅವರ ಪಾತ್ರ ಅಪೂರ್ವ.
ಇಂದು ಅವರ ಜಯಂತಿಯನ್ನು ಸ್ಮರಿಸುವ ಸಂದರ್ಭದಲ್ಲಿ ಒಂದು ಪ್ರಶ್ನೆ ನಮ್ಮ ಮುಂದಿರುತ್ತದೆ: ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಾವು ಎಷ್ಟು ತ್ಯಾಗ ಮಾಡಲು ಸಿದ್ಧರಾಗಿದ್ದೇವೆ?
ಮಾತಾಜಿಯವರ ಜೀವನವು ನಮಗೆ ನೀಡುವ ಸಂದೇಶ ಸ್ಪಷ್ಟ — ಧರ್ಮಕ್ಕಾಗಿ ಬದುಕಿದ ಜೀವನವೇ ನಿಜವಾದ ಅಮರತ್ವ.
ನಿಮಿತ್ತ ಆಹಾರ ಸೇವನೆ ಉತ್ತಮ. ದಿನಕ್ಕೆ ೩ ಹೊತ್ತು ಊಟ ಬೇಡ ೨ ಹೊತ್ತು ಮಾಡಿ. ಕೆಲವರು ಮಧ್ಯಾಹ್ನ ಊಟ ಬಿಡುತ್ತಾರೆ, ಕೆಲವರು ರಾತ್ರಿ , ನನ್ನ ಸ್ನೇಹಿತರು ಒಬ್ಬರು ರಾತ್ರಿವೇಳೆ ಊಟ ಮಾಡುವುದಿಲ್ಲ. ನಾನು ಮಧ್ಯಾಹ್ನ ಮಾಡುವುದಿಲ್ಲ.
೧೫-೧೬ ವರ್ಷದಿಂದ ನನಗಿದು ಅಭ್ಯಾಸವಿಲ್ಲ. ಹೊಟ್ಟೆ ತುಂಬಾ ಊಟ ದಯವಿಟ್ಟು ಬೇಡ. ಕೇವಲ ಹಸಿವಿಗಾಗಿ ಮಾಡಿ. ಬುದ್ದಿ ತೀಕ್ಷ್ಣವಾಗಿರುತ್ತದೆ.
ಮನಸ್ಸು ಹಗುರಾಗಿರುತ್ತೆ, ದೇಹ ಸಂತಸದಿಂದಿರುತ್ತೆ . ಮೂರು ಹೊತ್ತು ಕತ್ತೆ ತರ ತಿಂದು ಜಿಮ್ ಗೆ ಹೋಗಿ, ಹಣ ಕೊಟ್ಟು ಕೊಬ್ಬು ಕರಗಿಸಿಕೊಳ್ಳಲು ನಿಮಗೆ ಇದೊಂದೆ ಕೆಲಸವೇನು !? ನೀವು ಮಾಡಬೇಕಿರುವ ಕೆಲಸ ಸಾಕಷ್ಟಿದೆ. ನಾನು ನಿಂದಿಸುತ್ತಿಲ್ಲ ಅಪಾರ್ಥ ಮಾಡಿಕೊಳ್ಳಬೇಡಿ, ದೇಹಕ್ಕೆ ಎಷ್ಟ ಕಡಿಮೇ ಆಹಾರದ ಅಗತ್ಯ ವಿರುತ್ತದೋ ಅಷ್ಟು ನಿಶ್ಚಿಂತೆ ನಿಮ್ಮದು.
ಮೈಸೂರಿನ ಮುಸ್ಲಿಂ ವ್ಯಕ್ತಿಯ ಕುಟುಂಬ ಒಂದು ನನ್ನ ಗುರುಗಳಿಗೆ ಪರಿಚಯವಿತ್ತು, ಅವರ ಇಡೀ ಕುಟುಂಬದ ಒಬ್ಬ ವ್ಯಕ್ತಿಯೂ ಊಟಮಾಡುತ್ತಿರಲಿಲ್ಲ, ದಿನದ ಮೂರು ಹೊತ್ತು ಕೇವಲ ಹಣ್ಣು ತರಕಾರಿ ಹಸಿ ಕಾಳುಗಳನ್ನು ತಿಂದು ಜೀವಿಸುತ್ತಿದ್ದರು.
ಇದು ನಿಜಕ್ಕೂ ನನಗೆ ಆಶ್ಚರ್ಯಕರ ಎನಿಸಿತು. ನಾನು ಇನ್ನಾದರೂ ಹೀಗೆ ಯಾಕಿಲ್ಲ .!? ಕಾರಣ ಕುಟುಂಬದ ಸದಸ್ಯರು ಎಲ್ಲರೂ ನಮ್ಮ ಅಭಿಪ್ರಾಯ ಹಾಗೂ ಹೇಳಿಕೆಯನ್ನು ತಿಳಿದು ಅನುಸರಿಸುವಂತಿರಬೇಕು. ಆಗ ಎಲ್ಲವೂ ಸಾದ್ಯ.
Dingri Nagaraj elected unopposed as the President of Karnataka Film Parents Artists Association for the third time
ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ
ಜಾಹೀರಾತು
ಬೆಂಗಳೂರು,ಮಾ.13: ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಹಿರಿಯ ನಟ, ರಂಗಭೂಮಿ ಕಲಾವಿದ ಡಿಂಗ್ರಿ ನಾಗರಾಜ್ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಡುಗೋಡಿ ಶ್ರೀನಿವಾಸ್ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, 79 ವರ್ಷ ವಯಸ್ಸಿನ ಡಿಂಗ್ರಿ ನಾಗರಾಜ್ ಅವರು 800 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದು, ಹತ್ತು ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಐದು ದಶಕಗಳಿಗೂ ಅಧಿಕ ಸಮಯದಿಂದ ಕಲಾವಿದರಾಗಿರುವ ಡಿಂಗ್ರಿ ನಾಗರಾಜ್, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕಲಾವಿದರಿಗೆ ನೆರವು ನೀಡಿದ್ದರು ಎಂದು ಮೆಚ್ಚುಗೆ ವ್ವಕ್ತಿಪಡಿಸಿದರು
ಜೊತೆಗೆ ಚಲನಚಿತ್ರ ನಟ ಹಾಗೂ ನಿರ್ಮಾಪಕರಾದ ಗಣೇಶ್ ರಾವ್ ಕೆಸರ್ಕಾರ್ ಮತ್ತು ಹಿರಿಯ ನಟಿ ನವನೀತಂ ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಮತ್ತಷ್ಟು ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.
Magalamani urges Education Minister to campaign for admission to government schools
ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ಶಿಕ್ಷಣ ಇಲಾಖೆ ಪ್ರಚಾರ ಮಾಡುವಂತೆ ಶಿಕ್ಷಣ ಸಚಿವರಿಗೆ ಮ್ಯಾಗಳಮನಿಒತ್ತಾಯ
ಜಾಹೀರಾತು
ಗಂಗಾವತಿ :13 ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ನ್ನು ಸೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ನಗರದ ಆನೆಗುಂದಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕ್ಷೆತ್ರಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕ ಶಿವಪ್ರಸಾದ ಇವರಿಗೆ ಮನವಿ ಸಲ್ಲಿಸಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಮ್ಮ ಮಾತೃ ಭಾಷೆ ಅವನತಿ ಹೊಂದುವ ಪರಿಸ್ಥಿತಿ ಬರುತ್ತದೆ.
ಆದ್ದರಿಂದ ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಲೇ ಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿ ಕನ್ನಡ ಭಾಷೆ ಉಳಿಸಿ ಎಂಬ ಘೋಷ ವಾಕ್ಯ ಉಳ್ಳ ಬ್ಯಾನರ್ ಬಸ್ ನಿಲ್ದಾಣದಲ್ಲಿ ಹಾಕಿಸುವದು ಮತ್ತು ಬಸ್ ಗಳ ಮೇಲೆ ಘೋಷಣೆ ಯ ಸ್ಟಿಕರ್ ಅಂಟಿಸುವದು ಹಾಗೂ ಬಸ್ ನಿಲ್ದಾಣದಲ್ಲಿರುವ ದ್ವನಿವರ್ಧಕಗಳ ಮೂಲಕಪ್ರಚಾರ ಮಾಡಬೇಕು ಶಾಲಾ ಅವಧಿಯಲ್ಲಿ ಮಕ್ಕಳು ಮತ್ತು ಬಾಲ ಕಾರ್ಮಿಕ ಕೆಲಸದಲ್ಲಿ ಕಂಡು ಬಂದಲ್ಲಿ ಕೂಡಲೇ 1098 ಅಥವಾ 112 ನಂಬರ್ ಗೆ ಕರೆಮಾಡಲು ಸಾರ್ವಜನಿಕಮಾಹಿತಿಗಾಗಿ ರ ಪ್ರಚಾರಪಡಿಸಬೇಕೆಂದು ಒತ್ತಾಯಿಸಿದರು.
ಕಡಿಮೆ ಸಂಖ್ಯೆ ದಾಖಲಾತಿ ಇರುವ ಶಾಲೆಗಳನ್ನು ಕಡಿಮೆ ದಾಖಲಾತಿ ನೆಪದಲ್ಲಿ ಮುಚ್ಚುವ ಬದಲು ಪೂರ್ವ ಪ್ರಾಥಮಿಕ ತರಗತಿ ಪ್ರಾರಂಬಿಸುವದರ ಮೂಲಕ ಪುನಶ್ಚತನ ನೀಡಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು. ಈಗ ಜಾರಿಗೆ ತಂದಿರುವ ಕೆಪಿಸಿ ಮ್ಯಾಗ್ನೆಟ್ ಶಾಲೆಗಳನ್ನು ಆರಂಬಿಸುವದರಿಂದ ಸಾವಿರಾರು ಶಾಲೆಗಳು ಮುಚ್ಚಲಿವೆ ಇದರಿಂದ ಬಡ ಮಕ್ಕಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಈ ಪದ್ಧತಿ ಅವೈದ್ನಾನಿಕವಾದದ್ದು ಕಿರಿಯ ಪ್ರಾಥಮಿಕ ಶಾಲೆಗಳು ಅದೇ ಗ್ರಾಮಗಳಲ್ಲಿ ಇರಲೆಬೇಕು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅಂದರೆ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಗ್ರಾಮ ಪಂಚಾಯತ್ ಗೊಂದು ವಸತಿಯುತ ಶಾಲೆಗಳನ್ನು ಪ್ರಾರಂಬಿಸುವದರಿಂದ ಮಕ್ಕಳು ಶಾಲೆಯಿಂದ ಹೊರ ಉಳಿಯದೇ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್ ಗೊಂದು ವಸತಿ ಶಾಲೆ ಪ್ರಾರಂಭಿಸಬೇಕು.
ಸರ್ಕಾರಿ ಶಾಲಾ ಶಿಕ್ಷಕರು ಯಾವ ಉದ್ದೇಶಕ್ಕೆ ನೇಮಕಾತಿ ಹೊಂದಿರುವರೋ ಅದನ್ನು ಬಿಟ್ಟು ಅನ್ಯ ಕೆಲಸಗಳಿಗೆ ಸರ್ಕಾರ ಬಳಸಿಕೊಳ್ಳುತ್ತದೆ. ಬಿಸಿಯೂಟ, ಜನಗಣತಿ, ಜಾತಿ ಗಣತಿ, ಬಿ ಎಲ್, ಓ, ಸೇರಿದಂತೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡುವದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುವದರಿಂದ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುವ ಪರಿಸ್ಥಿತಿ ಅನಿವಾರ್ಯವಾಗುತ್ತದೆ ಇದರಿಂದ ಸರ್ಕಾರಿ ಶಾಲೆಗಳು ಸುಲಭವಾಗಿ ಮುಚ್ಚುತ್ತವೆ.
ಅನ್ಯ ಕೆಲಸಗಳಿಗೆ ನಿರುದ್ಯೋಗ ಪದವೀಧರರನ್ನು ಬಳಸಿಕೊಂಡರೆ ಅವರಿಗೂ ಉದ್ಯೋಗ ಲಭಿಸಿದಂತಾಗುತ್ತದೆ.ಗುಣ ಮಟ್ಟದ ಕಲಿಕೆಯೂ ಸಿಗುತ್ತದೆ.
ಕಾರಣ ಶಿಕ್ಷಕರನ್ನು ಅನ್ಯ ಕಾರ್ಯ ಗಳಿಗೆ ನಿಯೋಜನೆ ಮಾಡಬಾರದು ಮತ್ತು ಈಗ ಹೋರಾಡಿಸಿರುವ ಶಾಲೆಗೊಬ್ಬ ಶಿಕ್ಷಕರನ್ನು ಶ್ವಾನ ನೋಡಲ್ ಅಧಿಕಾರಿ ಎಂದು ನೇಮಿಸುವ ಆದೇಶ ಕೂಡಲೇ ಹಿಂಪಡೆಯಬೇಕು.
ಮಳೆಗಾಲದಲ್ಲಿಯೇ ಜೂನ್ ತಿಂಗಳು ಶಾಲೆಗಳು ಪುನಃ ಪ್ರಾರಂಭವಾಗುತ್ತವೆ.
ಸೋರುತ್ತಿರುವ ಮತ್ತು ಅಪಾಯವಾಗುವ ಕೊಠಡಿಗಳನ್ನು ಶಾಲೆಗಳುಆರಂಬುವಾಗುವದರೊಳಗೆ ರಿಪೇರಿ ಮಾಡಿಸಿ ಮಕ್ಕಳಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮೇಘರಾಜ್, ಗಣೇಶ್, ಜಂಬಣ್ಣ ಮತ್ತಿತರರು ಇದ್ದರು
Confusion over internal reservation: Karnataka State Chalwadi Mahasabha holds meeting
ಒಳ ಮೀಸಲಾತಿಯ ಗೊಂದಲ : ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ವತಿಯಿಂದ ಸಭೆ
ಜಾಹೀರಾತು
ವಿಜಯನಗರ (ಹೊಸಪೇಟೆ) ಕರ್ನಾಟಕ ರಾಜ್ಯ ಚಲವಾದಿ ಮಹಾಸಭಾ ರಾಜ್ಯ ಸಮಿತಿ ಮಹಿಳಾ ವಿಭಾಗ ವತಿಯಿಂದ ಒಳಮೀಸಲಾತಿ ಗೊಂದಲದ ಬಗ್ಗೆ ಸಭೆ ಮಾಡಲಾಯಿತು ಹೊಸಪೇಟೆ ಪ್ರವಾಸಿ ಮಂದಿರದಲ್ಲಿ ಮಹಿಳಾ ಅಧ್ಯಕ್ಷರು ಡಾ. ಈರಮ್ಮ ಆರ್ ಹಾಗೂ ಹೊಸದಾಗಿ ಆಯ್ಕೆ ಆಗಿರುವ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ಚೇತನ ಲಿಂಗದಾಳ ಹಾಗೂ ಧಾರವಾಡ ಹುಬ್ಬಳ್ಳಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗೀತಾ ಪಾಟೀಲ್ ಹಾಗೂ ಹೊಸದಾಗಿ ಆಯ್ಕೆಯಾಗಿರುವ ವಿಜಯನಗರ ಜಿಲ್ಲೆಯ ಡಾ. ಉಮಾ.ಹೊಸದಾಗಿ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲೆಯ ರಾಧಾಕನಕಮೂರ್ತಿ ಹಾಗೆ ಗದಗ್ ಜಿಲ್ಲೆಯ ಹೊಸದಾಗಿ ಆಯ್ಕೆ ಆಗಿರುವ ಶೋಭಾ ಹಗೆದಾಳ್,ಸ್ಟೇಟ್ ಕಮಿಟಿಗೆ ಸದಸ್ಯರಾಗಿ ಆಯ್ಕೆಯಾಗಿರುವ ರುದ್ರವ್ವ ಇವರುಗಳು ಈ ಸಭೆಯಲ್ಲಿ ಭಾಗವಹಿಸಿ ಹಾಗೂ ಉಪಸ್ಥಿತರಿದ್ದರು.
ಶ್ರೀ ಗವಿಮಠದ 17ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶಿವ ಶಾಂತವೀರ ಮಹಾ ಶಿವಯೋಗಿಗಳವರು ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಮಹಾ ತಪೋನಿಷ್ಠರು, ಜಗದ್ಗುರು ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಸಂಶೋಧನಾ ಕೇಂದ್ರದ ಸ್ಥಾಪನೆ ಮತ್ತು ಏಳಿಗೆಗೆ ಶ್ರಮಿಸಿದರು. ಭಾಗದ ಜನರ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿದ ಅವರು ಮಹಾವಿದ್ಯಾಲಯದ ಕಟ್ಟಡ ಕಟ್ಟುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅವರ ಸರಳತೆ ಸೇವಾ ಮನೋಭಾವ ಎಲ್ಲರಿಗೂ ಸದಾ ಆದರ್ಶವಾಗಿರಬೇಕು ಎಂದು ಬಿಸರಳ್ಳಿಯ ಮಠದ ಶ್ರೀ ಶಿವ ಶಾಂತವೀರ ಸ್ವಾಮಿಗಳವರು ಹೇಳಿದರು. ನಗರದ ಜಗದ್ಗುರು ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಸ್ಥಾನ ಶ್ರೀ ಗವಿಮಠದ 17ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶಿವ ಶಾಂತವೀರ ಮಹಾಶಿವಯೋಗಿಗಳವರ 23ನೇ ಪುಣ್ಯ ಸ್ಮರಣೀಯ ನಿಮಿತ್ತ ದಿನಾಂಕ 12.03.2026ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ನಾಡಿನ ಜನರ ಆರೋಗ್ಯ ಸುಧಾರಣೆಗೆ ಇಂತಹ ಶಿಬಿರ ಅಗತ್ಯವಾಗಿರುವ , ಅನೇಕ ಬಡ ಜನರಿಗೆ ಉಪಯೋಗವಾಗಲಿದೆ. ಇಂತಹ ಶಿಬಿರದ ಸದುಪಯೋಗವನ್ನು ಅಗತ್ಯವಿರುವ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಆರೋಗ್ಯ ತಪಾಸಣಾ ಹಾಗೂ ಸಲಹಾ ಶಿಬಿರದಲ್ಲಿ ಸುಮಾರು 650 ಕ್ಕಿಂತಲೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಶ್ರೀ ಜಗದ್ಗುರು ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ನ ಸದಸ್ಯರು ಹಾಗೂ ಮಹಾವಿದ್ಯಾಲಯದ ಚೇರ್ಮನ್ನರಾದ ಸಂಜಯ್ ಕೋತ್ಬಾಳ್ , ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ ಎಸ್ ವಿ ಹಿರೇಮಠ್, ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ ಸಾಲಿಮಠ ಹಾಗೂ ಉಪ ಪ್ರಾಚಾರ್ಯರಾದ ಡಾ.ಸುರೇಶ್ ಹಕ್ಕಂಡಿ ಹಾಗೂ ಮಹಾವಿದ್ಯಾಲಯದ ವಿಶೇಷ ತಜ್ಞ ವೈದ್ಯ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೈಹಿಕ ವಿಕಲ ಚೇತನ ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಮಾತೃ ಫೌಂಡೇಶನ್ ಸ್ಥಾಪಕರಾದ ಡಾ. ಮಾಲತಿ ಹೊಳ್ಳ ಅವರು ಭಾಗವಹಿಸಿ ಹಲವು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಆಯ್ಕೆ ಮಾಡಿಕೊಂಡರು.
SFI condemns cutting students' meals under the pretext of gas cylinder
ಗ್ಯಾಸ್ ಸಿಲಿಂಡರ್ ನೆಪ : ವಿದ್ಯಾರ್ಥಿಗಳ ಊಟಕ್ಕೆ ಕತ್ತರಿಎಸ್ ಎಫ್ ಐ ಖಂಡನೆ
ಜಾಹೀರಾತು
ಗಂಗಾವತಿ :ವಿರೂಪಾಪುರ ನಗರದ ಬಿ.ಸಿ.ಎಂ. ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಗ್ಯಾಸ್ ಸಿಲಿಂಡರ್ ನೆಪ ಹೇಳಿ ವಿದ್ಯಾರ್ಥಿಗಳ ಊಟಕ್ಕೆ ಕತ್ತರಿ ಹಾಕಿರುವ ಘಟನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ ಎಂದರು.
ಈ ಕುರಿತು ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಾದ್ನಟ್ಟಿ ಮಾತನಾಡಿ, ವಸತಿ ನಿಲಯದ ನಿಲಯ ಪಾಲಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಮಧ್ಯಾಹ್ನ 4 ಗಂಟೆಯವರೆಗೆ ಉಪವಾಸ ಕೂತು ಪ್ರತಿಭಟನೆ ನಡೆಸಿದರು ಎಂದು ತಿಳಿಸಿದರು. ವಿದ್ಯಾರ್ಥಿಗಳು ತಾಲೂಕು ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದಾಗ, “ಉಡಾಫೆಯಿಂದ ಮಾಡಿದ್ದನ್ನು ತಿನ್ನಿ” ಎಂದು ಹಾರಕೆಯ ಉತ್ತರ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ನಿಲಯದಲ್ಲಿ ದಿನನಿತ್ಯ ಹಲವು ಸಮಸ್ಯೆಗಳು ಎದುರಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂದು ಪ್ರಶ್ನಿಸಿದರು ವಿದ್ಯಾರ್ಥಿಗಳ ಗೋಳು ಕೇಳದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಕಾರ್ಯನಿರ್ವಹಣಾಧಿಕಾರಿಗಳು ಕರೆ ಮಾಡಿ ಮಾತನಾಡಿ, ಸಿಇಒ ಅವರ ಗಮನಕ್ಕೆ ವಿಷಯವನ್ನು ತಂದು ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಗೆ ಸಂದ ಜಯ ನಂತರ ಪ್ರತಿಭಟನಾ ಸ್ಥಳಕ್ಕೆ ಊಟವನ್ನು ತಂದು ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ನಡೆದ ಹೋರಾಟವನ್ನು ಶ್ಲಾಘಿಸಿದರು. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದು ಕಾರ್ಯ ನಿರ್ವಹಕ ಕಚೇರಿಯ ಮ್ಯಾನೇಜರ್ ಆದ ನಿಜಮುದ್ಧಿನ್ ಮತ್ತು ಬಿಸಿಎಂ ಇಲಾಖೆಯ ಹಿರಿಯ ನಿಲಯ ಪಾಲಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ್ ಜಿಲ್ಲಾ ಸಮಿತಿ ಸದಸ್ಯರಾದ ಶರಣಬಸವ ಬಿ. ಮೌನೇಶ್ ವಿದ್ಯಾರ್ಥಿಗಳದ ಮಲ್ಲಿ ಉತ್ನೂರ್, ಕೌಸಿಕ್ ಮಂಜು ಚಿಕ್ಕಮದೀನಾಳ್ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
SSLC exam from March 18: Prohibitory order imposed-
ಮಾ.18 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ: ನಿಷೇಧಾಜ್ಞೆ ಜಾರಿ–
ಜಾಹೀರಾತು
ಕೊಪ್ಪಳ ಮಾರ್ಚ್ 12, (ಕರ್ನಾಟಕ ವಾರ್ತೆ): ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ವಾರ್ಷಿಕ ಪರೀಕ್ಷೆಗಳು ಮಾರ್ಚ್ 18 ರಿಂದ ಎಪ್ರಿಲ್ 2 ರವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಸುರೇಶ್ ಬಿ. ಇಟ್ನಾಳ್ ಅವರು ಆದೇಶ ಹೊರಡಿಸಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ಪರೀಕ್ಷೆಗಳು ಮಾರ್ಚ್ 18 ರಿಂದ ಎಪ್ರಿಲ್ 2 ರವರೆಗೆ ಬೆಳಿಗ್ಗೆ 10 ಗಂಟೆ ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಅಂತರದ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿ 21, ಗಂಗಾವತಿ ತಾಲ್ಲೂಕಿನ 14, ಕುಷ್ಟಗಿ ತಾಲ್ಲೂಕಿನ 15, ಯಲಬುರ್ಗಾ ತಾಲ್ಲೂಕಿನ 7, ಕುಕನೂರು ತಾಲ್ಲೂಕಿನ 8, ಕಾರಟಗಿ ತಾಲ್ಲೂಕಿನ 5 ಹಾಗೂ ಕನಕಗಿರಿ ತಾಲ್ಲೂಕಿನ 4 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ನಿಷೇಧಾಜ್ಞೆ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ. ಮೊಬೈಲ್, ಪೇಜರ್, ಜರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತçಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Special class for SSLC students: Resource teachers felicitated
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ: ಸಂಪನ್ಮೂಲ ಶಿಕ್ಷಕರಿಗೆ ಸನ್ಮಾನ
ಜಾಹೀರಾತು
ಕೊಪ್ಪಳ ಮಾರ್ಚ್ 12 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಹತ್ವಾಕಾಂಕ್ಷೆಯ ಯೋಜನೆಯಾದ `ಸ್ಪೂರ್ತಿಯ ನಡೆ’ ಕಾರ್ಯಕ್ರಮದಡಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಆನ್ಲೈನ್ ತರಗತಿ ನೀಡಿದ ಸಂಪನ್ಮೂಲ ಶಿಕ್ಷಕರಿಗೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು. “ಸ್ಪೂರ್ತಿಯ ನಡೆ” ಕಾರ್ಯಕ್ರಮವು ಕಳೆದ 2025ರ ಡಿಸೆಂಬರ್ ರಿಂದ ಆರಂಭಗೊಂಡು ಪ್ರಸ್ತುತ ಮುಕ್ತಾಯಗೊಂಡಿದ್ದು, ಸಂಪನ್ಮೂಲ ಶಿಕ್ಷಕರಾಗಿ ಜಿಲ್ಲೆಯ ವಿವಿಧ ಸರ್ಕಾರಿ ಪ್ರೌಢ ಶಾಲೆಗಳ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರಿಂದ ಮೂರು ತಿಂಗಳ ಕಾಲ ನಿರಂತರವಾಗಿ ಸೋಮವಾರದಿಂದ ಶನಿವಾರವರೆಗೆ ಪ್ರತಿದಿನ ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಜಿಲ್ಲೆಯ ಎನ್.ಐ.ಸಿ ಕಚೇರಿಯಲ್ಲಿ ತರಗತಿಗಳನ್ನು ನಿರ್ವಹಿಸಲಾಗುತ್ತಿತ್ತು. ಇದಕ್ಕಾಗಿ ಅಗತ್ಯ ಸಹಯೋಗ ನೀಡಿದ ಎನ್.ಐ.ಸಿ ಮುಖ್ಯಸ್ಥರಾದ ಬಸವರಾಜ್ ಮತ್ತು ತರಬೇತಿ ನೀಡಿದ ಎಲ್ಲಾ ಸಂಪನ್ಮೂಲ ಶಿಕ್ಷಕರಿಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸೇರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಯಲಬುರ್ಗಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಶಂಕರ ಕರಡಕಲ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Vachana Kalyana' drama Ahoratri Ranga Paroja: Applications invited for selection of artists
ವಚನ ಕಲ್ಯಾಣ’ ನಾಟಕ ಅಹೋರಾತ್ರಿ ರಂಗ ಪ್ರಯೋಗ: ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ
ಜಾಹೀರಾತು
ಕೊಪ್ಪಳ ಮಾರ್ಚ್ 12 (ಕರ್ನಾಟಕ ವಾರ್ತೆ): “ವಚನ ಕಲ್ಯಾಣ” ಎಂಬ 9 ಗಂಟೆಗಳ ಅಹೋರಾತ್ರಿ ನಾಟಕವನ್ನು ಸಿದ್ದಪಡಿಸಿ ನಾಡಿನಾದ್ಯಂತ ಪ್ರದರ್ಶನ ಮಾಡಲು ಕಲಾವಿದರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ವಚನ ಕಲ್ಯಾಣ” ಎಂಬ ಅಹೋರಾತ್ರಿ ನಾಟಕವನ್ನು ಸಿದ್ದಪಡಿಸಿ ನಾಡಿನಾದ್ಯಂತ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ನುರಿತ ಹಾಗೂ ಆಸಕ್ತ ಯುವಕ-ಯುವತಿಯರು ಮತ್ತು ಅನುಭವಿ ರಂಗ ಕಲಾವಿದರು ಅಥವಾ ಗಾಯಕರು ಅರ್ಜಿ ಸಲ್ಲಿಸಬಹುದು. ವಯೋಮಿತಿ 18 ರಿಂದ 40 ವರ್ಷಗಳ ರಂಗ ಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಆಧ್ಯತೆಯನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು 3 ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ ಮತ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವ ಧನ ಮತ್ತು ಊಟ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಅರ್ಜಿ ನಮೂನೆಯನ್ನು ಇಲಾಖೆಯ ವೆಬೈಟ್ Kannadasiri.Karnataka.gov.in ನಲ್ಲಿ ಪಡೆಯಬಹುದು.
ಭರ್ತಿಮಾಡಿದ ಅರ್ಜಿಗಳನ್ನು ಮಾರ್ಚ್ 20 ರೊಳಗೆ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಕಲಾಗ್ರಾಮ ಮಲ್ಲತಹಳ್ಳಿ ಬೆಂಗಳೂರು-560056, ಇಲ್ಲಿಗೆ ಅಂಚೆ ಮೂಲಕ ಅಥವಾ ಮುದ್ದಾಮ ತಲುಪುವಂತೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448538620 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Decision to release water to Tungabhadra left bank main canal to fill lakes in Koppal and Raichur districts
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ
ಜಾಹೀರಾತು
ಕೊಪ್ಪಳ ಮಾರ್ಚ್ 12 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಲಯ ಕಲಬುರಗಿ ರವರು ನಿಗದಿ ಪಡಿಸಿದ ವೇಳಾಪಟ್ಟಿಯಂತೆ ನೀರಿನ್ನು ಹರಿಸಲು ನಿರ್ಧಾರಿಸಲಾಗಿದೆ. ಅದರಂತೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಗೇಟ್ಗಳ ಮುಖಾಂತರ ಕೆರೆಕಟ್ಟೆಗಳಲ್ಲಿ ಕುಡಿಯುವ ಸಲುವಾಗಿ ನೀರು ಶೇಖರಣೆ ಮಾಡಲು ಹಾಗೂ ನಿಗದಿತ ಪ್ರಮಾಣದ ನೀರನ್ನು 104 ಮೈಲ್ ವರೆಗೆ ಹರಿಸಿ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸಮರ್ಪಕ ನೀರು ನಿರ್ವಹಣೆ ಮಾಡಬೇಕು. *ನಿಗದಿತ ವೇಳಾಪಟ್ಟಿ:* ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ (0 ರಿಂದ 104 ಮೈಲ್ ವರೆಗೆ) ಗೆ ಕುಡಿಯುವ ನೀರಿಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಮಾರ್ಚ್ 16 (ಸೋಮವಾರ ಬೆಳಗ್ಗೆ 8 ಗಂಟೆ) ರಿಂದ ಮಾರ್ಚ್ 27ರ (ಶುಕ್ರವಾರ ಬೆಳಗ್ಗೆ 8 ಗಂಟೆ) ವರೆಗೆ 2000 ಕ್ಯೂಸೆಕ್ಸ್ ನಂತೆ ಕುಡಿಯುವ ನೀರು ಹರಿಸಲಾಗುವುದು. ಅದರಂತೆ, ಯರಮರಸ್ ವಿಭಾಗ ಮಾರ್ಚ್ 19, 20 & ಮಾ. 21ರ ವರೆಗೆ, ಸಿರವಾರ ವಿಭಾಗ ಮಾ. 21, 22 & 23 ರವರೆಗೆ, ಸಿಂದನೂರು ವಿಭಾಗ ಮಾ. 24, 25 & ಮಾ. 26ರ ವರೆಗೆ ಹಾಗೂ ವಡ್ಡರಹಟ್ಟಿ ವಿಭಾಗದ ಮಾ. 26 & ಮಾ. 27ರ ವರೆಗೆ ನೀರು ಹರಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. *ರೈತ ಭಾಂದವರಲ್ಲಿ ಮನವಿ:* ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಸಾರ್ವಜನಿಕ ಹಿತ ದೃಷ್ಟಿಯಿಂದ ಎಲ್ಲಾ ಜನಸಾಮಾನ್ಯರಿಗೂ ಹಾಗೂ ರೈತ ಭಾಂದವರಿಗೆ ಈ ಪ್ರಕಟಣೆಯ ಮೂಲಕ ವಿನಂತಿಸುವುದೆನೇಂದರೆ, ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರನ್ನು ಜನಸಾಮಾನ್ಯರು ಅಥವಾ ರೈತರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧಗೊಳಿಸಲಾಗಿರುತ್ತದೆ. ಕಾರಣ ತಾವುಗಳು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸುವಂತೆ ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಬಿ ಮಲ್ಲಿಗವಾಡ
A preparatory meeting was held for the development of a government-style primary school.
ಹಿರೇಜಂತಕಲ್ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಏಳಿಗೆಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಜಾಹೀರಾತು
ಗಂಗಾವತಿ: ನಗರದ ಹಿರೇಜಂತಕಲ್ ಹಲವಾರು ವರ್ಷಗಳಿಂದ ಶಾಲೆಯಲ್ಲಿ ತರಗತಿ ಕೊಠಡಿಗಳ ಸಮಸ್ಯೆಯಿಂದಾಗಿ ಹಲವಾರು ಶೈಕ್ಷಣಿಕ ತೊಂದರೆಗಳು, ಮಳೆಗಾಲದಲ್ಲಿ ಛಾವಣಿ ಸೋರುವುದು, ವಿದ್ಯಾರ್ಥಿ/ವಿ ದ್ಯಾರ್ಥಿನಿಯರ ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಇನ್ನೂ ಹಲವಾರು ಸಮಸ್ಯೆಗಳಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಇಂದು ಸಭೆಯನ್ನು ಕರೆಯಲಾಗಿದೆ. ಶಾಲೆಯ ಅನೇಕ ಸಮಸ್ಯೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅದಕ್ಕೆ ಸ್ಪಂದಿಸಿದ ಅವರು PWD ಅಧಿಕಾರಿಗಳ ಸಮನ್ವಯ ಸಾಧಿಸಿ ಆದೇಶವನ್ನು ಹೊರಡಿಸಿ ಹಳೆಯ ಕೊಠಡಿಗಳನ್ನು ನೆಲಸಮಗೊಳಿಸಿ ನೂತನ ಶೌಚಾಲಯ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಅನುಕೂಲತೆಗೆ ಅನುವು ಮಾಡಿದ್ದರು.
ಇದರ ಬೆನ್ನಲ್ಲೇ ಶಾಲೆಯ ಎಲ್ಲ ಎಸ್ ಡಿ ಎಂ ಸಿ ಸದಸ್ಯರು ಸಭೆಗೆ ಹಾಜರಾಗಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ವಿನಂತಿಸಲಾಗಿದ್ದು ಎಲ್ಲ ಸದಸ್ಯರು ಪೂರ್ವಭಾವಿ ಸಭೆಯನ್ನು ನಡೆಸಿ ಯಶಸ್ವಿಗೋಳಿಸಿದರು.
ಮುಂದಿನ ಶನಿವಾರದಂದು ಎರಡನೆಯ ಸಭೆಯನ್ನು ಕರೆಯಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಡಿಯಪ್ಪ ಹಂಚಿನಾಳ, ವಾರ್ಡಿನ ಮಾಜಿ ಸದಸ್ಯರಾದ ಹುಲಿಗೆಮ್ಮ ಕಿರಿ ಕಿರಿ, ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ತಿಪ್ಪವ್ವ ಉಳ್ಳಟ್ಟಿ, ಹಾಗೂ ಸದಸ್ಯರು ವಾರ್ಡಿನ ಯುವಕರಾದ ಪರುಶುರಾಮ ಕಿರಿಕಿರಿ, ಮಂಜುನಾಥ ಆರತಿ, ಮಂಜುನಾಥ ಹಂಚಿನಾಳ, ಪರುಶುರಾಮ ಭಾಗವಹಿಸಿದ್ದರು.
Beng.V. Result: MES Arts, Commerce and Science College gets five ranks
ಬೆಂ.ವಿವಿ ಫಲಿತಾಂಶ: ಎಂ.ಇ.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಐದು ರ್ಯಾಂಕ್
ಜಾಹೀರಾತು
ಬೆಂಗಳೂರು: ಬೆಂಗಳೂರು ನಗರ ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂ.ಇ.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಎಂ.ಎಸ್.ಸಿಯಲ್ಲಿ [86.81%] ಉತ್ತಮ ಸಾಧನೆಯೊಂದಿಗೆ ಶಿಲ್ಪಾ ಜಿ ಎಸ್ 2ನೇ ರ್ಯಾಂಕ್, ಬಿಎ ಯಲ್ಲಿ ನಿಸರ್ಗಾ ಪಿ [95.49%] 3ನೇ ರ್ಯಾಂಕ್, ಬಿಕಾಂ ನಲ್ಲಿ ಹರಿಣಿ ಎಂ [96.41%] 3ನೇ ರ್ಯಾಂಕ್, ಎಚ್.ಸಿ. ಚೈತ್ರಾ [96.19%] 8ನೇ ರ್ಯಾಂಕ್, ಬಿಕಾಂ ನಲ್ಲಿ ಮನೀಶ್ ಆರ್ [96.14%] 9ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಎಸ್.ಸಿ.ಶರ್ಮ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷಾ ಫಲಿತಾಂಶಗಳಲ್ಲಿ ಈ ಬಾರಿ ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳು ಹಲವು ವಿಭಾಗಗಳಿಂದ ರ್ಯಾಂಕ್ಗಳನ್ನು ತಮ್ಮದಾಗಿಸಿಕೊಂಡಿದ್ದು, ಇದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ಈ ಸಾಧನೆ ಅವರ ನಿರಂತರ ಪರಿಶ್ರಮ, ಸಮಯಪಾಲನೆ ಹಾಗೂ ಶಿಸ್ತುಬದ್ಧ ಅಧ್ಯಯನ ಕಾರಣವಾಗಿದೆ. ಕಾಲೇಜಿನ ಶೈಕ್ಷಣಿಕ ವಾತಾವರಣ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಕ್ರೀಡಾಸಕ್ತಿ, ಸಂಶೋಧನೆ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಸಂಸ್ಥೆಯ ನಿರ್ದೇಶಕರಾದ ಡಾ.ಪಿ.ಗಿರಿಧರ ರೆಡ್ಡಿ, ಪ್ರಾಂಶುಪಾಲರಾದ ಡಾ.ಆದರ್ಶ ಮತ್ತು ಉಪ-ಪ್ರಾಂಶುಪಾಲರಾದ ಡಾ.ಅನಿತಾ ಶ್ರೀಕುಮಾರ್ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಸಕ್ಕರೆ ಕಾಯಿಲೆ ಎನ್ನುವುದು ಭಾರತದಲ್ಲಿ 60%ಗೂ ಹೆಚ್ಚು ಜನರನ್ನು ಭಾದಿಸುತ್ತಿದೆ.ಇದು ಯಾವತ್ತು ಸಂಪೂರ್ಣ ಗುಣವಾಗುವ ಕಾಯಿಲೆಯಂತು ಅಲ್ಲ ಖಾಯಿಲೆಯನ್ನು ಒಂದಷ್ಟು ನಿಯಂತ್ರಿಸಬಹುದು.ಖಾಯಿಲೆ ಬರುವುದಕ್ಕಿಂತ ಮುನ್ನವೆ ಹಿತಮಿತವಾದ ಆಹಾರ ಹಾಗೂ ದೈಹಿಕ ದಂಡನೆಯ ಕೆಲಸಮಾಡುತ್ತಿದ್ದರೆ ಒಳ್ಳೆಯದು. ಹಳ್ಳಿಗರಿಗಿಂತ ಪಟ್ಟಣದಲ್ಲಿ ವಾಸಿಸುವವರು ಈ ಖಾಯಿಲೆಯಿಂದ ಬಳತ್ತಿದ್ದಾರೆ ಕಾರಣ ಅಹಾರದಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಬೆವರು ಸುರಿಸಿ ದುಡಿಮೆ ಇಲ್ಲದಿರುವುದು ಕುಳಿತು ಉಂಡರೆ ದೇಹ ರೋಗಗ್ರಸ್ತವಾಗುತ್ತದೆ. ಈಗಿನ ಜನ ಹೆಚ್ಚಾಗಿ ಕಂಪ್ಯೂಟರ್ ಆಪೀಸು ಗಳಲ್ಲಿ ಕೆಲಸಮಾಡುವವರಿಗೆ ದೇಹದ ಶ್ರಮಕ್ಕಿಂತ ಮಾನಸಿಕ ಶ್ರಮ ಹೆಚ್ಚು ಸಕ್ಕರೆ ಖಾಯಿಲೆ ಬರಲು ಟೆನ್ಷನ್ ಎನ್ನುವುದು ಒಂದು ಕಾರಣ ಮಾನಸಿಕ ಒತ್ತಡ ಆಹಾರದ ಪಚನ ಕ್ರಿಯೆಯನ್ನು ವ್ಯತ್ಯಾಸ ಮಾಡುತ್ತದೆ ಇದರಿಂದ ದೇಹದಲ್ಲಿಕೊಬ್ಬು ಜಾಸ್ತಿಯಾಗುತ್ತದೆ. ಸಕ್ಕರೆ ಖಾಯಿಲೆಯು ಕೆಲವರಿಗೆ ಅನುವಂಶಿಕ ಕೊಡುಗೆಯಾದರೆ ಮತ್ತೆ ಕೆಲವರಿಗೆ ತಾವಾಗಿಯೆ ತಂದುಕೊಳ್ಳುವುದು.ಹಾಗಾಗಿ ಸಕ್ಕರೆ ಖಾಯಿಲೆ ಇದ್ದವರಿಗೆ ಕೆಲವು ಸಲ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದೆ ಗೊತ್ತಾಗದು. ಒಬ್ಬೊಬ್ಬರು ಒಂದೋಂದು ಸಜೆಶನ್ನ ಕೊಡುತ್ತಾರೆ. ಅನ್ನ ಮುಟ್ಟಬಾರದು ಸಿಹಿತಿಂಡಿತಿನ್ನಬಾರದು, ಕರಿದ ಪದಾರ್ಥ ಮುಟ್ಟಬಾರದು ಕೆಲವು ಹಣ್ಣು ಹಂಪಲು ತಿನ್ನಬಾರದು ಅಂತ ಹಾಗಿದ್ದರೆ ಹಸಿವಾದಾಗ ಏನು ತಿನ್ನುವುದು ಎನ್ನುವುದೆ ದೊಡ್ಡ ಸಮಸ್ಯೆಯಾಗಿದೆ ಯಾವುದೇ ತಿಂದರು ಊಟಮಾಡಿದಷ್ಟು ಬೇರೆ ಏನೇ ತಿಂದರು ಹೊಟ್ಟೆ ತುಂಬುವುದಿಲ್ಲ ಮೈದಾ ಅಕ್ಕಿಹಿಟ್ಟು ಕಡಲೆ ಹಿಟ್ಟು ಕೆಲವು ಧಾನ್ಯಗಳು ಸಕ್ಕರೆಖಾಯಿಲೆಗೆ ಆಗುವುದಿಲ್ಲ .ಅನ್ನವನ್ನು ಕುಕ್ಕರಿನಲ್ಲಿ ಬೇಯಿಸಬೇಡಿ ಬೇರೆ ಪಾತ್ರೆಯಲ್ಲಿ ಅನ್ನಮಾಡಿ ಬಸಿದು ಉಣ್ಣುವುದರಿಂದ ತೊಂದರೆ ಆಗದು. ಇದು ಹಳೇಕಾಲದ ಪದ್ದತಿಯಾದರು ಇದರಲ್ಲಿ ಅಕ್ಕಿಯಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಮಾಡುತ್ತದೆ ಬೆಳಿಗ್ಗೆ ಎದ್ದತಕ್ಕಷಣ ಹತ್ತು ಮೆಂತೆಕಾಳುಗಳನ್ನು ನುಂಗಿ ನೀರು ಕುಡಿಯುವುದರಿಂದ ಸಕ್ಕರೆಯ ಅಂಶವು ಕಡಿಮೆಯಾಗುತ್ತದೆ. ಪ್ರಿಡ್ಜನಲ್ಲಿರುವ ವಸ್ತುಗಳನ್ನು ಬಳಸಬಾರದು. ಇದರಲ್ಲಿ ಯಾವುದೆ ಜೀವಸತ್ವ ಇರುವುದಿಲ್ಲ. ರೆಡಿ ಮೇಡ್ ಜ್ಯೂಸ್ ಕುಡಿಯುವುದನ್ನು ನಿಲ್ಲಿಸಿ.ಇದು ತತ್ತಕ್ಷಣ ಸಕ್ಕರೆ ಅಂಶವನ್ನು ಜಾಸ್ತಿಮಾಡುತ್ತದೆ. ಹೆಸರುಕಾಳು ನೆನಸಿ ರುಬ್ಬಿ ಜ್ಯೂಸಮಾಡಿ ಬೇಕಾದರೆ (ಸ್ವಲ್ಪ ಬೆಲ್ ಸೇರಿಸಿ)ಕುಡಿಯಬಹುದು.ನೆಲನೆಲ್ಲಿ ಗಿಡದ ಕಷಾಯ ದಿನವೂ ಮಾಡಿ ಕುಡಿಯುವುದರಿಂದ ಒಳ್ಳೆಯದು ಸಕ್ಕರೆಖಾಯಿಲೆ ಇದ್ದವರಿಗೆ ಹಸಿವು ಭಾಯಾರಿಕೆ ಜಾಸ್ತಿ ಹಾಗಾಗಿ ಹಸಿವಾದಾಗ ಅಲ್ಪಸ್ವಲ್ಪ ಹಸಿತರಕಾರಿ ತಿನ್ನಿ. ಬೆಂಡೆಕಾಯಿಯನ್ನು ಉದ್ದ ಹೆಚ್ಚಿ ಸ್ವಲ್ಪ ಉಪ್ಪುಹುಳಿಕಾರ ಹಾಕಿ ಬೇಯಿಸಿ ತಿನ್ನಬಹುದು. ಸೌತೆಕಾಯಿ ಗಡ್ಡೆಕೋಸು ಗೌರಿಕಾಯಿ ಸಕ್ಕರೆ ಖಾಯಿಲೆಗಳಿಗೆ ಉತ್ತಮ. ತರಕಾರಿ. ಬಾಳೆಹಣ್ಣು ಮಾವಿನಹಣ್ಣು ,ಹಲಸು , ಚಿಕ್ಕುಹಣ್ಣುಗಳನ್ನು ತಿನ್ನಬಾರದು. ಸೀಬೇ ಮೋಸುಂಬಿ ಕಿತ್ತಳೆ ನೇರಳೆ, ಪಪ್ಪಾಯಿ ಒಳ್ಳೆಯದು.ವಾರಕ್ಕೆ ಒಂದುಬಾರಿ ಹಗಲಕಾಯಿ ಚಟ್ಣೆ ಗೊಜ್ಜು ಸಾಂಬಾರು ಮಾಡುವುದರಿಂದ ಒಳ್ಳೆಯದು. ಜಾಸ್ತಿ ಸೇವಿಸಿದರೆ ಚರ್ಮ ಶುಕ್ಕವಾಗುತ್ತದೆ ಬಹಳ ಉಷ್ಣವಾದ್ದರಿಂದ ಪಿತ್ತ ಜಾಸ್ತಿಯಾಗಿ ಮೈ ತುರಿಕೆ ,ಸ್ನಾಯುಸೆಳೆತ ,ಎದೆನೋವು ಬರಬಹುದು.ನುಗ್ಗೆ ಸೊಪ್ಪು ಪಾಲಾಕ್ ಸೊಪ್ಪು ಮೆಂತೆ ಸಬ್ಬ್ಬಸಿಗೆ ಕಾಕೆಸೊಪ್ಪು ಒಳ್ಳೆಯದು.ದಂಟಿನ ಸೊಪ್ಪು ಹರಿವೆ ಸೊಪ್ಪುಗಳು ಒಳ್ಳೆಯದಾದರು ಕೆಲವರಿಗೆ ಇದು ಬೇದಿಶುರುವಾಗುತ್ತದೆ. ಮತ್ತು ಹೊಟ್ಟೆಯುಬ್ಬರವೂ ಆಗುತ್ತದೆ.ಕಾಡುನೆಲ್ಲಿಕಾಯಿಯನ್ನು ಬಿಡಿಸಿ ಒಣಗಿಸಿ ಆಗಾಗ ಬಾಯಲ್ಲಿಟ್ಟು ಚಪ್ಪರಿಸಿದರೆ ಸಕ್ಕೆರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ತಂಬುಳಿ ಗೊಜ್ಜು ಆರೋಗ್ಯಕ್ಕೆ ಬಹಳ ಉತ್ತಮ. ಸಕ್ಕರೆ ನಿಯಂತ್ರಣದಲ್ಲಿ ಇಡಬಹುದು.ಕಾಫಿ ಟೀ ನಿಯಮಿತವಾಗಿ ಸೇವಿಸಬಹುದು. ಅಲೋವೆರಾ ಜ್ಯೂಸ ಒಳ್ಳೆಯದು.ಯಾವುದೆ ತರಕಾರಿಗಳನ್ನು ಸ್ವಲ್ಪ ಬೇಯಿಸಿ ತಿನ್ನಬಹುದು.ಸೂಪ್ಮಾಡಿ ಕುಡಿಯಬಹುದು.ಮಾವಿನ ಚಿಗುರು ನೇರಲೆ ಕುಡಿ ಸೀಬೆಕುಡಿ ಒಂದೆಲಗದ ಕಷಾಯಗಳು ಸಕ್ಕರೆಖಾಯಿಲೆ ಯನ್ನು ನಿಯಂತ್ರಣ ಮಾಡುತ್ತದೆ ದಿನಕ್ಕೆ ಎರಡುಬಾರಿ ಎಲೆ ಅಡಿಕೆ ಹಾಕುವುದರಿಂದ ಜೀರ್ಣಕ್ಕು ಒಳ್ಳೆಯದು ಅಡಿಕೆಯಲ್ಲಿನ ಚೊಗರು ಅಂಶ ಸಕ್ಕರೆಯನ್ನು ನಿಯಂತ್ರಿಸುತ್ತದೆ ಸ್ವೀಟ್ ಅಡಿಕೆ ಉಪಯೋಗಿಸಬಾರದು ಮಲೆನಾಡಿನಲ್ಲಿ ಸಿಗುವ ಬೇಯಿಸಿದ ಸರಕು ಅಥವಾ ಕೆಂಪು ಅಡಿಕೆ ಒಳ್ಳೆಯದು.ಸಕ್ಕರೆ ಖಾಯಿಲೆಗೆ ದಿನಕ್ಕೊಂದು ಡಾಕ್ಟರ್ನ್ನು ಬೇಟಿಮಾಡುವುದಕ್ಕಿಂತ ನಾವೇ ವೈದ್ಯರಾಗುವುದು ಒಳ್ಳೆಯದು . ಯಾವುದನ್ನು ತಿಂದಾಗ ಸಕ್ಕರೆ ಅಂಶ ಜಾಸ್ತಿಯಾಗುತ್ತದೆ ಯಾವುದನ್ನು ಸೇವಿಸಿದಾಗ ಕಡಿಮೆಯಾಗುತ್ತದೆ ಎಂದು ಪ್ರತಿದಿನವೂ ಗಮನದಲ್ಲಿ ಇಟ್ಟುಕೊಳ್ಳಬೇಕು ಈಗ ಸಕ್ರೆ ಖಾಯಿಲೆ ಪರೀಕ್ಷಿಸಲು ಹಲವು ಉಪಕರಣಗಳಿವೆ ಪ್ರತಿದಿನ ಆಹಾರ ಸೇವಿಸುವ ಮೊದಲು ಮತ್ತು ನಂತರ ಪರೀಕ್ಷಿಸಿ ಚಾಟ್ನಲ್ಲಿ ಬರೆದಿಟ್ಟು ಕೊಳ್ಳಿ ಏನೇನು ಆಹಾರ ಸೇವಿಸಿದ್ದೀರಿ ಎಂದು ತಿಳಿದುಕೊಂಡರೆ ಅಲ್ಲೆ ಉತ್ತರ ಸಿಗುತ್ತದೆ.ಹಸಿವಾದಾಗ ಇಡ್ಲಿ ದೋಸೆ ಉಪ್ಪಿಟ್ಟು ಅನಿವಾರ್ಯ. ಉಳಿದ ಕರಿದ ಪದಾರ್ಥಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.ಆದರೂ ದಿನವೂ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಲೇಬೇಕಾಗುತ್ತದೆ.
IADVL Karnataka unit appeals to be cautious about fake doctors in dermatology treatment.
ಚರ್ಮರೋಗ ಚಿಕಿತ್ಸೆಯಲ್ಲಿ ನಕಲಿ ವೈದ್ಯರ ಹಾವಳಿ: ಎಚ್ಚರ ವಹಿಸುವಂತೆ ಐಎಡಿವಿಎಲ್ ಕರ್ನಾಟಕ ಘಟಕ ಮನವಿ.
ಜಾಹೀರಾತು
ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ ಐಎಡಿವಿಎಲ್ನೈತಿಕ ಬೆಂಬಲ
ಬೆಂಗಳೂರು; ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ರೋಗ ತಜ್ಞರು ಮತ್ತು ಕುಷ್ಟರೋಗ ತಜ್ಞರ ಸಂಘ – ಕರ್ನಾಟಕ ಐಎಡಿವಿಎಲ್ ಇಂದು ಚರ್ಮರೋಗ ಚಿಕಿತ್ಸೆ, ಕೂದಲು ಕಸಿ ಹಾಗೂ ಸೌಂದರ್ಯ ಚಿಕಿತ್ಸೆಗಳ ಕ್ಷೇತ್ರದಲ್ಲಿ ವೇಗವಾಗಿ ಹೆಚ್ಚುತ್ತಿರುವ ನಕಲಿ ವೈದ್ಯರು ಹೆಚ್ಚುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಇದು ರೋಗಿಗಳ ಸುರಕ್ಷತೆಗೆ ದೊಡ್ಡ ಅಪಾಯವಾಗುತ್ತಿದೆ ಎಂದು ಸಂಘ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಡಾ. ಸವಿತಾ ಎ. ಎಸ್., ಮಾಜಿ ಅಧ್ಯಕ್ಷರಾದ ಡಾ. ವೆಂಕರಾಮ್ ಮೈಸೂರು ಮತ್ತು ಡಾ. ಬಿ.ಎಸ್. ಚಂದ್ರಶೇಖರ್, ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಗದೀಶ್ ಪಿ, ಕಾನೂನು ಸಮಿತಿ ಅಧ್ಯಕ್ಷ ಡಾ. ಅಕ್ಷಯ್ ಸಮಾಗಾಣಿ, ಹಿರಿಯ ಚರ್ಮರೋಗ ತಜ್ಞ ಡಾ. ಎಂ.ಎಸ್. ಗಿರೀಶ್ ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ ಐಎಡಿವಿಎಲ್ ನೈತಿಕ ಬೆಂಬಲ ಸೂಚಿಸಿದರು.
ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ನಕಲಿ ವೈದ್ಯರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಓವರ್-ದಿ-ಕೌಂಟರ್ ಔಷಧಿಗಳ ಅನಿಯಂತ್ರಿತ ಬಳಕೆ ಹಾಗೂ ಔಷಧಿಗಳ ಆನ್ಲೈನ್ ಮಾರಾಟವು ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದ ದುರ್ಘಟನೆಗಳ ಕುರಿತು ಸಂಘ ಗಂಭೀರ ಕಳವಳ ವ್ಯಕ್ತಪಡಿಸಿದೆ. ದಂತ ವೈದ್ಯರು ನಡೆಸಿದರೆಂದು ಹೇಳಲಾಗುತ್ತಿರುವ ಕೂದಲು ಪ್ರತಿರೋಪಣ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಎಂಜಿನಿಯರ್ಗಳು ಮೃತಪಟ್ಟ ಘಟನೆಗಳು ಅನಧಿಕೃತ ಚಿಕಿತ್ಸೆಯಿಂದ ಉಂಟಾಗುವ ಜೀವಾಪಾಯದ ಅಪಾಯವನ್ನು ತೋರಿಸುತ್ತವೆ ಎಂದು ಅವರು ಹೇಳಿದರು.
ಕೂದಲು ಕಸಿ ಮತ್ತು ಸೌಂದರ್ಯ ಚರ್ಮ ಚಿಕಿತ್ಸೆಗಳು ಆಧುನಿಕ ವೈದ್ಯಕೀಯದಲ್ಲಿ ಹಾಗೂ ಚರ್ಮ ಶಸ್ತ್ರಚಿಕಿತ್ಸೆಯಲ್ಲಿ ವಿಶಿಷ್ಟ ತರಬೇತಿ ಅಗತ್ಯವಾಗಿದೆ. ಆದ್ದರಿಂದ ಇಂತಹ ಚಿಕಿತ್ಸೆಯನ್ನು ಕೇವಲ ಅರ್ಹತೆ ಹೊಂದಿದ ಹಾಗೂ ನೋಂದಾಯಿತ ವೈದ್ಯರು—ಚರ್ಮರೋಗ ತಜ್ಞರು ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು—ಮಾತ್ರ ಮಾಡಬೇಕು ಎಂದು ಹೇಳಿದೆ.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಓರಲ್ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸಕರಿಗೆ ಕೂದಲು ಪ್ರತಿರೋಪಣ ಮತ್ತು ಕೆಲವು ಸೌಂದರ್ಯ ಚಿಕಿತ್ಸೆಗಳು ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಚರ್ಮರೋಗ ತಜ್ಞರ ಸಂಘಟನೆಗಳ ಅಭಿಪ್ರಾಯದಲ್ಲಿ ಇದು ಅವರ ಶಿಕ್ಷಣ ವ್ಯಾಪ್ತಿಗೂ ಹಾಗೂ ಕಾನೂನು ಅಧಿಕಾರಕ್ಕೂ ಮೀರಿದೆ. ಈ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರು ಮದ್ರಾಸ್ ಹಾಗೂ ಬಾಂಬೆ ಉಚ್ಚ ನ್ಯಾಯಾಲಯಗಳಲ್ಲಿ ಈ ತೀರ್ಮಾನವನ್ನು ಪ್ರಶ್ನಿಸಿದ್ದೇವೆ ಎಂದರು.
ಐಎಡಿವಿಎಲ್-ಕೆಎನ್ ಕಳೆದ ವರ್ಷ ನಡೆಸಿದ “ನಕಲಿ ವೈದ್ಯ ಮುಕ್ತ ಭಾರತ” ಅಭಿಯಾನದ ಫಲಿತಾಂಶಗಳನ್ನೂ ಉಲ್ಲೇಖಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ 450ಕ್ಕೂ ಹೆಚ್ಚು ದೂರುಗಳನ್ನು ಸಲ್ಲಿಸಲಾಗಿದ್ದು, ಅನಧಿಕೃತ ಕ್ಲಿನಿಕ್ಗಳ ಮೇಲೆ ಹಲವಾರು ದಾಳಿ ಕಾರ್ಯಾಚರಣೆಗಳು ನಡೆದಿವೆ. ಆದರೆ ಕೆಲವು ಕೇಂದ್ರಗಳು ಮೇಲ್ವಿಚಾರಣೆ ಮಾಡುವ ವೈದ್ಯರ ಅನುಮಾನಾಸ್ಪದ “ಘೋಸ್ಟ್” ಪ್ರಮಾಣಪತ್ರಗಳನ್ನು ಬಳಸಿ ಮತ್ತೆ ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿದು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಅರ್ಹ ಚರ್ಮರೋಗ ತಜ್ಞರನ್ನು ಗುರುತಿಸಲು ಒಂದು ಕ್ಯೂಆರ್ ಕೋಡ್ ಕೂಡ ಬಿಡುಗಡೆ ಮಾಡಲಾಗಿದೆ.ಸಂಘವು ಮುಖ್ಯವಾಗಿ ಸರ್ಕಾರಿ ವೈದ್ಯರ ವಿಷಯವನ್ನೂ ಬೆಂಬಲಿಸುತ್ತದೆ ಎಂದು ತಿಳಿಸಿದೆ.
ಐಎಡಿವಿಎಲ್-ಕೆಎನ್ ಸರ್ಕಾರವನ್ನು ಅನಧಿಕೃತ ಸೌಂದರ್ಯ ಕ್ಲಿನಿಕ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಯಾವುದೇ ಚರ್ಮರೋಗ ಅಥವಾ ಸೌಂದರ್ಯ ಚಿಕಿತ್ಸೆಗೆ ಮೊದಲು ವೈದ್ಯರ ಅರ್ಹತೆ ಮತ್ತು ಮೆಡಿಕಲ್ ಕೌನ್ಸಿಲ್ ನೋಂದಣಿಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
IADVL-KN ಸರ್ಕಾರವನ್ನು ಅನಧಿಕೃತ ಕಾಸ್ಮೆಟಿಕ್ ಕ್ಲಿನಿಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಾರ್ವಜನಿಕರು ಯಾವುದೇ ಚರ್ಮ ಅಥವಾ ಅಲಂಕಾರಿಕ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಅರ್ಹತೆ ಮತ್ತು ರಾಜ್ಯ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.
ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ
ಜಾಹೀರಾತು
Stop looting, provide electricity to poor people's homes: BJP leaders' attack
ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆ
ಬೆಂಗಳೂರು ಮಾರ್ಚ್ 11: ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.
ಸಂಘದ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ. ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಶಾಸಕ ಸಿ.ಕೆ. ರಾಮಮೂರ್ತಿ, ಆಮ್ ಆದ್ಮಿ ಪಾರ್ಟಿ ಮುಖಂಡ ರವಿಕೃಷ್ಣಾ ರೆಡ್ಡಿ ಸೇರಿದಂತೆ ಇತರೆ ರಾಜಕೀಯ ಮುಖಂಡರು ಭಾಗಿಯಾಗಿ ಬೆಂಬಲ ಸೂಚಿಸಿದರು ಹಾಗೂ ಆಡಳಿತ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪ್ರಮುಖ ವಿಚಾರವನ್ನು ವಿಧಾನ ಮಂಡಲ ಕಲಾಪದಲ್ಲಿ ಪ್ರಶ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, “ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಪ್ರತಿಯೊಂದು ವಿಚಾರದಲ್ಲಿ ವಸೂಲಿಗೆ ನಿಂತಿದೆ. ಬಡವರು ಇಂದು ಜೀವನ ಮಾಡುವುದು ದುಸ್ಥರವಾಗಿದೆ. ಬಡವರ ಪರವಾಗಿ ಕೆಲಸ ಮಾಡಲು ಜನರು ಆಯ್ಕೆ ಮಾಡಿದ ಸರಕಾರ, ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ಆಕ್ರೋಶ” ವ್ಯಕ್ತಪಡಿಸಿದರು.
“ಕಷ್ಟಪಟ್ಟು ಮನೆಕಟ್ಟಿಕೊಳ್ಳುವುದಕ್ಕೆ ಮುಂದಾಗಿರುವ ಜನರಿಗೆ ಕರೆಂಟ್ ಸಂಪರ್ಕ ನೀಡಲು ಸರಕಾರ ಈ ರೀತಿಯ ಷರತ್ತು, ನಿಯಮಗಳನ್ನು ಹೇರಿಕೆ ಮಾಡುವ ಮೂಲಕ ಜನರ ಜೀವ ಹಿಂಡುವ ಕೆಲಸ ಮಾಡುತ್ತಿದೆ. ಸರಕಾರ ಸುಪ್ರೀಂ ಕೋರ್ಟ್ ನಿಯಮವನ್ನು ಪಾಲಿಸುವ ನೆಪದಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ. ಮೊದಲು ಇದು ನಿಲ್ಲಬೇಕು. ಜನರ ಪರವಾಗಿ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ಮಾತನಾಡಿ, “ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ 2025 ಏಪ್ರಿಲ್ನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಾಗೂ ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ, ಪೂರ್ಣಗೊಂಡಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ (ಓ.ಸಿ) ಅಥವಾ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯಾದ್ಯಂತ ಲಕ್ಷಾಂತರ ಗ್ರಾಹಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಭೂ ಪರಿವರ್ತಿತ ಹಾಗೂ ಭೂ ಪರಿವರ್ತನೆಯಾಗದ ಪ್ರದೇಶಗಳು ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿರುವ ಸ್ಥಳಗಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಬ್ಯಾಂಕ್ಗಳಿಂದ ಸಾಲ ಪಡೆದು ವಿವಿಧ ಹಂತಗಳಲ್ಲಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಲ್ಲಿ ರಾಜ್ಯದ ಲಕ್ಷಾಂತರ ನಾಗರಿಕರಿಗೆ ಆರ್ಥಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ಅರ್ಜಿ ಸಲ್ಲಿಸಿರುವ, ಮಂಜೂರಾತಿ ಪಡೆದಿರುವ ಕಾರ್ಯಾದೇಶಗೊಂಡಿರುವ ಕಟ್ಟಡಗಳಿಗೆ ಸೂಕ್ತ ವಿನಾಯಿತಿ ನೀಡುವ ಮೂಲಕ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ಗ್ರಾಹಕರಿಗೆ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು” ಒತ್ತಾಯಿಸಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ನೇತೃತ್ವದಲ್ಲಿ ಸಾವಿರಾರು ಸದಸ್ಯರು ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು
ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಒಮ್ ಟೈಮ್ ವಿನಾಯಿತ ನೀಡಬೇಕು.
ಸುಪ್ರೀಂ ಕೋರ್ಟ್ ಆದೇಶ ತೋರಿಸಿ ವಿದ್ಯುತ್ ಸಂಪರ್ಕ ನಿಲ್ಲಿಸುವುದು ನೀಡಬೇಕು
ಗುತ್ತಿಗೆದಾರು ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡಬೇಕು
ಎಂ.ಎಸ್. ಎಂ. ಇ. ಕೈಗಾರಿಕೆಗಳಿಗೆ ಓಸಿಯಿಂದ ವಿನಾಯಿತ ನೀಡಬೇಕು
ಪ್ರತಿಭಟನೆ ನಡೆಸುತ್ತಿರುವವರು ಯಾರು ನಮಗೆ ಬಸ್ ಉಚಿತವಾಗಿ ನೀಡಿ, ನಮ್ಮ ಖಾತೆಗೆ ಹಣ ಹಾಕಿ ಅಂತಾ ಕೇಳುತ್ತಿಲ್ಲ. ಬದಲಾಗಿ ನಮಗೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಆಡಳಿತದಲ್ಲಿರುವ ಸರ್ಕಾರ ಓಸಿ, ಸಿಸಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಿದೆ, ಜನರನ್ನು ಸುಲಿಗೆ ಮಾಡುತ್ತಿದೆ. ಇದು ಯಾವ ನ್ಯಾಯ.? ಮೊದಲು ಇವರ ಕಷ್ಟ ಪರಿಹಾರ ಮಾಡಿ.
ಎನ್.ರವಿಕುಮಾರ್, ವಿರೋಧ ಪಕ್ಷದ ಮುಖ್ಯ ಸಚೇತಕ, ವಿಧಾನ ಪರಿಷತ್
Birthday with beautiful and orphaned children at Veereshwara Punyashram.
ವೀರೇಶ್ವರ ಪುನ್ಯಾಶ್ರಮದಲ್ಲಿ ಅಂದ ಹಾಗೂ ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ.
ಜಾಹೀರಾತು
ಗಂಗಾವತಿ: ನಗರದ ಹಿರೇಜಂತಲ್ಲಿನ ಸಂಗೀತ ಕಲಾವಿದೆ ಹಾಗೂ ಬೆಂಗಳೂರಿನ ಸ್ವರ ಸಂಗೀತ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸುನಿತಾ ತಮ್ಮ ಹುಟ್ಟು ಹಬ್ಬವನ್ನು ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂದ ಅನಾಥ ಮಕ್ಕಳೊಂದಿಗೆ ಮಂಗಳವಾರದಂದು ಆಚರಿಸಿಕೊಂಡರು. ಇದಕ್ಕೂ ಪೂರ್ವದಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿ ಮಹಾಸ್ವಾಮಿಗಳು ಪಂಡಿತ್ ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಡಾಕ್ಟರ್ ಪುಟ್ಟರಾಜ ಕವಿ ಗವಾಯಿಗಳವರ ಕರ್ತೋ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪ್ರಸ್ತುತ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜ ಅವರ ಆಶೀರ್ವಾದವನ್ನು ಪಡೆದುಕೊಂಡು ಮಕ್ಕಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದರು. ಈ ಸಂದರ್ಭದಲ್ಲಿ ಪೀಠಾಧಿಕಾರಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜ ಆಶೀರ್ವಚನ ನೀಡಿ ಕಳೆದ ಹಲವು ವರ್ಷಗಳಿಂದ ಸಂಗೀತ ಕಲಾವಿದೆ ಸುನಿತಾ ಅವರು ಆಶ್ರಮಕ್ಕೆ ಆಗಮಿಸಿ ,
ಗುರುಗಳಿಗೆ ವಿಶೇಷ ಪೂಜಾ ಸಲ್ಲಿಸಿ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದರ ಮೂಲಕ ತಮ್ಮ ಗುರು ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಸುಲ್ತಾವರು ತ್ರಿಭಾಷಕವಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಪರಮ ಶಿಕ್ಷಕರಾಗಿ ಅಂದಿನಿಂದ ಇಂದಿನವರೆಗೆ ಆಶ್ರಮದೊಂದಿಗೆ ತಮ್ಮ ಧಾನ್ಯವನ್ನು ವೃದ್ಧಿಸಿಕೊಂಡಿದ್ದು ಅವರಿಗೆ ಗುರುವರ್ಯರು ಸುಖ ಶಾಂತಿ ಸಮೃದ್ಧಿ ಹಾಗೂ ಸಂಗೀತ ಕ್ಷೇತ್ರದ ಸಾಧನೆಗೆ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು ಈ ಸಂದರ್ಭದಲ್ಲಿ ಕಾರಟಗಿಯ ಭೋಜರಾಜ್ ಹಾಗೂ ವಿಜಾಪುರದ ಸ್ನೇಹಿತೆಯರು ಪಾಲ್ಗೊಂಡಿದ್ದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಕಲಿಕೆಯನ್ನು ೧೦೦ ಅಂಕಗಳಿಗೆಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಇಂದು ಮಲ್ಲೇಶ್ವರದ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಲಿಯ ಎದಿರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಕನ್ನಡ ಪರ ಸಂಘಟನೆಗಳು, ರೈತ-ದಲಿತ ಸಂಘಟನೆಗಳು, ಪ್ರಗತಿಪರ ಜನ ಸಂಘಟನೆಗಳ ನೂರಾರು ಮಂದಿ ಇಂದು ಬೆಳಗ್ಗೆ ಪ್ರೌಢಶಿಕ್ಷಣ ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೋಲೀಸರು ಪ್ರತಿಭಟನಾಕಾರರನ್ನು ತಡೆದರು. ಕೆಲಹೊತ್ತು ಮಾತಿನ ಚಕಮಕಿ ನಡೆದು ಹೋರಾಟಗಾರರು ಹಿಂದೆ ಸರಿಯದೆ ಹೋದಾಗ ಕೊನೆಗೆ ಪೋಲೀಸರು ಇಲಾಖೆಯ ನಿರ್ದೇಶಕರಾದ ಮಹೇಶ್ ರವರನ್ನೇ ಕಚೇರಿಯಿಂದ ಕರೆಸಿ ಸಂಘಟನೆಗಳ ಬೇಡಿಕೆಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟರು. ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಲೇಖಕ ಜಾಣಗೆರೆ ವೆಂಕಟರಾಮಯ್ಯನವರಃ ಮಾತನಾಡಿ ‘ಹಿಂದಿ ಕಡ್ಡಾಯ ಕಲಿಕೆಯನ್ನು ಕನ್ನಡಿಗರು ಎಂದೂ ಒಪ್ಪುವುದಿಲ್ಲ, ಸರ್ಕಾರವು ವಿಳಂಬ ಮಾಡದೆ ಹಿಂದಿ ಹೇರಿಕೆ ರದ್ದು ಮಾಡಬೇಕೆಂದು’ ಅಗ್ರಹಿಸಿದರು. ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮಾತನಾಡಿ ‘ಕಳೆದ ನಾಲ್ಕು ದಶಕಗಳಿಂದಲೂ ನಾನು ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಹೋರಾಟ ಮಾಡುತ್ತಾ ಬಂದಿದ್ದು ಕನ್ನಡಿಗರು ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ, ಸರ್ಕಾರವು ಈ ಬಗ್ಗೆ ಖಚಿತ ನಿರ್ಧಾರ ಕ್ಯೆಗೊಳ್ಳುವಂತೆ’ ಆಗ್ರಹಿಸಿದರು. ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ‘ಸರ್ಕಾರದ ಹಿಂದಿ ಕಲಿಕೆ ನೀತಿಯಿಂದ ಲಕ್ಷಾಂತರ ಮಕ್ಕಳ ಬದುಕು ಭವಿಷ್ಯವು ಅತಂತ್ರಗೊಳ್ಳುತ್ತಿದೆ. ಸರ್ಕಾರವು ಸೂಕ್ತ ತೀರ್ಮಾನ ಮಾಡುವವರೆಗೂ ಹೋರಾಟ ನಿಲ್ಲದೆಂದು’ ಎಚ್ಚರಿಸಿದರು. ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಮಾತನಾಡಿ ‘ಸರ್ಕಾರವು ಹಿಂದಿ ಭಾಷಾ ಕಲಿಕೆ ರದ್ದುಮಾಡದಿದ್ದಲ್ಲಿ ಹಿಂದಿ ಭಾಷಾ ಪರೀಕ್ಷೆ ನಡೆಯುವ ಮಾರ್ಚ್ ೩೦ರಂದು ಪರೀಕ್ಷಾ ಕೇಂದ್ರಗಳಿಗೆ ಹೋರಾಟಗಾರರು ನುಗ್ಗಿ ಅಡಚಣೆ ಉಂಟು ಮಾಡುವುದಾಗಿ ಎಚ್ಚರಿಕೆ’ ನೀಡಿದರು. ನಾವೇ ಕರ್ನಾಟಕದ ಪಾರ್ವತೀಶ ಬಿಳಿದಾಳೆ ಐದು ಪ್ರಮುಖ ಬೇಡಿಕೆಗಳಿರುವ ಮನವಿ ಪತ್ರವನ್ನು ಸಭೆಯಲ್ಲಿ ಓದಿದರು. ಪ್ರತಿಕ್ರಿಯಿಸಿದ ನಿರ್ದೇಶಕರಾದ ಮಹೇಶ್ ರವರು ಈ ವಿಚಾರವನ್ನು ತಕ್ಷಣ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಕದಂಬ ಸೇನೆಯ ಚೇತನ್ ಗೌಡ, ರಕ್ಷಣಾ ವೇದಿಕೆಯ ಶಿವರಾಮೇಗೌಡರು, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಶೇ.ಬೊ ರಾಧಾಕೃಷ್ಣ, ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆಯ ಕೃಷ್ಣೇಗೌಡರು, ಕರ್ನಾಟಕ ರಕ್ಷಣಾ ಪಡೆಯ ನೆ.ಲ ರಾಮಪ್ರಸಾದ್, ಡಾ. ರಾಜ್ ಸೇನೆಯ ತ್ಯಾಗರಾಜ್, ನಮ್ಮ ಕರುನಾಡ ವಿಜಯ ಸೇನೆಯ ವಿಜಯ ಕುಮಾರ್, ಚಂದಾಪುರ ಯುವ ರಣಧೀರರ ಪಡೆಯ ಮಂಜುನಾಥ್, ಕರ್ನಾಟಕ ಜನಶಕ್ತಿಯ ಸಿರಿಮನೆ ನಾಗರಾಜ್ ಮುಂತಾದವರು ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸAಘರ್ಷಮಯ ವಾತಾವರಣ ಉಂಟಾಗುವ ನಿರೀಕ್ಷೆಯಿಂದ ಭಾರಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿ
Solidarity Youth Moment hosts Iftar gathering with people of all religions
ಸೋಲಿಡಾರಿಟಿ ಯೂಥ್ ಮುಮೆಂಟ್ ವತಿಯಿಂದ ಸರ್ವ ಧರ್ಮದವರೊಂದಿಗೆ ಇಫ್ತಾರ್ ಕೂಟ
ಜಾಹೀರಾತು
ಗಂಗಾವತಿ: ನಗರದ ಪ್ರಶಾಂತಿ ನಗರದಲ್ಲಿರುವ ಸೋಲಿಡಾರಿಟಿ ಯೂಥ್ ಮುಮೆಂಟ್ ಗಂಗಾವತಿ ಘಟಕದವತಿಯಿಂದ ಸರ್ವ ಧರ್ಮದವರೊಂದಿಗೆ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜ್ಞಾನಜ್ಯೋತಿ ಶಿವಲಿಂಗ ಸ್ವಾಮೀಜಿ ಸುಕ್ಷೇತ್ರ ಹೆಚ್. ವೀರಾಪುರ್ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ಜನಸ್ತೋಮಕ್ಕೆ ರಂಜಾನಿನ ಸಂದೇಶ ನೀಡಲಿಕ್ಕಾಗಿ ಸಹೋದರರಾದ ಇಸ್ಮಾಯಿಲ್ ತೀರ್ಥಹಳ್ಳಿ.ಮುಖ್ಯ ಕಾರ್ಯದರ್ಶಿಗಳು ಸೋಲಿಡಾರಿಟಿ ಯೂಥ್ ಮೂಮೆಂಟ್ರವರು ಬೆಂಗಳೂರಿನಿಂದ ಆಗಮಿಸಿದ್ದರು..
ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲಾ ಧರ್ಮಗಳ ಸಾರವೊಂದೇ ಮಾನವೀಯತೆ ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕೆ ಹೊರತು ಮನುಷ್ಯನ ಧರ್ಮವನಲ್ಲ ಅಂತಕಂತ ಮಾತನ್ನು ಕೂಡ ತಿಳಿಸಿದರು.
ಎಲ್ಲರೂ ಶ್ರೇಷ್ಠರು ನಾವೆಲ್ಲರೂ ಭಾರತೀಯರು ನಾವೆಲ್ಲರೂ ಪರಸ್ಪರ ಅಣ್ಣತಮ್ಮಂದಿರಂತೆ ಬದುಕಿ ಬಾಳಬೇಕು ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಭೇದ ಭಾವ ಮಾಡದೇ ಹಗಲಿರುಳು ಶ್ರಮಿಸಬೇಕು ಅಂತಕಂತಹ ಮಾತನ್ನು ಕೂಡ ಸ್ವಾಮೀಜಿಯವರು ಈ ಸಂದರ್ಭದಲ್ಲಿ ತಿಳಿಸಿದರು.
ಸಹೋದರರಾದ ಇಸ್ಮಾಯಿಲ್ ತೀರ್ಥಳ್ಳಿ ಅವರು ಮಾತನಾಡಿ ಪವಿತ್ರ ತಿಂಗಳು ಕೇವಲ ಆಹಾರ ಮತ್ತು ಪಾನೀಯದಿಂದ ದೂರವಿರುವುದಷ್ಟೇ ಅಲ್ಲ; ಇದು ಆತ್ಮದ ತಪಸ್ಸು ಹಾಗೂ ಸಮಾಜದ ಮೇಲಿನ ಕರುಣೆ ಮತ್ತು ದಯೆಯನ್ನೂ ಬೆಳೆಸುವ ಸಮಯವಾಗಿದೆ.
ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ಹೀಗೆ ಹೇಳುತ್ತಾನೆ: “ಓ ವಿಶ್ವಾಸಿಗಳೇ! ನಿಮ್ಮ ಮೇಲೆ ಉಪವಾಸವನ್ನು ವಿಧಿಸಲಾಗಿದೆ, ನೀವು ಧರ್ಮನಿಷ್ಠರಾಗುವಂತೆ.” ಆದ್ದರಿಂದ – ದೇವರ ಭಯವು ನಮ್ಮ ಹೃದಯಗಳಲ್ಲಿ ಆಳವಾಗಿ ನೆಲೆಸಲಿ, ಮತ್ತು ನಾವು ಸತ್ಯನಿಷ್ಠ ಜೀವನವನ್ನು ನಡೆಸೋಣ. ನಾವೆಲ್ಲರೂ ಉತ್ತಮ ಸಮಾಜಕ್ಕಾಗಿ ಒಳ್ಳೆಯ ಕೆಲಸಗಳನ್ನು ಕೂಡಿಕೊಂಡು ಮಾಡೋಣ ಅಂತಕಂತ ಮಾತನ್ನು ತಿಳಿಸಿ ಹೇಳಿದರು
ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರುಗಳು ಗಂಗಾವತಿ ರಾಷ್ಟ್ರೀಯ ಬಸವದಳದ ,ಬಸವಕೇಂದ್ರ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜದ ಚಿಂತನೆಯಲ್ಲಿ ತೊಡಗಿರುವಂತಹ ಬುದ್ಧಿಜೀವಿಗಳು ಪತ್ರಕರ್ತರು ಭಾಗವಹಿಸಿದ್ದರು.
SYM ನ ಜಿಲ್ಲಾಧ್ಯಕ್ಷರಾದ ನಾಸಿರ್ ಅಹಮದ್, ತಾಲೂಕ ಅಧ್ಯಕ್ಷರಾದ ರಾಜ, ಮತ್ತು SYM ನ ಎಲ್ಲಾ ಕಾರ್ಯಕರ್ತರು ಮತ್ತು JIH ನ ತಾಲೂಕ ಆದ್ಯಕ್ಷರಾದ ಅಬ್ದುಲ್ ಖುದ್ದೂಸ್, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,
ಮಂಡ್ಯ: ಐತಿಹಾಸಿಕ ಶ್ರೀ ಮೇಲುಕೋಟೆ ಚೆಲುವನಾರಾಣ ಸ್ವಾಮಿ ದೇವಳದ ಶಾಸ್ತ್ರೀಯ ಸಂಗೀತ ನೃತ್ಯ ವೇದಿಕೆ, ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಆಯೋಜಿಸಿದ್ದ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್ ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದದವರಿಂದ ಶ್ರೀ ಕೃಷ್ಣ ರಾಸಲೀಲೆ ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಸಂಚಾಲಕರಾದ ಹೆಚ್.ವಿ. ಶ್ರೀಲಕ್ಷ್ಮೀ ತೇಜಸ್ ಕಲಾವಿದರನ್ನು ಸನ್ಮಾನಿಸಿದರು.
Cleanliness campaign led by Anegundi Gram Panchayat
ಆನೆಗುಂದಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ
ಜಾಹೀರಾತು
ಗಂಗಾವತಿ. ತಾಲೂಕಿನ ಆನೆಗುಂದಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಂಗಳವಾರದಂದು ಜಿಲ್ಲಾಧಿಕಾರಿಗಳು ಕೊಪ್ಪಳ, ಇವರ ಆದೇಶದಂತೆ ಆನೆಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳೊಂದಿಗೆ nrlm ಇಲಾಖೆ ಸಿಬ್ಬಂದಿ ರವರು ಆನೆಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಜನಾದ್ರಿ ಬೆಟ್ಟದ ಮುಂಭಾಗದ ಅಂಗಡಿ ಮತ್ತು ಹೋಟೆಲ್ಗಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತು ನೋಟಿಸ್ ಅನ್ನು ನೀಡಲಾಯಿತು ಹಾಗೆಯೇ ಏಕ ಬಳಕೆ ಪ್ಲಾಸ್ಟಿಕ್( ಕ್ಯಾರಿ ಬ್ಯಾಗ್ ಪ್ಲಾಸ್ಟಿಕ್ ಸ್ಪೂನ್, ಟೀ ಕಪ್ಸ್, ಪ್ಲಾಸ್ಟಿಕ್ ಗ್ಲಾಸ್, ಸ್ಟ್ರಾ,) ಬಳಸುತ್ತಿದ್ದ ಅಂಗಡಿಗಳಿಂದ ಜಪ್ತಿ ಮಾಡಲಾಯಿತು.ಹಾಗೂ ಪ್ಲಾಸ್ಟಿಕ್ ಬಳಸುವಂತಹ ಅಂಗಡಿಗಳಿಗೆ 500 ರೂ ದಂಡ ಕಟ್ಟಿಸಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಪಿಡಿಒ ಮಲ್ಲಿಕಾರ್ಜುನ್ ಕಡಿವಾಳ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ದುಷ್ಪರಿಣಾಮ ಹಾಗೂ ಪರಿಸರದ ಕಲುಷಿತಗೊಳಿತು ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಕಿಷ್ಕಿಂದ ಹಾಗೂ ಪಂಪ ಸರೋವರ ಮತ್ತಿತರ ಭಾಗಗಳಲ್ಲಿ ಜನ ಜಾಗೃತಿ ಜೊತೆಗೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಿ ದರು. ಈ ಸಂದರ್ಭದಲ್ಲಿ l ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು
Make it a habit to add ghee to milk and drink it, and see how many benefits it brings.
ಹಾಲಿಗೆ ತುಪ್ಪ ಸೇರಿಸಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ, ಇದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಾಗುತ್ತೆ ನೋಡಿ.
ಜಾಹೀರಾತು
ಹಾಲು ಮತ್ತು ತುಪ್ಪ ಸೇರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೀರ್ಣಾಂಗದ ಸಮಸ್ಯೆ ದೂರಮಾಡುತ್ತದೆ.ಹಾಲು ಮತ್ತು ತುಪ್ಪದ ಇವೆರಡರ ಆರೋಗ್ಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅವೆರಡನ್ನೂ ಸೇರಿಸಿ ಕುಡಿದಾಗ ಅದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದೊಂದು ಉತ್ತಮ ಆರೋಗ್ಯಕರ ಪಾನೀಯವೂ ಹೌದು. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದೆ. ಹಾಲಿನಲ್ಲಿರುವ ಕೊಬ್ಬಿನಾಂಶವು ಹಸು ಅಥವಾ ಎಮ್ಮೆಗಳಂತಹ ಮೂಲವನ್ನು ಅವಲಂಬಿಸಿರುತ್ತದೆ. ಹಾಗಾಗಿ ಅದರಲ್ಲಿಯ ಕೊಬ್ಬಿನಾಂಶವು ಬದಲಾಗುತ್ತದೆ. ತುಪ್ಪವು ಉತ್ತಮ ಕೊಬ್ಬಿನ ಮೂಲವಾಗಿದೆ. ಅದರಲ್ಲಿ ಕರಗಬಲ್ಲ ವಿಟಮಿನ್ಗಳಾದ ಎ, ಡಿ, ಇ, ಮತ್ತು ಕೆ ಅನ್ನು ಹೊಂದಿದೆ. ಮೊಸರನ್ನು ಕಡೆದು ಬಂದ ಬೆಣ್ಣೆಯಿಂದ ತಯಾರಿಸಿದ ತುಪ್ಪ ಮತ್ತು ದೇಸಿ ಹಸುವಿನ ಹಾಲು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ.ಚರ್ಮ ಮತ್ತು ಕೂದಲಿಗಿದೆ ಭಾರಿ ಪ್ರಯೋಜನಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಚರ್ಮ ಮತ್ತು ಕೂದಲು ಶುಷ್ಕವಾಗಿ ಬಣ್ಣ ಕಳೆದುಕೊಳ್ಳುತ್ತದೆ. ಹಾಲು ಮತ್ತು ತುಪ್ಪವು ಉತ್ತಮ ಮಾಯಶ್ಚರೈಸರ್ ಆಗಿದೆ. ಅದು ಚರ್ಮ ಮತ್ತು ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಸಹಕಾರಿಯಾಗಿದೆ. ಅರಿಶಿನದ ಹಾಲಿಗೆ ತುಪ್ಪ ಬೆರೆಸಿ ಕುಡಿಯಲು ಹೇಳಲಾಗುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುವ ಮೂಲಕ ಚರ್ಮದ ಮೇಲಿರುವ ಕಲೆ, ಮೊಡವೆಗಳನ್ನು ದೂರಮಾಡುತ್ತದೆ.ಪೋಷಕಾಂಶಗಳ ಖಜಾನೆಹಾಲು ಮತ್ತು ತುಪ್ಪದ ಸಂಯೋಜನೆಯು ಉತ್ತಮ ಪೌಷ್ಠಿಕಾಂಶದ ಮೂಲವಾಗಿದೆ. ಹಾಲು ಕಬ್ಬಿಣ, ಪ್ರೊಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಖನಿಜಗಳನ್ನು ಮತ್ತು ವಿಟಮಿನ್ ಎ, ಡಿ, ಬಿ-6, ಇ ಮತ್ತು ಕೆ ಜೀವಸತ್ವಗಳನ್ನು ಹೊಂದಿದ್ದರೆ, ತುಪ್ಪವು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ತುಪ್ಪವು ಸ್ಯಾಚುರೇಟೆಡ್ ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳ ಜೊತೆಗೆ ಕರಗಬಲ್ಲ ಜೀವಸತ್ವಗಳಾದ ಎ, ಡಿ, ಇ ಮತ್ತು ಕೆ ಹೊಂದಿದೆ. ಇವೆರಡನ್ನು ಸೇರಿಸಿ ಕುಡಿದಾಗ ಆ ಎಲ್ಲಾ ಪೋಷಕಾಂಶಗಳು ನಮ್ಮ ದೇಹವನ್ನು ಸೇರುತ್ತದೆ. ಉತ್ತಮ ಆರೋಗ್ಯ ನೀಡುತ್ತದೆ.ಎಲುಬಿನ ಆರೋಗ್ಯ ಕಾಪಾಡುತ್ತದೆಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಗಟ್ಟಿಮುಟ್ಟಾದ ಮೂಳೆ ಮತ್ತು ಹಲ್ಲುಗಳಿಗೆ ಇದು ಅಗತ್ಯ. ವಿಟಮಿನ್ ಡಿ ಹೊಂದಿರುವ ತುಪ್ಪದೊಂದಿಗೆ ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲನ್ನು ಸೇರಿಸಿದಾಗ, ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಮಹತ್ವದ ಪಾತ್ರ ವಹಿಸುತ್ತದೆ. ತುಪ್ಪವು ಉತ್ತಮ ಲೂಬ್ರಿಕಂಟ್ ಆಗಿದೆ. ಅದು ಕೀಲುಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಅದ್ಭುತವಾಗಿದೆ.ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆಹಾಲು ಮತ್ತು ತುಪ್ಪ ಎರಡೂ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ದೇಸಿ ತುಪ್ಪವು ಜೀರ್ಣಾಂಗದಿಂದ ಕಲ್ಮಶಗಳನ್ನು ಹೊರಹಾಕಲು, ದೇಹದ ರಕ್ಷಣೆಯನ್ನು ಬಲಪಡಿಸಲು ಮತ್ತು ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ತುಪ್ಪವು ನೈಸರ್ಗಿಕ ವಿರೇಚಕವೂ ಹೌದು. ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಕರುಳಿನಿಂದ. ತುಪ್ಪ ಮತ್ತು ಹಾಲು ಎರಡೂ ಕರುಳಿಗೆ ಉತ್ತಮವಾದ ಕಾರಣ ಅವುಗಳ ಮಿಶ್ರಣವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮವಾಗಿದೆ.ತೂಕ ಇಳಿಕೆಯಲ್ಲಿ ಸಹಕಾರಿತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಹಲವರ ತಪ್ಪು ತಿಳುವಳಿಕೆ. ಮಿತವಾಗಿ ಸೇವಿಸಿದಾಗ ಅದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ತುಂಬಿರುವ ಅನುಭವ ನೀಡಿ, ಅತಿಯಾಗಿ ತಿನ್ನುವ ಬಯಕೆ ಕಡಿಮೆಯಾಗುವಂತೆ ಮಾಡುತ್ತದೆ. ಹಾಲಿನಲ್ಲಿರುವ ಪ್ರೋಟೀನ್ನೊಂದಿಗೆ ಸೇರಿಸಿದಾಗ ತೃಪ್ತಿ ನೀಡುವ ಪೌಷ್ಠಿಕ ಪಾನೀಯವಾಗಬಲ್ಲದು.ಜೀರ್ಣಕ್ರಿಯೆ ಸುಧಾರಿಸುತ್ತದೆತುಪ್ಪವು ಉತ್ತಮ ಜೀರ್ಣಕಾರಿ ಎಂದೇ ಹೆಸರುವಾಸಿ. ಇದರಲ್ಲಿರುವ ಬ್ಯುಟರಿಕ್ ಆಮ್ಲವು ಜಿರ್ಣಾಂಗವ್ಯೂಹದ ಆರೋಗ್ಯವನ್ನು ಬೆಂಬಲಿಸುವ ಕೊಬ್ಬಿನಾಮ್ಲವಾಗಿದೆ. ಇದು ಕರುಳಿನ ಬ್ಯಾಕ್ಟೀರಿಯಾ, ಕರುಳಿನ ಕೋಶಗಳು ಮತ್ತು ಉರಿಯೂತದಿಂದ ಆರೋಗ್ಯವನ್ನು ಕಾಪಾಡುತ್ತದೆ. ಹಾಲಿನೊಂದಿಗೆ ತುಪ್ಪ ಸೇವಿಸಿದಾಗ, ತುಪ್ಪವು ಹಾಲಿನ ಜೀರ್ಣಕಾರಿ ಗುಣಗಳನ್ನು ಹೆಚ್ಚಿಸುತ್ತದೆ. ಲ್ಯಾಕ್ಟೋಸ್ ಅಥವಾ ಡೈರಿ ಉತ್ಪನ್ನ ಅಲರ್ಜಿ ಇರುವವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಎಷ್ಟು ತುಪ್ಪ ತಿನ್ನಬೇಕು?ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಅವೆರಡೂ ಕ್ಯಾಲೋರಿಗಳಿಂದ ತುಂಬಿರುತ್ತವೆ. ಹಾಗಾಗಿ ದಿನವೊಂದಕ್ಕೆ ತುಪ್ಪವನ್ನು ಒಂದರಿಂದ ಎರಡು ಚಮಚ ಶಿಫಾರಸ್ಸು ಮಾಡಲಾಗುತ್ತದೆ. ಹಾಲು ಕುಡಿಯಲು ನೀಡಿರುವ ಮಾರ್ಗಸೂಚಿಯೆಂದರೆ ವಯಸ್ಕರರು ದಿನವೊಂದಕ್ಕೆ ಎರಡರಿಂದ ಮೂರು ಕಪ್ ಕುಡಿಯಬಹುದು. ಆದರೆ ಈ ಸೂಚಿಯು ಮಹಿಳೆ, ಪುರುಷ, ವಯಸ್ಸು ಮತ್ತು ಆಹಾರಕ್ರಮದ ಮೇಲೆ ಅವಲಂಬಿಸಿದೆ.ಮುನ್ನೆಚ್ಚರಿಕೆಗಳೇನು?ಹಾಲು ಮತ್ತು ತುಪ್ಪ ಎಷ್ಟೇ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅವುಗಳನ್ನು ಸೇವಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇ ಬೇಕು. ಮೊದಲನೆಯದಾಗಿ ಹಾಲು ಮತ್ತು ತುಪ್ಪ ಇವೆರಡರಲ್ಲೂ ಲ್ಯಾಕ್ಟೋಸ್ ಇರುವುದರಿಂದ ಅದರ ಅಲರ್ಜಿ ಇರುವವರು ಎಚ್ಚರಿಕೆ ವಹಿಸಬೇಕು. ತೂಕ ನಿರ್ವಹಣೆಯಲ್ಲಿರುವವರು ತುಪ್ಪದ ಕ್ಯಾಲೋರಿ ಗಮನದಲ್ಲಿಟ್ಟುಕೊಂಡಿರಬೇಕು. ಇದು ಮಿತವಾಗಿ ಉತ್ತಮವಾಗಿದೆ. ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಕೆಲವು ಆಹಾರಗಳ ನಿರ್ಬಂಧವಿರುವವರು ಅಥವಾ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವವರು, ಓಟ್, ಸೋಯಾ ಅಥವಾ ಬಾದಾಮಿ ಹಾಲಿನಂತಹ ಪರ್ಯಾಯಗಳನ್ನು ರೂಢಿಸಿಕೊಳ್ಳಬೇಕಾಗಬಹುದು.
International Women's Day: Public awareness on "Health Care"
ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ
ಜಾಹೀರಾತು
ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು. ನಂತರ ಮಾತನಾಡಿದ ಗಿರಿಜಮ್ಮ, ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಇದಕ್ಕಾಗಿ ಸೂಕ್ತ ಹಣಕಾಸು ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು. ಡಾ. ನಳಿನಿ ಮಾತನಾಡಿ ಹೆಣ್ಣು ಮಕ್ಕಳು ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ, ವಿಹಾರಕ್ಕೆ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು. ಕೆನರಾ ಬ್ಯಾಂಕ್ ಮ್ಯಾನೇಜರ್ ಲಾವಣ್ಯ ಅವರು, ಹಣಕಾಸು ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗಿನ್ನಿಸ್ ವಿಶ್ವ ದಾಖಲೆಯ ರಂಗಲಕ್ಷ್ಮಿ ಶ್ರೀನಿವಾಸರವರ ನಗೆಯೋಗ ನೃತ್ಯದಲ್ಲಿ ಮಹಿಳೆಯರು ಅತ್ಯಂತ ಆನಂದದಿಂದ ಪಾಲ್ಗೊಂಡು ಸಂಭ್ರಮಿಸಿದರು.
Protest led by former MLA Munavalli in front of the police station demanding the arrest of Jameer and others for urinating in front of the house
ಮನೆ ಮುಂದೆಮೂತ್ರವಿಸರ್ಜನೆ ಮಾಡಿದನೆನ್ನಲಾದ ಜಮೀರ್ ಸೇರಿ ಇತರರನ್ನು ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆನಡೆಸಿದರು.
ಜಾಹೀರಾತು
ನ್ಯಾಯವಾದಿಮನೆಯ ಮುಂದೆ ಮೂತ್ರವಿಸರ್ಜನೆ ,ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಹಾಗೂ , ಪತ್ನಿಯ ಮೇಲೆ ಹಲ್ಲೆ
ಮೂತ್ರ ವಿಸರ್ಜನೆ ಮಾಡಿ ರದ್ದಾಂತಕ್ಕೆ ಕಾರಣನಾದ ಜಮೀರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತಿದ್ದಾರೆ.
ಗಂಗಾವತಿ: ಮನೆಯ ಮುಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಜಮೀರ್ ಹಾಗೂ ಐವತ್ತು ಹೆಚ್ಚು ಜನರು ಸೇರಿ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ಬಸವೇಶ್ವರ ಕಾಲೋನಿ(ಬಂಬೂ ಬಜಾರ್)ಯಲ್ಲಿ ಮಂಗಳವಾರ ಸಂಜೆ ಜರುಗಿದ್ದು ಹಲ್ಲೆ ಮಾಡಿದವರು ಕೂಡಲೇ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ,ಮಾಜಿ ಸಂಸದ ಶಿವರಾಮ ಗೌಡ, ನೇತೃತ್ವದಲ್ಲಿ ನ್ಯಾಯವಾದಿ ಪ್ರಭಾಕರ್ ಆಪ್ತರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗಂಗಾವತಿಯಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸ್ ವೈಫಲ್ಯ ಕಾರಣವಾಗಿದೆ. ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ನಗರದಲ್ಲಿ ಪದೇ ಪದೇ ಹಲ್ಲೆ, ದೌರ್ಜನ್ಯ, ಗೂಂಡಾಗಿರಿಯಂತಹ ಕೃತ್ಯಗಳು ನಡೆಯುತ್ತಿವೆ. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕೆಂದರು. ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ದೌರ್ಜನ್ಯ ಗುಂಡಾಗಿರಿ ಹಲ್ಲೆ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಯಾರನ್ನು ಬಿಡುವ ಪ್ರಶ್ನೆ ಇಲ್ಲ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸಲಾಗುತ್ತದೆ. ಎಲ್ಲರೂ ಸಹಕಾರ ನೀಡುವ ಮೂಲಕ ಗಂಗಾವತಿಯಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗಾಗಲೇ ಗಂಗಾವತಿ ನಗರದಾದ್ಯಂತ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳು ಬಿಜೆಪಿ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು. ಚಿಕಿತ್ಸೆ: ಮೂತ್ರ ವಿಸರ್ಜನೆ ಘಟನೆಯಲ್ಲಿ ಅಸ್ವಸ್ಥಗೊಂಡ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿ ಅನಸೂಯಾ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
There is no escape from karma": Mahua Moitri's mystical words to Om Birla
ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”: ಓಂ ಬಿರ್ಲಾಗೆ ಮಹುವಾ ಮೋಯಿತ್ರಿ ಮಾರ್ಮಿಕ ಮಾತು
ಜಾಹೀರಾತು
ನವದೆಹಲಿ: ಮಾರ್ಚ್ 10, 2026 ಭಾರತೀಯ ಸಂಸದೀಯ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ಉಳಿಯಲಿದೆ. ಹೌದು ಸಾಂಪ್ರದಾಯಕವಾಗಿ ಸ್ಪೀಕರ್ ಪೀಠಕ್ಕೆ ಗೌರವ ಸಲ್ಲಿಸಲಾಗುತ್ತದೆ, ಅದೇ ರೀತಿ ಆ ಪೀಠದ ಮೇಲಿ ಕುಳಿತಿರುವ ವ್ಯಕ್ತಿ ಕೂಡ ಪಕ್ಷಪಾತಿಯಾಗಿರದೆ, ಸದನ ನಡೆಸಬೇಕು. ಆದರೆ ಆ ವ್ಯಕ್ತಿ ಪಕ್ಷಪಾತಿಯಾಗಿ ವರ್ತಿಸಿದರೆ ಏನಾಗುತ್ತದೆ ಎಂಬುದಕ್ಕೆ ತೃಣಮೂಲ ಕಾಂಗ್ರೆಸ್ನ ಫೈರ್ ಬ್ರಾಂಡ್ ಸಂಸದೆ ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣ ಸಾಕ್ಷಿಯಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಮಹುವಾ, ಕೇವಲ ಭಾಷಣ ಮಾಡಲಿಲ್ಲ; ಬದಲಿಗೆ ಅಂಕಿ-ಅಂಶಗಳ ಚಾಕು ಹಿಡಿದು ಪ್ರಜಾಪ್ರಭುತ್ವದ ವಿರೂಪತೆಯನ್ನು ಬಿಡಿಸಿಟ್ಟರು.
ಕರ್ಮದ ಚಕ್ರ ತಿರುಗಿದೆ!
ಮಹುವಾ ಮೋಯಿತ್ರಿ (Mahua Moitra) ಅವರ ಭಾಷಣದ ಆರಂಭವೇ ಅತ್ಯಂತ ಅರ್ಥಪೂರ್ಣವಾಗಿತ್ತು. ಕಳೆದ ಬಾರಿ ಸಂಶಯಾಸ್ಪದ ಕಾರಣಗಳ ನೀಡಿ, ಮಾತನಾಡಲು ಕನಿಷ್ಠ ಅವಕಾಶವನ್ನೂ ಕೊಡದೆ ಮಹುವಾ ಅವರನ್ನು ಇದೇ ಸದನದಿಂದ ಉಚ್ಚಾಟಿಸಲಾಗಿತ್ತು. ಆದರೆ, ಇಂದು ಅದೇ ಮಹುವಾ ಅದೇ ಸದನದಲ್ಲಿ ಸ್ಪೀಕರ್ ವಿರುದ್ಧವೇ ಚರ್ಚೆ ಆರಂಭಿಸುತ್ತಿದ್ದರು. ಇದನ್ನು ಅವರು “ಡಿವೈನ್ ಕರ್ಮ” (ದೈವಿಕ ಕರ್ಮ) ಎಂದು ಕರೆದರು. “ಕರ್ಮದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನೀವು ಯಾರ ಧ್ವನಿಯನ್ನು ಅಡಗಿಸಲು ಯತ್ನಿಸಿದಿರೋ, ಅದೇ ಧ್ವನಿ ಇಂದು ನಿಮ್ಮ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಿದೆ” ಎಂದು ಅಕ್ಷರಶಃ ಗುಡುಗಿದ್ದರೆ, ಈ ವೇಳೆ ಸದನದಲ್ಲಿ ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ಸ್ತಬ್ಧವಾಗಿತ್ತು.
ಮಹುವಾ ಅವರ ಟೀಕೆಗಳು ಬರಿ ಗಾಳಿಯಲ್ಲಿ ಗುಂಡು ಹಾರಿಸುವಂತಿರಲಿಲ್ಲ. ಅವರು ಓಂ ಬಿರ್ಲಾ ಅವರ ಅವಧಿಯ ಕರಾಳ ಅಂಕಿ-ಅಂಶಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಮಾನತುಗಳ ಸುನಾಮಿ: ಕಳೆದ 20 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದ ಒಟ್ಟು ಅಮಾನತುಗಳಲ್ಲಿ ಶೇ. 40ರಷ್ಟು ಕೇವಲ ಓಂ ಬಿರ್ಲಾ ಅವರ ಕಾಲದಲ್ಲೇ ನಡೆದಿವೆ. ಅದರಲ್ಲೂ ಡಿಸೆಂಬರ್ 2023ರಲ್ಲಿ ಒಂದೇ ಬಾರಿಗೆ 100ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದು ಪ್ರಜಾಪ್ರಭುತ್ವದ ಅತಿದೊಡ್ಡ ಕಪ್ಪುಚುಕ್ಕೆ ಎಂದು ಅವರು ಬಣ್ಣಿಸಿದರು.
ಏಕಪಕ್ಷೀಯ ತೀರ್ಪು: ವಿಶೇಷವೇನೆಂದರೆ, ಅಮಾನತುಗೊಂಡವರಲ್ಲಿ ಒಬ್ಬನೇ ಒಬ್ಬ ಎನ್ಡಿಎ ಸದಸ್ಯನಿಲ್ಲ. ಹಾಗಾದರೆ ಆಡಳಿತ ಪಕ್ಷದವರು ಸದಾ ಸಂಸತ್ತಿನ ನಿಯಮ ಪಾಲಿಸುತ್ತಾರೆಯೇ? ಅಥವಾ ಸ್ಪೀಕರ್ ಕಣ್ಣಿಗೆ ಕೇವಲ ವಿರೋಧ ಪಕ್ಷದವರೇ ತಪ್ಪಿತಸ್ಥರಾಗಿ ಕಾಣುತ್ತಾರೆಯೇ? ಎಂಬ ಮಹುವಾ ಅವರ ಪ್ರಶ್ನೆ ಖಾರವಾಗಿತ್ತು.
ಮೌನಕ್ಕೆ ಶರಣಾದ ಮೈಕ್: ವಿರೋಧ ಪಕ್ಷದ ನಾಯಕರು ದೇಶದ ಜ್ವಲಂತ ಸಮಸ್ಯೆಗಳಾದ ಮಣಿಪುರ ಹಿಂಸಾಚಾರ ಅಥವಾ ಅದಾನಿ ಹಗರಣದ ಬಗ್ಗೆ ಮಾತನಾಡಲು ಎದ್ದಾಗಲೆಲ್ಲಾ ಸೆನ್ಸಾರ್ ಮಂಡಳಿಯಂತೆ ಮೈಕ್ ಕಟ್ ಮಾಡುವ ತಂತ್ರಜ್ಞಾನವನ್ನು ಸ್ಪೀಕರ್ ಕಚೇರಿ ಕರಗತ ಮಾಡಿಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.
ಉಪಸಭಾಪತಿ ಹುದ್ದೆಯೆಂಬ ‘ಖಾಲಿ ಖುರ್ಚಿ’
ಸಂವಿಧಾನದ 93ನೇ ವಿಧಿಯ ಪ್ರಕಾರ ಸಭಾಪತಿಯ ಜೊತೆಗೆ ಉಪಸಭಾಪತಿಯ ಆಯ್ಕೆಯೂ ಅಷ್ಟೇ ಮುಖ್ಯ. ಆದರೆ ಕಳೆದ ಏಳು ವರ್ಷಗಳಿಂದ ಭಾರತದ ಲೋಕಸಭೆಯಲ್ಲಿ ಈ ಹುದ್ದೆಯನ್ನು ಖಾಲಿ ಇಡಲಾಗಿದೆ. “ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸದನವನ್ನು ಒಬ್ಬನೇ ವ್ಯಕ್ತಿಯ ಸರ್ವಾಧಿಕಾರದ ಕೇಂದ್ರವನ್ನಾಗಿ ಮಾಡಲಾಗಿದೆ” ಎಂಬುದು ಮಹುವಾ ಅವರ ಗಂಭೀರ ಆರೋಪವಾಗಿತ್ತು.
ದ್ವೇಷ ಭಾಷಣಕ್ಕೆ ರಕ್ಷಣೆ, ಪ್ರಶ್ನೆ ಮಾಡಿದವರಿಗೆ ಶಿಕ್ಷೆ!
ಭಾಷಣದ ಅತ್ಯಂತ ಕಟುಭಾಗವೆಂದರೆ, ಬಿಜೆಪಿ ಸಂಸದ ರಮೇಶ್ ಬಿದೂರಿ ಅವರು ಸದನದಲ್ಲಿ ಮುಸ್ಲಿಂ ಸಂಸದರ ವಿರುದ್ಧ ಬಳಸಿದ ಅಶ್ಲೀಲ ಮತ್ತು ದ್ವೇಷಪೂರಿತ ಪದಗಳ ಪ್ರಸ್ತಾಪ. ಆ ಸಂದರ್ಭದಲ್ಲಿ ಸ್ಪೀಕರ್ ಬಿರ್ಲಾ ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಆದರೆ ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಕೇಳಿದ ವಿರೋಧ ಪಕ್ಷದವರನ್ನು ಗುಂಪು ಗುಂಪಾಗಿ ಹೊರಹಾಕಲಾಯಿತು. “ನೀವು ಕೇವಲ ಒಬ್ಬ ಸಂಸದನಿಗೆ ಅವಮಾನ ಮಾಡಲಿಲ್ಲ, ಈ ದೇಶದ 20 ಕೋಟಿ ಮುಸ್ಲಿಮರ ಅಸ್ತಿತ್ವವನ್ನೇ ಪ್ರಶ್ನಿಸಿದ ವ್ಯಕ್ತಿಗೆ ರಕ್ಷಣೆ ನೀಡಿದಿರಿ” ಎಂದು ಮಹುವಾ ನೇರವಾಗಿ ಬೆರಳು ಮಾಡಿ ತೋರಿಸಿದರು.
ಅಂತ್ಯಕಾಲದ ಮುನ್ಸೂಚನೆ?
ಮಹುವಾ ಮೋಯಿತ್ರಿ ತಮ್ಮ ಭಾಷಣವನ್ನು ಮುಗಿಸಿದ್ದು 1653ರಲ್ಲಿ ಆಲಿವರ್ ಕ್ರಾಮ್ವೆಲ್ ಬ್ರಿಟಿಷ್ ಸಂಸತ್ತಿಗೆ ಹೇಳಿದ ಐತಿಹಾಸಿಕ ಸಾಲುಗಳೊಂದಿಗೆ: “ನೀವು ಇಲ್ಲಿ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಬಹಳ ಕಾಲ ಕುಳಿತುಬಿಟ್ಟಿದ್ದೀರಿ. ಇನ್ನು ಹೊರಡಿ, ದೇವರ ಹೆಸರಲ್ಲಿ ನೀವು ಇಲ್ಲಿಂದ ತೊಲಗಿ!”
ಈ ಮಾತುಗಳು ಕೇವಲ ಓಂ ಬಿರ್ಲಾ ಅವರಿಗೆ ಮಾತ್ರವಲ್ಲ, ಇಡೀ ಆಡಳಿತ ವ್ಯವಸ್ಥೆಗೆ ನೀಡಿದ ಎಚ್ಚರಿಕೆಯಾಗಿತ್ತು. ಸಂಸತ್ತು ಎಂದರೆ ಕೇವಲ ಕಲ್ಲು-ಕಾಂಕ್ರೀಟ್ ಕಟ್ಟಡವಲ್ಲ, ಅದು ಜನರ ಧ್ವನಿ. ಆ ಧ್ವನಿಯನ್ನು ಅಡಗಿಸುವ ಸಭಾಪತಿ ಪೀಠಕ್ಕೆ ಗೌರವ ಇರುವುದಿಲ್ಲ ಎಂಬ ಅಸಲಿ ಸತ್ಯವನ್ನು ಮಹುವಾ ಮರುಸ್ಥಾಪಿಸಿದರು.
ಮಹುವಾ ಮೋಯಿತ್ರಿ ಅವರ ಈ ಭಾಷಣ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. ಎಷ್ಟೇ ಅಮಾನತು ಮಾಡಿದರೂ, ಧ್ವನಿಯನ್ನು ಅಡಗಿಸಿದರೂ ಸತ್ಯ ಒಂದಲ್ಲ ಒಂದು ದಿನ ಗಟ್ಟಿಯಾಗಿ ಕೇಳಿಯೇ ಕೇಳುತ್ತದೆ ಎಂಬುದಕ್ಕೆ ಈ ದಿನವೇ ಸಾಕ್ಷಿ. ಸ್ಪೀಕರ್ ವಿರುದ್ಧದ ಈ ಅವಿಶ್ವಾಸ ನಿರ್ಣಯ ಕೇವಲ ಮತಗಳ ಸಂಖ್ಯೆಯಲ್ಲಿ ಸೋಲಬಹುದು, ಆದರೆ ನೈತಿಕವಾಗಿ ಮಹುವಾ ಮತ್ತು ವಿರೋಧ ಪಕ್ಷಗಳು ದೊಡ್ಡ ಜಯ ದಾಖಲಿಸಿವೆ.
District Collector's instructions in the preliminary meeting: Take steps to conduct SSLC annual examination transparently – Dr. Suresh B. Itnal
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಿ – ಡಾ. ಸುರೇಶ್ ಬಿ. ಇಟ್ನಾಳ್
ಜಾಹೀರಾತು
ಕೊಪ್ಪಳ ಮಾರ್ಚ್ 09 (ಕರ್ನಾಟಕ ವಾರ್ತೆ): ಮಾರ್ಚ್ & ಏಪ್ರಿಲ್-2026ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕಯನ್ನು ಜಿಲ್ಲೆಯಲ್ಲಿ ಶಿಸ್ತಿನಿಂದ, ಪಾರದರ್ಶಕವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರೀಕ್ಷಾ ಮಾರ್ಗಸೂಚಿಗಳನ್ವಯ ಕೊಪ್ಪಳ ಜಿಲ್ಲೆಯಲ್ಲಿ 2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು. ಅವರು ಸೋಮವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ ಸಭಾಂಗಣದಲ್ಲಿ ಮಾರ್ಚ್/ಏಪ್ರಿಲ್-2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಕುರಿತು ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ಕೊಡದೇ ಪರೀಕ್ಷಾ ನಿಯಮಗಳಂತೆ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ವಯ ನಡೆಸಬೇಕು. ಕೊಪ್ಪಳ ಜಿಲ್ಲೆಯಲ್ಲಿ 2026ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಪರೀಕ್ಷೆ ಮುಖ್ಯ ಅಧೀಕ್ಷಕರು ಮಾರ್ಗಸೂಚಿಗಳನ್ನು ಓದಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಅಗತ್ಯ ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಸಹ ಕಲ್ಪಿಸಬೇಕು. ಪರೀಕ್ಷೆ ಬರೆಯುವ ವಿಕಲಚೇತನ ವಿದ್ಯಾರ್ಥಿಗಳಿಗೆ ನೆಲ ಮಹಡಿಯಲ್ಲಿ ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು. ಅಂಧ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮತ್ತು ಬರವಣಿಗೆ ಸಹಾಯಕರ ಒಪ್ಪಿಗೆ ಪತ್ರವನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದರು. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆಯಲು ಮೂರು ಬಾರಿ ಅವಕಾಶವಿದ್ದು, ಮೊದಲ ಪರೀಕ್ಷೆಯಲ್ಲಿ ಮಕ್ಕಳು ಭಯ ಪಡುವ ಅವಶ್ಯಕತೆಯಿಲ್ಲ. ಇದರ ಬದಲಿ ಇನ್ನೂ ಎರಡು ಬಾರಿ ಅವಕಾಶವಿದೆ ಎಂದು ಮಕ್ಕಳಿಗೆ ತಿಳಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಮತ್ತು ಪರೀಕ್ಷಾ ಅವಧಿಯಲ್ಲಿ ಕೊಠಡಿ ಮೇಲ್ವಿಚಾರಕರು ಮೊಬೈಲ್ ಬಳಕೆ ಮಾಡುವುದನ್ನು ಸಹ ನಿಷೇಧಿಸಲಾಗಿದ್ದು, ಈ ಬಗ್ಗೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಅವರು ಮಾತನಾಡಿ, ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ 23,001 ಹೊಸ ವಿದ್ಯಾರ್ಥಿಗಳು ಸೇರಿ ಜಿಲ್ಲೆಯ ಒಟ್ಟು 25,556 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಯ ಗಂಗಾವತಿ ತಾಲ್ಲೂಕಿನ 23, ಕೊಪ್ಪಳ ತಾಲ್ಲೂಕಿನ 21, ಕುಷ್ಟಗಿ ತಾಲ್ಲೂಕಿನ 15 ಹಾಗೂ ಯಲಬುರ್ಗಾ ತಾಲ್ಲೂಕಿನ 14 ಸೇರಿದಂತೆ ಒಟ್ಟು 74 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ ಹಾಗೂ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ವಿಭಾಗಗಳ ಪ್ರಶ್ನೆ ಪತ್ರಿಕೆ ಪಾಲಕರಾಗಿರುತ್ತಾರೆ. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರಿಗೆ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷತೆ, ವಿದ್ಯಾರ್ಥಿಗಳ ಕುಳಿತುಕೊಳ್ಳುವ ವ್ಯವಸ್ಥೆ, ಪರೀಕ್ಷಾ ಸಾಮಗ್ರಿಗಳ ಲಭ್ಯತೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಮುನಿರಾಬಾದ್ನಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆ ಡಯೆಟ್ ಪ್ರಾಶುಂಪಾಲರಾದ ಅನಂತಕುಮಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ತಾಲ್ಲೂಕು ನೋಡಲ್ ಅಧಿಕಾರಿಗಳು, ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
A leopard spotted on the elephant's head pillow on Madappa's road,
ಮಾದಪ್ಪನ ರಸ್ತೆಯ ಆನೆ ತಲೆ ದಿಂಬದಲ್ಲಿ ಪ್ರತ್ಯಕ್ಷವಾದ ಚಿರತೆ ,
ಜಾಹೀರಾತು
ವರದಿ: ಬಂಗಾರಪ್ಪ .ಸಿ. ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ಕಾಟವು ಹೆಚ್ಚಾಗಿದ್ದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿ ಶಿಕ್ಷಕರಾದ ಪುಟ್ಬಸ್ವಾಮಿ ತಿಳಿಸಿದರು.
ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ವೃತ್ತಿ ಸಂಬಂದಿಸಿದ ಕಾರ್ಯದ ನಿಮಿತ್ತವಾಗಿ ತೆರಳುವಾಗ ಆನೆ ತಲೆದಿಂಬದ ತಿರುವುನಲ್ಲಿರುವ ಅಣೆ ಹೊಲದ ಬಳಿ ಚಿರತೆ ಪ್ರತ್ಯಕ್ಷ ವಾಗಿ ಸಾಮನ್ಯ ಜನರು ತಿರುಗಾಡಲು ಕಷ್ಟ ಪಡುವವಂತಾಗಿದೆ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಡೆಯುವ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ತೆರೆ ಎಳೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ನಾವು ಪಡಬೇಕಾಗುತ್ತದೆ ಎಂದು ತಿಳಿಸಿದರು,
The grand Bettalli Marammana Jatra cold drinks and chariot festival.
ಅದ್ದೂರಿಯಾಗಿ ಜರುಗಿದ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ತಂಪು ಸೇವೆ ಹಾಗೂ ರಥೋತ್ಸವ.
ಜಾಹೀರಾತು
ವರದಿ: ಬಂಗಾರಪ್ಪ .ಸಿ .
ಹನೂರು:ಭಕ್ತರ ಆರಾಧ್ಯದೇವತೆ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಎರಡನೇ ದಿನ ಮಂಗಳವಾರ ತಂಪು ಜ್ಯೋತಿ ಮಾಡುವ ಮೂಲಕ ದೇವಿಯ ರಥೋತ್ಸವಕ್ಕೆ ಗರುಡ ಪಕ್ಷಿಯು ಪ್ರದಕ್ಷಿಣೆ ಹಾಕುವ ಮೂಲಕ ಭಕ್ತಾದಿಗಳಿಗೆ ಆರ್ಶಿವಾದಿಸಿ ದೇವಿಯ ಜಾತ್ರೆಯು ಅದ್ದೂರಿಯಾಗಿ ನೆರವೇರಿತು.
ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ತೇರು ನಿರ್ಮಾಣ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು ನಂತರ ಅದು ಯಶಸ್ವಿಯಾಗಿ ನಡೆದುಕೊಂಡು ಬಂದಿರುವ ತೇರು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ,ಇದರ ವಿನ್ಯಾಶವು ನಾಲ್ಕು ಚಕ್ರಗಳುಳ್ಳ, ತಳಭಾಗದಲ್ಲಿ ಕುದುರೆ, ಸಿಂಹ ಲಾಂಛನ ಸೇರಿ ಎಂಟು ಅಷ್ಟ ಕಂಬಗಳುಳ್ಳ 14.5 ಅಡಿಯ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಣನ ಸೆಳೆಯಿತು.
ರಥೋತ್ಸವದ ತೇರಿಗೆ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜುರಾವ್ ವಿಶೇಷ ಪೂಜೆ ಸಲ್ಲಿಸಿದ ನಂತರ ಆಕಾಶದಲ್ಲಿ ಗರುಡ ತೇರಿನ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ದವಸ ಧಾನ್ಯ,ನಾಣ್ಯಗಳನ್ನು ಎಸೆದು ಹರಕೆ ಸಲ್ಲಿಸಿದರು. ರಥೋತ್ಸವದ ವೇಳೆ ಭಕ್ತಾದಿಗಳು ಜೈ ಬೆಟ್ಟಳ್ಳಿ ಮಾರಮ್ಮನಿಗೆ, ಬೆಟ್ಟಳ್ಳಿ ತಾಯಿಗೆ ಎಂದು ಘೋಷಣೆ ಕೂಗಿದರು
ಪ್ರತಿ ಮಂಗಳವಾರ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಪ್ರತಿವಾರವೂ ಬರುವಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಇಷ್ಟಾರ್ಥ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.
ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕಾರ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಹನೂರು ಪಟ್ಟಣದ ಬೆನಕ ಡೆಕೋರೇಷನ್ ತಂಡದ ವತಿಯಿಂದ ಮೋಸಂಬಿ ಮುಸುಕಿನ ಜೋಳ ವಿವಿಧ ಬಗೆಯ ಫಲ ಪುಷ್ಪಗಳಿಂದ ದೇವಸ್ಥಾನದ ಒಳ ಆವರಣ ಹೊರ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮುಂಭಾಗದ ಗಣಪತಿ ದೇವರ ತಳ ಭಾಗದಲ್ಲಿ ದೇವಿಯ ಕಣ್ಣುಗಳ ಮಾದರಿಯಲ್ಲಿ ಮಾಡಲಾಗಿದ್ದ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ವಿಶೇಷ ವಿದ್ಯುತ್ ದೀಪಾಲಂಕಾರ : ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದ ಹೊರ ಆವರಣ, ಮುಖ್ಯ ರಸ್ತೆ ಮೈಸೂರು ಮಾರಮ್ಮ ದೇವಸ್ಥಾನದ ರಸ್ತೆ, ಮಲೆ ಮಹದೇಶ್ವರ ಬೆಟ್ಟದ ರಸ್ತೆ ಬಂಡಳ್ಳಿ ರಸ್ತೆ ಸೇರಿದಂತೆ ಮಾಡಲಾಗಿದೆ.
ಸೋಮವಾರ ತಡರಾತ್ರಿ ನೆರವೇರಿದ ಜಾಗರ ಸಮರ್ಪಣೆ : ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಮೊದಲ ದಿನವಾದ ಸೋಮವಾರ ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು . ಈ ಜಾಗರ ಸಮರ್ಪಣೆಗೆ ಜನರು ಒಂದು ವಾರದ ಮುಂಚೆ ಅವರೆ, ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮೊಳಕೆ ಬರಿಸಿ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ದೇವಾಲಯಕ್ಕೆ ಸಮರ್ಪಿಸುತ್ತಾರೆ. ಜಾಗರ ವನ್ನು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ಸಮರ್ಪಿಸಲಾಯಿತು ಈ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಎರಡು ದಿನಗಳ ನಂತರ ಪ್ರತಿನಿತ್ಯ ದೇವಸ್ಥಾನದ ಆವರಣದಲ್ಲಿ ಮಾರಿಕುಣಿತ ಕುಣಿಯುವುದು ವಾಡಿಕೆ. ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ ವಿವಿಧ ಸಮುದಾಯದ ಮಹಿಳೆಯರು , ಮಕ್ಕಳು ಪುರುಷರು ಸೇರಿದಂತೆ ಒಟ್ಟಾಗಿ ಕುಣಿಯುವುದರ ಮೂಲಕ ಸಂಭ್ರಮಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಯಲಬುರ್ಗಾ, ಮಾ.10:ಯಲಬುರ್ಗಾ ತಾಲೂಕಿನ ಯಡ್ಡೋಣಿ ಮತ್ತು ಕುಟುಗಮರಿ ಗ್ರಾಮಗಳ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಶಾರದಮ್ಮ ಅಕ್ಕಿ ಎಂಬವರು ನಿರಂತರವಾಗಿ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಬಡವರ ಪಾಲಿಗೆ ಸರ್ಕಾರ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಈ ಕುರಿತು ಆಹಾರ ಇಲಾಖೆಯ ಅಧಿಕಾರಿಗಳಾದ ಹನುಮನಗೌಡ ಪಾಟೀಲ್ ಹಾಗೂ ದತ್ತಪಯ್ಯ ಅವರಿಗೆ ಹಲವು ಬಾರಿ ದೂರು ನೀಡಲಾಗಿದೆ ಎನ್ನಲಾಗುತ್ತಿದೆ.
ಆದರೆ ಈವರೆಗೂ ಅಕ್ರಮ ದಂಧೆಕೋರರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.
ಬಡವರಿಗೆ ದೊರೆಯಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
If teachers have the job of guarding dogs, does the Education Minister have the ministry of guarding dogs? Magalamani's question.
ಶಿಕ್ಷಕರಿಗೆ ಶ್ವಾನ ಕಾಯುವ ಕಾಯಕವಾದರೆ,ಶಿಕ್ಷಣ ಸಚಿವರು ಶ್ವಾನ ಕಾಯುವ ಸಚಿವ ಖಾತೆ ಹೊಂದಿದ್ದಾರೆಯೇ ? ಮ್ಯಾಗಳಮನಿ ಪ್ರಶ್ನೆ.
ಜಾಹೀರಾತು
ಗಂಗಾವತಿ,10: ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ ಶಾಲಾ ಆವರಣದಲ್ಲಿ ಬೀದಿ ನಾಯಿ ನಿಯಂತ್ರಿಸಲು ಒಬ್ಬ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಸೂಚನೆ ನೀಡಿರುವದನ್ನು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ.
ಸಚಿವರು ಕೂಡ ಶ್ವಾನ ಖಾತೆ ಹೊಂದಿದ್ದಾರೆಯೇ? ಎಂದು ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಶಾಲಾ ಆವರಣದಲ್ಲಿ ಏನೇ ಸಮಸ್ಯೆ ಯಾದರೂ ಶಿಕ್ಷಕರ ಜವಾಬ್ದಾರಿ ಯಾವಾಗಲೂ ಇದೆ. ಅದನ್ನು ಶಿಕ್ಷಕರು ಸರಿಯಾಗಿ ನಿಭಾಯಿಸುತ್ತಿದ್ದಾರೆ.ಈ ಆದೇಶ ಹೊರಡಿಸುವ ಅಗತ್ಯ ಇರಲಿಲ್ಲ.
ಬೀದಿ ನಾಯಿಗಳ ನಿಯಂತ್ರಿಸುವ ಕಾರ್ಯವನ್ನು ಸರ್ಕಾರ ರಚಿಸಿರುವ ಗ್ಯಾರಂಟಿ ಸಮಿತಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕೆಂದು ಒತ್ತಾಯಿಸಿದರು. ಶಿಕ್ಷಕರ ಕೊರತೆಯಿಂದ, ಮೂಲ ಸೌಕರ್ಯಗಳ ಕೊರತೆ, ಅನ್ಯ ಕೆಲಸಗಳ ಕಾರಣ ಗಳಿಂದ ಮಕ್ಕಳ ಕಲಿಕೆಯ ಮೇಲೆ ವ್ಯತೀರಿಕ್ತ ಪರಿಣಾಮದಿಂದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕ್ಷಿಣಿಸುತ್ತಾ ಸರ್ಕಾರಿ ಶಾಲೆಗಳು ಮುಚ್ಚಿವೆ ಇನ್ನೂ ಮುಚ್ಚುತ್ತಲಿವೆ ಇಂತಹ ಸಂದರ್ಭದಲ್ಲಿ ಅನವಶ್ಯಕ ಆದೇಶಗಳು ಶಿಕ್ಷಕರಿಗೆ ಮಾತ್ರವಲ್ಲ ಬಡ ವರ್ಗದ ಪಾಲಕರಿಗೂ ಆತಂಕ ಉಂಟುಮಾಡಿದೆ ಕೂಡಲೇ ಇದನ್ನು ವಾಪಸ್ ಪಡೆಯಬೇಕು.
ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾತಿಯಾಗಲು ಸರ್ಕಾರ ರೂಪರೇಷಗಳನ್ನು ಮಾಡಬೇಕು ಹಾಗೂ ಹೊರಡಿಸಿದ ಆದೇಶ ಹಿಂಪಡೆಯದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವದೆ0ದು ಮ್ಯಾಗಳಮನಿ ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ದುರಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ,ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್, ಹನುಮೇಶ್,ಹನುಮಂತಪ್ಪ ಮತ್ತಿತರರು ಇದ್ದರು.
Rotary Club celebrates Women's Day at Hanaval Gram Panchayat
ರೋಟರಿ ಕ್ಲಬ್ ವತಿಯಿಂದ ಹಣವಾಳ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ದಿನಾಚರಣೆ
ಜಾಹೀರಾತು
ಗಂಗಾವತಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.9 ರಂದು ಹಣವಾಳ ಗ್ರಾಮ ಪಂಚಾಯಿತಿಯಲ್ಲಿ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಮಹಿಳಾ ಘಟಕದ ವತಿಯಿಂದ ಪಂಚಾಯಿತಿಯ ಸ್ವಚ್ಛತಾ ಮಹಿಳಾ ಸಿಬ್ಬಂದಿ ಹಾಗೂ NRLM ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಡಂ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೇಕ್ ಕತ್ತರಿಸಿ ವಸ್ತ್ರಗಳನ್ನು ವಿತರಿಸುವ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಖಜಾಂಚಿಯಾದ ಬಸಮ್ಮ ಅವರು ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇವರು ಮಹಿಳೆಯರು ಇವರಿಂದ ಏನು ಮಾಡಲು ಸಾಧ್ಯ ಎಂದು ಹೀಯಾಳಿಸುವವರ ಮಧ್ಯೆ, ನಾವುಗಳು ಆದಷ್ಟು ಹೆಲ್ತ್ ಕ್ಯಾಂಪ್ ಗಳನ್ನ ಮತ್ತು ಇತರ ಸೋಶಿಯಲ್ ಆಕ್ಟಿವಿಟೀಸ್ ಗಳನ್ನ ಮಾಡುವ ಮುಖಾಂತರ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡುತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೋಟರಿ ರೈಸ್ ಬೌಲ್ ಆಫ್ ಗಂಗಾವತಿ ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಚೌದ್ರಿ, ಕಾರ್ಯದರ್ಶಿಯಾದ ಬಿ ಶ್ರೀದೇವಿ ಮತ್ತು ಪದಾಧಿಕಾರಿಗಳಾದ ಸೋಫಿಯಾ ರಾಣಿ, ಶಾಹಿನ್ ಕೌಸರ್, ಲಲಿತ ನಾಗರಾಜ್ ಹಾಜರಿದ್ದರು̤
Honorable District Sessions Judge Sadananda Naik and various dignitaries visited Lions Eye Hospital.
ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ್ ಹಾಗೂ ವಿವಿಧ ಗಣ್ಯರು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಭೇಟಿ.
ಜಾಹೀರಾತು
ಗಂಗಾವತಿ: ಇತ್ತೀಚೆಗೆ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿ ಉದ್ಘಾಟನೆಗೊಂಡ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ ನಾಯ್ಕ್̧ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್, ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಅವರು ಭೇಟಿ ನೀಡಿದರು. ಈ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ನಿತ್ಯ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ನಡೆಯುತ್ತಿರುವ ಬಗ್ಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ವೈದ್ಯರಾದ ಡಾ|| ಜಿ. ಚಂದ್ರಪ್ಪ, ಡಾ|| ಸೋಮರಾಜು, ಲಯನ್ಸ್ ಕಣ್ಣಿನ ಆಸ್ಪತ್ರೆಯ ಚೇರಮನ್ರಾದ ಟಿ. ರಾಮಕೃಷ್ಣ, ವೈದ್ಯರಾದ ಡಾ|| ಸ್ನೇಹಲತಾ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್, ಕಾರ್ಯದರ್ಶಿಯಾದ ಜಂಬಣ್ಣ ಐಲಿ ಹಾಗೂ ಖಚಾಂಚಿಯಾದ ಶಿವಪ್ಪ ಗಾಳಿ ಹಾಗೂ ಇತರೆ ಸದಸ್ಯರು ಭೇಟಿ ನೀಡಿದ ಮಹನೀಯರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಖ್ಯಾತ ಹಾಸ್ಯಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಅವರು ತಮ್ಮ ಕಣ್ಣುಗಳನ್ನು ಲಯನ್ಸ್ ಐ ಡೊನೇಷನ್ ಸೆಂಟರ್ಗೆ ದಾನ ಮಾಡುವುದಾಗಿ ವಾಗ್ಧಾನ ಮಾಡುವ ಮೂಲಕ ಈ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದರು.
Shanmukappa Sahukar calls Kadivana Shanmukappa Sahukar for mass marriage extravagance
ಸಾಮೂಹಿಕ ಮದುವೆ ದುಂದುವೆಚ್ಚ ಆಮಬರಕ್ಕೆ ಕಡಿವಾಣ ಷಣ್ಮುಖಪ್ಪ ಸಾಹುಕಾರ್ ಕರೆ
ಜಾಹೀರಾತು
ಕಾರಟಗಿ,ಮಾ9: ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು. ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯ ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗುವ ಜತೆಗೆ ಪ್ರಗತಿಗೆ ಪೂರಕವಾಗುತ್ತದೆ ಎಂದು ಗ್ರಾಮದ ಹಿರಿಯ ಮುಖಂಡರಾದ ಷಣ್ಮುಖಪ್ಪ ಸಾಹುಕಾರ್ ಹೇಳಿದರು.
ತಾಲೂಕಿನ ಸಿಂಗನಾಳ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಕಳಸಾರೋಹಣ ಹಾಗೂ ಮಹಾರಥೋತ್ಸವ ಮತ್ತು ಶ್ರೀ ಶರಣಬಸವೇಶ್ವರ ಪುರಾಣ ಮಹೋತ್ಸವದ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹ ಬಡವರ ಮದುವೆ ಎಂದು ಭಾವಿಸುವುದು ತಪ್ಪು. ಸಹಸ್ರಾರು ಭಕ್ತರ, ಮಠಾಧೀಶರ ಆಶೀರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ-ಶ್ರೀಮಂತ, ಮೇಲು-ಕೀಳೇನ್ನದೆ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯ ಮಾಡಬೇಕು ಸಾಮಾಜಿಕ ಕಳಕಳಿಯೊಂದಿಗೆ ನಡೆಸುವ ಸಾಮೂಹಿಕ ವಿವಾಹ ಮಹೋತ್ಸವ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು ಒಟ್ಟು ಐದು ನೂತನ ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ವೀರಭದ್ರಗೌಡ್ರು,ಕನಕ ರೆಡ್ಡಿ, ತಿಮ್ಮಣ್ಣ,ಶರಣಬಸವ,ಮಲ್ಲಿಕಾರ್ಜುನ, ಮಹೇಶ ಸಿಂಗನಾಳ,ಉಮೇಶ ಸಿಂಗನಾಳ, ಸೇರಿದಂತೆ ಇತರರು ಇದ್ದರು
A gathering of Chalavadi community leader Sridhar and his friends.
ಚಲವಾದಿ ಸಮಾಜದ ಮುಖಂಡ ಶ್ರೀಧರ ಹಾಗೂ ಗೆಳೆಯರಿಂದ ಇಪ್ತಿ ಯಾರ್ ಕೂಟ.
ಜಾಹೀರಾತು
ಗಂಗಾವತಿ. ಇಲ್ಲಿನ ನಗರಸಭೆ ವ್ಯಾಪ್ತಿಯ 23ನೇ ಚಲವಾದಿ ಓಣಿಯಲ್ಲಿನ ಶ್ರೀಧರ್ ಹಾಗೂ ಸ್ನೇಹಿತರು ವ್ರತದಲ್ಲಿದ್ದ ಮುಸ್ಲಿಂ ಸಮಾಜ ಬಾಂಧವರಿಗೆ. ಇ ಪ್ತಿ ಯಾರ್ ಕೂಟ ವನ್ನುರವಿವಾರ ದಂದು ಅಯೋ ಜಿ ಲಾಗಿತ್ತು. ವಾರ್ಡ್ ನ 250ಕ್ಕೂ ಮುಸ್ಲಿಂ ಬಾಂದವರು ಕೂಟದಲ್ಲಿ ಪಾಲಗುಂಡು ಭಾವೈಕ್ಯತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಭಾವೈಕ್ಯ ಸಂಜೀವಿನಿ ಡಾll kf ಮುದ್ದಾಬಳ್ಳಿ ಮಾತನಾಡಿ ಶ್ರೀಧರ್. ಶಿವುಎಫ. ರಾ ಘವೇಂದ್ರ ಬಸವರಾಜ್ ಸೇರಿದಂತೆ ಇತರರು ಇಪ್ತಿ ಯಾರ್ ದಾಸೋಹದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಭಾವೈಕ್ಯತೆಗೆ ಕಾರಣೀಭೂತಾಗಿದ್ದಾರೆ. ಜೀವನದ ಮೌಲ್ಯಗಳಾದ ಪ್ರೀತಿ ವಿಶ್ವಾಸ ನಾವು ನಮ್ಮವರು ಎಂಬ ಭಾವನೆ ಜಾತಿ ಮತ ಪಂಥ ಇವೆಲ್ಲವೂಗಿಂತ ಮಿಗಿಲಾಗಿದೆ ಎಂಬ ದಿವ್ಯ ಸಂದೇಶವನ್ನು ಹೇಳಿದರು.. ಎಫ್ ರಾಘವೇಂದ್ರ ಮಾತನಾಡಿ ಯಾವುದೇ ಧರ್ಮ ಹಬ್ಬ ಆಚರಣೆಗಳಿಗೆ ಪರಸ್ಪರ ಅನ್ಯೂನ್ಯವಾಗಿ ಆಚರಿಸಿದಾಗ ಮಾತ್ರ ಹಬ್ಬ ಅರ್ಥಪೂರ್ಣವಾಗಿ ವೇ ನಿಸುತ್ತದೆ.. ಇಂತಹ ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸುಖಿ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ತಿಳಿಸಿದರು. ವ್ಯವಸ್ಥಾಪಕ ಶ್ರೀಧರ್ ಚಲವಾದಿ ಮಾತನಾಡಿ. ಹಬ್ಬದ ಪ್ರಯುಕ್ತ ವೃತಾಚರ ಣೆಯಲ್ಲಿ ಉಪವಾಸವನ್ನು ಹೊಂದಿದ ಸಮಾಜಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಸುವುದು ನಮ್ಮ ಸೌಭಾಗ್ಯವಾಗಿದೆ ಎಂದು ತಿಳಿಸಿದರು
Karate training should be made mandatory for all female students - Vitthal Jabagowada
ಕರಾಟೆ ತರಬೇತಿ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಲಿ -ವಿಠ್ಠಲ್ ಜಾಬಗೌಡರ
ಜಾಹೀರಾತು
ಕೊಪ್ಪಳ : ಇಂದಿನ ದಿನಗಳಲ್ಲಿ ಸ್ವಯಂರಕ್ಷಣೆಗಾಗಿ ಕರಾಟೆ ಅತೀ ಅಗತ್ಯವಾಗಿ ಎಲ್ಲರೂ ಕಲಿಯಬೇಕಾದ ಕ್ರೀಡೆಯಾಗಿದೆ. ಕರಾಟೆಯನ್ನು ಎಲ್ಲ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು. ಇದರಿಂದ ದೈಹಿಕವಾಗಿಯೂ ಶಕ್ತಿವಂತರಾಗಬಹಹುದು ಜೊತೆಗೆ ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ಎನ್ನುವಂತೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯೂ ಸಾದ್ಯವಾಗುತ್ತದೆ ಎಂದು ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ ಹೇಳಿದರು. ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಕೊಪ್ಪಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ, ಕರಾಟೆ ಇಂಡಿಯಾ ಆರ್ಗನೈಜೇಷನ್ ಮತ್ತು ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ, ಕೊಪ್ಪಳ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರ ಕರಾಟೆ ಪ್ರದರ್ಶನ-ಬೆಲ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಘಾಟನೆಯನ್ನು ವಿದ್ಯಾರ್ಥಿನಿಯರಿಗೆ ಡ್ರಾಗನ್ ಸ್ಟಿಕ್ ನೀಡುವುದರ ಮೂಲಕ ಮಾಡಲಾಯಿತು. ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯ ನಿಮಿತ್ಯ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣ. ವಿವಿಧ ಶಾಲೆಯ ಮಕ್ಕಳು ಇದರಲ್ಲಿ ಭಾಗವಹಿಸಿ ಪ್ರದರ್ಶನ ಮಾಡಿ ಬೆಲ್ಟ್ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಎಪಿಜೆ ಅಬ್ದುಲ್ ಕಲಾಂ ಸಿಬಿಎಸ್ಸಿ ಶಾಲೆ ಲಿಂಗದಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್ ಮತ್ತು ಹಿಟ್ನಾಳ ಶಾಲೆಯ ೨೫೦ ವಿದ್ಯಾರ್ಥಿನಿಯರು ಭಾಗವಹಿಸಿ ೨೦೨೫-೨೬ನೇ ಸಾಲಿನಲ್ಲಿ ಪಡೆದ ತರಬೇತಿಯ ಪ್ರದರ್ಶನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಬೆಲ್ಟ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು ಪ್ರಾಸ್ತಾವಿಕವಾಗಿ ನ್ಯಾಷನಲ್ ಸ್ಟೀರಿಟ್ ಕರಾಟೆ ಅಕಾಡಮಿ ಮುಖ್ಯಸ್ಥ ರಾಜಾಬಕ್ಷಿ ಎಚ್.ವಿ ನೆರವೇರಿಸಿದರು. ಅದ್ಯಕ್ಷತೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ ವಹಿಸಿದ್ದರು. ವೇದಿಕೆಯ ಮೇಲೆ ನ್ಯಾಷನಲ್ ಶುಟೋಕಾನ್ ಕರಾಟೆ ಅಸೋಶಿಯೇಷನ್ ಕರ್ನಾಟಕದ ಅಧ್ಯಕ್ಷರಾದ ಬಿ.ಬಾಷಾಸಾಹೇಬ, ಹಿರಿಯ ಹೋರಾಟಗಾರ ನಜೀರ್ ಮೂಲಿಮನಿ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ, ತರಬೇತುದಾರರಾದ ದೀಪಾ ಮತ್ತು ರೋಹಿಣಿ ಉಪಸ್ತಿತರಿದ್ದರು. ನಿರೂಪಣೆಯನ್ನು ದಾವಲಸಾಬ ಬೆಟಗೇರಿ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ದೇವಪ್ಪ ಕಲ್ಲನ್ನವರ ಮಾಡಿದರು.
The word Dalit is not a caste symbol, it is a symbol of the exploited class.. Dr. Arjun Go Sangi…
ದಲಿತ ಎಂಬ ಪದ ಜಾತಿ ಸೂಚಕವಲ್ಲ ಅದು ಶೋಷಿತ ವರ್ಗದ ಪ್ರತೀಕ.. ಡಾಕ್ಟರ್ ಅರ್ಜುನ್ ಗೋ ಸಂಗಿ
ಜಾಹೀರಾತು
ಗಂಗಾವತಿ… ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನಾಂಗದವರ ಪ್ರತಿಕವೇ ದಲಿತ ಎಂದು ಕರೆಯಲಾಗುತ್ತಿದ್ದು ಇದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಡಾಕ್ಟರ್ ಅರ್ಜುನ್ ಗೋಸಂಗಿ ಹೇಳಿದರು. ಅವರು ರವಿವಾರದಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಗದಗ್ ಹಾಗೂ ತಾಲೂಕಾ ಘಟಕ ಗಂಗಾವತಿ ಸಂಯುಕ್ತ ಆಶಯದಲ್ಲಿ ಭಾರತೀಯ ವೈದ್ಯಕೀಯ ಭವನದಲ್ಲಿ ಆಯೋಜಿಸಿದ ಅಕ್ಷರದ ಅವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರಧಾನ ಸಮಾರಂಭದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ನೆರವೇರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ 17 ವರ್ಷಗಳಿಂದ ಗದಗ್ ನಗರದಲ್ಲಿ ದಲಿತ ಸಾಹಿತ್ಯ ಘಟಕವನ್ನು ಸ್ಥಾಪಿಸುವುದರ ಮೂಲಕ ದಲಿತ ಸಾಹಿತ್ಯ ಚಳುವಳಿಯನ್ನು ನಡೆಸುತ್ತಾ ಬದಲಾಗಿದೆ. ತೋಂಟದಾರ್ಯ ಶ್ರೀಗಳ ದಿವ್ಯ ಸಾನಿಧ್ಯ ಮೂಲಕ ಆರಂಭಗೊಂಡ ರಾಜ್ಯ ಘಟಕವು ಶೋಷಣೆಗೆ ಒಳಗಾದ ಸಮುದಾಯದ ಅಭಿವೃದ್ಧಿಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಮ್ಮೇಳನಗಳನ್ನು ನಡೆಸುತ್ತಾ ಬರಲಾಗಿದ್ದು ಪ್ರಸ್ತುತ ಘಟಕವು ಸಮಾನ ಮಸ್ಕರೊಂದಿಗೆ ರಾಜ್ಯದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ತಿಳಿಸಿದರು. ಇದಕ್ಕೂ ಪೂರ್ವದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ಹೆಚ್ ಎಂ ಶೈಲಜಾ ಸಾವಿತ್ರಿಬಾಯಿಪುಲೆ ಸೇರಿದಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಗೌಡ ಪಾಟೀಲ್. ಘಟಕದ ಜಿಲ್ಲಾಧ್ಯಕ್ಷ ಡಾ. ನಿಂಗಣ್ಣ ಜಂಗಮದಲ್ಲಿ. ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ.ನಟೇಶ್. ಡಾಕ್ಟರ್ ಶರಣಬಸಪ್ಪ ಕೋಲ್ಕಾರ್. ಅಜ್ಮೀರ. ನಂದಾ ಪುರ ಶಿವಕುಮಾರ್ ಮಾಲಿ ಪಾಟೀಲ್ ಕೆ ನಿಂಗಜ್ಜ ಸೇರಿದಂತೆ ಇತರರು ಇಪ್ಪತ್ತಕ್ಕೂ ಅಧಿಕ ಸಾಧಕರನ್ನು ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಿದರು
Electrical Contractors Association to protest on March 11th, demanding various demands
ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ
ಜಾಹೀರಾತು
ಬೆಂಗಳೂರು ಮಾರ್ಚ್ 9: ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಮಾ.11ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ತಿಳಿಸಿದ್ದಾರೆ.
ಇಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಸುಪ್ರೀಂ ಕೋರ್ಟ್ ನ ಆದೇಶದ ಅನ್ವಯ 2025 ಏಪ್ರಿಲ್ನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಾಗೂ ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ, ಪೂರ್ಣಗೊಂಡಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ (ಓ.ಸಿ) ಅಥವಾ ವಾಸಯೋಗ್ಯ ಪ್ರಮಾಣ ಪತ್ರ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕು. ರಾಜ್ಯಾದ್ಯಂತ ಲಕ್ಷಾಂತರ ಗ್ರಾಹಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಭೂ ಪರಿವರ್ತಿತ ಹಾಗೂ ಭೂ ಪರಿವರ್ತನೆಯಾಗದ ಪ್ರದೇಶಗಳು ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿರುವ ಸ್ಥಳಗಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಬ್ಯಾಂಕ್ಗಳಿಂದ ಸಾಲ ಪಡೆದು ವಿವಿಧ ಹಂತಗಳಲ್ಲಿ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಲ್ಲಿ ರಾಜ್ಯದ ಲಕ್ಷಾಂತರ ನಾಗರಿಕರಿಗೆ ಆರ್ಥಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ಅರ್ಜಿ ಸಲ್ಲಿಸಿರುವ, ಮಂಜೂರಾತಿ ಪಡೆದಿರುವ ಕಾರ್ಯಾದೇಶಗೊಂಡಿರುವ ಕಟ್ಟಡಗಳಿಗೆ ಸೂಕ್ತ ವಿನಾಯಿತಿ ನೀಡುವ ಮೂಲಕ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳ ಗ್ರಾಹಕರಿಗೆ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು” ಆಗ್ರಹಿಸಿದರು.
“ಯಾವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರ ಕಡ್ಡಾಯ ಎಂಬುದನ್ನು ಸ್ಪಷ್ಟಪಡಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಕಟ್ಟಡದ ನಕ್ಷೆಗೆ ಅನುಮೋದನೆ ಪಡೆಯದೇ ನಿರ್ಮಾಣಗೊಂಡ ಕಟ್ಟಡಗಳಿಗೆ ಸಂಬಂಧಿಸಿದ ಲಕ್ಷಾಂತರ ಅರ್ಜಿಗಳು ಬಾಕಿ ಇರುವುದರಿಂದ ಅವುಗಳನ್ನು ಒಮ್ಮೆಯ ಕ್ರಮವಾಗಿ ಪರಿಹರಿಸಲು ವಿಶೇಷ ಕಾನೂನು ರೂಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಎಂಎಸ್ಎಂಇ ಪ್ರಮಾಣ ಪತ್ರದ ಮೂಲಕ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದು, ಸಂಪರ್ಕ ನೀಡುವುದಕ್ಕೆ ಕೆಲ ಸಮಸ್ಯೆಗಳು ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ನೀಡಬೇಕೆಂದು” ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು ಒತ್ತಾಯಿಸಿದರು.
ಈ ಬಗ್ಗೆ ಶೀಘ್ರವಾಗಿ ನಿರ್ದಾರ ಕೈಗೊಳ್ಳುವಂತೆ ಒತ್ತಾಯಿಸಿ ಮಾ.11ರಂದು ಬೆಳಗ್ಗೆ 10.30ಕ್ಕೆ ಪ್ರೀಡಂ ಪಾರ್ಕ್ನಲ್ಲಿ ಬಹೃತ್ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿರುವ ಸದಸ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
It is our duty to save the environment: Revathi Kamath
ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್
ಜಾಹೀರಾತು
“ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ
ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು ಮಾರ್ಚ್ 08: “ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಮೂಲಕ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅರಿತುಕೊಳ್ಳಬೇಕು” ಎಂದು ಪರಿಸರವಾದಿ ರೇವತಿ ಕಾಮತ್ ಹೇಳಿದರು.
ಕನಕಪುರ ರಸ್ತೆಯಲ್ಲಿರುವ “ಧೀ DHEE” ಆಸ್ಪತ್ರೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಧೀ ಶಕ್ತಿ ಉದ್ಘಾಟಿಸಿ ಮಾತನಾಡಿದ ಅವರು, “ಜನರು ತಮ್ಮ ಅಭಿವೃದ್ಧಿ ಬಗ್ಗೆ ನೋಡುತ್ತಿದ್ದಾರೆಯೇ ಹೊರತು, ಪರಿಸರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದೇ ಇರುವುದು ಬೇಸರದ ಸಂಗತಿ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುವುದನ್ನು ತಡೆಯಬೇಕು” ಎಂದರು. “ಬಿಲ್ಡರ್ ಗಳು ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಪರಿಸರ ಕಾಳಜಿ ಇಲ್ಲ. ನಾವು ಕಾಳಜಿ ಬಗ್ಗೆ ಮಾತನಾಡುತ್ತೇವೆಯೇ ಹೊರತು ಯಾರು ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆ ನಮಗೆ ಸ್ವಲ್ಪ ಕೂಡ ತಿಳುವಳಿಕೆ ಇರುವುದಿಲ್ಲ. ಆದರೂ, ನಾವು ನಮ್ಮದಲ್ಲದ ಗಿಡಗಳನ್ನು ಬೆಳೆಸುತ್ತೇವೆ. ರೈತರು ಕೂಡ ಅನವಶ್ಯಕವಾಗಿ ಕೀಟನಾಶಕ ಬಳಕೆ ಮಾಡುತ್ತಾರೆ. ಇದು ಪರಿಸರ ವಿನಾಶವಾಗಿದೆ. ಇದರ ಬಗ್ಗೆ ಎಚ್ಚರವಹಿಸಬೇಕು” ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನುಪಮಾ ಹೊಸಕೆರೆ ಮಾತನಾಡಿ, ” ನಾವು ಇತಿಹಾಸ ನೋಡಿದರೆ, ಮಹಿಳೆಯರ ಶಕ್ತಿ ಬಹಳಷ್ಟಿದೆ. ನಾವು ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮಹಿಳೆಯರು ಯಾವ ಕಷ್ಟ ಬಂದರೂ ಧೃತಿಗೆಡಬಾರದು. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ನಾವು ನಮ್ಮ ಇರುವಿಕೆಯನ್ನು ತೋರಿಸಬೇಕು” ಎಂದರು.
ಇದೇ ವೇಳೆ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಇತರೆ ಮಹಿಳಾ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ. ಸುಪ್ರಜಾ ಚಂದ್ರಶೇಖರ್ ಇತರರು ಇದ್ದರು.
ಕೋಟ್… ಮಹಿಳೆಯರಿಗೆ ಅರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಮಹಿಳೆಯರು ಮದುವೆ ನಂತರ ಗೃಹಿಣಿಯಾಗಿ ಉಳಿಯುವುದೇ ಹೆಚ್ಚು. ನೀವು ಈ ರೀತಿ ಆಗಬೇಡಿ. ನೀವು ಆರ್ಥಿಕವಾಗಿ ಸಬಲರಾಗಬೇಕು. ನಿರುಪಮಾ ಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕಿ, ಬ್ರಿಗೇಡ್ ಗ್ರೂಪ್
ಸುರಕ್ಷತೆ ಮತ್ತು ಭದ್ರತೆ ನಾವು ಬೇರೆಯವರು ಮಾಡಿಕೊಡುವುದಿಲ್ಲ. ನಾವು ಮಾಡಿಕೊಳ್ಳುವುದಾಗಿದೆ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರು ಆತ್ಮವಿಶ್ವಾಸ ಇಟ್ಟುಕೊಂಡು ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಬೇಕು. ಡಾ.ವಿ. ಬಿ.ಆರತಿ, ಸಂಸ್ಥಾಪಕರು, ವಿಬು ಅಕಾಡೆಮಿ
ನಮ್ಮ ಆಸ್ಪತ್ರೆಯಲ್ಲಿ ದಾನಿಗಳಿಂದ ಸಹಾಯ ಪಡೆದು ಬಹುತೇಕ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಿಕೊಟ್ಟಿದ್ದೇವೆ. ಇದರಿಂದ ಬಹುತೇಕರು ಇಂದು ಕ್ರೀಡಾ ಪಟುಗಳಾಗಿ ಉಳಿದುಕೊಂಡಿದ್ದಾರೆ. ನಾವು ಗುಣಮಟ್ಟ ಚಿಕಿತ್ಸೆಯನ್ನು ನೀಡುತ್ತೇವೆ.
Gangavathi City Council irresponsible: Layout has become a breeding ground for insects - Who is responsible for protecting the lives of residents?
ಗಂಗಾವತಿ ನಗರ ಸಭೆ ಬೇಜವಬ್ದಾರಿ:ಕ್ರಿಮಿ ಕೀಟಗಳ ತಾಣವಾಗಿ ಮಾರ್ಪಟ್ಟ ಲೇಔಟ್-ಕಷ್ಟಗಳ ಮಧ್ಯೆಯೇ ನಿವಾಸಿಗಳ ಜೀವನ
ಜಾಹೀರಾತು
ಅಮೃತ ಸಿಟಿ ಯೋಜನೆ ಮೂಲಕ ಸಿಟಿ ಕಾಗದದಲ್ಲಿ ಮಾತ್ರ
ನಗರದ ಬಹುತೇಕ ಎಲ್ಲಾವಾರ್ಡ್ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಪ್ರತಿ ಓಣಿಗಳಲ್ಲಿ ತ್ಯಾಜ್ಯ ಸಾಮಾನ್ಯ ರಾಶಿಗಟ್ಟಲೇ ತ್ಯಾಜ್ಯವಿದ್ದರೂ, ವಿಲೇವಾರಿಯಾಗುತ್ತಿಲ್ಲ
ಗಂಗಾವತಿ :ನಗರದ 35ನೇ ವಾರ್ಡ್ನಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಾಗಿರುವ ಪ್ರತಿಷ್ಠಿತ ಮಹಾಬಳೇಶ್ವರ ಲೇಔಟ್ನಲ್ಲಿ ಯುಜಿಡಿ ಕಳಪೆ ಕಾಮಗಾರಿಯಿಂದ ಬಡಾವಣೆ ಕೊಳಚೆ ಪ್ರದೇಶವಾಗಿದೆ.
ಕಳೆದ 12 ವರ್ಷಗಳಿಂದ ಯುಜಿಡಿ ಕಾಮಗಾರಿ ನಗರದ ನಾನಾ ವಾರ್ಡ್ ಗಳಲ್ಲಿ ನಡೆದಿದೆ. ಆದರೆ ಇದುವರೆಗೂ ಯಶಸ್ವಿಯಾಗಿ ಪೂರ್ಣಗೊಂಡಿಲ್ಲ. 35ನೇ ವಾರ್ಡ್ ಮಹಾಬಲೇಶ್ವರ ಲೇಔಟ್ನಲ್ಲಿ ಯುಜಿಡಿ ಕಾಮಗಾರಿ ಕೈಗೊಂಡು ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಯುಜಿಡಿ ತ್ಯಾಜ್ಯ ಹೋಗಲು ವಾಡ್ ೯ನಿಂದ ಲಿಂಕ್ ಕೊಟ್ಟಿಲ್ಲ. ಹಾಗಾಗಿಯೇ ಡ್ರೈನೇಜ್ ತುಂಬಿಕೊಂಡು ಹೊರಗಡೆ ಲೀಕ್ ಆಗಿ, ಲೇಔಟ್ನ ಉದ್ಯಾನವನದ ಪಕ್ಕದಲ್ಲಿ ಸೋರಿಕೆಯಾಗುತ್ತಿದೆ.
ನಗರದ 35ನೇ ವಾರ್ಡ್ನ ಮಹಾಬಲೇಶ್ವರ ಲೇಔಟ್ನಲ್ಲಿ ಯುಜಿಡಿ ತ್ಯಾಜ್ಯ ಸಂಗ್ರಹವಾಗಿರುವುದು. 35ನೇ ವಾರ್ಡ್ನಲ್ಲಿ ನಿರ್ಮಿಸಿರುವ ಶೌಚಾಲಯ ನಿರ್ವಹಣೆಯಿಲ್ಲದೇ ಹಾಳಾಗಿರುವುದು. 31ನೇ ವಾರ್ಡ್ ಮುಖ್ಯ ರಸ್ತೆ ಹಾಳಾಗಿದ್ದು, ಮಳೆಯಿಂದ ಗುಂಡಿಯಲ್ಲಿ ನೀರು ನಿಂತುಕೊಂಡಿರುವುದು.
ಯುಜಿಡಿ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಹೊರ ಬರುತ್ತಿದ್ದು, ತ್ಯಾಜ್ಯದ ಹೊಂಡವಾಗಿ ನಿರ್ಮಾಣಗೊಂಡಿದೆ. ಯುಜಿಡಿ ಲೀಕ್ ಆಗುತ್ತಿರುವುದು ಅಕ್ಕಪಕ್ಕದ ಮನೆಯವರಿಗೆ ಕೆಟ್ಟ ವಾಸನೆ ಹರಡುತ್ತಿದೆ.
ಅದನ್ನು ಸರಿಪಡಿಸಲು ನಗರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎಂಬುದು ಸ್ಥಳೀಯರ ದೂರು ಲೆಕ್ಕಕ್ಕಿಲ್ಲ.ಸಂದಪಟ್ಟವರಿಗೆ ಪೋನ್ ಮಾಡಿದರೆ ಉತ್ತರಿಸುತ್ತಿಲ್ಲ. ಪತ್ರಿಕೆಯಲ್ಲಿ ಬಂದರು ಲೆಕ್ಕಕಿಲ್ಲ.ನಗರಸಭೆಗೆ ಹೋಗಿ ಕೇಳಿದರೆ ಸೈಟ್ ನಲ್ಲಿಇದ್ದರೆ ಹೇಳುತ್ತಾರೆ.
Equal wages for men and women in Narega Waddarahatti Gram PDO Suresh Chalawadi
ನರೇಗಾದಲ್ಲಿ ಪುರುಷ-ಮಹಿಳೆಗೆ ಸಮಾನ ಕೂಲಿ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಜಾಹೀರಾತು
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ನರೇಗಾ ಕೂಲಿಕಾರರು ಕಲಿಕೇರಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಂದ ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಭಾನುವಾರ ಆಚರಿಸಲಾಯಿತು. ಈ ವೇಳೆ ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ನರೇಗಾ ಯೋಜನೆಯಲ್ಲಿ ಯಾವುದೇ ಲಿಂಗ ತಾರತಮ್ಯ ಇಲ್ಲದೇ ಪುರುಷ-ಮಹಿಳೆಗೆ ಸಮಾನ ಕೂಲಿ ನೀಡಲಾಗುತ್ತಿದೆ. ಬಾಣಂತಿ ಮತ್ತು ಗರ್ಬಿಣಿಯರಿಗೆ ಕೆಲಸದಲ್ಲೂ ರಿಯಾಯತಿ ಕೂಡ ಇರುತ್ತದೆ ಎಂದರು. ಮಹಿಳೆ ಇಂದು ಎಲ್ಲ ರಂಗಗಳಲ್ಲೂ ಛಾಪು ಮೂಡಿಸುತ್ತಿದ್ದು, ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯಬೇಕಿದೆ. ಮಹಿಳೆಯರು ಸರಕಾರದಿಂದ ದೊರೆಯುವ ಯೋಜನೆಗಳ ಉಪಯೋಗ ಪಡೆದುಕೊಳ್ಳಳಬೇಕು. ಮಹಿಳೆಯರಿಗೆ ಮನೆಯಲ್ಲಿಯೂ ಪಾಲಕರು ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದರು. ಕೂಲಿಕಾರರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಈ ವೇಳೆ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಮಹ್ಮದ್, ಜಿಕೆಎಂ ಸುಜಾತ, ಕಾಯಕಬಂಧುಗಳು ಇದ್ದರು.
Pyramid Spiritual Society Movement, an organization celebrating International Women's Day
ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್,ಸಂಸ್ಥೆ ಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಜಾಹೀರಾತು
ಮಹಿಳೆಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರೆ ಉತ್ತಮ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲಿದೆ: ಶ್ರೀಮತಿ ಲಲಿತಾ ಕಂದಗಲ್
ಗಂಗಾವತಿ: ಸ್ತ್ರೀ ಎಂದರೆ ಪ್ರೀತಿ, ಕರುಣೆ, ಸಹನೆ, ತ್ಯಾಗ, ಮಮತೆ, ಹೊಂದಾಣಿಕೆ, ಸ್ಪೂರ್ತಿ, ಶಕ್ತಿ, ಪ್ರೇರಣೆ, ಕ್ಷಮೆ ಹೀಗೆ ಹಲವಾರು ತತ್ವಗಳಿಗೆ ಪ್ರತಿಕ, ಆದರೆ ಇಂದಿನ ಕೆಲಸದ ಒತ್ತಡ, ಬದಲಾದ ಜೀವನ ವಿಧಾನ, ಆಹಾರ ಪದ್ಧತಿ ಆಲೋಚನಾ ವಿಧಾನಗಳಿಂದಾಗಿ ಸ್ತ್ರೀಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಹೊಂದಾಣಿಕೆ, ಸಹನೆ ಮುಂತಾದವುಗಳಲ್ಲಿ ಲೋಪವಾಗಿ ಸ್ವಾರ್ಥ, ಅಸಹನೆ, ಅಸೂಯೆ, ನಕರಾತ್ಮಕ ಸ್ಪರ್ಧಾ ಮನೋಭಾವ ಒಣ ಪ್ರತಿಷ್ಠೆ ಯಂತಹ ಅವಗುಣಗಳು ಬೆಳೆಯುತ್ತಿರುವುದು ಆತಂಕದ ವಿಷಯ.
ಇವು ಪರಮಾಣು ಬಾಂಬುಗಿಂತ ವಿನಾಶಕಾರಿ, ಅಪಾಯಕಾರಿ, ಪರಮಾಣು ಬಾಂಬುಗಳು ಒಂದೇ ಬಾರಿಗೆ ಜೀವ ಹಾನಿ ಮಾಡಿದರೆ ಈ ನಕರಾತ್ಮಕ ಗುಣ ಸ್ವಭಾವ ವ್ಯಕ್ತಿತ್ರ ಸಂಬಂಧ ಬಾಂಧವ್ಯ ಕುಟುಂಬ ವ್ಯವಸ್ಥೆ ಸಮಾಜದ ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆ ವಿಶ್ವ ಪ್ರೇಮವನ್ನ ಹಾಳು ಮಾಡುತ್ತಿದೆ ಎಂದು ಒಂದನೇ ಪ್ಯಾರದ ಕೊನೆಯ ಸಾಲಿನಲ್ಲಿ ರಾಜ್ಯತಾಸ್ತ್ರ ಉಪನ್ಯಾಸಕಿ ಹಾಗೂ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವೈಂಟ್ ನ ಮನ್ವಂತರ ಧ್ಯಾನ ಕೇಂದ್ರದ ರೂವಾರಿ ಶ್ರೀಮತಿ ಲಲಿತ ನಾರಾಯಣ ಕಂದಗಲ್ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳಲ್ಲಿ ಯಾವುದೇ ಬಿರುದು ಸನ್ಮಾನಗಳಿಗೆ ಆಶಿಸದೇ ಎಲೆಮರೆಯ ಕಾಯಿಯಾಗಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಹಲವು ಮಹಿಳೆಯರನ್ನು ಇಂದು ಆಧ್ಯಾತ್ಮಿಕ ಸಂಸ್ಥೆಯಾದ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್, ಗಂಗಾವತಿ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಈ ಮಹಿಳಾ ದಿನಾಚರಣೆ ಮೂಲಕ ಎಲ್ಲರಲ್ಲಿಯೂ ಸ್ತ್ರೀ ತತ್ವಗಳಾದ ಪ್ರೀತಿ ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ವಿಶ್ವ ಭ್ರಾತೃತ್ವ ವಿಶ್ವ ಪ್ರೇಮ ನಮ್ಮ ಮೂಲಕ, ನಮ್ಮ ಕುಟುಂಬದಿಂದಲೇ ಆರಂಭವಾಗಬೇಕು. ಅದಕ್ಕೆ ಇಂತಹ ದಿನಾಚರಣೆಗಳು ವೇದಿಕೆಯಾಗಬೇಕು ಎಂದು ಇದೇ ಸದುದ್ದೇಶದಿಂದ ಇಂದು ಮುಖ್ಯವಾಗಿ ಪೌರ ಕಾರ್ಮಿಕ ಮಹಿಳೆ ಹುಲಿಗೆಮ್ಮ ನ್ಯಾಯಾಂಗ ಇಲಾಖೆಯ ರೇಣುಕಾ, ಕೆಇಬಿ ಭಾರತಿ ಜೋಶಿ, ಶಿಕ್ಷಣ ಇಲಾಖೆಯ ಜಯಶ್ರೀ ಎಂ, ಆರೋಗ್ಯ ಇಲಾಖೆಯ ಪದ್ಮಾ ಅಂಚೆ ಇಲಾಖೆಯ ಪೂರ್ಣಿಮಾ, ಸಾರಿಗೆ ಇಲಾಖೆಯ ಸೌಮ್ಯ ಹಾಗೂ ಬಿಸಿ ಊಟದ ಮುಖ್ಯ ಅಡಿಗೆದಾರ್ತಿ ಸುನಿತಾ ಸಜ್ಜನ್ ಸೇರಿದಂತೆ ಹಲವರನ್ನು ಸನ್ಮಾನಿಸಿ ಅವರು ಇಲಾಖೆಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಸರಿಸಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಮೂವಮೆಂಟಿನ ಮುಖ್ಯ ರೂವಾರಿಗಳಾದ ಲಲಿತ ನಾರಾಯಣ ವಗ್ಗ ನಾಗರಾಜ ಕಾಜಿ, ಕೆ ಶರಣಮ್ಮ ತಾರಾ ತಿರುಪತಿ ಜೋಶಿ, ಮಾಲಾ 1. ಮಂಜುನಾಥ್, ವಿನಯ್ ಕುಮಾರ್, ಶಿವಕುಮಾರ್, ಇನ್ನಿತರ ಪಿರಮಿಡ್ ಮೇಷ್ಟ್ರುಗಳು ಉಪಸ್ಥಿತರಿದ್ದರು.
ಗಂಗಾವತಿ. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘಕ್ಕೆ ಮಂಜೂರಾತಿ ಗೊಂಡ ಅಂದಾಜು ಒಂದುವರೆ ಲಕ್ಷ ದ ವಿವಿಧ ಕಿಟ್ ಗಳನ್ನು ರವಿವಾರದಂದು ವಿರುಪಾಪುರ ತಾಂಡದಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಾಂಡು.ನಾಯ್ಕ್ ಸಂಘದ ಫಲಾನುಭವಿಗಳಿಗೆ ಕಿಟ್ಟ ಗಳನ್ನು ವಿತರಿಸುವುದರ ಮೂಲಕ ಮಾತನಾಡಿ ಕಾರ್ಮಿಕ ಇಲಾಖೆ ವಿದ್ಯುತ್ ಬುನಾದಿ. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಅಗತ್ಯ ಮೂರು ಹಂತದ ಪರಿಕರಗಳನ್ನು ಕಲ್ಪಿಸಲಾಗಿದ್ದು ನೀಡಲಾಗಿರುವ ಕಿಟ್ಟುಗಳಲ್ಲಿ ಮತ್ತಷ್ಟು ಗುಣಮಟ್ಟದ ಪರಿಕರಗಳನ್ನು ಕಲ್ಪಿಸುವ ಅವಶ್ಯಕತೆ ಇತ್ತು ಎಂದು ತಿಳಿಸಿದವರು ಕಳೆದ ಮೂರು ವರ್ಷದಿಂದ ಅಸ್ತಿತ್ವಕ್ಕೆ ಬಂದ ಸಂಗವು ಈಗಾಗಲೇ ಕಾರ್ಮಿಕರ ಸದಸ್ಯರುಗಳಿಗಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ವಿಶೇಷವಾಗಿ ಕಾರ್ಮಿಕರ ಇಲಾಖೆ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಿಟ್ಟುಗಳನ್ನು ಕಲ್ಪಿಸಬೇಕಾಗಿದೆ ಯಾವುದೇ ವಿದ್ಯಾರ್ಥಿ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದು ಜೊತೆಗೆ ವಿದ್ಯಾರ್ಥಿ ವೇತನ ರಕ್ಷಿಸುವಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುನ್ನೂರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಂತಹ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ ಮುಂದಿನ ದಿನಗಳಲ್ಲಿ ಸಂಗಾಪೂರ ತಾಂಡ. ಸೂರ್ಯನಾಯಕತಾಂಡ ಭಾಗದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಕಾರ್ಮಿಕ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸುವ ಸದುದ್ದೇಶ ತಾವು ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಪ್ಪ ನಾಯ್ಕ್. ಉಪಾಧ್ಯಕ್ಷ ಬಾಲಾಜಿ ಮೇಸ್ತ್ರಿ ಹನುಮಂತಪ್ಪ ಮೇಸ್ತ್ರಿ ಖಜಾಂಚಿ ರವಿಚಂದ್ರ ಸದಸ್ಯರುಗಳಾದ ಕೃಷ್ಣ ಭೋಜ ರವಿ ನಾಯ್ಕ್. ಸೇರಿದಂತೆ ಫಲಾನುಭವಿಗಳು ಪಾಲುಗೊಂಡಿದ್ದರು.
One can become a good poet only through the study of books and the essence of life experiences-S. V. Patil Gundura.
ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ- ಎಸ್ ವಿ ಪಾಟೀಲ್ ಗುಂಡೂರ.
ಜಾಹೀರಾತು
ಗಂಗಾವತಿ. ಬರೆದದ್ದು ಗೀಚಿದ್ದು ಕವನವಲ್ಲ ಒಬ್ಬ ಉತ್ತಮ ಕವಿಯಾಗಲು ಹೆಚ್ಚು ಅಧ್ಯಯನ ಶೀಲತೆಯನ್ನು ಹಾಗೂ ಜೀವನದ ಅನುಭವಗಳನ್ನು ಹಂಚಿಕೊಂಡಾಗ ಮಾತ್ರ ಅತ್ಯುತ್ತಮವಾದ ಕವಿಯಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ಸಾಹಿತ್ಯ ಹಾಗೂ ನಾಟಕ ರಚನೆಕಾರ ಎಸ್ ವಿ ಪಾಟೀಲ್ ಗುಂಡೂರ್ ಹೇಳಿದರು. ಅವರು ಶನಿವಾರದಂದು ಕನ್ನಡ ಜಾಗೃತಿ ಭವನ ದಲ್ಲಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಶ್ರೀ ರಾಜರಾಜೇಶ್ವರಿ ಜನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಅರಳಹಳ್ಳಿ ಇವರ ನೇತೃತ್ವದಲ್ಲಿ ಆಯೋಜಿಸಿದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭತ್ತದ ಕಣಜ ಎನಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರ ಭಾಗದಲ್ಲಿ ದಿನದಿಂದ ದಿನಕ್ಕೆ ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಶಂಶಿಯ ಕಾರ್ಯವಾಗಿದೆ. ಕವಿಗೋಷ್ಠಿಯಲ್ಲಿ ಸುಮಾರು 24 ಅಧಿಕ ಕವಿಗಳು ತಮ್ಮದೇ ಆದಂತಹ ಕವನಗಳನ್ನು ರಚಿಸಿ ವಾಚನ ಮಾಡಿರುವುದು ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಕವಿಗಳು ಸ್ವಲ್ಪ ಪ್ರಾಸಗಳನ್ನು ರಚಿಸಲು ಹೋಗಿ ತ್ರಾಸು ಅನುಭವಿಸಿದ್ದು ಕಾಣಬಹುದಾಗಿದೆ ಉಳಿದಂತೆ ಕವನಗಳನ್ನು ಗಮನಿಸಿದಾಗ ನೋವು ನಲಿವು ಪ್ರೀತಿ ಭಾಷಾಭಿಮಾನ ಇತರೆ ಅಂಶಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್. ಪಂಪಣ್ಣ ನಾಯಕ್. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ವೆಂಕಟೇಶ್ ದರೋಜಿ ಎಸ್ ಬಿ ಹಿರೇಮಠ್ kfಮುದ್ದಾಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತಡವಾಗಿ ಆಗಮಿಸಿದ ಬಿಚಿ. ಬಿ ಪ್ರಾಣೇಶ್ ಹಾಸ್ಯ ಚಟಾಕಿಗಳನ್ನು ಹಾರಿಸಿದರು ತಾಲೂಕ ಅಧ್ಯಕ್ಷ ಅಶೋಕ ಗುಡಿ ಕೋಟೆ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ರುದ್ರಪ್ಪ ಭಂಡಾರಿ ಜಿಲ್ಲಾಧ್ಯಕ್ಷರು ವಹಿಸಿದ್ದರು ದಿವ್ಯ ಸಾನಿಧ್ಯವನ್ನು ಅರಳಿಹಳ್ಳಿ ಶರಣಬಸವ ದೇವರು ಮಹಾಸ್ವಾಮಿಗಳು ವಹಿಸಿದ್ದರು…
Influential people who set out to build an unauthorized church overnight
ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು
ಜಾಹೀರಾತು
ಕಾಮಗಾರಿ ತಡೆದು ನೋಟಿಸ್ ನೀಡಿದ ಗ್ರಾಮಪಂಚಾಯತ್ ಪಿಡಿಓ
ಗಂಗಾವತಿ ; ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇ ವಾರ್ಡಿನಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲು ಮಹಿಳೆ ಸೇರಿದಂತೆ ಕೆಲ ಜನ್ರು ಮುಂದಾದ ಘಟನೆ ಕಳೆದ ಎರಡನೇ ತಾರೀಖನಂದು ನಡೆದಿದೆ. ಅನಧಿಕೃತ ಚರ್ಚ್ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಒತ್ತಡಡ ಮತಾಂತರ ಬಗ್ಗೆ ಪ್ರಗತಿನಗರ ಗ್ರಾಮದ ಜನ್ರು ಲಿಖಿತ ರೂಪದಲ್ಲಿ ಗ್ರಾಮಪಂಚಾಯತ್ , ತಾಲೂಕ ಪಂಚಾಯತ, ತಹಶಿಲ್ದಾರ್ ಕಚೇರಿಗೆ ಪತ್ರ ಬರೆದು ತಕ್ಷಣವೇ ಚರ್ಚ್ ನಿರ್ಮಾಣ ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.
ಪ್ರಗತಿನಗರ ಗ್ರಾಮದ ಎಂ.ಸುಶೀಲಾ ಕೃಷ್ಣರಾವ್ ಎನ್ನುವವರು ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಪಡೆಯದೇ ಈ ಮಹಿಳೆ ಕೆಲ ಪ್ರಭಾವಿಗಳ ಕರೆತಂದು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನೂ ಯಾವುದೇ ಪರವಾನಿಗೆ ಪಡೆಯದೇ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಹಾಡು ಹಾಕುವುದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ನಡೆಸುತ್ತಿರೋದು ಬೆಳಕಿಗೆ ಬಂದಿದೆ.
ಈ ಎಲ್ಲಾ ಚಟುವಟಿಕೆಗಳು ಸ್ಥಳೀಯವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದ್ದು, ಅನಧಿಕೃತ ಚರ್ಚ್ ಕಾಮಗಾರಿ ನಿಲ್ಲಿಸುವಂತೆ ಹಾಗೂ ನಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಮತಾಂತರವನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇಷ್ಟಾದ್ರೂ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ರಾಜಕೀಯ ವ್ಯಕ್ತಿಗಳ ಸಪೋರ್ಟ್ ಇದೆ.
ನಾನು ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡ್ತೇನೆ ಎಂದು ರಾತ್ರೋರಾತ್ರಿ ಕಳೆದ ಮಾರ್ಚ್ ಎರಡರಂದು ಹೊರ ಜಿಲ್ಲೆಯ ಜನ್ರನ್ನು ಕರೆತಂದು ಈ ಮಹಿಳೆ ಕಾಮಗಾರಿ ಮುಗಿಸಲು ಮುಂದಾಗಿದ್ರು. ಇದನ್ನು ಮನಗಂಡ ಗ್ರಾಮಸ್ಥರು ತಹಶಿಲ್ದಾರ್, ತಾಲೂಕಪಂಚಾಯತ್ ಇಓ, ಪಿಡಿಓಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸಿ ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ರು. ಇದನ್ನು ಅರಿತ ಪಿಡಿಓ ಇದೀಗ ಕಾಮಗಾರಿ ನಿಲ್ಲಿಸಿ ಕಾನೂನು ಪರಿಪಾಲನೆ ಮಾಡಿದ್ದಾರೆ.
__________________
ಕಾಮಗಾರಿ ನಿಲ್ಲಿಸಿದ ಬಳಿಕ ಮತ್ತೆ ಪ್ರಭಾವ ಬೀರಿ ಆ ಮಹಿಳೆ ಚರ್ಚ್ ನಿರ್ಮಾಣ ಮಾಡಲು ಸಚಿವರ ಹೆಸರು ಬಳಸಿಕೊಂಡು ಕೆಲ ಮುಖಂಡರಿಂದ ಕಾಮಗಾರಿ ಪ್ರಾರಂಭಿಸೋಕೆ ಸಿದ್ದತೆ ಮಾಡಿಕೊಂಡಿದ್ದಾಳಂತೆ. ಇದ್ರಿಂದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದು, ಸಚಿವರು ಈ ರೀತಿ ಅನಧಿಕೃತ ಕಾರ್ಯಕ್ಕೆ ಒಪ್ಪಿಗೆ ನಿಡೋದಿಲ್ಲ. ನೀನು ಸಚಿವರ ಹೆಸರು ಹೇಳಿ, ಸಚಿವರ ಹೆಸರು ಬಳಕೆ ಮಾಡಿಕೊಳ್ಳಬೇಡ.. ಇದನ್ನು ನಾವೇ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ
_________ _________
ಎಮ್ ಸುಶೀಲಾ ಕೃಷ್ಣರಾವ್ ಅವರ ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚರ್ಚ್ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಸತಿ ಉದ್ದೇಶದ ನಿವೇಶನದಲ್ಲಿ ಚರ್ಚ್ ಮಾಡಲು ಬರೋದಿಲ್ಲ. ಇದರ ಪರವಾನಿಗೆ ನೀಡೋದು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ ಗೆ ಇರುತ್ತದೆ .ನಾವು ಈಗಾಗಲೇ ಕಾಮಗಾರಿ ಸ್ಥಗಿತಕ್ಕೆ ನೋಟೀಸ್ ನೀಡಿದ್ದೇವೆ. ಕಾಮಗಾರಿ ಪ್ರಾರಂಭಿಸಿದ್ರೆ, ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು
Immediately roll back the gas cylinder price hike: SUCI(C) demands
ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್ಯುಸಿಐ(ಸಿ) ಆಗ್ರಹ
ಜಾಹೀರಾತು
ಕೊಪ್ಪಳ:ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಗೆ ಖಂಡನೆ
ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹಬಳಕೆಯ ಅನಿಲ ಸಿಲಿಂಡರ್ಗೆ ರೂ.60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗೆ ರೂ.114 ಹೆಚ್ಚಳ ಮಾಡಿರುವ ಕ್ರಮವನ್ನು ಎಸ್ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕಾ–ಇಸ್ರೇಲ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಮತ್ತು ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿ ಈ ಬೆಲೆ ಏರಿಕೆಯನ್ನು ಸಮರ್ಥಿಸಲಾಗುತ್ತಿದೆ. ಆದರೆ ಈ ಕುರಿತು ಕೇಂದ್ರ ಬಿಜೆಪಿ ಸರ್ಕಾರವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ ಏಕೆ? ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕಾ ಹಾಕಿದ ಒತ್ತಡಕ್ಕೆ ಮಣಿದಿರುವುದು ಯಾರ ಹಿತಾಸಕ್ತಿಗಾಗಿ? ಇನ್ನೂ 50 ದಿನಗಳಿಗೆ ಬೇಕಾದಷ್ಟು ಕಚ್ಚಾತೈಲ ಸಂಗ್ರಹವಿದೆ ಎಂಬ ವರದಿಗಳು ಇದ್ದಾಗಲೇ ಹಳೆಯ ದರದಲ್ಲಿ ಖರೀದಿಸಿದ ತೈಲದ ಬೆಲೆ ಹೆಚ್ಚಿಸುವುದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ.
ಈಗಾಗಲೇ ಜನರ ಜೀವನ ವೆಚ್ಚ ಭಾರೀ ಏರಿಕೆಯಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ವೇತನ ಹೆಚ್ಚಳವಾಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ. ದುಡಿಯುವ ಜನರು ಸಾಲ ಮಾಡಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಲಿದೆ.
ಯುದ್ಧದ ಸಂಕಷ್ಟದ ಸಂದರ್ಭದಲ್ಲಿಯೂ ಜನರನ್ನು ದೋಚುವ ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯನ್ನು ಎಸ್ಯುಸಿಐ(ಸಿ) ಕಟುವಾಗಿ ವಿರೋಧಿಸುತ್ತದೆ. ತಕ್ಷಣವೇ ಅನಿಲ ಸಿಲಿಂಡರ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಜೊತೆಗೆ ಕಚ್ಚಾತೈಲ ಖರೀದಿಗೆ ಪರ್ಯಾಯ ಮೂಲಗಳನ್ನು ಕಂಡುಹಿಡಿಯುವಲ್ಲಿ ದೇಶದ ಸಾರ್ವಭೌಮತ್ವವನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.
Students should learn new things and always be active in activities: S.V. Patil Gundur
ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕು ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು
ಜಾಹೀರಾತು
ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕವಿಗಳು, ರಂಗ ನಿರ್ದೇಶಕರು, ಚಲನಚಿತ್ರ ನಿರ್ದೇಶಕರು
ಆದ ಶ್ರೀ ಎಸ್.ವಿ. ಪಾಟೀಲ್ ಗುಂಡೂರು ರವರು ಮಾರ್ಚ್-6 ರಂದು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಸಾಪಟ್ಟಣ ಶಾಲೆಯಲ್ಲಿ ಏಳನೇ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾ ಡಿದ ಅವರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯು 2002 ರಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯ ಅನುದಾನದ ಅಡಿಯಲ್ಲಿ ಕುಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಲಿಕಾ ಕೇಂದ್ರಗಳನ್ನು ಆರಂಭಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಸಣ್ಣೆಪ್ಪರವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಎಸ್.ವಿ. ಪಾಟೀಲ್ ಗುಂಡೂರು ರವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹೊಸತನ್ನು ಕಲಿಯಬೇಕು ಎನ್ನುವ ದೆಸೆಯಲ್ಲಿ ತಾವು ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವಾಗ ‘ಯಕ್ಷ ಪ್ರಶ್ನೆ” ಎನ್ನುವ ಪಾಠವನ್ನು ನಾಟಕವನ್ನಾಗಿ ಬರೆದು ನಿರ್ದೇಶಿಸಿ, ಅಭಿನಯಿಸಿದ ಪ್ರಸಂಗವನ್ನು ಮಕ್ಕಳ ಮುಂದೆ ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೊಸತನವನ್ನು ಕಲಿಯಬೇಕು, ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು, ಗುರು ಹಿರಿಯರಿಗೆ, ಗೌರವ ನೀಡಬೇಕು, ಹೆತ್ತ ತಂದೆ ತಾಯಿಗಳಿಗೆ ಗೌರವ ಕೊಡುವುದಷ್ಟೇ ಅಲ್ಲ ಅವರನ್ನು ಗೌರವದಿಂದ ನೋಡಿಕೊಳ್ಳುವುದು ಆಗಿದೆ. ಇಂದಿನ ದೃಶ್ಯ ಮಾಧ್ಯಮ ಡಿಜಿಟಲ್ ಮಾಧ್ಯಮದಿಂದ ಅವಶ್ಯವಾದುದನ್ನು ಬಳಸಿಕೊಂಡು ಪ್ರಗತಿಯಡೆಗೆ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಎಸ್.ವಿ. ಪಾಟೀ ಲ್ ಗುಂಡೂರು ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು
ಈ ಶುಭ ಸಮಾರಂಭದಲ್ಲಿ ಅಧ್ಯಕ್ಷರಾದ ಸಣ್ಣೆಪ್ಪ ವಿಠಲಾಪುರ, ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ, ಶಾಲೆಯ ಮುಖ್ಯಗುರು ಗಳಾದ ನಿಂಗಪ್ಪ ಗುಂಡೂರು, ಹಿರಿಯ ಶಿಕ್ಷಕರಾದ ಪ್ರವೀಣ್ ಕುಮಾರ್, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು
ಕಾರಟಗಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದಿಂದ ಕಾರಟಗಿಯ ನಿವಾಸಿ, ಉಪನ್ಯಾಸಕ ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಪ್ರಸ್ತುತ ಬಳ್ಳಾರಿ ವೀವಿ ಸಂಘ (ರಿ)ದ ವಿಜಯನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ರಮೇಶ ಅವರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ “ಫಿಸಿಕ-ಕೆಮಿಕಲ್ ಅನಾಲಿಸಿಸ್ ಅಂಡ್ ಥೆಇರ್ ಕಂಪೆರಟಿವೆ ಸ್ಟಡೀಸ್ ಆ ಗ್ರೌಂಡ್ವಾಟರ್ ಇನ್ ಸಂ ಸೆಲೆಕ್ಟೆಡ್ ತಾಲುಕ್ಸ್ ಆ ಕೊಪ್ಪಲ್ ಅಂಡ್ ಬಳ್ಳಾರಿ ಡಿಸ್ಟ್ರಿಕ್ಟ್ಸ್, ಕರ್ನಾಟಕ, ಇಂಡಿಯಾ” ಎಂಬ ಶೀರ್ಷಿಕೆಯಡಿ ಮಹಾಪ್ರಬಂಧವನ್ನು ಮಂಡಿಸಿದ್ದರು.
If the Congress government is pro-farmers, it will present a budget of 490 crores for the reservoir, former MLA R Narendra Santhosh.
ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.
ಜಾಹೀರಾತು
ವರದಿ: ಬಂಗಾರಪ್ಪ .ಸಿ. ಹನೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಪರವಾಗಿದೆ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದೆ , ಹಾಗೇಯೆ ಏತ ನೀರಾವರಿ ಯೋಜನೆಯಿಂದ ರೈತರ ಜಮಿನುಗಳಿಗೆ ನೀರಿನ ಸಮಸ್ಯೆಗಳಿಗೆ ಇತಿ ಶ್ರೀ ಹಾಡಿದೆ ಎಂದರು ತಪ್ಪಾಗಲಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ರವರು ತಿಳಿಸಿದರು. ಹನೂರು ಪಟ್ಟಣದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಭಾಗದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಯನ್ನು ಇಂದಿನ ಬಜೆಟ್ನಲ್ಲಿ ನಮ್ಮ ಸರಕಾರ ಘೋ ಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಶಾಶ್ವತವಾಗಿ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ,
ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಹಲವಾರು ವರ್ಷಗಳಿಂದ ನಮ್ಮ ತಂದೆಯವರಾದಿಯಾಗಿ ನಾನು ಸಹ ಶ್ರಮವಹಿಸಿ ಡಿಪಿಆರ್ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕಳೆದ ಬಾರಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ ಇ ದಿನದ ಬಜೆಟ್ನಲ್ಲಿ ಅಂದಾಜು ಮೊತ್ತ 490 ಕೋಟಿ ರೂಗಳ ವೆಚ್ಚದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆಯಿಂದ ಸುಮಾರು 15 ಸಾವಿರ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೆಶಿಪ್ ಯೋಜನೆಯಡಿ ಮೊದಲ ಹಂತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು 108 ಕೋಟಿ ರೂ ಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಕಳೆದ ಬಾರಿಯೇ ಹನೂರು ತಾಲ್ಲೂಕು ಕೇಂದ್ರದಿಂದ ರಾಮಾಪುರ ಮಾರ್ಗವಾಗಿ ಪಾಲಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕೆ ಶಿಪ್ ಯೋಜನೆ ಘೋಷಣೆಯಾಗಿದೆ, ನಂತರ ಹಣ ಬಿಡುಗಡೆ ಯಾಗಿರಲಿಲ್ಲ, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳನ್ನು ನಮ್ಮ ಸರ್ಕಾರವು ಮಾಡುತ್ತದೆ ಎಂದು ತಿಳಿಸಿದರು.
Karnataka State Farmers' Association's struggle has won: Statement by District Vice President Gowde Gowda.
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .
ಜಾಹೀರಾತು
ವರದಿ:ಬಂಗಾರಪ್ಪ .ಸಿ. ಹನೂರು ತಾಲ್ಲೂಕು ಕ್ಷೇತ್ರದ ರೈತರ ಜಮೀನುಗಳಿಗಾಗಿ ನದಿ ಮೂಲದಿಂದ ನಿರು ತರಲು DPR ಪ್ರಕಾರ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದೊಳಗೆ ಇರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಚಳುವಳಿಯನ್ನು ನಾವು ಹಮ್ಮಿಕೊಂಡ ಪರಿಣಾಮವಾಗಿ ಹಾಗೂ ಹನೂರು ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ,ಮಾಜಿ ಶಾಸಕರಾದ ಆರದ ನರೇಂದ್ರ , ಸಂಸದರಾದ ಸುನೀಲ್ ಬೋಸ್ , ಮುಖ್ಯಮಂತ್ರಿಗಳಾದ ಸಿದ್ದರಾಮಯ ,ಉಸ್ತುವಾರಿ ಸಚಿವರಾದ ವೆಂಕಟೇಶ ಇನ್ನು ಅನೇಕರ ಶ್ರಮದಿಂದ ಇಂದಿನ ಬಜೇಟ್ ನಲ್ಲಿ ನೀರಾವರಿ ಯೋಜನೆಗೆ 490ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ತಿಳಿಸಿದರು.
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು ಚಾಮರಾಜನಗರ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲ್ಲೂಕಾಗಿರುವ ಹನೂರು ತಾಲ್ಲೂಕು ಮಳೆ ಆಶ್ರಿತ ವ್ಯವಸಾಯವನ್ನು ಅವಲಂಬಿಸಿದ್ದು ಹಲವಾರು ವರ್ಷಗಳಿಂದ ಮಳೆಯಾಗದೆ ಬರಪೀಡಿತವಾಗಿದೆ. ಈಗ ಬೇಸಿಗೆ ಆರಂಭದಲ್ಲಿಯೇ ಜನಗಳು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಮಳೆ ಆಶ್ರಿತ ಜಲಮೂಲವನ್ನು ಹೊಂದಿರುವ ರೈತರು ದಯನೀಯ ಸ್ಥಿತಿಗೆ ತಲುಪಿದ್ದಾರೆ ತನ್ನ ಕುಟುಂಬವನ್ನು ಕಾಪಾಡಲು ಪರ ಊರುಗಳಿಗೆ ಗುಳೇ ಹೋಗಲು ರೈತರು ಸಿದ್ದವಾಗುತ್ತಿದಾರೆ ಈ ಗಂಭೀರ ಪರಿಸ್ಥಿತಿಯ ಅರಿವು ರಾಜ್ಯ ಸರ್ಕಾರಕ್ಕೆ ಇದ್ದಂತ್ತಿಲ್ಲ, ಇದ್ದಿದ್ದರೇ ಕಾವೇರಿ ನದಿಯಿಂದ ಏತ ನೀರಾವರಿ ಮುಖಾಂತರ ಹನೂರು ತಾಲ್ಲೂಕಿಗೆ ನೀರು ಹರಿಸಲು DPR ಗೆ ಅನುಮತಿ ದೊರಕಿದ್ದರೂ ಅನುಮೋದನೆ ಬಾಕಿಇತ್ತು ಅದು ಇಂದು ನೆರವೆರಿದೆ . ಹನೂರು ತಾಲ್ಲೂಕಿನ ಉಡುತೊರೆಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 TMC ನೀರೋದಗಿಸಲು 2020-21ರ ಸಾಲಿನಲ್ಲಿ DPR ಗೆ ಅನುಮತಿ ದೊರಕಿದ್ದು ಕಾಮಗಾರಿಗೆ ಅನುಮೋದನೆ ದೊರಕಿಲ್ಲ ಈ ಬಜೆಟ್ನಲ್ಲಿ ಹಣಕಾಸು ಒದಗಿಸಲಾಗಿದೆ , ಅದೇ ರೀತಿಯಲ್ಲಿ ಹನೂರು ತಾಲ್ಲೂಕಿನ ಕೆರೆಗಳಾದ ಮಣಗಳ್ಳಿ ಕೆರೆ, ಬಂಡಳ್ಳಿ ಕೆರೆ, ಹಲಗಾಪುರದ ಕೆರೆ, ಮಾರ್ಟಳ್ಳಿ ಕೀರಪಾತಿಯ-ಹಾಲೇರಿ ಕೆರೆ, ಹೂಗ್ಯಂನ ಮಿನ್ನತ್ತಹಳ್ಳ ಕಿರು ಜಲಾಶಯ, ದಿನ್ನಳ್ಳಿಯ ಮೂಕಚ್ಚಿ ಕಿರು ಜಲಾಶಯಗಳಿಗೆ ಕಾವೇರಿ ನದಿಯ ಸತ್ತೇಗಾಲದ ಶಿವಾ ಆಣೆಕಟ್ಟೆಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲು DPR ಗೆ ಅನುಮತಿ ದೊರಕಿದ್ದು 419 ಕೋಟಿಯ ಪರಿಷ್ಕೃತ DPR ನಲ್ಲಿ ಮಾರ್ಟಳ್ಳಿ, ಕುರಟ್ಟಿಹೊಸೂರು, ಕೌದಳ್ಳಿ, ಶೆಟ್ಟಳ್ಳಿ, ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳನ್ನು ಸೇರಿಸಿ ನೀರು ಒದಗಿಸಲು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕರವು ತಕ್ಷಣ ಹಣ ಬಿಡುಗಡೆ ಮಾಡಿ ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು. ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯಗ್ರಾಮಗಳಾದ ಆಲಂಬಾಡಿ,ಜಂಬೂಪಟ್ಟಿ, ಮಾರಿಕೋಟೆ,ಪುದುಕಾಡು,ಅವುಕಾಂಪಟ್ಟಿ,ಪುಂಗಾತ್ತೂರು, ತೆಂಗಾಯ್ ಕೊಂಬು ಗ್ರಾಮಗಳ ಪಾರಂಪರಿಕ ಅರಣ್ಯವಾಸಿಗಳಿಗೆ ವಿದ್ಯುತ್. ಕುಡಿಯುವ ನೀರು, ಸುಸಜ್ಜಿತ ರಸ್ತೆ ಹಾಗೂ ಹಕ್ಕುಪತ್ರಗಳನ್ನು ಇಲ್ಲಿಯವರೆಗೂ ಯಾವ ಸರ್ಕಾರವೂ ನೀಡಿರುವುದಿಲ್ಲ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಿ ಮೂಲಭೂತ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಅದೆ ರೀತಿಯಲ್ಲಿ ನಮ್ಮ ಹೋರಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ರಾಜ್ಯಧ್ಯಕ್ಷರಾದ ಬಡಗಲುಪುರದ ನಾಗೇಂದ್ರ ,ರಾಜ್ಯದ ಎಲ್ಲಾ ಜಿಲ್ಲಾ ಸಂಘಟನೆ ಮುಖಂಡರು ಸೇರಿದಂತೆ ಸಾಥ್ ನೀಡಿದ ಎಲ್ಲಾರಿಗೂ ನಾವು ಅಭಾರಿಯಾಗಿದ್ದೇವೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಅಮ್ಜಾದ್ ಖಾನ್ , ಗೌರವ ಅಧ್ಯಕ್ಷರು ರಾಜಣ್ಣ ,ಸಂಘಟನ ಕಾರ್ಯದರ್ಶಿ ಬಸವರಾಜು ,ಪಳನಿಸ್ವಾಮಿ, ಬಸವರಾಜು, ಕನಕಮ್ಮ , ಲೋಕೇಶ್ ,ವೆಂಕಟೇಶ್ ,ಸೇರಿದಂತೆ ಎಲ್ಲಾರು ಹಾಜರಿದ್ದರು ,
Siddaramaiah's budget is a pro-people budget: Reddy Srinivas
ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್
ಜಾಹೀರಾತು
ಕೊಪ್ಪಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ 2026-27ರ ಬಜೆಟ್ ಜನಪದ ರ ಬಜೆಟ್ ಎಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಈ ಬಾರಿ ಬಜೆಟನ್ನು ಎಲ್ಲಾ ವರ್ಗದವರ ಹಿತವನ್ನು ಕಾಪಾಡುವ ಬಜೆಟ್ ಆಗಿದೆ, ಕೊಪ್ಪಳ ಜಿಲ್ಲೆಗೆ ಮುನಿರಾಬಾದ್ ಬಳಿಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ, ಬೇವೂರಿನಲ್ಲಿ ಸರಕಾರಿ ವಸತಿ ಪದವಿ ಕಾಲೇಜು ನೀಡಿದ್ದು ಸಂತಸ ತಂದಿದೆ, 16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಿರುವುದು ಒಳ್ಳೆ ನಿರ್ಧಾರ, ರಾಜ್ಯದ ಅನ್ನ ರಾಮಯ್ಯನವರು ಬಜೆಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಗೆ ಒಂದು ಜೊತೆ ಸಮವಸ್ತ್ರ ನೀಡಲಾಗುವುದೆಂದು ಘೋಷಿಸಿದ್ದಾರೆ, ಇಂದಿರಾ ಕಿಟ್ ಗೆ ಬಜೆಟ್ ನಲ್ಲಿ 68,200 ಕೋಟಿಗಳನ್ನು ಮೀಸಲಿಟ್ಟಿರುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ, ಒಟ್ಟಾರೆ ಈ ಬಾರಿ ಬಜೆಟ್ ಜನಪರ ಬಜೆಟ್ ಎಂದು ತಿಳಿಸಿದ್ದಾರೆ.
Appeal to the District Collector from the District All-round Development Struggle Committee
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ
ಜಾಹೀರಾತು
ಗಂಗಾವತಿ: ದಿ, 6 ಶುಕ್ರವಾರ ನಗರಸಭೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಭೇಟಿಯಾಗಿ ಗಂಗಾವತಿ ಸಿ ಟಿ ಮಾರ್ಕೆಟ್ ಪ್ರಾರಂಭ ಮಾಡಬೇಕು,ಆನೆಗುಂದಿ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಉತ್ಸವದ ವೇದಿಕೆ ಸ್ಥಳ ಖಾಸಗಿಯವರದಾಗಿದ್ದು ಮುಂದಿನ ದಿನಗಳಲ್ಲಿ ಉತ್ಸವ ಆಚರಣೆಯನ್ನು ಮಾಡಲು ಸ್ಥಳದ ಅಭಾವವಾಗುತ್ತದೆ. ಖರೀದಿಸಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಮ್ಯಾಗಳಮನಿ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ತಿಂಗಳಲ್ಲಿ ಸಿ ಟಿ ಮಾರ್ಕೆಟ್ ಪ್ರಾರಂಭಿಸಲಾಗುವದು ಹಾಗೂ ಉತ್ಸವ ಆಚರಣೆ ಮಾಡಲು ಸಿದ್ಧತೆ ನಡೆಸುವಾದಾಗಿ ಭರವಸೆ ನೀಡಿದ್ದಾರೆOದು ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಒತ್ತಡಗಳ ನಡುವೆಯೂ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು-ಅಲಂಪಲ್ಲಿ
ಜಾಹೀರಾತು
Siddaramaiah presents 17th budget despite economic pressures: Greater emphasis on welfare schemes and development - Alampalli
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2026-27ನೇ ಸಾಲಿನ ರಾಜ್ಯ ಬಜೆಟ್ ಹಲವು ಆಯಾಮಗಳಲ್ಲಿ ವಿಶೇಷತೆಗಳನ್ನು ಪಡೆದುಕೊಂಡಿದೆ.
–ಸಿಎ.ಡಾ. ವಿಷ್ಣು ಭರತ್ ಅಲಂಪಲ್ಲಿ ಚಾರ್ಟರ್ಡ್ ಅಕೌಂಟೆಂಟ್ 9880701701
ಬೆಂಗಳೂರು: ಆರ್ಥಿಕ ಕೊರತೆ ₹22,957 ಕೋಟಿ. ಸಾಲ, ₹8,24,389 ಕೋಟಿ, ಬಡ್ಡಿ ಪಾವತಿ ಹೊಣೆಗಾರಿಕೆಗಳು ಮತ್ತು 2025-26ರಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆದಾಯ ಸಂಗ್ರಹದಂತಹ ಹಲವು ಹಣಕಾಸಿನ ಒತ್ತಡಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಡುವೆಯೂ, ಸರ್ಕಾರ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಆದ್ಯತೆಗಳ ನಡುವಿನ ಸಮತೋಲನ ಸಾಧಿಸಲು ಪ್ರಯತ್ನಿಸಲಾಗಿದೆ. ಒಟ್ಟು ಬಜೆಟ್ ₹4,48,004.
ಪ್ರಸ್ತುತ ಹಣಕಾಸು ಪರಿಸ್ಥಿತಿಯ ಪ್ರಮುಖ ಲಕ್ಷಣವೆಂದರೆ ಸಬ್ಸಿಡಿ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ವೆಚ್ಚ. ರಾಜ್ಯ ಸರ್ಕಾರವು ಸಬ್ಸಿಡಿಗಳಿಗೆ ಸುಮಾರು ₹1.2 ಲಕ್ಷ ಕೋಟಿ ವೆಚ್ಚ ಮಾಡುವ ನಿರೀಕ್ಷೆಯಿದ್ದು, ಇದು ಒಟ್ಟು ಬಜೆಟ್ ವೆಚ್ಚದ ಪ್ರಮುಖ ಭಾಗವಾಗಿದೆ. ಈ ಮೊತ್ತದಲ್ಲಿ ಸುಮಾರು 155,319 ಕೋಟಿ ರಾಜ್ಯದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಮೀಸಲಾಗಿದೆ- ಗೃಹಲಕ್ಷ್ಮಿ ಯೋಜನೆ (₹28,608 ಕೋಟಿ), ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ (₹5,300 ಕೋಟಿ), ಅನ್ನ ಭಾಗ್ಯ ಯೋಜನೆ ಮತ್ತು ಯುವ ನಿಧಿ ಯೋಜನೆ. ಬಜೆಟ್ನಲ್ಲಿ 41 ಕಿ.ಮೀ. ಹೊಸ ಮೆಟ್ರೋ ಮಾರ್ಗಗಳನ್ನು ಒಳಗೊಂಡಿವೆ.
ಇದರೊಟ್ಟಿಗೆ ಉಚಿತ ವಿದ್ಯುತ್ ಸಬ್ಸಿಡಿಗೆ ಸುಮಾರು ₹25,000 ಕೋಟಿ, ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮಧ್ಯಾಹ್ನದ ಊಟ ಯೋಜನೆಗೆ ₹10,000 ಕೋಟಿ, ಮತ್ತು ಆರೋಗ್ಯ ಮೂಲಸೌಕರ್ಯಕ್ಕೆ ₹900 ಕೋಟಿ ಮೀಸಲಾಗಿದೆ. ಹಣಕಾಸಿನ ಒತ್ತಡಗಳಿದ್ದರೂ, ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ಹಿಂಪಡೆಯದಿದ್ದು, ಮಹಿಳೆಯರು, ವಿದ್ಯಾರ್ಥಿಗಳು, ಉದ್ಯೋಗವಿಲ್ಲದ ಯುವಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಹಾಯವಾಗುವ ಕಲ್ಯಾಣ ಕಾರ್ಯಕ್ರಮಗಳಿಗೆ ಬದ್ಧತೆಯನ್ನು ಪುನರುಚ್ಚರಿಸಿದೆ.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದಕ್ಕೂ ವಿಶೇಷ ಒತ್ತು ನೀಡಲಾಗಿದೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಪ್ತಿ ಹೆಚ್ಚಿಸಲು ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ ಮಾಡಲಾಗುತ್ತಿದೆ. ಈ ಶಾಲೆಗಳು ಉತ್ತಮ ಮೂಲಸೌಕರ್ಯ, ಡಿಜಿಟಲ್ ಕಲಿಕೆ ಸೌಲಭ್ಯಗಳು ಮತ್ತು ಶೈಕ್ಷಣಿಕ ಬೆಂಬಲವನ್ನು ವಿದ್ಯಾರ್ಥಿಗಳಿಗೆ ಒದಗಿಸಲಿವೆ.
ಕೃಷಿ ಕ್ಷೇತ್ರವೂ ಪ್ರಮುಖ ಆದ್ಯತೆಯಾಗಿದೆ. ನೀರಾವರಿ ಯೋಜನೆಗಳು, ರೈತ ಕಲ್ಯಾಣ ಕಾರ್ಯಕ್ರಮಗಳು ಮತ್ತು ಜಲ ಸಂಪನ್ಮೂಲ ನಿರ್ವಹಣೆಗೆ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ಕೃಷಿಗೆ ಉತ್ತೇಜನ ಹಾಗೂ ರೈತರಿಗೆ ಉತ್ತಮ ಸಾಲ ವ್ಯವಸ್ಥೆ ಒದಗಿಸುವುದಕ್ಕೂ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. 38 ಲಕ್ಷ ರೈತರಿಗೆ ₹30,000 ಕೋಟಿ ಕೃಷಿ ಸಾಲಗಳ ವಿಂಗಡಣೆ ಯೋಜಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೂ ವಿಶೇಷ ಪ್ರಧಾನ್ಯತೆ ನೀಡಲಾಗಿದೆ. ರಾಜ್ಯದಾದ್ಯಂತ ರಸ್ತೆ ವಿಸ್ತರಣೆ, ಗ್ರಾಮೀಣ ಸಂಪರ್ಕ ಸುಧಾರಣೆ ಮತ್ತು ಸಾರಿಗೆ ಮೂಲಸೌಕರ್ಯ ಬಲಪಡಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗಿದೆ. ವೇಗವಾಗಿ ನಗರೀಕರಿಸುತ್ತಿರುವ ಬೆಂಗಳೂರು ನಗರಕ್ಕೆ ವಿಶೇಷ ಗಮನ ನೀಡಲಾಗಿದೆ. ನಗರ ಸಾರಿಗೆ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ವಿಸ್ತರಣೆ ವೇಗಗೊಳಿಸುವುದು ಮತ್ತು ಡಬಲ್ ಡೆಕ್ಕರ್ ಬಸ್ಸುಗಳನ್ನು ಪರಿಚಯಿಸುವ ಯೋಜನೆಗಳು ಮುಂದಿನ ಹಂತದಲ್ಲಿವೆ. ಬೆಂಗಳೂರು ಅಭಿವೃದ್ಧಿಗೆ ₹10,000 ಕೋಟಿ ಮೀಸಲಾಗಿದೆ.
ಬಜೆಟ್ ಕೈಗಾರಿಕೆ, ಪ್ರವಾಸೋದ್ಯಮ, ಹಾಲು ಉತ್ಪಾದನೆ ಮತ್ತು ಸಾರಿಗೆ ಕ್ಷೇತ್ರಗಳ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. ಈ ಕ್ಷೇತ್ರಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಜನರ ಜೀವನಮಟ್ಟವನ್ನು ಸುಧಾರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವುದು ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸುವುದು ನಮ್ಮ ಉದ್ದೇಶ,” ಎಂದು ಅವರು ಹೇಳಿದ್ದಾರೆ.
ಒಟ್ಟಾರೆ, 2026-27ರ ಕರ್ನಾಟಕ ಬಜೆಟ್ ಕಲ್ಯಾಣ ವೆಚ್ಚ ಮತ್ತು ದೀರ್ಘಕಾಲಿಕ ಅಭಿವೃದ್ಧಿ ಗುರಿಗಳ ನಡುವಿನ ಸಮತೋಲನ ಸಾಧಿಸುವ ಪ್ರಯತ್ನವಾಗಿದೆ. ಶಿಕ್ಷಣ, ಕೃಷಿ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ಸರ್ಕಾರ ಸಾಮಾಜಿಕ ಭದ್ರತೆಯನ್ನು ಬಲಪಡಿಸಿ, ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸಿ, ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಮುಂದುವರಿಸುವ ಉದ್ದೇಶ ಹೊಂದಿದೆ.
AIMSS statement on Karnataka state budget with no new schemes for women
ಮಹಿಳೆಯರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ ಕರ್ನಾಟಕ ರಾಜ್ಯ ಬಜೆಟ್ ಕುರಿತು ಎಐಎಂಎಸ್ಎಸ್ ಹೇಳಿಕೆ
ಜಾಹೀರಾತು
ಕೊಪ್ಪಳ: ಕರ್ನಾಟಕದಲ್ಲಿ ಇಂದು ಮಂಡಿಸಲಾದ ರಾಜ್ಯ ಬಜೆಟ್ ಮಹಿಳೆಯರಿಗೆ ಭ್ರಮನಿರಸನ ಉಂಟುಮಾಡಿದೆ ಎಂದು ಎಐಎಂಎಸ್ಎಸ್ ಕರ್ನಾಟಕ ರಾಜ್ಯ ಸಮಿತಿಯು ಅಭಿಪ್ರಾಯ ಪಡುತ್ತದೆ.
ಹದಿಹರೆಯದ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ತಡೆಗಟ್ಟುವ ದಿಕ್ಕಿನಲ್ಲಿ 16 ವಯಸ್ಸಿನವರೆಗೆ ಮೊಬೈಲ್ ಬಳಕೆಯನ್ನು ವಿದ್ಯಾಸಂಸ್ಥೆಗಳಲ್ಲಿ ನಿಷೇಧಿಸಿರುವುದು ಸ್ವಾಗತಾರ್ಹವಾಗಿದೆ. ಈ ಮೊಬೈಲ್ ಗೀಳನ್ನು ತಪ್ಪಿಸಲು ಸರ್ಕಾರ “ಈ- ಕಮಿಷನ್” ಸ್ಥಾಪಿಸಿ, ಮನೋತಜ್ಞರು, ಸುಚಿಂತಕರು, ಮಹಿಳಾ ಸಂಘಟನೆಗಳು, ಪೋಷಕರೂ ಒಳಗೊಂಡಂತೆ ವಿಸ್ತೃತ ಸಭೆ ಕರೆಸಿ ಸಲಹೆಗಳನ್ನು ಆಹ್ವಾನಿಸಬೇಕು.
ಸರ್ಕಾರದ ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿ ಮಹಿಳೆಯರಿಗೆ “ಟೇಕ್ ಹೋಮ್ ರೇಷನ್” ಯೋಜನೆ ಕೈ ಬಿಟ್ಟಿರುವುದು ವಿಷಾದನೀಯ. ಈ ರದ್ಧತಿಯಿಂದ ಎಷ್ಟೋ ಮಹಿಳೆಯರು ವಂಚಿತರಾಗುತ್ತಾರೆ.
“ಇಂದಿರಾ ಆಹಾರ ಕಿಟ್” ಯೋಜನೆ ಅಡಿಯಲ್ಲಿ ಕೊಡುತ್ತಿದ್ದ 5 ಕಿಲೋ ಅಕ್ಕಿ ರದ್ದು ಮಾಡಿರುವುದನ್ನು ಖಂಡಿಸುತ್ತದೆ. ತೊಗರಿ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಕೊಡುವುದರ ಜೊತೆಗೆ ಅಕ್ಕಿಯನ್ನು ಕೊಡಬೇಕೆಂದು ಅಗ್ರಹಿಸುತ್ತದೆ.
ಸಮಾಜದ ಆರೋಗ್ಯ ಮಾತೆಯರಾದ ಆಶಾ ಕಾರ್ಯಕರ್ತೆಯರ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು ವಿಷಾದನೀಯ.
ರಾಜ್ಯಾದ್ಯಂತ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು ಪ್ರಜಾತಾಂತ್ರಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಈ ಅನಿಷ್ಟಕ್ಕೆ ಕಡಿವಾಣ ಹಾಕಲು “ಮಾನ್ಯ ಕಾಯ್ದೆ” ತರುತ್ತೇವೆಂದು ಹೇಳಿದ ಸರ್ಕಾರದ ಮಾತು ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ.
ಒಟ್ಟಾರೆಯಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿತ್ತ ಮಂತ್ರಿಗಳೂ ಆದ ಶ್ರೀಯುತ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲವಾಗಿವೆ. ಮಹಿಳಾ ಸಮುದಾಯಕ್ಕೆ ಇದು ನಿರಾಶದಾಯಕ ಬಜೆಟ್ ಎಂದು ಎಐಎಂಎಸ್ಎಸ್ ರಾಜ್ಯ ಸಮಿತಿಯು ಹೇಳಲಿಚ್ಛಿಸುತ್ತದೆ.
Where are the Mathadhis who preach the Pankaanu Punka Basava philosophy and the Lingayats who preach the philosophy?
ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಪಂಕಾನು ಪುಂಕಾ ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ಎಲ್ಲಿ ! ?
ಜಾಹೀರಾತು
ಕನ್ನೇರಿ ಸ್ವಾಮಿ . ಹಿಂದುತ್ವದ ಪ್ರತಿಪಾದಕ, ಬಸವಾದಿ ಶರಣರನ್ನು ಹಿಂದುತ್ವದ ತಕ್ಕೆಗೆ ತೆಗೆದುಕೊಂಡು ಹಿಂದುತ್ವವೆ ಮುಖ್ಯ ಎಂದು ಸಾಧಿಸಬೇಕೆಂಬ ಹಂಬಲದ ಛಾತಿಯುಳ್ಳ ಪಕ್ಕಾ ಮನುವಾದಿ , ಕೋಮುವಾದಿ , ಹಿಂದುತ್ವವಾದಿ ಕನ್ನೇರಿ ಸ್ವಾಮಿಗಳು.
ಕನ್ನೇರಿ ಸ್ವಾಮಿ ಎತ್ತುವ ಪ್ರಶ್ನೆಗಳು ಇಂದೂ ಬಸವತತ್ವದವರೆನ್ನುವ , ಬಸವಣ್ಣನ ಲಿಂಗಾಯತ ಧರ್ಮ . ಹಿಂದುತ್ವವನ್ನು (ವೈದಿಕತೆ) ಧಿಕ್ಕರಿಸಿ ಉದಯಿಸಿದ ಧರ್ಮ ಎಂದೂ ಹೇಳುವ ಲಿಂಗಾಯತ ತತ್ವನ್ನು ಸಾರುವ ಮಠಾಧೀಶರಿಂದ ಹಿಡಿದು , ಲಿಂಗಾಯತ ತತ್ವದ ಬಗ್ಗೆ ಪುಂಕಾನು ಪುಂಕವಾಗಿ ವೇದಿಕೆಯ ಮೇಲೆ ಮಾತಾಡುವ ಅನುಭಾವಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ ಈ ಕನ್ನೇರಿ ಸ್ವಾಮಿ.
ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಇಂದು ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ತಿಣುಕಾಡುತ್ತಿದ್ದಾರೆ. ಕನ್ನೇರಿ ಕುನ್ನಿ ಕೇಳುವ ಪ್ರಶ್ನೆಗಳು ತುಂಬಾ ಸರಳ ಆದರೆ , ಆ ಸರಳ ಪ್ರಶ್ನೆಗಳಿಗೆ ತಿಣುಕಾಡುವ ತತ್ವದವರನ್ನು ನೋಡಿದಾಗ ನಿಜಕ್ಕೂ ಖೇದ ಅನಿಸುತ್ತೆ.
ಇಂದು ಹಿಂದುತ್ವದ ಲಿಂಗಾಯತರಿಗೂ , ಬಸವ ತತ್ವ ಮಾತಾಡುವ ಲಿಂಗಾಯತರಿಗೂ ದೊಡ್ಡ ಭೇದವೆನಿಲ್ಲ ಎಲ್ಲವೂ ಒಂದೇ ದೋಣಿಯ ಪಯಣಿಗರು. ದೇವರು , ಧರ್ಮ , ಮೌಢ್ಯ , ಕಂದಾಚಾರದ ಬಗ್ಗೆ ಮಾತಾಡುವವರ ಬದುಕು ಸಹ ಆ ಬಸವ ತತ್ವದಂತೆ ಇಲ್ಲ ಎನ್ನುವ ಕನ್ನೇರಿಯ ಪ್ರಶ್ನೆಗೆ ಮೂಕರಾಗಿದ್ದಾರೆ ಇಂದಿನ ಅನುಭಾವಿಗಳು ತತ್ವ ಹೇಳುವವರು.
ಕನ್ನೇರಿ ಸ್ವಾಮಿಗೆ ಉತ್ತರ ಹೇಳುವುದು ಎಷ್ಟು ಸುಲುಭ ಇದೆ ಅಂದ್ರೆ ಅದು ನೀರು ಕುಡಿದಷ್ಟು ಸುಲುಭ . ಆದರೆ ಇಂದಿನ ಬಸವ ತತ್ವ ಹೇಳುವ ಅನುಭಾವಿಗಳು, ಮಠಾಧೀಶರು ಮತ್ತು ನಮ್ಮಂತವರು ಎಷ್ಟೆ ವೈಚಾರಿಕ , ವೈಜ್ಞಾನಿಕ , ಪ್ರಗತಿಪರ ಎನ್ನುವವರು ಆಂತರ್ಯದಲ್ಲಿ ನಾವು ಮನುವಾದ , ಹಿಂದುತ್ವದ ಭಾಗವೆ ಆಗಿದ್ದಾರೆ. ಬಸವಾದಿ ಶರಣರು ಬರಿ ಮಾತಾಡಲಿಲ್ಲ ಅವರು ಮಾತಾಡಿದಂತೆ ನಡೆದುಕೊಂಡು.
ಇಂದು ಬಸವತತ್ವದ ಬಗ್ಗೆ ಮಾತಾಡುವ ಕರ್ನಾಟಕದ ಬಸವಪರ ಸಂಘಟನೆಗಳು ಮತ್ತು ವೇದಿಕೆಯ ಮೇಲೆ ಹಿಂದುತ್ವದ ಬಗ್ಗೆ ತಾಸುಗಟ್ಟಲೆ ಮಾತಾಡುವ ಅನುಭಾವಿಗಳು , ತತ್ವ ಹೇಳುವವರು ಯಾರು ಬಸವಣ್ಣನ ಆಸೆಯದಂತೆ ಬದುಕಿದ್ದಿರಿ? . ಬಹುತೇಕರ ಮನೆಗಳಲ್ಲಿ ಮೌಢ್ಯತೆ ಬಿಟ್ಟಿಲ್ಲ, ಪರೋಕ್ಷವಾಗಿ ದೇವರು ದಿಂಡರನ್ನು ಬಿಟ್ಟಿಲ್ಲ, ಮುಖ್ಯವಾಗಿ ಶರಣ ಆಸೆ ನಿರ್ಜಾತೀಕರಣನಾಗುವುದು , ಆದರೆ ಇಂದು ತತ್ವ ಹೇಳುವ ಅನುಭಾವಿಗಳು 99% ಜಾತಿ ಬಿಟ್ಟಿಲ್ಲ . ಹಿಂಗಾದಾಗಲೇ ಕನ್ನೇರಿಗೆ ಸೆಡ್ಡು ಹೊಡೆಯಲು ನಿಮ್ಮ ತಿಣುಕಾಟ.
ಈ ತತ್ವಗಳಂತೆ ಬದುಕಿದ 5% ಜನ ಇದ್ದರೆ ಸಾಕಾಗಿತ್ತು ಕನ್ನೇರಿ ಕುನ್ನಿಯ ಈ ಬೊಗಳುವಿಕೆಗೆ ಉತ್ತರ ಕೊಡಬಹುದಿತ್ತು . ಆದರೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂದು ತತ್ವ ಹೇಳುವ ಅನುಭಾವಿಗಳು ಸ್ವಾಮಿಗಳು ಒಂದಲ್ಲ ಒಂದು ರೀತಿ ಮನುವಾದದ ಮತ್ತು ಹಿಂದುತ್ವದ ಭಾಗವೆ ಆಗಿದ್ದಾರೆ . ಹಾಗಾಗಿ ಬನ್ನಹಟ್ಟಿ ಕನ್ನೇರಿ ಸ್ವಾಮಿಯ ಕೂಗು ಜೋರಾಗಿದೆ. ಕೇವಲ ವೇದಿಕೆಯ ಮೇಲೆ ಕೂಗಾಡುವುದು ಬಸವತತ್ವ ಅಲ್ಲ , ಬದುಕುವುದು ಬಸವತತ್ವ ಇಲ್ಲದಿದ್ದರೆ ಬಸವಾದಿ ಶರಣರು ಮುಂದೊಂದು ದಿನ ಹಿಂದುತ್ವದ ತಕ್ಕೆ ಹೋದರೂ , ನಾನಂತೂ ಆಶ್ಚರ್ಯಪಡಲ್ಲ. ಯಾಕೆಂದರೆ ” ಹೊರಗೆ ಭಕ್ತ ಒಳಗೆ ಕುಟಿಲ ಎಂಬ ಭಕ್ತರನ್ನೊಲ್ಲಯ್ಯಾ ಲಿಂಗವು ” ಎನ್ನುವ ಅಪ್ಪ ಬಸವಣ್ಣನ ಮಾತು ನಿಜ.
ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-೨೦೨೬ ನಿಮಿತ್ಯ ಅದ್ದೂರಿಯಾಗಿ ನಡೆದ ಬಂಜಾರ ಕವಿಗೋಷ್ಠಿ
ಜಾಹೀರಾತು
Banjara Poetry Festival held on the occasion of Banjara National Holi Festival-2026
ಕೊಪ್ಪಳ: ಹೋಳಿ ಹುಣ್ಣಿಮೆಯಂದು ನಡೆಯುವ ಹೋಳಿ ಹಬ್ಬವು ಬಂಜಾರ ಸಮುದಾಯದ ಅತ್ಯಂತ ಪ್ರಮುಖ ಆಚರಣೆಯಾಗಿದೆಎಲ್ಲಾ ತಾಂಡಾಗಳಲ್ಲೂ ಮಹಿಳೆ ಹಾಗೂ ಪುರುಷರು ವಿಶಿಷ್ಟ ಶೈಲಿಯ ಉಡುಪುಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಬಂಜಾರ ಜಾನಪದ ಹಾಡುಗಳನ್ನು ಹಾಡುತ್ತಾ ವೃತ್ತಾಕಾರದಲ್ಲಿ ನಗಾರಿ ಹಾಗೂ ತಮಟೆಯ ತಾಳಕ್ಕೆ ಕುಣಿದು ಉತ್ಸಾಹದಿಂದ ಆಚರಿಸುತ್ತಾರೆ
ಅದೇರೀತಿ ಕೊಪ್ಪಳದ ಐತಿಹಾಸಿಕ ಬಹಾದ್ದೂರ ಬಂಡೆಯಲ್ಲಿ ಇರುವ ಹಾತಿರಾಮ ಬಾವಾಜಿ ರವರ ಕಟ್ಟೆ ಆವರಣದಲ್ಲಿಮಾ-೩ ರಂದು ಮಹಿಳೆಯರ ಘೋಮರ್ ನೃತ್ಯ ಡೊಡೋ ನಂಗಾರ ನೃತ್ಯ ಪುರುಷರ ಲೆಹಂಗಿ ನೃತ್ಯ ವಾಜಾ-ಭಜನೆ ಅತ್ಯಂತ ಅದ್ಧೂರಿಯಾಗಿ ನಡೆದವು. ಇವರು ತಮ್ಮ ಹಾಡುಗಳಲ್ಲಿ ಹೋಳಿಯ ಹಿನ್ನೆಲೆ ಸಂಪ್ರದಾಯ ಪರಂಪರೆ ಕುರಿತು ಹೇಳುತ್ತಾ ಇಡೀ ರಾತ್ರಿ ಸಂಭ್ರಮಿಸಿ ಬೆಳಗಿನ ಜಾವ ಹೋಳಿ ದಹನ ಮಾಡಿ ಸಂಪನ್ನಗೊಳಿಸಿದರು. ಬಂಜಾರ ಸಮುದಾಯದ ವಿಶಿಷ್ಠ ಭಾಷೆ ಕಲೆ ಸಂಸ್ಕೃತಿ ಪರಂಪರೆ ಹಬ್ಬ ಹರಿದಿನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹುಣ್ಣಿಮೆಯಂದುರಾಷ್ಟ್ರೀಯ ಹೋಳಿ ಉತ್ಸವ-೨೦೨೬ ರ ನಿಮಿತ್ಯ ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು (ರಿ.) ರಾಜ್ಯ ಘಟಕದ ವತಿಯಿಂದ ಉತ್ಸವದ ವೇದಿಕೆಯಲ್ಲಿ ಬಂಜಾರರ ಸಾಹಿತ್ಯದ ರಾಜ್ಯ ಮಟ್ಟದ ಕವಿಗೋಷ್ಠಿ ರ್ಪಡಿಸಲಾಗಿತ್ತು”
ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ ಎಸ್ಆರ್ ಸರೋಜಮ್ಮ ಬಾಲಕಿಯರ ಪದವಿಪರ್ವ ಕಾಲೇಜಿನ ಪ್ರಾಂಶುಪಾಲರಾದ ಇತಿಹಾಸ ಸಂಶೋಧಕರಾದ ಡಾ. ರವಿ ಚವ್ಹಾಣ ರವರು ಮಾತನಾಡಿ ಬಂಜಾರರ ಮೂಲ ಇತಿಹಾಸ ಸಾಹಿತ್ಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕವನಗಳ ಮೂಲಕ ಪ್ರಚುರಪಡಿಸಿದ್ದು ಬಹಳ ಹೆಮ್ಮೆಯ ವಿಷಯ ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕವಿಗೋಷ್ಠಿಸಹಕಾರಿಯಾಗಿ ಇಂದಿನ ಯುವ ಪೀಳಿಗೆ ಮೊಬೈಲ್ ಹಾಗೂ ಡಿ.ಜೆ. ಹುಚ್ಚಿನಿಂದ ಹೊರಬಂದು ಉನ್ನತ ವಿದ್ಯಾಭ್ಯಾಸ ಪಡೆದು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಶ್ರೀ ಗುರು ಗೋಸಾವಿ ಬಾವಾನವರು ಆಶರ್ವಚನ ನೀಡಿದರು.ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಜಾಧವ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷರಾದ ಛತ್ರಪ್ಪ ತಂಬೂರಿರವರು ಆಶಯ ನುಡಿಗಳನ್ನು ಹೇಳಿದರು ಯಾದಗಿರಿಯ ಸುರ್ಣಬಾಯಿ ರಾಠೋಡ ಹಾಗೂ ಡಾ. ಮಿಟ್ಯಾ ನಾಯ್ಕ ರವರು ಕರ್ಯಕ್ರಮವನ್ನುನಿರೂಪಿಸಿದರು. ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶ ರಾಠೋಡ ತರಲಕಟ್ಟಿ ಹಾಗೂ ಶಿವಾನಂದ ನಾಯ್ಕ ಮುಖ್ಯ ಅಭಿಯಂತರರು ರವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಮಾತನಾಡಿ ವಂದಿಸಿದರು.
ಕೊಪ್ಪಳ ಮಾರ್ಚ್ 05 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್ವ್ಯೂವನ್ನು ಮಾರ್ಚ್ 9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಈ ವಾಕ್ ಇನ್ ಇಂಟರ್ವ್ಯೂವದಲ್ಲಿ ದಿವ್ಗಿ ಟಾರ್ಕ್ ಟ್ರಾನ್ಸಫರ್, ಶಿರಸಿ, ಉತ್ತರ ಕನ್ನಡ ಜಿಲ್ಲೆ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ ಮಶೀನ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಿದ್ದಾರೆ. ಆದ್ದರಿಂದ ಐ.ಟಿ.ಐ(ಫಿಟ್ಟರ್), ಐ.ಟಿ.ಐ(ಟರ್ನರ), ಐ.ಟಿ.ಐ(ಮಶಿನಿಷ್ಟ್) ಹಾಗೂ ಬಿಎಸ್ಸಿ, ಬಿಕಾಂ, ಬಿಎ ಅಭ್ಯರ್ಥಿಗಳು ಮತ್ತು ಡಿಪ್ಲೊಮಾ ಮೆಕ್ಯಾನಿಕಲ್, ಆಟೋಮೊಬೈಲ್, ಟೂಲ್ & ಡೈಮೆಕಿಂಗ್ ವೃತ್ತಿಗಳಲ್ಲಿ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳು ಹಾಜರಾಗಬಹುದು. ಅಲ್ಲದೇ ಜಿಟಿಟಿಸಿ ಕೊಪ್ಪಳ ರವರು ತಮ್ಮಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಿದ್ದು, ಡಿಪ್ಲೋಮಾ (ಟೂಲ್ & ಡೈಮೇಕಿಂಗ್), ಬಿಇ(ಇ&ಇ), ಬಿಇ(ಇ&ಸಿ), ಪೋಸ್ಟ ಡಿಪ್ಲೋಮಾ-ಟೂಲ್ & ಡೈಮೇಕಿಂಗ್ ವಿದ್ಯಾರ್ಹತೆಯ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಇದಲ್ಲದೇ ದೆಶಪಾ಼ಂಡೆ ಸ್ಕಿಲ್ಲಿಂಗ್ ರವರು ತಮ್ಮಲ್ಲಿ ಖಾಲಿ ಇರುವ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಟ್ರೆöÊನರ್ ಹುದ್ದೆಗಳಿಗೆ ಗದಗ ಹಾಗೂ ಕೊಪ್ಪಳ ಜಿಲ್ಲಾದ್ಯಾಂತ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದು, ಕೆಲಸದ ಅನುಭವ ಇದ್ದವರಿಗೆ ಆದ್ಯತೆ ಇರುತ್ತದೆ. ಅರ್ಹ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಹೊಂದಿದ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತ 18 ರಿಂದ 34 ವರ್ಷ ನಿರುದ್ಯೋಗಿ ಪುರಷರು ಹಾಗೂ ಮಹಿಳೆಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜೂಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು https://forms.gle/bYm5KEikfXAVCP2E7 ಮೂಲಕವು ರಿಜಿಸ್ಟರ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Land for Koppal Municipality's shelter project: Applications invited from owners
ಕೊಪ್ಪಳ ನಗರಸಭೆಯ ಆಶ್ರಯ ಯೋಜನೆಗೆ ಜಮೀನು: ಮಾಲೀಕರಿಂದ ಅರ್ಜಿ ಆಹ್ವಾನ
ಜಾಹೀರಾತು
ಕೊಪ್ಪಳ ಮಾರ್ಚ್ 05 (ಕರ್ನಾಟಕ ವಾರ್ತೆ): ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಚನೆ ಮಾಡಲು ಕೊಪ್ಪಳ ನಗರಸಭೆಗೆ ಜಮೀನು ಅವಶ್ಯಕವಾಗಿದ್ದು, ಆಸಕ್ತ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಆದರೆ, ಸ್ವಂತ ನಿವೇಶನ ಹೊಂದದೇ ಇರುವಂಥಹವರಿಗೆ ನಗರ ಆಶ್ರಯ ಯೋಜನೆ ಅಡಿಯಲ್ಲಿ ಹೊಸದಾಗಿ ಜಮೀನನ್ನು ಖರೀದಿಸಿ ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ವ್ಯಾಪ್ತಿ ಒಳಗೆ ಜಮೀನಿನ ಅವಶ್ಯಕತೆ ಇರುತ್ತದೆ. ಸರ್ಕಾರದ ದರಕ್ಕೆ ಅನುಗುಣವಾಗಿ ಜಮೀನನ್ನು ಖರೀದಿಗೆ ಕೊಡಲು ಇಚ್ಚೆಯುಳ್ಳ ಜಮೀನಿನ ಮಾಲೀಕರುಗಳು ತಮ್ಮ ಜಮೀನಿನ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಫಾರಂ ನಂಬರ್-10, ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ಒಳಗೆ ಇರುವ ಬಗ್ಗೆ ದೃಢೀಕರಣ ಪತ್ರ, ಜಮೀನನ್ನು ಆಶ್ರಯ ಯೋಜನೆ ಅಡಿ ಖರೀದಿಗೆ ಕೊಡಲು ಒಪ್ಪಿಗೆ ಇರುವ ಬಗ್ಗೆ ಜಮೀನಿನ ಮಾಲೀಕರು ಹಾಗೂ ಅವರ ಕುಟುಂಬದ ಸರ್ವ ಸದಸ್ಯರುಗಳ ಒಪ್ಪಿಗೆ ಇರುವ ಬಗ್ಗೆ ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರ, ಈ ಎಲ್ಲಾ ಅಗತ್ಯ ದಾಖಲಾತಿಗಳೊಂದಿ ಮಾರ್ಚ್ 31ರ ಒಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Violent protest if Valmiki community is not appointed in government jobs as per revised reservation
ವಾಲ್ಮೀಕಿ ಜನಾಂಗಕ್ಕೆ ಪರಿಷ್ಕೃತ ಮೀಸಲಾತಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ
ಜಾಹೀರಾತು
ಬೆಂಗಳೂರು,ಮಾ.5: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ವರದಿ ಆಧಾರದ ಮೇಲೆ ಹೆಚ್ಚಿಸಲಾಗಿರುವ ಮೀಸಲಾತಿ ಪ್ರಮಾಣವನ್ನು ಅಳವಡಿಸಿಕೊಂಡು ಸರ್ಕಾರಿ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗಕ್ಕೆ ಭಾರೀ ಅನ್ಯಾವಾಗಲಿದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಬೆಳ್ಳಿ ಗಂಗಾಧರ ಅವರು, ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಸದುದ್ದೇಶವನ್ನು ಉಚ್ಛನ್ಯಾಯಾಲಯದ ಅವಗಾಹನೆಗೆ ತಂದು ಇದೀಗ ಉದ್ಭವಸಿರುವ ತೊಂದರೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪರಿಶಿಷ್ಟ ವಾಲ್ಮೀಖಿ ಸಮಾಜಕ್ಕೆ ಆಗಲಿರುವ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42.49 ಲಕ್ಷ ಮತ್ತು ಪರಿಶಿಷ್ಟ ಜಾತಿ ಜನಸಂಖ್ಯೆ 1.04 ಕೋಟಿಗಳಿಗೂ ಹೆಚ್ಚಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಅನುಕ್ರಮವಾಗಿ ಶೇಕಡ 7 ಮತ್ತು ಶೇಕಡ 17 ರಷ್ಟಿದೆ. ಅದರ ವ್ಯಾಪ್ತಿಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಈ ಜನಾಂಗದವರ ಪ್ರಾತಿನಿಧ್ಯತೆ ಇವರ ಜನಸಂಖ್ಯೆಗೆ ಅನುಗುಣವಾಗಿ ಇಲ್ಲದೇ ಇರುವುದನ್ನು ಸರ್ಕಾರದ ಗಮನಕ್ಕೆ ಕಾಲ ಕಾಲಕ್ಕೆ ತಂದಿದ್ದರೂ ಸಹ 1954 ರಲ್ಲಿ ನಿಗದಿ ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7 ಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17 ಕ್ಕೆ ಹೆಚ್ಚಿಸದೇ ಇದ್ದ ಕಾರಣ 2022 ರಲ್ಲಿ ತಮ್ಮ ನೇತೃತ್ವದಲ್ಲಿ ಸಮುದಾಯಗಳು ನಡೆಸಿದ 257 ದಿನಗಳ ಸುಧೀರ್ಘ ಹೋರಾಟದ ಫಲವಾಗಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಏಕ ಸದಸ್ಯ ಆಯೋಗ ರಚಿಸಿ, ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಪರಿಶಿಷ್ಟ ಪಂಗಡದವರಿಗೆ ಚಾಲ್ತಿಯಲ್ಲಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17 ಕ್ಕೆ ಹೆಚ್ಚಿಸಿತು ಎಂದರು.
ಈ ಆದ್ಯಾದೇಶದ ಮೇರೆಗೆ ನೇಮಕಾತಿಗಳಲ್ಲಿ ರೋಸ್ಟರ್ ಬಿಂದುಗಳನ್ನು ನೇರನೇಮಕಾತಿ ಮತ್ತು ಬಡ್ತಿ ನೇಮಕಾತಿಗಳಲ್ಲಿ ಹೊಸದಾಗಿ ಅಳವಡಿಸಿಕೊಂಡು ನೇಮಕಾತಿ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶಗಳಿಂದ ಬಾಧಿತರಾದವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಘನ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇವುಗಳ ಆಧಾರದ ಮೇಲೆ ಉಚ್ಛನ್ಯಾಯಾಲಯ ಕಳೆದ ನವೆಂಬರ್ 27 ರಂದು ಮಧ್ಯಂತರ ಆದೇಶ ನೀಡಿ ಹೆಚ್ಚಿಸಲಾದ ಮೀಸಲಾತಿ ಪ್ರಮಾಣದಂತೆ ಯಾವುದೇ ನೇಮಕಾತಿಯ ಬಗ್ಗೆ ಘನ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಧಿಸೂಚನೆಗಳನ್ನು ಹೊರಡಿಸಬಾರದೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದಾಗ್ಯೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಮಾಡಲು ಮುಂದಾಗಿರುವುದು ಆತಂಕಕಾರಿ ಎಂದರು.
ಆದರೆ ಈ ಆದೇಶಗಳಿಂದ ಅನೇಕ ವರ್ಷಗಳಿಂದ ಸಾರ್ವಜನಿಕ ನೇಮಕಾತಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಸೂಕ್ತ ಪ್ರಾತಿನಿದ್ಯ ಸಿಗದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಯುವ ಸಮೂಹ ಮತ್ತು ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಪಂಪಾಪತಿ, ಪ್ರೊ. ಗೋಪಾಲ ಕೃಷ್ಣ ಮತ್ತು ವಾಲ್ಮೀಕಿ ಸಮಾಜದ ಸಂಘಟನೆಗಳ ಮುಖಂಡರು ಹಾಜರಿದ್ದರು.
Devotional film “Shri Jagannatha Dasaru – Part 2” to be screened at Gangavathi on March 6
ಭಕ್ತಿ ಪ್ರಧಾನ ಚಿತ್ರ “ಶ್ರೀ ಜಗನ್ನಾ ಥ ದಾಸರು – ಭಾ ಗ 2” ಮಾರ್ಚ್6ರಂ ದು ಗಂಗಾವತಿಯಲ್ಲಿ ಪ್ರದರ್ಶ ನ
ಜಾಹೀರಾತು
ಗಂಗಾವತಿ: ಕಳೆದ ನಾ ಲ್ಕು ವಾ ರಗಳಿಂ ದ ರಾ ಜ್ಯಾ ದ್ಯಂ ತ ಯಶಸ್ವಿ ಪ್ರದರ್ಶ ನ ಕಾ ಣು ತ್ತಿರು ವ ಭಕ್ತಿಪ್ರಧಾ ನ ಕನ್ನಡ ಚಿತ್ರ “ಶ್ರೀ ಜಗನ್ನಾ ಥ ದಾ ಸರು – ಭಾ ಗ 2” ಇದೇ ಮಾ ರ್ಚ್ 06ರಂ ದು ಗಂ ಗಾ ವತಿಯಲ್ಲಿ ಪ್ರದರ್ಶ ನಗೊ ಳ್ಳಲಿದೆ. ಹರಿದಾ ಸ ಪರಂ ಪರೆಯ ಮಹಾ ನ್ ಸಂ ತ, ಶ್ರೀ ಜಗನ್ನಾ ಥ ದಾ ಸರ ಜೀ ವನ ಸಂ ದೇ ಶವನ್ನು ಮನಮು ಟ್ಟು ವ ರೀ ತಿಯಲ್ಲಿ ತೆರೆದಿಡು ವ ಈ ಚಿತ್ರವು ರಾ ಜ್ಯ ದ ವಿವಿಧ ಭಾ ಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾ ಗಿ ಪ್ರದರ್ಶ ನ ಕಾ ಣು ತ್ತಿದೆ. ಗಂ ಗಾ ವತಿಯ ಶಿವೆ ಚಿತ್ರಮಂ ದಿರದಲ್ಲಿ ಚಿತ್ರದ ಫಸ್ಟ್ ಶೋ ಹಾ ಗೂ ಸೆಕಂ ಡ್ ಶೋ ಪ್ರದರ್ಶ ನಗೊ ಳ್ಳಲಿದ್ದು , ಸಿನಿ ಪ್ರೇ ಮಿಗಳು ಹೆಚ್ಚಿನ ಸಂ ಖ್ಯೆ ಯಲ್ಲಿ ಆಗಮಿಸಿ ಚಿತ್ರವನ್ನು ವೀ ಕ್ಷಿಸು ವಂ ತೆ ಮನವಿ ಮಾ ಡಲಾ ಗಿದೆ. ಈಗಾ ಗಲೇ ವಿವಿಧ ರಾ ಜ್ಯ ಗಳಲ್ಲಿ ಮತ್ತು ಅಮೆರಿಕ, ಲಂ ಡನ್, ಕ್ಯಾ ಲಿಫೋ ರ್ನಿ ಯಾ ವಿವಿಧ ದೇ ಶಗಳಲ್ಲಿ ಅಂ ತರರಾ ಷ್ಟ್ರೀ ಯ ಮಟ್ಟದಲ್ಲಿ ಪ್ರದರ್ಶ ನಗೊ ಳ್ಳು ತ್ತಿರು ವ ಯಶಸ್ವಿ ಜನಮನ್ನಣೆ ಪಡೆದ ಈ ಚಿತ್ರದಲ್ಲಿ ಗಂ ಗಾ ವತಿಯವರೇ ಆದ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ ಹಾ ಗೂ ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಅವರು ಅಭಿನಯಿಸಿರು ವು ದು ಸ್ಥಳೀ ಯರಿಗೆ ಮತ್ತಷ್ಟು ಹೆಮ್ಮೆ ಯ ಸಂ ಗತಿಯಾ ಗಿದೆ. ಅವರ ಅಭಿನಯ ಚಿತ್ರಕ್ಕೆ ವಿಶೇ ಷ ಮೆರಗು ತಂ ದಿದೆ ಎಂ ದು ತಿಳಿಸಲಾ ಗಿದೆ. ಜಗನ್ನಾ ಥ ದಾ ಸರ ಭಕ್ತಿ, ತತ್ವ ಮತ್ತು ಅವರ ಜೀ ವನದ ಮಹತ್ತರ ಸಂ ದೇ ಶವನ್ನು ಇಂ ದಿನ ಪೀ ಳಿಗೆಗೆ ತಲು ಪಿಸು ವ ಉದ್ದೇ ಶದಿಂ ದ ನಿರ್ಮಾ ಣವಾ ದ ಈ ಚಿತ್ರವು ಪ್ರೇ ಕ್ಷಕರ ಮನಸ್ಸಿನಲ್ಲಿ ಭಕ್ತಿಯ ಸ್ಪಂ ದನ ಮೂ ಡಿಸು ವಂ ತಹದ್ದಾ ಗಿದೆ. ಈ ಸಂ ದರ್ಭ ದಲ್ಲಿ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ, ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಹಾ ಗೂ ಹಿರಿಯ ವಕೀ ಲರು ಶರದ್ ದಂ ಡಿನ್ ಅವರು ಸಿನಿಪ್ರಿಯರಿಗೆ ಮನಪೂ ರ್ವ ಕ ಆಹ್ವಾ ನ ನೀ ಡಿದ್ದು , ಭಕ್ತಿ ಪರಂ ಪರೆಯ ಮಹಿಮೆ ತಿಳಿಸು ವ ಈ ಚಿತ್ರವನ್ನು ಕು ಟುಂ ಬ ಸಮೇ ತರಾ ಗಿ ಬಂ ದು ವೀ ಕ್ಷಿಸು ವಂ ತೆ ಕರೆ ನೀ ಡಿದ್ದಾ ರೆ. “ಇದು ಕೇ ವಲ ಒಂ ದು ಸಿನಿಮಾ ಅಲ್ಲ; ನಮ್ಮ ಸಂ ಸ್ಕೃ ತಿ, ಭಕ್ತಿ ಮತ್ತು ದಾ ಸ ಸಾ ಹಿತ್ಯ ದ ಅಮೂ ಲ್ಯ ಪರಂ ಪರೆಯನ್ನು ಪರಿಚಯಿಸು ವ ಒಂ ದು ಪವಿತ್ರ ಪ್ರಯಾ ಣ. ಪ್ರತಿಯೊಬ್ಬ ರೂ ತಮ್ಮ ಕು ಟುಂ ಬದವರೊಂ ದಿಗೆ ಬಂ ದು ಈ ಚಿತ್ರವನ್ನು ವೀ ಕ್ಷಿಸಿ ಭಕ್ತಿಯ ಸೌಂ ದರ್ಯ ವನ್ನು ಅನು ಭವಿಸಬೇ ಕು ,” ಎಂ ದು ಅವರು ತಿಳಿಸಿದ್ದಾ ರೆ. ಆದ್ದರಿಂ ದ ಗಂ ಗಾ ವತಿ ಹಾ ಗೂ ಸು ತ್ತಮು ತ್ತಲಿನ ಭಾ ಗದ ಸಿನಿಪ್ರಿಯರು ಮಾ ರ್ಚ್ 06ರಂ ದು ಶಿವೆ ಚಿತ್ರಮಂ ದಿರದಲ್ಲಿ ಪ್ರದರ್ಶ ನಗೊ ಳ್ಳು ವ “ಶ್ರೀ ಜಗನ್ನಾ ಥ ದಾ ಸರು – ಭಾ ಗ 2” ಚಿತ್ರವನ್ನು ತಪ್ಪದೆ ವೀ ಕ್ಷಿಸಿ ಈ ಭಕ್ತಿ ಪರಂ ಪರೆಯ ಅದ್ಭು ತ ಅನು ಭವದ ಭಾ ಗವಾ ಗಬೇ ಕೆಂ ದು ಕೋ ರಲಾ ಗಿದೆ. ಮಾ ಹಿತಿಗಾ ಗಿ:
ಗಂಗಾವತಿಯ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ಪದಾಧಿಕಾರಿಗಳು
ಜಾಹೀರಾತು
Retired teacher Sahitya Kulkarni receives a message from Kasapa. Executive committee meeting regarding the 9th Taluk Sammelan.
ನಿವೃತ್ತ ಶಿಕ್ಷಕ ಸಾಹಿತಿ ಕುಲಕರ್ಣಿಗೆ ಕಸಾಪದಿಂದ ನುಡಿನಮನ೯ನೇ ತಾಲ್ಲೂಕು ಸಮ್ಮೇಳನದ ಬಗ್ಗೆ ಕಾರ್ಯಕಾರಿ ಸಮತಿ ಸಭೆ
ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲ್ಲೂಕುಮಟ್ಟದ ೯ನೇ ಸಮ್ಮೇಳನವನ್ನು ಈ ಬಾರಿ ಗ್ರಾಮೀಣ ಪ್ರದೇಶಕ್ಕೆ ಆತಿಥ್ಯ ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕಸಾಪದ ಗಂಗಾವತಿ ತಾಲ್ಲೂಕು ಅಧ್ಯಕ್ಷ ರುದ್ರೇಶ ರ್ಹಾಳ ಹೇಳಿದರು. ನಗರದ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ನಿಧನನಕ್ಕೆ ಕಸಾಪದಿಂದ ನುಡಿ ನಮನ ಸಲ್ಲಿಸಲಾಯಿತು. ಬಳಿಕ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಸಮ್ಮೇಳನ ನಡೆಸುವ ಬಗ್ಗೆ ಕಾರ್ಯಕಾರಿ ಮಂಡಳಿಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಬಾರಿ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಹಳ್ಳಿಗಾಡಿನ ಸೊಗಡಿನಲ್ಲಿ ಕನ್ನಡದ ಕಂಪನ್ನು ಚಲ್ಲೊಣ ಎಂದರು. ಗ್ರಾಮೀಣ ಪ್ರದೇಶ ರ್ಹಾಳ, ಕೇಸರಹಟ್ಟಿ, ಹೇರೂರು, ಬಸಾಪಟ್ಟಣ, ಹಿರೇಬೆಣಕಲ್, ವೆಂಕಟಗಿರಿ ಸೇರಿದಂತೆ ವಿವಿಧ ಗ್ರಾಮಗಳ ಹೆಸರು ಪ್ರಸ್ತಾಪವಾದವು. ಆದರೆ ಯಾವ ಗ್ರಾಮಸ್ಥರು ಮೊದಲಿಗೆ ಆಸಕ್ತಿ ವಹಿಸಿ ಆತಿಥ್ಯ ನೀಡಲು ಮುಂದೆ ಬರುತ್ತಾರೋ ಆ ಗ್ರಾಮಕ್ಕೆ ಸಮ್ಮೇಳನ ನಡೆಸುವ ಅವಕಾಶ ಮಾಡಿ ಕೊಡೋಣ ಎಂಬ ಸಲಹೆ ವ್ಯಕ್ತವಾಯಿತು. ಎಪ್ರಿಲ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಆ ಬಳಿಕವೇ ಸಮ್ಮೇಳನ ಆಯೋಜಿಸಬೇಕು. ಎಪ್ರಿಲ್ ಎರಡು ಅಥವಾ ಮೂರನೇ ವಾರದಲ್ಲಿ ಸಮ್ಮೇಳನ ಆಯೋಜಿಸಿದರೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಸದಸ್ಯರು ವ್ಯಕ್ತಪಡಿಸಿದರು. ಈ ಮಧ್ಯೆ ತಾಲ್ಲೂಕು ಮಟ್ಟದ ಸಮ್ಮೇಳನ ಮೇ ತಿಂಗಳಿಗೆ ಹೋದರೆ ಆ ತಿಂಗಳಲ್ಲಿ ಕೊಪ್ಪಳ ಜಿಲ್ಲಾ ಸಮ್ಮೇಳನ, ಆನೆಗೊಂದಿ ಉತ್ಸವದಂತ ಕಾರ್ಯಕ್ರಮ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ದಿನಾಂಕ ಹೊಂದಿಸಿಕೊAಡು ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು.
ಒಂದೇ ದಿನಕ್ಕೆ ಸೀಮಿತ: ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಖರ್ಚು-ವೆಚ್ಚ, ಕಾರ್ಯಕ್ರಮಗಳ ದೃಷ್ಟಿಯಿಂದ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಸಮ್ಮೇಳನದ ಗೋಷ್ಠಿಗಳಿಗೂ ಕಡಿವಾಣ ಹಾಕಿ ಮಹತ್ವದ ವಿಚಾರ ಗೋಷ್ಠಿಗಳಿಗೆ ಆದ್ಯತೆ ನೀಡುವುದು, ಆಯಾ ಸ್ಥಳೀಯ ಕಲಾವಿದರು, ಸಾಹಿತಿಗಳಿಗೆ ವೇದಿಕೆಯಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಯಿತು. ಕಸಾಪದಿಂದ ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಇದೇ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕುಲಕರ್ಣಿಗೆ ನುಡಿ-ನಮನ: ಇದಕ್ಕೂ ಮೊದಲು ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಗೌರವಾರ್ಥ ನುಡಿ ನಮನ ಸಲ್ಲಿಸಲಾಯಿತು. ಸಿಪಿಎಸ್, ಹಿರೇಜಂತಕಲ್ ಸೇರಿದಂತೆ ಶಿಕ್ಷಕರಾಗಿ ವೆಂಕಟ್ರಾವ್ ೩೮ ವರ್ಷ ಕಳೆದಿದ್ದರ ಬಗ್ಗೆ ಸಭೆಯಲ್ಲಿ ಸ್ಮರಿಸಲಾಯಿತು. ಕಸಾಪದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅಂಗಡಿ ಶ್ರೀನಿವಾಸ ಮಾತನಾಡಿ, ವೆಂಕಟ್ರಾವ್ ಉತ್ತಮ ಸಾಹಿತಿಯಾಗಿದ್ದರು. ನಾಲ್ಕು ಪುಸ್ತಕಗಳ್ನು ರಚಿಸಿದ್ದಲ್ಲದೇ, ದಾಸ ಸಾಹಿತ್ಯ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು. ಕಸಾಪದ ಪದಾಧಿಕಾರಿಗಳಾದ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ ಮರಳಿ, ತಾಲೂಕಾ ಕೋಶಾಧ್ಯಕ್ಷ ಚಂದ್ರಶೇಖರ ಅಕ್ಕಿ, ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಗೌರವ ಕಾರ್ಯದರ್ಶಿ ರಮೇಶ ಬಾಳಿಕಾಯಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಮಟ್ಟಿ, ಗೌರವ ಸಲಹೆಗಾರ ಶಿವಾನಂದ ಶಿಳ್ಳಿನ್, ಮಂಜುನಾಥ ಕುರಿ ಇತರರಿದ್ದರು.
The farmers' struggle in the Hanur assembly constituency has entered its 131st day.
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 131 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ .
ಜಾಹೀರಾತು
ವರದಿ: ಬಂಗಾರಪ್ಪ .ಸಿ . ಹನೂರು : ರೈತರ ಜಮೀನುಗಳಿಗಾಗಿ ನೀರು ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿಯು ಮಾಡುತ್ತಿರುವ ಹೋರಾಟಕ್ಕೆ ದಿನೆ ದಿನೆ ಕಾವು ಪಡೆದುಕೊಳ್ಳುವಂತೆ ತಿವ್ರಗೊಳಿಸಲಾಗುತ್ತದೆ ,
ಹನೂರು ತಾಲ್ಲೂಕಿನ ವಡಕೆಹಳ್ಳದಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ 130 ದಿನ ಮುಗಿದು 131 ನೇ ದಿನಕ್ಕೆ ಕಾಲಿಟ್ಟಿದೆ,
ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು130ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ, ಈ ಭಾಗದ ಶಾಸಕರು ರೈತರ ರೈತರ ಮಧ್ಯೆ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದು ಈ ಭಾಗದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಹೊರತು ಸಂಪೂರ್ಣ ಬರಗಾಲವನ್ನು ಹೊರ ಹಾಕುವ ಯೋಜನೆಗೆ ಸಹಕರಿಸುತ್ತಿಲ್ಲ ಜೊತೆಗೆ ಉಸ್ತುವಾರಿ ಸಚಿವರು ಡಿಪಿಆರ್ ಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು ಅದು ಕೂಡ ಕಾರ್ಯಗತ ಆಗಿಲ್ಲ ಆದ್ದರಿಂದ ರೈತರೇ ಯೋಜನೆಯ ಸಂಪೂರ್ಣ ವೆಚ್ಚ ಬರಿಸಿ ಬರಗಾಲವನ್ನು ಆಚೆ ಹಾಕಲು ರೈತರು ನಿರ್ಧರಿಸಿರುವುದರಿಂದ ಸರ್ಕಾರ ರೈತರ ಜೊತೆ ಸಹಕರಿಸಬೇಕೆಂದು ಧರಣಿ ನಿರತರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಧರಣಿಯಲ್ಲಿ ಅರ್ ಅರ್ಪುದರಾಜ್, ಪೌಲ್ ಧರ್ಮ ರಾಜ್,, ಜಾನ್ ಪಾಲ್ ,ಮಲ್ಲೇಶ್,ಚಂದ್ರಪ್ಪ, ಬಸವಣ್ಣ, ಬಸವರಾಜಪ್ಪ,ಮಣಿಮಲ್ಲಮ್ಮ,ಗಾಂದಮ್ಮ ಮಹದೇವಮ್ಮ,ಪಾರ್ವತಿಯಮ್ಮ, ರತ್ನಮ್ಮ, ಚೆನ್ನಬಸಪ್ಪ, ಗುಂಡಣ್ಣ, ಇನ್ನೂ ಅನೇಕ ಜನ ದಂಟಳ್ಳಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಕೈವಾರ ಸಧ್ಗುರು ಯೋಗಿನಾರೇಯಣರ ಪರಿಚಯ ಹಾಗೂ ಯತೀಂದ್ರ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ : ಗೋಪಾಲ ಕೃಷ್ಣ.
ಜಾಹೀರಾತು
Introduction of Kaivara Sadhguru Yoginareyan and welcome to the Yathindra Sri Award ceremony: Gopala Krishna.
ವರದಿ: ಬಂಗಾರಪ್ಪ .ಸಿ . ಹನೂರು : ಸನಾತನ ಧರ್ಮ ಗುರುಗಳಾದ ಶ್ರೀ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ* ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಸರ್ವರು ಆಗಮಿಸಿ ಎಂದು ಹನೂರು ಬಣಜಿಗ /ಬಲಿಜ ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾದ ಗೋಪಾಲ ಕೃಷ್ಣ ರವರು ತಿಳಿಸದರು. ನಂತರ ಮಾತನಾಡಿದ ಅವರು ಇದೇ ತಿಂಗಳು ದಿನಾಂಕ 22/03/2026 ನೇ ಭಾನುವಾರ ಸಮಯ ಬೆಳಿಗ್ಗೆ 8.30 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಸ್ಥಳ : ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ , ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೇಲ್ಕಂಡ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮತ್ತು ಹನೂರು ತಾಲೂಕು ಎಲ್ಲ ಸಮುದಾಯದವರು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮಕ್ಕಳ ಆರೋಗ್ಯಕ್ಕೆ ಮುಂಜಾಗ್ರತೆ ಅಗತ್ಯ-ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್
ಜಾಹೀರಾತು
Precaution is necessary for children's health-Child Development Project Director Jayashree, R
ಗಂಗಾವತಿ, 05:ತಾಲೂಕಿನಲ್ಲಿ ಈ ವರ್ಷ ಬೇಸಿಗೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಬಿಸಿಗಾಳಿ ಬೀಸುವ ಸಂಭವನೀಯತೆ ತಾಲೂಕಿನಲ್ಲಿ ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚಿದೆ.
ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಜಾಸ್ತಿ ಕಂಡು ಬಂದ ಹಿನ್ನೆಲೆ ವಿಶೇಷವಾಗಿ ತಾಲ್ಲೂಕಿನ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್ ತಿಳಿಸಿದ್ದಾರೆ. ಗಂಗಾವತಿ ತಾಲ್ಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಹೆಚ್ಚು ನೀರನ್ನು ಕುಡಿಸಲು ಮುಂದಾಗಬೇಕು.
ಮಕ್ಕಳ ಪಾಲಕರಿಗೆ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಹಾಗೂ ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸುವುದಕ್ಕೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.
ಪಾಲಕರು ಸಣ್ಣ ಮಕ್ಕಳನ್ನು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆಯ ನಂತರ ಹೊರಗಡೆ ಓಡಾಡುವುದಕ್ಕೆ ಬಿಡಬೇಕು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಿತ್ತಳೆ, ಸೇಬು. ಅತಿ ಹೆಚ್ಚು ನೀರಿನ ಅಂಶ ಇರುವ ಹಣ್ಣುಗಳನ್ನು ಮಕ್ಕಳಿಗೆ ನೀಡಿ. ಬೇಕರಿ ಪದಾರ್ಥ ಸಕ್ಕರೆ ಅಂಶ ಇರುವ ಆಹಾರವನ್ನು ಆದಷ್ಟು ಮಕ್ಕಳಿಗೆ ನೀಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್ ಪ್ರಕಟಣೆಯಲ್ಲಿ ತಿಳಿಸಿದೆ.
Amareshwara Chariot Festival celebrated with great enthusiasm by the people of Lingadahalli
ಲಿಂಗದಹಳ್ಳಿ ಸಡಗರ ಸಂಭ್ರಮದಿಂದ ಜರಗಿದ ಅಮರೇಶ್ವರ ರಥೋತ್ಸವ
ಜಾಹೀರಾತು
ಕುಷ್ಟಗಿ:ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ಸಂಜೆ 6:50 ಕ್ಕೆ ಸಡಗರ, ಸಂಭ್ರಮದಿಂದ ಜರಗಿತ್ತು.
ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಬೆಳ್ಳಗೆ ದೇವರ ಮೂರ್ತಿಗೆ ಹಾಲಿನ ಅಭಿಷೇಕ, ಎಲೆ ಚೆಟ್ಟು ಕಟ್ಟುವುದು ನಡೆಯಿತ್ತು ಹಾಗೂ ವಿವಿಧ ಗ್ರಾಮಗಳಿಂದ ಬಂದಿರುವ ಹಲವಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿದರು ಹಾಗೂ ಬೆಳ್ಳಗೆ 9:00 ಕ್ಕೆ ನೂರಾರು ಮಹಿಳೆಯರಿಂದ ಕುಂಭ, ಕಳಸ ಮೆರವಣಿಗೆ ನಡೆಯಿತು ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ನಡೆದವು.
ಅಂಕಲಿ ಮಠದ ನಿರುಪಾದೆಪ್ಪ ಅಪ್ಪನವರಿಂದ ಮದವೆಯಾದ ನವ ದಂಪತಿಗಳಿಗೆ ಮತ್ತು ಜಾತ್ರೆಗೆ ಬಂದ ಭಕ್ತರಿಗೆ ಆಶೀರ್ವದಿಸಿ ಪ್ರವಚನ ನೀಡಿದರು ಹಾಗೂ ಸಂಜೆ ಹೊಮ್ಮಿ ನಾಳ ಗ್ರಾಮದಿಂದ ರಥೋತ್ಸವ ಎಳೆಯಲು ಎತ್ತಿನ ಬಂಡಿಯಲ್ಲಿ ಮೇರವಣಿಗೆ ಮೂಲಕ ರಥೋತ್ಸವದ ತೇರಿನ ಅಗ್ಗ ಬಂದ ನಂತರ ಸಂಜೆ 6:50 ಕ್ಕೆ ಶ್ರೀ ಅಮರೇಶ್ವರ ದೇವರ ಮಹಾ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಜನಸಾಗರ ಮಧ್ಯ ವಿಜೃಂಭಣೆಯಿಂದ ಜರಗಿತ್ತು ರಥೋತ್ಸವಕ್ಕೆ ಹೊಮ್ಮಿನಾಳು,ಹೊನ್ನಗಡ್ಡಿ, ವಿರುಪಾಪುರ, ಗುಡ್ಡದ ಹನಮಸಾಗರ, ಗಾಣದಾಳ, ಗೌರಿಪುರ,ಇಲ್ಲಕಲ್ಲ,ಕೊಪ್ಪಳ,ತಾವರಗೇರ,ಹುಲಿಹೈದರ, ಲಾಯದುಣಿಸಿ ಗ್ರಾಮಗಳಿಂದ ಅನೇಕ ಭಕ್ತರು ಜಾತ್ರೆಯಲ್ಲಿ ಬಂದು ಶ್ರೀ ಅಮರೇಶ್ವರ ದೇವರ ಕೃಪೆಗೆ ಪಾತ್ರರಾದರು
Two youths die after falling into Tungabhadra river
ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,
ಜಾಹೀರಾತು
ಗಂಗಾವತಿ ಮಾ.04: ಹೋಳಿ ಹಬ್ಬದ ಸಂದರ್ಭದಲ್ಲಿ ನದಿ ಸ್ನಾನಕ್ಕೆಂದು ಹೋಗಿದ್ದ ಮೂವ್ವರು ಯುವಕರು ಆಕಸ್ಮಿಕವಾಗಿ ಕಾಲುಜಾರಿ ತುಂಗಭದ್ರಾ ನದಿ ಪಾಲಾದ ಘಟನೆ ಬುಧವಾರ ಸಂಜೆ ನಡೆದಿದೆ.
ಈ ಪೈಕಿ ಒಬ್ಬ ಯುವಕ ಈಜಿ ದಡಸೇರಿದ್ದು ಇಬ್ಬರು ಯುವಕರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ಗಂಗಾವತಿಯ ಗಾಂಧಿನಗರದ ನಿವಾಸಿಗಳಾದ ಸೂರ್ಯ ಮತ್ತು ಅಭಿಷೇಕ ಇಬ್ಬರು 17 ವಯಸ್ಸು ಇದ್ದು ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಬಳಿಕ ಸ್ನೇಹಿತರೊಂದಿಗೆ ಊಟ ಮಾಡಿ ಸ್ನಾನಕ್ಕೆಂದು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ.
Hanur Bettalli Maramma pillar installation, meat sale banned for one week
ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ
ಜಾಹೀರಾತು
ವರದಿ: ಬಂಗಾರಪ್ಪ .ಸಿ . ಹನೂರು: ಪಟ್ಟಣದ ಕ್ಷೇತ್ರದ ಅಧಿದೇವತೆಯಾದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸಮಯದಲ್ಲಿ ಮಾರಿ ಕಂಬವನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಎಂಟು ದಿನಗಳ ಕಾಲ ಪಟ್ಟಣದಲ್ಲಿರುವ ಸರ್ವ ಧರ್ಮಗಳ ಮಾಂಸದ ಅಂಗಡಿಯವರು ಮಾರಾಟವನ್ನು ಸಂಪೂರ್ಣವಾಗಿ ನಿಷೇಧವನ್ನು ಮಾಡಲಾಗಿದೆ.
ಪ್ರತಿ ವರ್ಷದಂತೆಯೆ ಈ ವರ್ಷವು ಮಾರಮ್ಮನ ಜಾತ್ರೆಯ ನಿಮಿತ್ತವಾಗಿ ಮಾರಿ ಕಂಬದ ಪ್ರತಿಷ್ಠಾಪನೆಯ ದಿನದಿಂದ ಒಂದು ವಾರದವರೆಗೆ ಮನೆಗಳಲ್ಲಿ ಒಗ್ಗರಣೆ ಇಲ್ಲದೆ ಅಡುಗೆ ಮಾಡುವ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದು ಗ್ರಾಮೀಣ ಸಂಸ್ಕೃತಿ ಮತ್ತು ಭಕ್ತಿಭಾವದ ಪ್ರತೀಕವಾಗಿದ್ದು ಜಾತ್ರಾ ಮಹೋತ್ಸವವನ್ನು ಎಲ್ಲಾ ಸಮುದಾಯದವರು ಸಹಮತದಿಂದ ಒಟ್ಟುಗೂಡಿ ಒಂದಾಗಿ ಆಚರಿಸುವುದು ಹನೂರಿನ ಜನತೆಯ ವಿಶೇಷ ಪರಂಪರೆಯಾಗಿದೆ. ಹಲವು ವರ್ಷಗಳಿಂದ ಹಿಂದು ಸಂಪ್ರದಾಯದ ಜಾತ್ರೆಯಾದರು ಸಹ ಮುಸ್ಲಿಂ ಸಮುದಾಯದವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮಾಂಸ ಮಾರಾಟವನ್ನು ನಿಲ್ಲಿಸುತ್ತಿದ್ದು, ಜಾತ್ರೆ ಯಶಸ್ವಿಯಾಗಲು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ರೂಡಿಯಾಗಿದೆ, ಹಿಂದೂ–ಮುಸ್ಲಿಂ ಸಾಮರಸ್ಯದ ಅಪೂರ್ವ ಉದಾಹರಣೆಯಾಗಿದೆ. ಹನೂರು ಪಟ್ಟಣದಲ್ಲಿ ಎರಡು ಸಮುದಾಯದವರು ಅಣ್ಣ-ತಮ್ಮಂದಿರಂತೆ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಜಾತ್ರಾ ಮಹೋತ್ಸವ ಮಾರ್ಚ್ 9 ರಿಂದ 13 ರವರೆಗೆ ಐದು ದಿನಗಳ ಕಾಲ ನಡೆಯಲಿದೆ.
ಮಾರ್ಚ್ 9 ರಂದು ರ ಸೋಮವಾರದಿಂದ ಜಾಗರ ಸಮರ್ಪಣೆ, 10 ರ ಮಂಗಳವಾರ ಮಧ್ಯಾಹ್ನ ರಥೋತ್ಸವ ಹಾಗೂ ತಂಪು ಜ್ಯೋತಿ, 11ರಂದು ದೊಡ್ಡ ಬಾಯಿ ಬೀಗ, 12 ರಂದು ಅಗ್ನಿಕುಂಡ ದರ್ಶನ,13 ರಂದು ಆರ್ ಎಸ್ ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಫೆಬ್ರವರಿ 24ರಂದು ಚಾಲನೆ ನೀಡಲಾಗಿದೆ.
ಇದಾದ ಎಂಟು ದಿನಗಳ ನಂತರ ಮಾರ್ಚ್ 3 ರ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ಪತಿ ಎಂಬ ಪ್ರತೀತಿ ಇರುವ ಮೂರು ಕವಲಿನ ಕಂಬವನ್ನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಕಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಪಟ್ಟಣದ ರಾಘು ಹರೀಶ್, ಪಾರ್ಥ, ಪ್ರದೀಪ್ ಸೇರಿದಂತೆ ಇನ್ನಿತರ ಯುವಕರ ತಂಡ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಬಗೆಯ ಫಲ-ಪುಷ್ಪಗಳು ಹಾಗೂ ತೆಂಗಿನ ಮರದ ಗರಿಗಳಿಂದ ಅಲಂಕಾರ ಮಾಡಿದ್ದರು. ಇದಲ್ಲದೆ ದೇವಾಲಯದ ವತಿಯಿಂದ ದೇವಸ್ಥಾನದ ಹೊರಾಂಗಣದಲ್ಲಿ ವಿಶೇಷವಾದ ಹಸಿರು ಚಪ್ಪರ, ದೇವಸ್ಥಾನದ ಹೊರ ಆವರಣ, ಗೋಪುರಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಕಂಬ ಪ್ರತಿಷ್ಠಾಪನೆ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೋತ್ಸವಕ್ಕೆ ಚಾಲನೆ ನೀಡಿದ ಎಂಟು ದಿನಗಳ ನಂತರ ಸರಿಯಾಗಿ ಮೂರು ಕವಲಿನ ಕಂಬ ಪ್ರತಿಷ್ಠಾಪನೆ ಮಾಡುವುದು ಸಂಪ್ರದಾಯ. ಅದರಂತೆ ಮಂಗಳವಾರ ವಾದ್ಯ ಮೇಳಗ ಳೊಂದಿಗೆ ಪಟ್ಟಣದ ಆಂಜನೇಯ ದೇವಸ್ಥಾನದ ಸಮೀಪ ಸಿದ್ದಪಡಿಸಿದ್ದ ಕಂಬವನ್ನು ಮೆರವಣಿಗೆಯ ಮೂಲಕ ತಂದು ದೇವ ಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಂಗಳವಾರ ಮುಂಜಾನೆಯಿಂದಲೇ ದೇವಿಗೆ ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಶಿನ ಕುಂಕುಮದಲ್ಲಿ ವಿಶೇಷ ಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ರಾವ್, ಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ಮಂಗಳವಾರ ರಾತ್ರಿ ನಡೆದ ಕಂಬ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳ ವಿವಿಧ ಸಮುದಾಯಗಳ ಮಕ್ಕಳು, ಮಹಿಳೆಯರು,ಪುರುಷರು ಸಮುದಾಯದ ಯಜಮಾನರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Former MLA R Narendra will give good news to the farmers of Hanur constituency after the budget.
ಹನೂರು ಕ್ಷೇತ್ರದ ರೈತಾಪಿ ವರ್ಗಕ್ಕೆ ಬಜೆಟ್ ನಂತರ ಸಿಹಿ ಸುದ್ದಿಯನ್ನು ಸರ್ಕಾರ ನೀಡುತ್ತದೆ ಮಾಜಿ ಶಾಸಕ ಆರ್ ನರೇಂದ್ರ
ಜಾಹೀರಾತು
ವರದಿ: ಬಂಗಾರಪ್ಪ .ಸಿ. ಹನೂರು :ಕ್ಷೇತ್ರದ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಸರ್ಕಾರವು ಮಂಡಿಸಲಿರುವ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು. ಹನೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳಾದ ಮೂರು ವಿಷಯಗಳನ್ನು ಮಾದ್ಯಮದ ಮೂಲಕ ಜನತೆಗೆ ತಿಳಿಸಲು ಇಚ್ವಿಸುವೆ ಎನ್ನುತ್ತ ಮೊದಲನೆಯದಾಗಿ ನಮ್ಮ ಕ್ಷೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಕುಡಿಯುವ ನೀರಿನ ಬರ ಹೆಚ್ಚಾಗಿದೆ ಅದನ್ನು ಮನಗಂಡು ನಮ್ಮ ಸರ್ಕಾರದ ಉಸ್ತುವಾರಿ ಸಚಿವರಾದಿಯಾಗಿ ,ನಮ್ಮ ಸಂಸದರು ಸಹ ಹನೂರು ಕ್ಷೇತ್ರದ ಅಭಿವೃದ್ಧಿಗೆ ಸಂಬಂದಿಸಿದ ಕೆಲಸ ಮಾಡುತ್ತಿದ್ದಾರೆ ,ಹಾಗೇಯೆ ನಮ್ಮ ಭಾಗದಲ್ಲಿ ಹೆಚ್ಚು ಕೇರೆಗಳಿದ್ದು ಅವುಗಳ ತುಂಬಿಸುವ ಕೆಲಸವನ್ನು ನಾನು ಹಿಂದೆಯೆ ಮಾಡಿದ್ದೆ ಮುಂದೆಯು ಮಾಡುತ್ತೆನೆ ಎಂದರು , ಇನ್ನೂಳಿದಂತೆ ಕಾಡಂಚಿನ ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿಯ ಕಾಟ ಹೆಚ್ಚಿನ ಪ್ರಮಾಣದಲ್ಲಿದ್ದು ಅದನ್ನು ತಡೆಗಟ್ಟುವ ಕಾರ್ಯಮಾಡಲಾಗುತ್ತದೆ,ಈಗಾಗಲೆ ಹನೂರು ಕ್ಷೇತ್ರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆ ದೂರಿದ್ದು ಅದನ್ನು ಸರಿಪಡಿಸುವ ಕಾರ್ಯವು ಜನಪ್ರತಿನಿಧಿಗಳ ಕರ್ತವ್ಯವಾಗಿದೆ, ಅದೇ ರೀತಿಯಲ್ಲಿ ಅಧಿಕಾರಿಗಳು ಸಹ ನೀರಿನ ಸಮಸ್ಯೆ ನಿಬಾಯಿಸಬೇಕು .ಕಾಡಂಚಿನ ಜಮಿನುಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ,ನಮ್ಮದೆ ಕ್ಷೇತ್ರದ ಚೆಂಗಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಹುಲಿಗಳ ಒಡಾಟವು ಹೆಚ್ಚಾಗಿದ್ದು ಆನೆಗಳಿಂದ ಬೆಳೆ ನಾಶವಾಗಿದೆ ,ಯಾವುದೇ ಸರ್ಕಾರವು ಬರಲಿ ರೈತರಿಗೆ ಬರ ಪರಿಹಾರ ಕೊಡುವಾಗ ಬೀಜ ಬಿತ್ತನೆ ಮಾಡಿದ ಖರ್ಚನ್ನು ಸಹ ಕೊಡಲು ಸಾದ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಪರಿಹಾರವನ್ನು ಹೆಚ್ಚು ಮಾಡಲು ಸರ್ಕಾರವನ್ನು ಕೇಳುತ್ತೆನೆ ,ನಾನು ಒತ್ತಾಯಿಸುವುದೆನಂದರೆ ಬೆಳೆ ನಾಶಕ್ಕೆ ಕೊಡುವ ಪದಾರ್ಥಗಳ ಕನಿಷ್ಠ ಬೆಲೆಯಿಲ್ಲ . ಒಂದು ಏಕ್ಟೇರ್ ಕೊಡುವ ಪರಿಹಾರ ಹೆಚ್ಚಿಸುವಂತ ಕಾರ್ಯವಾಗಬೇಕು , ನನ್ನ ಒಂಬತ್ತು ವರ್ಷದ ಹೋರಾಟದ ಫಲವಾಗಿ ,ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವು ಇಂದು ನನಸಾಗಿದೆ , ಈಗಾಗಲೇ ರೈತ ಸಂಘದ ಮಿತ್ರರುಗಳು ಹಾಗೂ ನಮ್ಮಗಳ ಹೊರಾಟದ ಫಲವಾಗಿ ಇಂದು ನಾನುರು ತೊಂಬತ್ತು ಕೋಟಿ ರೂಗಳಷ್ಟು ಬಜೇಟ್ ಮಂಡಿಸುವ ಕೆಲಸಕ್ಕೆ ಸಮಯ ಕೂಡಿ ಬಂದಿದೆ , ಮುಂದಿನ ದಿನಗಳಲ್ಲಿ ಕ್ಷೇತ್ರವು ಅಭಿವೃದ್ಧಿಯಾಗಲಿದೆ , ಗುಂಡಾಲ್ ಡ್ಯಾಂ ನಿಂದ ಹುಬ್ಬೆಹುಣಸೆ ನೀರು ಹರಿಸುವುದು ಬೇಡ ಕಾರಣ ಅದರಲ್ಲಿ ನೀರಿನ ಕೊರತೆ ಕಾಣುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ , ಬಲದಂಡೆ ಮತ್ತು ಎಡದಂಡೆಯಾಗಿ ಎರಡುಗಡೆ ವಿಭಾಗಿಸಿ , ನೀರನ್ನು ಬಂಡಳ್ಳಿ ಭಾಗಕ್ಕೆ ಸೇರಿದಂತೆ, ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ,
ಹುಬ್ಬೆ ಹುಣಸೆ ಕೆರೆಗೆ ಎರಡು ಇಂಚು ನೀರಿನ ಸರಬರಾಜು ಮಾಡಲು ಅಂದೆ ನನ್ನ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಯಿತು, ನಮ್ಮ ಭಾಗದ ಇಂಜಿನಿಯರ್ ಗಳಾದ ಮಹೇಶ್ ಹೆಚ್ಚು ಮತುವರ್ಜಿವಹಿಸಿ ನಮ್ಮ ಭಾಗದ ಜನರಿಗೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ, ಅಜ್ಜಿಪುರದಂತಹ ಗುಡ್ಡಗಾಡು ಪ್ರದೇಶದಲ್ಲಿ ನೀರಿನ ಪಂಪು ಮಾಡಿದರೆ ಅದರ ಮುಂದಿನ ಭಾಗ ನೀರು ಸರಾಗವಾಗಿ ಹರಿದು ಹೋಗಲು ಮಾಡಲಾಗುವುದು. ಈ ಯೋಜನೆಯನ್ನು ಮೊದಲಿಗೆ ಸಚಿವ ಸಂಪುಟದಲ್ಲಿ ಮಂಡಿಸಿದರೆ ಅನುಕೂಲವಾಗುವುದು.ದಂಟಳ್ಳಿ ಹಾಗೂ ಆಲೇರಿ ಕೆರೆಗಳಿಗೆ ಹೆಚ್ಚುವರಿಯಾಗಿ ನಾವು ಮಾಡಿದ ಕಾಮಗಾರಿಗಳ ಮುಂದುವರಿದೆ ಬಾಗವಾಗಿ ಕೆಲಸ ಮಾಡಿದ್ದಾರೆ , ಹಿಂದಿನ ಅವದಿಯಲ್ಲಿ ನಡೆದ ಅಭಿವೃದ್ಧಿಗೆ ನಮ್ಮ ಕೊಡುಗೆ ಅಪಾರವಾಗಿದೆ , ರೈತಸಂಘಗಳು ಹೋರಾಟ ಮಾಡುತ್ತಿರುವ ವಿಷಯವಾಗಿ ಈ ಬಜೆಟ್ ನಲ್ಲಿ ಮಂಡಿಸಿದರೆ , ನಮ್ಮ ರೈತರ ಎಲ್ಲಾ ಹೋರಾಟಗಳನ್ನು ಅವರ ಜೋತೆಯಲ್ಲಿ ಸೇರಿ ನಿಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ ಮಧುವನಳ್ಳಿ ಶಿವಕುಮಾರ್ ,ಹನೂರು ಪಟ್ಟಣ ಪಂಚಾಯತಿಯ ಮಾಜಿ ಉಪಾಧ್ಯಕ್ಷರುಗಳಾದ ಗೀರಿಶ್ ,ಹರೀಶ್ , ಮಾದೇಶ್. ಹಾಗೂ ಮುಖಂಡರುಗಳಾದ ಸ್ವಾಮಿ ,ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಶ್ವವಿಡೀ ಆರಾಧಿಸುತ್ತಿರುವ ಜನಪ್ರಿಯ ಸಂಬಾರ ವಸ್ತುವಿದು. ಬೆಳ್ಳುಳ್ಳಿಯ ಘಾಟುವಾಸನೆ, ಹೇರಳ ಔಷಧಿಯುಕ್ತ ಗುಣಗಳೇ ಇದನ್ನು ತುಂಬಾ ಎತ್ತರಕ್ಕೇರಿಸಿವೆ.ಇದು ಆಂಟಿಬಯಾಟಿಕ್ ಮತ್ತು ಆಂಟಿಸೆಪ್ಟಿಕ್ ನಂತೆ ಕಾರ್ಯ ನಿರ್ವಹಿಸುವುದು. ಆಹಾರವನ್ನು ವಿಷಮಯಗೊಳಿಸುವ ಅನೇಕ ತೆರನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಲ್ಲುದು. ಗರುಡನು ಇಂದ್ರನ ಬಳಿಯಿಂದ ಅಮೃತವನ್ನು ಅಪಹರಿಸಿ ಕೊಂಡೊಯ್ಯುವಾಗ, ಭೂಮಿಗೆ ಬಿದ್ದ ಅಮೃತದ ಬಿಂದುಗಳು ಶ್ವೇತ ಕಂದಗಳಾಗಿ ಅರಳಿದವಂತೆ !!ಬೆಳ್ಳುಳ್ಳಿಯ ಉಗಮದ ಕುರಿತು ಹಬ್ಬಿರುವ ಈ ಕಥೆ,ಎಷ್ಟು ಸ್ವಾರಸ್ಯಪೂರ್ಣ !ಎಂತಹ ಸುಂದರ ಕಲ್ಪನೆ !ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ, ಕಡಿಮೆಯಾಗಿ ರಕ್ತದೊತ್ತಡ ಮತ್ತು ಹೃದಯರೋಗಗಳಿಗೆ ಉತ್ತಮ ಪರಿಣಾಮ ನೀಡುತ್ತದೆ. ಗಂಟಲು ಉಸಿರಾಟದ ತೊಂದರೆ ಒಣಕೆಮ್ಮು, ದಮ್ಮು, ನೆಗಡಿ, ಶೀತ, ಕಫ ಮುಂತಾದ ಶ್ವಾಸನಾಳಗಳ ತೊಂದರೆಗಳು ನಿವಾರಿಸಲ್ಪಡುತ್ತವೆ. ಹಸಿವು ಮತ್ತು ಜೀರ್ಣಶಕ್ತಿಯನ್ನು ಉಂಟುಮಾಡುತ್ತದೆ.
ಜಠರ ಮತ್ತು ಕರುಳಿನ ದೋಷಗಳು ವಾಯು ಪ್ರಕೋಪಗಳನ್ನು ನಿವಾರಿಸುತ್ತದೆ.ಜ್ವರ, ಕಿವಿ ಮತ್ತು ಕಣ್ಣಿನ ತೊಂದರೆ, ವಾತ, ರಕ್ತದೋಷ, ಮೂತ್ರ ದೋಷಗಳಿಗೆ ಗುಣಕಾರಿ. ಇದು ಉತ್ತಮ ಸ್ಮರಣ ಶಕ್ತಿ ಪ್ರಚೋದಕವೂ ಹೌದು. ಕ್ಷಯ, ಕ್ಯಾನ್ಸರ್ ಚಿಕಿತ್ಸೆಗಳಿಗೂ ಬೆಳ್ಳುಳ್ಳಿ ಬಳಕೆಯಾಗುತ್ತಿದೆ. ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಸಹಕಾರಿಯಾದ ಬೆಳ್ಳುಳ್ಳಿ ಆಯುರ್ವೇದದಲ್ಲಿ ಅಮೃತ ಸಮಾನವೆನಿಸಿದೆ. ಇದನ್ನು ದೀಪಕ, ಪಾಚಕ, ಬಲವರ್ಧಕ, ಧಾತು ವರ್ಧಕ, ಶುಕ್ರ ವರ್ಧಕ, ಕೇಶ ಮತ್ತು ಬುದ್ಧಿ ವರ್ಧಕವೆಂದು ಹೇಳಲಾಗಿದೆ. ನೋವು ನಿವಾರಕ ರೋಗನಿರೋಧಕ, ಕ್ರಿಮಿನಾಶಕ ಮತ್ತು ಶ್ವಾಸಹರವೆನಿಸಿದ ಬೆಳ್ಳುಳ್ಳಿ, ಮುರಿದ ಮೂಳೆಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ.
Body of unidentified person found in Huvinal Seema: Case registered
ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು
ಜಾಹೀರಾತು
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್ದಲ್ಲಿ , ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್ ನಂ: 04/2026 ಕಲಂ:194 (3)(IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2026ರ ಮಾರ್ಚ್ 2 ರಂದು ಮಧ್ಯಾಹ್ನ 2.10 (ಪಿ.ಎಂ)ಕ್ಕೆ ವೀರಭದ್ರಯ್ಯ ಹೆಚ್ ಸಿ-109 ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಗಣಿಕೀಕೃತ ದೂರು ನೀಡಿದ ಸಾರಾಂಶದಂತೆ, ವೀರಭದ್ರಯ್ಯ ಅವರು 2026ರ ಮಾರ್ಚ್ 1ರ ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಗ್ರಾಮ ಬೀಟ್ ಕರ್ತವ್ಯ ಕುರಿತು ಹೋಗುತ್ತಿರುವಾಗ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್ದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದರಿಂದ ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ನಿಜವಿದ್ದು, ಈ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದಾಗ ಈ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಮುಂದಿನ ಕಾನೂನು ಕ್ರಮಕ್ಕೆ ವಿನಂತಿಸಿಕೊAಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿಯ ಚಹರೆ ವಿವರ: ಎತ್ತರ: ಸುಮಾರು 5 ಅಡಿ 4 ಇಂಚು ಎತ್ತರ, ಸಾಧಾ ಕೆಂಪನೇಯ ಮೈಬಣ್ಣ ಹೊಂದಿದ್ದು, ಸುಮಾರು 40 ರಿಂದ 45 ವಯಸ್ಸು, ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಮತ್ತು ಕೊರಚಲ ಗಡ್ಡವನ್ನು ಬಿಟ್ಟಿದ್ದು ಇದೆ. ಸೊಂಟದಲ್ಲಿ ಬಿಳಿ ಪ್ಲಾಸ್ಟಿಕ್ ದಾರಾ ಕಟ್ಟಿದ್ದು ಹಾಗೂ ಅಲೆಮಾರಿ ಹುಚ್ಚನಂತೆ ಇರುತ್ತಾನೆ. ಮೃತನ ಮೈ ಮೇಲೆ ಹಸಿರು ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಫ್ಯಾಂಟ್ ಇದ್ದು, ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳದಿಂದ ಮಂಗಳಾಪುರಕ್ಕೆ ಹೋಗುವ ಗುಮ್ಮಣ್ಣೀಶ್ವರ ಗುಡಿಯ ಮುಂಭಾಗದ ಹೊಲದಲ್ಲಿ ಮೃತಪಟ್ಟ ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಹಕರಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸೈಯದ್ ತಾಜುದ್ಧಿನ್ ಸಿಪಿಸಿ 222 ಅವರು 2026ರ ಫೆಬ್ರವರಿ 24 ರಂದು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದು, ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಗಂಡಸಿನ ಮೃತ ದೇಹವಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣ ವಾಗಿ ಕಳಚಿ ಕೇವಲ ಎಲಬು ಮಾತ್ರ ಇದ್ದು, ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು. ಮೃತ ದೇಹದ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಲಾಗಿ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ ಎಂದು ದೂರು ನೀಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯ ಯು.ಡಿ ಆರ್ ನಂ 03/2026 ಕಲಂ: 194 194 (IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೃತ ವ್ಯಕ್ತಿಯ ಚಹರೆ ವಿವರ: ಸುಮಾರು 5.6 ಅಡಿ ಎತ್ತರ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಹಾಗೂ ದೇಹದ ಮೇಲೆ ಒಂದು ಹಸಿರು ಬಣ್ಣದ ಲಾಂಗ್ ಚಡ್ಡಿ ಇರುತ್ತದೆ. ವ್ಯಕ್ತಿಯು ಸುಮಾರು 30 ರಿಂದ 35 ವರ್ಷದವನಾಗಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣವಾಗಿ ಕಳಚಿ ಕೇವಲ ಎಲಬು ಮಾತ್ರ ಇದೆ. ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿರುತ್ತದೆ. ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Applications invited for working in Village-1 centers
ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
ಜಾಹೀರಾತು
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ. ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ. ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ. ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ! ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ
ಜಾಹೀರಾತು
If youth are not given jobs, struggle is inevitable! Dalit Sena warns government
ಗಂಗಾವತಿ: ರಾಜ್ಯ ಸರ್ಕಾರ ಮಂಡಿಸಲಿರುವ ಮಾರ್ಚ್ ಬಜೆಟ್ನಲ್ಲಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕೆ ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ದಲಿತ ಸೇನೆ ಜಿಲ್ಲಾ ಹಾಗೂ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷರಾದ ಉಡಚಪ್ಪ (ಶ್ರೀರಾಮನಗರ) ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಗಂಗಾವತಿ ತಹಸೀಲ್ದಾರರ ಮುಖಾಂತರ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು ಹಾಜರಾಗುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸಮಯಬದ್ಧವಾಗಿ ಪೂರ್ಣಗೊಳಿಸಿ ಯುವಕರಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಶಿಕ್ಷಣ ಆರೋಗ್ಯ ಪೊಲೀಸ್, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಾಗಿರುವುದರಿಂದ ಸಾರ್ವಜನಿಕ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ರಾಜ್ಯ ಬಜೆಟ್ನಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದರ ಜೊತೆಗೆ ಹೊಸ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾಸಾಬ ನದಾಫತಾಲೂಕು ಅಧ್ಯಕ್ಷ ಮೌಲಾಲಿ ಕೆ ತಾಲೂಕು ಉಪಾಧ್ಯಕ್ಷ ರಾಜಸಾಬ್ ನದಾಫ್ ತಾಲೂಕು ಪ್ರಧಾನ ಕಾರ್ಯದರ್ಶಿ ಹಸನ್ ಅಲ್ಲಿ ಕಾರ್ಮಿಕರ ಉಪಾಧ್ಯಕ್ಷ ದುರ್ಗಪ್ಪ ತಾಲೂಕು ಸಂಘಟನಾ ಕಾರ್ಯದರ್ಶಿ ಮರಿಲಿಂಗಪ್ಪ ಕಾರ್ಯಕಾರಿಣಿ ಸದಸ್ಯರಾದ ಸಕ್ರ ಸಾಬ್ ಹಾಗೂ ಹೊನ್ನೂರ್ ಸಾಬ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ
ಜಾಹೀರಾತು
Submission of a petition to the Chief Ministers, urging various demands for redressal of atrocities against women and children
ಬೆಂಗಳೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಕರ್ನಾಟಕ ರಾಜ್ಯ ಸಮಿತಿಯು ಮಾರ್ಚ್ 4ರಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ಆಂದೋಲನವನ್ನು ನವೆಂಬರ್ 25,2025 ರಿಂದ ಮಾರ್ಚ್ 25, 2026ರ ವರೆಗೆ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮ ಮತ್ತು ಸಹಿ ಸಂಗ್ರಹಣೆ ಪ್ರಯುಕ್ತ, ಮಾನ್ಯ ಮುಖ್ಯಮಂತ್ರಿಗಳಿಗೆ , ಎಐಎಂಎಸ್ಎಸ್ ರಾಜ್ಯ ಸಮಿತಿಯಿಂದ ನಿಯೋಗವೂಂದು ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಎಸ್ . ನೇತೃತ್ವದಲ್ಲಿ ಅಲಕಾ ರಾವ್, ಸೀಮಾ ಜಿ.ಎಸ್. ಹೇಮಾ, ಶಾಂತ ಅವರೊಂದಿಗೆ ಭೇಟಿ ಮಾಡಿದರು. ಅವರೊಂದಿಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಪ್ರಭಾವ , ಮರ್ಯಾದೆಗೇಡು ಹತ್ಯೆ ತಡೆಗಟ್ಟಲು ಮಾನ್ಯ ಕಾಯ್ದೆ , ಸರ್ಕಾರಿ ಕಛೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಿ , ಸಮಿತಿಯು ಸಕ್ರಿಯವಾಗಿರುವಂತೆ ಮಾಡುವುದು, ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು , ಅಪ್ರಾಪ್ತ ಮಕ್ಕಳ ಮೊಬೈಲ್ ಬಳಕೆ ಕುರಿತು ಮುಖ್ಯಮಂತ್ರಿಗಳ ಹತ್ತಿರ ಪ್ರಸ್ತಾಪಿಸಿ, ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
Villagers have filed a complaint demanding action against illegal liquor sales and matka racket in Hosakera Daggi village.
ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರ ದೂರು.
ಜಾಹೀರಾತು
ಗಂಗಾವತಿ: ತಾಲ್ಲೂಕಿನ ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮಟ್ಕಾ (ಓ.ಸಿ) ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಸೇರಿ ನೀಡಿದ ಮನವಿಯಲ್ಲಿ, ಗ್ರಾಮದಲ್ಲಿ ಸುಮಾರು ಆರಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಬಡ ಕುಟುಂಬಗಳ ಯುವಕರು ಮತ್ತು ಮಹಿಳೆಯರು ಕುಡಿತದ ಚಟಕ್ಕೆ ಒಳಗಾಗಿ ಆರೋಗ್ಯ ಹಾನಿಗೊಳಗಾಗುತ್ತಿದ್ದಾರೆ. ಕುಟುಂಬಗಳಲ್ಲಿ ಗಲಾಟೆಯಿಂದ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಹಾನಿ ಹಾಗೂ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಗ್ರಾಮದಲ್ಲಿ ಹಲವಾರು ಕಡೆಗಳಲ್ಲಿ ಮಟ್ಕಾ (ಓ.ಸಿ) ಜೂಜಾಟ ದಂಧೆ ನಡೆಯುತ್ತಿದ್ದು, “ಬಾಂಬೆ”, “ಕಲ್ಯಾಣಿ” ಮೊದಲಾದ ಹೆಸರಿನಲ್ಲಿ ದಿನಕ್ಕೆ ಮೂರು-ನಾಲ್ಕು ಬಾರಿ ಆಟಗಳನ್ನು ಆಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದರಿಂದ ಬಡವರು ತಮ್ಮ ಹಣವನ್ನು ಕಳೆದುಕೊಂಡು ಮನೆ ಸಾಮಗ್ರಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ದಂಧೆ ನಡೆಸುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು, ಈ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ದೂರು ಪ್ರತಿಗಳನ್ನು ಡಿವೈಎಸ್ಪಿ, ಗಂಗಾವತಿ ಆರಕ್ಷಕ ನಿರೀಕ್ಷಕರು, ಗ್ರಾಮೀಣ ಪೊಲೀಸ್ ಠಾಣೆ, ಗಂಗಾವತಿ ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ, ಗಂಗಾವತಿ ಇವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹನುಮೇಶ ನಾಯಕ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು), ದುರ್ಗೇಶ್ ರೆಡ್ಡಿ, ಮಂಜುನಾಥ್ ಡಗ್ಗಿ, ಅಯ್ಯಪ್ಪ ಹೆಬ್ಬಡ್, ನಿಂಗಪ್ಪ, ಅಲ್ಲಸಾಬ್, ಬಾಬು ಸಾಬ್, ಪ್ರವೀಣ್, ಹುಸೇನಪ್ಪ ಹೆಬ್ಬಡ್, ಭೀಮಪ್ಪ ಪೂಜಾರಿ, ಪುರುಷೋತ್ತಮ, ಕಂಠಪ್ಪ, ರಾಘವೇಂದ್ರ, ಕೆಂಚಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
124th day of anti-Baldota factory sit-in is a success; MLAs' move welcomed
೧೨೪ನೇ ದಿನದ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ ಯಶಸ್ವಿ;ಶಾಸಕರ ನಡೆಗೆ ಸ್ವಾಗತ
ಜಾಹೀರಾತು
ಕೊಪ್ಪಳ: ನಗರಸಭೆ ಮುಂದೆ ೧೨೪ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದಿರುವ ಬಲ್ಡೋಟ ಕಾರ್ಖಾನೆ ಹಟಾವೋ ಧರಣಿಯನ್ನು ಉದ್ದೇಶಿಸಿ ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಮಾತನಾಡಿ ಫೆ.೨೪ರ ಬಂದ್ ಹೋರಾಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಇದ್ದರು. ಅವರು ತಮ್ಮ ಮನಃಪರಿವರ್ತನೆ ಮಾಡಿಕೊಂಡು ಬಾಧಿತ ಜನರನ್ನು ಹಳ್ಳಿಗಳಿಗೆ ಹೋಗಿ ಮಾತನಾಡಿಸುತ್ತಿರುವುದು ಸಂತೋಷದ ವಿಚಾರ. ಮಾಲಿನ್ಯ ಮಾಡುವ ಕಾರ್ಖಾನೆಗಳನ್ನು ಮುಚ್ಚಿ ಜನರ ಜೀವ, ಆರೋಗ್ಯ, ಮಕ್ಕಳ ಭವಿಷ್ಯ ಉಳಿಸಬೇಕು. ಇದೇ ಅಧಿವೇಶನ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕೊಪ್ಪಳ ಸರ್ವಪಕ್ಷದ ಮುಖಂಡರನ್ನು ಮತ್ತು ಹೋರಾಟ ವೇದಿಕೆಯ ಪ್ರಮುಖರ ನಿಯೋಗವನ್ನು ಕೊಂಡೊಯ್ದು ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು. ಇದೇ ವೇಳೆ ಜಂಟಿ ಕ್ರಿಯಾ ವೇದಿಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಅವರು ಬಾಧಿತ ಗ್ರಾಮಗಳ ಭೇಟಿ ಮಾಡಿ ಸಮಸ್ಯೆ ಆಲಿಸಿರುವದು ಬಂದ್ ನಂತರದ ಯಶಸ್ಸು, ಹಾಗೂ ಅವರ ನಡೆಯನ್ನು ವೇದಿಕೆ ಸ್ವಾಗತಿಸಿದೆ. ಧರಣಿಯಲ್ಲಿ ಮಾನವ ಬಂಧುತ್ವ ವೆದಿಕೆಯ ವಿಭಾಗೀಯ ಸಂಚಾಲಕ ಭೀಮಪ್ಪ ಹವಳಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪ್ರಮುಖರಾದ ಎಸ್.ಬಿ.ರಾಜೂರು, ಎಸ್.ಎಂ. ಕಂಬಾಳಿಮಠ, ಮೂಕಪ್ಪ ಮೇಸ್ತ್ರಿ ಬಸಾಪುರ, ದಿಗಮಟ್ಟಿ ಗವಿಸಿದ್ದಪ್ಪ, ಯಲ್ಲಪ್ಪ ಸಿದ್ದರ್, ಪಂಪಣ್ಣ ಚಿಂತಪಲ್ಲಿ, ಶಂಭುಲಿAಗಪ್ಪ ಹರಗೇರಿ, ಶಿವಪ್ಪ ಬನಪ್ಪನವರ, ರವಿ ಕಾಂತನವರ, ಬಿ.ಜಿ. ಕರಿಗಾರ, ಡಾ. ಬಸವರಾಜ ಪೂಜಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವರಾಜ ಪೂಜಾರ, ಶರಣು ಗಡ್ಡಿ , ವೈ. ಸತ್ಯನಾರಾಯಣ, ಬಸವರಾಜ ನರೇಗಲ್, ಗವಿಸಿದ್ದಪ್ಪ ಚಿಕೇನಕೊಪ್ಪ, ಹನುಮಂತ ಜಂತ್ಲಿ, ಸಂಜೀವಮ್ಮ, ಶಿವಪ್ಪ ಜಲ್ಲಿ, ಮಂಜುನಾಥ ಕವಲೂರು, ಗಂಗಮ್ಮ, ನಾಗರಾಜ ಕುಷ್ಟಗಿ, ರಾಜಶೇಖರ ಏಳುಬಾವಿ, ಚನ್ನವೀರಯ್ಯ ಹಿರೇಮಠ ಮುಂತಾದವರು ಇದ್ದರು.
ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ
ಜಾಹೀರಾತು
300th birth anniversary of Sriyogi Narayana Yathindra celebrated at Gangavathi Nagar Traffic Police Station
ಗಂಗಾವತಿ: ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ಸಂಚಾರಿ ಠಾಣೆಯ ಪಿಎಸ್ಐ ಇಸ್ಮೈಲ್ ಸಾಬ್ ಮಾತನಾಡಿ, ಶ್ರೀಯೋಗಿ ನಾರಾಯಣ ಯತೀಂದ್ರರು ಸಮಾಜಕ್ಕೆ ನೀಡಿದ ಧಾರ್ಮಿಕ ಹಾಗೂ ನೈತಿಕ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಲಿಜ ಸಮಾಜದ ಅಧ್ಯಕ್ಷ ಬಿ. ರಮೇಶ್, ಉಪಾಧ್ಯಕ್ಷ ಸೋಮನಾಥ್, ಗಂಗಾಧರ್ ಕಟ್ಟಿಮನಿ, ರಾಘವೇಂದ್ರ, ಜಯರಾಮ್ ಬಿ., ರಾಘವೇಂದ್ರ ಕಟ್ಟಿಮನಿ, ನಾಗರಾಜ್ VSSSN, ಗುರುರಾಜ್, ರಾಜು, ತಬಲಾ ನವೀನ್ ಸೇರಿದಂತೆ ಬಲಿಜ ಸಮಾಜದ ಪದಾಧಿಕಾರಿಗಳು ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಾಂತಿಯುತ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನೆರವೇರಿತು.
ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.
ಜಾಹೀರಾತು
Chief Minister's letter in Nitin to clear thousands of roadblocks.
ಗಂಗಾವತಿ: ಗಂಗಾವತಿ-ಕುಷ್ಟಗಿ ರಸ್ತೆ ನಿರ್ಮಾಣದ ನ್ಯೂನ್ಯತೆ ಮತ್ತು ಅವೈಜ್ಞಾನಿಕ ರಸ್ತೆ ಉಬ್ಬುಗಳ ದೂರಿನ ಕುರಿತು ಮತ್ತು ತಾವರಗೇರಾ ಕಲ್ಬುರ್ಗಿ ರಸ್ತೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವ ದೂರಿನ ಬಗ್ಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸರಕಾರಿ ಕಾರ್ಯದರ್ಶಿಯವರಿಗೆ ರಾಜ್ಯದ ಮುಖ್ಯಮಂತ್ರಿಯವರ ಕಚೇರಿಯಿಂದ ಸೂಕ್ತ ಕ್ರಮಕೈಗೊಳ್ಳಲು ಆದೇಶಿಸಿದ ಪತ್ರ ರವಾನೆಯಾಗಿದೆ.
ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ದಿನಾಂಕ:19/02/2026 ರಂದು ಸಲ್ಲಿಸಿರುವ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಈ ಪತ್ರದಲ್ಲಿ ಸೂಚಿಸಲಾಗಿದೆ.ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಸದರಿಯವರಿಂದ ಮಾಹಿತಿಯನ್ನು ಪಡೆಯುವಂತೆ ಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಎಮ್.ಶಾಂತಪ್ಪ ,ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರಿಗೂ ಈ ಬಗ್ಗೆ ದಿನಾಂಕ: 07-02-2026 ರಂದು ಪತ್ರ ಬರೆದಿದ್ದ ಅಶೋಕಸ್ವಾಮಿ ಹೇರೂರ,ಈ ಪತ್ರಗಳಿಗೆ ನ್ಯಾಷನಲ್ ಹೈವೇ ಆಫ಼್ ಅಥಾರಿಟಿ ಆಫ಼್ ಇಂಡಿಯಾ,ಹೊಸಪೇಟೆ ಕಚೇರಿಯದಿನಾಂಕ:17-10-2019 ರ ಪತ್ರ,ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಸಹಾಯಕ ಖಾಸಗಿ ಕಾರ್ಯದರ್ಶಿಯವರ ದಿನಾಂಕ:31-10-2019 ರ ಪತ್ರ,ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಹುಬ್ಬಳ್ಳಿ ಇವರ ದಿನಾಂಕ:16-11-2019 ರ ಪತ್ರ,ಕಾರ್ಯಪಾಲಕ ಅಭಿಯಂತರು,ಕರ್ನಾಟಕ ರಾಜ್ಯ.ಹೆದ್ದಾರಿ ಅಭಿವೃದ್ಧಿ ಯೋಜನಾ ವಿಭಾಗ,ಕೆ.ಎಸ್.ಎಚ್.ಪಿ.ಐ. ರಾಯಚೂರು ಇವರ ದಿನಾಂಕ 19-11-2019 ರ ಪತ್ರ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಲಬುರ್ಗಿ ಇವರ ದಿನಾಂಕ:25-11-2019 ರ ಪತ್ರ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯಾಲಯದ ದಿನಾಂಕ:25-11-2019 ರ ಪತ್ರಗಳನ್ನು ಉಲ್ಲೇಖಿಸಿದ್ದಾರೆ.
ಗಂಗಾವತಿ-ಕುಷ್ಟಗಿ ಮತ್ತು ತಾವರಗೇರಾ-ಕಲಬುರ್ಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಗ್ರಾಮಗಳಲ್ಲಿ ಈ ಮೊದಲಿಗಿಂತಲೂ ರಸ್ತೆಯನ್ನು ಚಿಕ್ಕದಾಗಿಸಿ ನಿರ್ಮಿಸಲಾಗಿದೆ.ರಸ್ತೆ ನಿರ್ಮಿಸುವಾಗ ಕಟ್ಟಡಗಳನ್ನು ತೆರವುಗೊಳಿಸಿಕೊಂಡವರಿಗೆ ಕಡಿಮೆ ಮೊತ್ತದ ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಆದರೆ, ಸ್ಥಳಾಂತರಿಸಬಲ್ಲ ಪಾನ್ ಶಾಪ್ ಗಳಂತಹ ಗೂಡಂಗಡಿಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಲಾಗಿದೆ. ಆದರೆ ಗೂಡಂಗಡಿಯವರು ಸ್ಥಳಾಂತರಗೊಳ್ಳದೆ ತಮ್ಮ ಗೂಡಂಗಡಿಗಳನ್ನು ಅಲ್ಲಿಯೇ ಇರಿಸಿಕೊಂಡಿರುವುದರಿಂದ ಅವುಗಳ ಸುತ್ತಲೂ ಜನರು ಸೇರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆಗಳ ಪಕ್ಕದಲ್ಲಿ ಎರಡೂ ಕಡೆ ಚರಂಡಿಗಳನ್ನು ನಿರ್ಮಿಸಲಾಗಿದ್ದು, ಆನಂತರ ಉಳಿದಿರುವ ಖಾಲಿ ಜಾಗೆಗಳಲ್ಲಿ ಅಂದರೆ ರಸ್ತೆಗಳ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್ ಪಾತ್ ಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಲು ಆದೇಶಿಸಬೇಕೇಂದು ಮನವಿ ಮಾಡಿದ್ದಾರೆ.
ಈ ಪತ್ರದ ಪ್ರತಿಗಳನ್ನು ಮುಖ್ಯ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ನಂ. 35, 3ನೇ ಮುಖ್ಯ ರಸ್ತೆ, ಡಾಲರ್ಸ್ ಕಾಲೋನಿ, ಬಸ್ಸ್ಟ್ಯಾಂಡ್ ಹಿಂದುಗಡೆ, ಗೋಕುಲ ರೋಡ್ (ಎರ್ಪೋರ್ಟ್ ರಸ್ತೆ) ಹುಬ್ಬಳ್ಳಿ -೫೮೦೦೩೦,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್.ಯೋಜನಾ ಕಛೇರಿ, ಲೋಕೋಪಯೋಗಿ ಇಲಾಖೆ, ವಿಭಾಗ ಆವರಣ, ಹಳೇ ಜೇವರ್ಗಿ ರಸ್ತೆ, ಕಲ್ಬುರ್ಗಿ-೫೮೫೧೦೨,ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ಸಂಪರ್ಕ ಸೌಧ, ಬಿ.ಐ.ಪಿ ಪ್ರಿಮಿಸಸ್, ಸರ್ವೆ ನಂ. 08, (ಓರಾಯನ್ ಮಾಲ್ ಎದುರಿಗೆ) ಡಾ| ರಾಜ್ ಕುಮಾರ ರಸ್ತೆ, ರಾಜಾಜಿ ನಗರ, ಮೊದಲನೆ ಹಂತ,ಬೆಂಗಳೂರು- ೫೬೦೦೧೦,ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ಕೊಪ್ಪಳ, ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ರಾಯಚೂರು,ಸಹಾಯಕ ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಉಪ ವಿಭಾಗ, ಕುಷ್ಟಗಿ ಮತ್ತು ಗಂಗಾವತಿ,ಕಾರ್ಯಪಾಲಕ ಇಂಜಿನೀಯರ, ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ, ನಂ. 311/1-ಸಿ, 4ನೇ ಅಡ್ಡ ರಸ್ತೆ, ಸೋನಿಯಾ ನಗರ, ಡ್ಯಾಮ್ ರಸ್ತೆ, ಹೊಸಪೇಟೆ-೫೮೩೨೦೧,ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ರಾಜ್ಯ ಹೆದ್ದಾರಿ ಯೋಜನಾ ವಿಭಾಗ, ರಾಯಚೂರು,ವಿಭಾಗೀಯ ಆಯುಕ್ತರು ಕಲಬುರ್ಗಿ,ಜಿಲ್ಲಾಧಿಕಾರಿಗಳು ಕೊಪ್ಪಳ, ರಾಯಚೂರು, ಕಲಬುರ್ಗಿ ಇವರುಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಕೊಂಡು ಮಾಹಿತಿ ನೀಡಲು ವಿನಂತಿಸಿದ್ದಾರೆ.
ತಮ್ಮ ಈ ದೂರಿನ ಪತ್ರಗಳನ್ನು ಅಧ್ಯಕ್ಷರು/ಕಾರ್ಯದರ್ಶಿಗಳು,ಕಲ್ಯಾಣ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಕಲಬುರ್ಗಿ ಇವರಿಗೆ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕೆ ಕಳುಹಿಸಿ,ಈ ರಾಜ್ಯ ಹೆದ್ದಾರಿಗಳಲ್ಲಿರುವ ಸಾವಿರಾರು ರೋಡ ಹಂಪ್ಸ್ ಗಳನ್ನು ತೆರುವುಗೊಳಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಬರೆಯಲಾಗಿರುವ ಮನವಿ ಪತ್ರಕ್ಕೆ ಬೆಂಬಲ ನೀಡಬೇಕೆಂದು ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.
ಒಬ್ಬ ವ್ಯಕ್ತಿ ಅಟೋ ಅಥವಾ ವ್ಯಾನ್ ಮೂಲಕವಾದರೆ ದಿನವೊಂದಕ್ಕೆ ಗರಿಷ್ಠ ಮೂವತ್ತು ಸಿಲೆಂಡರ್ ವಿತರಿಸಬಹುದು. (ಗಂಟೆಗೆ ನಾಲ್ಕರಂತೆ) ಸೈಕಲ್ ಅಥವಾ ಸ್ಕೂಟರ್ ಗಳಲ್ಲಾದರೆ ಹದಿನೈದು ಸಿಲಿಂಡರ್ ವಿತರಣೆ ಮಾಡಬಹುದು. (ಸರಾಸರಿ ಲೆಕ್ಕ)
ಒಂದು ಸಿಲಿಂಡರ್ ಗೆ ಹತ್ತು ರೂ ನಿಂದ ಐವತ್ತು ರೂ ತನಕ ಹೆಚ್ಚು ಹಣ ಪಡೆಯುತ್ತಾರೆ. ಕೆಲವರು ಅದನ್ನೂ ಕೊಡುವುದಿಲ್ಲ. ಕಾನೂನು ಮಾತನಾಡಿ ಕಳುಹಿಸುತ್ತಾರೆ. ಹೀಗೆ ಪಡೆಯುವ ಹಣದ ಸರಾಸರಿ ಲೆಕ್ಕವನ್ನು ಮೂವತ್ತು ರೂ ಅಂದುಕೊಂಡರೆ ಗರಿಷ್ಠ 900.00 ರೂ ಸಂಪಾದಿಸುತ್ತಾರೆ. ಇದಷ್ಟೂ ಅವರ ಲಾಭ ಅಲ್ಲ. ಅದರಲ್ಲೇ ಅವರ ವಾಹನದ ಮೆಂಟೇನನ್ಸ್ ಗೆ , ಸಾಲದ ಮರುಪಾವತಿಗೆ ಇಟ್ಟುಕೊಳ್ಳಬೇಕು. ಜೊತೆಗೆ ವಿತರಣಾ ಏಜೆನ್ಸಿಯವರಿಗೂ ಪಾಲು ಕೊಡಬೇಕು. ಇವನ್ನೆಲ್ಲ ಕಳೆದರೆ ಆತನಿಗೆ ಉಳಿಯುವುದು 300.00 ರೂ ನಿಂದ 350.00 ರೂ ಮಾತ್ರ. ಅದರಲ್ಲಿಯೇ ಆತ ತನ್ನ ಚಟದ ಖರ್ಚನ್ನೂ ತೂಗಿಸಿಕೊಳ್ಳಬೇಕು. ಅಂದರೆ ತಿಂಗಳಿಗೆ 7500.00 ರೂ ನಿಂದ 9000.00 ರೂ ನಷ್ಟು ಹೆಚ್ಚು ಹಣ ಉಳಿಸಿಕೊಳ್ಳಬಹುದು.
ಅವರಿಗೆ ಕೊಡುವ ಸಂಬಳ 400.00 ರೂ ನಿಂದ 600.00 ರೂ ಪ್ರತಿ ದಿನಕ್ಕೆ.. (ತಿಂಗಳಿಗೆ 10000.00 ರೂ ನಿಂದ 15000.00 ರೂ )
ಇದು ಇವರ ಸಂಪಾದನೆ.
ಕಾನೂನಿನ ದೃಷ್ಟಿಯಲ್ಲಿ ಇವರು ಹೆಚ್ಚುವರಿ ಹಣ ಕೇಳುವುದು ಮತ್ತು ನಾವು ಕೊಡುವುದು ಎರಡೂ ತಪ್ಪು. ಯಾಕೆಂದರೆ ಡೆಲಿವರಿ ಚಾರ್ಜನ್ನು ಬಿಲ್ ನಲ್ಲಿಯೇ ಸೇರಿಸಿರುತ್ತಾರೆ. ಆದ್ದರಿಂದ ಹೆಚ್ಚುವರಿ ಹಣವನ್ನು ಕೊಡಬೇಕಿಲ್ಲ.
ಆದರೆ, ಅದೇಕೊ ನಮಗೆ ಇಂತಹುದರ ಮೇಲೆಯೇ ಕೆಟ್ಟ ಕುತೂಹಲ. ಗ್ಯಾಸ್ ವಿತರಣೆ ಮಾಡುವವರ ಸಂಪಾದನೆ , ಫುಡ್ ಡೆಲಿವರಿ ಮಾಡುವವರ ಸಂಪಾದನೆ, ಕೊರಿಯರ್ ಡೆಲಿವರಿ ಮಾಡುವವರ ಸಂಪಾದನೆ , ಅಟೋ ಅಥವಾ ಟ್ಯಾಕ್ಸಿ ಚಾಲಕರ ಸಂಪಾದನೆ, ಪಾನಿ ಪುರಿ ಮಾರವವನ ಸಂಪಾದನೆ ಇತ್ಯಾದಿ. ದಿನವೆಲ್ಲ ದೇಹದಂಡನೆ ಮಾಡಿ ಇವರು ಸಂಪಾದಿಸುವುದು ಅವರ ಕುಟುಂಬ ನಿರ್ವಹಣೆಗಷ್ಟೇ ಸಾಕಾಗುತ್ತದೆ. ಅದರಿಂದ ಅವರು ಯಾವುದೇ ಮಹಲು ಖರೀದಿಸಲಾಗದು.
ಈ ವಿಚಾರದಲ್ಲಿ ಕಾನೂನು ಮಾತನಾಡುವ ನಾವು,
ಒಬ್ಬ ರಾಜಕಾರಣಿಯು ಸಂಬಳವನ್ನೇ ಪಡೆಯದೇ ಇದ್ದರೂ ಹೇಗೆಲ್ಲ ಆಸ್ತಿ ಸಂಪಾದಿಸಬಹುದು ಎಂದು ಯೋಚಿಸುತ್ತೇವೆಯೆ?
ಸರಕಾರಿ ಸಂಬಳ ಪಡೆಯುವ ಒಬ್ಬ MLA, MP ಅಥವಾ ಮಂತ್ರಿಯ ಆಸ್ತಿ ಕೆಲವೇ ವರ್ಷಗಳಲ್ಲಿ ಹೇಗೆ ನೂರಾರು ಕೋಟಿ ಆಗುತ್ತದೆ ಎಂದು ಕೇಳುತ್ತೇವೆಯೆ?
30.00 ರೂ ಬೆಲೆಯ ಪೆಟ್ರೋಲ್ ಗೆ ಕಾನೂನಿನ ಚೌಕಟ್ಟಿನಲ್ಲಿಯೇ ಅದರ ಬೆಲೆಯ ದುಪ್ಪಟ್ಟು ತೆರಿಗೆಯನ್ನು ಇಷ್ಟ ಬಂದಂತೆ ಹೆಚ್ಚಿಸಿ ಮೋಸ ಮಾಡುತ್ತಿರುವುದನ್ನ ಕಾನೂನಿನ ವ್ಯಾಪ್ತಿಯಲ್ಲಿಯೇ ಪ್ರಶ್ನಿಸುವ ಎದೆಗಾರಿಕೆ ನಮಗಿದೆಯೇ?
ಕೋಟ್ಯಾಧೀಶರ ಖಜಾನೆ ತುಂಬಿಸಲು ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದರಲ್ಲ , ಅದನ್ನ ಪ್ರಶ್ನಿಸಿದ್ದೇವೆಯೆ?
PM care ಫಂಡ್ ನ ಹಣದ ಲೆಕ್ಕಾಚಾರದ ಮಾಹಿತಯನ್ನ ಏಕೆ ಕೊಡುತ್ತಿಲ್ಲ ಎಂದು ಕೇಳುತ್ತೇವೆಯೆ?
ನ್ಯಾಯವಾಗಿ ಆದಾಯ ತೆರಿಗೆ ಕಟ್ಟಿ, ಗಾಡಿ ಖರೀದಿಸುವಾಗ ರೋಡ್ ಟ್ಯಾಕ್ಸ್ ಕಟ್ಟಿ, ರಸ್ತೆ ಉಪಯೋಗಿಶುವಾಗ ಟೋಲ್ ಕೂಡಾ ಕಟ್ಟುತ್ತೇವೆ. ಅದರ ಬಗ್ಗೆ ಕೇಳುತ್ತೇವೆಯೆ?
ಹೋಗಲಿ, ಉತ್ತಮವಾದ ರಸ್ತೆಯನ್ನಾದರೂ ಮಾಡಿದ್ದಾರೆಯೆ? ಅಗತ್ಯ ನೂಲ ಸೌಕರ್ಯಗಳಾದರೂ ಇದೆಯೆ ? ಅದನ್ನೂ ಕೇಳುವುದಿಲ್ಲ.
ನಮಗೆ ಕಾಣುವುದು ಕೇವಲ ಈ ಪುಡಿಗಾಸು ಸಂಪಾದನೆ ಮಾಡಿಕೊಳ್ಳುವವರು ಮಾತ್ರ. ಕೋಟಿ ಕೋಟಿ ಸಂಪಾದನೆ ಮಾಡುವವರು ಕಾಣಿಸುವುದೇ ಇಲ್ಲ. ಯಾಕೆಂದರೆ ನಾವು ಬ್ರಹ್ಮಾಸ್ತ್ರ ಬಿಡುವುದು ಕೇವಲ ಗುಬ್ಬಿಯ ಮೇಲೆ ಮಾತ್ರವೇ !
ನಮ್ಮ ವ್ಯವಸ್ಥೆಯೇ ಹಾಗಿದೆ. ಇದು ನಮ್ಮ. ತಪ್ಪಲ್ಲ.
ನನಗೆ ಅನಿಸಿದ್ದನ್ನ ಹೇಳಿದ್ದೇನೆ. ತಪ್ಪಿದ್ದರೆ ಕ್ಷಮಿಸಿಬಿಡಿ.
Meeting on future plans from the educational patron
ಧಾರವಾಡ : ವಿದ್ಯಾ ಪೋಷಕ ವತಿಯಿಂದ ಧಾರವಾಡ ಮತ್ತು ಗದಗಜಿಲ್ಲೆಗಳ ಸ್ವಯಂಸೇವಕರ ಸಭೆಯನ್ನು ಧಾರವಾಡದ ಜೆಎಸ್ಎಸ್ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ವಿದ್ಯಾ ಪೋಷಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರತ್ ಐರಣಿ ಉದ್ಘಾಟಿಸಿ ಮಾತನಾಡಿಆರ್ಥಿಕವಾಗಿ ಹಿಂದುಳಿದ ಸಾವಿರಾರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬದುಕಿಗೆ ಆರ್ಥಿಕವಾಗಿ ಸಹಾಯವನ್ನು ನೀಡುವ ಮೂಲಕ ಬೆಳಕಾದ ಈಸಂಸ್ಥೆ ಇಪ್ಪತೈದು ವರ್ಷಗಳನ್ನು ನಿಸ್ವಾರ್ಥ ಸೇವೆಯಿಂದಪೂರೈಸಿದ್ದು ಇದಕ್ಕೆ ಕಾರಣ ಸಮಾಜದ ಭವಿಷ್ಯವನ್ನು ರೂಪಿಸಿದಸಾವಿರಾರು ಕೈಗಳ ಸಮೂಹದ ಪ್ರಯತ್ನವೇ ಕಾರಣವಾಗಿದೆಎಂದರು.
ವಿದ್ಯಾ ಪೋಷಕ ಸಂಸ್ಥೆಯ ಗೌರವ ಆಧ್ಯಕ್ಷರಾದ ಡಾ. ರವೀಂದ್ರ ಗುರುವಣ್ಣವರ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳು, ಭವಿಷ್ಯದ ಯೋಜನೆಗಳು ಹಾಗೂಸ್ವಯಂಸೇವಕರ ಪಾತ್ರದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಎರಡೂ ಜಿಲ್ಲೆಗಳ ಸಮರ್ಪಿತ ಹಿರಿಯ ಸ್ವಯಂಸೇವಕರು, ದಾನಿಗಳು, ವಿದ್ಯಾ ಪೋಷಕದ ಮಾಜಿ ಸಿಬ್ಬಂದಿಗಳು ಹಾಗೂ ಯುವ (ಅಲ್ಯೂಮ್ನಿ) ಸದಸ್ಯರು ಭಾಗವಹಿಸಿದ್ದರು. ಎಲ್ಲರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡುವ ಅವಕಾಶ ಉತ್ಸಾಹಭರಿತ ಹಾಗೂ ಸ್ಮರಣೀಯ ಕ್ಷಣವಾಯಿತು. ಸಭೆಯಲ್ಲಿ ಸ್ವಯಂಸೇವಕರ ಅಭಿಪ್ರಾಯಗಳು, ಅನುಭವ ಹಂಚಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆಗಳು ನಡೆದವು. ಕಾರ್ಯಕ್ರಮವು ವಿದ್ಯಾ ಪೋಷಕದ ಧ್ಯೇಯ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಬಲತುಂಬುವAತಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ ಡಾ.ಸಂಗಮೇಶ ಸಜ್ಜನರ, ಡಾ.ಪಿ.ಎಸ್.ಕಣವಿ, ಡಾ.ಪ್ರಭು ಗಂಜಿಹಾಳ, ಆರ್.ಕೆ.ಭಾಗವಾನ, ಪ್ರೊ.ಹೊಳ್ಳಿಯವರಮಠ, ಪ್ರೊ.ಎಚ್.ಎನ್.ಕಾಳೆ, ವಿಜಯಕುಮಾರ ಸಜ್ಜನರ, ಶಶಿಧರ ಮಳಲಿ, ಮೊದಲಾದವರು ಭಾಗವಹಿಸಿದ್ದರು. ವಿದ್ಯಾಪೋಷಕ ಸಂಸ್ಥೆಯÀ ಫಾತಿಮಾ ಪಠಾಣ, ರತ್ನಾ ಹಿಪ್ಪರಗಿ, ಅನ್ನಪೂರ್ಣ ಯಡ್ರಾವಿ ಮತ್ತು ಸಿಬ್ಬಂದಿವರ್ಗ ಸಕ್ರಿಯವಾಗಿ ಪಾಲ್ಗೊಂಡಿದ್ದರು. ** -ಡಾ.ಪ್ರಭು ಗಂಜಿಹಾಳ
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ
ಜಾಹೀರಾತು
Farmers' Central ID mandatory to avail central government schemes
ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ರೈತರು ಸೆಂಟ್ರಲ್ ಐಡಿ (Central Farmer ID), ಅಂದರೆ, ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನಲ್ಲಿ 15,789 ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸುವುದು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದ ಪಿಎಮ್ ಕಿಸಾನ್, ಬೆಳೆ ವಿಮೆ, ಬೆಳೆ ಪರಿಹಾರ, ಖರೀದಿ ಕೇಂದ್ರ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ರೈತರು “ಸೆಂಟ್ರಲ್ ಫಾರ್ಮರ್ ಐಡಿ” ಮಾಡಿ ಕೊಳ್ಳುವುದು ಅಗತ್ಯವಿದ್ದು, ಕೊಪ್ಪಳ ತಾಲ್ಲೂಕಿನ ರೈತರು ಫ್ರೂಟ್ಸ್ (Fruits) ತಂತ್ರಾಶದಲ್ಲಿ ಸೆಂಟ್ರಲ್ ಫಾರ್ಮರ್ ಐಡಿಯನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಸೆಂಟ್ರಲ್ ಐಡಿ ಮಾಡಿಸುವವರು ಮೊಬೈಲ್ ಸಂಖ್ಯೆ ನವೀಕರಣಗೊಳಿಸುವುದು, ರೈತರ ಇ-ಕೆವೈಸಿ ಮಾಡಿಸುವುದು, ರೈತರಿಂದ ವಿದ್ಯುನ್ಮಾನ ಸಹಮತಿ ಪಡೆಯುವುದು ಹಾಗೂ ಭೂ ಘೋಷಣೆ (ಎಲ್ಲಾ ಜಮೀನಿನ ಸರ್ವೆ ನಂಬರಗಳನ್ನು ಅಥವಾ ಇಸಾ ನಂಬರ್ಗಳನ್ನು ತಮ್ಮ ಎಫ್ಐಡಿಗೆ ಜೋಡಣೆ ಮಾಡುವುದುರಿಂದ ಎಲ್ಲಾ ರೈತ ಬಾಂಧವರು ತಮ್ಮ ಎಲ್ಲಾ ಜಮೀನಿನ ವಿವರ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಅಥವಾ ಗ್ರಾಮ-1 ಕೇಂದ್ರಗಳಿಗೆ ಸಂಪರ್ಕಿಸಿವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಪ್ರಕಟಣೆ ತಿಳಿಸಿದೆ.
Verdict in the murder case at the Taluwagera fair: 15 convicts sentenced to 7 years rigorous imprisonment
ತಳುವಗೇರಾ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ತೀರ್ಪು: 15 ಅಪರಾಧಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಜಾಹೀರಾತು
ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): 2019ರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ನಡೆದ ಜಾತ್ರೆ ಸಂದರ್ಭದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ದಿನಾಂಕ: 27-03-2019 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಪಿರ್ಯಾದಿದಾರರಾದ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ತಂದೆ ಮಲ್ಲಿಕಾರ್ಜುನ ಕಂದಕೂರ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಉಗ್ಗಿ ಜೀವ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.55/2019ರಲ್ಲಿ ಐಪಿಸಿ ಕಲಂ 143, 147, 148, 323, 326, 307, 302, 504, 506 ಹಾಗೂ 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ್ ತಳವಾರ ಅವರು ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ಆರೋಪಿತರಾದ ಕಳಕಪ್ಪ ತಂದೆ ಬಾಳಪ್ಪ ಹುಂಡಿ, ದೊಡ್ಡಪ್ಪ ತಂದೆ ಬಾಳಪ್ಪ ಹುಂಡಿ, ನಾಗಪ್ಪ ತಂದೆ ಬಾಳಪ್ಪ ಹುಂಡಿ, ರಮೇಶ @ ಕೆಂಪಣ್ಣ ತಂದೆ ಕಳಕಪ್ಪ ಹುಂಡಿ, ಕೃಷ್ಣ ತಂದೆ ದೊಡ್ಡಪ್ಪ ಹುಂಡಿ, ಚಿದಾನಂದ ತಂದೆ ಹನುಮಪ್ಪ ಹುಂಡಿ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ ತಂದೆ ದೊಡ್ಡಪ್ಪ ಹುಂಡಿ, ಮಂಜುನಾಥ ತಂದೆ ಹನುಮಪ್ಪ ಹುಂಡಿ, ಅಮರಪ್ಪ ಬಾಲಪ್ಪ ಹುಂಡಿ, ನೀಲಪ್ಪ ತಂದೆ ಅಮರಪ್ಪ ಹುಂಡಿ, ಚಂದ್ರಶೇಖರ ತಂದೆ ದೊಡ್ಡಪ್ಪ ಹುಂಡಿ, ಯಮನೂರಪ್ಪ ತಂದೆ ಭೀಮಪ್ಪ ಹುಂಡಿ, ತಿಪ್ಪಣ್ಣ ತಂದೆ ಬಾಲನಗೌಡ ಮಾಲಿಪಾಟೀಲ ಹಾಗೂ ಮುತ್ತಪ್ಪ ತಂದೆ ಹನುಮಪ್ಪ ಹುಂಡಿ, ಇವರ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಗೌರವಾನ್ವಿತ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು 2026ರ ಫೆಬ್ರುವರಿ 28ರಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ 15 ಅಪರಾಧಿಗಳಿಗೆ ಭಾ.ದಂ.ಸಂ ಕಲಂ 143, 147, 148, 323, 324, 335, 506, 304(1) ಹಾಗೂ 149 ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ 40% ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ 15% ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಗಂಡ ದೊಡ್ಡಪ್ಪ ಹುಂಡಿ ಹಾಗೂ ರೇಣವ್ವ ಗಂಡ ನಾಗಪ್ಪ ಹುಂಡಿ, ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ ಎ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The ceremony of the 2025-26 class 10th students of Aaron Mirajkar School began with the words “May the future of the students be bright – Ruben Mirajkar”
ಆರೋ ನ್ ಮಿರಜ್ಕರ್ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ ಸಮಾ ರಂ ಭ “ವಿದ್ಯಾ ರ್ಥಿ ಗಳ ಭವಿಷ್ಯ ಉಜ್ವಲವಾ ಗಲಿ-ರು ಬೇ ನ್ ಮಿರಜ್ಕರ್”
ಜಾಹೀರಾತು
ಗಂಗಾವತಿ: 2ನೇ ಮಾ ರ್ಚ್ ಸೋ ಮವಾ ರದಂ ದು ಆರೋ ನ್ ಮಿರಜ್ಕರ್ ಆಂ ಗ್ಲ ಮಾ ಧ್ಯ ಮ ಪ್ರೌ ಢ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿಯ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ ಸಮಾ ರಂ ಭವನ್ನು ಏರ್ಪ ಡಿಸಲಾ ಗಿತ್ತು . ಕಾ ರ್ಯ ಕ್ರಮದಲ್ಲಿ ವಿಶೇ ಷ ಉಪನ್ಯಾ ಸವನ್ನು ಸ್ಪೂ ರ್ತಿ ದಾ ಯಕ ಭಾ ಷಣಕಾ ರರಾ ದ ಧನರಾ ಜ್ ಈ ಅವರು “ವಿದ್ಯಾ ರ್ಥಿ ಗಳಲ್ಲಿನ ಪ್ರ ತಿಭೆಯು ಕೇ ವಲ ಅಂ ಕಗಳಿಂ ದ ಕೂ ಡಿರದೆ ಜೀ ವನದ ಕೌ ಶಲ್ಯ ಗಳೊಂ ದಿಗೆ ಕೂ ಡಿರಬೇ ಕು . ಪರೀ ಕ್ಷೆಯ ಬಗ್ಗೆ ಯಾ ವು ದೇ ಒತ್ತಡ ಹಾ ಗೂ ಆತಂ ಕವಿಲ್ಲದೆ ಎದು ರಿಸಿ” ಎಂ ದು ತಮ್ಮ ವಿಶೇ ಷ ಉಪನ್ಯಾ ಸವನ್ನು ನೀ ಡಿದರು . ಕಾ ರ್ಯ ಕ್ರಮದ ಅಧ್ಯ ಕ್ಷತೆಯನ್ನು ಸಂ ಸ್ಥೆಯ ಅಧ್ಯ ಕ್ಷರಾ ದ ‘ಶ್ರೀ ಮತಿ ಚಿನ್ನಮ್ಮ ಮಿರಜಕರ್’ ವಹಿಸಿದ್ದರು . “ವಿದ್ಯಾ ರ್ಥಿ ಗಳು ತಾ ವೇ ರೂ ಪಿಸಿಕೊಂ ಡಿರು ವ ವೇ ಳಾ ಪಟ್ಟಿಯಂ ತೆ ಅಭ್ಯ ಸಿಸಿ ಉತ್ತಮ ಅಂ ಕಗಳೊಂ ದಿಗೆ ಪರೀ ಕ್ಷೆಯಲ್ಲಿ ಯಶಸ್ಸ ನ್ನು ಸಾ ಧಿಸಲಿ ಹಾ ಗೂ ಅವರ ಭವಿಷ್ಯ ಉಜ್ವ ಲವಾ ಗಲಿ” ಎಂ ದು ಶಾ ಲೆಯ ಕಾ ರ್ಯ ದರ್ಶಿ ಗಳಾ ದ ರು ಬೇ ನ್ ಮಿರಜ್ಕರ್ ಅವರು ತಿಳಿಸಿದರು . ರೆವ. ಶ್ರೀ ಯೇ ಸು ದಾ ಸ್ ಅವರು ಎಲ್ಲಾ ವಿದ್ಯಾ ರ್ಥಿ ಗಳಿಗೆ ದೇ ವರ ಪ್ರಾ ರ್ಥ ನೆ ಮತ್ತು ವಾ ಕ್ಯ ಗಳೊಂ ದಿಗೆ ಮಕ್ಕ ಳಿಗೆ ಶು ಭ ಹಾ ರೈ ಸಿದರು . “ಪರೀ ಕ್ಷೆಯನ್ನು ಎದು ರಿಸಬೇ ಕಾ ದರೆ ಮಕ್ಕ ಳಲ್ಲಿ ಅಚಲ ನಂ ಬಿಕೆ, ದೃಢ ನಿರ್ಧಾ ರ, ಸ್ಥಿರ ಮನಸ್ಸು ಇರಬೇ ಕು . ಮಕ್ಕ ಳು ಪರೀ ಕ್ಷೆಯನ್ನು ಯಶಸ್ವಿಯಾ ಗಿ ಎದು ರಿಸಲಿ” ಎಂ ದು ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಮಂ ಜು ನಾ ಥ ನಾ ಯಕ ಅವರು ಹೇ ಳಿದರು . ಶಾ ಲೆಯ ಖಜಾಂ ಚಿಗಳಾ ದ ಶ್ರೀ ಮತಿ ಸು ನೀ ತಾ ಮಿರಜಕರ್, ಆಡಳಿತಾ ಧಿಕಾ ರಿಗಳಾ ದ ಚಂ ದ್ರಕಾಂ ತರಾ ವ್, ನಿವೇ ದಿತಾ ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಶ್ರೀ ಮತಿ ರೇ ಖಾ ಠಾ ಕೂ ರ್ ವೇ ದಿಕೆಯನ್ನು ಹಂ ಚಿಕೊಂ ಡರು . ಈ ಸಂ ದರ್ಭ ದಲ್ಲಿ ವಿದ್ಯಾ ರ್ಥಿ ಗಳು ತಮ್ಮ ಅಭಿಪ್ರಾ ಯಗಳನ್ನು ಹಂ ಚಿಕೊಂ ಡರು . ಶಾ ಲೆಯ ಆಡಳಿತ ಮಂ ಡಳಿಯ ವತಿಯಿಂ ದ ವಿದ್ಯಾ ರ್ಥಿ ಗಳಿಗೆ ಪರೀ ಕ್ಷಾ ಸಾ ಮಗ್ರಿ ಗಳನ್ನು ನೀ ಡು ವು ದರ ಮೂ ಲಕ ಸಾಂ ಕೇ ತಿಕ ಶಾ ಲೆಯಿಂ ದ ಬೀ ಳ್ಕೊ ಡಲಾ ಯಿತು . ನಂ ತರ 8 ಮತ್ತು 9ನೇ ತರಗತಿ ವಿದ್ಯಾ ರ್ಥಿ ಗಳಿಂ ದ 10ನೇ ತರಗತಿ ವಿದ್ಯಾ ಥಿಗಳಿಗೆ ಮನರಂ ಜನೆಯನ್ನು ನೀ ಡಿದರು . ಕಾ ರ್ಯ ಕ್ರಮದಲ್ಲಿ ಉಭಯ ಶಾ ಲೆಗಳ ಶಿಕ್ಷಕ ವೃಂ ದ, ವಿದ್ಯಾ ರ್ಥಿ ಗಳು ಉಪಸ್ಥಿತರಿದ್ದರು . ಮಾ ಹಿತಿ
2022 State Level Book Selection List Published: Objection Invited
2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
ಜಾಹೀರಾತು
ಕೊಪ್ಪಳ ಮಾರ್ಚ್ 03, (ಕರ್ನಾಟಕ ವಾರ್ತೆ): 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಮಾರ್ಚ್ 2 ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಿದೆ. ಆಯ್ಕೆ ಪಟ್ಟಿಯನ್ನು ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಗಳಲ್ಲಿ ಹಾಗೂ ಇಲಾಖೆಯ ಅಧಿಕೃತ ವೆಬ್ಸೈಟ್ www.dpl.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಪುಸ್ತಕಗಳ ಪಟ್ಟಿಯಲ್ಲಿರುವ ಲೇಖಕರು, ಲೇಖಕ – ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ತಮ್ಮ ಪುಸ್ತಕಗಳಿಗೆ ಸಂಬAಧಿಸಿದ ಪುಸ್ತಕದ ಶೀರ್ಷಿಕೆ, ಲೇಖಕರ / ಪ್ರಕಾಶಕರ ಹೆಸರು, ಮುಖ ಬೆಲೆ (ನಿಗದಿತ ಬೆಲೆಯಲ್ಲಿ ವ್ಯತ್ಯಾಸವಿದ್ದಲ್ಲಿ), ಪುಸ್ತಕದ ಅಳತೆ ಮತ್ತು ಪುಟಗಳ ಸಂಖ್ಯೆ ಅಥವಾ ಇತರ ಯಾವುದೇ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ತಮ್ಮ ಆಕ್ಷೇಪಣೆ ಅಥವಾ ತಿದ್ದುಪಡಿಗಳನ್ನು ಅಧಿಕೃತ ಮಾಹಿತಿ / ದಾಖಲೆಗಳೊಂದಿಗೆ ಮಾರ್ಚ್ 16ರ ಸಂಜೆ 5.30ರ ಒಳಗಾಗಿ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು – 560001 ಇಲ್ಲಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಿಗದಿತ ಅವಧಿಯ ನಂತರ ಬರುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆದೇಶದನ್ವಯ ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಮಾರ್ಚ್ 03, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಹಾಗೂ ಸರ್ವೋದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರAದು ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್. ಮಾತನಾಡಿ, ಪ್ರತಿ ವರ್ಷ ಮಾರ್ಚ್ 3 ರಂದು “ವಿಶ್ಚ ಶ್ರವಣ ದಿನ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಶ್ರವಣದೋಷ ಮತ್ತು ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. “ಸಮುದಾಯಗಳಿಂದ ತರಗತಿಗಳಿಗೆ: ಎಲ್ಲಾ ಮಕ್ಕಳಿಗೆ ಶ್ರವಣ ಆರೈಕೆ, ಯಾವುದೇ ಮಗು ಶ್ರವಣ ಅಥವಾ ಶ್ರವಣ ಸಮಸ್ಯೆಗಳಿಂದ ಭವಿಷ್ಯದಲ್ಲಿ ಹಿಂದೆ ಉಳಿಯದಂತೆ ಈಗಲೇ ನಿಗಾವಹಿಸಿ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಚರಿಸಲಾಗುತ್ತದೆ. ಕಿವಿಯು ಪ್ರತಿಯೊಬ್ಬ ಮನುಷ್ಯನ ಪಂಚೇAದ್ರಿಯಗಳಲ್ಲಿ ಪ್ರಮುಖ ಅಂಗವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ರಕ್ಷಣೆ ಮಾಡಿಕೊಳ್ಳಬೇಕು. ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಕಡೆಯಿಂದ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನೂ ಹಾಕಬಾರದು, ಕಲುಷಿತ ನೀರಿನಲ್ಲಿ ಈಜಬಾರದು ಎಂದು ತಿಳಿಸಿದರು. ಕಿವಿನೋವು, ಸೋರುವಿಕೆ ಕಂಡು ಬಂದರೆ ತಮ್ಮ ಸಮೀಪದ ತಾಲೂಕಾ/ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಬೇಕು ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಎಲ್ಲರೂ ತಮ್ಮ ತಮ್ಮ ಕಿವಿಯ ರಕ್ಷಣೆಯ ಬಗ್ಗೆ ಜಾಗೃತರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ. ಅವಿನಾಶ ಮಾತನಾಡಿ, ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ, ನವಜಾತು ಶಿಶುವಿನ ಕಿವಿಯ ಆರೈಕೆ ಮತ್ತು ಕಾರ್ಯಕ್ರಮದಡಿಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಇವರು ಮಾತನಾಡಿ, ಕಿವಿಯ ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿವರವಾಗಿ ಮಾತನಾಡಿದರು. ಆಡಿಯೋಲಾಜಿಸ್ಟ್ ಬಿಂದು ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಕಿವಿಯ ಪರೀಕ್ಷೆ ಹಾಗೂ ಸೇವಾ ಸೌಲಭ್ಯಗಳ ಬಗ್ಗೆ ಮಾತನಾಡಿದರು. ನಂತರ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಕಿವಿಯ ತಪಾಸಣೆ ಮಾಡಿ, ನ್ಯೂನ್ಯೆತೆವುಳ್ಳವರಿಗೆ ಚಿಕಿತ್ಸೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ನಿಂಗಪ್ಪ ಗದ್ದಿಗೇರಿ ಮಾತನಾಡಿ, ಆರೋಗ್ಯ ಮತ್ತÄ ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿಯ ತಪಾಸಣಾ ಶಿಬಿರ ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ್ತ-ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಹಿತ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದರು
Selected as a civil judge in the first attempt: Santosh Belagode receives grand honours at Gangavathi
ಪ್ರಥಮ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸಂತೋಷ್ ಬೆಳಗೋಡ್ಗೆ ಗಂಗಾವತಿಯಲ್ಲಿ ಭವ್ಯ ಸನ್ಮಾನ
ಜಾಹೀರಾತು
ಗಂಗಾವತಿ: ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಸಂತೋಷ್ ಬೆಳಗೋಡ್ ಅವರನ್ನು ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಗೌರವಿಸಲಾಯಿತು.
ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ಕೋಶ ಅಧ್ಯಕ್ಷರಾದ ಶ್ರೀ ರಾಜಶೇಖರ್ ಬೆಳಗೋಡ್ ಅವರ ಹಿರಿಯ ಸಹೋದರರಾದ ಬಸವರಾಜ್ ಬೆಳಗೋಡ್ ಅವರ ಪುತ್ರ ಸಂತೋಷ್ ಬೆಳಗೋಡ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಸಂತೋಷ್ ಬೆಳಗೋಡ್ ಅವರ ಸ್ವಗ್ರಾಮ ಚಿಕ್ಕಜಾಂತಕಲ್ನ ನಿವಾಸಕ್ಕೆ ಭೇಟಿ ನೀಡಿ, ಶುಭಾಶಯ ಕೋರಿದರು ಹಾಗೂ ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷರಾದ ಕೆ. ಮಂಜುನಾಥ್ ಮಾತನಾಡಿ, “ಸಂತೋಷ್ ಬೆಳಗೋಡ್ ಅವರು ಕಿರಿಯ ವಯಸ್ಸಿನಲ್ಲಿ ನ್ಯಾಯಾಂಗದ ಅತೀ ಗೌರವಾನ್ವಿತ ಹುದ್ದೆಯಾದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಅನೇಕ ಕಿರಿಯ ವಕೀಲರಿಗೆ ಮಾದರಿಯಾಗಿದೆ. ಅವರು ನ್ಯಾಯದಾನದ ವ್ಯವಸ್ಥೆಯಲ್ಲಿ ಶೋಷಿತ, ಹಿಂದುಳಿದ ಹಾಗೂ ಬಡ ಜನರಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿ, ಭವಿಷ್ಯದಲ್ಲಿ ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಟಿ.ಎಂ. ಚನ್ನಬಸವ ಶಾಸ್ತ್ರಿ, ಅಧ್ಯಕ್ಷರಾದ ಕೆ. ಮಂಜುನಾಥ್, ಸಹ ಕಾರ್ಯದರ್ಶಿ ಹೆಚ್. ವೀರಭದ್ರಪ್ಪ, ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್, ಹಾಗೂ ಪದಾಧಿಕಾರಿಗಳಾದ ವಸಂತಗೌಡ, ಅಯಾಜ್, ಮಸೂಮ್ ಶರೀಫ್, ಸಲೀಂ ಖಾನ್, ಮೆಹಬೂಬ್ ಸೇರಿದಂತೆ ಅನೇಕ ಪಡಿತರ ವಿತರಕರು ಉಪಸ್ಥಿತರಿದ್ದರು.
It is our fortune to celebrate the birth anniversary of the great man: MLA MR Manjunath.
ಮಹಾನಿಯರ ಜಯಂತಿಯನ್ನು ಆಚರಿಸುವುದೆ ನಮ್ಮ ಅದೃಷ್ಟ : ಶಾಸಕ ಎಮ್ ಆರ್ ಮಂಜುನಾಥ್ .
ಜಾಹೀರಾತು
ವರದಿ: ಬಂಗಾರಪ್ಪ ,ಸಿ. ಹನೂರು :ಕಾಲಜ್ಞಾನಿಗಳಾದ ಶ್ರೀ ಯೋಗಿ ನಾರಾಯಣ ಯತೀಂದ್ರರವರ ಜಯಂತಿಯನ್ನು ನಾಡಿನಾದ್ಯಂತ ಸರ್ಕಾರ ಹಾಗೂ ಎಲ್ಲಾ ಜನಾಂಗದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ನಮ್ಮೇಲ್ಲರಿಗೂ ಹೆಮ್ಮೇಯ ವಿಷಯ ,ಎಲ್ಲಾ ಸಮುದಾಯಗಳಿಗೂ ಗುರುಗಳಿದ್ದಾರೆ , ಅವರುಗಳನ್ನು ಅನುಸರಿಸುವ ಕಾರ್ಯವನ್ನು ಆಯಾ ಸಮುದಾಯದವರು ಮಾಡಿದರೆ ಸಮಾಜವು ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.
ಹನೂರು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯವತಿಯಿಂದ ಹನೂರು ತಾಲ್ಲೂಕು ಕೇಂದ್ರದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿಗೃಹದಲ್ಲಿ ಮಾತನಾಡಿದ ಶಾಸಕರು ಗುರುಗಳು ಕಾಲ ಜ್ಞಾನದ ಮಾತು ಇಂದು ಅಕ್ಷರಶಃ ನಿಜವಾಗಿದೆ ನಿಮ್ಮ ಜನಾಂಗಕ್ಕೆ ಜಾತಿ ಪ್ರಮಾಣಪತ್ರದಿಂದ ಬಹು ದೊಡ್ಡ ಅನ್ಯಾಯವಾಗುತ್ತದೆ , ಮುಂದಿನ ದಿನಗಳಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ಶಾಸಕರ ಅನುದಾನದಲ್ಲಿ ಐವತ್ತು ಲಕ್ಷ ಹಣವನ್ನು ನೀಡಲಾಗುವುದು,ಎಲ್ಲಾ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು,ನಮ್ಮ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಯತ್ನ ಮಾಡಲಾಗುವುದು, ಮುಖ್ಯ ಭಾಷಣಕಾರರಾದ ಬಣಜಿಗ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಗೋಪಾಲ್ ಮಾತನಾಡಿ ಕೈವಾರ ತಾತಯ್ಯ ರವರು ಕಾಲಜ್ಞಾನಿಯಾಗಿದ್ದವರು ,ಮುಂದಿನ ದಿನಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಸವಿಸ್ತಾರವಾಗಿ ಬರೆದಿದ್ದಾರೆ ಅವರ ದೂರ ದೃಷ್ಟಿಗೆ ಪ್ರಪಂಚದಲ್ಲಿ ಹೆಚ್ಚುತಿರುವ ಜನಸಂಖ್ಯೆಯ ಸಂಖ್ಯೆಯು ಕಾರಣವಾಗಿದೆ ಅಲ್ಲದೆ ನಮ್ಮ ಮುಂದಿನ ಪೀಳಿಗೆಗೆ ಬೇಕಾದ ಜ್ಞಾನ ಕೋಶವನ್ನು ಸಹ ಬರೆದಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಯುತ ಗೋಪಾಲ್ ರವರು ಶ್ರೀ ಯೋಗಿ ನಾರೇಯೆಣ ರವರ ಭಾವ ಚಿತ್ರವನ್ನು ಶಾಸಕರು,ಮತ್ತು ತಹಸಿಲ್ದಾರ್ ಚೈತ್ರ ರವರು ಹಾಗೂ ಇನ್ನಿತರರ ಜೋತೆಯಲ್ಲಿ ಅನಾವರಣ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಇ ರಂಗಸ್ವಾಮಿ ಮಾತನಾಡಿ ರವರು ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದಲ್ಲಿ ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ತಹಸಿಲ್ದಾರ್ ಶ್ರೀ ಮತಿ ಚೈತ್ರ, ಎಇ ರಂಗಸ್ವಾಮಿ , ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳಾದ ಮಹೇಶ್ ,ಚನ್ನಪ್ಪಶೆಟ್ಟಿ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ರಾದ ರಂಗಸ್ವಾಮಿ ಶಿಕ್ಷಕರಾದ ಮಹೇಶ್,ಮಾದೇಶ್ , ರೈತ ಸಂಘದ ಅಧ್ಯಕ್ಷರಾದ ಹರೀಶ್ , ಶ್ರೀರಂಗಶೇಟ್ರು ,ಪ್ರಕಾಶ್ ,ಮಂಜು ,ಆರ್ ರಂಗಶೇಟ್ಟಿ ,ಜೈರಾಮ್ , ಬಸವರಾಜು,ಮುನಿಸ್ವಾಮಿ ,ಪ್ರಸನ್ನ ,ಚಂದ್ರ ,ನಾಗ,ಶಿವಣ್ಣ, ವಿಜಯಕುಮಾರ್ ,ವೆಂಕಟಾಚಲ,ಬಸವರಾಜು , ಸೇರಿದಂತೆ ಇನ್ನಿತರರು ಹಾಜರಿದ್ದರು ,