ರಸ್ತೆ ಗುಡಿಸಿದ ಕೈಗಳಿಗೆ ಆಡಳಿತ: ಸಚಿವರಾದ ಕೆ.ಎಸ್. ಬಸವಂತಪ್ಪ-ಸಂವಿಧಾನದ ಶಕ್ತಿ ಎಂದರೇ ಇದೇ ಡಾ. ಆನಂದ ಕುಮಾರ್

Governance in the hands that once swept the streets: Minister K.S. Basavantappa — This is the true power of the Constitution, says Dr. Anand Kumar. ರಸ್ತೆ ಗುಡಿಸಿದ ಕೈಗಳಿಗೆ ಆಡಳಿತ: ಸಚಿವರಾದ…

H.Mallikarjun

ರವೀಂದ್ರ ಕಲಾಕ್ಷೇತ್ರದಲ್ಲಿ “ಶ್ರೀರಾಘವೇಂದ್ರ ಮಹಿಮೆ” ಎಂಬ ಯಕ್ಷಗಾನ ಕಾರ್ಯಕ್ರಮ

Sri Raghavendra Mahime" Yakshagana program at Ravindra Kalakshetra. ರವೀಂದ್ರ ಕಲಾಕ್ಷೇತ್ರದಲ್ಲಿ "ಶ್ರೀರಾಘವೇಂದ್ರ ಮಹಿಮೆ" ಎಂಬ ಯಕ್ಷಗಾನ ಕಾರ್ಯಕ್ರಮ ಶ್ರೀರಾಘವೇಂದ್ರ ಮಹಿಮೆ" ಯಕ್ಷಗಾನ ಕಾರ್ಯಕ್ರಮ - ( ಪ್ರವೇಶ ಉಚಿತ) - ದಿ. 09-08-2026 ರ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ…

H.Mallikarjun

ಐಸಾ ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಬೋರಾ ಮೇಲಿನ ದಾಳಿ ಖಂಡಿಸಿ: ಸಂಘಿ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹಿಸಿ ಪ್ರತಿಭಟನೆ

Protest condemning the attack on AISA National President Comrade Neha Bora: CPI(ML) Liberation demands strict action against Sanghi goons. ಐಸಾ ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಬೋರಾ ಮೇಲಿನ ದಾಳಿ ಖಂಡಿಸಿ: ಸಂಘಿ ಗೂಂಡಾಗಳ…

H.Mallikarjun

ಇಎಸ್ಐಸಿಯಲ್ಲಿ ಎಲುಬು, ಕೀಲು ದಿನ ಆಚರಣೆ

Bone and joint day celebration at ESIC ಇಎಸ್ಐಸಿಯಲ್ಲಿ ಎಲುಬು, ಕೀಲು ದಿನ ಆಚರಣೆ ಬೆಂಗಳೂರು: ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್‌ ನಿಂದ ಎಲುಬು ಮತ್ತು ಕೀಲು ದಿನವನ್ನು ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆಯ ಎಂಸಿಆರ್ ನಲ್ಲಿ ಆಚರಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ನಡೆದ…

H.Mallikarjun

ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7 ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್‌-9 ರಂದುಕೊಪ್ಪಳದಲ್ಲಿ  ಜನಜಾಗೃತಿ ಸಮಾವೇಶ

Mass public awareness rally in Koppal on August 9 demanding 7% reservation for the Valmiki Nayaka community. ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7 ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್‌-9 ರಂದುಕೊಪ್ಪಳದಲ್ಲಿ ಬೃಹತ್‌ ಜನಜಾಗೃತಿ ಸಮಾವೇಶ ಗಂಗಾವತಿ:…

H.Mallikarjun

ಆಗಸ್ಟ್ 10 ರಿಂದ ಡಿ.ಇಎಲ್.ಇಡಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

D.El.Ed. exams from August 10: Prohibitory orders imposed. ಆಗಸ್ಟ್ 10 ರಿಂದ ಡಿ.ಇಎಲ್.ಇಡಿ ಪರೀಕ್ಷೆ : ನಿಷೇಧಾಜ್ಞೆ ಜಾರಿ ಕೊಪ್ಪಳ ಆಗಸ್ಟ್ 07, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಆಗಸ್ಟ್ 10 ರಿಂದ ಆಗಸ್ಟ್ 21 ರವರೆಗೆ ಡಿ.ಇಎಲ್.ಇಡಿ ಪರೀಕ್ಷೆಗಳು…

H.Mallikarjun

ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ’ ವೃತ್ತಿ ಮಾರ್ಗದರ್ಶನ

Path to the Future' Career Guidance for SSLC and PUC Female Students ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ' ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್,…

H.Mallikarjun

ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ: ಸಂತೋಷ ಕುಮಾರ ಸೂಚನೆ

Prioritize the protection of children's rights: Santhosh Kumar's directive ಕೊಪ್ಪಳ ಜಿಲ್ಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಸದಸ್ಯರ ಭೇಟಿ * ವಸತಿ ನಿಲಯ, ಶಾಲೆ, ಪೊಲೀಸ್ ಠಾಣೆ, ಆಸ್ಪತ್ರೆಗಳ ಪರಿಶೀಲನೆ * ನ್ಯೂನತೆಗಳನ್ನು ತ್ವರಿತವಾಗಿ…

H.Mallikarjun

ಮೃತರಇಬ್ಬರುಮಕ್ಕಳಿಗೆತಲಾ 7.50 ಲಕ್ಷರೂ.ದಂತೆ 15 ಲಕ್ಷರೂಪರಿಹಾರ

Compensation of ₹15 lakh—₹7.50 lakh each—for the two children of the deceased. ಮೃತರ ಇಬ್ಬರು ಮಕ್ಕಳಿಗೆ ತಲಾ 7.50 ಲಕ್ಷ ರೂ.ದಂತೆ 15 ಲಕ್ಷ ರೂ ಪರಿಹಾರ * ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರಿಗೆ ಚಿಕಿತ್ಸಾ ವೆಚ್ಚ ಪಾವತಿಗೆ  ಸೂಚನೆ ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ‌ ಮರಣ ಹೊಂದಿದ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರ ಭೇಟಿ; ಸಾಂತ್ವನ ಕೊಪ್ಪಳ ಆಗಸ್ಟ್ 07:(ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗುಡ್ಡ ಕುಸಿತ ದುರಂತ (ಭೂಕುಸಿತದಿಂದ‌) ಮರಣ ಹೊಂದಿದ ಕೊಪ್ಪಳ ಜಿಲ್ಲೆಯ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 07ರಂದು ಭೇಟಿ ನೀಡಿ, ಸಾಂತ್ವನ ಹೇಳಿದರು. ತಹಸೀಲ್ದಾರ ಶಿವಮೊಗ್ಗ ಇವರ ವಿಪತ್ತು ನಿರ್ವಹಣಾ ಖಾತೆಯಿಂದ ಪಾವತಿ ಮಾಡಲಾದ 15 ಲಕ್ಷ ರೂ.ಗಳನ್ನು ಮೃತರ ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು,  ಮೃತರ ಹೆಣ್ಣು ಮಕ್ಕಳಾದ ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ತಹಸೀಲ್ದಾರ ಶಿವಮೊಗ್ಗ ಇವರು  ತಲಾ 7,50,000 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ ರಸೀದಿಯನ್ನು ಸಚಿವರು ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ಅವರ ಗಂಡಜ್ಜಿ ಗೌರಮ್ಮ ಸಮ್ಮುಖದಲ್ಲಿ ವಿತರಣೆ ಮಾಡಿದರು. *ವಿದ್ಯಾಭ್ಯಾಸಕ್ಕೆ ಅನುಕೂಲ:* ದಿವ್ಯ ಏಳು ವರ್ಷದವಳಿದ್ದು 1ನೇ ತರಗತಿಯಲ್ಲಿ ಹಾಗೂ ಮಹಾಲಕ್ಷ್ಮಿ 9 ವರ್ಷದವಳಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿ ಎಂದು ಕುಟುಂಬಸ್ಥರು ಸಚಿವರಲ್ಲಿ ಮನವಿ ಮಾಡಿದರು. ಕುಟುಂಬದವರು ಒಪ್ಪಿದಲ್ಲಿ ಬಾಲಕಿಯರ ಬಾಲ ಮಂದಿರದಲ್ಲಿದ್ದು ಓದಲು ಎಲ್ಲ ರೀತಿಯ ಸೌಕರ್ಯ ಒದಗಿಸಿ ಕೊಡುತ್ತೇವೆ. ಕುಟುಂಬದವರು ಒಪ್ಪದಿದ್ದಲ್ಲಿ ದಿವ್ಯ ಮತ್ತು ಮಹಾಲಕ್ಷ್ಮಿ ಇಬ್ಬರಿಗೆ  ತಿಂಗಳಿಗೆ ತಲಾ 4000 ರೂ ಗಳಂತೆ 3 ವರ್ಷ ಪ್ರಾಯೋಜಕ್ವತಡಿ ಇಬ್ಬರಿಗೂ ಸಹಾಯಧನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಮೃತ ಕುಟುಂಬದವರು ಬಡವರಾಗಿದ್ದಾರೆ. ಅವರಿಗೆ ವಾಸಿಸಲು ಮನೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದರು. ಪಂಚಾಯಿತಿ ಅಧಿಕಾರಿಗಳಿಗೆ ಹೇಳಿ ಮನೆ ಕೊಡಿಸುವುದಾಗಿ ಸಚಿವರು ತಿಳಿಸಿದರು. *ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಪಾವತಿ:* ತೀರ್ಥಹಳ್ಳಿಗೆ ದುಡಿಯಲು ಹೋಗಿದ್ದ ವೇಳೆ  ಸಂಭವಿಸಿದ ಅವಘಡದಲ್ಲಿ ಸಿಲುಕಿ ತೀವ್ರ ಗಾಯಗೊಂಡ ಕಕ್ಕರಗೋಳದ ಹನುಮಂತ ತಂದೆ ಫಕೀರಪ್ಪ ಹಾಗೂ ಮುಕ್ಕುಂದದ ಅಮೃತ ಗಂಡ ರಾಮಣ್ಣ ಅವರು ಸಚಿವರಿಗೆ ಭೇಟಿ ಮಾಡಿ ಪರಿಹಾರ ಕೋರಿದರು. ಗಾಯಗೊಂಡವರಿಗೆ ಸಹ ನಿಯಮಾನುಸಾರ ಚಿಕಿತ್ಸಾ ವೆಚ್ಚ ಪಾವತಿಗೆ ಮತ್ತು ಇನ್ನೀತರ ಪರಿಹಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು. ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ‌ ವರ್ಣಿತ್ ನೇಗಿ, ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ, ಇಓ ಲಕ್ಷ್ಮೀದೇವಿ ಯಾದವ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ (ಯಲಿಗಾರ) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು, ಮೃತರ ಕುಟುಂಬಸ್ಥರು ಹಾಗೂ ಕಕ್ಕರಗೋಳ ಗ್ರಾಮಸ್ಥರು ಉಪಸ್ಥಿತರಿದ್ದರು. *ಶಿವಮೊಗ್ಗ ತಹಸೀಲ್ದಾರ ವಿಪತ್ತು ನಿರ್ವಹಣಾ ಖಾತೆಯಿಂದ ಪರಿಹಾರ:* ತೀರ್ಥಹಳ್ಳಿ ತಾಲೂಕಿನ ಇಂದಿರಾ ನಗರದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ  ಒಂದೇ ಕುಟುಂಬದ 3 ಜನ ಮೃತಪಟ್ಟಿದ್ದರು. ಮೃತರ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳಂತೆ  ಒಟ್ಟು ಪರಿಹಾರ 15 ಲಕ್ಷ ರೂ.ಗಳನ್ನು ತಹಸೀಲ್ದಾರ ಶಿವಮೊಗ್ಗ ವಿಪತ್ತು ನಿರ್ವಹಣಾ ಖಾತೆಯಿಂದ  ಪರಿಹಾರ ವಿತರಣೆ ಮಾಡಲು ಶಿವಮೋಗ್ಗ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.

H.Mallikarjun