ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕುಸದಾಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು
ಕಲ್ಯಾಣಸಿರಿ ವಿಶೇಷ- Est 1 min
- 0 Views
- 40 minutes ago
ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 hour ago
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .
ಕಲ್ಯಾಣಸಿರಿ ವಿಶೇಷ- Est 1 min
- 0 Views
- 24 hours ago
ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್
ಕಲ್ಯಾಣಸಿರಿ ವಿಶೇಷ- Est 1 min
- 0 Views
- 24 hours ago
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 day ago
ಮಹಿಳೆಯರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ ಕರ್ನಾಟಕ ರಾಜ್ಯ ಬಜೆಟ್ ಕುರಿತು ಎಐಎಂಎಸ್ಎಸ್ ಹೇಳಿಕೆ
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 day ago
Top 10 News
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ
ಹುಬ್ಬಳ್ಳಿ: ಕರ್ನಾಟಕ ಚೇಂಬರ್ ಅಧ್ಯಕ್ಷರಾಗಿ ಸಂಶಿಮಠ ಆಯ್ಕೆ
ಕ್ರೀಡಾ ಇಲಾಖೆ ಸಹಾಯಕನಿರ್ದೇಶಕರಾಗಿ ನಾಗರಾಜ ಅಧಿಕಾರ ಸ್ವೀಕಾರ
ಕೆಸರಹಟ್ಟಿ:ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ
ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ
ನೇಕಾರರ ಗಣತಿ, ಘಟಕಗಳ ಸಮೀಕ್ಷೆಗೆ ದಾಖಲೆ ಸಲ್ಲಿಸಲು ಸೂಚನೆ
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಜುಲೈ 12ಕ್ಕೆ
ಕೊಪ್ಪಳ ಜಿಲ್ಲಾ ನೂತನ ಉಪವಿಭಾಗಾಧಿಕಾರಿಗಳಾಗಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅಧಿಕಾರ ಸ್ಚೀಕಾರ



Sport
News
ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್ಯುಸಿಐ(ಸಿ) ಆಗ್ರಹ
ಕಲ್ಯಾಣಸಿರಿ ವಿಶೇಷ- Est 1 min
- 0 Views
- 28 minutes ago
ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕುಸದಾಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು
ಕಲ್ಯಾಣಸಿರಿ ವಿಶೇಷ- Est 1 min
- 0 Views
- 40 minutes ago
ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 hour ago
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .
ಕಲ್ಯಾಣಸಿರಿ ವಿಶೇಷ- Est 1 min
- 0 Views
- 24 hours ago
ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್
ಕಲ್ಯಾಣಸಿರಿ ವಿಶೇಷ- Est 1 min
- 0 Views
- 24 hours ago
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 day ago
ಮಹಿಳೆಯರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ ಕರ್ನಾಟಕ ರಾಜ್ಯ ಬಜೆಟ್ ಕುರಿತು ಎಐಎಂಎಸ್ಎಸ್ ಹೇಳಿಕೆ
ಕಲ್ಯಾಣಸಿರಿ ವಿಶೇಷ- Est 1 min
- 0 Views
- 1 day ago
Recent
Posts
ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್ಯುಸಿಐ(ಸಿ) ಆಗ್ರಹ
Immediately roll back the gas cylinder price hike: SUCI(C) demands
ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್ಯುಸಿಐ(ಸಿ) ಆಗ್ರಹ

ಕೊಪ್ಪಳ:ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಗೆ ಖಂಡನೆ
ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹಬಳಕೆಯ ಅನಿಲ ಸಿಲಿಂಡರ್ಗೆ ರೂ.60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ಗೆ ರೂ.114 ಹೆಚ್ಚಳ ಮಾಡಿರುವ ಕ್ರಮವನ್ನು ಎಸ್ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕಾ–ಇಸ್ರೇಲ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಮತ್ತು ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿ ಈ ಬೆಲೆ ಏರಿಕೆಯನ್ನು ಸಮರ್ಥಿಸಲಾಗುತ್ತಿದೆ. ಆದರೆ ಈ ಕುರಿತು ಕೇಂದ್ರ ಬಿಜೆಪಿ ಸರ್ಕಾರವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ ಏಕೆ? ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕಾ ಹಾಕಿದ ಒತ್ತಡಕ್ಕೆ ಮಣಿದಿರುವುದು ಯಾರ ಹಿತಾಸಕ್ತಿಗಾಗಿ? ಇನ್ನೂ 50 ದಿನಗಳಿಗೆ ಬೇಕಾದಷ್ಟು ಕಚ್ಚಾತೈಲ ಸಂಗ್ರಹವಿದೆ ಎಂಬ ವರದಿಗಳು ಇದ್ದಾಗಲೇ ಹಳೆಯ ದರದಲ್ಲಿ ಖರೀದಿಸಿದ ತೈಲದ ಬೆಲೆ ಹೆಚ್ಚಿಸುವುದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ.
ಈಗಾಗಲೇ ಜನರ ಜೀವನ ವೆಚ್ಚ ಭಾರೀ ಏರಿಕೆಯಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ವೇತನ ಹೆಚ್ಚಳವಾಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ. ದುಡಿಯುವ ಜನರು ಸಾಲ ಮಾಡಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಲಿದೆ.
ಯುದ್ಧದ ಸಂಕಷ್ಟದ ಸಂದರ್ಭದಲ್ಲಿಯೂ ಜನರನ್ನು ದೋಚುವ ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯನ್ನು ಎಸ್ಯುಸಿಐ(ಸಿ) ಕಟುವಾಗಿ ವಿರೋಧಿಸುತ್ತದೆ. ತಕ್ಷಣವೇ ಅನಿಲ ಸಿಲಿಂಡರ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಜೊತೆಗೆ ಕಚ್ಚಾತೈಲ ಖರೀದಿಗೆ ಪರ್ಯಾಯ ಮೂಲಗಳನ್ನು ಕಂಡುಹಿಡಿಯುವಲ್ಲಿ ದೇಶದ ಸಾರ್ವಭೌಮತ್ವವನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.
ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕುಸದಾಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು
Students should learn new things and always be active in activities: S.V. Patil Gundur

ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕು ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು

ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕವಿಗಳು, ರಂಗ ನಿರ್ದೇಶಕರು, ಚಲನಚಿತ್ರ ನಿರ್ದೇಶಕರು
ಆದ ಶ್ರೀ ಎಸ್.ವಿ. ಪಾಟೀಲ್ ಗುಂಡೂರು ರವರು ಮಾರ್ಚ್-6 ರಂದು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಸಾಪಟ್ಟಣ ಶಾಲೆಯಲ್ಲಿ ಏಳನೇ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾ ಡಿದ ಅವರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯು 2002 ರಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯ ಅನುದಾನದ ಅಡಿಯಲ್ಲಿ ಕುಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಲಿಕಾ ಕೇಂದ್ರಗಳನ್ನು ಆರಂಭಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಸಣ್ಣೆಪ್ಪರವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಎಸ್.ವಿ. ಪಾಟೀಲ್ ಗುಂಡೂರು ರವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹೊಸತನ್ನು ಕಲಿಯಬೇಕು ಎನ್ನುವ ದೆಸೆಯಲ್ಲಿ ತಾವು ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವಾಗ ‘ಯಕ್ಷ ಪ್ರಶ್ನೆ” ಎನ್ನುವ ಪಾಠವನ್ನು ನಾಟಕವನ್ನಾಗಿ ಬರೆದು ನಿರ್ದೇಶಿಸಿ, ಅಭಿನಯಿಸಿದ ಪ್ರಸಂಗವನ್ನು ಮಕ್ಕಳ ಮುಂದೆ ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೊಸತನವನ್ನು ಕಲಿಯಬೇಕು, ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು, ಗುರು ಹಿರಿಯರಿಗೆ, ಗೌರವ ನೀಡಬೇಕು, ಹೆತ್ತ ತಂದೆ ತಾಯಿಗಳಿಗೆ ಗೌರವ ಕೊಡುವುದಷ್ಟೇ ಅಲ್ಲ ಅವರನ್ನು ಗೌರವದಿಂದ ನೋಡಿಕೊಳ್ಳುವುದು ಆಗಿದೆ. ಇಂದಿನ ದೃಶ್ಯ ಮಾಧ್ಯಮ ಡಿಜಿಟಲ್ ಮಾಧ್ಯಮದಿಂದ ಅವಶ್ಯವಾದುದನ್ನು ಬಳಸಿಕೊಂಡು ಪ್ರಗತಿಯಡೆಗೆ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಎಸ್.ವಿ. ಪಾಟೀ ಲ್ ಗುಂಡೂರು ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು
ಈ ಶುಭ ಸಮಾರಂಭದಲ್ಲಿ ಅಧ್ಯಕ್ಷರಾದ ಸಣ್ಣೆಪ್ಪ ವಿಠಲಾಪುರ, ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ, ಶಾಲೆಯ ಮುಖ್ಯಗುರು ಗಳಾದ ನಿಂಗಪ್ಪ ಗುಂಡೂರು, ಹಿರಿಯ ಶಿಕ್ಷಕರಾದ ಪ್ರವೀಣ್ ಕುಮಾರ್, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು
ಶಿಕ್ಷಕರಾದ ಮಹಮ್ಮದ್ ಹನೀಫ್ ಸ್ವಾಗತಿಸಿದರು, ನಾಗಭೂಷಣ ನಿರೂಪಿಸಿದರು, ಪ್ರವೀಣಕುಮಾರ್ ವಂದಿಸಿದರು.
ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ
Ramesh Balutagi awarded PhD degree

ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಕಾರಟಗಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದಿಂದ ಕಾರಟಗಿಯ ನಿವಾಸಿ, ಉಪನ್ಯಾಸಕ ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಪ್ರಸ್ತುತ ಬಳ್ಳಾರಿ ವೀವಿ ಸಂಘ (ರಿ)ದ ವಿಜಯನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ರಮೇಶ ಅವರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ “ಫಿಸಿಕ-ಕೆಮಿಕಲ್ ಅನಾಲಿಸಿಸ್ ಅಂಡ್ ಥೆಇರ್ ಕಂಪೆರಟಿವೆ ಸ್ಟಡೀಸ್ ಆ ಗ್ರೌಂಡ್ವಾಟರ್ ಇನ್ ಸಂ ಸೆಲೆಕ್ಟೆಡ್ ತಾಲುಕ್ಸ್ ಆ ಕೊಪ್ಪಲ್ ಅಂಡ್ ಬಳ್ಳಾರಿ ಡಿಸ್ಟ್ರಿಕ್ಟ್ಸ್, ಕರ್ನಾಟಕ, ಇಂಡಿಯಾ” ಎಂಬ ಶೀರ್ಷಿಕೆಯಡಿ ಮಹಾಪ್ರಬಂಧವನ್ನು ಮಂಡಿಸಿದ್ದರು.
ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.
If the Congress government is pro-farmers, it will present a budget of 490 crores for the reservoir, former MLA R Narendra Santhosh.

ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.

ವರದಿ: ಬಂಗಾರಪ್ಪ .ಸಿ.
ಹನೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಪರವಾಗಿದೆ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದೆ , ಹಾಗೇಯೆ ಏತ ನೀರಾವರಿ ಯೋಜನೆಯಿಂದ ರೈತರ ಜಮಿನುಗಳಿಗೆ ನೀರಿನ ಸಮಸ್ಯೆಗಳಿಗೆ ಇತಿ ಶ್ರೀ ಹಾಡಿದೆ ಎಂದರು ತಪ್ಪಾಗಲಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ರವರು ತಿಳಿಸಿದರು.
ಹನೂರು ಪಟ್ಟಣದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಭಾಗದ
ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಯನ್ನು ಇಂದಿನ ಬಜೆಟ್ನಲ್ಲಿ ನಮ್ಮ ಸರಕಾರ ಘೋ ಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಶಾಶ್ವತವಾಗಿ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ,
ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಹಲವಾರು ವರ್ಷಗಳಿಂದ ನಮ್ಮ ತಂದೆಯವರಾದಿಯಾಗಿ ನಾನು ಸಹ ಶ್ರಮವಹಿಸಿ ಡಿಪಿಆರ್ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕಳೆದ ಬಾರಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ ಇ ದಿನದ ಬಜೆಟ್ನಲ್ಲಿ ಅಂದಾಜು ಮೊತ್ತ 490 ಕೋಟಿ ರೂಗಳ ವೆಚ್ಚದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆಯಿಂದ ಸುಮಾರು 15 ಸಾವಿರ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೆಶಿಪ್ ಯೋಜನೆಯಡಿ ಮೊದಲ ಹಂತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು 108 ಕೋಟಿ ರೂ ಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಕಳೆದ ಬಾರಿಯೇ ಹನೂರು ತಾಲ್ಲೂಕು ಕೇಂದ್ರದಿಂದ ರಾಮಾಪುರ ಮಾರ್ಗವಾಗಿ ಪಾಲಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕೆ ಶಿಪ್ ಯೋಜನೆ ಘೋಷಣೆಯಾಗಿದೆ, ನಂತರ ಹಣ ಬಿಡುಗಡೆ ಯಾಗಿರಲಿಲ್ಲ, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳನ್ನು ನಮ್ಮ ಸರ್ಕಾರವು ಮಾಡುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .
Karnataka State Farmers' Association's struggle has won: Statement by District Vice President Gowde Gowda.
ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಸಂದ ಜಯ :ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಹೇಳಿಕೆ .


ವರದಿ:ಬಂಗಾರಪ್ಪ .ಸಿ.
ಹನೂರು ತಾಲ್ಲೂಕು ಕ್ಷೇತ್ರದ ರೈತರ ಜಮೀನುಗಳಿಗಾಗಿ
ನದಿ ಮೂಲದಿಂದ ನಿರು ತರಲು DPR ಪ್ರಕಾರ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದೊಳಗೆ ಇರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ಚಳುವಳಿಯನ್ನು ನಾವು ಹಮ್ಮಿಕೊಂಡ ಪರಿಣಾಮವಾಗಿ ಹಾಗೂ ಹನೂರು ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ,ಮಾಜಿ ಶಾಸಕರಾದ ಆರದ ನರೇಂದ್ರ , ಸಂಸದರಾದ ಸುನೀಲ್ ಬೋಸ್ , ಮುಖ್ಯಮಂತ್ರಿಗಳಾದ ಸಿದ್ದರಾಮಯ ,ಉಸ್ತುವಾರಿ ಸಚಿವರಾದ ವೆಂಕಟೇಶ ಇನ್ನು ಅನೇಕರ ಶ್ರಮದಿಂದ ಇಂದಿನ ಬಜೇಟ್ ನಲ್ಲಿ ನೀರಾವರಿ ಯೋಜನೆಗೆ 490ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ತಿಳಿಸಿದರು.
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು
ಚಾಮರಾಜನಗರ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲ್ಲೂಕಾಗಿರುವ ಹನೂರು ತಾಲ್ಲೂಕು ಮಳೆ ಆಶ್ರಿತ ವ್ಯವಸಾಯವನ್ನು ಅವಲಂಬಿಸಿದ್ದು ಹಲವಾರು ವರ್ಷಗಳಿಂದ ಮಳೆಯಾಗದೆ ಬರಪೀಡಿತವಾಗಿದೆ. ಈಗ ಬೇಸಿಗೆ ಆರಂಭದಲ್ಲಿಯೇ ಜನಗಳು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಮಳೆ ಆಶ್ರಿತ ಜಲಮೂಲವನ್ನು ಹೊಂದಿರುವ ರೈತರು ದಯನೀಯ ಸ್ಥಿತಿಗೆ ತಲುಪಿದ್ದಾರೆ ತನ್ನ ಕುಟುಂಬವನ್ನು ಕಾಪಾಡಲು ಪರ ಊರುಗಳಿಗೆ ಗುಳೇ ಹೋಗಲು ರೈತರು ಸಿದ್ದವಾಗುತ್ತಿದಾರೆ ಈ ಗಂಭೀರ ಪರಿಸ್ಥಿತಿಯ ಅರಿವು ರಾಜ್ಯ ಸರ್ಕಾರಕ್ಕೆ ಇದ್ದಂತ್ತಿಲ್ಲ, ಇದ್ದಿದ್ದರೇ ಕಾವೇರಿ ನದಿಯಿಂದ ಏತ ನೀರಾವರಿ ಮುಖಾಂತರ ಹನೂರು ತಾಲ್ಲೂಕಿಗೆ ನೀರು ಹರಿಸಲು DPR ಗೆ ಅನುಮತಿ ದೊರಕಿದ್ದರೂ ಅನುಮೋದನೆ ಬಾಕಿಇತ್ತು ಅದು ಇಂದು ನೆರವೆರಿದೆ .
ಹನೂರು ತಾಲ್ಲೂಕಿನ ಉಡುತೊರೆಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 TMC ನೀರೋದಗಿಸಲು 2020-21ರ ಸಾಲಿನಲ್ಲಿ DPR ಗೆ ಅನುಮತಿ ದೊರಕಿದ್ದು ಕಾಮಗಾರಿಗೆ ಅನುಮೋದನೆ ದೊರಕಿಲ್ಲ ಈ ಬಜೆಟ್ನಲ್ಲಿ ಹಣಕಾಸು ಒದಗಿಸಲಾಗಿದೆ ,
ಅದೇ ರೀತಿಯಲ್ಲಿ
ಹನೂರು ತಾಲ್ಲೂಕಿನ ಕೆರೆಗಳಾದ ಮಣಗಳ್ಳಿ ಕೆರೆ, ಬಂಡಳ್ಳಿ ಕೆರೆ, ಹಲಗಾಪುರದ ಕೆರೆ, ಮಾರ್ಟಳ್ಳಿ ಕೀರಪಾತಿಯ-ಹಾಲೇರಿ ಕೆರೆ, ಹೂಗ್ಯಂನ ಮಿನ್ನತ್ತಹಳ್ಳ ಕಿರು ಜಲಾಶಯ, ದಿನ್ನಳ್ಳಿಯ ಮೂಕಚ್ಚಿ ಕಿರು ಜಲಾಶಯಗಳಿಗೆ ಕಾವೇರಿ ನದಿಯ ಸತ್ತೇಗಾಲದ ಶಿವಾ ಆಣೆಕಟ್ಟೆಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲು DPR ಗೆ ಅನುಮತಿ ದೊರಕಿದ್ದು 419 ಕೋಟಿಯ ಪರಿಷ್ಕೃತ DPR ನಲ್ಲಿ ಮಾರ್ಟಳ್ಳಿ, ಕುರಟ್ಟಿಹೊಸೂರು, ಕೌದಳ್ಳಿ, ಶೆಟ್ಟಳ್ಳಿ, ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳನ್ನು ಸೇರಿಸಿ ನೀರು ಒದಗಿಸಲು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕರವು ತಕ್ಷಣ ಹಣ ಬಿಡುಗಡೆ ಮಾಡಿ ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು.
ಹಾಗೂ ಗೋಪಿನತ್ತಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯಗ್ರಾಮಗಳಾದ ಆಲಂಬಾಡಿ,ಜಂಬೂಪಟ್ಟಿ, ಮಾರಿಕೋಟೆ,ಪುದುಕಾಡು,ಅವುಕಾಂಪಟ್ಟಿ,ಪುಂಗಾತ್ತೂರು, ತೆಂಗಾಯ್ ಕೊಂಬು ಗ್ರಾಮಗಳ ಪಾರಂಪರಿಕ ಅರಣ್ಯವಾಸಿಗಳಿಗೆ ವಿದ್ಯುತ್. ಕುಡಿಯುವ ನೀರು, ಸುಸಜ್ಜಿತ ರಸ್ತೆ ಹಾಗೂ ಹಕ್ಕುಪತ್ರಗಳನ್ನು ಇಲ್ಲಿಯವರೆಗೂ ಯಾವ ಸರ್ಕಾರವೂ ನೀಡಿರುವುದಿಲ್ಲ ರಾಜ್ಯ ಸರ್ಕಾರವು ಈ ಬಗ್ಗೆ ಗಮನಹರಿಸಿ ಮೂಲಭೂತ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಅದೆ ರೀತಿಯಲ್ಲಿ ನಮ್ಮ ಹೋರಾಟಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ರಾಜ್ಯಧ್ಯಕ್ಷರಾದ ಬಡಗಲುಪುರದ ನಾಗೇಂದ್ರ ,ರಾಜ್ಯದ ಎಲ್ಲಾ ಜಿಲ್ಲಾ ಸಂಘಟನೆ ಮುಖಂಡರು ಸೇರಿದಂತೆ ಸಾಥ್ ನೀಡಿದ ಎಲ್ಲಾರಿಗೂ ನಾವು ಅಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ
ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಅಮ್ಜಾದ್ ಖಾನ್ , ಗೌರವ ಅಧ್ಯಕ್ಷರು ರಾಜಣ್ಣ ,ಸಂಘಟನ ಕಾರ್ಯದರ್ಶಿ ಬಸವರಾಜು ,ಪಳನಿಸ್ವಾಮಿ, ಬಸವರಾಜು, ಕನಕಮ್ಮ , ಲೋಕೇಶ್ ,ವೆಂಕಟೇಶ್ ,ಸೇರಿದಂತೆ ಎಲ್ಲಾರು ಹಾಜರಿದ್ದರು ,
ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್
Siddaramaiah's budget is a pro-people budget: Reddy Srinivas

ಸಿದ್ದರಾಮಯ್ಯ ಅವರ ಬಜೆಟ್ ಜನಪರ ಬಜೆಟ್ : ರೆಡ್ಡಿ ಶ್ರೀನಿವಾಸ್

ಕೊಪ್ಪಳ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ 2026-27ರ ಬಜೆಟ್ ಜನಪದ
ರ ಬಜೆಟ್ ಎಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಈ ಬಾರಿ ಬಜೆಟನ್ನು ಎಲ್ಲಾ ವರ್ಗದವರ ಹಿತವನ್ನು ಕಾಪಾಡುವ ಬಜೆಟ್ ಆಗಿದೆ, ಕೊಪ್ಪಳ ಜಿಲ್ಲೆಗೆ ಮುನಿರಾಬಾದ್ ಬಳಿಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ, ಬೇವೂರಿನಲ್ಲಿ ಸರಕಾರಿ ವಸತಿ ಪದವಿ ಕಾಲೇಜು ನೀಡಿದ್ದು ಸಂತಸ ತಂದಿದೆ, 16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಮೊಬೈಲ್ ನಿಷೇಧಿಸಿರುವುದು ಒಳ್ಳೆ ನಿರ್ಧಾರ, ರಾಜ್ಯದ ಅನ್ನ ರಾಮಯ್ಯನವರು ಬಜೆಟ್ಟಿನಲ್ಲಿ
ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ
ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರಿಗೆ ಒಂದು ಜೊತೆ ಸಮವಸ್ತ್ರ ನೀಡಲಾಗುವುದೆಂದು ಘೋಷಿಸಿದ್ದಾರೆ, ಇಂದಿರಾ ಕಿಟ್ ಗೆ ಬಜೆಟ್ ನಲ್ಲಿ 68,200 ಕೋಟಿಗಳನ್ನು ಮೀಸಲಿಟ್ಟಿರುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ, ಒಟ್ಟಾರೆ ಈ ಬಾರಿ ಬಜೆಟ್ ಜನಪರ ಬಜೆಟ್ ಎಂದು ತಿಳಿಸಿದ್ದಾರೆ.
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ
Appeal to the District Collector from the District All-round Development Struggle Committee
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಲಿಗೆ ಮನವಿ


ಗಂಗಾವತಿ: ದಿ, 6 ಶುಕ್ರವಾರ ನಗರಸಭೆಗೆ ಆಗಮಿಸಿದ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಭೇಟಿಯಾಗಿ ಗಂಗಾವತಿ ಸಿ ಟಿ ಮಾರ್ಕೆಟ್ ಪ್ರಾರಂಭ ಮಾಡಬೇಕು,ಆನೆಗುಂದಿ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಉತ್ಸವದ ವೇದಿಕೆ ಸ್ಥಳ ಖಾಸಗಿಯವರದಾಗಿದ್ದು ಮುಂದಿನ ದಿನಗಳಲ್ಲಿ ಉತ್ಸವ ಆಚರಣೆಯನ್ನು ಮಾಡಲು ಸ್ಥಳದ ಅಭಾವವಾಗುತ್ತದೆ. ಖರೀದಿಸಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಮ್ಯಾಗಳಮನಿ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ತಿಂಗಳಲ್ಲಿ ಸಿ ಟಿ ಮಾರ್ಕೆಟ್ ಪ್ರಾರಂಭಿಸಲಾಗುವದು ಹಾಗೂ ಉತ್ಸವ ಆಚರಣೆ ಮಾಡಲು ಸಿದ್ಧತೆ ನಡೆಸುವಾದಾಗಿ ಭರವಸೆ ನೀಡಿದ್ದಾರೆOದು ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಒತ್ತಡಗಳ ನಡುವೆಯೂ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು-ಅಲಂಪಲ್ಲಿ
ಆರ್ಥಿಕ ಒತ್ತಡಗಳ ನಡುವೆಯೂ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ: ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು-ಅಲಂಪಲ್ಲಿ

Siddaramaiah presents 17th budget despite economic pressures: Greater emphasis on welfare schemes and development - Alampalli
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2026-27ನೇ ಸಾಲಿನ ರಾಜ್ಯ ಬಜೆಟ್ ಹಲವು ಆಯಾಮಗಳಲ್ಲಿ ವಿಶೇಷತೆಗಳನ್ನು ಪಡೆದುಕೊಂಡಿದೆ.

–ಸಿಎ.ಡಾ. ವಿಷ್ಣು ಭರತ್ ಅಲಂಪಲ್ಲಿ
ಚಾರ್ಟರ್ಡ್ ಅಕೌಂಟೆಂಟ್
9880701701
ಬೆಂಗಳೂರು: ಆರ್ಥಿಕ ಕೊರತೆ ₹22,957 ಕೋಟಿ. ಸಾಲ, ₹8,24,389 ಕೋಟಿ, ಬಡ್ಡಿ ಪಾವತಿ ಹೊಣೆಗಾರಿಕೆಗಳು ಮತ್ತು 2025-26ರಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆದಾಯ ಸಂಗ್ರಹದಂತಹ ಹಲವು ಹಣಕಾಸಿನ ಒತ್ತಡಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಡುವೆಯೂ, ಸರ್ಕಾರ ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಆದ್ಯತೆಗಳ ನಡುವಿನ ಸಮತೋಲನ ಸಾಧಿಸಲು ಪ್ರಯತ್ನಿಸಲಾಗಿದೆ. ಒಟ್ಟು ಬಜೆಟ್ ₹4,48,004.
ಪ್ರಸ್ತುತ ಹಣಕಾಸು ಪರಿಸ್ಥಿತಿಯ ಪ್ರಮುಖ ಲಕ್ಷಣವೆಂದರೆ ಸಬ್ಸಿಡಿ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ವೆಚ್ಚ. ರಾಜ್ಯ ಸರ್ಕಾರವು ಸಬ್ಸಿಡಿಗಳಿಗೆ ಸುಮಾರು ₹1.2 ಲಕ್ಷ ಕೋಟಿ ವೆಚ್ಚ ಮಾಡುವ ನಿರೀಕ್ಷೆಯಿದ್ದು, ಇದು ಒಟ್ಟು ಬಜೆಟ್ ವೆಚ್ಚದ ಪ್ರಮುಖ ಭಾಗವಾಗಿದೆ. ಈ ಮೊತ್ತದಲ್ಲಿ ಸುಮಾರು 155,319 ಕೋಟಿ ರಾಜ್ಯದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಮೀಸಲಾಗಿದೆ- ಗೃಹಲಕ್ಷ್ಮಿ ಯೋಜನೆ (₹28,608 ಕೋಟಿ), ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ (₹5,300 ಕೋಟಿ), ಅನ್ನ ಭಾಗ್ಯ ಯೋಜನೆ ಮತ್ತು ಯುವ ನಿಧಿ ಯೋಜನೆ. ಬಜೆಟ್ನಲ್ಲಿ 41 ಕಿ.ಮೀ. ಹೊಸ ಮೆಟ್ರೋ ಮಾರ್ಗಗಳನ್ನು ಒಳಗೊಂಡಿವೆ.
ಇದರೊಟ್ಟಿಗೆ ಉಚಿತ ವಿದ್ಯುತ್ ಸಬ್ಸಿಡಿಗೆ ಸುಮಾರು ₹25,000 ಕೋಟಿ, ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮಧ್ಯಾಹ್ನದ ಊಟ ಯೋಜನೆಗೆ ₹10,000 ಕೋಟಿ, ಮತ್ತು ಆರೋಗ್ಯ ಮೂಲಸೌಕರ್ಯಕ್ಕೆ ₹900 ಕೋಟಿ ಮೀಸಲಾಗಿದೆ. ಹಣಕಾಸಿನ ಒತ್ತಡಗಳಿದ್ದರೂ, ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ಹಿಂಪಡೆಯದಿದ್ದು, ಮಹಿಳೆಯರು, ವಿದ್ಯಾರ್ಥಿಗಳು, ಉದ್ಯೋಗವಿಲ್ಲದ ಯುವಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಹಾಯವಾಗುವ ಕಲ್ಯಾಣ ಕಾರ್ಯಕ್ರಮಗಳಿಗೆ ಬದ್ಧತೆಯನ್ನು ಪುನರುಚ್ಚರಿಸಿದೆ.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದಕ್ಕೂ ವಿಶೇಷ ಒತ್ತು ನೀಡಲಾಗಿದೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಪ್ತಿ ಹೆಚ್ಚಿಸಲು ಕರ್ನಾಟಕ ಪಬ್ಲಿಕ್ ಶಾಲೆಗಳ ವಿಸ್ತರಣೆ ಮಾಡಲಾಗುತ್ತಿದೆ. ಈ ಶಾಲೆಗಳು ಉತ್ತಮ ಮೂಲಸೌಕರ್ಯ, ಡಿಜಿಟಲ್ ಕಲಿಕೆ ಸೌಲಭ್ಯಗಳು ಮತ್ತು ಶೈಕ್ಷಣಿಕ ಬೆಂಬಲವನ್ನು ವಿದ್ಯಾರ್ಥಿಗಳಿಗೆ ಒದಗಿಸಲಿವೆ.
ಕೃಷಿ ಕ್ಷೇತ್ರವೂ ಪ್ರಮುಖ ಆದ್ಯತೆಯಾಗಿದೆ. ನೀರಾವರಿ ಯೋಜನೆಗಳು, ರೈತ ಕಲ್ಯಾಣ ಕಾರ್ಯಕ್ರಮಗಳು ಮತ್ತು ಜಲ ಸಂಪನ್ಮೂಲ ನಿರ್ವಹಣೆಗೆ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ಕೃಷಿಗೆ ಉತ್ತೇಜನ ಹಾಗೂ ರೈತರಿಗೆ ಉತ್ತಮ ಸಾಲ ವ್ಯವಸ್ಥೆ ಒದಗಿಸುವುದಕ್ಕೂ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. 38 ಲಕ್ಷ ರೈತರಿಗೆ ₹30,000 ಕೋಟಿ ಕೃಷಿ ಸಾಲಗಳ ವಿಂಗಡಣೆ ಯೋಜಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೂ ವಿಶೇಷ ಪ್ರಧಾನ್ಯತೆ ನೀಡಲಾಗಿದೆ. ರಾಜ್ಯದಾದ್ಯಂತ ರಸ್ತೆ ವಿಸ್ತರಣೆ, ಗ್ರಾಮೀಣ ಸಂಪರ್ಕ ಸುಧಾರಣೆ ಮತ್ತು ಸಾರಿಗೆ ಮೂಲಸೌಕರ್ಯ ಬಲಪಡಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗಿದೆ. ವೇಗವಾಗಿ ನಗರೀಕರಿಸುತ್ತಿರುವ ಬೆಂಗಳೂರು ನಗರಕ್ಕೆ ವಿಶೇಷ ಗಮನ ನೀಡಲಾಗಿದೆ. ನಗರ ಸಾರಿಗೆ ಸಮಸ್ಯೆಗಳನ್ನು ಪರಿಹರಿಸಲು ಮೆಟ್ರೋ ವಿಸ್ತರಣೆ ವೇಗಗೊಳಿಸುವುದು ಮತ್ತು ಡಬಲ್ ಡೆಕ್ಕರ್ ಬಸ್ಸುಗಳನ್ನು ಪರಿಚಯಿಸುವ ಯೋಜನೆಗಳು ಮುಂದಿನ ಹಂತದಲ್ಲಿವೆ. ಬೆಂಗಳೂರು ಅಭಿವೃದ್ಧಿಗೆ ₹10,000 ಕೋಟಿ ಮೀಸಲಾಗಿದೆ.
ಬಜೆಟ್ ಕೈಗಾರಿಕೆ, ಪ್ರವಾಸೋದ್ಯಮ, ಹಾಲು ಉತ್ಪಾದನೆ ಮತ್ತು ಸಾರಿಗೆ ಕ್ಷೇತ್ರಗಳ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. ಈ ಕ್ಷೇತ್ರಗಳು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಜನರ ಜೀವನಮಟ್ಟವನ್ನು ಸುಧಾರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ. “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವುದು ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸುವುದು ನಮ್ಮ ಉದ್ದೇಶ,” ಎಂದು ಅವರು ಹೇಳಿದ್ದಾರೆ.
ಒಟ್ಟಾರೆ, 2026-27ರ ಕರ್ನಾಟಕ ಬಜೆಟ್ ಕಲ್ಯಾಣ ವೆಚ್ಚ ಮತ್ತು ದೀರ್ಘಕಾಲಿಕ ಅಭಿವೃದ್ಧಿ ಗುರಿಗಳ ನಡುವಿನ ಸಮತೋಲನ ಸಾಧಿಸುವ ಪ್ರಯತ್ನವಾಗಿದೆ. ಶಿಕ್ಷಣ, ಕೃಷಿ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ, ಸರ್ಕಾರ ಸಾಮಾಜಿಕ ಭದ್ರತೆಯನ್ನು ಬಲಪಡಿಸಿ, ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸಿ, ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಮುಂದುವರಿಸುವ ಉದ್ದೇಶ ಹೊಂದಿದೆ.
ಮಹಿಳೆಯರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ ಕರ್ನಾಟಕ ರಾಜ್ಯ ಬಜೆಟ್ ಕುರಿತು ಎಐಎಂಎಸ್ಎಸ್ ಹೇಳಿಕೆ
AIMSS statement on Karnataka state budget with no new schemes for women

ಮಹಿಳೆಯರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ ಕರ್ನಾಟಕ ರಾಜ್ಯ ಬಜೆಟ್ ಕುರಿತು ಎಐಎಂಎಸ್ಎಸ್ ಹೇಳಿಕೆ

ಕೊಪ್ಪಳ: ಕರ್ನಾಟಕದಲ್ಲಿ ಇಂದು ಮಂಡಿಸಲಾದ ರಾಜ್ಯ ಬಜೆಟ್ ಮಹಿಳೆಯರಿಗೆ ಭ್ರಮನಿರಸನ ಉಂಟುಮಾಡಿದೆ ಎಂದು ಎಐಎಂಎಸ್ಎಸ್ ಕರ್ನಾಟಕ ರಾಜ್ಯ ಸಮಿತಿಯು ಅಭಿಪ್ರಾಯ ಪಡುತ್ತದೆ.
ಹದಿಹರೆಯದ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವನ್ನು ತಡೆಗಟ್ಟುವ ದಿಕ್ಕಿನಲ್ಲಿ 16 ವಯಸ್ಸಿನವರೆಗೆ ಮೊಬೈಲ್ ಬಳಕೆಯನ್ನು ವಿದ್ಯಾಸಂಸ್ಥೆಗಳಲ್ಲಿ ನಿಷೇಧಿಸಿರುವುದು ಸ್ವಾಗತಾರ್ಹವಾಗಿದೆ. ಈ ಮೊಬೈಲ್ ಗೀಳನ್ನು ತಪ್ಪಿಸಲು ಸರ್ಕಾರ “ಈ- ಕಮಿಷನ್” ಸ್ಥಾಪಿಸಿ, ಮನೋತಜ್ಞರು, ಸುಚಿಂತಕರು, ಮಹಿಳಾ ಸಂಘಟನೆಗಳು, ಪೋಷಕರೂ ಒಳಗೊಂಡಂತೆ ವಿಸ್ತೃತ ಸಭೆ ಕರೆಸಿ ಸಲಹೆಗಳನ್ನು ಆಹ್ವಾನಿಸಬೇಕು.
ಸರ್ಕಾರದ ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿ ಮಹಿಳೆಯರಿಗೆ “ಟೇಕ್ ಹೋಮ್ ರೇಷನ್” ಯೋಜನೆ ಕೈ ಬಿಟ್ಟಿರುವುದು ವಿಷಾದನೀಯ. ಈ ರದ್ಧತಿಯಿಂದ ಎಷ್ಟೋ ಮಹಿಳೆಯರು ವಂಚಿತರಾಗುತ್ತಾರೆ.
“ಇಂದಿರಾ ಆಹಾರ ಕಿಟ್” ಯೋಜನೆ ಅಡಿಯಲ್ಲಿ ಕೊಡುತ್ತಿದ್ದ 5 ಕಿಲೋ ಅಕ್ಕಿ ರದ್ದು ಮಾಡಿರುವುದನ್ನು ಖಂಡಿಸುತ್ತದೆ. ತೊಗರಿ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಕೊಡುವುದರ ಜೊತೆಗೆ ಅಕ್ಕಿಯನ್ನು ಕೊಡಬೇಕೆಂದು ಅಗ್ರಹಿಸುತ್ತದೆ.
ಸಮಾಜದ ಆರೋಗ್ಯ ಮಾತೆಯರಾದ ಆಶಾ ಕಾರ್ಯಕರ್ತೆಯರ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವುದು ವಿಷಾದನೀಯ.
ರಾಜ್ಯಾದ್ಯಂತ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು ಪ್ರಜಾತಾಂತ್ರಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಈ ಅನಿಷ್ಟಕ್ಕೆ ಕಡಿವಾಣ ಹಾಕಲು “ಮಾನ್ಯ ಕಾಯ್ದೆ” ತರುತ್ತೇವೆಂದು ಹೇಳಿದ ಸರ್ಕಾರದ ಮಾತು ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ.
ಒಟ್ಟಾರೆಯಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಿತ್ತ ಮಂತ್ರಿಗಳೂ ಆದ ಶ್ರೀಯುತ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲವಾಗಿವೆ. ಮಹಿಳಾ ಸಮುದಾಯಕ್ಕೆ ಇದು ನಿರಾಶದಾಯಕ ಬಜೆಟ್ ಎಂದು ಎಐಎಂಎಸ್ಎಸ್ ರಾಜ್ಯ ಸಮಿತಿಯು ಹೇಳಲಿಚ್ಛಿಸುತ್ತದೆ.
ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಪಂಕಾನು ಪುಂಕಾ ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ಎಲ್ಲಿ ! ?
Where are the Mathadhis who preach the Pankaanu Punka Basava philosophy and the Lingayats who preach the philosophy?

ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಪಂಕಾನು ಪುಂಕಾ ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ಎಲ್ಲಿ ! ?

ಕನ್ನೇರಿ ಸ್ವಾಮಿ . ಹಿಂದುತ್ವದ ಪ್ರತಿಪಾದಕ, ಬಸವಾದಿ ಶರಣರನ್ನು ಹಿಂದುತ್ವದ ತಕ್ಕೆಗೆ ತೆಗೆದುಕೊಂಡು ಹಿಂದುತ್ವವೆ ಮುಖ್ಯ ಎಂದು ಸಾಧಿಸಬೇಕೆಂಬ ಹಂಬಲದ ಛಾತಿಯುಳ್ಳ ಪಕ್ಕಾ ಮನುವಾದಿ , ಕೋಮುವಾದಿ , ಹಿಂದುತ್ವವಾದಿ ಕನ್ನೇರಿ ಸ್ವಾಮಿಗಳು.
ಕನ್ನೇರಿ ಸ್ವಾಮಿ ಎತ್ತುವ ಪ್ರಶ್ನೆಗಳು ಇಂದೂ ಬಸವತತ್ವದವರೆನ್ನುವ , ಬಸವಣ್ಣನ ಲಿಂಗಾಯತ ಧರ್ಮ . ಹಿಂದುತ್ವವನ್ನು (ವೈದಿಕತೆ) ಧಿಕ್ಕರಿಸಿ ಉದಯಿಸಿದ ಧರ್ಮ ಎಂದೂ ಹೇಳುವ ಲಿಂಗಾಯತ ತತ್ವನ್ನು ಸಾರುವ ಮಠಾಧೀಶರಿಂದ ಹಿಡಿದು , ಲಿಂಗಾಯತ ತತ್ವದ ಬಗ್ಗೆ ಪುಂಕಾನು ಪುಂಕವಾಗಿ ವೇದಿಕೆಯ ಮೇಲೆ ಮಾತಾಡುವ ಅನುಭಾವಿಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ ಈ ಕನ್ನೇರಿ ಸ್ವಾಮಿ.
ಕನ್ನೇರಿ ಸ್ವಾಮಿ ಮಾಡುವ ಪ್ರಶ್ನೆಗಳಿಗೆ ಇಂದು ಬಸವ ತತ್ವ ಹೇಳುವ ಮಠಾಧೀಶರು ಮತ್ತು ತತ್ವ ಹೇಳುವ ಹೇಳುವ ಲಿಂಗಾಯತರು ತಿಣುಕಾಡುತ್ತಿದ್ದಾರೆ. ಕನ್ನೇರಿ ಕುನ್ನಿ ಕೇಳುವ ಪ್ರಶ್ನೆಗಳು ತುಂಬಾ ಸರಳ ಆದರೆ , ಆ ಸರಳ ಪ್ರಶ್ನೆಗಳಿಗೆ ತಿಣುಕಾಡುವ ತತ್ವದವರನ್ನು ನೋಡಿದಾಗ ನಿಜಕ್ಕೂ ಖೇದ ಅನಿಸುತ್ತೆ.
ಇಂದು ಹಿಂದುತ್ವದ ಲಿಂಗಾಯತರಿಗೂ , ಬಸವ ತತ್ವ ಮಾತಾಡುವ ಲಿಂಗಾಯತರಿಗೂ ದೊಡ್ಡ ಭೇದವೆನಿಲ್ಲ ಎಲ್ಲವೂ ಒಂದೇ ದೋಣಿಯ ಪಯಣಿಗರು. ದೇವರು , ಧರ್ಮ , ಮೌಢ್ಯ , ಕಂದಾಚಾರದ ಬಗ್ಗೆ ಮಾತಾಡುವವರ ಬದುಕು ಸಹ ಆ ಬಸವ ತತ್ವದಂತೆ ಇಲ್ಲ ಎನ್ನುವ ಕನ್ನೇರಿಯ ಪ್ರಶ್ನೆಗೆ ಮೂಕರಾಗಿದ್ದಾರೆ ಇಂದಿನ ಅನುಭಾವಿಗಳು ತತ್ವ ಹೇಳುವವರು.
ಕನ್ನೇರಿ ಸ್ವಾಮಿಗೆ ಉತ್ತರ ಹೇಳುವುದು ಎಷ್ಟು ಸುಲುಭ ಇದೆ ಅಂದ್ರೆ ಅದು ನೀರು ಕುಡಿದಷ್ಟು ಸುಲುಭ . ಆದರೆ ಇಂದಿನ ಬಸವ ತತ್ವ ಹೇಳುವ ಅನುಭಾವಿಗಳು, ಮಠಾಧೀಶರು ಮತ್ತು ನಮ್ಮಂತವರು ಎಷ್ಟೆ ವೈಚಾರಿಕ , ವೈಜ್ಞಾನಿಕ , ಪ್ರಗತಿಪರ ಎನ್ನುವವರು ಆಂತರ್ಯದಲ್ಲಿ ನಾವು ಮನುವಾದ , ಹಿಂದುತ್ವದ ಭಾಗವೆ ಆಗಿದ್ದಾರೆ. ಬಸವಾದಿ ಶರಣರು ಬರಿ ಮಾತಾಡಲಿಲ್ಲ ಅವರು ಮಾತಾಡಿದಂತೆ ನಡೆದುಕೊಂಡು.
ಇಂದು ಬಸವತತ್ವದ ಬಗ್ಗೆ ಮಾತಾಡುವ ಕರ್ನಾಟಕದ ಬಸವಪರ ಸಂಘಟನೆಗಳು ಮತ್ತು ವೇದಿಕೆಯ ಮೇಲೆ ಹಿಂದುತ್ವದ ಬಗ್ಗೆ ತಾಸುಗಟ್ಟಲೆ ಮಾತಾಡುವ ಅನುಭಾವಿಗಳು , ತತ್ವ ಹೇಳುವವರು ಯಾರು ಬಸವಣ್ಣನ ಆಸೆಯದಂತೆ ಬದುಕಿದ್ದಿರಿ? . ಬಹುತೇಕರ ಮನೆಗಳಲ್ಲಿ ಮೌಢ್ಯತೆ ಬಿಟ್ಟಿಲ್ಲ, ಪರೋಕ್ಷವಾಗಿ ದೇವರು ದಿಂಡರನ್ನು ಬಿಟ್ಟಿಲ್ಲ, ಮುಖ್ಯವಾಗಿ ಶರಣ ಆಸೆ ನಿರ್ಜಾತೀಕರಣನಾಗುವುದು , ಆದರೆ ಇಂದು ತತ್ವ ಹೇಳುವ ಅನುಭಾವಿಗಳು 99% ಜಾತಿ ಬಿಟ್ಟಿಲ್ಲ . ಹಿಂಗಾದಾಗಲೇ ಕನ್ನೇರಿಗೆ ಸೆಡ್ಡು ಹೊಡೆಯಲು ನಿಮ್ಮ ತಿಣುಕಾಟ.
ಈ ತತ್ವಗಳಂತೆ ಬದುಕಿದ 5% ಜನ ಇದ್ದರೆ ಸಾಕಾಗಿತ್ತು ಕನ್ನೇರಿ ಕುನ್ನಿಯ ಈ ಬೊಗಳುವಿಕೆಗೆ ಉತ್ತರ ಕೊಡಬಹುದಿತ್ತು . ಆದರೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇಂದು ತತ್ವ ಹೇಳುವ ಅನುಭಾವಿಗಳು ಸ್ವಾಮಿಗಳು ಒಂದಲ್ಲ ಒಂದು ರೀತಿ ಮನುವಾದದ ಮತ್ತು ಹಿಂದುತ್ವದ ಭಾಗವೆ ಆಗಿದ್ದಾರೆ . ಹಾಗಾಗಿ ಬನ್ನಹಟ್ಟಿ ಕನ್ನೇರಿ ಸ್ವಾಮಿಯ ಕೂಗು ಜೋರಾಗಿದೆ. ಕೇವಲ ವೇದಿಕೆಯ ಮೇಲೆ ಕೂಗಾಡುವುದು ಬಸವತತ್ವ ಅಲ್ಲ , ಬದುಕುವುದು ಬಸವತತ್ವ ಇಲ್ಲದಿದ್ದರೆ ಬಸವಾದಿ ಶರಣರು ಮುಂದೊಂದು ದಿನ ಹಿಂದುತ್ವದ ತಕ್ಕೆ ಹೋದರೂ , ನಾನಂತೂ ಆಶ್ಚರ್ಯಪಡಲ್ಲ. ಯಾಕೆಂದರೆ ” ಹೊರಗೆ ಭಕ್ತ ಒಳಗೆ ಕುಟಿಲ ಎಂಬ ಭಕ್ತರನ್ನೊಲ್ಲಯ್ಯಾ ಲಿಂಗವು ” ಎನ್ನುವ ಅಪ್ಪ ಬಸವಣ್ಣನ ಮಾತು ನಿಜ.
ಡಾ. ರಾಜಶೇಖರ ನಾರನಾಳ
ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-೨೦೨೬ ನಿಮಿತ್ಯ ಅದ್ದೂರಿಯಾಗಿ ನಡೆದ ಬಂಜಾರ ಕವಿಗೋಷ್ಠಿ
ಬಂಜಾರ ರಾಷ್ಟ್ರೀಯ ಹೋಳಿ ಉತ್ಸವ-೨೦೨೬ ನಿಮಿತ್ಯ ಅದ್ದೂರಿಯಾಗಿ ನಡೆದ ಬಂಜಾರ ಕವಿಗೋಷ್ಠಿ

Banjara Poetry Festival held on the occasion of Banjara National Holi Festival-2026


ಕೊಪ್ಪಳ: ಹೋಳಿ ಹುಣ್ಣಿಮೆಯಂದು ನಡೆಯುವ ಹೋಳಿ ಹಬ್ಬವು ಬಂಜಾರ ಸಮುದಾಯದ ಅತ್ಯಂತ ಪ್ರಮುಖ ಆಚರಣೆಯಾಗಿದೆಎಲ್ಲಾ ತಾಂಡಾಗಳಲ್ಲೂ ಮಹಿಳೆ ಹಾಗೂ ಪುರುಷರು ವಿಶಿಷ್ಟ ಶೈಲಿಯ ಉಡುಪುಗಳನ್ನು ಧರಿಸಿ ಕೋಲುಗಳನ್ನು ಹಿಡಿದು ಬಂಜಾರ ಜಾನಪದ ಹಾಡುಗಳನ್ನು ಹಾಡುತ್ತಾ ವೃತ್ತಾಕಾರದಲ್ಲಿ ನಗಾರಿ ಹಾಗೂ ತಮಟೆಯ ತಾಳಕ್ಕೆ ಕುಣಿದು ಉತ್ಸಾಹದಿಂದ ಆಚರಿಸುತ್ತಾರೆ
ಅದೇರೀತಿ ಕೊಪ್ಪಳದ ಐತಿಹಾಸಿಕ ಬಹಾದ್ದೂರ ಬಂಡೆಯಲ್ಲಿ ಇರುವ ಹಾತಿರಾಮ ಬಾವಾಜಿ ರವರ ಕಟ್ಟೆ ಆವರಣದಲ್ಲಿಮಾ-೩ ರಂದು ಮಹಿಳೆಯರ ಘೋಮರ್ ನೃತ್ಯ ಡೊಡೋ ನಂಗಾರ ನೃತ್ಯ ಪುರುಷರ ಲೆಹಂಗಿ ನೃತ್ಯ ವಾಜಾ-ಭಜನೆ ಅತ್ಯಂತ ಅದ್ಧೂರಿಯಾಗಿ ನಡೆದವು. ಇವರು ತಮ್ಮ ಹಾಡುಗಳಲ್ಲಿ ಹೋಳಿಯ ಹಿನ್ನೆಲೆ ಸಂಪ್ರದಾಯ ಪರಂಪರೆ ಕುರಿತು ಹೇಳುತ್ತಾ ಇಡೀ ರಾತ್ರಿ ಸಂಭ್ರಮಿಸಿ ಬೆಳಗಿನ ಜಾವ ಹೋಳಿ ದಹನ ಮಾಡಿ ಸಂಪನ್ನಗೊಳಿಸಿದರು. ಬಂಜಾರ ಸಮುದಾಯದ ವಿಶಿಷ್ಠ ಭಾಷೆ ಕಲೆ ಸಂಸ್ಕೃತಿ ಪರಂಪರೆ ಹಬ್ಬ ಹರಿದಿನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಳಿ ಹುಣ್ಣಿಮೆಯಂದುರಾಷ್ಟ್ರೀಯ ಹೋಳಿ ಉತ್ಸವ-೨೦೨೬ ರ ನಿಮಿತ್ಯ ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು (ರಿ.) ರಾಜ್ಯ ಘಟಕದ ವತಿಯಿಂದ ಉತ್ಸವದ ವೇದಿಕೆಯಲ್ಲಿ ಬಂಜಾರರ ಸಾಹಿತ್ಯದ ರಾಜ್ಯ ಮಟ್ಟದ ಕವಿಗೋಷ್ಠಿ ರ್ಪಡಿಸಲಾಗಿತ್ತು”
ಈ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಐವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದರು ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗಾವತಿಯ ಎಸ್ಆರ್ ಸರೋಜಮ್ಮ ಬಾಲಕಿಯರ ಪದವಿಪರ್ವ ಕಾಲೇಜಿನ ಪ್ರಾಂಶುಪಾಲರಾದ ಇತಿಹಾಸ ಸಂಶೋಧಕರಾದ ಡಾ. ರವಿ ಚವ್ಹಾಣ ರವರು ಮಾತನಾಡಿ ಬಂಜಾರರ ಮೂಲ ಇತಿಹಾಸ ಸಾಹಿತ್ಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕವನಗಳ ಮೂಲಕ ಪ್ರಚುರಪಡಿಸಿದ್ದು ಬಹಳ ಹೆಮ್ಮೆಯ ವಿಷಯ ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಕವಿಗೋಷ್ಠಿಸಹಕಾರಿಯಾಗಿ ಇಂದಿನ ಯುವ ಪೀಳಿಗೆ ಮೊಬೈಲ್ ಹಾಗೂ ಡಿ.ಜೆ. ಹುಚ್ಚಿನಿಂದ ಹೊರಬಂದು ಉನ್ನತ ವಿದ್ಯಾಭ್ಯಾಸ ಪಡೆದು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಶ್ರೀ ಗುರು ಗೋಸಾವಿ ಬಾವಾನವರು ಆಶರ್ವಚನ ನೀಡಿದರು.ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಜಾಧವ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಾಧ್ಯಕ್ಷರಾದ ಛತ್ರಪ್ಪ ತಂಬೂರಿರವರು ಆಶಯ ನುಡಿಗಳನ್ನು ಹೇಳಿದರು ಯಾದಗಿರಿಯ ಸುರ್ಣಬಾಯಿ ರಾಠೋಡ ಹಾಗೂ ಡಾ. ಮಿಟ್ಯಾ ನಾಯ್ಕ ರವರು ಕರ್ಯಕ್ರಮವನ್ನುನಿರೂಪಿಸಿದರು. ರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶ ರಾಠೋಡ ತರಲಕಟ್ಟಿ ಹಾಗೂ ಶಿವಾನಂದ ನಾಯ್ಕ ಮುಖ್ಯ ಅಭಿಯಂತರರು ರವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ ಕುರಿತು ಮಾತನಾಡಿ ವಂದಿಸಿದರು.
ಮಾಹಿತಿಗಾಗಿ ಛತ್ರಪ್ಪ ತಂಬೂರಿ
೨೨: ೯೯೭೨೪೮೭೩೨೦, ೯೪೮೦೭೬೫೭೨೦
ಕರ್ಯಕ್ರಮದಲ್ಲಿ ಬಂಜಾರ ಕವಿಗಳಾದ ಡಾ.ಎಲ್.ಪಿ. ಶಠಾರಿ ನಾಯ್ಕ ಕುಬೇರ ನಾಯ್ಕ ಜ್ಯೋತಿ ಕೃಷ್ಣನಾಯ್ಕ ಬಾಗಲಕೋಟೆ ಮೋತಿಲಾಲ್ ರಾಠೋಡ ಹುಬ್ಬಳ್ಳಿ ಪ್ರವೀಣಕಮಾರ ಹರಪನಹಳ್ಳಿ ಮರ್ತಿ ಎಲ್, ಸುರೇಶ ಕಲಾಪ್ರಿಯ ಲಕ್ಷಣ ನಾಯ್ಕ ಎ.ಐ.ಬಿ.ಎಸ್.ಎಸ್. ವಸಂತ್ ಚವ್ಹಾಣ ವಿಜಯಪುರ ದೀಪಾ ರಾಠೋಡ ಕಾರಟಗಿ ಪುಷ್ಪಾಬಾಯಿ ಹೂವಿನಹಡಗಲಿ ಶಂಕರ ನಾಯ್ಕ ಕುಮಾರ ರಾಠೋಡ ಕೂಪಳಗಡ್ ಬಹಾದ್ದೂರ ಬಂಡಾ ಟ್ರಸ್ಟನ ಅಧ್ಯಕ್ಷರಾದ ಭರತ ನಾಯ್ಕ ಗಂಗಾವತಿಯ ಶಿವಪ್ಪ ಜಾಗೊ ರವಿನಾಯ್ಕ ಚವ್ಹಾಣ, ಪಾಂಡುನಾಯ್ಕ ವೆಂಕಟೇಶ ನಾಯ್ಕ ಹಾಗೂ ಅನೇಕ ಕವಿಗಳು ಹಿರಿಯರು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಮಾರ್ಚ್ 9ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ವ್ಯೂವ್
Walk-in interview in Koppal on March 9th
ಮಾರ್ಚ್ 9ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ವ್ಯೂವ್

ಕೊಪ್ಪಳ ಮಾರ್ಚ್ 05 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್ವ್ಯೂವನ್ನು ಮಾರ್ಚ್ 9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಈ ವಾಕ್ ಇನ್ ಇಂಟರ್ವ್ಯೂವದಲ್ಲಿ ದಿವ್ಗಿ ಟಾರ್ಕ್ ಟ್ರಾನ್ಸಫರ್, ಶಿರಸಿ, ಉತ್ತರ ಕನ್ನಡ ಜಿಲ್ಲೆ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ ಮಶೀನ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಿದ್ದಾರೆ. ಆದ್ದರಿಂದ ಐ.ಟಿ.ಐ(ಫಿಟ್ಟರ್), ಐ.ಟಿ.ಐ(ಟರ್ನರ), ಐ.ಟಿ.ಐ(ಮಶಿನಿಷ್ಟ್) ಹಾಗೂ ಬಿಎಸ್ಸಿ, ಬಿಕಾಂ, ಬಿಎ ಅಭ್ಯರ್ಥಿಗಳು ಮತ್ತು ಡಿಪ್ಲೊಮಾ ಮೆಕ್ಯಾನಿಕಲ್, ಆಟೋಮೊಬೈಲ್, ಟೂಲ್ & ಡೈಮೆಕಿಂಗ್ ವೃತ್ತಿಗಳಲ್ಲಿ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳು ಹಾಜರಾಗಬಹುದು.
ಅಲ್ಲದೇ ಜಿಟಿಟಿಸಿ ಕೊಪ್ಪಳ ರವರು ತಮ್ಮಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಿದ್ದು, ಡಿಪ್ಲೋಮಾ (ಟೂಲ್ & ಡೈಮೇಕಿಂಗ್), ಬಿಇ(ಇ&ಇ), ಬಿಇ(ಇ&ಸಿ), ಪೋಸ್ಟ ಡಿಪ್ಲೋಮಾ-ಟೂಲ್ & ಡೈಮೇಕಿಂಗ್ ವಿದ್ಯಾರ್ಹತೆಯ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಇದಲ್ಲದೇ ದೆಶಪಾ಼ಂಡೆ ಸ್ಕಿಲ್ಲಿಂಗ್ ರವರು ತಮ್ಮಲ್ಲಿ ಖಾಲಿ ಇರುವ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಟ್ರೆöÊನರ್ ಹುದ್ದೆಗಳಿಗೆ ಗದಗ ಹಾಗೂ ಕೊಪ್ಪಳ ಜಿಲ್ಲಾದ್ಯಾಂತ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದು, ಕೆಲಸದ ಅನುಭವ ಇದ್ದವರಿಗೆ ಆದ್ಯತೆ ಇರುತ್ತದೆ. ಅರ್ಹ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಹೊಂದಿದ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಆಸಕ್ತ 18 ರಿಂದ 34 ವರ್ಷ ನಿರುದ್ಯೋಗಿ ಪುರಷರು ಹಾಗೂ ಮಹಿಳೆಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜೂಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು https://forms.gle/bYm5KEikfXAVCP2E7 ಮೂಲಕವು ರಿಜಿಸ್ಟರ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ನಗರಸಭೆಯ ಆಶ್ರಯ ಯೋಜನೆಗೆ ಜಮೀನು: ಮಾಲೀಕರಿಂದ ಅರ್ಜಿ ಆಹ್ವಾನ
Land for Koppal Municipality's shelter project: Applications invited from owners
ಕೊಪ್ಪಳ ನಗರಸಭೆಯ ಆಶ್ರಯ ಯೋಜನೆಗೆ ಜಮೀನು: ಮಾಲೀಕರಿಂದ ಅರ್ಜಿ ಆಹ್ವಾನ

ಕೊಪ್ಪಳ ಮಾರ್ಚ್ 05 (ಕರ್ನಾಟಕ ವಾರ್ತೆ): ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಚನೆ ಮಾಡಲು ಕೊಪ್ಪಳ ನಗರಸಭೆಗೆ ಜಮೀನು ಅವಶ್ಯಕವಾಗಿದ್ದು, ಆಸಕ್ತ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಆದರೆ, ಸ್ವಂತ ನಿವೇಶನ ಹೊಂದದೇ ಇರುವಂಥಹವರಿಗೆ ನಗರ ಆಶ್ರಯ ಯೋಜನೆ ಅಡಿಯಲ್ಲಿ ಹೊಸದಾಗಿ ಜಮೀನನ್ನು ಖರೀದಿಸಿ ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ವ್ಯಾಪ್ತಿ ಒಳಗೆ ಜಮೀನಿನ ಅವಶ್ಯಕತೆ ಇರುತ್ತದೆ. ಸರ್ಕಾರದ ದರಕ್ಕೆ ಅನುಗುಣವಾಗಿ ಜಮೀನನ್ನು ಖರೀದಿಗೆ ಕೊಡಲು ಇಚ್ಚೆಯುಳ್ಳ ಜಮೀನಿನ ಮಾಲೀಕರುಗಳು ತಮ್ಮ ಜಮೀನಿನ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಫಾರಂ ನಂಬರ್-10, ಕೊಪ್ಪಳ ನಗರ ಪ್ರದೇಶದಿಂದ 5 ಕಿ.ಮೀಟರ್ ಒಳಗೆ ಇರುವ ಬಗ್ಗೆ ದೃಢೀಕರಣ ಪತ್ರ, ಜಮೀನನ್ನು ಆಶ್ರಯ ಯೋಜನೆ ಅಡಿ ಖರೀದಿಗೆ ಕೊಡಲು ಒಪ್ಪಿಗೆ ಇರುವ ಬಗ್ಗೆ ಜಮೀನಿನ ಮಾಲೀಕರು ಹಾಗೂ ಅವರ ಕುಟುಂಬದ ಸರ್ವ ಸದಸ್ಯರುಗಳ ಒಪ್ಪಿಗೆ ಇರುವ ಬಗ್ಗೆ ಛಾಪಾ ಕಾಗದದ ಮೇಲೆ ಒಪ್ಪಿಗೆ ಪತ್ರ, ಈ ಎಲ್ಲಾ ಅಗತ್ಯ ದಾಖಲಾತಿಗಳೊಂದಿ ಮಾರ್ಚ್ 31ರ ಒಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೂ .10,000/- ಗಳಿಗೆ ಮಾಶಾಸನ ಹೆಚ್ಚಳ ಹಾ ಗೂ ಇತರೆ ಬೇ ಡಿಕೆಗಳಿಗೆ ಒತ್ತಾಯಿಸಿಸರ್ಕಾ ರಕ್ಕೆ ಒತ್ತಾಯ
Demand for increase in monthly salary to Rs. 10,000/- and other demands from the government

ರೂ .10,000/- ಗಳಿಗೆ ಮಾ ಶಾ ಸನ ಹೆಚ್ಚಳ ಹಾ ಗೂ ಇತರೆ ಬೇ ಡಿಕೆಗಳಿಗೆ ಒತ್ತಾ ಯಿಸಿ
ಸರ್ಕಾ ರಕ್ಕೆ ಒತ್ತಾಯ

ಗಂಗಾವತಿ: ಬೆಲೆ ಏರಿಕೆ ವಿಪರಿತವಾ ಗಿ ಹೆಚ್ಚು ತ್ತಿರು ವ ಈ ಕಾ ಲದಲ್ಲಿ, ಕೇಂ ದ್ರ ಸರ್ಕಾ ರ ನೀ ಡು ತ್ತಿರು ವ ಮಾ ಶಾ ಸನದ ಮೊತ್ತ ಮಾ ತ್ರ ಕೇ ವಲ ರೂ . 300
ಗಳು ಅಷ್ಟೆ ಇದೆ. ರಾ ಜ್ಯ ಸರ್ಕಾ ರ ಹಲವು ಗ್ಯಾ ರಂ ಟಿ ಯೋ ಜನೆಗಳನ್ನು ಜಾ ರಿಗೆ ತಂ ದಿದ್ದು ಅವು ಗಳು ಅಂ ಗವಿಕಲರ ಬದು ಕಿಗೆ ಯಾ ವ ಗ್ಯಾ ರಂ ಟಿಯನ್ನೂ
ನೀ ಡಿಲ್ಲ. ಇದರಿಂ ದ ಅಂ ಗವಿಕಲರು ಜೀ ವನ ಸಾ ಗಿಸಲು ಯಾ ವು ದೇ ಉದ್ಯೋ ಗ ಅವಕಾ ಶಗಳಿಲ್ಲದೇ ತೀ ವ್ರ ಸಂ ಕಷ್ಟಕ್ಕೆ ಸಿಲು ಕಿದ್ದಾ ರೆ ಎಂ ದು ಕರ್ನಾ ಟಕ
ರಾ ಜ್ಯ ಅಂ ಗವಿಕಲರ ಹಾ ಗೂ ಪಾ ಲಕರ ಒಕ್ಕೂ ಟದ ಗಂ ಗಾ ವತಿ ತಾ ಲೂ ಕ ಅಧ್ಯ ಕ್ಷರಾ ದ ಬಸವರಾ ಜ ಗೋ ನಾ ಳ ಅವರು ಸರ್ಕಾ ರದ ಧೋ ರಣೆಗೆ ಆಕ್ರೋ ಶ
ವ್ಯ ಕ್ತಪಡಿಸಿದರು .
ಅವರು ಅಂ ಗವಿಕಲರಿಗೆ ನೀ ಡಲಾ ಗು ವ ಮಾ ಶಾ ಸನವನ್ನು ಪ್ರತಿ ತಿಂ ಗಳಿಗೆ ರೂ . 10,000/- ಗಳಿಗೆ ಏರಿಸಬೇ ಕೆಂ ದು ಆಗ್ರಹಿಸಿ ಇಂ ದು ಮಾ .5
ರಂ ದು ತಹಶೀ ಲ್ಕಛೇ ರಿ ಮುಂ ದೆ ಪ್ರತಿಭಟನೆ ನಡೆಸಿ ತಹಶೀ ಲ್ದಾ ರರ ಮು ಖಾಂ ತರ ರಾ ಜ್ಯ ದ ಮು ಖ್ಯ ಮಂ ತ್ರಿಗಳಿಗೆ ಮನವಿ ಸಲ್ಲಿಸಿ ಮಾ ತನಾ ಡಿದರು .
ಅಂ ಗವಿಕಲರ ಮಾ ಶಾ ಸನವನ್ನು ಕೇಂ ದ್ರ ಸರ್ಕಾ ರ ಮತ್ತು ರಾ ಜ್ಯ ಸರ್ಕಾ ರ ತಲಾ ರೂ . 5,000/- ಗಳಂ ತೆ ಹೆಚ್ಚಿಸಿ ರೂ . 10,000/- ಗಳಿಗೆ ಹೆಚ್ಚಿಸಬೇ ಕು ,
ಕಳೆದ ಹಲವು ಬಜೆಟ್ಗಳಲ್ಲಿ ಕೇಂ ದ್ರ ಸರ್ಕಾ ರ ಅಂ ಗವಿಕಲರತ್ತ ಮು ಖವನ್ನೇ ಮಾ ಡಿಲ್ಲ, ಇದಲ್ಲದೇ ಅಂ ಗವಿಕಲರ ಕ್ಷೇ ತ್ರಕ್ಕೆ ನೀ ಡಲಾ ಗು ತ್ತಿದ್ದ ಹಣಕಾ ಸನ್ನು
ಬಜೆಟ್ನಲ್ಲಿ ಕಡಿತಗೊ ಳಿಸು ತ್ತಾ ಬಂ ದಿದ್ದು , ರಾ ಜ್ಯ ಬಜೆಟ್ನಲ್ಲಿಯಾ ದರೂ ಅಂ ಗವಿಕಲರ ಮಾ ಶಾ ಸನ ಹೆಚ್ಚಳ ಮಾ ಡಲಾ ಗು ವು ದೆಂ ದು ನೀ ರಿಕ್ಷಿಸಲಾ ಗಿತ್ತು .
ಆದರೇ ಇದೂ ಸಾ ದ್ಯ ವಾ ಗಿಲ್ಲ. ಕೇಂ ದ್ರ ಮತ್ತು ರಾ ಜ್ಯ ಸರ್ಕಾ ರಗಳು ಅಂ ಗವಿಕಲರ ಹಕ್ಕು ಗಳ ಕಾ ಯ್ದೆ 2016ನ್ನು ಜಾ ರಿ ಮಾ ಡಲು ಮನಸ್ಸು ಮಾ ಡು ತ್ತಿಲ್ಲ.
ಅಗತ್ಯ ಹಣವನ್ನೇ ಒದಗಿಸು ತ್ತಿಲ್ಲ. ಪಕ್ಕದ ನೆರೆ ರಾ ಜ್ಯ ಆಂ ದ್ರ ಪ್ರದೇ ಶದಲ್ಲಿ ಅಂ ಗವಿಕಲರ ಮಾ ಶಾ ಸನ ರೂ . 6,000/-ಗಳು ಇರು ತ್ತದೆ. ಅದೇ ರೀ ತಿ
ತೆಲಂ ಗಾ ಣದಲ್ಲಿ ರೂ . 4,000/-ಗಳು ಇರು ತ್ತದೆ. ದೆಹಲಿ ಮತ್ತು ಹರಿಯಾ ಣದಲ್ಲಿ ರೂ . 3,000/- ಗಳ ಪೆನಷನ್ ಇರು ತ್ತದೆ. ರಾ ಜ್ಯ ಸ್ಥಾ ನದ ಶಾ ಸನಸಭೆಯ
ವಾ ರ್ಷಿ ಕ ಶೇ . 15 ರಷ್ಟು ಹೆಚ್ಚಳ ಪಿಂ ಚಣಿ ಖಾ ತ್ರಿಪಡಿಸು ವ ಪಿಂ ಚಣಿ ಹಕ್ಕು ಗಳ ಕಾ ಯ್ದೆಯನ್ನು ಜಾ ರಿಗೆ ತಂ ದಿದೆ. ಅಂ ಗವಿಕಲರಲ್ಲಿ ಶಿಕ್ಷಣ
ಅವಶ್ಯ ವಿರು ವವರಿಗೆ, ಅಂ ಗವಿಕಲರ ವೃದ್ಯಾ ಪದವರೆಗೂ ಅವರ ಯೋ ಗಕ್ಷೇ ಮಕ್ಕೆ ಹೆಚ್ಚಿನಗಮನ ಸಹಾ ಯಧನ ನೀ ಡಬೇ ಕಾ ಗಿದೆ,. ಇದರೊ ಟ್ಟಿ ಗೆ ಶೇ 5
ರಷ್ಟು ಅಂ ಗವಿಕಲರ ಹಣವನ್ನು ಪಂ ಚಾ ಯಿತಿ ಮತ್ತು ನಗರಸಭೆಯಲ್ಲಿ ಖರ್ಚು ಮಾ ಡಲಾ ಗು ತ್ತಿಲ್ಲ. ಸಾ ಮೂ ಹಿಕವಾ ಗಿ ಖರ್ಚು ಮಾ ಡಬೇ ಕೆಂ ದು
ಪಂ ಚಾ ಯಿತಿಯಲ್ಲಿ ಅನು ದಾ ನ ಹಾ ಗೆಯೇ ಉಳಿದಿದೆ. ಅದೇ ರೀ ತಿ ಉದ್ಯೋ ಗ ಖಾ ತ್ರಿಯಲ್ಲಿ ಅಂ ಗವಿಲಕರಿಗೆ 100 ದಿನಗಳ ಕೆಲಸ ನೀ ಡು ತ್ತಿಲ್ಲ. ಎನ್
ಎಂ ಆರ್ ತೆಗೆಯು ವಲ್ಲಿ ವಿಳಂ ಬ ನೀ ತಿಯನ್ನು ಅನು ಸರಿಸಲಾ ಗು ತ್ತಿದೆ. ರಾ ಜ್ಯ ದಲ್ಲಿ ಅಂ ಗವಿಕಲರಿಗೆ ವಸತಿ ನಿವೇ ಶನದ ಬಗ್ಗೆ ಪ್ರಶ್ನೆಗಳು ತುಂ ಬಾ ಇವೆ. ಶೇ .
5 ರಷ್ಟು ವಸತಿ, ನಿವೇ ಶನ ನೀ ಡಬೇ ಕೆಂ ಬ ಕಾ ಯ್ದೆ ಇದ್ದರು ಅದನ್ನು ಗಾ ಳಿಗೆ ತೂ ರಲಾ ಗಿದೆ. ಅಂ ಗವಿಕಲರ ಮಹಿಳೆಯರ ಪರಿಸ್ಥಿತಿಗಳು ಕಠಿಣವಾ ಗಿದ್ದು ,
ಅತ್ಯಾ ಚಾ ರ, ದೌ ರ್ಜ ನ್ಯ ಗಳು , ಕೌ ಟುಂ ಬಿಕದಂ ತಹ ಗಂ ಭೀ ರ ಸಮಸ್ಯೆ ಗಳಿಂ ದ ಬಾ ಧಿತರಾ ಗಿದ್ದಾ ರೆ. ಕರ್ನಾ ಟಕ ರಾ ಜ್ಯ ಅಂ ಗವಿಕಲರ ಹಾ ಗೂ ಪಾ ಲಕರ
ಒಕ್ಕೂ ಟ ಗಂ ಗಾ ವತಿ ತಾ ಲೂ ಕು ಸಮಿತಿಯು ಈ ಎಲ್ಲಾ ಸಮಸ್ಯೆ ಗಳನ್ನು ಎತ್ತಿಕೊಂ ಡು ನಿರಂ ತರ ಹೋ ರಾ ಟ ನಡೆಸಿಕೊಂ ಡು ಬಂ ದಿರು ತ್ತದೆ. ಈ ನಮ್ಮ
ಹೋ ರಾ ಟಕ್ಕೆ ಕೇಂ ದ್ರ ಮತ್ತು ರಾ ಜ್ಯ ಸರ್ಕಾ ಗಳು ಸ್ಪಂ ದಿಸಿ ಬೇ ಡಿಕೆಗಳನ್ನು ಈಡೇ ರಿಸು ವಲ್ಲಿ ಕ್ರಮ ಜರು ಗಿಸಬೇ ಕೆಂ ದು ಒತ್ತಾ ಯಿಸಲಾ ಗಿದೆ ಎಂ ದರು .
ಈ ಸಂ ದರ್ಭ ದಲ್ಲಿ ಒಕ್ಕೂ ಟದ ಪದಾ ಧಿಕಾ ರಿಗಳಾ ದ ಕೆ. ನಾ ಗರಾ ಜ, ಶಿವಕು ಮಾ ರ, ಯಮನಮ್ಮ , ಸತೀ ಶ, ಮೋ ಹನ್, ಪಿ. ಭು ವನೇ ಶ್ವರಿ,
ಸರಸ್ವತಿ, ಬಸವರಾ ಜ, ರಾ ಘವೇಂ ದ್ರ ಎನ್., ಡಾ . ಅಶೋ ಕ, ಶೇ ಷಮ್ಮ , ಖಾ ದರಪಾ ಷಾ , ಕೆ. ಶೆಕ್ಷಾ ವಲಿ, ಹನು ಮಂ ತ, ಮು ಕ್ಕಣ್ಣ, ಭು ವನೇ ಶ್ವರಿ ಎಸ್.ಬಿ., ಯಮನಮ್ಮ ಎಂ .ಎಸ್., ಶಮ್ಮಿ ಬಿ.ಎಸ್ಸೇ ರಿದಂ ತೆ ಇತರರು ಭಾ ಗವಹಿಸಿದ್ದ
ವಾಲ್ಮೀಕಿ ಜನಾಂಗಕ್ಕೆ ಪರಿಷ್ಕೃತ ಮೀಸಲಾತಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ
Violent protest if Valmiki community is not appointed in government jobs as per revised reservation

ವಾಲ್ಮೀಕಿ ಜನಾಂಗಕ್ಕೆ ಪರಿಷ್ಕೃತ ಮೀಸಲಾತಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ

ಬೆಂಗಳೂರು,ಮಾ.5: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ವರದಿ ಆಧಾರದ ಮೇಲೆ ಹೆಚ್ಚಿಸಲಾಗಿರುವ ಮೀಸಲಾತಿ ಪ್ರಮಾಣವನ್ನು ಅಳವಡಿಸಿಕೊಂಡು ಸರ್ಕಾರಿ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗಕ್ಕೆ ಭಾರೀ ಅನ್ಯಾವಾಗಲಿದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಬೆಳ್ಳಿ ಗಂಗಾಧರ ಅವರು, ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಸದುದ್ದೇಶವನ್ನು ಉಚ್ಛನ್ಯಾಯಾಲಯದ ಅವಗಾಹನೆಗೆ ತಂದು ಇದೀಗ ಉದ್ಭವಸಿರುವ ತೊಂದರೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪರಿಶಿಷ್ಟ ವಾಲ್ಮೀಖಿ ಸಮಾಜಕ್ಕೆ ಆಗಲಿರುವ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42.49 ಲಕ್ಷ ಮತ್ತು ಪರಿಶಿಷ್ಟ ಜಾತಿ ಜನಸಂಖ್ಯೆ 1.04 ಕೋಟಿಗಳಿಗೂ ಹೆಚ್ಚಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಅನುಕ್ರಮವಾಗಿ ಶೇಕಡ 7 ಮತ್ತು ಶೇಕಡ 17 ರಷ್ಟಿದೆ. ಅದರ ವ್ಯಾಪ್ತಿಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಈ ಜನಾಂಗದವರ ಪ್ರಾತಿನಿಧ್ಯತೆ ಇವರ ಜನಸಂಖ್ಯೆಗೆ ಅನುಗುಣವಾಗಿ ಇಲ್ಲದೇ ಇರುವುದನ್ನು ಸರ್ಕಾರದ ಗಮನಕ್ಕೆ ಕಾಲ ಕಾಲಕ್ಕೆ ತಂದಿದ್ದರೂ ಸಹ 1954 ರಲ್ಲಿ ನಿಗದಿ ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7 ಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17 ಕ್ಕೆ ಹೆಚ್ಚಿಸದೇ ಇದ್ದ ಕಾರಣ 2022 ರಲ್ಲಿ ತಮ್ಮ ನೇತೃತ್ವದಲ್ಲಿ ಸಮುದಾಯಗಳು ನಡೆಸಿದ 257 ದಿನಗಳ ಸುಧೀರ್ಘ ಹೋರಾಟದ ಫಲವಾಗಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಏಕ ಸದಸ್ಯ ಆಯೋಗ ರಚಿಸಿ, ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಪರಿಶಿಷ್ಟ ಪಂಗಡದವರಿಗೆ ಚಾಲ್ತಿಯಲ್ಲಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17 ಕ್ಕೆ ಹೆಚ್ಚಿಸಿತು ಎಂದರು.
ಈ ಆದ್ಯಾದೇಶದ ಮೇರೆಗೆ ನೇಮಕಾತಿಗಳಲ್ಲಿ ರೋಸ್ಟರ್ ಬಿಂದುಗಳನ್ನು ನೇರನೇಮಕಾತಿ ಮತ್ತು ಬಡ್ತಿ ನೇಮಕಾತಿಗಳಲ್ಲಿ ಹೊಸದಾಗಿ ಅಳವಡಿಸಿಕೊಂಡು ನೇಮಕಾತಿ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶಗಳಿಂದ ಬಾಧಿತರಾದವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಘನ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇವುಗಳ ಆಧಾರದ ಮೇಲೆ ಉಚ್ಛನ್ಯಾಯಾಲಯ ಕಳೆದ ನವೆಂಬರ್ 27 ರಂದು ಮಧ್ಯಂತರ ಆದೇಶ ನೀಡಿ ಹೆಚ್ಚಿಸಲಾದ ಮೀಸಲಾತಿ ಪ್ರಮಾಣದಂತೆ ಯಾವುದೇ ನೇಮಕಾತಿಯ ಬಗ್ಗೆ ಘನ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಧಿಸೂಚನೆಗಳನ್ನು ಹೊರಡಿಸಬಾರದೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದಾಗ್ಯೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಮಾಡಲು ಮುಂದಾಗಿರುವುದು ಆತಂಕಕಾರಿ ಎಂದರು.
ಆದರೆ ಈ ಆದೇಶಗಳಿಂದ ಅನೇಕ ವರ್ಷಗಳಿಂದ ಸಾರ್ವಜನಿಕ ನೇಮಕಾತಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಸೂಕ್ತ ಪ್ರಾತಿನಿದ್ಯ ಸಿಗದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಯುವ ಸಮೂಹ ಮತ್ತು ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಪಂಪಾಪತಿ, ಪ್ರೊ. ಗೋಪಾಲ ಕೃಷ್ಣ ಮತ್ತು ವಾಲ್ಮೀಕಿ ಸಮಾಜದ ಸಂಘಟನೆಗಳ ಮುಖಂಡರು ಹಾಜರಿದ್ದರು.
ಭಕ್ತಿ ಪ್ರಧಾನ ಚಿತ್ರ “ಶ್ರೀ ಜಗನ್ನಾ ಥ ದಾಸರು – ಭಾ ಗ 2” ಮಾರ್ಚ್6ರಂ ದು ಗಂಗಾವತಿಯಲ್ಲಿ ಪ್ರದರ್ಶನ
Devotional film “Shri Jagannatha Dasaru – Part 2” to be screened at Gangavathi on March 6

ಭಕ್ತಿ ಪ್ರಧಾನ ಚಿತ್ರ “ಶ್ರೀ ಜಗನ್ನಾ ಥ ದಾಸರು – ಭಾ ಗ 2” ಮಾರ್ಚ್6ರಂ ದು ಗಂಗಾವತಿಯಲ್ಲಿ ಪ್ರದರ್ಶ ನ

ಗಂಗಾವತಿ: ಕಳೆದ ನಾ ಲ್ಕು ವಾ ರಗಳಿಂ ದ ರಾ ಜ್ಯಾ ದ್ಯಂ ತ ಯಶಸ್ವಿ ಪ್ರದರ್ಶ ನ ಕಾ ಣು ತ್ತಿರು ವ ಭಕ್ತಿಪ್ರಧಾ ನ ಕನ್ನಡ ಚಿತ್ರ “ಶ್ರೀ
ಜಗನ್ನಾ ಥ ದಾ ಸರು – ಭಾ ಗ 2” ಇದೇ ಮಾ ರ್ಚ್ 06ರಂ ದು ಗಂ ಗಾ ವತಿಯಲ್ಲಿ ಪ್ರದರ್ಶ ನಗೊ ಳ್ಳಲಿದೆ.
ಹರಿದಾ ಸ ಪರಂ ಪರೆಯ ಮಹಾ ನ್ ಸಂ ತ, ಶ್ರೀ ಜಗನ್ನಾ ಥ ದಾ ಸರ ಜೀ ವನ ಸಂ ದೇ ಶವನ್ನು ಮನಮು ಟ್ಟು ವ
ರೀ ತಿಯಲ್ಲಿ ತೆರೆದಿಡು ವ ಈ ಚಿತ್ರವು ರಾ ಜ್ಯ ದ ವಿವಿಧ ಭಾ ಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾ ಗಿ ಪ್ರದರ್ಶ ನ
ಕಾ ಣು ತ್ತಿದೆ. ಗಂ ಗಾ ವತಿಯ ಶಿವೆ ಚಿತ್ರಮಂ ದಿರದಲ್ಲಿ ಚಿತ್ರದ ಫಸ್ಟ್ ಶೋ ಹಾ ಗೂ ಸೆಕಂ ಡ್ ಶೋ ಪ್ರದರ್ಶ ನಗೊ ಳ್ಳಲಿದ್ದು , ಸಿನಿ
ಪ್ರೇ ಮಿಗಳು ಹೆಚ್ಚಿನ ಸಂ ಖ್ಯೆ ಯಲ್ಲಿ ಆಗಮಿಸಿ ಚಿತ್ರವನ್ನು ವೀ ಕ್ಷಿಸು ವಂ ತೆ ಮನವಿ ಮಾ ಡಲಾ ಗಿದೆ.
ಈಗಾ ಗಲೇ ವಿವಿಧ ರಾ ಜ್ಯ ಗಳಲ್ಲಿ ಮತ್ತು ಅಮೆರಿಕ, ಲಂ ಡನ್, ಕ್ಯಾ ಲಿಫೋ ರ್ನಿ ಯಾ ವಿವಿಧ ದೇ ಶಗಳಲ್ಲಿ
ಅಂ ತರರಾ ಷ್ಟ್ರೀ ಯ ಮಟ್ಟದಲ್ಲಿ ಪ್ರದರ್ಶ ನಗೊ ಳ್ಳು ತ್ತಿರು ವ ಯಶಸ್ವಿ ಜನಮನ್ನಣೆ ಪಡೆದ ಈ ಚಿತ್ರದಲ್ಲಿ ಗಂ ಗಾ ವತಿಯವರೇ
ಆದ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ ಹಾ ಗೂ ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಅವರು ಅಭಿನಯಿಸಿರು ವು ದು
ಸ್ಥಳೀ ಯರಿಗೆ ಮತ್ತಷ್ಟು ಹೆಮ್ಮೆ ಯ ಸಂ ಗತಿಯಾ ಗಿದೆ. ಅವರ ಅಭಿನಯ ಚಿತ್ರಕ್ಕೆ ವಿಶೇ ಷ ಮೆರಗು ತಂ ದಿದೆ ಎಂ ದು
ತಿಳಿಸಲಾ ಗಿದೆ. ಜಗನ್ನಾ ಥ ದಾ ಸರ ಭಕ್ತಿ, ತತ್ವ ಮತ್ತು ಅವರ ಜೀ ವನದ ಮಹತ್ತರ ಸಂ ದೇ ಶವನ್ನು ಇಂ ದಿನ ಪೀ ಳಿಗೆಗೆ
ತಲು ಪಿಸು ವ ಉದ್ದೇ ಶದಿಂ ದ ನಿರ್ಮಾ ಣವಾ ದ ಈ ಚಿತ್ರವು ಪ್ರೇ ಕ್ಷಕರ ಮನಸ್ಸಿನಲ್ಲಿ ಭಕ್ತಿಯ ಸ್ಪಂ ದನ
ಮೂ ಡಿಸು ವಂ ತಹದ್ದಾ ಗಿದೆ.
ಈ ಸಂ ದರ್ಭ ದಲ್ಲಿ ಚಿತ್ರನಟ ವಿಷ್ಣು ತೀ ರ್ಥ ಜೋ ಷಿ, ಹಾ ಸ್ಯ ಭಾ ಷಣಕಾ ರ ನರಸಿಂ ಹ ಜೋ ಷಿ ಹಾ ಗೂ ಹಿರಿಯ
ವಕೀ ಲರು ಶರದ್ ದಂ ಡಿನ್ ಅವರು ಸಿನಿಪ್ರಿಯರಿಗೆ ಮನಪೂ ರ್ವ ಕ ಆಹ್ವಾ ನ ನೀ ಡಿದ್ದು , ಭಕ್ತಿ ಪರಂ ಪರೆಯ ಮಹಿಮೆ
ತಿಳಿಸು ವ ಈ ಚಿತ್ರವನ್ನು ಕು ಟುಂ ಬ ಸಮೇ ತರಾ ಗಿ ಬಂ ದು ವೀ ಕ್ಷಿಸು ವಂ ತೆ ಕರೆ ನೀ ಡಿದ್ದಾ ರೆ.
“ಇದು ಕೇ ವಲ ಒಂ ದು ಸಿನಿಮಾ ಅಲ್ಲ; ನಮ್ಮ ಸಂ ಸ್ಕೃ ತಿ, ಭಕ್ತಿ ಮತ್ತು ದಾ ಸ ಸಾ ಹಿತ್ಯ ದ ಅಮೂ ಲ್ಯ
ಪರಂ ಪರೆಯನ್ನು ಪರಿಚಯಿಸು ವ ಒಂ ದು ಪವಿತ್ರ ಪ್ರಯಾ ಣ. ಪ್ರತಿಯೊಬ್ಬ ರೂ ತಮ್ಮ ಕು ಟುಂ ಬದವರೊಂ ದಿಗೆ ಬಂ ದು ಈ
ಚಿತ್ರವನ್ನು ವೀ ಕ್ಷಿಸಿ ಭಕ್ತಿಯ ಸೌಂ ದರ್ಯ ವನ್ನು ಅನು ಭವಿಸಬೇ ಕು ,” ಎಂ ದು ಅವರು ತಿಳಿಸಿದ್ದಾ ರೆ.
ಆದ್ದರಿಂ ದ ಗಂ ಗಾ ವತಿ ಹಾ ಗೂ ಸು ತ್ತಮು ತ್ತಲಿನ ಭಾ ಗದ ಸಿನಿಪ್ರಿಯರು ಮಾ ರ್ಚ್ 06ರಂ ದು ಶಿವೆ
ಚಿತ್ರಮಂ ದಿರದಲ್ಲಿ ಪ್ರದರ್ಶ ನಗೊ ಳ್ಳು ವ “ಶ್ರೀ ಜಗನ್ನಾ ಥ ದಾ ಸರು – ಭಾ ಗ 2” ಚಿತ್ರವನ್ನು ತಪ್ಪದೆ ವೀ ಕ್ಷಿಸಿ ಈ ಭಕ್ತಿ
ಪರಂ ಪರೆಯ ಅದ್ಭು ತ ಅನು ಭವದ ಭಾ ಗವಾ ಗಬೇ ಕೆಂ ದು ಕೋ ರಲಾ ಗಿದೆ.
ಮಾ ಹಿತಿಗಾ ಗಿ:
ನಿವೃತ್ತ ಶಿಕ್ಷಕ ಸಾಹಿತಿ ಕುಲಕರ್ಣಿಗೆ ಕಸಾಪದಿಂದ ನುಡಿನಮನ೯ನೇ ತಾಲ್ಲೂಕು ಸಮ್ಮೇಳನದ ಬಗ್ಗೆ ಕಾರ್ಯಕಾರಿ ಸಮತಿ ಸಭೆ
ಗಂಗಾವತಿಯ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ಪದಾಧಿಕಾರಿಗಳು

Retired teacher Sahitya Kulkarni receives a message from Kasapa. Executive committee meeting regarding the 9th Taluk Sammelan.

ನಿವೃತ್ತ ಶಿಕ್ಷಕ ಸಾಹಿತಿ ಕುಲಕರ್ಣಿಗೆ ಕಸಾಪದಿಂದ ನುಡಿನಮನ೯ನೇ ತಾಲ್ಲೂಕು ಸಮ್ಮೇಳನದ ಬಗ್ಗೆ ಕಾರ್ಯಕಾರಿ ಸಮತಿ ಸಭೆ
ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲ್ಲೂಕುಮಟ್ಟದ ೯ನೇ ಸಮ್ಮೇಳನವನ್ನು ಈ ಬಾರಿ ಗ್ರಾಮೀಣ ಪ್ರದೇಶಕ್ಕೆ ಆತಿಥ್ಯ ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕಸಾಪದ ಗಂಗಾವತಿ ತಾಲ್ಲೂಕು ಅಧ್ಯಕ್ಷ ರುದ್ರೇಶ ರ್ಹಾಳ ಹೇಳಿದರು.
ನಗರದ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ನಿಧನನಕ್ಕೆ ಕಸಾಪದಿಂದ ನುಡಿ ನಮನ ಸಲ್ಲಿಸಲಾಯಿತು. ಬಳಿಕ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಸಮ್ಮೇಳನ ನಡೆಸುವ ಬಗ್ಗೆ ಕಾರ್ಯಕಾರಿ ಮಂಡಳಿಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಬಾರಿ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಹಳ್ಳಿಗಾಡಿನ ಸೊಗಡಿನಲ್ಲಿ ಕನ್ನಡದ ಕಂಪನ್ನು ಚಲ್ಲೊಣ ಎಂದರು.
ಗ್ರಾಮೀಣ ಪ್ರದೇಶ ರ್ಹಾಳ, ಕೇಸರಹಟ್ಟಿ, ಹೇರೂರು, ಬಸಾಪಟ್ಟಣ, ಹಿರೇಬೆಣಕಲ್, ವೆಂಕಟಗಿರಿ ಸೇರಿದಂತೆ ವಿವಿಧ ಗ್ರಾಮಗಳ ಹೆಸರು ಪ್ರಸ್ತಾಪವಾದವು. ಆದರೆ ಯಾವ ಗ್ರಾಮಸ್ಥರು ಮೊದಲಿಗೆ ಆಸಕ್ತಿ ವಹಿಸಿ ಆತಿಥ್ಯ ನೀಡಲು ಮುಂದೆ ಬರುತ್ತಾರೋ ಆ ಗ್ರಾಮಕ್ಕೆ ಸಮ್ಮೇಳನ ನಡೆಸುವ ಅವಕಾಶ ಮಾಡಿ ಕೊಡೋಣ ಎಂಬ ಸಲಹೆ ವ್ಯಕ್ತವಾಯಿತು.
ಎಪ್ರಿಲ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಆ ಬಳಿಕವೇ ಸಮ್ಮೇಳನ ಆಯೋಜಿಸಬೇಕು. ಎಪ್ರಿಲ್ ಎರಡು ಅಥವಾ ಮೂರನೇ ವಾರದಲ್ಲಿ ಸಮ್ಮೇಳನ ಆಯೋಜಿಸಿದರೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಸದಸ್ಯರು ವ್ಯಕ್ತಪಡಿಸಿದರು.
ಈ ಮಧ್ಯೆ ತಾಲ್ಲೂಕು ಮಟ್ಟದ ಸಮ್ಮೇಳನ ಮೇ ತಿಂಗಳಿಗೆ ಹೋದರೆ ಆ ತಿಂಗಳಲ್ಲಿ ಕೊಪ್ಪಳ ಜಿಲ್ಲಾ ಸಮ್ಮೇಳನ, ಆನೆಗೊಂದಿ ಉತ್ಸವದಂತ ಕಾರ್ಯಕ್ರಮ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ದಿನಾಂಕ ಹೊಂದಿಸಿಕೊAಡು ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು.
ಒಂದೇ ದಿನಕ್ಕೆ ಸೀಮಿತ:
ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಖರ್ಚು-ವೆಚ್ಚ, ಕಾರ್ಯಕ್ರಮಗಳ ದೃಷ್ಟಿಯಿಂದ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಅಲ್ಲದೇ ಸಮ್ಮೇಳನದ ಗೋಷ್ಠಿಗಳಿಗೂ ಕಡಿವಾಣ ಹಾಕಿ ಮಹತ್ವದ ವಿಚಾರ ಗೋಷ್ಠಿಗಳಿಗೆ ಆದ್ಯತೆ ನೀಡುವುದು, ಆಯಾ ಸ್ಥಳೀಯ ಕಲಾವಿದರು, ಸಾಹಿತಿಗಳಿಗೆ ವೇದಿಕೆಯಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಯಿತು. ಕಸಾಪದಿಂದ ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಇದೇ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕುಲಕರ್ಣಿಗೆ ನುಡಿ-ನಮನ:
ಇದಕ್ಕೂ ಮೊದಲು ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಗೌರವಾರ್ಥ ನುಡಿ ನಮನ ಸಲ್ಲಿಸಲಾಯಿತು. ಸಿಪಿಎಸ್, ಹಿರೇಜಂತಕಲ್ ಸೇರಿದಂತೆ ಶಿಕ್ಷಕರಾಗಿ ವೆಂಕಟ್ರಾವ್ ೩೮ ವರ್ಷ ಕಳೆದಿದ್ದರ ಬಗ್ಗೆ ಸಭೆಯಲ್ಲಿ ಸ್ಮರಿಸಲಾಯಿತು.
ಕಸಾಪದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅಂಗಡಿ ಶ್ರೀನಿವಾಸ ಮಾತನಾಡಿ, ವೆಂಕಟ್ರಾವ್ ಉತ್ತಮ ಸಾಹಿತಿಯಾಗಿದ್ದರು. ನಾಲ್ಕು ಪುಸ್ತಕಗಳ್ನು ರಚಿಸಿದ್ದಲ್ಲದೇ, ದಾಸ ಸಾಹಿತ್ಯ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಕಸಾಪದ ಪದಾಧಿಕಾರಿಗಳಾದ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ ಮರಳಿ, ತಾಲೂಕಾ ಕೋಶಾಧ್ಯಕ್ಷ ಚಂದ್ರಶೇಖರ ಅಕ್ಕಿ, ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಗೌರವ ಕಾರ್ಯದರ್ಶಿ ರಮೇಶ ಬಾಳಿಕಾಯಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಮಟ್ಟಿ, ಗೌರವ ಸಲಹೆಗಾರ ಶಿವಾನಂದ ಶಿಳ್ಳಿನ್, ಮಂಜುನಾಥ ಕುರಿ ಇತರರಿದ್ದರು.
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 131 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ .

The farmers' struggle in the Hanur assembly constituency has entered its 131st day.
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 131 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ .

ವರದಿ: ಬಂಗಾರಪ್ಪ .ಸಿ .
ಹನೂರು : ರೈತರ ಜಮೀನುಗಳಿಗಾಗಿ ನೀರು ಸರಬರಾಜು ಮಾಡುವಂತೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿಯು ಮಾಡುತ್ತಿರುವ ಹೋರಾಟಕ್ಕೆ ದಿನೆ ದಿನೆ ಕಾವು ಪಡೆದುಕೊಳ್ಳುವಂತೆ ತಿವ್ರಗೊಳಿಸಲಾಗುತ್ತದೆ ,
ಹನೂರು ತಾಲ್ಲೂಕಿನ
ವಡಕೆಹಳ್ಳದಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ 130 ದಿನ ಮುಗಿದು 131 ನೇ ದಿನಕ್ಕೆ ಕಾಲಿಟ್ಟಿದೆ,
ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು130ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ, ಈ ಭಾಗದ ಶಾಸಕರು ರೈತರ ರೈತರ ಮಧ್ಯೆ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದು ಈ ಭಾಗದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಹೊರತು ಸಂಪೂರ್ಣ ಬರಗಾಲವನ್ನು ಹೊರ ಹಾಕುವ ಯೋಜನೆಗೆ ಸಹಕರಿಸುತ್ತಿಲ್ಲ ಜೊತೆಗೆ ಉಸ್ತುವಾರಿ ಸಚಿವರು ಡಿಪಿಆರ್ ಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು ಅದು ಕೂಡ ಕಾರ್ಯಗತ ಆಗಿಲ್ಲ ಆದ್ದರಿಂದ ರೈತರೇ ಯೋಜನೆಯ ಸಂಪೂರ್ಣ ವೆಚ್ಚ ಬರಿಸಿ ಬರಗಾಲವನ್ನು ಆಚೆ ಹಾಕಲು ರೈತರು ನಿರ್ಧರಿಸಿರುವುದರಿಂದ ಸರ್ಕಾರ ರೈತರ ಜೊತೆ ಸಹಕರಿಸಬೇಕೆಂದು ಧರಣಿ ನಿರತರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಧರಣಿಯಲ್ಲಿ ಅರ್ ಅರ್ಪುದರಾಜ್, ಪೌಲ್ ಧರ್ಮ ರಾಜ್,, ಜಾನ್ ಪಾಲ್ ,ಮಲ್ಲೇಶ್,ಚಂದ್ರಪ್ಪ, ಬಸವಣ್ಣ, ಬಸವರಾಜಪ್ಪ,ಮಣಿಮಲ್ಲಮ್ಮ,ಗಾಂದಮ್ಮ ಮಹದೇವಮ್ಮ,ಪಾರ್ವತಿಯಮ್ಮ, ರತ್ನಮ್ಮ, ಚೆನ್ನಬಸಪ್ಪ, ಗುಂಡಣ್ಣ, ಇನ್ನೂ ಅನೇಕ ಜನ ದಂಟಳ್ಳಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಕೈವಾರ ಸಧ್ಗುರು ಯೋಗಿನಾರೇಯಣರ ಪರಿಚಯ ಹಾಗೂ ಯತೀಂದ್ರ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ : ಗೋಪಾಲ ಕೃಷ್ಣ.

ಕೈವಾರ ಸಧ್ಗುರು ಯೋಗಿನಾರೇಯಣರ ಪರಿಚಯ ಹಾಗೂ ಯತೀಂದ್ರ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ : ಗೋಪಾಲ ಕೃಷ್ಣ.

Introduction of Kaivara Sadhguru Yoginareyan and welcome to the Yathindra Sri Award ceremony: Gopala Krishna.
ವರದಿ: ಬಂಗಾರಪ್ಪ .ಸಿ .
ಹನೂರು : ಸನಾತನ ಧರ್ಮ ಗುರುಗಳಾದ
ಶ್ರೀ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ* ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಸರ್ವರು ಆಗಮಿಸಿ ಎಂದು ಹನೂರು ಬಣಜಿಗ /ಬಲಿಜ ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾದ ಗೋಪಾಲ ಕೃಷ್ಣ ರವರು ತಿಳಿಸದರು.
ನಂತರ ಮಾತನಾಡಿದ ಅವರು ಇದೇ ತಿಂಗಳು
ದಿನಾಂಕ 22/03/2026 ನೇ ಭಾನುವಾರ ಸಮಯ ಬೆಳಿಗ್ಗೆ 8.30 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ
ಸ್ಥಳ : ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ,
ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೇಲ್ಕಂಡ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮತ್ತು ಹನೂರು ತಾಲೂಕು ಎಲ್ಲ ಸಮುದಾಯದವರು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮಕ್ಕಳ ಆರೋಗ್ಯಕ್ಕೆ ಮುಂಜಾಗ್ರತೆ ಅಗತ್ಯ-ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್

ಮಕ್ಕಳ ಆರೋಗ್ಯಕ್ಕೆ ಮುಂಜಾಗ್ರತೆ ಅಗತ್ಯ-ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್

Precaution is necessary for children's health-Child Development Project Director Jayashree, R
ಗಂಗಾವತಿ, 05:ತಾಲೂಕಿನಲ್ಲಿ ಈ ವರ್ಷ ಬೇಸಿಗೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಬಿಸಿಗಾಳಿ ಬೀಸುವ ಸಂಭವನೀಯತೆ ತಾಲೂಕಿನಲ್ಲಿ ಗರಿಷ್ಠ ಪ್ರಮಾಣಕ್ಕಿಂತ ಹೆಚ್ಚಿದೆ.
ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಜಾಸ್ತಿ ಕಂಡು ಬಂದ ಹಿನ್ನೆಲೆ ವಿಶೇಷವಾಗಿ ತಾಲ್ಲೂಕಿನ ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಆರ್ ತಿಳಿಸಿದ್ದಾರೆ.
ಗಂಗಾವತಿ ತಾಲ್ಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಹೆಚ್ಚು ನೀರನ್ನು ಕುಡಿಸಲು ಮುಂದಾಗಬೇಕು.
ಮಕ್ಕಳ ಪಾಲಕರಿಗೆ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಹಾಗೂ ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸುವುದಕ್ಕೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.
ಪಾಲಕರು ಸಣ್ಣ ಮಕ್ಕಳನ್ನು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆಯ ನಂತರ ಹೊರಗಡೆ ಓಡಾಡುವುದಕ್ಕೆ ಬಿಡಬೇಕು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಿತ್ತಳೆ, ಸೇಬು. ಅತಿ ಹೆಚ್ಚು ನೀರಿನ ಅಂಶ ಇರುವ ಹಣ್ಣುಗಳನ್ನು ಮಕ್ಕಳಿಗೆ ನೀಡಿ. ಬೇಕರಿ ಪದಾರ್ಥ ಸಕ್ಕರೆ ಅಂಶ ಇರುವ ಆಹಾರವನ್ನು ಆದಷ್ಟು ಮಕ್ಕಳಿಗೆ ನೀಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್ ಪ್ರಕಟಣೆಯಲ್ಲಿ ತಿಳಿಸಿದೆ.
ಲಿಂಗದಹಳ್ಳಿ ಸಡಗರ ಸಂಭ್ರಮದಿಂದ ಜರಗಿದ ಅಮರೇಶ್ವರ ರಥೋತ್ಸವ
Amareshwara Chariot Festival celebrated with great enthusiasm by the people of Lingadahalli
ಲಿಂಗದಹಳ್ಳಿ ಸಡಗರ ಸಂಭ್ರಮದಿಂದ ಜರಗಿದ ಅಮರೇಶ್ವರ ರಥೋತ್ಸವ


ಕುಷ್ಟಗಿ:ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ಸಂಜೆ 6:50 ಕ್ಕೆ ಸಡಗರ, ಸಂಭ್ರಮದಿಂದ ಜರಗಿತ್ತು.
ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಬೆಳ್ಳಗೆ ದೇವರ ಮೂರ್ತಿಗೆ ಹಾಲಿನ ಅಭಿಷೇಕ, ಎಲೆ ಚೆಟ್ಟು ಕಟ್ಟುವುದು ನಡೆಯಿತ್ತು ಹಾಗೂ ವಿವಿಧ ಗ್ರಾಮಗಳಿಂದ ಬಂದಿರುವ ಹಲವಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಪೂರೈಸಿದರು ಹಾಗೂ ಬೆಳ್ಳಗೆ 9:00 ಕ್ಕೆ ನೂರಾರು ಮಹಿಳೆಯರಿಂದ ಕುಂಭ, ಕಳಸ ಮೆರವಣಿಗೆ ನಡೆಯಿತು ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ನಡೆದವು.
ಅಂಕಲಿ ಮಠದ ನಿರುಪಾದೆಪ್ಪ ಅಪ್ಪನವರಿಂದ ಮದವೆಯಾದ ನವ ದಂಪತಿಗಳಿಗೆ ಮತ್ತು ಜಾತ್ರೆಗೆ ಬಂದ ಭಕ್ತರಿಗೆ ಆಶೀರ್ವದಿಸಿ ಪ್ರವಚನ ನೀಡಿದರು ಹಾಗೂ ಸಂಜೆ ಹೊಮ್ಮಿ ನಾಳ ಗ್ರಾಮದಿಂದ ರಥೋತ್ಸವ ಎಳೆಯಲು ಎತ್ತಿನ ಬಂಡಿಯಲ್ಲಿ ಮೇರವಣಿಗೆ ಮೂಲಕ ರಥೋತ್ಸವದ ತೇರಿನ ಅಗ್ಗ ಬಂದ ನಂತರ ಸಂಜೆ 6:50 ಕ್ಕೆ ಶ್ರೀ ಅಮರೇಶ್ವರ ದೇವರ ಮಹಾ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಜನಸಾಗರ ಮಧ್ಯ ವಿಜೃಂಭಣೆಯಿಂದ ಜರಗಿತ್ತು ರಥೋತ್ಸವಕ್ಕೆ ಹೊಮ್ಮಿನಾಳು,ಹೊನ್ನಗಡ್ಡಿ, ವಿರುಪಾಪುರ, ಗುಡ್ಡದ ಹನಮಸಾಗರ, ಗಾಣದಾಳ, ಗೌರಿಪುರ,ಇಲ್ಲಕಲ್ಲ,ಕೊಪ್ಪಳ,ತಾವರಗೇರ,ಹುಲಿಹೈದರ, ಲಾಯದುಣಿಸಿ ಗ್ರಾಮಗಳಿಂದ ಅನೇಕ ಭಕ್ತರು ಜಾತ್ರೆಯಲ್ಲಿ ಬಂದು ಶ್ರೀ ಅಮರೇಶ್ವರ ದೇವರ ಕೃಪೆಗೆ ಪಾತ್ರರಾದರು
ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,
Two youths die after falling into Tungabhadra river
ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಇಬ್ಬರು ಯುವಕರು ಸಾವು,


ಗಂಗಾವತಿ ಮಾ.04: ಹೋಳಿ ಹಬ್ಬದ ಸಂದರ್ಭದಲ್ಲಿ ನದಿ ಸ್ನಾನಕ್ಕೆಂದು ಹೋಗಿದ್ದ ಮೂವ್ವರು ಯುವಕರು ಆಕಸ್ಮಿಕವಾಗಿ ಕಾಲುಜಾರಿ ತುಂಗಭದ್ರಾ ನದಿ ಪಾಲಾದ ಘಟನೆ ಬುಧವಾರ ಸಂಜೆ ನಡೆದಿದೆ.
ಈ ಪೈಕಿ ಒಬ್ಬ ಯುವಕ ಈಜಿ ದಡಸೇರಿದ್ದು ಇಬ್ಬರು ಯುವಕರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.
ಮೃತ ಯುವಕರನ್ನು ಗಂಗಾವತಿಯ ಗಾಂಧಿನಗರದ ನಿವಾಸಿಗಳಾದ ಸೂರ್ಯ ಮತ್ತು ಅಭಿಷೇಕ ಇಬ್ಬರು 17 ವಯಸ್ಸು ಇದ್ದು ಎಂದು ಗುರುತಿಸಲಾಗಿದೆ. ಹೋಳಿ ಹಬ್ಬದ ಬಳಿಕ ಸ್ನೇಹಿತರೊಂದಿಗೆ ಊಟ ಮಾಡಿ ಸ್ನಾನಕ್ಕೆಂದು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ.
ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ
Hanur Bettalli Maramma pillar installation, meat sale banned for one week
ಹನೂರು ಬೆಟ್ಟಳ್ಳಿ ಮಾರಮ್ಮನ ಕಂಬ ಪ್ರತಿಷ್ಟಾಪನೆ ಒಂದು ವಾರ ಮಾಂಸ ಮಾರಾಟ ನಿಷೇಧ


ವರದಿ: ಬಂಗಾರಪ್ಪ .ಸಿ .
ಹನೂರು: ಪಟ್ಟಣದ ಕ್ಷೇತ್ರದ ಅಧಿದೇವತೆಯಾದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸಮಯದಲ್ಲಿ ಮಾರಿ ಕಂಬವನ್ನು ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಎಂಟು ದಿನಗಳ ಕಾಲ ಪಟ್ಟಣದಲ್ಲಿರುವ ಸರ್ವ ಧರ್ಮಗಳ ಮಾಂಸದ ಅಂಗಡಿಯವರು ಮಾರಾಟವನ್ನು ಸಂಪೂರ್ಣವಾಗಿ ನಿಷೇಧವನ್ನು ಮಾಡಲಾಗಿದೆ.
ಪ್ರತಿ ವರ್ಷದಂತೆಯೆ ಈ ವರ್ಷವು ಮಾರಮ್ಮನ
ಜಾತ್ರೆಯ ನಿಮಿತ್ತವಾಗಿ ಮಾರಿ ಕಂಬದ ಪ್ರತಿಷ್ಠಾಪನೆಯ ದಿನದಿಂದ ಒಂದು ವಾರದವರೆಗೆ ಮನೆಗಳಲ್ಲಿ ಒಗ್ಗರಣೆ ಇಲ್ಲದೆ ಅಡುಗೆ ಮಾಡುವ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದು ಗ್ರಾಮೀಣ ಸಂಸ್ಕೃತಿ ಮತ್ತು ಭಕ್ತಿಭಾವದ ಪ್ರತೀಕವಾಗಿದ್ದು
ಜಾತ್ರಾ ಮಹೋತ್ಸವವನ್ನು ಎಲ್ಲಾ ಸಮುದಾಯದವರು ಸಹಮತದಿಂದ ಒಟ್ಟುಗೂಡಿ ಒಂದಾಗಿ ಆಚರಿಸುವುದು ಹನೂರಿನ ಜನತೆಯ ವಿಶೇಷ ಪರಂಪರೆಯಾಗಿದೆ. ಹಲವು ವರ್ಷಗಳಿಂದ ಹಿಂದು ಸಂಪ್ರದಾಯದ ಜಾತ್ರೆಯಾದರು ಸಹ ಮುಸ್ಲಿಂ ಸಮುದಾಯದವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮಾಂಸ ಮಾರಾಟವನ್ನು ನಿಲ್ಲಿಸುತ್ತಿದ್ದು, ಜಾತ್ರೆ ಯಶಸ್ವಿಯಾಗಲು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.
ಇದೇ ರೀತಿಯಲ್ಲಿ ಮುಸ್ಲಿಂ ಬಾಂಧವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ರೂಡಿಯಾಗಿದೆ, ಹಿಂದೂ–ಮುಸ್ಲಿಂ ಸಾಮರಸ್ಯದ ಅಪೂರ್ವ ಉದಾಹರಣೆಯಾಗಿದೆ.
ಹನೂರು ಪಟ್ಟಣದಲ್ಲಿ ಎರಡು ಸಮುದಾಯದವರು ಅಣ್ಣ-ತಮ್ಮಂದಿರಂತೆ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಪ್ರತಿಯೊಂದು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಜಾತ್ರಾ ಮಹೋತ್ಸವ ಮಾರ್ಚ್ 9 ರಿಂದ 13 ರವರೆಗೆ ಐದು ದಿನಗಳ ಕಾಲ ನಡೆಯಲಿದೆ.
ಮಾರ್ಚ್ 9 ರಂದು ರ ಸೋಮವಾರದಿಂದ ಜಾಗರ ಸಮರ್ಪಣೆ, 10 ರ ಮಂಗಳವಾರ ಮಧ್ಯಾಹ್ನ ರಥೋತ್ಸವ ಹಾಗೂ ತಂಪು ಜ್ಯೋತಿ, 11ರಂದು ದೊಡ್ಡ ಬಾಯಿ ಬೀಗ, 12 ರಂದು ಅಗ್ನಿಕುಂಡ ದರ್ಶನ,13 ರಂದು ಆರ್ ಎಸ್ ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಫೆಬ್ರವರಿ 24ರಂದು ಚಾಲನೆ ನೀಡಲಾಗಿದೆ.
ಇದಾದ ಎಂಟು ದಿನಗಳ ನಂತರ ಮಾರ್ಚ್ 3 ರ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ಪತಿ ಎಂಬ ಪ್ರತೀತಿ ಇರುವ ಮೂರು ಕವಲಿನ ಕಂಬವನ್ನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಕಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಪಟ್ಟಣದ ರಾಘು ಹರೀಶ್, ಪಾರ್ಥ, ಪ್ರದೀಪ್ ಸೇರಿದಂತೆ ಇನ್ನಿತರ ಯುವಕರ ತಂಡ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಬಗೆಯ ಫಲ-ಪುಷ್ಪಗಳು ಹಾಗೂ ತೆಂಗಿನ ಮರದ ಗರಿಗಳಿಂದ ಅಲಂಕಾರ ಮಾಡಿದ್ದರು. ಇದಲ್ಲದೆ ದೇವಾಲಯದ ವತಿಯಿಂದ ದೇವಸ್ಥಾನದ ಹೊರಾಂಗಣದಲ್ಲಿ ವಿಶೇಷವಾದ ಹಸಿರು ಚಪ್ಪರ, ದೇವಸ್ಥಾನದ ಹೊರ ಆವರಣ, ಗೋಪುರಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಕಂಬ ಪ್ರತಿಷ್ಠಾಪನೆ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೋತ್ಸವಕ್ಕೆ ಚಾಲನೆ ನೀಡಿದ ಎಂಟು ದಿನಗಳ ನಂತರ ಸರಿಯಾಗಿ ಮೂರು ಕವಲಿನ ಕಂಬ ಪ್ರತಿಷ್ಠಾಪನೆ ಮಾಡುವುದು ಸಂಪ್ರದಾಯ. ಅದರಂತೆ ಮಂಗಳವಾರ ವಾದ್ಯ ಮೇಳಗ ಳೊಂದಿಗೆ ಪಟ್ಟಣದ ಆಂಜನೇಯ ದೇವಸ್ಥಾನದ ಸಮೀಪ ಸಿದ್ದಪಡಿಸಿದ್ದ ಕಂಬವನ್ನು ಮೆರವಣಿಗೆಯ ಮೂಲಕ ತಂದು ದೇವ ಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಂಗಳವಾರ ಮುಂಜಾನೆಯಿಂದಲೇ ದೇವಿಗೆ ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಶಿನ ಕುಂಕುಮದಲ್ಲಿ ವಿಶೇಷ ಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ರಾವ್, ಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ಮಂಗಳವಾರ ರಾತ್ರಿ ನಡೆದ ಕಂಬ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳ ವಿವಿಧ ಸಮುದಾಯಗಳ ಮಕ್ಕಳು, ಮಹಿಳೆಯರು,ಪುರುಷರು ಸಮುದಾಯದ ಯಜಮಾನರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹನೂರು ಕ್ಷೇತ್ರದ ರೈತಾಪಿ ವರ್ಗಕ್ಕೆ ಬಜೆಟ್ ನಂತರ ಸಿಹಿ ಸುದ್ದಿಯನ್ನು ಸರ್ಕಾರ ನೀಡುತ್ತದೆ ಮಾಜಿ ಶಾಸಕ ಆರ್ ನರೇಂದ್ರ .
Former MLA R Narendra will give good news to the farmers of Hanur constituency after the budget.
ಹನೂರು ಕ್ಷೇತ್ರದ ರೈತಾಪಿ ವರ್ಗಕ್ಕೆ ಬಜೆಟ್ ನಂತರ ಸಿಹಿ ಸುದ್ದಿಯನ್ನು ಸರ್ಕಾರ ನೀಡುತ್ತದೆ ಮಾಜಿ ಶಾಸಕ ಆರ್ ನರೇಂದ್ರ


ವರದಿ: ಬಂಗಾರಪ್ಪ .ಸಿ.
ಹನೂರು :ಕ್ಷೇತ್ರದ ರೈತಾಪಿ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಸರ್ಕಾರವು ಮಂಡಿಸಲಿರುವ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳಾದ ಮೂರು ವಿಷಯಗಳನ್ನು ಮಾದ್ಯಮದ ಮೂಲಕ ಜನತೆಗೆ ತಿಳಿಸಲು ಇಚ್ವಿಸುವೆ ಎನ್ನುತ್ತ ಮೊದಲನೆಯದಾಗಿ ನಮ್ಮ ಕ್ಷೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ
ಕುಡಿಯುವ ನೀರಿನ ಬರ ಹೆಚ್ಚಾಗಿದೆ ಅದನ್ನು ಮನಗಂಡು ನಮ್ಮ ಸರ್ಕಾರದ ಉಸ್ತುವಾರಿ ಸಚಿವರಾದಿಯಾಗಿ ,ನಮ್ಮ ಸಂಸದರು ಸಹ ಹನೂರು ಕ್ಷೇತ್ರದ ಅಭಿವೃದ್ಧಿಗೆ ಸಂಬಂದಿಸಿದ ಕೆಲಸ ಮಾಡುತ್ತಿದ್ದಾರೆ ,ಹಾಗೇಯೆ ನಮ್ಮ ಭಾಗದಲ್ಲಿ ಹೆಚ್ಚು
ಕೇರೆಗಳಿದ್ದು ಅವುಗಳ ತುಂಬಿಸುವ ಕೆಲಸವನ್ನು ನಾನು ಹಿಂದೆಯೆ ಮಾಡಿದ್ದೆ ಮುಂದೆಯು ಮಾಡುತ್ತೆನೆ ಎಂದರು , ಇನ್ನೂಳಿದಂತೆ ಕಾಡಂಚಿನ ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ
ಕಾಡು ಪ್ರಾಣಿಗಳ ಹಾವಳಿಯ ಕಾಟ ಹೆಚ್ಚಿನ ಪ್ರಮಾಣದಲ್ಲಿದ್ದು ಅದನ್ನು ತಡೆಗಟ್ಟುವ ಕಾರ್ಯಮಾಡಲಾಗುತ್ತದೆ,ಈಗಾಗಲೆ ಹನೂರು
ಕ್ಷೇತ್ರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ತಲೆ ದೂರಿದ್ದು ಅದನ್ನು ಸರಿಪಡಿಸುವ ಕಾರ್ಯವು ಜನಪ್ರತಿನಿಧಿಗಳ ಕರ್ತವ್ಯವಾಗಿದೆ, ಅದೇ ರೀತಿಯಲ್ಲಿ
ಅಧಿಕಾರಿಗಳು ಸಹ ನೀರಿನ ಸಮಸ್ಯೆ ನಿಬಾಯಿಸಬೇಕು .ಕಾಡಂಚಿನ ಜಮಿನುಗಳಿಗೆ ಕಾಡು
ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ,ನಮ್ಮದೆ ಕ್ಷೇತ್ರದ ಚೆಂಗಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಹುಲಿಗಳ ಒಡಾಟವು ಹೆಚ್ಚಾಗಿದ್ದು
ಆನೆಗಳಿಂದ ಬೆಳೆ ನಾಶವಾಗಿದೆ ,ಯಾವುದೇ ಸರ್ಕಾರವು ಬರಲಿ ರೈತರಿಗೆ ಬರ ಪರಿಹಾರ ಕೊಡುವಾಗ ಬೀಜ ಬಿತ್ತನೆ ಮಾಡಿದ ಖರ್ಚನ್ನು ಸಹ ಕೊಡಲು ಸಾದ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಪರಿಹಾರವನ್ನು ಹೆಚ್ಚು ಮಾಡಲು
ಸರ್ಕಾರವನ್ನು ಕೇಳುತ್ತೆನೆ ,ನಾನು ಒತ್ತಾಯಿಸುವುದೆನಂದರೆ ಬೆಳೆ ನಾಶಕ್ಕೆ ಕೊಡುವ ಪದಾರ್ಥಗಳ ಕನಿಷ್ಠ ಬೆಲೆಯಿಲ್ಲ .
ಒಂದು ಏಕ್ಟೇರ್ ಕೊಡುವ ಪರಿಹಾರ ಹೆಚ್ಚಿಸುವಂತ ಕಾರ್ಯವಾಗಬೇಕು ,
ನನ್ನ ಒಂಬತ್ತು ವರ್ಷದ ಹೋರಾಟದ ಫಲವಾಗಿ ,ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವು ಇಂದು ನನಸಾಗಿದೆ , ಈಗಾಗಲೇ
ರೈತ ಸಂಘದ ಮಿತ್ರರುಗಳು ಹಾಗೂ ನಮ್ಮಗಳ ಹೊರಾಟದ ಫಲವಾಗಿ ಇಂದು ನಾನುರು ತೊಂಬತ್ತು ಕೋಟಿ ರೂಗಳಷ್ಟು ಬಜೇಟ್ ಮಂಡಿಸುವ ಕೆಲಸಕ್ಕೆ ಸಮಯ ಕೂಡಿ ಬಂದಿದೆ , ಮುಂದಿನ ದಿನಗಳಲ್ಲಿ ಕ್ಷೇತ್ರವು ಅಭಿವೃದ್ಧಿಯಾಗಲಿದೆ ,
ಗುಂಡಾಲ್ ಡ್ಯಾಂ ನಿಂದ ಹುಬ್ಬೆಹುಣಸೆ ನೀರು ಹರಿಸುವುದು ಬೇಡ ಕಾರಣ ಅದರಲ್ಲಿ ನೀರಿನ ಕೊರತೆ ಕಾಣುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ , ಬಲದಂಡೆ ಮತ್ತು ಎಡದಂಡೆಯಾಗಿ ಎರಡುಗಡೆ ವಿಭಾಗಿಸಿ , ನೀರನ್ನು ಬಂಡಳ್ಳಿ ಭಾಗಕ್ಕೆ ಸೇರಿದಂತೆ, ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ,
ಹುಬ್ಬೆ ಹುಣಸೆ ಕೆರೆಗೆ ಎರಡು ಇಂಚು ನೀರಿನ ಸರಬರಾಜು ಮಾಡಲು ಅಂದೆ ನನ್ನ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಯಿತು, ನಮ್ಮ ಭಾಗದ
ಇಂಜಿನಿಯರ್ ಗಳಾದ ಮಹೇಶ್ ಹೆಚ್ಚು ಮತುವರ್ಜಿವಹಿಸಿ ನಮ್ಮ ಭಾಗದ ಜನರಿಗೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ, ಅಜ್ಜಿಪುರದಂತಹ ಗುಡ್ಡಗಾಡು ಪ್ರದೇಶದಲ್ಲಿ ನೀರಿನ ಪಂಪು ಮಾಡಿದರೆ ಅದರ ಮುಂದಿನ ಭಾಗ ನೀರು ಸರಾಗವಾಗಿ ಹರಿದು ಹೋಗಲು ಮಾಡಲಾಗುವುದು. ಈ ಯೋಜನೆಯನ್ನು ಮೊದಲಿಗೆ ಸಚಿವ ಸಂಪುಟದಲ್ಲಿ ಮಂಡಿಸಿದರೆ ಅನುಕೂಲವಾಗುವುದು.ದಂಟಳ್ಳಿ ಹಾಗೂ ಆಲೇರಿ ಕೆರೆಗಳಿಗೆ ಹೆಚ್ಚುವರಿಯಾಗಿ ನಾವು ಮಾಡಿದ ಕಾಮಗಾರಿಗಳ ಮುಂದುವರಿದೆ ಬಾಗವಾಗಿ ಕೆಲಸ ಮಾಡಿದ್ದಾರೆ , ಹಿಂದಿನ ಅವದಿಯಲ್ಲಿ ನಡೆದ ಅಭಿವೃದ್ಧಿಗೆ ನಮ್ಮ ಕೊಡುಗೆ ಅಪಾರವಾಗಿದೆ ,
ರೈತಸಂಘಗಳು ಹೋರಾಟ ಮಾಡುತ್ತಿರುವ ವಿಷಯವಾಗಿ ಈ ಬಜೆಟ್ ನಲ್ಲಿ ಮಂಡಿಸಿದರೆ , ನಮ್ಮ ರೈತರ
ಎಲ್ಲಾ ಹೋರಾಟಗಳನ್ನು ಅವರ ಜೋತೆಯಲ್ಲಿ ಸೇರಿ ನಿಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ ಮಧುವನಳ್ಳಿ ಶಿವಕುಮಾರ್ ,ಹನೂರು ಪಟ್ಟಣ ಪಂಚಾಯತಿಯ ಮಾಜಿ ಉಪಾಧ್ಯಕ್ಷರುಗಳಾದ ಗೀರಿಶ್ ,ಹರೀಶ್ , ಮಾದೇಶ್. ಹಾಗೂ ಮುಖಂಡರುಗಳಾದ ಸ್ವಾಮಿ ,ಸೇರಿದಂತೆ ಇನ್ನಿತರರು ಹಾಜರಿದ್ದರು.
ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು?
What diseases can be prevented by eating garlic?
ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು?


ವಿಶ್ವವಿಡೀ ಆರಾಧಿಸುತ್ತಿರುವ ಜನಪ್ರಿಯ ಸಂಬಾರ ವಸ್ತುವಿದು. ಬೆಳ್ಳುಳ್ಳಿಯ ಘಾಟುವಾಸನೆ, ಹೇರಳ ಔಷಧಿಯುಕ್ತ ಗುಣಗಳೇ ಇದನ್ನು ತುಂಬಾ ಎತ್ತರಕ್ಕೇರಿಸಿವೆ.ಇದು ಆಂಟಿಬಯಾಟಿಕ್ ಮತ್ತು ಆಂಟಿಸೆಪ್ಟಿಕ್ ನಂತೆ ಕಾರ್ಯ ನಿರ್ವಹಿಸುವುದು. ಆಹಾರವನ್ನು ವಿಷಮಯಗೊಳಿಸುವ ಅನೇಕ ತೆರನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಲ್ಲುದು.
ಗರುಡನು ಇಂದ್ರನ ಬಳಿಯಿಂದ ಅಮೃತವನ್ನು ಅಪಹರಿಸಿ ಕೊಂಡೊಯ್ಯುವಾಗ, ಭೂಮಿಗೆ ಬಿದ್ದ ಅಮೃತದ ಬಿಂದುಗಳು ಶ್ವೇತ ಕಂದಗಳಾಗಿ ಅರಳಿದವಂತೆ !!ಬೆಳ್ಳುಳ್ಳಿಯ ಉಗಮದ ಕುರಿತು ಹಬ್ಬಿರುವ ಈ ಕಥೆ,ಎಷ್ಟು ಸ್ವಾರಸ್ಯಪೂರ್ಣ !ಎಂತಹ ಸುಂದರ ಕಲ್ಪನೆ !ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ, ಕಡಿಮೆಯಾಗಿ ರಕ್ತದೊತ್ತಡ ಮತ್ತು ಹೃದಯರೋಗಗಳಿಗೆ ಉತ್ತಮ ಪರಿಣಾಮ ನೀಡುತ್ತದೆ.
ಗಂಟಲು ಉಸಿರಾಟದ ತೊಂದರೆ ಒಣಕೆಮ್ಮು, ದಮ್ಮು, ನೆಗಡಿ, ಶೀತ, ಕಫ ಮುಂತಾದ ಶ್ವಾಸನಾಳಗಳ ತೊಂದರೆಗಳು ನಿವಾರಿಸಲ್ಪಡುತ್ತವೆ. ಹಸಿವು ಮತ್ತು ಜೀರ್ಣಶಕ್ತಿಯನ್ನು ಉಂಟುಮಾಡುತ್ತದೆ.

ಜಠರ ಮತ್ತು ಕರುಳಿನ ದೋಷಗಳು ವಾಯು ಪ್ರಕೋಪಗಳನ್ನು ನಿವಾರಿಸುತ್ತದೆ.ಜ್ವರ, ಕಿವಿ ಮತ್ತು ಕಣ್ಣಿನ ತೊಂದರೆ, ವಾತ, ರಕ್ತದೋಷ, ಮೂತ್ರ ದೋಷಗಳಿಗೆ ಗುಣಕಾರಿ. ಇದು ಉತ್ತಮ ಸ್ಮರಣ ಶಕ್ತಿ ಪ್ರಚೋದಕವೂ ಹೌದು. ಕ್ಷಯ, ಕ್ಯಾನ್ಸರ್ ಚಿಕಿತ್ಸೆಗಳಿಗೂ ಬೆಳ್ಳುಳ್ಳಿ ಬಳಕೆಯಾಗುತ್ತಿದೆ.
ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಸಹಕಾರಿಯಾದ ಬೆಳ್ಳುಳ್ಳಿ ಆಯುರ್ವೇದದಲ್ಲಿ ಅಮೃತ ಸಮಾನವೆನಿಸಿದೆ. ಇದನ್ನು ದೀಪಕ, ಪಾಚಕ, ಬಲವರ್ಧಕ, ಧಾತು ವರ್ಧಕ, ಶುಕ್ರ ವರ್ಧಕ, ಕೇಶ ಮತ್ತು ಬುದ್ಧಿ ವರ್ಧಕವೆಂದು ಹೇಳಲಾಗಿದೆ. ನೋವು ನಿವಾರಕ ರೋಗನಿರೋಧಕ, ಕ್ರಿಮಿನಾಶಕ ಮತ್ತು ಶ್ವಾಸಹರವೆನಿಸಿದ ಬೆಳ್ಳುಳ್ಳಿ, ಮುರಿದ ಮೂಳೆಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ.
ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು
Body of unidentified person found in Huvinal Seema: Case registered
ಹೂವಿನಾಳ್ ಸೀಮಾದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ಪ್ರಕರಣ ದಾಖಲು


ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕಿನ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್ದಲ್ಲಿ , ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್ ನಂ: 04/2026 ಕಲಂ:194 (3)(IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2026ರ ಮಾರ್ಚ್ 2 ರಂದು ಮಧ್ಯಾಹ್ನ 2.10 (ಪಿ.ಎಂ)ಕ್ಕೆ ವೀರಭದ್ರಯ್ಯ ಹೆಚ್ ಸಿ-109 ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಗಣಿಕೀಕೃತ ದೂರು ನೀಡಿದ ಸಾರಾಂಶದಂತೆ, ವೀರಭದ್ರಯ್ಯ ಅವರು 2026ರ ಮಾರ್ಚ್ 1ರ ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಗ್ರಾಮ ಬೀಟ್ ಕರ್ತವ್ಯ ಕುರಿತು ಹೋಗುತ್ತಿರುವಾಗ ಹೂವಿನಾಳ್ ಸೀಮಾದಲ್ಲಿರುವ ಹೊಸಪೇಟೆ-ಗದಗ ಎನ್ ಹೆಚ್-67 ಮುಖ್ಯ ರಸ್ತೆಯ ಪಕ್ಕದ ಸಿ.ಎನ್.ಜಿ ಪೆಟ್ರೋಲ್ ಬಂಕ್ ಹಿಂದೆ ಇರುವ ಗೃಹ ಮಂಡಳಿ ಲೇಔಟ್ ಪಕ್ಕದ ಗಟಾರ್ದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದರಿಂದ ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ನಿಜವಿದ್ದು, ಈ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದಾಗ ಈ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಮುಂದಿನ ಕಾನೂನು ಕ್ರಮಕ್ಕೆ ವಿನಂತಿಸಿಕೊAಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತ ವ್ಯಕ್ತಿಯ ಚಹರೆ ವಿವರ: ಎತ್ತರ: ಸುಮಾರು 5 ಅಡಿ 4 ಇಂಚು ಎತ್ತರ, ಸಾಧಾ ಕೆಂಪನೇಯ ಮೈಬಣ್ಣ ಹೊಂದಿದ್ದು, ಸುಮಾರು 40 ರಿಂದ 45 ವಯಸ್ಸು, ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಮತ್ತು ಕೊರಚಲ ಗಡ್ಡವನ್ನು ಬಿಟ್ಟಿದ್ದು ಇದೆ. ಸೊಂಟದಲ್ಲಿ ಬಿಳಿ ಪ್ಲಾಸ್ಟಿಕ್ ದಾರಾ ಕಟ್ಟಿದ್ದು ಹಾಗೂ ಅಲೆಮಾರಿ ಹುಚ್ಚನಂತೆ ಇರುತ್ತಾನೆ. ಮೃತನ ಮೈ ಮೇಲೆ ಹಸಿರು ಬಣ್ಣದ ತುಂಬು ತೋಳಿನ ಅಂಗಿ, ಬಿಳಿ ಬಣ್ಣದ ಫ್ಯಾಂಟ್ ಇದ್ದು, ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
Appeal to locate heirs of unknown deceased person
ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ


ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳದಿಂದ ಮಂಗಳಾಪುರಕ್ಕೆ ಹೋಗುವ ಗುಮ್ಮಣ್ಣೀಶ್ವರ ಗುಡಿಯ ಮುಂಭಾಗದ ಹೊಲದಲ್ಲಿ ಮೃತಪಟ್ಟ ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಸಹಕರಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸೈಯದ್ ತಾಜುದ್ಧಿನ್ ಸಿಪಿಸಿ 222 ಅವರು 2026ರ ಫೆಬ್ರವರಿ 24 ರಂದು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದು, ಸುಮಾರು 30 ರಿಂದ 35 ವಯಸ್ಸಿನ ಅಪರಿಚಿತ ಗಂಡಸಿನ ಮೃತ ದೇಹವಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣ ವಾಗಿ ಕಳಚಿ ಕೇವಲ ಎಲಬು ಮಾತ್ರ ಇದ್ದು, ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು. ಮೃತ ದೇಹದ ಬಗ್ಗೆ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಲಾಗಿ ಮೃತ ದೇಹದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ ಎಂದು ದೂರು ನೀಡಿದ್ದು, ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯ ಯು.ಡಿ ಆರ್ ನಂ 03/2026 ಕಲಂ: 194 194 (IV) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೃತ ವ್ಯಕ್ತಿಯ ಚಹರೆ ವಿವರ: ಸುಮಾರು 5.6 ಅಡಿ ಎತ್ತರ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಹಾಗೂ ದೇಹದ ಮೇಲೆ ಒಂದು ಹಸಿರು ಬಣ್ಣದ ಲಾಂಗ್ ಚಡ್ಡಿ ಇರುತ್ತದೆ. ವ್ಯಕ್ತಿಯು ಸುಮಾರು 30 ರಿಂದ 35 ವರ್ಷದವನಾಗಿದ್ದು, ಎಡಗೈ ಮೇಲಿನ ಮಾಂಸಖಂಡ ಸಂಪೂರ್ಣವಾಗಿ ಕಳಚಿ ಕೇವಲ ಎಲಬು ಮಾತ್ರ ಇದೆ. ಹೊಟ್ಟೆಯ ಭಾಗದ ಮೇಲಿನ ಚರ್ಮ ಕಳಚಿ ಕರಳುಗಳು ಹೊರ ಬಂದು ದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿರುತ್ತದೆ. ಈ ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಹಾಗೂ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ ಅಥವಾ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 & 230222, ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 9480803746, ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08539-221333 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
Applications invited for working in Village-1 centers
ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ

ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ.
ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ.
ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
ಕೊಪ್ಪಳ ಮಾರ್ಚ್ 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ.
ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ! ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿ
ಯುವಕರಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಅನಿವಾರ್ಯ! ದಲಿತ ಸೇನೆ ಸರ್ಕಾರಕ್ಕೆ ಎಚ್ಚರಿಕೆ

If youth are not given jobs, struggle is inevitable! Dalit Sena warns government

ಗಂಗಾವತಿ: ರಾಜ್ಯ ಸರ್ಕಾರ ಮಂಡಿಸಲಿರುವ ಮಾರ್ಚ್ ಬಜೆಟ್ನಲ್ಲಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕೆ ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ದಲಿತ ಸೇನೆ ಜಿಲ್ಲಾ ಹಾಗೂ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷರಾದ ಉಡಚಪ್ಪ (ಶ್ರೀರಾಮನಗರ) ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಗಂಗಾವತಿ ತಹಸೀಲ್ದಾರರ ಮುಖಾಂತರ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾವಂತ ನಿರುದ್ಯೋಗಿ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು ಹಾಜರಾಗುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸಮಯಬದ್ಧವಾಗಿ ಪೂರ್ಣಗೊಳಿಸಿ ಯುವಕರಿಗೆ ನ್ಯಾಯಯುತ ಉದ್ಯೋಗಾವಕಾಶಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಶಿಕ್ಷಣ ಆರೋಗ್ಯ ಪೊಲೀಸ್, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಾಗಿರುವುದರಿಂದ ಸಾರ್ವಜನಿಕ ಸೇವೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ರಾಜ್ಯ ಬಜೆಟ್ನಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದರ ಜೊತೆಗೆ ಹೊಸ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾಸಾಬ ನದಾಫತಾಲೂಕು ಅಧ್ಯಕ್ಷ ಮೌಲಾಲಿ ಕೆ ತಾಲೂಕು ಉಪಾಧ್ಯಕ್ಷ ರಾಜಸಾಬ್ ನದಾಫ್ ತಾಲೂಕು ಪ್ರಧಾನ ಕಾರ್ಯದರ್ಶಿ ಹಸನ್ ಅಲ್ಲಿ ಕಾರ್ಮಿಕರ ಉಪಾಧ್ಯಕ್ಷ ದುರ್ಗಪ್ಪ ತಾಲೂಕು ಸಂಘಟನಾ ಕಾರ್ಯದರ್ಶಿ ಮರಿಲಿಂಗಪ್ಪ ಕಾರ್ಯಕಾರಿಣಿ ಸದಸ್ಯರಾದ ಸಕ್ರ ಸಾಬ್ ಹಾಗೂ ಹೊನ್ನೂರ್ ಸಾಬ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
:
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ
ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ

Submission of a petition to the Chief Ministers, urging various demands for redressal of atrocities against women and children

ಬೆಂಗಳೂರು: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ಕರ್ನಾಟಕ ರಾಜ್ಯ ಸಮಿತಿಯು ಮಾರ್ಚ್ 4ರಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ಆಂದೋಲನವನ್ನು ನವೆಂಬರ್ 25,2025 ರಿಂದ ಮಾರ್ಚ್ 25, 2026ರ ವರೆಗೆ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರಚಾರ ಕಾರ್ಯಕ್ರಮ ಮತ್ತು ಸಹಿ ಸಂಗ್ರಹಣೆ ಪ್ರಯುಕ್ತ, ಮಾನ್ಯ ಮುಖ್ಯಮಂತ್ರಿಗಳಿಗೆ , ಎಐಎಂಎಸ್ಎಸ್ ರಾಜ್ಯ ಸಮಿತಿಯಿಂದ ನಿಯೋಗವೂಂದು ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಎಸ್ . ನೇತೃತ್ವದಲ್ಲಿ ಅಲಕಾ ರಾವ್, ಸೀಮಾ ಜಿ.ಎಸ್. ಹೇಮಾ, ಶಾಂತ ಅವರೊಂದಿಗೆ ಭೇಟಿ ಮಾಡಿದರು. ಅವರೊಂದಿಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಪ್ರಭಾವ , ಮರ್ಯಾದೆಗೇಡು ಹತ್ಯೆ ತಡೆಗಟ್ಟಲು ಮಾನ್ಯ ಕಾಯ್ದೆ , ಸರ್ಕಾರಿ ಕಛೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಿ , ಸಮಿತಿಯು ಸಕ್ರಿಯವಾಗಿರುವಂತೆ ಮಾಡುವುದು, ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು , ಅಪ್ರಾಪ್ತ ಮಕ್ಕಳ ಮೊಬೈಲ್ ಬಳಕೆ ಕುರಿತು ಮುಖ್ಯಮಂತ್ರಿಗಳ ಹತ್ತಿರ ಪ್ರಸ್ತಾಪಿಸಿ, ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರ ದೂರು.
Villagers have filed a complaint demanding action against illegal liquor sales and matka racket in Hosakera Daggi village.
ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರ ದೂರು.


ಗಂಗಾವತಿ: ತಾಲ್ಲೂಕಿನ ಹೊಸಕೇರಾ ಡಗ್ಗಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮಟ್ಕಾ (ಓ.ಸಿ) ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಸೇರಿ ನೀಡಿದ ಮನವಿಯಲ್ಲಿ, ಗ್ರಾಮದಲ್ಲಿ ಸುಮಾರು ಆರಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಬಡ ಕುಟುಂಬಗಳ ಯುವಕರು ಮತ್ತು ಮಹಿಳೆಯರು ಕುಡಿತದ ಚಟಕ್ಕೆ ಒಳಗಾಗಿ ಆರೋಗ್ಯ ಹಾನಿಗೊಳಗಾಗುತ್ತಿದ್ದಾರೆ. ಕುಟುಂಬಗಳಲ್ಲಿ ಗಲಾಟೆಯಿಂದ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಹಾನಿ ಹಾಗೂ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಗ್ರಾಮದಲ್ಲಿ ಹಲವಾರು ಕಡೆಗಳಲ್ಲಿ ಮಟ್ಕಾ (ಓ.ಸಿ) ಜೂಜಾಟ ದಂಧೆ ನಡೆಯುತ್ತಿದ್ದು, “ಬಾಂಬೆ”, “ಕಲ್ಯಾಣಿ” ಮೊದಲಾದ ಹೆಸರಿನಲ್ಲಿ ದಿನಕ್ಕೆ ಮೂರು-ನಾಲ್ಕು ಬಾರಿ ಆಟಗಳನ್ನು ಆಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದರಿಂದ ಬಡವರು ತಮ್ಮ ಹಣವನ್ನು ಕಳೆದುಕೊಂಡು ಮನೆ ಸಾಮಗ್ರಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ದಂಧೆ ನಡೆಸುತ್ತಿರುವವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು, ಈ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂಬಂಧ ದೂರು ಪ್ರತಿಗಳನ್ನು
ಡಿವೈಎಸ್ಪಿ, ಗಂಗಾವತಿ
ಆರಕ್ಷಕ ನಿರೀಕ್ಷಕರು, ಗ್ರಾಮೀಣ ಪೊಲೀಸ್ ಠಾಣೆ, ಗಂಗಾವತಿ
ಅಬಕಾರಿ ನಿರೀಕ್ಷಕರು, ಅಬಕಾರಿ ಇಲಾಖೆ, ಗಂಗಾವತಿ ಇವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹನುಮೇಶ ನಾಯಕ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು), ದುರ್ಗೇಶ್ ರೆಡ್ಡಿ, ಮಂಜುನಾಥ್ ಡಗ್ಗಿ, ಅಯ್ಯಪ್ಪ ಹೆಬ್ಬಡ್, ನಿಂಗಪ್ಪ, ಅಲ್ಲಸಾಬ್, ಬಾಬು ಸಾಬ್, ಪ್ರವೀಣ್, ಹುಸೇನಪ್ಪ ಹೆಬ್ಬಡ್, ಭೀಮಪ್ಪ ಪೂಜಾರಿ, ಪುರುಷೋತ್ತಮ, ಕಂಠಪ್ಪ, ರಾಘವೇಂದ್ರ, ಕೆಂಚಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
೧೨೪ನೇ ದಿನದ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ ಯಶಸ್ವಿ;ಶಾಸಕರ ನಡೆಗೆ ಸ್ವಾಗತ
124th day of anti-Baldota factory sit-in is a success; MLAs' move welcomed
೧೨೪ನೇ ದಿನದ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ ಯಶಸ್ವಿ;ಶಾಸಕರ ನಡೆಗೆ ಸ್ವಾಗತ


ಕೊಪ್ಪಳ: ನಗರಸಭೆ ಮುಂದೆ ೧೨೪ನೇ ದಿನದಲ್ಲಿ ಕೊಪ್ಪಳ
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ
ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದಿರುವ
ಬಲ್ಡೋಟ ಕಾರ್ಖಾನೆ ಹಟಾವೋ ಧರಣಿಯನ್ನು ಉದ್ದೇಶಿಸಿ
ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷ
ಡಿ.ಎಚ್.ಪೂಜಾರ ಮಾತನಾಡಿ ಫೆ.೨೪ರ ಬಂದ್ ಹೋರಾಟದಲ್ಲಿ ಎಲ್ಲಾ
ರಾಜಕೀಯ ಪಕ್ಷಗಳ ನಾಯಕರು ಇದ್ದರು. ಅವರು ತಮ್ಮ
ಮನಃಪರಿವರ್ತನೆ ಮಾಡಿಕೊಂಡು ಬಾಧಿತ ಜನರನ್ನು ಹಳ್ಳಿಗಳಿಗೆ
ಹೋಗಿ ಮಾತನಾಡಿಸುತ್ತಿರುವುದು ಸಂತೋಷದ ವಿಚಾರ. ಮಾಲಿನ್ಯ
ಮಾಡುವ ಕಾರ್ಖಾನೆಗಳನ್ನು ಮುಚ್ಚಿ ಜನರ ಜೀವ, ಆರೋಗ್ಯ,
ಮಕ್ಕಳ ಭವಿಷ್ಯ ಉಳಿಸಬೇಕು. ಇದೇ ಅಧಿವೇಶನ ಅವಧಿಯಲ್ಲಿ
ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕೊಪ್ಪಳ
ಸರ್ವಪಕ್ಷದ ಮುಖಂಡರನ್ನು ಮತ್ತು ಹೋರಾಟ ವೇದಿಕೆಯ
ಪ್ರಮುಖರ ನಿಯೋಗವನ್ನು ಕೊಂಡೊಯ್ದು ಸಮಸ್ಯೆಗೆ
ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು.
ಇದೇ ವೇಳೆ ಜಂಟಿ ಕ್ರಿಯಾ ವೇದಿಕೆ ಶಾಸಕ ಕೆ. ರಾಘವೇಂದ್ರ
ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಅವರು ಬಾಧಿತ
ಗ್ರಾಮಗಳ ಭೇಟಿ ಮಾಡಿ ಸಮಸ್ಯೆ ಆಲಿಸಿರುವದು ಬಂದ್ ನಂತರದ
ಯಶಸ್ಸು, ಹಾಗೂ ಅವರ ನಡೆಯನ್ನು ವೇದಿಕೆ ಸ್ವಾಗತಿಸಿದೆ.
ಧರಣಿಯಲ್ಲಿ ಮಾನವ ಬಂಧುತ್ವ ವೆದಿಕೆಯ ವಿಭಾಗೀಯ
ಸಂಚಾಲಕ ಭೀಮಪ್ಪ ಹವಳಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ.
ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ,
ಪ್ರಮುಖರಾದ ಎಸ್.ಬಿ.ರಾಜೂರು, ಎಸ್.ಎಂ. ಕಂಬಾಳಿಮಠ, ಮೂಕಪ್ಪ
ಮೇಸ್ತ್ರಿ ಬಸಾಪುರ, ದಿಗಮಟ್ಟಿ ಗವಿಸಿದ್ದಪ್ಪ, ಯಲ್ಲಪ್ಪ ಸಿದ್ದರ್,
ಪಂಪಣ್ಣ ಚಿಂತಪಲ್ಲಿ, ಶಂಭುಲಿAಗಪ್ಪ ಹರಗೇರಿ, ಶಿವಪ್ಪ
ಬನಪ್ಪನವರ, ರವಿ ಕಾಂತನವರ, ಬಿ.ಜಿ. ಕರಿಗಾರ, ಡಾ. ಬಸವರಾಜ
ಪೂಜಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವರಾಜ ಪೂಜಾರ,
ಶರಣು ಗಡ್ಡಿ , ವೈ. ಸತ್ಯನಾರಾಯಣ, ಬಸವರಾಜ ನರೇಗಲ್,
ಗವಿಸಿದ್ದಪ್ಪ ಚಿಕೇನಕೊಪ್ಪ, ಹನುಮಂತ ಜಂತ್ಲಿ, ಸಂಜೀವಮ್ಮ,
ಶಿವಪ್ಪ ಜಲ್ಲಿ, ಮಂಜುನಾಥ ಕವಲೂರು, ಗಂಗಮ್ಮ, ನಾಗರಾಜ
ಕುಷ್ಟಗಿ, ರಾಜಶೇಖರ ಏಳುಬಾವಿ, ಚನ್ನವೀರಯ್ಯ ಹಿರೇಮಠ
ಮುಂತಾದವರು ಇದ್ದರು.
ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ
ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ

300th birth anniversary of Sriyogi Narayana Yathindra celebrated at Gangavathi Nagar Traffic Police Station
ಗಂಗಾವತಿ: ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಸಂಚಾರಿ ಠಾಣೆಯ ಪಿಎಸ್ಐ ಇಸ್ಮೈಲ್ ಸಾಬ್ ಮಾತನಾಡಿ, ಶ್ರೀಯೋಗಿ ನಾರಾಯಣ ಯತೀಂದ್ರರು ಸಮಾಜಕ್ಕೆ ನೀಡಿದ ಧಾರ್ಮಿಕ ಹಾಗೂ ನೈತಿಕ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಲಿಜ ಸಮಾಜದ ಅಧ್ಯಕ್ಷ ಬಿ. ರಮೇಶ್, ಉಪಾಧ್ಯಕ್ಷ ಸೋಮನಾಥ್, ಗಂಗಾಧರ್ ಕಟ್ಟಿಮನಿ, ರಾಘವೇಂದ್ರ, ಜಯರಾಮ್ ಬಿ., ರಾಘವೇಂದ್ರ ಕಟ್ಟಿಮನಿ, ನಾಗರಾಜ್ VSSSN, ಗುರುರಾಜ್, ರಾಜು, ತಬಲಾ ನವೀನ್ ಸೇರಿದಂತೆ ಬಲಿಜ ಸಮಾಜದ ಪದಾಧಿಕಾರಿಗಳು ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಾಂತಿಯುತ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನೆರವೇರಿತು.
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.
ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

Chief Minister's letter in Nitin to clear thousands of roadblocks.

ಗಂಗಾವತಿ: ಗಂಗಾವತಿ-ಕುಷ್ಟಗಿ ರಸ್ತೆ ನಿರ್ಮಾಣದ ನ್ಯೂನ್ಯತೆ ಮತ್ತು ಅವೈಜ್ಞಾನಿಕ ರಸ್ತೆ ಉಬ್ಬುಗಳ ದೂರಿನ ಕುರಿತು ಮತ್ತು ತಾವರಗೇರಾ ಕಲ್ಬುರ್ಗಿ ರಸ್ತೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿರುವ ದೂರಿನ ಬಗ್ಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸರಕಾರಿ ಕಾರ್ಯದರ್ಶಿಯವರಿಗೆ ರಾಜ್ಯದ ಮುಖ್ಯಮಂತ್ರಿಯವರ ಕಚೇರಿಯಿಂದ ಸೂಕ್ತ ಕ್ರಮಕೈಗೊಳ್ಳಲು ಆದೇಶಿಸಿದ ಪತ್ರ ರವಾನೆಯಾಗಿದೆ.

ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ದಿನಾಂಕ:19/02/2026 ರಂದು ಸಲ್ಲಿಸಿರುವ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ಈ ಪತ್ರದಲ್ಲಿ ಸೂಚಿಸಲಾಗಿದೆ.ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಸದರಿಯವರಿಂದ ಮಾಹಿತಿಯನ್ನು ಪಡೆಯುವಂತೆ ಮುಖ್ಯ ಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಶ್ರೀ ಎಮ್.ಶಾಂತಪ್ಪ ,ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರಿಗೂ ಈ ಬಗ್ಗೆ ದಿನಾಂಕ: 07-02-2026 ರಂದು ಪತ್ರ ಬರೆದಿದ್ದ ಅಶೋಕಸ್ವಾಮಿ ಹೇರೂರ,ಈ ಪತ್ರಗಳಿಗೆ ನ್ಯಾಷನಲ್ ಹೈವೇ ಆಫ಼್ ಅಥಾರಿಟಿ ಆಫ಼್ ಇಂಡಿಯಾ,ಹೊಸಪೇಟೆ ಕಚೇರಿಯದಿನಾಂಕ:17-10-2019 ರ ಪತ್ರ,ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಸಹಾಯಕ ಖಾಸಗಿ ಕಾರ್ಯದರ್ಶಿಯವರ ದಿನಾಂಕ:31-10-2019 ರ ಪತ್ರ,ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಹುಬ್ಬಳ್ಳಿ ಇವರ ದಿನಾಂಕ:16-11-2019 ರ ಪತ್ರ,ಕಾರ್ಯಪಾಲಕ ಅಭಿಯಂತರು,ಕರ್ನಾಟಕ ರಾಜ್ಯ.ಹೆದ್ದಾರಿ ಅಭಿವೃದ್ಧಿ ಯೋಜನಾ ವಿಭಾಗ,ಕೆ.ಎಸ್.ಎಚ್.ಪಿ.ಐ. ರಾಯಚೂರು ಇವರ ದಿನಾಂಕ 19-11-2019 ರ ಪತ್ರ,
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಲಬುರ್ಗಿ ಇವರ ದಿನಾಂಕ:25-11-2019 ರ ಪತ್ರ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯಾಲಯದ ದಿನಾಂಕ:25-11-2019 ರ ಪತ್ರಗಳನ್ನು ಉಲ್ಲೇಖಿಸಿದ್ದಾರೆ.
ಗಂಗಾವತಿ-ಕುಷ್ಟಗಿ ಮತ್ತು ತಾವರಗೇರಾ-ಕಲಬುರ್ಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಹಲವು ಗ್ರಾಮಗಳಲ್ಲಿ ಈ ಮೊದಲಿಗಿಂತಲೂ ರಸ್ತೆಯನ್ನು ಚಿಕ್ಕದಾಗಿಸಿ ನಿರ್ಮಿಸಲಾಗಿದೆ.ರಸ್ತೆ ನಿರ್ಮಿಸುವಾಗ ಕಟ್ಟಡಗಳನ್ನು ತೆರವುಗೊಳಿಸಿಕೊಂಡವರಿಗೆ ಕಡಿಮೆ ಮೊತ್ತದ ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಆದರೆ, ಸ್ಥಳಾಂತರಿಸಬಲ್ಲ ಪಾನ್ ಶಾಪ್ ಗಳಂತಹ ಗೂಡಂಗಡಿಗಳಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡಲಾಗಿದೆ. ಆದರೆ ಗೂಡಂಗಡಿಯವರು ಸ್ಥಳಾಂತರಗೊಳ್ಳದೆ ತಮ್ಮ ಗೂಡಂಗಡಿಗಳನ್ನು ಅಲ್ಲಿಯೇ ಇರಿಸಿಕೊಂಡಿರುವುದರಿಂದ ಅವುಗಳ ಸುತ್ತಲೂ ಜನರು ಸೇರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆಗಳ ಪಕ್ಕದಲ್ಲಿ ಎರಡೂ ಕಡೆ ಚರಂಡಿಗಳನ್ನು ನಿರ್ಮಿಸಲಾಗಿದ್ದು, ಆನಂತರ ಉಳಿದಿರುವ ಖಾಲಿ ಜಾಗೆಗಳಲ್ಲಿ ಅಂದರೆ ರಸ್ತೆಗಳ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್ ಪಾತ್ ಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಲು ಆದೇಶಿಸಬೇಕೇಂದು ಮನವಿ ಮಾಡಿದ್ದಾರೆ.
ಈ ಪತ್ರದ ಪ್ರತಿಗಳನ್ನು ಮುಖ್ಯ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ನಂ. 35, 3ನೇ ಮುಖ್ಯ ರಸ್ತೆ, ಡಾಲರ್ಸ್ ಕಾಲೋನಿ, ಬಸ್ಸ್ಟ್ಯಾಂಡ್ ಹಿಂದುಗಡೆ, ಗೋಕುಲ ರೋಡ್ (ಎರ್ಪೋರ್ಟ್ ರಸ್ತೆ) ಹುಬ್ಬಳ್ಳಿ -೫೮೦೦೩೦,ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಸಿ.ಎಲ್.ಯೋಜನಾ ಕಛೇರಿ, ಲೋಕೋಪಯೋಗಿ ಇಲಾಖೆ, ವಿಭಾಗ ಆವರಣ, ಹಳೇ ಜೇವರ್ಗಿ ರಸ್ತೆ, ಕಲ್ಬುರ್ಗಿ-೫೮೫೧೦೨,ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಡಿ.ಸಿ.ಎಲ್. ಪ್ರೋಜೆಕ್ಟ ಆಫೀಸ್, ಸಂಪರ್ಕ ಸೌಧ, ಬಿ.ಐ.ಪಿ ಪ್ರಿಮಿಸಸ್, ಸರ್ವೆ ನಂ. 08, (ಓರಾಯನ್ ಮಾಲ್ ಎದುರಿಗೆ) ಡಾ| ರಾಜ್ ಕುಮಾರ ರಸ್ತೆ, ರಾಜಾಜಿ ನಗರ, ಮೊದಲನೆ ಹಂತ,ಬೆಂಗಳೂರು- ೫೬೦೦೧೦,ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ಕೊಪ್ಪಳ, ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ವಿಭಾಗ, ರಾಯಚೂರು,ಸಹಾಯಕ ಕಾರ್ಯನಿರ್ವಾಯಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಉಪ ವಿಭಾಗ, ಕುಷ್ಟಗಿ ಮತ್ತು ಗಂಗಾವತಿ,ಕಾರ್ಯಪಾಲಕ ಇಂಜಿನೀಯರ, ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ, ನಂ. 311/1-ಸಿ, 4ನೇ ಅಡ್ಡ ರಸ್ತೆ, ಸೋನಿಯಾ ನಗರ, ಡ್ಯಾಮ್ ರಸ್ತೆ, ಹೊಸಪೇಟೆ-೫೮೩೨೦೧,ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ರಾಜ್ಯ ಹೆದ್ದಾರಿ ಯೋಜನಾ ವಿಭಾಗ, ರಾಯಚೂರು,ವಿಭಾಗೀಯ ಆಯುಕ್ತರು ಕಲಬುರ್ಗಿ,ಜಿಲ್ಲಾಧಿಕಾರಿಗಳು ಕೊಪ್ಪಳ, ರಾಯಚೂರು, ಕಲಬುರ್ಗಿ ಇವರುಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಕೊಂಡು ಮಾಹಿತಿ ನೀಡಲು ವಿನಂತಿಸಿದ್ದಾರೆ.
ತಮ್ಮ ಈ ದೂರಿನ ಪತ್ರಗಳನ್ನು ಅಧ್ಯಕ್ಷರು/ಕಾರ್ಯದರ್ಶಿಗಳು,ಕಲ್ಯಾಣ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಕಲಬುರ್ಗಿ ಇವರಿಗೆ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕೆ ಕಳುಹಿಸಿ,ಈ ರಾಜ್ಯ ಹೆದ್ದಾರಿಗಳಲ್ಲಿರುವ ಸಾವಿರಾರು ರೋಡ ಹಂಪ್ಸ್ ಗಳನ್ನು ತೆರುವುಗೊಳಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಬರೆಯಲಾಗಿರುವ ಮನವಿ ಪತ್ರಕ್ಕೆ ಬೆಂಬಲ ನೀಡಬೇಕೆಂದು ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.
ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ
ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

Earnings of a boy who distributes cylinders

ಒಬ್ಬ ವ್ಯಕ್ತಿ ಅಟೋ ಅಥವಾ ವ್ಯಾನ್ ಮೂಲಕವಾದರೆ ದಿನವೊಂದಕ್ಕೆ ಗರಿಷ್ಠ ಮೂವತ್ತು ಸಿಲೆಂಡರ್ ವಿತರಿಸಬಹುದು. (ಗಂಟೆಗೆ ನಾಲ್ಕರಂತೆ) ಸೈಕಲ್ ಅಥವಾ ಸ್ಕೂಟರ್ ಗಳಲ್ಲಾದರೆ ಹದಿನೈದು ಸಿಲಿಂಡರ್ ವಿತರಣೆ ಮಾಡಬಹುದು. (ಸರಾಸರಿ ಲೆಕ್ಕ)
- ಒಂದು ಸಿಲಿಂಡರ್ ಗೆ ಹತ್ತು ರೂ ನಿಂದ ಐವತ್ತು ರೂ ತನಕ ಹೆಚ್ಚು ಹಣ ಪಡೆಯುತ್ತಾರೆ. ಕೆಲವರು ಅದನ್ನೂ ಕೊಡುವುದಿಲ್ಲ. ಕಾನೂನು ಮಾತನಾಡಿ ಕಳುಹಿಸುತ್ತಾರೆ. ಹೀಗೆ ಪಡೆಯುವ ಹಣದ ಸರಾಸರಿ ಲೆಕ್ಕವನ್ನು ಮೂವತ್ತು ರೂ ಅಂದುಕೊಂಡರೆ ಗರಿಷ್ಠ 900.00 ರೂ ಸಂಪಾದಿಸುತ್ತಾರೆ. ಇದಷ್ಟೂ ಅವರ ಲಾಭ ಅಲ್ಲ. ಅದರಲ್ಲೇ ಅವರ ವಾಹನದ ಮೆಂಟೇನನ್ಸ್ ಗೆ , ಸಾಲದ ಮರುಪಾವತಿಗೆ ಇಟ್ಟುಕೊಳ್ಳಬೇಕು. ಜೊತೆಗೆ ವಿತರಣಾ ಏಜೆನ್ಸಿಯವರಿಗೂ ಪಾಲು ಕೊಡಬೇಕು. ಇವನ್ನೆಲ್ಲ ಕಳೆದರೆ ಆತನಿಗೆ ಉಳಿಯುವುದು 300.00 ರೂ ನಿಂದ 350.00 ರೂ ಮಾತ್ರ. ಅದರಲ್ಲಿಯೇ ಆತ ತನ್ನ ಚಟದ ಖರ್ಚನ್ನೂ ತೂಗಿಸಿಕೊಳ್ಳಬೇಕು. ಅಂದರೆ ತಿಂಗಳಿಗೆ 7500.00 ರೂ ನಿಂದ 9000.00 ರೂ ನಷ್ಟು ಹೆಚ್ಚು ಹಣ ಉಳಿಸಿಕೊಳ್ಳಬಹುದು.
- ಅವರಿಗೆ ಕೊಡುವ ಸಂಬಳ 400.00 ರೂ ನಿಂದ 600.00 ರೂ ಪ್ರತಿ ದಿನಕ್ಕೆ.. (ತಿಂಗಳಿಗೆ 10000.00 ರೂ ನಿಂದ 15000.00 ರೂ )
ಇದು ಇವರ ಸಂಪಾದನೆ.
ಕಾನೂನಿನ ದೃಷ್ಟಿಯಲ್ಲಿ ಇವರು ಹೆಚ್ಚುವರಿ ಹಣ ಕೇಳುವುದು ಮತ್ತು ನಾವು ಕೊಡುವುದು ಎರಡೂ ತಪ್ಪು. ಯಾಕೆಂದರೆ ಡೆಲಿವರಿ ಚಾರ್ಜನ್ನು ಬಿಲ್ ನಲ್ಲಿಯೇ ಸೇರಿಸಿರುತ್ತಾರೆ. ಆದ್ದರಿಂದ ಹೆಚ್ಚುವರಿ ಹಣವನ್ನು ಕೊಡಬೇಕಿಲ್ಲ.
- ಆದರೆ, ಅದೇಕೊ ನಮಗೆ ಇಂತಹುದರ ಮೇಲೆಯೇ ಕೆಟ್ಟ ಕುತೂಹಲ. ಗ್ಯಾಸ್ ವಿತರಣೆ ಮಾಡುವವರ ಸಂಪಾದನೆ , ಫುಡ್ ಡೆಲಿವರಿ ಮಾಡುವವರ ಸಂಪಾದನೆ, ಕೊರಿಯರ್ ಡೆಲಿವರಿ ಮಾಡುವವರ ಸಂಪಾದನೆ , ಅಟೋ ಅಥವಾ ಟ್ಯಾಕ್ಸಿ ಚಾಲಕರ ಸಂಪಾದನೆ, ಪಾನಿ ಪುರಿ ಮಾರವವನ ಸಂಪಾದನೆ ಇತ್ಯಾದಿ. ದಿನವೆಲ್ಲ ದೇಹದಂಡನೆ ಮಾಡಿ ಇವರು ಸಂಪಾದಿಸುವುದು ಅವರ ಕುಟುಂಬ ನಿರ್ವಹಣೆಗಷ್ಟೇ ಸಾಕಾಗುತ್ತದೆ. ಅದರಿಂದ ಅವರು ಯಾವುದೇ ಮಹಲು ಖರೀದಿಸಲಾಗದು.
ಈ ವಿಚಾರದಲ್ಲಿ ಕಾನೂನು ಮಾತನಾಡುವ ನಾವು,
- ಒಬ್ಬ ರಾಜಕಾರಣಿಯು ಸಂಬಳವನ್ನೇ ಪಡೆಯದೇ ಇದ್ದರೂ ಹೇಗೆಲ್ಲ ಆಸ್ತಿ ಸಂಪಾದಿಸಬಹುದು ಎಂದು ಯೋಚಿಸುತ್ತೇವೆಯೆ?
- ಸರಕಾರಿ ಸಂಬಳ ಪಡೆಯುವ ಒಬ್ಬ MLA, MP ಅಥವಾ ಮಂತ್ರಿಯ ಆಸ್ತಿ ಕೆಲವೇ ವರ್ಷಗಳಲ್ಲಿ ಹೇಗೆ ನೂರಾರು ಕೋಟಿ ಆಗುತ್ತದೆ ಎಂದು ಕೇಳುತ್ತೇವೆಯೆ?
- 30.00 ರೂ ಬೆಲೆಯ ಪೆಟ್ರೋಲ್ ಗೆ ಕಾನೂನಿನ ಚೌಕಟ್ಟಿನಲ್ಲಿಯೇ ಅದರ ಬೆಲೆಯ ದುಪ್ಪಟ್ಟು ತೆರಿಗೆಯನ್ನು ಇಷ್ಟ ಬಂದಂತೆ ಹೆಚ್ಚಿಸಿ ಮೋಸ ಮಾಡುತ್ತಿರುವುದನ್ನ ಕಾನೂನಿನ ವ್ಯಾಪ್ತಿಯಲ್ಲಿಯೇ ಪ್ರಶ್ನಿಸುವ ಎದೆಗಾರಿಕೆ ನಮಗಿದೆಯೇ?
- ಕೋಟ್ಯಾಧೀಶರ ಖಜಾನೆ ತುಂಬಿಸಲು ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿದರಲ್ಲ , ಅದನ್ನ ಪ್ರಶ್ನಿಸಿದ್ದೇವೆಯೆ?
- PM care ಫಂಡ್ ನ ಹಣದ ಲೆಕ್ಕಾಚಾರದ ಮಾಹಿತಯನ್ನ ಏಕೆ ಕೊಡುತ್ತಿಲ್ಲ ಎಂದು ಕೇಳುತ್ತೇವೆಯೆ?
- ನ್ಯಾಯವಾಗಿ ಆದಾಯ ತೆರಿಗೆ ಕಟ್ಟಿ, ಗಾಡಿ ಖರೀದಿಸುವಾಗ ರೋಡ್ ಟ್ಯಾಕ್ಸ್ ಕಟ್ಟಿ, ರಸ್ತೆ ಉಪಯೋಗಿಶುವಾಗ ಟೋಲ್ ಕೂಡಾ ಕಟ್ಟುತ್ತೇವೆ. ಅದರ ಬಗ್ಗೆ ಕೇಳುತ್ತೇವೆಯೆ?
- ಹೋಗಲಿ, ಉತ್ತಮವಾದ ರಸ್ತೆಯನ್ನಾದರೂ ಮಾಡಿದ್ದಾರೆಯೆ? ಅಗತ್ಯ ನೂಲ ಸೌಕರ್ಯಗಳಾದರೂ ಇದೆಯೆ ? ಅದನ್ನೂ ಕೇಳುವುದಿಲ್ಲ.
ನಮಗೆ ಕಾಣುವುದು ಕೇವಲ ಈ ಪುಡಿಗಾಸು ಸಂಪಾದನೆ ಮಾಡಿಕೊಳ್ಳುವವರು ಮಾತ್ರ. ಕೋಟಿ ಕೋಟಿ ಸಂಪಾದನೆ ಮಾಡುವವರು ಕಾಣಿಸುವುದೇ ಇಲ್ಲ. ಯಾಕೆಂದರೆ ನಾವು ಬ್ರಹ್ಮಾಸ್ತ್ರ ಬಿಡುವುದು ಕೇವಲ ಗುಬ್ಬಿಯ ಮೇಲೆ ಮಾತ್ರವೇ !
ನಮ್ಮ ವ್ಯವಸ್ಥೆಯೇ ಹಾಗಿದೆ. ಇದು ನಮ್ಮ. ತಪ್ಪಲ್ಲ.
ನನಗೆ ಅನಿಸಿದ್ದನ್ನ ಹೇಳಿದ್ದೇನೆ. ತಪ್ಪಿದ್ದರೆ ಕ್ಷಮಿಸಿಬಿಡಿ.
ವಂದನೆಗಳು.
ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ
ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ

Meeting on future plans from the educational patron

ಧಾರವಾಡ : ವಿದ್ಯಾ ಪೋಷಕ ವತಿಯಿಂದ ಧಾರವಾಡ ಮತ್ತು ಗದಗಜಿಲ್ಲೆಗಳ ಸ್ವಯಂಸೇವಕರ ಸಭೆಯನ್ನು ಧಾರವಾಡದ ಜೆಎಸ್ಎಸ್ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ವಿದ್ಯಾ ಪೋಷಕದ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರತ್ ಐರಣಿ ಉದ್ಘಾಟಿಸಿ ಮಾತನಾಡಿಆರ್ಥಿಕವಾಗಿ ಹಿಂದುಳಿದ ಸಾವಿರಾರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ
ಬದುಕಿಗೆ ಆರ್ಥಿಕವಾಗಿ ಸಹಾಯವನ್ನು ನೀಡುವ ಮೂಲಕ ಬೆಳಕಾದ ಈಸಂಸ್ಥೆ ಇಪ್ಪತೈದು ವರ್ಷಗಳನ್ನು ನಿಸ್ವಾರ್ಥ ಸೇವೆಯಿಂದಪೂರೈಸಿದ್ದು ಇದಕ್ಕೆ ಕಾರಣ ಸಮಾಜದ ಭವಿಷ್ಯವನ್ನು ರೂಪಿಸಿದಸಾವಿರಾರು ಕೈಗಳ ಸಮೂಹದ ಪ್ರಯತ್ನವೇ ಕಾರಣವಾಗಿದೆಎಂದರು.
ವಿದ್ಯಾ ಪೋಷಕ ಸಂಸ್ಥೆಯ ಗೌರವ ಆಧ್ಯಕ್ಷರಾದ ಡಾ.
ರವೀಂದ್ರ ಗುರುವಣ್ಣವರ ಅವರು ಸಂಸ್ಥೆಯ
ಕಾರ್ಯಚಟುವಟಿಕೆಗಳು, ಭವಿಷ್ಯದ ಯೋಜನೆಗಳು ಹಾಗೂಸ್ವಯಂಸೇವಕರ ಪಾತ್ರದ ಕುರಿತು ಸಮಗ್ರ ಮಾಹಿತಿಯನ್ನು
ನೀಡಿದರು. ಸಭೆಯಲ್ಲಿ ಎರಡೂ ಜಿಲ್ಲೆಗಳ ಸಮರ್ಪಿತ ಹಿರಿಯ
ಸ್ವಯಂಸೇವಕರು, ದಾನಿಗಳು, ವಿದ್ಯಾ ಪೋಷಕದ ಮಾಜಿ
ಸಿಬ್ಬಂದಿಗಳು ಹಾಗೂ ಯುವ (ಅಲ್ಯೂಮ್ನಿ) ಸದಸ್ಯರು
ಭಾಗವಹಿಸಿದ್ದರು. ಎಲ್ಲರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡುವ
ಅವಕಾಶ ಉತ್ಸಾಹಭರಿತ ಹಾಗೂ ಸ್ಮರಣೀಯ ಕ್ಷಣವಾಯಿತು.
ಸಭೆಯಲ್ಲಿ ಸ್ವಯಂಸೇವಕರ ಅಭಿಪ್ರಾಯಗಳು, ಅನುಭವ
ಹಂಚಿಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು
ಚರ್ಚೆಗಳು ನಡೆದವು. ಕಾರ್ಯಕ್ರಮವು ವಿದ್ಯಾ ಪೋಷಕದ
ಧ್ಯೇಯ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು
ಬಲತುಂಬುವAತಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ
ಡಾ.ಸಂಗಮೇಶ ಸಜ್ಜನರ, ಡಾ.ಪಿ.ಎಸ್.ಕಣವಿ, ಡಾ.ಪ್ರಭು ಗಂಜಿಹಾಳ,
ಆರ್.ಕೆ.ಭಾಗವಾನ, ಪ್ರೊ.ಹೊಳ್ಳಿಯವರಮಠ,
ಪ್ರೊ.ಎಚ್.ಎನ್.ಕಾಳೆ, ವಿಜಯಕುಮಾರ ಸಜ್ಜನರ, ಶಶಿಧರ ಮಳಲಿ,
ಮೊದಲಾದವರು ಭಾಗವಹಿಸಿದ್ದರು. ವಿದ್ಯಾಪೋಷಕ ಸಂಸ್ಥೆಯÀ
ಫಾತಿಮಾ ಪಠಾಣ, ರತ್ನಾ ಹಿಪ್ಪರಗಿ, ಅನ್ನಪೂರ್ಣ ಯಡ್ರಾವಿ ಮತ್ತು
ಸಿಬ್ಬಂದಿವರ್ಗ ಸಕ್ರಿಯವಾಗಿ ಪಾಲ್ಗೊಂಡಿದ್ದರು. **
-ಡಾ.ಪ್ರಭು ಗಂಜಿಹಾಳ
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ
ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

Farmers' Central ID mandatory to avail central government schemes

ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ರೈತರು ಸೆಂಟ್ರಲ್ ಐಡಿ (Central Farmer ID), ಅಂದರೆ, ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನಲ್ಲಿ 15,789 ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸುವುದು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದ ಪಿಎಮ್ ಕಿಸಾನ್, ಬೆಳೆ ವಿಮೆ, ಬೆಳೆ ಪರಿಹಾರ, ಖರೀದಿ ಕೇಂದ್ರ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ರೈತರು “ಸೆಂಟ್ರಲ್ ಫಾರ್ಮರ್ ಐಡಿ” ಮಾಡಿ ಕೊಳ್ಳುವುದು ಅಗತ್ಯವಿದ್ದು, ಕೊಪ್ಪಳ ತಾಲ್ಲೂಕಿನ ರೈತರು ಫ್ರೂಟ್ಸ್ (Fruits) ತಂತ್ರಾಶದಲ್ಲಿ ಸೆಂಟ್ರಲ್ ಫಾರ್ಮರ್ ಐಡಿಯನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಸೆಂಟ್ರಲ್ ಐಡಿ ಮಾಡಿಸುವವರು ಮೊಬೈಲ್ ಸಂಖ್ಯೆ ನವೀಕರಣಗೊಳಿಸುವುದು, ರೈತರ ಇ-ಕೆವೈಸಿ ಮಾಡಿಸುವುದು, ರೈತರಿಂದ ವಿದ್ಯುನ್ಮಾನ ಸಹಮತಿ ಪಡೆಯುವುದು ಹಾಗೂ ಭೂ ಘೋಷಣೆ (ಎಲ್ಲಾ ಜಮೀನಿನ ಸರ್ವೆ ನಂಬರಗಳನ್ನು ಅಥವಾ ಇಸಾ ನಂಬರ್ಗಳನ್ನು ತಮ್ಮ ಎಫ್ಐಡಿಗೆ ಜೋಡಣೆ ಮಾಡುವುದುರಿಂದ ಎಲ್ಲಾ ರೈತ ಬಾಂಧವರು ತಮ್ಮ ಎಲ್ಲಾ ಜಮೀನಿನ ವಿವರ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಅಥವಾ ಗ್ರಾಮ-1 ಕೇಂದ್ರಗಳಿಗೆ ಸಂಪರ್ಕಿಸಿವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಪ್ರಕಟಣೆ ತಿಳಿಸಿದೆ.
ತಳುವಗೇರಾ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ತೀರ್ಪು: 15 ಅಪರಾಧಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ
Verdict in the murder case at the Taluwagera fair: 15 convicts sentenced to 7 years rigorous imprisonment
ತಳುವಗೇರಾ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ತೀರ್ಪು: 15 ಅಪರಾಧಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ


ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): 2019ರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ನಡೆದ ಜಾತ್ರೆ ಸಂದರ್ಭದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ದಿನಾಂಕ: 27-03-2019 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಪಿರ್ಯಾದಿದಾರರಾದ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ತಂದೆ ಮಲ್ಲಿಕಾರ್ಜುನ ಕಂದಕೂರ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಉಗ್ಗಿ ಜೀವ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.55/2019ರಲ್ಲಿ ಐಪಿಸಿ ಕಲಂ 143, 147, 148, 323, 326, 307, 302, 504, 506 ಹಾಗೂ 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ್ ತಳವಾರ ಅವರು ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ಆರೋಪಿತರಾದ ಕಳಕಪ್ಪ ತಂದೆ ಬಾಳಪ್ಪ ಹುಂಡಿ, ದೊಡ್ಡಪ್ಪ ತಂದೆ ಬಾಳಪ್ಪ ಹುಂಡಿ, ನಾಗಪ್ಪ ತಂದೆ ಬಾಳಪ್ಪ ಹುಂಡಿ, ರಮೇಶ @ ಕೆಂಪಣ್ಣ ತಂದೆ ಕಳಕಪ್ಪ ಹುಂಡಿ, ಕೃಷ್ಣ ತಂದೆ ದೊಡ್ಡಪ್ಪ ಹುಂಡಿ, ಚಿದಾನಂದ ತಂದೆ ಹನುಮಪ್ಪ ಹುಂಡಿ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ ತಂದೆ ದೊಡ್ಡಪ್ಪ ಹುಂಡಿ, ಮಂಜುನಾಥ ತಂದೆ ಹನುಮಪ್ಪ ಹುಂಡಿ, ಅಮರಪ್ಪ ಬಾಲಪ್ಪ ಹುಂಡಿ, ನೀಲಪ್ಪ ತಂದೆ ಅಮರಪ್ಪ ಹುಂಡಿ, ಚಂದ್ರಶೇಖರ ತಂದೆ ದೊಡ್ಡಪ್ಪ ಹುಂಡಿ, ಯಮನೂರಪ್ಪ ತಂದೆ ಭೀಮಪ್ಪ ಹುಂಡಿ, ತಿಪ್ಪಣ್ಣ ತಂದೆ ಬಾಲನಗೌಡ ಮಾಲಿಪಾಟೀಲ ಹಾಗೂ ಮುತ್ತಪ್ಪ ತಂದೆ ಹನುಮಪ್ಪ ಹುಂಡಿ, ಇವರ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಗೌರವಾನ್ವಿತ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು 2026ರ ಫೆಬ್ರುವರಿ 28ರಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ 15 ಅಪರಾಧಿಗಳಿಗೆ ಭಾ.ದಂ.ಸಂ ಕಲಂ 143, 147, 148, 323, 324, 335, 506, 304(1) ಹಾಗೂ 149 ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ 40% ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ 15% ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಗಂಡ ದೊಡ್ಡಪ್ಪ ಹುಂಡಿ ಹಾಗೂ ರೇಣವ್ವ ಗಂಡ ನಾಗಪ್ಪ ಹುಂಡಿ, ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ ಎ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋ ನ್ ಮಿರಜ್ಕರ್ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆಸಮಾ ರಂ ಭ “ವಿದ್ಯಾ ರ್ಥಿ ಗಳ ಭವಿಷ್ಯ ಉಜ್ವಲವಾ ಗಲಿ-ರು ಬೇ ನ್ ಮಿರಜ್ಕರ್”
The ceremony of the 2025-26 class 10th students of Aaron Mirajkar School began with the words “May the future of the students be bright – Ruben Mirajkar”
ಆರೋ ನ್ ಮಿರಜ್ಕರ್ ಶಾ ಲೆಯಲ್ಲಿ 2025-26ನೇ ಸಾ ಲಿನ ಹತ್ತನೇ ತರಗತಿ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ
ಸಮಾ ರಂ ಭ “ವಿದ್ಯಾ ರ್ಥಿ ಗಳ ಭವಿಷ್ಯ ಉಜ್ವಲವಾ ಗಲಿ-ರು ಬೇ ನ್ ಮಿರಜ್ಕರ್”



ಗಂಗಾವತಿ: 2ನೇ ಮಾ ರ್ಚ್ ಸೋ ಮವಾ ರದಂ ದು ಆರೋ ನ್ ಮಿರಜ್ಕರ್ ಆಂ ಗ್ಲ ಮಾ ಧ್ಯ ಮ ಪ್ರೌ ಢ ಶಾ ಲೆಯಲ್ಲಿ 2025-26ನೇ
ಸಾ ಲಿನ ಹತ್ತನೇ ತರಗತಿಯ ವಿದ್ಯಾ ರ್ಥಿ ಗಳ ಬೀ ಳ್ಕೊ ಡು ಗೆ ಸಮಾ ರಂ ಭವನ್ನು ಏರ್ಪ ಡಿಸಲಾ ಗಿತ್ತು . ಕಾ ರ್ಯ ಕ್ರಮದಲ್ಲಿ ವಿಶೇ ಷ
ಉಪನ್ಯಾ ಸವನ್ನು ಸ್ಪೂ ರ್ತಿ ದಾ ಯಕ ಭಾ ಷಣಕಾ ರರಾ ದ ಧನರಾ ಜ್ ಈ ಅವರು “ವಿದ್ಯಾ ರ್ಥಿ ಗಳಲ್ಲಿನ ಪ್ರ ತಿಭೆಯು ಕೇ ವಲ
ಅಂ ಕಗಳಿಂ ದ ಕೂ ಡಿರದೆ ಜೀ ವನದ ಕೌ ಶಲ್ಯ ಗಳೊಂ ದಿಗೆ ಕೂ ಡಿರಬೇ ಕು . ಪರೀ ಕ್ಷೆಯ ಬಗ್ಗೆ ಯಾ ವು ದೇ ಒತ್ತಡ ಹಾ ಗೂ ಆತಂ ಕವಿಲ್ಲದೆ
ಎದು ರಿಸಿ” ಎಂ ದು ತಮ್ಮ ವಿಶೇ ಷ ಉಪನ್ಯಾ ಸವನ್ನು ನೀ ಡಿದರು .
ಕಾ ರ್ಯ ಕ್ರಮದ ಅಧ್ಯ ಕ್ಷತೆಯನ್ನು ಸಂ ಸ್ಥೆಯ ಅಧ್ಯ ಕ್ಷರಾ ದ ‘ಶ್ರೀ ಮತಿ ಚಿನ್ನಮ್ಮ ಮಿರಜಕರ್’ ವಹಿಸಿದ್ದರು .
“ವಿದ್ಯಾ ರ್ಥಿ ಗಳು ತಾ ವೇ ರೂ ಪಿಸಿಕೊಂ ಡಿರು ವ ವೇ ಳಾ ಪಟ್ಟಿಯಂ ತೆ ಅಭ್ಯ ಸಿಸಿ ಉತ್ತಮ ಅಂ ಕಗಳೊಂ ದಿಗೆ ಪರೀ ಕ್ಷೆಯಲ್ಲಿ
ಯಶಸ್ಸ ನ್ನು ಸಾ ಧಿಸಲಿ ಹಾ ಗೂ ಅವರ ಭವಿಷ್ಯ ಉಜ್ವ ಲವಾ ಗಲಿ” ಎಂ ದು ಶಾ ಲೆಯ ಕಾ ರ್ಯ ದರ್ಶಿ ಗಳಾ ದ ರು ಬೇ ನ್ ಮಿರಜ್ಕರ್
ಅವರು ತಿಳಿಸಿದರು .
ರೆವ. ಶ್ರೀ ಯೇ ಸು ದಾ ಸ್ ಅವರು ಎಲ್ಲಾ ವಿದ್ಯಾ ರ್ಥಿ ಗಳಿಗೆ ದೇ ವರ ಪ್ರಾ ರ್ಥ ನೆ ಮತ್ತು ವಾ ಕ್ಯ ಗಳೊಂ ದಿಗೆ ಮಕ್ಕ ಳಿಗೆ ಶು ಭ
ಹಾ ರೈ ಸಿದರು .
“ಪರೀ ಕ್ಷೆಯನ್ನು ಎದು ರಿಸಬೇ ಕಾ ದರೆ ಮಕ್ಕ ಳಲ್ಲಿ ಅಚಲ ನಂ ಬಿಕೆ, ದೃಢ ನಿರ್ಧಾ ರ, ಸ್ಥಿರ ಮನಸ್ಸು ಇರಬೇ ಕು . ಮಕ್ಕ ಳು
ಪರೀ ಕ್ಷೆಯನ್ನು ಯಶಸ್ವಿಯಾ ಗಿ ಎದು ರಿಸಲಿ” ಎಂ ದು ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಮಂ ಜು ನಾ ಥ ನಾ ಯಕ ಅವರು
ಹೇ ಳಿದರು .
ಶಾ ಲೆಯ ಖಜಾಂ ಚಿಗಳಾ ದ ಶ್ರೀ ಮತಿ ಸು ನೀ ತಾ ಮಿರಜಕರ್, ಆಡಳಿತಾ ಧಿಕಾ ರಿಗಳಾ ದ ಚಂ ದ್ರಕಾಂ ತರಾ ವ್, ನಿವೇ ದಿತಾ
ಶಾ ಲೆಯ ಮು ಖ್ಯೋ ಪಾ ಧ್ಯಾ ಯರಾ ದ ಶ್ರೀ ಮತಿ ರೇ ಖಾ ಠಾ ಕೂ ರ್ ವೇ ದಿಕೆಯನ್ನು ಹಂ ಚಿಕೊಂ ಡರು .
ಈ ಸಂ ದರ್ಭ ದಲ್ಲಿ ವಿದ್ಯಾ ರ್ಥಿ ಗಳು ತಮ್ಮ ಅಭಿಪ್ರಾ ಯಗಳನ್ನು ಹಂ ಚಿಕೊಂ ಡರು . ಶಾ ಲೆಯ ಆಡಳಿತ ಮಂ ಡಳಿಯ
ವತಿಯಿಂ ದ ವಿದ್ಯಾ ರ್ಥಿ ಗಳಿಗೆ ಪರೀ ಕ್ಷಾ ಸಾ ಮಗ್ರಿ ಗಳನ್ನು ನೀ ಡು ವು ದರ ಮೂ ಲಕ ಸಾಂ ಕೇ ತಿಕ ಶಾ ಲೆಯಿಂ ದ ಬೀ ಳ್ಕೊ ಡಲಾ ಯಿತು .
ನಂ ತರ 8 ಮತ್ತು 9ನೇ ತರಗತಿ ವಿದ್ಯಾ ರ್ಥಿ ಗಳಿಂ ದ 10ನೇ ತರಗತಿ ವಿದ್ಯಾ ಥಿಗಳಿಗೆ ಮನರಂ ಜನೆಯನ್ನು ನೀ ಡಿದರು .
ಕಾ ರ್ಯ ಕ್ರಮದಲ್ಲಿ ಉಭಯ ಶಾ ಲೆಗಳ ಶಿಕ್ಷಕ ವೃಂ ದ, ವಿದ್ಯಾ ರ್ಥಿ ಗಳು ಉಪಸ್ಥಿತರಿದ್ದರು .
ಮಾ ಹಿತಿ
2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
2022 State Level Book Selection List Published: Objection Invited
2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಕೊಪ್ಪಳ ಮಾರ್ಚ್ 03, (ಕರ್ನಾಟಕ ವಾರ್ತೆ): 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಮಾರ್ಚ್ 2 ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಆಹ್ವಾನಿಸಿದೆ.
ಆಯ್ಕೆ ಪಟ್ಟಿಯನ್ನು ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಗಳಲ್ಲಿ ಹಾಗೂ ಇಲಾಖೆಯ ಅಧಿಕೃತ ವೆಬ್ಸೈಟ್ www.dpl.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಆಯ್ಕೆಯಾದ ಪುಸ್ತಕಗಳ ಪಟ್ಟಿಯಲ್ಲಿರುವ ಲೇಖಕರು, ಲೇಖಕ – ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ತಮ್ಮ ಪುಸ್ತಕಗಳಿಗೆ ಸಂಬAಧಿಸಿದ ಪುಸ್ತಕದ ಶೀರ್ಷಿಕೆ, ಲೇಖಕರ / ಪ್ರಕಾಶಕರ ಹೆಸರು, ಮುಖ ಬೆಲೆ (ನಿಗದಿತ ಬೆಲೆಯಲ್ಲಿ ವ್ಯತ್ಯಾಸವಿದ್ದಲ್ಲಿ), ಪುಸ್ತಕದ ಅಳತೆ ಮತ್ತು ಪುಟಗಳ ಸಂಖ್ಯೆ ಅಥವಾ ಇತರ ಯಾವುದೇ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ತಮ್ಮ ಆಕ್ಷೇಪಣೆ ಅಥವಾ ತಿದ್ದುಪಡಿಗಳನ್ನು ಅಧಿಕೃತ ಮಾಹಿತಿ / ದಾಖಲೆಗಳೊಂದಿಗೆ ಮಾರ್ಚ್ 16ರ ಸಂಜೆ 5.30ರ ಒಳಗಾಗಿ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು – 560001 ಇಲ್ಲಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ನಿಗದಿತ ಅವಧಿಯ ನಂತರ ಬರುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಏಕಪಕ್ಷೀಯವಾಗಿ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆದೇಶದನ್ವಯ ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ
Awareness program as part of World Hearing Day
ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಮಾರ್ಚ್ 03, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಹಾಗೂ ಸರ್ವೋದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರAದು ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್. ಮಾತನಾಡಿ, ಪ್ರತಿ ವರ್ಷ ಮಾರ್ಚ್ 3 ರಂದು “ವಿಶ್ಚ ಶ್ರವಣ ದಿನ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಶ್ರವಣದೋಷ ಮತ್ತು ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. “ಸಮುದಾಯಗಳಿಂದ ತರಗತಿಗಳಿಗೆ: ಎಲ್ಲಾ ಮಕ್ಕಳಿಗೆ ಶ್ರವಣ ಆರೈಕೆ, ಯಾವುದೇ ಮಗು ಶ್ರವಣ ಅಥವಾ ಶ್ರವಣ ಸಮಸ್ಯೆಗಳಿಂದ ಭವಿಷ್ಯದಲ್ಲಿ ಹಿಂದೆ ಉಳಿಯದಂತೆ ಈಗಲೇ ನಿಗಾವಹಿಸಿ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಚರಿಸಲಾಗುತ್ತದೆ. ಕಿವಿಯು ಪ್ರತಿಯೊಬ್ಬ ಮನುಷ್ಯನ ಪಂಚೇAದ್ರಿಯಗಳಲ್ಲಿ ಪ್ರಮುಖ ಅಂಗವಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ರಕ್ಷಣೆ ಮಾಡಿಕೊಳ್ಳಬೇಕು. ಕಿವಿಯಲ್ಲಿ ಕಡ್ಡಿ ಹಾಕಬಾರದು, ಎಣ್ಣೆ ಹಾಕಬಾರದು, ನಕಲಿ ವೈದ್ಯರ ಕಡೆಯಿಂದ ಕಿವಿಯಲ್ಲಿ ಗುಗ್ಗೆ ತೆಗೆಸಿಕೊಳ್ಳಬಾರದು. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಏನೂ ಹಾಕಬಾರದು, ಕಲುಷಿತ ನೀರಿನಲ್ಲಿ ಈಜಬಾರದು ಎಂದು ತಿಳಿಸಿದರು. ಕಿವಿನೋವು, ಸೋರುವಿಕೆ ಕಂಡು ಬಂದರೆ ತಮ್ಮ ಸಮೀಪದ ತಾಲೂಕಾ/ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಿವಿ, ಮೂಗು, ಗಂಟಲು ತಜ್ಞರನ್ನು ಸಂಪರ್ಕಿಸಬೇಕು ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಶ್ರವಣ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಎಲ್ಲರೂ ತಮ್ಮ ತಮ್ಮ ಕಿವಿಯ ರಕ್ಷಣೆಯ ಬಗ್ಗೆ ಜಾಗೃತರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ. ಅವಿನಾಶ ಮಾತನಾಡಿ, ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ, ನವಜಾತು ಶಿಶುವಿನ ಕಿವಿಯ ಆರೈಕೆ ಮತ್ತು ಕಾರ್ಯಕ್ರಮದಡಿಯಲ್ಲಿ ಸಿಗುವ ಸೇವಾ ಸೌಲಭ್ಯಗಳ ಮತ್ತು ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಇವರು ಮಾತನಾಡಿ, ಕಿವಿಯ ಆರೋಗ್ಯ ರಕ್ಷಣೆಯಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿವರವಾಗಿ ಮಾತನಾಡಿದರು. ಆಡಿಯೋಲಾಜಿಸ್ಟ್ ಬಿಂದು ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿಯಲ್ಲಿ ಕಿವಿಯ ಪರೀಕ್ಷೆ ಹಾಗೂ ಸೇವಾ ಸೌಲಭ್ಯಗಳ ಬಗ್ಗೆ ಮಾತನಾಡಿದರು. ನಂತರ, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಕಿವಿಯ ತಪಾಸಣೆ ಮಾಡಿ, ನ್ಯೂನ್ಯೆತೆವುಳ್ಳವರಿಗೆ ಚಿಕಿತ್ಸೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ನಿಂಗಪ್ಪ ಗದ್ದಿಗೇರಿ ಮಾತನಾಡಿ, ಆರೋಗ್ಯ ಮತ್ತÄ ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮ ಹಾಗೂ ಕಿವಿಯ ತಪಾಸಣಾ ಶಿಬಿರ ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಜೊತೆಗೆ ಮಾನಸಿಕ ಆರೋಗ್ಯ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ್ತ-ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಹಿತ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದರು
ಪ್ರಥಮ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸಂತೋಷ್ ಬೆಳಗೋಡ್ಗೆ ಗಂಗಾವತಿಯಲ್ಲಿ ಭವ್ಯ ಸನ್ಮಾನ
Selected as a civil judge in the first attempt: Santosh Belagode receives grand honours at Gangavathi
ಪ್ರಥಮ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸಂತೋಷ್ ಬೆಳಗೋಡ್ಗೆ ಗಂಗಾವತಿಯಲ್ಲಿ ಭವ್ಯ ಸನ್ಮಾನ


ಗಂಗಾವತಿ: ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಸಂತೋಷ್ ಬೆಳಗೋಡ್ ಅವರನ್ನು ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಗೌರವಿಸಲಾಯಿತು.
ಗಂಗಾವತಿ ತಾಲೂಕ ಸರ್ಕಾರಿ ಪಡಿತರ ವಿತರಕರ ಸಂಘದ ಕೋಶ ಅಧ್ಯಕ್ಷರಾದ ಶ್ರೀ ರಾಜಶೇಖರ್ ಬೆಳಗೋಡ್ ಅವರ ಹಿರಿಯ ಸಹೋದರರಾದ ಬಸವರಾಜ್ ಬೆಳಗೋಡ್ ಅವರ ಪುತ್ರ ಸಂತೋಷ್ ಬೆಳಗೋಡ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಸಂತೋಷ್ ಬೆಳಗೋಡ್ ಅವರ ಸ್ವಗ್ರಾಮ ಚಿಕ್ಕಜಾಂತಕಲ್ನ ನಿವಾಸಕ್ಕೆ ಭೇಟಿ ನೀಡಿ, ಶುಭಾಶಯ ಕೋರಿದರು ಹಾಗೂ ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷರಾದ ಕೆ. ಮಂಜುನಾಥ್ ಮಾತನಾಡಿ, “ಸಂತೋಷ್ ಬೆಳಗೋಡ್ ಅವರು ಕಿರಿಯ ವಯಸ್ಸಿನಲ್ಲಿ ನ್ಯಾಯಾಂಗದ ಅತೀ ಗೌರವಾನ್ವಿತ ಹುದ್ದೆಯಾದ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಅನೇಕ ಕಿರಿಯ ವಕೀಲರಿಗೆ ಮಾದರಿಯಾಗಿದೆ. ಅವರು ನ್ಯಾಯದಾನದ ವ್ಯವಸ್ಥೆಯಲ್ಲಿ ಶೋಷಿತ, ಹಿಂದುಳಿದ ಹಾಗೂ ಬಡ ಜನರಿಗೆ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿ, ಭವಿಷ್ಯದಲ್ಲಿ ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಟಿ.ಎಂ. ಚನ್ನಬಸವ ಶಾಸ್ತ್ರಿ, ಅಧ್ಯಕ್ಷರಾದ ಕೆ. ಮಂಜುನಾಥ್, ಸಹ ಕಾರ್ಯದರ್ಶಿ ಹೆಚ್. ವೀರಭದ್ರಪ್ಪ, ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್, ಹಾಗೂ ಪದಾಧಿಕಾರಿಗಳಾದ ವಸಂತಗೌಡ, ಅಯಾಜ್, ಮಸೂಮ್ ಶರೀಫ್, ಸಲೀಂ ಖಾನ್, ಮೆಹಬೂಬ್ ಸೇರಿದಂತೆ ಅನೇಕ ಪಡಿತರ ವಿತರಕರು ಉಪಸ್ಥಿತರಿದ್ದರು.
ಮಹಾನಿಯರ ಜಯಂತಿಯನ್ನು ಆಚರಿಸುವುದೆ ನಮ್ಮ ಅದೃಷ್ಟ : ಶಾಸಕ ಎಮ್ ಆರ್ ಮಂಜುನಾಥ್ .
It is our fortune to celebrate the birth anniversary of the great man: MLA MR Manjunath.
ಮಹಾನಿಯರ ಜಯಂತಿಯನ್ನು ಆಚರಿಸುವುದೆ ನಮ್ಮ ಅದೃಷ್ಟ : ಶಾಸಕ ಎಮ್ ಆರ್ ಮಂಜುನಾಥ್ .


ವರದಿ: ಬಂಗಾರಪ್ಪ ,ಸಿ.
ಹನೂರು :ಕಾಲಜ್ಞಾನಿಗಳಾದ ಶ್ರೀ ಯೋಗಿ ನಾರಾಯಣ ಯತೀಂದ್ರರವರ ಜಯಂತಿಯನ್ನು ನಾಡಿನಾದ್ಯಂತ ಸರ್ಕಾರ ಹಾಗೂ ಎಲ್ಲಾ ಜನಾಂಗದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ನಮ್ಮೇಲ್ಲರಿಗೂ ಹೆಮ್ಮೇಯ ವಿಷಯ ,ಎಲ್ಲಾ ಸಮುದಾಯಗಳಿಗೂ ಗುರುಗಳಿದ್ದಾರೆ , ಅವರುಗಳನ್ನು ಅನುಸರಿಸುವ ಕಾರ್ಯವನ್ನು ಆಯಾ ಸಮುದಾಯದವರು ಮಾಡಿದರೆ ಸಮಾಜವು ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.
ಹನೂರು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯವತಿಯಿಂದ ಹನೂರು ತಾಲ್ಲೂಕು ಕೇಂದ್ರದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿಗೃಹದಲ್ಲಿ ಮಾತನಾಡಿದ ಶಾಸಕರು ಗುರುಗಳು ಕಾಲ ಜ್ಞಾನದ ಮಾತು ಇಂದು ಅಕ್ಷರಶಃ ನಿಜವಾಗಿದೆ ನಿಮ್ಮ ಜನಾಂಗಕ್ಕೆ ಜಾತಿ ಪ್ರಮಾಣಪತ್ರದಿಂದ ಬಹು ದೊಡ್ಡ ಅನ್ಯಾಯವಾಗುತ್ತದೆ , ಮುಂದಿನ ದಿನಗಳಲ್ಲಿ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಹಾಗೂ ಶಾಸಕರ ಅನುದಾನದಲ್ಲಿ ಐವತ್ತು ಲಕ್ಷ ಹಣವನ್ನು ನೀಡಲಾಗುವುದು,ಎಲ್ಲಾ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು,ನಮ್ಮ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಯತ್ನ ಮಾಡಲಾಗುವುದು,
ಮುಖ್ಯ ಭಾಷಣಕಾರರಾದ ಬಣಜಿಗ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಗೋಪಾಲ್ ಮಾತನಾಡಿ ಕೈವಾರ ತಾತಯ್ಯ ರವರು ಕಾಲಜ್ಞಾನಿಯಾಗಿದ್ದವರು ,ಮುಂದಿನ ದಿನಗಳಲ್ಲಿ ನಡೆಯುವ ಸನ್ನಿವೇಶಗಳನ್ನು ಸವಿಸ್ತಾರವಾಗಿ ಬರೆದಿದ್ದಾರೆ ಅವರ ದೂರ ದೃಷ್ಟಿಗೆ ಪ್ರಪಂಚದಲ್ಲಿ ಹೆಚ್ಚುತಿರುವ ಜನಸಂಖ್ಯೆಯ ಸಂಖ್ಯೆಯು ಕಾರಣವಾಗಿದೆ ಅಲ್ಲದೆ ನಮ್ಮ ಮುಂದಿನ ಪೀಳಿಗೆಗೆ ಬೇಕಾದ ಜ್ಞಾನ ಕೋಶವನ್ನು ಸಹ ಬರೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಯುತ ಗೋಪಾಲ್ ರವರು ಶ್ರೀ ಯೋಗಿ ನಾರೇಯೆಣ ರವರ ಭಾವ ಚಿತ್ರವನ್ನು ಶಾಸಕರು,ಮತ್ತು ತಹಸಿಲ್ದಾರ್ ಚೈತ್ರ ರವರು ಹಾಗೂ ಇನ್ನಿತರರ ಜೋತೆಯಲ್ಲಿ ಅನಾವರಣ ಮಾಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಇ ರಂಗಸ್ವಾಮಿ ಮಾತನಾಡಿ ರವರು ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರದಲ್ಲಿ ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ತಹಸಿಲ್ದಾರ್ ಶ್ರೀ ಮತಿ ಚೈತ್ರ, ಎಇ ರಂಗಸ್ವಾಮಿ , ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳಾದ ಮಹೇಶ್ ,ಚನ್ನಪ್ಪಶೆಟ್ಟಿ, ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ರಾದ ರಂಗಸ್ವಾಮಿ ಶಿಕ್ಷಕರಾದ ಮಹೇಶ್,ಮಾದೇಶ್ , ರೈತ ಸಂಘದ ಅಧ್ಯಕ್ಷರಾದ ಹರೀಶ್ , ಶ್ರೀರಂಗಶೇಟ್ರು ,ಪ್ರಕಾಶ್ ,ಮಂಜು ,ಆರ್ ರಂಗಶೇಟ್ಟಿ ,ಜೈರಾಮ್ , ಬಸವರಾಜು,ಮುನಿಸ್ವಾಮಿ ,ಪ್ರಸನ್ನ ,ಚಂದ್ರ ,ನಾಗ,ಶಿವಣ್ಣ, ವಿಜಯಕುಮಾರ್ ,ವೆಂಕಟಾಚಲ,ಬಸವರಾಜು , ಸೇರಿದಂತೆ ಇನ್ನಿತರರು ಹಾಜರಿದ್ದರು ,
ಬೆಂ.ವಿವಿ ಫಲಿತಾಂಶ : ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಜನಾ ಎಸ್.ಎ, ಲಾವಣ್ಯ ಯಾದವ್ ಆರ್. ಮೊದಲ ರಾಂಕ್
Ben.V. Result: Sanjana S.A, Lavanya Yadav R. of APS Educational Institute rank first
ಬೆಂ.ವಿವಿ ಫಲಿತಾಂಶ : ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಜನಾ ಎಸ್.ಎ, ಲಾವಣ್ಯ ಯಾದವ್ ಆರ್. ಮೊದಲ ರಾಂಕ್



ಬೆಂಗಳೂರು,ಮಾ.3: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಈ ಬಾರಿ ಎಪಿಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಬಿಸಿಎ ಕೋರ್ಸ್ ನಲ್ಲಿ ಸಂಜನಾ ಎಸ್.ಎ ಹಾಗೂ ಎಂ.ಎ. ಎಕನಾಮಿಕ್ಸ್ ಲಾವಣ್ಯ ಯಾದವ್ ಆರ್. ಮೊದಲ ಶ್ರೇಿಯಾಂಕದಲ್ಲಿ ಉತ್ತೀರ್ಣರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.
l
ಎ.ಪಿ.ಎಸ್. ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರಾದ ಸಿಎ.ಡಾ. ವಿಷ್ಣು ಭರತ್ ಅಲಂಪಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ಎಕೋರ್ಸ್ ನಲ್ಲಿ ಸಂಸ್ಥೆಗೆ 1, 4, 6 ಮತ್ತು 8ನೇ ಸ್ಥಾನ ಲಭಿಸಿದೆ. ಎಮ್.ಎ.ಎಕಾನಮಿಕ್ಸ್ – 1 ಮತ್ತು 2ನೇ ಸ್ಥಾನ ಲಭಿಸಿದೆ. ಎಪಿಎಸ್ ಪಬ್ಲಿಕ್ ಶಾಲೆ ಮೊದಲಿನಿಂದಲೂ ಶೇ 100 ರಷ್ಟು ಫಲಿತಾಂಶ ದಾಖಲಿಸುತ್ತಿದ್ದು, ಈ ಬಾರಿ ಎಂಜಿನಿಯರಿಂಗ್ ನಲ್ಲಿ ಶೇ 80 ರಷ್ಟು, ವಾಣಿಜ್ಯ ಶೇ 90, ಪದವಿ ಪೂರ್ವ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 90 ರಷ್ಟು ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.
ಎಪಿಎಸ್ ಸಂಸ್ಥೆ 90 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದು, ಸಮಗ್ರ ಬೆಳವಣಿಗೆ ಮತ್ತು ರಾಷ್ಟ್ರಾಭಿವೃದ್ಧಿಗೆ ಪೂರಕವಾದ ಶಿಕ್ಷಣ ನೀಡಲು ಒತ್ತು ಕೊಡುತ್ತಿದೆ ಎಂದು ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.
ನನ್ನ ಅಕೌಂಟನ್ನು ಕ್ಯಾನ್ಸಲ್ ಮಾಡಿ ನನ್ನ ಖಾತೆಯಲ್ಲಿ ಇರುವ ಹಣವನ್ನೆಲ್ಲಾ ಕೊಟ್ಟು ಬಿಡಿ.
Cancel my account and give me all the money in my account.
ನನ್ನ ಅಕೌಂಟನ್ನು ಕ್ಯಾನ್ಸಲ್ ಮಾಡಿ ನನ್ನ ಖಾತೆಯಲ್ಲಿ ಇರುವ ಹಣವನ್ನೆಲ್ಲಾ ಕೊಟ್ಟು ಬಿಡಿ.


ನಿನ್ನೆ ನಾನು ಬ್ಯಾಂಕ್ ಗೆ ಹೋಗಿದ್ದೆ. ನನ್ನ ಪಾಸ್ ಬುಕ್ಕನ್ನು ಕೌಂಟರ್ ನಲ್ಲಿ ಇದ್ದ ಸಿಬ್ಬಂದಿಯ ಕೈಗೆ ಕೊಡುತ್ತಾ ನಾನು ಹೇಳಿದೆ – *ಇದರಿಂದ ಒಂದು ಐನೂರು ರುಪಾಯಿಗಳನ್ನು ಕೊಡಿ…* ಅದಕ್ಕೆ ಆತ ಪಾಸ್ ಬುಕ್ಕನ್ನು ನನಗೆ ವಾಪಾಸ್ ಕೊಡುತ್ತಾ – *20000 ಕಿಂತ ಕಡಿಮೆ ಬೇಕಾಗುವ ಹಣವನ್ನು ಪಡೆಯಲು ATM ನ್ನು ಉಪಯೋಗಿಸಬೇಕು..* ಆತನ ಮಾತಲ್ಲಿ ಸ್ವಲ್ಪ ಅಹಂಕಾರ ಇದ್ದ ಹಾಗೆ ನನಗನಿಸಿತು…. ನನಗೆ ಸ್ವಲ್ಪ ಬೇಸರವೂ ಆಯಿತು.. ಎಟಿಎಂ ಹತ್ತಿರ ಇರಲಿಲ್ಲ. ನಾನು ಏನು ಮಾಡುವುದು ಅಂತ ಯೋಚಿಸುತ್ತಿರುವಾಗ , ಆತ – ಸ್ವಲ್ಪ ಸಿಟ್ಟಲ್ಲಿ *ಸ್ವಲ್ಪ ಬದಿಗೆ ಸರಿಯಿರಿ ನಿಮ್ಮ ಹಿಂದೆ ಜನ ನಿಂತಿರುವುದು ಕಾಣಿಸುತ್ತಿಲ್ಲವೇ?* ಅಂತ ಕೇಳಿದ. ನಾನು ಸರಿಯದೆ ಅಲ್ಲೇ ನಿಂತೆ… ನಾನು ಹೇಳಿದೆ – *ಒಂದು ಕೆಲಸ ಮಾಡಿ . ನನ್ನ ಅಕೌಂಟನ್ನು ಕ್ಯಾನ್ಸಲ್ ಮಾಡಿ ನನ್ನ ಖಾತೆಯಲ್ಲಿ ಇರುವ ಹಣವನ್ನೆಲ್ಲಾ ಕೊಟ್ಟು ಬಿಡಿ. ನನ್ನ ಅಕೌಂಟಲ್ಲಿ ಎಷ್ಟು ಹಣ ಇದೆ ಅಂತ ನಾನು ಮೆಲ್ಲನೆ ಕೇಳಿದೆ.* ನನ್ನಿಂದ ಪಾಸ್ ಬುಕ್ಕನ್ನು ಮರಳಿ ಪಡೆದ ಆತ ಕಂಪ್ಯೂಟರನ್ನು ಒತ್ತತೊಡಗಿದ… ಆತ ಸ್ವಲ್ಪ ಬೆವರತೊಡಗಿದ್ದನ್ನು ನಾನು ಗಮನಿಸಿದೆ. ಆತ ಸ್ವಲ್ಪ ಮೆಲ್ಲ ಹೇಳಿದ – *ಮೂರು ಕೋಟಿಯ ಐವತ್ತಾರು ಸಾವಿರ ರುಪಾಯಿಗಳಿವೆ. ಆದರೆ ಈಗ ನಮ್ಮ ಬ್ರಾಂಚಲ್ಲಿ ಅಷ್ಟೊಂದು ಮೊತ್ತ ಇಲ್ಲ.* ನಾನು ಕೇಳಿದೆ – ಎಷ್ಟು ಇರಬಹುದು ಈಗ ..? ಆತ – *ಇಲ್ಲಿ ಈಗ 30 ಲಕ್ಷ ಮಾತ್ರ ಇರೋದು…* ಆತನ ಕೈಗಳು ನಡುಗುತ್ತಿರುವುದನ್ನು ನಾನು ನೋಡಿದೆ… ನಾನು – *ಸರಿ ಆದರೆ ಈಗ ಅಷ್ಟನ್ನು ನನಗೆ ಕೊಟ್ಬಿಡಿ…..* ನಾನು ಸ್ವಲ್ಪ ಜೋರಾಗಿಯೇ ಹೇಳಿದೆ…. ಒಂದು WITHDRAWAL ಸ್ಲಿಪ್ಪಲ್ಲಿ ಆತ ನನ್ನಿಂದ ಸಹಿ ಮಾಡಿಸಿದ…… ಮತ್ತೆ ಅಕ್ಕಪಕ್ಕದ ಕೌಂಟರ್ ಗಳಿಂದೆಲ್ಲಾ ಬೇಗ ಬೇಗ ನೋಟಿನ ಬಂಡಲ್ ಗಳನ್ನು ಒಟ್ಟು ಮಾಡಿ ಮುವತ್ತು ಲಕ್ಷಗಳನ್ನು ನನ್ನ ಮುಂದೆ ತಂದು ಇಟ್ಟ…… ನಾನು ಸ್ವಲ್ಪ ವಿನಯದಿಂದ – *ನನಗೆ ಒಂದು ಉಪಕಾರವನ್ನು ಕೂಡಾ ಮಾಡಬಹುದಾ ಅಂತ ಕೇಳಿದೆ..* ಆತ – *ಖಂಡಿತವಾಗಿಯೂ ಏನು ಬೇಕಿದ್ದರೂ ಕೇಳಿ ಅಂತ ಹೇಳಿದ….* ಅಷ್ಟರಲ್ಲಿ ಆತನ ಅಹಂಕಾರ ಕಡಿಮೆಯಾಗಿತ್ತು ಬಹಳ ಗೌರವದಿಂದ ಮಾತನಾಡತೊಡಗಿದ…. ನಾನು ಆ ಬಂಡಲ್ ಗಳಿಂದ ಒಂದು ಐನೂರು ರುಪಾಯಿಯನ್ನು ತೆಗೆಯುತ್ತಾ ಹೇಳಿದೆ – *ನನಗೆ ಇಷ್ಟೇ ಸಾಕು ಬಾಕಿ ನನ್ನ ಅಕೌಂಟಿನಲ್ಲೇ ಜಮಾ ಮಾಡಿ ರಶೀದಿಯನ್ನು ಕೊಡಿ. ನನ್ನ ಮಾತನ್ನು ಕೇಳಿ ಆತ ನನ್ನನ್ನು ಹಸಿಯಾಗಿ ತಿನ್ನುವ ಹಾಗೆ ದುರುಗುಟ್ಟಿ ನೋಡಿದ. ನಾನು ನಗುತ್ತಾ ಹೇಳಿದೆ- *ಬೇಗ ಬೇಗ ನನ್ನ ಹಿಂದೆ ಬಹಳ ಜನ ಕಾಯುತ್ತಿದ್ದಾರೆ. ರಶೀದಿಯನ್ನು ಪಡೆದು ನಾನು ಹೊರ ನಡೆಯುವಾಗ ನನ್ನ ಹಿಂದೆ ನಿಂತಿದ್ದವರು ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು. ಆದರೆ ನಾನು ಯಾರನ್ನೂ ಹೆಚ್ಚಾಗಿ ಗಮನಿಸದೆ ಮತ್ತೆ ಕಂಬಳಿಯನ್ನು ಹೊದ್ದು ಪುನಃ ಮಲಗಿದೆ. ಇವತ್ತು ರಾತ್ರಿ ಕನಸು ಮತ್ತೆ ಬಿದ್ದರೆ ನಾಳೆ ಮೇಸೆಜ್ ಮಾಡುವ….
🤝🤝
ತಂದೆಯ ಋಣ ತೀರಿಸಲು -ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ
ತಂದೆಯ ಋಣ ತೀರಿಸಲು -ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

No matter how many births you take, you cannot repay your father's debt.

ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರ. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು. ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ. ಕ್ಯಾಶಿಯರ್ ಸಿಟ್ಟಲ್ಲಿದ್ದ..🥱 “ಏನಜ್ಜ, 2 ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ?” ಮತ್ತೆ ಕೂಗಿದ.. “ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ” ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..🥱🥱”ನೋಡಿ ಅಜ್ಜ ಆಗ ದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?, ಮಗ ಹಣ ಹಾಕಿಲ್ಲ, ಅಕೌಂಟ್ ಅಲ್ಲಿ ಹಣ ಇಲ್ಲ.. ಎಲ್ಲೆಲ್ಲಿಂದ ಬರ್ತೀರಾ ನೀವೆಲ್ಲ ?”….ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು. ಎಲ್ಲರೂ ಆ ವೃದ್ಧರನ್ನು ಅಸಹ್ಯವಾಗಿ ಕಂಡರು🥱ವೃದ್ಧರಿಗೂ ನಾಚಿಕೆಯಾಗಿದ್ದು, ಅಲ್ಲೇ ಸೈಡ್ ಗೆ ಹೋಗಿ ತಮ್ಮ ಮೊಬೈಲ್ ಅಲ್ಲಿ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ತಾಗುತ್ತಿರಲಿಲ್ಲ😔.. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ. “ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 7 ಒಟ್ಟು ಕಂತು ಬಾಕಿ ಇದೆ, ಈಗಾಗಲೇ 2 ಕಂತು ಕಟ್ಟಿಲ್ಲ, ಮುಂದಿನ ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ನೋಡಿ, ಆಗಲೇ ನಿಮ್ಮಂಥವರಿಗೆ ಬುದ್ದಿ ಬರುವುದು” ಎಂದ ಸಿಟ್ಟಲ್ಲಿ🥱. ಅಜ್ಜನ ಕಣ್ಣುಗಳು ಮಂಜಾಗಿದ್ದವು ಮತ್ತೆ ಮತ್ತೆ ಅದೇ ನಂಬರ್ ಗೆ ಕಾಲ್ ಮಾಡುತಿದ್ದರು ಅವರು 😔.. ಇದನ್ನೆಲ್ಲಾ ವೀಕ್ಷಿಸುತಿದ್ದ ಅದೇ ಬ್ಯಾಂಕಿನ ಸಹೋದ್ಯೋಗಿಯೊಬ್ಬರು ಅಜ್ಜನಲ್ಲಿ ಬಂದರು.. ಅಜ್ಜನನ್ನು ಪಕ್ಕಕ್ಕೆ ಕರೆಸಿ ಅಜ್ಜನಲ್ಲಿ ಮಗನ ನಂಬರ್ ಕೇಳಿ ತಮ್ಮ ಫೋನ್ ಅಲ್ಲಿ ರಿಂಗ್ ಮಾಡಿದಾಗ ಆಶ್ಚರ್ಯ ಎಂಬಂತೆ ಫೋನ್ ರಿಂಗ್ ಆಗಿತ್ತು 😔.🥱ಹಲೋ ಎಂಬ ಹೆಂಗಸಿನ ಧ್ವನಿ ಅವರನ್ನು ಆಶ್ಚರ್ಯ ಗೊಳಿಸಿತ್ತು. ಅಜ್ಜ ಇದು ಮಗನ ನಂಬರ್ ಎಂದಿದ್ದರು. ತಕ್ಷಣ ಅವರು ಅಜ್ಜನ ವಿಷಯ ತಿಳಿಸಿದರು… ಆ ಹೆಂಗಸಿನ ಧ್ವನಿ ಬದಲಾಗಿತ್ತು ಆಕೆ ಅಳುತಿದ್ದಳು. ಒಂದು ಕ್ಷಣ ಸ್ತಬ್ದ ವಾಗಿದ್ದು. ಆಕೆ ಮುಂದುವರಿಸಿದಳು… “ಹಾ ನಾನು ರೂಪ, ಅವರು ನಮ್ಮ ಮಾವ.. ನನ್ನ ಗಂಡನ ತಂದೆ, ಅಲ್ಲಿ ಅವರ ಮನೆ ಕಟ್ಟಿದ್ದು, ತಂದೆ ತಾಯಿಯರನ್ನು ನೋಡಿ ಕೊಂಡಿದ್ದು, ಮನೆ ನೋಡಿ ಕೊಂಡಿದ್ದು, ಮನೆಯ ಹೋಂ ಲೋನ್ ಕಟ್ಟುತಿದ್ದದ್ದು ಎಲ್ಲವೂ ನನ್ನ ಗಂಡನೇ, ಆದರೆ ಕಳೆದ ತಿಂಗಳ ಹಿಂದೆ ನನ್ನ ಸಮು(ಸಮನ್ವಯ್ ).. ಬೈಕ್ ಆಕ್ಸಿಡೆಂಟ್ ಅಲ್ಲಿ ತೀರಿಕೊಂಡರು” 😥… ಆಕೆಯ ಅಳು ಜೋರಾಗಿತ್ತು… “ಜೀವನದ ಕೊನೆ ತನಕ ನನ್ನೊಂದಿಗೆ ಇರುತ್ತೇನೆ ಎಂದವರು ಅರ್ಧಕ್ಕೆ ನೆನಪುಗಳು ಹಾಗೂ ನೋವುಗಳನ್ನಷ್ಟೇ ಬಿಟ್ಟು ಹೊರಟು ಹೋದರು” ಎನ್ನುವಾಗ ಆಕೆಯ ಅಳು ಮತ್ತಷ್ಟು ಜೋರಾಗಿತ್ತು😥😥…. “ಹಾ ನಮ್ಮ ಮಾವನವರಿಗೆ ಅವರು ಒಬ್ಬನೇ ಮಗ, ಈಗ ಯಾರೂ ಇಲ್ಲ ಅವರಿಗೆ😥, ಮಗ ಸತ್ತದ್ದು, ಮಗ ಇಲ್ಲ ಎನ್ನುವುದು ಯಾವುದೂ ನೆನಪಿಲ್ಲ ಅವರಿಗೆ… ಪದೇ ಪದೇ ಮಗನ ನಂಬರ್ ಗೆ ಫೋನ್ ಮಾಡುತಿದ್ದರು, ನನ್ನ ಎಲ್ಲಾ ಚಿನ್ನ ಬ್ಯಾಂಕಲ್ಲಿಟ್ಟಿದ್ದರು, ಆ ಮನೆಯ ಲೋನ್ ತೀರಿಸಲು, ಕೇಳಿದರೆ ನಿನ್ನ ಚಿನ್ನ ನಾನೇ ಇದ್ದೀನಲ್ಲ ಎನ್ನುತಿದ್ದರು… ಈಗ ಅವರೂ ಇಲ್ಲ ಚಿನ್ನವೂ ಇಲ್ಲ 😥,ಕಳೆದ 14 ವರ್ಷಗಳಿಂದ ಒಂದೇ ಒಂದು EMI ತಪ್ಪಿಸಿರಲಿಲ್ಲ ಈಗ ಅವರೇ ಇಲ್ಲ😥, ರಾಣಿ ತರ ಇದ್ದ ನನ್ನ ಜೀವನ ಹಾಳಾಗಿದೆ, ನಾನೀಗ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದೇನೆ, ನನ್ನ ಮುಂದೆ ಮಕ್ಕಳ ಹಾಗೂ ನನ್ನ ಭವಿಷ್ಯವಿದೆ ಹಾಗಾಗಿ ಮಾವನವರಿಗೆ ನಾನೇನೂ ಮಾಡಲಾಗುತ್ತಿಲ್ಲ 😔,ಪದೇ ಪದೇ ಮಗನಿಗೆ ಕಾಲ್ ಕೊಡು ಎನ್ನುವಾಗ ಕರುಳು ಕಿತ್ತು ಬರುತಿತ್ತು, ಅದಕ್ಕೇ ಅವರ ನಂಬರ್ ಬ್ಲಾಕ್ ಮಾಡಿದ್ದೇನೆ” ಎನ್ನುವಾಗ ಆಕೆಯ ಅಳು ಮತ್ತಷ್ಟು ಹೆಚ್ಚಿತ್ತು 😔. ಮತ್ತೆ ಮಾತಾಡುವ ಧೈರ್ಯ ಫೋನ್ ಮಾಡಿದವರಿಗೂ ಇರಲಿಲ್ಲ. ಅಷ್ಟರಲ್ಲಿ ಫೋನ್ ಕಟ್ ಆಗಿತ್ತು.. ಆ ಸಹೋದ್ಯೋಗಿಯ ಕಣ್ಣಲ್ಲೂ ನೀರಿತ್ತು😔.. ಫೋನ್ ಹಿಡಿದು ಮಾತನಾಡುತ್ತಾ ಹೊರಗೆ ಬಂದ ಆತ ಒಳ ಹೋಗುತಿದ್ದಂತೆ ಬಾಗಿಲ ಬಳಿ ಕಾಯುತಿದ್ದ ವೃದ್ಧರು ” ಮಗ ಏನಂದ? “ಎನ್ನುತಿದ್ದರು ತೀವ್ರ ಕುತೂಹಲ ದಿಂದ..”ಬನ್ನಿ ಸರ್” ಎಂದು ಅವರನ್ನು ತಮ್ಮ ಕೌಂಟರ್ ನತ್ತ ಕರೆದೊಯ್ದರು ಇವರು..😔ಮತ್ತೆ ಅಜ್ಜ ಬ್ಯಾಂಕ್ ನತ್ತ ಬಂದದ್ದು ನೋಡಿ ಆ ಕ್ಯಾಶಿಯರ್ ಗೆ ಸಿಟ್ಟು ಉಕ್ಕುತಿತ್ತು… ಸಹೋದ್ಯೋಗಿ ಕೇಳಿದ ಅವನಲ್ಲಿ… “ಅಜ್ಜನ ಲೋನ್ ಸ್ಟೇಟ್ಮೆಂಟ್ ಕೊಡಿ”ಎಂದು.. ಅಜ್ಜ ಮತ್ತೆ ಕೇಳಿದರು “ಸರ್ ಮಗ ಏನಂದ?”, ಈ ಬಾರಿ ಅವರ ಕಣ್ಣುಗಳಲ್ಲಿ ಆತಂಕವಿತ್ತು..😔😔ಸ್ಟೇಟ್ಮೆಂಟ್ ಮೇಲೆ ಕಣ್ಣಾಡಿಸಿದ ಬ್ಯಾಂಕ್ ಸಹೋದ್ಯೋಗಿ..15 ಲಕ್ಷದ 15 ವರ್ಷದ ಲೋನ್ ಅದಾಗಿತ್ತು. 6 ತಿಂಗಳಷ್ಟೇ ಬಾಕಿ ಇತ್ತು, 2 ತಿಂಗಳು ಕಟ್ಟಿರಲಿಲ್ಲ.. ಕ್ಯಾಲ್ಕುಲೇಟರ್ ಹಿಡಿದು ಲೆಕ್ಕ ಹಾಕಿದರು, ಬಡ್ಡಿ ಕೂಡಿ 98ಸಾವಿರ ಅಷ್ಟೇ ಬಾಕಿ ಇತ್ತು. 🥱.. ನಗುತ್ತಾ ಅಜ್ಜನಲ್ಲಿ ಹೇಳಿದರು.. “ಅಯ್ಯೋ ಅಜ್ಜ ನಿಮ್ಮ ಮಗ ಈಗಷ್ಟೇ ಹಣ ಹಾಕಿದರು.. ನಿಮಗೆ ಇನ್ನೊಂದು ಗುಡ್ ನ್ಯೂಸ್ ಇದೆ ನಿಮ್ಮ ಬಾಕಿ ಇರುವ ಕಂತಿನ ಹಣವನ್ನು ಒಟ್ಟಾಗಿ ಹಾಕಿದ್ದಾನೆ👌, ನಿಮ್ಮ ಲೋನ್ ಕ್ಲೋಸ್ ಆಗಿದೆ, ನೀವಿನ್ನು ನಿಶ್ಚಿಂತೆಯಲ್ಲಿ ಮನೆಗೆ ಹೋಗಬಹುದು, ಲೋನ್ ಕ್ಲೀಯರೆನ್ಸ್ ಸರ್ಟಿಫಿಕೇಟ್ ಬ್ಯಾಂಕ್ ನಿಮ್ಮ ಮನೆಗೆ ಕಳಿಸುತ್ತದೆ”.. ಎಂದಾಗ ಅಜ್ಜ ನ ಆತಂಕದ ಮುಖದಲ್ಲಿ ನಗುವಿತ್ತು ಕೈ ಮುಗಿದು ನಿಂತರು…ತುಂಬಾ “ಉಪಕಾರ ಆಯಿತು ಸರ್” ಎಂದಾಗ, “ಉಪಕಾರ ನನಗಲ್ಲ ನಿಮ್ಮ ಮಗನಿಗೆ ಹೇಳಿ” ಎಂದು ನಕ್ಕರು ಆ ಸಹೋದ್ಯೋಗಿ .. ಅಜ್ಜ ನ ಮುಖದಲ್ಲಿ ಗೆಲುವಿನ ನಗುವಿತ್ತು..👍👍ಅಲ್ಲೇ ಇದ್ದ ಕ್ಯಾಶಿಯರ್ ಈ ಬಾರಿ, ಭಾರಿ ಸಿಟ್ಟಲ್ಲಿದ್ದ ತನ್ನ ಸಹೋದ್ಯೋಗಿ ಮೇಲೆ.. “ನಿಂಗೇನು ಹುಚ್ಚು ಹಿಡಿದಿದ, ಹಣ ಅವರ ಮಗ ಹಾಕೇ ಇಲ್ಲ” ಎಂದಾಗ ಕೂಲ್ ಅಲ್ಲಿ ಉತ್ತರಿಸಿದ ಈತ.. ಈ ಬಾರಿ ಪೂರ್ತಿ ಬ್ಯಾಂಕ್ ಸಹೋದ್ಯೋಗಿ ಗಳು ನೋಡುತ್ತಿದ್ದುದು ಒಳಗಿಂದ ಮ್ಯಾನೇಜರ್ ಕೂಡಾ ಕೇಳುತ್ತಿದ್ದುದು ಗೊತ್ತಿತ್ತು ಆತನಿಗೆ ಈ ಬಾರಿ ಆತನ ಸ್ವರ ಜೋರಾಗಿತ್ತು…ಕಿಸೆಯಲ್ಲಿದ್ದ,7000 ಟೇಬಲ್ ಮೇಲೆ ಇಟ್ಟಿದ್ದ ಈತ ಹೀಗೆ ಹೇಳಿದ “ನನಗೆ ಹುಚ್ಚು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತೀರಿಹೋಗಿದ್ದ ಮಗ ಇದ್ದಾನೆಂದು ಭಾವಿಸಿ 😥,ಆ ತಂದೆ ಮಗನ ಮೇಲೆ ಇಟ್ಟಿರುವ ವಿಶ್ವಾಸವನ್ನು ಆ ಕ್ಷಣದಲ್ಲಿ ಉಳಿಸುವುದು, ಆ ತಂದೆಯ ಕಣ್ಣು ಗಳಲ್ಲಿ ಇದ್ದ ಆಸೆಯನ್ನು ಹಾಗೇ ಉಳಿಸುವುದಷ್ಟೇ ಆ ಸಂದರ್ಭದಲ್ಲಿ ನನ್ನೆದುರಿದ್ದ ಸವಾಲಾಗಿತ್ತು😔, ಯಾಕೆಂದರೆ ಆತ ನನ್ನೆದುರು ಕೇವಲ ಒಬ್ಬ ತಂದೆಯಾಗಿದ್ದ, ಯಾರ ತಂದೆ ಎನ್ನುವುದು ಮುಖ್ಯವಾಗಿರಲಿಲ್ಲ, ಮಗನ ಮೇಲಿಟ್ಟಿದ್ದ ಆ ವಿಶ್ವಾಸ ಉಳಿಸಿದ್ದು ಅದಕ್ಕೇ ಪ್ರತಿಯಾಗಿ ಆ ತಂದೆಯ ಕಣ್ಣಲ್ಲಿದ್ದ ಆ ಸಂತೋಷದೆದುರು, ಲಕ್ಷ ರೂಪಾಯಿ ಬಹಳ ಚಿಕ್ಕದಾಗಿತ್ತು ನನಗೆ, ನಾನು ಮಾಡಿದ ಕೆಲಸದಿಂದ ನಂಗೆ ಸಿಕ್ಕಿದ ನೆಮ್ಮದಿ ಬಹುಶಃ ಕೋಟಿ ರೂಪಾಯಿ ಸಿಕ್ಕಿದ್ದರೂ ನನಗೆ ಸಿಗಲು ಸಾಧ್ಯವೇ ಇಲ್ಲ ಎನ್ನಿಸಿತ್ತು” ಎಂದವನೇ ಮಿಕ್ಕುಳಿದ 90,000 ದ ಚೆಕ್ ಕೊಡಲು, ಚೆಕ್ ಬುಕ್ ತರಲು ಹೊರಗಡೆ ಹೋದ.. ಆತ ಚೆಕ್ ಪುಸ್ತಕ ತರುವಾಗ 20/22 ಜನರಿರುವ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಗಳು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದರು 👌ಅಲ್ಲಿ, ಅಷ್ಟರಲ್ಲಿ ಅವನ ಟೇಬಲ್ ಮೇಲೆ ಒಂದಷ್ಟು ಹಣ ತಂದು ಇಟ್ಟಿದ್ದರು ಸಿಬ್ಬoದಿಗಳು.. ಲೆಕ್ಕ ಮಾಡಿದ 17 ಜನ ಸಿಬ್ಬಂದಿಗಳು ಒಟ್ಟು ಬರೋಬ್ಬರಿ 73,000ರೂ ಇಟ್ಟಿದ್ದರು🥱, ಅಷ್ಟರಲ್ಲಿ ಆಗ ವೃದ್ಧರಿಗೆ ಬೈದಿದ್ದ ಕ್ಯಾಶಿಯರ್ 7000 ಕೊಟ್ಟಿದ್ದ, ಆಗ ಅಸಹಾಯಕ ವೃದ್ಧರಿಗೆ ಬೈದಿದ್ದ ಅವನ ಕಣ್ಣಲ್ಲಿ ಪಶ್ಚತ್ತಾಪದ ಕಣ್ಣೀರಿತ್ತು.😔😔ಒಟ್ಟು ತನ್ನ 7000 ಕೂಡಿ 87000 ಸಂಗ್ರಹ ವಾಗಿತ್ತು, ಚೆಕ್ ತೆರೆದು ಉಳಿದ 11,000 ಬರೆಯಲು ಪೆನ್ನು ತೆಗೆದವನ ಹೆಗಲ ಮೇಲೆ ಕೈಯೊಂದು ಬಂತು, ತಿರುಗಿ ನೋಡಿದ ಅಲ್ಲಿ ಬ್ರಾಂಚ್ ಮ್ಯಾನೇಜರ್ ನಿಂತಿದ್ದರು, “ನನ್ನನ್ನು ಬಿಟ್ಟು ನೀವೇ ಎಲ್ಲಾ ಪುಣ್ಯ ಹಂಚಿಕೊಂಡರೆ ಹೇಗೆ ?ನನ್ನದೂ ಸ್ವಲ್ಪ ಪುಣ್ಯ ಇರಲಿ ಎಂದವರೇ 11,000 ಕೊಟ್ಟು ಚೆಕ್ ಪುಸ್ತಕ ಮಡಚಿ ಅವನ ಕಿಸೆಯೊಳಗೆ ಇಟ್ಟು ಬಿಟ್ಟರು .. 👌👌”ಒಟ್ಟಿನಲ್ಲಿಆ ತಂದೆ ಮಗನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಎಲ್ಲಾ ಒಟ್ಟಾಗಿ ಉಳಿಸಿ ಬಿಟ್ಟಿದ್ದರು…”🙏🙏🙏…*ಸಹಾಯ ಮಾಡುವ ಅವಕಾಶ ಭಗವಂತ ಪ್ರತಿಯೊಬ್ಬನಿಗೂ ಒದಗಿಸುತ್ತಾನೆ ಆ ಕ್ಷಣ ಉಪಯೋಗಿಸಿಕೊಂಡವನಿಷ್ಟೇ ಅದರ ನಿಜ ಸುಖದ ಅನುಭವವಾಗಲಿದೆ.* ಇಲ್ಲಿ ಆ ಬ್ಯಾಂಕ್ ಸಹೋದ್ಯೋಗಿಗಳಿಗೆ ಆ ಕ್ಷಣ ಒದಗಿದೆ..👌👌 ದಯವಿಟ್ಟು ನಿಮ್ಮ ಬ್ಯಾಂಕ್ ಗೆ ಬರುವ ಹಿರಿಯ ಜೀವಗಳಿಗೆ ನಿರಾಸೆ ಮಾಡಬೇಡಿ, ಅವಮಾನ ಮಾಡಲೇಬೇಡಿ. ಯಾಕೆಂದರೆ, ನಿಮ್ಮಲ್ಲಿ ಬರುವ ಹಿರಿಯ ಜೀವಗಳಿಗೆ ನೀವು ಕೊಡುವ ಆ ಹಣದ ಅವಶ್ಯಕತೆ ಅದೆಷ್ಟು ಇರುತ್ತದೋ ಯಾರಿಗೆ ಗೊತ್ತು ಅಲ್ಲವೇ?😥🙏…..ಆತ ಕೊಳೆಯಾದ ಅಂಗಿ, ಕೊಳೆಯಾದ ಪ್ಯಾಂಟ್, ಪೈಜಾಮ, ಲುಂಗಿ, ಹರಿದ ಚಪ್ಪಲಿ, ಚಪ್ಪಲಿ ಇಲ್ಲದ ಕಾಲು, ಹೇಗೇ ಬಂದಿರಲಿ ಪ್ರೀತಿಯಿಂದ ಸೌಜನ್ಯದಿಂದ ಮಾತಾಡಿ.. ಫಾರಂ ಫಿಲ್ ಮಾಡಲು ನೆರವಾಗಿ… ಯಾಕೆಂದರೆ….”ನೆನಪಿರಲಿ….”*ಯಾರದ್ದಾದರೇನು ? ತಂದೆ..ತಂದೆಯೇ ಅಲ್ಲವೇ??*
ಹುಂಡಿಗೆ ಬಿತ್ತು ಭಕ್ತನ iPhone! ಅಯ್ಯೋ ಹುಂಡಿಗೆ ಬಿದ್ಮೇಲೆ ಮುಗೀತು
Devotee's iPhone fell into his pocket! Alas, it ended after falling into his pocket.
ಹುಂಡಿಗೆ ಬಿತ್ತು ಭಕ್ತನ iPhone! ಅಯ್ಯೋ ಹುಂಡಿಗೆ ಬಿದ್ಮೇಲೆ ಮುಗೀತು


ಹುಂಡಿಗೆ ಬಿತ್ತು ಭಕ್ತನ iPhone! ಅಯ್ಯೋ ಹುಂಡಿಗೆ ಬಿದ್ಮೇಲೆ ಮುಗೀತು, ನಾವು ಕೊಡಲ್ಲ ಅಂತ ದೇವಸ್ಥಾನ ಪಟ್ಟುಒಂದೂವರೆ ಲಕ್ಷದ ಐಫೋನ್ ಹುಂಡಿಯೊಳಗೆ ಬಿದ್ದಿದೆ! ಅಯ್ಯೋ ಹುಂಡಿಯೊಳಗೆ ಬಿತ್ತು. ಇನ್ನು ಇದು ದೇವರದ್ದು ಅಂದು ಬಿಡೋದಾ ದೇವಸ್ಥಾನದ ಅಧಿಕಾರಿಗಳು!ಕಾಣಿಕೆ ಹುಂಡಿಗೆ ಏನೇ ಬೀಳಲಿ, ಹಾಕಲಿ ಅದು ಸಮರ್ಪಣೆ ಎನ್ನುವುದು ಅಲ್ಲಿಗೆ ಫಿಕ್ಸ್. ದೇವರಿಗೆ ಸೇರಿದ್ದು, ಸಂಪೂರ್ಣವಾಗಿ ದೇವರದ್ದು, ಅದನ್ನು ಮತ್ತೆ ತೆಗೆದುಕೊಳ್ಳುವಂತಿಲ್ಲ ಎನ್ನುವ ನಿಯಮ ಈಗಲೂ ಸಾಕಷ್ಟು ದೇವಸ್ಥಾನಗಳಲ್ಲಿದೆ.. ಕೆಲವು ದೇವಸ್ಥಾನಗಳಲ್ಲಿ ಈ ಕುರಿತು ಸ್ವಲ್ಪ ಸಡಿಲ ನಿಯಮಗಳಿರಬಹುದು. ಆದರೆ ಇನ್ನೂ ಕೆಲವು ದೇವಸ್ಥಾನ ಈ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟ್. ಹುಂಡಿಗೆ ಏನೇ ಬಿದ್ದರು ಸರಿಯೇ, ಅದು ದೇವರಿಗೆ ಸಮರ್ಪಣೆ ಎನ್ನುವ ಭಾವನೆ ಎಲ್ಲಾ ಕಡೆಗಳಲ್ಲಿಯೂ ಇದೆ. ಆದರೆ ಇತ್ತೀಚೆಗೆ ಚೆನ್ನೈನ ಒಂದು ದೇವಸ್ಥಾನದಲ್ಲಿ ನಡೆದ ಘಟನೆಯಲ್ಲಿ ಭಕ್ತ ಪೇಚಿಗೆ ಸಿಲುಕುವ ಹಾಗೆ ಆಗಿದೆ.ಮಗುವನ್ನು ಹೊತ್ತುಕೊಂಡು ದಂಪತಿ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಹಾಕುತ್ತಿದ್ದರು. ಅವರ ಗಡಿಬಿಡಿಗೆ ಮಗು ಹುಂಡಿಗೆ ಬೀಳುತ್ತದೆ. ದೇವಸ್ಥಾನದ ಅಧಿಕಾರಿಗಳು ಅವರನ್ನು ಸಂಪರ್ಕಿಸಿದಾಗ, ಮಗುವನ್ನು ಮರಳಿ ನೀಡಲು ನಿರಾಕರಿಸುತ್ತಾರೆ. ಹುಂಡಿಯಲ್ಲಿ ಏನಿದೆಯೋ ಅದು ದೇವರಿಗೆ ಕಾಣಿಕೆಯಾಗಿದೆ. ಇದು 2000 ರ ತಮಿಳು ಚಿತ್ರ – ಪಲಾಯತು ಅಮ್ಮನ್ನ ದೃಶ್ಯಗಳು. ಹೌದು, ಇಂಥದ್ದೊಂದು ನಂಬಿಕೆ ಈಗಲೂ ಇದೆ.ಮೂರು ತಿಂಗಳ ಹಿಂದೆ ತಿರುಪೋರೂರು ಕಂದಸಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಂಬತ್ತೂರಿನ ವಿನಾಯಕಪುರಂನ ಡಿ ದಿನೇಶ್ ಎಂಬ ಭಕ್ತನ ಜೀವನದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ.
ಮಗುವಿನ ಜಾಗದಲ್ಲಿ ಆ ಭಕ್ತನ 1 ಲಕ್ಷ ಮೌಲ್ಯದ ಐಫೋನ್ ಹುಂಡಿಯಲ್ಲಿ ಬಿದ್ದಿತ್ತು. ದೇವಾಲಯದ ಅಧಿಕಾರಿಗಳದ್ದು ಒಂದೇ ಉತ್ತರ ಏನೆಂದರೆ ಹುಂಡಿಯಲ್ಲಿ ಏನೇನು ಬಿದ್ದರೂ ಅದು ದೇವರಿಗೆ ಅರ್ಪಣೆ ಎನ್ನುವುದು. ಅಂತೂ 1 ಲಕ್ಷಕ್ಕೂ ಅಧಿಕ ಮೌಲ್ಯದ ಐಫೋನ್ ಮರಳಿಸೋದೆ ಇಲ್ಲ ಅಂತ ದೇವಸ್ಥಾನ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ.ಗುರುವಾರ ಅಧಿಕಾರಿಗಳು ಹುಂಡಿ ತೆರೆದಾಗ, ಐಫೋನ್ ಸಿಕ್ಕರೂ, ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ದೇವಾಲಯದ ನಿಯಮಗಳ ಪ್ರಕಾರ ದೇವರಿಗೆ ಅರ್ಪಿಸಿದ ಯಾವುದೇ ವಸ್ತುವನ್ನು ಕೂಡಾ ಹಿಂತಿರುಗಿಸಲಾಗುವುದಿಲ್ಲ ಎಂದು ದಿನೇಶ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.ಆದರೆ ದೇವಸ್ಥಾನದ ಅಧಿಕಾರಿಗಳು ಭಕ್ತ ತಮ್ಮ ಐಫೋನ್ ಡೇಟಾವನ್ನು ವರ್ಗಾಯಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಕೇವಲ ಫೋನ್ ಮಾತ್ರ ದೇವಾಲಯಕ್ಕೆ ಸೇರಿದ್ದು ಎಂದು ಹೇಳಿದರು.
ಮೆಂತ್ಯ ಸೊಪ್ಪು
ಮೆಂತ್ಯ ಸೊಪ್ಪು

Fenugreek

ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ ಸೊಪ್ಪನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೂ ಒಣಗಿಸಿ ನಂತರ ಮೆಂತ್ಯ ಸೊಪ್ಪನ್ನು ಕೈಯಿಂದ ಪುಡಿ ಮಾಡಿ ಈಗ ತಯಾರಾಗುವುದೇ ಕಸುರಿ ಮೇತಿ ಈ ಕಸೂರಿ ಮೇತಿಯನ್ನು ಡಬ್ಬಿಗೆ ಹಾಕಿ ಶೇಖರಿಸಿ ಇಡಿ. ಅಡುಗೆಗೆ ಬೇಕಾದಾಗ ಬಳಸಬಹುದು
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

What is the benefit of drinking lukewarm water as soon as you wake up in the morning?

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗರು ಬೆಚ್ಚಗೆ ನಾ ನೀರನ್ನು ಕುಡಿಯುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಬೆವರು ಬರಲು ಪ್ರಾರಂಭವಾಗುತ್ತದೆ. ದೇಹದಿಂದ ವಿಷಕಾರಿ ಅಂಶಗಳು ಮತ್ತು ಕಲುಷಿತ ಬೇಡದ ತ್ಯಾಜ್ಯಗಳು ಹೊರಹೋಗುತ್ತವೆ ಇದರಿಂದ ಚರ್ಮದ ಮೇಲೆ ಮೊಡವೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ. ದೇಹದ ಜೀರ್ಣಶಕ್ತಿ ಹೆಚ್ಚುತ್ತದೆ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಒಡಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನ ಜೊತೆಗೆ ಸ್ವಲ್ಪ ನಿಂಬೆಹಣ್ಣಿನ ರಸ ಕೆಲವು ಹನಿಯಷ್ಟು ಜೇನುತುಪ್ಪ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹಕ್ಕೆ ನೀರಿನ ಅಂಶವನ್ನು ಒದಗಿಸುವ ಜೊತೆಗೆ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡಿ, ಚರ್ಮದ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅತ್ಯಧಿಕ ರಕ್ತ ಸಂಚಾರ ಉಂಟಾಗಿ ಚರ್ಮದ ಜೀವಕೋಶಗಳಿಗೆ ಪೌಷ್ಠಿಕ ಸತ್ವಗಳು ಸಿಗುತ್ತವೆ. ಬೆಚ್ಚಗಿನ ನೀರು ಚರ್ಮದ ಭಾಗಗಳಲ್ಲಿ ಕಂಡುಬರುವ ಫ್ರೀ ರಾಡಿಕಲ್ ಅಂಶಗಳನ್ನು ಹೋಗಲಾಡಿಸುತ್ತದೆ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ದೂರ ಮಾಡಲು ಇದು ಸಹಾಯ ಮಾಡುತ್ತದೆ ಚರ್ಮದ ಸೊಕ್ಕನ್ನು ಹೋಗಲಾಡಿಸಲು ನೆರವಾಗುತ್ತದೆ. ಉಗುರು ಬೆಚ್ಚಗಿನ ನೀರು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

Influential people planning to encroach on government cattle ranch - villagers oppose

ಕೊಪ್ಪಳ: ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಮತ್ತು ಗೋಮಾಳ ಪ್ರದೇಶವನ್ನು ಪ್ರಭಾವಿಗಳು ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದು, ಜಿಲ್ಲಾಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಶತಮಾನಗಳಿಂದಲೂ ಶಹಪುರ ಗ್ರಾಮದ ಉತ್ತರ-ಈಶಾನ್ಯ ದಿಕ್ಕಿನಲ್ಲಿರುವ ಸವುಳು ಹಳ್ಳದ ಕೆರೆ ಮತ್ತು ಸರ್ಕಾರಿ ಗೋಮಾಳ ಈ ಗ್ರಾಮದ ದನ, ಕುರಿ, ಆಡು, ಎತ್ತು, ಎಮ್ಮೆಗಳಿಗೆ ಆಸರೆಯಾಗಿದೆ. ದನ ಮತ್ತು ಕುರಿಗಾಹಿಗಳು ಕೆರೆಯ ದಡದಲ್ಲಿನ ಗೋಮಾಳದಲ್ಲಿ ಶತಮಾನಗಳಿಂದಲೂ ಬೀಡು ಬಿಟ್ಟಿದ್ದಾರೆ. ಗ್ರಾಮಕ್ಕೆ ಇದೊಂದೇ ಜಲಮೂಲ ಮತ್ತು ಆಸರೆ ಆಗಿರುವುದರಿಂದ ಅನೇಕ ಕುಟುಂಬಗಳು ಇದನ್ನೇ ಆಶ್ರಯಿಸಿವೆ. ಕೋಳಿ ಫಾರಂ ಉದ್ಯಮ ನಡೆಸುವ ಶ್ರೀಧರ್ ಎನ್ನುವ ಪ್ರಭಾವಿ ವ್ಯಕ್ತಿ ಸವುಳು ಹಳ್ಳದ ಕೆರೆ ಪಕ್ಕದಲ್ಲಿ ಅನ್ಯರ ಜಮೀನು ಖರೀದಿಸಿದ್ದಾರೆ. ಇದರ ನೆಪದಲ್ಲಿಯೇ ಸವುಳು ಹಳ್ಳದ ಕೆರೆಯ ವ್ಯಾಪ್ತಿಯ ಸುಮಾರು ೪೦ ಎಕರೆ ಜಮೀನನನ್ನು ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ತುಳಸಿ ಮದ್ದಿನೇನಿ ಅವರ ಅವಧಿಯಲ್ಲಿ ಅತಿಕ್ರಮಣ ಮಾಡಲು ಮುಂದಾಗಿದ್ದ ಶ್ರೀಧರ್ ವಿರುದ್ಧ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಅಂದಿನ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದರು. ಅಂದಿನಿAದ ಗಾಯಬ್ ಆಗಿದ್ದ ಶ್ರೀಧರ್ ಎನ್ನುವ ವ್ಯಕ್ತಿ ಇದೀಗ ತಮ್ಮ ಹಿಂಬಾಲಕರನ್ನು ಮುಂದೆ ಬಿಟ್ಟು ಮತ್ತೆ ಸರ್ಕಾರಿ ಗೋಮಾಳ ಅತಿಕ್ರಮಣ ಮಾಡುವ ಹುನ್ನಾರ ನಡೆಸಿದ್ದಾರೆ. ಕುರಿ ಮತ್ತು ದನಗಾಹಿಗಳು ಮೇಯಿಸಲು ಅಡವಿಗೆ ತೆರಳುವ ಸಂದರ್ಭದಲ್ಲಿ ಹೊಂಚು ಹಾಕಿ ಗೋಮಾಳ ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ವಿಷಯ ಗೊತ್ತಾದ ಕೂಡಲೇ `ಸವುಳು ಹಳ್ಳದ ಕೆರೆ ಅಭಿವೃದ್ಧಿ’ ಸಮಿತಿಯ ಪದಾಧಿಕಾರಿಗಳು ಮುನಿರಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಟ್ರಾಕ್ಟರ್ ನಿಂದ ಅತಿಕ್ರಮಣ ಮಾಡಿ, ಗೋಮಾಳ ಜಾಗೆಯಲ್ಲಿ ಮಣ್ಣು ಸಮ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಯವರು ಆಗಮಿಸಿ ತೆರವುಗೊಳಿಸಿದ್ದಾರೆ.
ಈ ಭಾಗದಲ್ಲಿ ಪ್ರಭಾವಿಗಳ ಮತ್ತು ಉದ್ಯಮಿಗಳಿಂದ ಗೋಮಾಳ ಮತ್ತು ಕೆರೆ ಅತಿಕ್ರಮಣ ಮಾಡುವ ಹುನ್ನಾರ ನಡೆಯುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆರೆ ಮತ್ತತು ಸುತ್ತಲಿನ ರೈತರ ಜಮೀನುಗಳನ್ನು ಅತಿಕ್ರಮಣ ಮಾಡುವ ದಂಧೆ ನಡೆಯುತ್ತಿದೆ. ಇದಕ್ಕೆ ಕಂದಾಯ ಅಧಿಕಾರಿಗಳ ಕುಮ್ಮಕ್ಕೂ ಇದೆ. ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕುರಿ ಮತ್ತು ದನಗಾಹಿಗಳಿಗೆ ನೆರವಾಗಬೇಕು. ಸರ್ಕಾರಿ ಸ್ವಾಮ್ಯದ ಸವುಳು ಹಳ್ಳದ ಕೆರೆ ಮತ್ತು ಗೋಮಾಳ ಜಾಗೆಯನ್ನು ಯಥಾವತ್ತಾಗಿ ಕಾಪಾಡಬೇಕೆಂದು `ಸವುಳು ಹಳ್ಳದ ಕೆರೆ ಅಭಿವೃದ್ಧಿ ಸಮಿತಿ’ ಯ ಅಧ್ಯಕ್ಷರಾದ ಮಂಜುನಾಥ ರಾಟಿ, ಉಪಾಧ್ಯಕ್ಷರಾದ ಸುರೇಶ್ ಪಾಟೀಲ್, ಕಾರ್ಯದರ್ಶಿ ಅಮರೇಶ ಕಟ್ಟಿಮನಿ, ಸದಸ್ಯರಾದ ವೀರಣ್ಣ ಕೋಮಲಾಪುರ, ಗ್ರಾಮದ ಧುರೀಣರಾದ ಮಲ್ಲಿಕಾರ್ಜುನ ಕುರಿ, ನಿಂಗಜ್ಜ ಚೌಧರಿ ಮತ್ತಿತರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ಪ್ರೊ. ಡಾ|| ಅನ್ನಪೂರ್ಣ ಅವರನ ಸಮಿತಿಯನ್ನು ನೇಮಕ ಮಾಡಿದರು

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ
Protest at Freedom Park on March 16th, demanding that the Centre recommend inclusion of the Madiwala community in the Scheduled Caste category
ಬೆಂಗಳೂರು,ಮಾ.2: ತಲತಲಾಂತರದಿಂದಲೂ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾ. 16 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಮತ್ತು ಉತ್ತರ ಕರ್ನಾಟಕ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಕೆ. ಹನುಮಂತಪ್ಪ, ದೇಶದ 17 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ.
ಮಡಿವಾಳ ಸಮಾಜದ ಹಲವು ದಶಕಗಳ ಹೋರಾಟಕ್ಕೆ 2009 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ಪ್ರೊ. ಡಾ|| ಅನ್ನಪೂರ್ಣ ಅವರನ ಸಮಿತಿಯನ್ನು ನೇಮಕ ಮಾಡಿದರು. ಅದರಂತೆ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಆದರೆ ವರದಿ ಅನುಷ್ಠಾನವಾಗಿಲ್ಲ ಎಂದರು.

ಕಳೆದ 2011 ರಿಂದ ಪ್ರತಿ ವರ್ಷವು ಸತತವಾಗಿ ಎಲ್ಲಾ ಸರ್ಕಾರಗಳಿಗೂ ನಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿಕೊಂಡು ಬರುತ್ತಿದ್ದೇವೆ. 2022ರಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಸುವ ಸಲುವಾಗಿ ಕಡತವನ್ನು ಸಚಿವ ಸಂಪುಟಕ್ಕೆ ಮಂಡಿಸಲು ಸಜ್ಜಾಗಿದ್ದರು. ಆದರೆ ಆಗ ಮುಖ್ಯಮಂತ್ರಿಗಳ ಅನುಮೋದನೆ ಮಾತ್ರ ಬಾಕಿ ಇತ್ತು.
ಆದರೆ ಈ ಕನಸು ಕೈಗೂಡದೇ ಮತ್ತೆ ಮಡಿವಾಳ ಸಮಾಜಕ್ಕೆ ಅನ್ಯಾಯವಾಯಿತು ಎಂದರು.2025ರಲ್ಲಿ ಸಮಾಜದ ಜಗದ್ಗುರು ಡಾ. ಬಸವಮಾಚಿದೇವ ಸ್ವಾಮಿಜಿ ಹಾಗೂ ಮುಕ್ತಾನಂದ ಸ್ವಾಮಿಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ 19 ಮಂತ್ರಿಗಳು 137 ಶಾಸಕರುಗಳಿಂದ ಸರ್ಕಾರಕ್ಕೆ ಶಿಫಾರಸ್ಸು ಪತ್ರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ.
ಆದ್ದರಿಂದ ಈ ಮುಂಬರುವ ಅದಿವೇಶನದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಬೆಳಿಗ್ಗೆ 8ರಿಂದ ಫ್ರೀಡಂ ಪಾರ್ಕ್ಲ್ಲಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.
ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ ಭಾಗದಿಂದ ಹೆಚ್ಚಿನ ಮಡಿವಾಳರು ಆಗಮಿಸಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಮಲ್ಲೇಶ್, ಉಪಾಧ್ಯಕ್ಷರಾದ ಬಿ. ಬಸವಶೆಟ್ಟಿ, ಕೆ.ಸಿ. ರವೀಂದ್ರ, ಹಿರಣ್ಯಪ್ಪ ಕುಂಬ್ರಿ, ಟಿ. ಕುಮಾರ ಸ್ವಾಮಿ, ಖಜಾಂಚಿ ಎಸ್. ಧನರಾಜ್, ಜಿಲ್ಲಾಧ್ಯಕ್ಷ ಎನ್. ಚಂದ್ರಶೇಖರ್ ಮತ್ತಿರರರು ಉಪಸ್ಥಿತರಿದ್ದರು
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

Everyone's role is very important in preventing child marriage - Justice Mahantesh Dargad

ಕೊಪ್ಪಳ ಮಾರ್ಚ್ 02 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರ ಪಾತ್ರ ಬಹು ಮುಖ್ಯವಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ್ ಅವರು ಹೇಳಿದರು.
ಬಾಲ್ಯ ವಿವಾಹ ಮುಕ್ತ ಭಾರತಕ್ಕಾಗಿ ಹಮ್ಮಿಕೊಂಡಿರುವ 100 ದಿನಗಳ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098/112 ಹಾಗೂ ಸ್ಪಂದನ ಆಸೋಶಿಯೇಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಬಾಲ್ಯವು ಅತ್ಯಮೂಲ್ಯವಾದದ್ದು, 18 ವರ್ಷದೊಳಗಿನ ಮಕ್ಕಳಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯು ತೀವ್ರವಾಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಅವರ ಹಕ್ಕುಗಳನ್ನು ಅನುಭವಿಸುವಂತಹ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹವನ್ನು ಮಾಡಿದರೆ ಅವರ ಬೆಳವಣಿಗೆ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಇದಕ್ಕಾಗಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ-2016ರ ಕಾಯ್ದೆಗಳು ಜಾರಿಯಲ್ಲಿವೆ ಎಂದರು.
ಬಾಲ್ಯ ವಿವಾಹ ಒಂದು ಶಿಕ್ಷಾರ್ಹ ಅಪರಾಧ, ಅದು ಯಾರ ಗಮನಕ್ಕೆ ಬರುತ್ತದೆಯೊ ಅವರು, ಅದನ್ನು ತಡೆಗಟ್ಟುವುದು ಅವರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಬಾಲ್ಯವಿವಾಹವನ್ನು ನೆರವೇರಿಸಿದ, ಪ್ರೋತ್ಸಾಹಿಸಿದ ಮತ್ತು ಪಾಲ್ಗೊಂಡವರಿಗೂ ಸಹ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು, ಯಾರು ಸಹ ಬಾಲ್ಯ ವಿವಾಹಗಳಲ್ಲಿ ಭಾಗವಹಿಸಬೇಡಿ ಮತ್ತು ಯಾವುದೇ ರೀತಿಯ ಬಾಲ್ಯವಿವಾಹಗಳಿಗೆ ಅವಕಾಶವನ್ನು ನೀಡಬಾರದು. ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವವೂ ತುಂಬಾ ಅತ್ಯವಶ್ಯಕವಾಗಿದ್ದು, ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಜನ ಸಮುದಾಯದಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.
ಬೆಳಗಾವಿಯ ಸ್ಪಂದನ ಆಸೋಶಿಯೇಷನ್ ಸಂಸ್ಥೆಯ ಕಾರ್ಯದರ್ಶಿ ವಿ.ಸುಶೀಲಾ ಅವರು ಮಾತನಾಡಿ, 2024ರ ನವೆಂಬರ್ 27 ರಂದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯವು `ಬಾಲ್ಯ ವಿವಾಹ ಮುಕ್ತ ಭಾರತ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಿಂದ ಬಾಲ್ಯ ವಿವಾಹಗಳ ಸಂಖ್ಯೆ ತುಂಬಾ ಕಡಿಮೆಯಾಗುತ್ತಾ ಬಂದಿದೆ. 2030ಕ್ಕೆ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡಬೇಕು. ಬಾಲ್ಯ ವಿವಾಹ ಕುರಿತು ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಧಿಕಾರಿಗಳು, ಮಕ್ಕಳು, ಸಾರ್ವಜನಿಕರು ಪ್ರತಿಯೊಬ್ಬರು ಸೇರಿ ಬಾಲ್ಯ ವಿವಾಹ ಮುಕ್ತ ಮಾಡುವಲ್ಲಿ ಕೈಜೋಡಿಸಬೇಕು. ಬಾಲ್ಯ ವಿವಾಹ ಮುಕ್ತ ರಥ ವಾಹನವು ಕೊಪ್ಪಳ ಜಿಲ್ಯಾದಂತ ಒಂದು ವಾರ ಸಂಚಾರಿಸಲಿದ್ದು ಸುಮಾರು 50 ರಿಂದ 60 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಹೇಮಂತ್ ಕುಮಾರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿ.ಬಿ ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಪಂದನ ಸಂಸ್ಥೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

50 thousand to gram panchayat officials who delayed providing information - B. Venkatasingh

ಕೊಪ್ಪಳ ಮಾರ್ಚ್ 02 (ಕರ್ನಾಟಕ ವಾರ್ತೆ): ಸಕಾಲಕ್ಕೆ ಮಾಹಿತಿ ನೀಡಿದೆ ನಿರ್ಲಕ್ಷ್ಯ ವಹಿಸಿದ ಒಬ್ಬ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಮೂವರು ಗ್ರಾಮ ಪಂಚಾಯತ ಕಾರ್ಯದರ್ಶಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ ಸಿಂಗ್ ಅವರು ತಲಾ 10,000/- ಸಾವಿರ ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡಿದೆ ಇರುವುದರಿಂದ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಸಲ್ಲಿಸಿದ ದ್ವೀತಿಯ ಮೇಲ್ಮವಿ ವಿಚಾರಣೆ ನಡೆಸಿದಾಗ ಮೇಲ್ಮನವಿದಾರರಿಗೆ ಮಾಹಿತಿ ನೀಡುವಂತೆ ಪ್ರತಿವಾದಿಗಳಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತ ಕಾರ್ಯದರ್ಶಗಳಿಗೆ ಪೀಠ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 18(3) ಎ,ಡಿ ರಡಿ ನಿರ್ದೇಶನ ನೀಡಿ, ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1) ರಡಿ ದಂಡದ ಎಚ್ಚರಿಕೆ ನೀಡಿದರೂ ಪೀಠದ ಆದೇಶ ಪಾಲನೆ ಮಾಡದ ಕಾರಣ ಪ್ರತಿವಾದಿ ಅಧಿಕಾರಿಗಳಾದ ವಡಗೇರಾ ತಾಲ್ಲೂಕಿನ ತಡಬಿಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಯಂಕನಗೌಡ, ಗುಂಡಗುರ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯಕ್, ಯಾದಗಿರಿ ತಾಲ್ಲೂಕಿನ ಸೈದಾಪೂರ ಗ್ರಾಮ ಪಂಚಾಯತ ಕಾರ್ಯದರ್ಶಿ ಇಸ್ಮಾಯಿಲ್, ಇವರಿಗೆ ಹಾಗೂ ವಿಜನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ತಾಡರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ದೊಡ್ಡಮನಿ ಅವರಿಗೆ ತಲಾ 10,000/- ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಮಾಡಲಾಗಿದೆ.
ಪ್ರಕರಣದಲ್ಲಿ ಸೈದಾಪೂರ ಗ್ರಾಮ ಪಂಚಾಯತ ಕಾರ್ಯದರ್ಶಿ ಇಸ್ಮಾಯಿಲ್ ಅವರಿಗೆ ಎರಡು ಪ್ರತ್ಯೇಕ ಪ್ರಕಾರಣದಲ್ಲಿ ತಲಾ 10,000/- ಸಾವಿರ ಸೇರಿ 20,000/- ಸಾವಿರ ದಂಡ ವಿಧಿಸಿದೆ ಹಾಗೂ ಮೇಲ್ಮನವಿದಾರಿಗೆ ಮಾಹಿತಿ ನೀಡಲು ಮಾಡಿದ ವಿಳಂಬಕ್ಕಾಗಿ ಮೇಲ್ಮನವಿದಾರರಿಗೆ ರೂ.3000/- ಸಾವಿರ ಪರಿಹಾರ ನೀಡುವಂತೆ ತಡಬಿಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಯಂಕನಗೌಡ ಇವರಿಗೆ ಆದೇಶ ಮಾಡಲಾಗಿದೆ.
ಒಟ್ಟು ಐದು ಪ್ರಕರಣಗಳಲ್ಲಿ ಪ್ರತಿವಾದಿಯವರಿಗೆ 50,000/- ಸಾವಿರ ದಂಡ ವಿಧಿಸಿದ್ದು, ಸದರಿ ದಂಡ ಪಾವತಿ ಮಾಡಿ ಮುಂದಿನ ವಿಚಾರಣೆಗೆ ಹಾಜರಾಗಲು ಪುನಃ ಎಚ್ಚರಿಕೆ ನೀಡಿದೆ.
ಹೋಳಿ ಹಬ್ಬ: ಮಾರ್ಚ್ 4ರ ವರೆಗೆ ಮದ್ಯ ಮಾರಾಟ ನಿಷೇಧ
ಹೋಳಿ ಹಬ್ಬ: ಮಾರ್ಚ್ 4ರ ವರೆಗೆ ಮದ್ಯ ಮಾರಾಟ ನಿಷೇಧ

Holi festival: Sale of liquor banned till March 4

ಕೊಪ್ಪಳ ಮಾರ್ಚ್ 02 (ಕರ್ನಾಟಕ ವಾರ್ತೆ): ಹೋಳಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮಾರ್ಚ್ 4ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಮಾರ್ಚ್ 3 ರಿಂದ 4ರ ವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಕಾಮದಹನ ಮತ್ತು ಹೋಳಿ ಹಬ್ಬದ ಸಮಯದಲ್ಲಿ ಶಾಂತತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಿಗೊಳಪಟ್ಟಂತೆ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂಬ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕೋರಿಕೆ ಮೇರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 21 ರನ್ವಯ ಕೊಪ್ಪಳ ಜಿಲ್ಲೆಯ ಅಳವಂಡಿ, ಹನುಮಸಾಗರ ಮತ್ತು ಯಲಬುರ್ಗಾ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾ. 2ರ ಸಂಜೆ 6 ಗಂಟೆಯಿಂದ ಮಾ. 3ರ ಮಧ್ಯರಾತ್ರಿಯವರೆಗೆ ಮದ್ಯಮಾರಾಟವನ್ನು ನಿಷೇಧಿಸಿದೆ. ಅದೇ ರೀತಿ ಈ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿ ಹೊರತುಪಡಿಸಿ ಕೊಪ್ಪಳ ಜಿಲ್ಲೆಯಾದ್ಯಂತ ಮಾ. 3ರ ಸಂಜೆ 6 ಗಂಟೆಯಿಂದ ಮಾ. 4ರ ಮಧ್ಯರಾತ್ರಿಯವರೆಗೆ ಮದ್ಯಮಾರಾಟವನ್ನು ನಿಷೇಧಿಸಲಾಗಿದೆ.
ಈ ವಿಷಯವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕರ ವೃತ್ತ ನಿರೀಕ್ಷಕರು ಹಾಗೂ ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಆದೇಶದಲ್ಲಿ ತಿಳಿಸಿದ್ದಾರೆ.
ಸಿಪಿಐಎಂ ಪಕ್ಷದ ಹಿರಿಯ ನಾಯಕರಾದ ಶ್ರೀ ನಿತ್ಯಾನಂದ ಸ್ವಾಮಿ ನಿಧನ
Senior CPI(M) leader Sri Nithyananda Swami passes away

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಿಪಿಐಎಂ ಪಕ್ಷದ ಹಿರಿಯ ನಾಯಕರಾದ ಶ್ರೀ ನಿತ್ಯಾನಂದ ಸ್ವಾಮಿ ಅವರು ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಶ್ರೀಯುತರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಶ್ರೀ ನಿತ್ಯಾನಂದ ಸ್ವಾಮಿಯವರು ನಿಧನ ರಾಗಿದ್ದರ ಹಿನ್ನೆಲೆಯಲ್ಲಿ ಗಂಗಾವತಿಯ ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು ಸಿಪಿಐಎಂ ನಾಯಕರುಗಳಾದ ನಿರುಪಾದಿ ಬೆಣಕಲ್ ಬಸವರಾಜ್ ಮರಕುಂಬಿ ಹುಸೇನಪ್ಪ ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಲಿಂಗರಾಜ್ ಕ್ಯಾಂಪ್ ಹಾಗೂ ಮಂಜುನಾಥ್ ಅವರುಗಳು ಮಾತನಾಡಿ ನಾಯಕರಾಗಿದ್ದ ಶ್ರೀ ನಿತ್ಯಾನಂದ ಸ್ವಾಮಿಯವರು ಹಾಕಿಕೊಟ್ಟಿರುವ ಹೋರಾಟದಲ್ಲಿ ಸಿಪಿಐ ಎಂ ಪಕ್ಷವು ಮತ್ತು ಎಲ್ಲ ಪದಾಧಿಕಾರಿಗಳು ಮುನ್ನಡೆಯಲ್ಲಿದ್ದಾರೆ ಎಂದು ತಿಳಿಸಿದರು

ಲಿಂಗದಹಳ್ಳಿ ಇಂದು ಶ್ರೀ ಅಮರೇಶ್ವರ ರಥೋತ್ಸವ
ಲಿಂಗದಹಳ್ಳಿ ಇಂದು ಶ್ರೀ ಅಮರೇಶ್ವರ ರಥೋತ್ಸವ

Lingadahalli celebrates Sri Amareshwara Chariot Festival today

ಕುಷ್ಟಗಿ:ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಅಮರೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದಿನಾಂಕ 3/3/2026 ರಂದು ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಲಿದೆ ಮಹಾ ರಥೋತ್ಸವವನ್ನು ಬರುವ ಭಕ್ತರು ಕಣ್ತುಂಬಿಕೊಳ್ಳುವವರು ಗ್ರಾಮದ ಆರಾಧ್ಯ ದೇವರು, ಭಕ್ತರಿಗೆ ಕೇಳಿದ ವರವನ್ನು ಕೊಡುವ ಉದ್ಭವ ಲಿಂಗಮೂರ್ತಿಯಲ್ಲಿರುವ ಶ್ರೀ ಗುರು ಅಮರೇಶ್ವರ ದೇವರ ರಥೋತ್ಸವ ಮಂಗಳವಾರ ಹೋಳಿಹುಣ್ಣಿಮೆಯ ದಿನ ಸಾಂಪ್ರದಾಯಿಕವಾಗಿ ಅಮರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ವೈವಿಧ್ಯಮಯ ಹೂಗಳು, ರಜತ ಕವಚದ ಅಲಂಕಾರ, ಪೂಜಾ ಸಲ್ಲಿಸವುದರ ಮೂಲಕ ಪ್ರಾರಂಭವಾಗುತ್ತದೆ ಹಾಗೂ ಡೋಳ್ಳು ಕುಳಿತ ಭಜನೆ ಮಾಡುವ ಭಕ್ತರು ದೇವರಿಗೆ ಎರಡು ದಿನಗಳಕಾಲ ಭಕ್ತಿ ಸೇವೆ ಸಲ್ಲಿಸುವವರು.ನಂತರ 5:00 ಘಂಟಗೆ ಶ್ರೀ ಅಮರೇಶ್ವರ ದೇವರ ರಥೋತ್ಸವ ಜರಗವುದು.
ಭಕ್ತರ ಜನಸಾಗರ ಮಧ್ಯ ವಿಜೃಂಭಣೆಯಿಂದ ಜರಗಲಿದೆ ಹಾಗೂ ಜಾತ್ರೆ ಅಂಗವಾಗಿ ಸೋಮುವಾರ ಸೂರ್ಯೋದಯ ಸಮಯದಲ್ಲಿ ಪ್ರಾರಂಭವಾಗಿರುವ ಶಿವ ಸಪ್ತ ಭಜನೆ ಮಂಗಳವಾರ ಬೆಳ್ಳಿಗ್ಗೆ ಮುಕ್ತಾಯಗೊಳ್ಳುವದು ದೇವರಿಗೆ ಹರಿಕೆ ಹೊತ್ತುಕೊಂಡು ನೂರಾರು ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವರು ಮತ್ತು ಸುಮಾರು 14 ದಿನಗಳಿಂದ ಶ್ರೀ ಅಮರೇಶ್ವರ ದೇವರ ಕುರಿತು ನಡೆದು ಬಂದ ಪುರಾಣವನ್ನು 15 ನೇ ದಿನಕ್ಕೆ ಬುಧವಾರ ದಿನದಂದು ಮಹಾ ಮಂಗಲಗೊಳ್ಳವುದು ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ಜರುಗಲಿದ್ದು ಹಾಗೂ ಗ್ರಾಮದ ಕಲಾವಿದರು ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಹಾಡುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಎಲ್ಲಾ ಜಾತಿಗಳ ಮನುಷ್ಯರು ಒಂದೇ ಎಂದು ಸಾರಿದವರು ರೇಣುಕರು : ತಿಪ್ಪೇರುದ್ರಸ್ವಾಮಿ ವಕೀಲರು
ಎಲ್ಲಾ ಜಾತಿಗಳ ಮನುಷ್ಯರು ಒಂದೇ ಎಂದು ಸಾರಿದವರು ರೇಣುಕರು : ತಿಪ್ಪೇರುದ್ರಸ್ವಾಮಿ ವಕೀಲರು

Renukas were the ones who preached that all castes are the same: Thipperudraswamy, advocate

ಗಂಗಾವತಿ : ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಮನುಕುಲಕ್ಕೆ ಅತ್ಯಂತ ಹತ್ತಿರವಾದ ವಿಷಯವಾಗಿದೆ. ಎಲ್ಲಾ ಜಾತಿಗಳ ಮನುಷ್ಯರು ಒಂದೇ ಎಂದು ಸಾರಿದವರು ರೇಣುಕರು ಎಂದು ಜಂಗಮ ಸಮಾಜದ ಹಿರಿಯ ಮುಖಂಡರು ಮಾಜಿ ಕಾಡಾ ಅಧ್ಯಕ್ಷರಾದ ಬಿ.ಹೆಚ್.ಎಂ.ತಿಪ್ಪೇರುದ್ರಸ್ವಾಮಿ ವಕೀಲರು ಹೇಳಿದರು.
ಅವರು ನಗರದ ಶ್ರೀ ಚನ್ನಬಸವ ಮಲ್ಲಿಕಾರ್ಜುನ ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವದಲ್ಲಿ ಪಾಲ್ಗೋಂಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ನಂತರ ಬಿಜೆಪಿ ಪಕ್ಷದ ರೈತ ಮೋರ್ಚಾ ನಗರ ಘಟಕ ಅಧ್ಯಕ್ಷ ಮಹಾಂತೇಶ ಶಾಸ್ತ್ರಿಮಠ ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರು. ಇವರ ತತ್ವ ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಇವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣಗಳು ಮತ್ತು ಗ್ರಂಥಗಳಿವೆ ಎಂದರು.
ಜಗದ್ಗುರು ರೇಣುಕಾಚಾರ್ಯರು ಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾನ್ ಶರಣ ಅವರ ಬದುಕು ಮತ್ತು ತತ್ವಗಳು ಕನ್ನಡ ಸಮಾಜಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮನೋಹರಸ್ವಮಿ ಹಿರೇಮಠ, ಸಂಗಯ್ಯಸ್ವಾಮಿ ಸಂಶಿಮಠ, ಶಂಕ್ರಯ್ಯಸ್ವಾಮಿ ಹಿರೇಮಠ,ಮಲ್ಲಯ್ಯಸ್ವಾಮಿ ಹಿರೇಮಠ, ಹಕ್ಕಿ ಪ್ರಕಾಶ, ರುದ್ರಯ್ಯಸ್ವಾಮಿ ಹಿರೇಮಠ, ಸಿದ್ರಾಮಯ್ಯಸ್ವಾಮಿ,ಶಿವಕುಮಾರಸ್ವಾಮಿ.ಸಂಗಯ್ಯಸ್ವಾಮಿ, ಕೋಟೆ ಸಂಗಮೇಶ,ಸಿಂಗನಾಳ ಸಾಹುಕಾರ್, ಶರಣ ಸೇರಿದಂತೆ ಅನೇಕರು ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿದ್ದರು.
ತ್ರಿವಳಿ ಜಿಲ್ಲಾ ಮಟ್ಟದ ಕವನ ಸ್ಪರ್ಧೆ
ತ್ರಿವಳಿ ಜಿಲ್ಲಾ ಮಟ್ಟದ ಕವನ ಸ್ಪರ್ಧೆ

Tri-district level poetry competition

ಗಂಗಾವತಿ : ದಿವಂಗತ ಪಿ.ಮುರುಗೇಶ, ದಿವಂಗತ ಮಧುರ ಸ್ಮರಣಾರ್ಥ ತ್ರಿವಳಿ ಜಿಲ್ಲಾ(ಕೊಪ್ಪಳ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು) ಮಟ್ಟದ ಸ್ವರಚಿತ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸ್ಪರ್ಧೆ ಆಯೋಜಿಸಿದ್ದು ಕವಿ ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಿದೆ.
30 ಸಾಲುಗಳ ಒಳಗಿರುವ ಕವನ ಟೈಪ್ ಮಾಡಿ ಹೆಸರು, ಸಂಪರ್ಕ ದೂರವಾಣಿ, ಪೋಟೋ ಜೊತೆ ಮಾ.20 ಒಳಗೆ 6366694264 ಸಂಖ್ಯೆಗೆ ವಾಟ್ಸಾಪ್ ನಲ್ಲಿ ಕಳಿಸಬೇಕು.
ಸ್ಪರ್ಧೆಗೆ 100ರೂ. ಶುಲ್ಕವಿದ್ದು 8105990065(ಕೃಷ್ಣ) ಸಂಖ್ಯೆಗೆ ಫೋನ್ ಫೇ ಮಾಡಬೇಕು.
ವಿಜೇತರಿಗೆ 1001ರೂ. ನಗದು, ಫಲಕ, ಪ್ರಶಸ್ತಿ ಪತ್ರ (ಪ್ರಥಮ), 751ರೂ. ನಗದು, ಫಲಕ, ಪ್ರಶಸ್ತಿ ಪತ್ರ (ದ್ವಿತೀಯ), 501ರೂ. ನಗದು, ಫಲಕ, ಪ್ರಶಸ್ತಿ ಪತ್ರ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಮೂರು ಜಿಲ್ಲೆಗಳ ಕವಿ ಕವಯಿತ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧ್ಯಕ್ಷ ಎಂ.ಪರಶುರಾಮ ಪ್ರಿಯ ಮನವಿ ಮಾಡಿದ್ದಾರೆ.

ವೈದ್ಯಕೀಯ ವೃತ್ತಿ ಪವಿತ್ರವಾದ ಕ್ಷೇತ್ರ – ಲಿಂಗರಾಜ್ ಟಿ
The medical profession is a sacred field - Lingarajti

ವೈದ್ಯಕೀಯ ವೃತ್ತಿ ಪವಿತ್ರವಾದ ಕ್ಷೇತ್ರ – ಲಿಂಗರಾಜ್ ಟಿ

ಗಂಗಾವತಿ, ವೈದ್ಯಕೀಯ ವೃತ್ತಿ ಪವಿತ್ರ ವಾದದ್ದು, ವೈದ್ಯ ವಿದ್ಯಾರ್ಥಿಗಳು ಗುಣ ಮಟ್ಟದ ಶಿಕ್ಷಣ ಪಡೆದು ಸಮಾಜ ಸೇವೆಯಲ್ಲಿ ತೊಡಗ ಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ ಲಿಂಗರಾಜ್ ಟಿ ಕರೆ ನೀಡಿದರು. ನಗರದ ಅಮರ್ ಗಾರ್ಡ್ ನಲ್ಲಿ ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸ್ಫೂರ್ತಿ ಕಲರವ ಎನ್ನುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ ದರು.
ಪ್ರಸ್ತುತ ವರ್ಷ 96 ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ಹೋಗುತ್ತಿದ್ದೀರಿ, ನಿಮ್ಮ ಮುಂದಿನ ಭವಿಷ್ಯದ ಕಡೆಗೆ ಗಮನಹರಿಸ ಬೇಕೆಂದು ತಿಳಿಸಿದ ಅವರು ವೈದ್ಯರಲ್ಲಿ ನಡತೆ, ಪ್ರಮಾಣಿಕತೆ ಇರ ಬೇಕು ಅಂದಾಗ ಮಾತ್ರ ಯಶಸ್ಸಿ ಯಾಗಲು ಸಾದ್ಯವಾ ಗುತ್ತದೆ ಎಂದರು.
ಸ್ಪೂರ್ತಿ ಶಿಕ್ಷಣ ಸಂಸ್ಥೆಯು ವಿವಿಧ ಕೋರ್ಸುಗಳನ್ನು ಪ್ರಾರಂಭಿಸಿ ನಗರ ಸೇರಿದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಸಂಸ್ಥೆಯ
ಮುಖ್ಯಸ್ಥರಾದ ಡಾ. ಈಶ್ವರ ಸವಡಿ ಮತ್ತು ಡಾ. ಬಸವರಾಜ್ ಸವಡಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಡಿವೈಎಸ್ಪಿ ಜಾಯಪ್ಪ ನ್ಯಾಮ ಗೌಡ ಮಾತನಾಡಿ ವಿದ್ಯಾರ್ಥಿಗಳು ರೋಗಿಗಳ ಕಾಯಿಲೆಯನ್ನು ಅವ ಲೋ ಕಿಸಿ ಅವರಿಗೆ ಸರಿಯಾದ ಚಿಕಿತ್ಸೆ ಕೊಡುವದರ ಮೂಲಕ ಆರೋಗ್ಯ ವಂತರನ್ನಾಗಿ ಮಾಡುವ ಕಾರ್ಯಕ್ಕೆ ಮುಂದಾಗ ಬೇಕೆಂದರು. ಹೆಚ್ಚಿನ ಆಸೆ, ಆಮೀಷಕ್ಕೆ ಒಳಗಾಗದೆ ವೈದ್ಯ ವೃತ್ತಿಗೆ ಕೀರ್ತಿ ತರ ಬೇಕೆಂದರು. ಪ್ರಾಸ್ತಾವಿಕವಾಗಿ ಡಾ.ಈಶ್ವರ ಸವಡಿ ಮಾತನಾಡಿ ಕಾಲೇಜಿನ ಬೆಳವಣಿಗೆ ಮತ್ತು ಸೌಲಭ್ಯ. ಕುರಿತು ವಿವರಿಸಿದರು. ಅಧ್ಯಕ್ಷತೆಯನ್ನು ಸ್ಫೂರ್ತಿ ಸಮೂಹ ಸಂಸ್ಥೆಯ ಅದ್ಯಕ್ಷೆಯಾದ ನಿರ್ಮಲಾ ಡಾ. ಈಶ್ವರ ಸವಡಿ ವಹಿಸಿದ್ದರು.
ವೇದಿಕೆ ಮೇಲೆ ಉದ್ಯಮಿ ವಿರೂಪಾಕ್ಷಪ್ಪ ಮುಷ್ಟಿ, ಡಾ.ಉಮೇಶ ಪುರದ, ರವಿ ರಾಜಶೇಖರ್ ಸತೀಶ ರಾಯ್ಕರ್, ಡಾ.ಬಸವರಾಜ್ ಸವಡಿ, ಕವಿತಾ ಬಸವರಾಜ್ ಸವಡಿ, ಶಾಹೀದಾ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ವೀರರಾಣಿ ಬೆಳವಾಡಿ ಮಲ್ಲಮ್ಮನ ಉತ್ಸವ
Veerarani Belavadi Mallamma Festival
ವೀರರಾಣಿ ಬೆಳವಾಡಿ ಮಲ್ಲಮ್ಮನ ಉತ್ಸವ


ಬೆಳವಾಡಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಆಯೋಜಿಸಿದ್ದ
ವೀರರಾಣಿ ಬೆಳವಾಡಿ ಮಲ್ಲಮ್ಮನ ಉತ್ಸವ -2026 ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಬೆಳವಾಡಿಯಲ್ಲಿ ನಡೆಯಿತು
“ನಾಟ್ಯಾಂಕುರ ಪರ್ಫಾಮಿಂಗ್ ಆಟ್ಸ್” ಸಂಸ್ಥೆಯ ಗುರು ಬಿ. ನಾಗೇಶ್ ಶಿಷ್ಯವೃಂದದವರಿಂದ ನವಶಕ್ತಿ ವೈಭವ ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಬೆಳಗಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಪನಿರ್ದೇಶಕರಾದ ವಿದ್ಯಾವತಿ ಬಜಯಂತ್ರಿ ಅವರು ಕಲಾವಿದರನ್ನು ಗೌರವಿಸಲಾಯಿತು
ಸಿದ್ದೇಶ್ವರ ಮಹಾಸ್ವಾಮಿಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ ‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟಗಳ ಲೋಕಾರ್ಪಣೆ
Release of the volumes 'Vachanas of Allama Prabhu-Commentary', a translation of Allama Prabhu's Vachana-Nirvachana work by Siddeshwara Mahaswamy
ಸಿದ್ದೇಶ್ವರ ಮಹಾಸ್ವಾಮಿಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ ‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟಗಳ ಲೋಕಾರ್ಪಣೆ
ನಾಡಿನ ಶರಣರ ವಚನಗಳನ್ನು ಜಗತ್ತಿಗೆ ತಲುಪಿಸುವ ಕೆಲಸ ನಿರಂತರವಾಗಬೇಕು: ಸಚಿವ ಎಂ.ಬಿ. ಪಾಟೀಲ


ಬೆಂಗಳೂರು: ನಾಡಿನ ಶರಣರ ವಚನಗಳನ್ನು ಜಗತ್ತಿಗೆ ತಲುಪಿಸುವ ಕೆಲಸ ನಡೆಯುತ್ತಿದ್ದು, ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಕೆಲಸ ನಡೆಯಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ ‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನದಲ್ಲಿ ಗೂಡಾರ್ಥಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ಶರಣ ವಚನಗಳು ಜಗತ್ತಿನ ಚಿಂತಕರು, ದಾರ್ಶನಿಕರಿಗೆ ತಲುಪಬೇಕು. ಅಂತಹ ಮಹತ್ಕಾರ್ಯ ರಚನಾತ್ಮಕವಾಗಿ ನಡೆಯಬೇಕು ಎಂದು ಹೇಳಿದರು.
ಅಲ್ಲಮ ಪ್ರಭು ಶ್ರೇಷ್ಠ ವಚನಕಾರರು. ಅವರು ಎಲ್ಲಿಯೂ ನಿಲ್ಲದೇ, ಯಾವುದೇ ಪ್ರಭಾವಕ್ಕೂ ಒಳಗಾದೇ ದೇಶ ಸಂಚಾರ ಮಾಡಿದವರು. ಇಂತಹದ್ದನ್ನು ವಿಜಯಪುರದ ಸಿದ್ದೇಶ್ವರ ಮಹಾಸ್ವಾಮಿಗಳಲ್ಲಿ ಕಾಣಬಹುದಾಗಿದ್ದು, ಇವರು ಶತಮಾನದ ಸಂತರು. ಜಗತ್ತಿನ ಎಲ್ಲಾ ಚಿಂತಕರು, ಎಲ್ಲಾ ನಾಯಕರ ಬಗ್ಗೆ ತಿಳಿವಳಿಕೆ ಪಡೆದುಕೊಂಡವರು. ಅಲ್ಲಮ ಪ್ರಭುಗಳ ವಚನ ಸಂಕೀರ್ಣವಾದದ್ದು. ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅಲ್ಲಮನ ಬಗ್ಗೆ ಅಪಾರ ಗೌರವ, ಸಿದ್ಧಪ್ಪಾಜಿ ಅವರ ಅಂತಿಮ ಪತ್ರದಲ್ಲಿ ಅಲ್ಲಮ ಪ್ರಭುಗಳ ವಚನವನ್ನು ಉಲ್ಲೇಖಿಸಿದ್ದಾರೆ. ವಚನಗಳನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಸುತ್ತೂರು ಮಠದ ದೇಶೀಕೇಂದ್ರ ಸ್ವಾಮೀಜಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಶರಣರ ವಚನಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತೇವೆ ಎಂದರು.
ಸಿದ್ದೇಶ್ವರ ಸ್ವಾಮೀಜಿ ಅವರು ಮೈಸೂರು ಮಾತ್ರವಲ್ಲ ದೇಶ, ವಿದೇಶಗಳಿಗೆ ತಲುಪುವಂತೆ ಸುತ್ತೂರು ಸ್ವಾಮೀಜಿ ಅವರು ಮಾಡಿದ್ದಾರೆ. ಭಗವಂತ ಒಳ್ಳೆಯ ಭೂಮಿ, ಒಳ್ಳೆಯ ಬಿಸಿಲು ಕೊಟ್ಟಿದ್ದಾರೆ. ಇಲ್ಲಿ ಒಂದು ಬೊಗಸೆ ನೀರು ಕೊಡುವಂತೆ ಹೇಳಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರಿಂದ ಪ್ರೇರಣೆ ಪಡೆದ ತಾವು ಮೊದಲ ಬಾರಿಗೆ ಶಾಸಕರಾಗಿದ್ದಾಗ ಜಲ ಕ್ರಾಂತಿಗೆ ಚಾಲನೆ ನೀಡಿದೆ. ಇದರ ಪರಿಣಾಮ ವಿಜಯಪುರ ನೀರಾವರಿ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸಿದೆ. ಸಿದ್ದೇಶ್ವರ ಸ್ವಾಮೀಜಿ ಅವರು ಯಾವುದೇ ಸ್ಥಾವರಕ್ಕೂ ನನ್ನ ಹೆಸರು ಇಡಬಾರದು ಎಂದು ಹೇಳಿದ್ದರು. ಅದನ್ನು ನಾವೆಲ್ಲರೂ ಪಾಲಿಸಿ ಅವರ ತತ್ವ ಚಿಂತನೆಗಳನ್ನು ಪರಿಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಕ್ಷೀತ್ ಶ್ರೀಪಾದ್, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಂಪುರ ಜಿ. ವೆಂಕಟೇಶ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ್. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಗೊ.ರು. ಚೆನ್ನಬಸಪ್ಪ, ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.
ಹನೂರು ಕ್ಷೇತ್ರದಲ್ಲಿ ಕೆಲವು ನಾಯಕರಿಂದ ಬಿಜೆಪಿ ಪಕ್ಷಕ್ಕೆ ನಷ್ಟ ವರಿಷ್ಠರು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಬೇಕು: ಆನಾಪುರ ಉಮೇಶ್
BJP party suffers losses due to some leaders in Hanur constituency, senior leaders should expose the confusion among workers: Anapur Umesh
ಹನೂರು ಕ್ಷೇತ್ರದಲ್ಲಿ ಕೆಲವು ನಾಯಕರಿಂದ ಬಿಜೆಪಿ ಪಕ್ಷಕ್ಕೆ ನಷ್ಟ ವರಿಷ್ಠರು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಬೇಕು: ಆನಾಪುರ ಉಮೇಶ್ .


ವರದಿ:ಬಂಗಾರಪ್ಪ .ಸಿ.
ಹನೂರು : ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಪಾರ ಪ್ರಮಾಣದಲ್ಲಿ ದುಡಿದ ಪ್ರಾಮಾಣಿಕ ಕಾರ್ಯಕರ್ತರ ಒಂದು ಪಡೆಯೆ ಇದೆ , ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಗೆಲುವ ತಂದುಕೊಡುವ ಕಾರ್ಯಕರ್ತರನ್ನು ಹುಟ್ಟುಹಾಕುವಂತೆ ಪಕ್ಷದ ವರಿಷ್ಠರು ಇತ್ತ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರು ಗಮನ ಹರಿಸಬೇಕು ,
ಅಲ್ಲದೆ ನಮ್ಮಲ್ಲಿ ನಾಯಕರಾದವರು ಸಹ ಕ್ಷೇತ್ರಗಳಲ್ಲಿ ಹೊರಗಿನವರ ಸಹವಾಸ ಬಿಟ್ಟು ಸ್ಥಳಿಯ ಮುಂಚೂಣಿ ನಾಯಕರ ಜೊತೆಯಲ್ಲಿ ಸೇರಿಕೊಂಡು ಕ್ಷೇತ್ರದ ಹಿತ ಕಾಪಡವಂತೆ ಮಾಡಬೇಕು. ಕಳೆದ ಚುನಾವಣೆಗಳಲ್ಲಿ ಗೆಲುವ ಕಾಣುವ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಅಪಪ್ರಚಾರ ಮಾಡಿ ಸೋಲುವಂತೆ ಕೆಲವರು ಮಾಡಿದ್ದಾರೆ, ಅದನ್ನು ಯಾರು ಮರೆಯಬಾರದು ಅಲ್ಲದೆ,ಇಂತಹವರನ್ನು ಕ್ಷೇತ್ರದ ಜನರು ಮರೆಯುವುದಿಲ್ಲ ,ವರಿಷ್ಠರು ಗಮನ ಹರಿಸಿ ಕ್ಷೇತ್ರದಿಂದ ದೂರವಿರಬೇಕು , ತಮ್ಮ ಪಕ್ಷದ ಕಾರ್ಯಕರ್ತರ ನೋವನ್ನು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರುಗಳಿಗೆ ತಿಳಿಸುವಂತೆ ಪತ್ರಿಕೆಗಳ ಮುಖಾಂತರ ಅನಾಪುರ ಉಮೇಶ್ ರವರು ತೋಡಿಕೊಂಡರು .ಇಂದಿನ ಪರಿಸ್ಥಿತಿಯಲ್ಲಿ ಒಬ್ಬ ಸಾಮನ್ಯ ಕಾರ್ಯಕರ್ತಗಿರುವ ಸಾಮಾನ್ಯ ಜ್ಞಾನದ ಮಟ್ಟಿಗೆ ಹೇಳುವುದಾದರೆ,ಪಕ್ಷದ ಉನ್ನತ ಮಟ್ಟದ ಮುಖಂಡರುಗಳು ಕ್ಷೇತ್ರದ ಬಗ್ಗೆ ಗಮನ ಹರಿಸಬೇಕಾಗಿದೆ ,ಮುಂದಿನ ದಿನಗಳಲ್ಲಿ ನಡೆಯುವ ಸ್ಥಳಿಯ ಮಟ್ಟದ ಚುನಾವಣೆಗಳಿಗೆ ಹೊರಗಿನ ನಾಯಕರುಗಳನ್ನು ದೂರಕ್ಕೆ ಸರಿಸಿ , ಸ್ಥಳಿಯ ನಾಯಕರುಗಳಿಗೆ ಜವಾಬ್ದಾರಿ ನೀಡಿ ಚುನಾವಣಾ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ನಿಲ್ಲಿಸಿ ಜಯಿಸಿ ಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿಯೆ ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲುವಿನತ್ತ ಕೊಡೊಯ್ಯಲು ಗಮನ ಹರಿಸ ಬೇಕಾಗಿದೆ , ಈಗಾಗಲೇ ನಮ್ಮ ಕಾರ್ಯಕರ್ತರು ದಿಕ್ಕಾಪಾಲಾಗಿದ್ದಾರೆ ಅವರನ್ನೆಲ್ಲ ಒಗ್ಗೂಡಿಸಿ ಮುಂದೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವ ಜವಾಬ್ದಾರಿಯು ನಮ್ಮದಾಗಿರುತ್ತದೆ ಎಂದು ಹಲವಾರು ಪ್ರಾಮಾಣಿಕ ಕಾರ್ಯಕರ್ತರು ತಿಳಿಸಿದರು .
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ಮತದಾರರಿದ್ದಾರೆ ಕಳೆದ ಎರಡು ಸಲವು ಬಹು ಸುಲಭವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲಬಹುದಾಗಿತ್ತು , ಬಿಜೆಪಿ ಪಕ್ಷದ ಆಂತರಿಕ ಕಚ್ಚಾಟವೆ ನಮ್ಮ ಸೋಲಿಗೆ ಕಾರಣ ,
ಹನೂರು ಕ್ಷೇತ್ರದಲ್ಲಿ ಸರಿಯಾದ ಮಂಡಲ ಅದ್ಯಕ್ಷರುಗಳಾಧಿಯಾಗಿ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿಲ್ಲ,
,ಇನ್ನು ಸಂಘಟನೆಯ ಕೊರತೆಯನ್ನು ತುಂಬಲು ಕಾರ್ಯಕರ್ತರು ಅಗಾದವಾಗಿ ಕಷ್ಟ ಪಡುವ ಸ್ಥಿತಿಯನ್ನು ನಿರ್ಮಾಣಮಾಡಲಾಗಿದೆ ,ಮುಂಚೂಣಿ ಘಟಕದಲ್ಲಿ ಕಾರ್ಯನಿರ್ವಹಿಸುವ ಇವರಕಾರ್ಯ ಅಲ್ಲೊಬ್ಬ ಇಲ್ಲೊಬ್ಬರು ನೋಡ್ತ ನಗ್ತಿದ್ದಾರೆ , ಆದರೆ ಪ್ರಾಮಾಣಿಕ ಕಾರ್ಯಕರ್ತರ ಕತೆ ಅಯೋಮಯವಾಗಲಿದೆ ಎಂದು ಬಿಜೇಪಿಯ ಮುಖಂಡರಾದ ಆನಾಪುರ ಉಮೇಶ್ ತಿಳಿಸಿದರು.
ಲಿಟಲ್ ಹಾರ್ಟ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಲಿಟಲ್ ಹಾರ್ಟ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

National Science Day celebration at Little Heart School

ಗಂಗಾವತಿ: ಸರ್ ಸಿ ವಿ ರಾಮನ್ ಅವರ ರಾಮನ್ ಪರಿಣಾಮ ಆವಿಷ್ಕಾರದ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಲಿಟಲ್ ಹಾರ್ಟ್ ಶಾಲೆಯಲ್ಲಿ 28ನೇ ಫೆಬ್ರವರಿ ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಆಲಂಪಲ್ಲಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಪ್ರೀಯಾಕುಮಾರಿ ಪೋಲಿನ ಹಾಗೂ ಶಾಲೆಯ ಎಲ್ಲ ವಿಜ್ಞಾನ ಶಿಕ್ಷಕಿಯರು ಉಪಸ್ಥಿತರಿದ್ದರು. ಮಕ್ಕಳು ಹಲವು ವಿಜ್ಞಾನಿಗಳು ಹಾಗೂ ವಿಜ್ಞಾನ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಹಾಗೆಯೇ ವಿಜ್ಞಾನ ಮಾದರಿಗಳು ಮತ್ತು ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಗಳು ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎನ್ನುವ ಸಂದೇಶವನ್ನು ಮಕ್ಕಳಿಗೆ ನೀಡಿದರು. ಹಾಗೆಯೇ ಮುಖ್ಯೋಪಾಧ್ಯಾಯನಿಯವರು ಮಕ್ಕಳಲ್ಲಿ ಕುತೂಹಲ ಹಾಗೂ ಪ್ರಶ್ನಾ ಮನೋಭಾವನೆ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಮತ್ತು ಶಾಲೆಯಲ್ಲಿ ನೂತನವಾಗಿ ನಿರ್ಮಿತವಾದ STEM Lab ನ ಸದ್ಬಳಕೆಯು ಇದನ್ನು ಪರಿಪೂರ್ಣಗೊಳಿಸುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳು Talk show ಮುಖಾಂತರ ಲ್ಯಾಬ್ ನ ಉಪಯೋಗವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಗೌರಿ, ಶ್ರೀಮತಿ ವಿದ್ಯಾ, ಶ್ರೀಮತಿ ಶ್ವೇತಾ, ಶ್ರೀಮತಿ ಉಷಾ, ಶ್ರೀಮತಿ ವಾಣಿಶ್ರೀ, ಕುಮಾರಿ ಶಾಂತ, ಕುಮಾರಿ ಮಾಹೆಕ್ , ಶ್ರೀಮತಿ ಸುಶ್ಮಿತಾ ಇತರರು ಉಪಸ್ಥಿತರಿದ್ದರು.
ಅನಧಿಕೃತ ರೆಸಾರ್ಟ್ ತೆರವುಗೊಳಿಸಿ ಹಾಗೂ ಆಮಿಷಗೆ ಮಣಿದು ರೆಸಾರ್ಟ್ ನಡೆಸಲು ಅವಕಾಶ ಕೊಟ್ಟ ಅಧಿಕಾರಿಗಳ ಯುರುದ್ದ ಕ್ರಮ ಕೈಗೊಳುವಂತೆ ಮ್ಯಾಗಳಮನಿ ಒತ್ತಾಯ
ಅನಧಿಕೃತ ರೆಸಾರ್ಟ್ ತೆರವುಗೊಳಿಸಿ ಹಾಗೂ ಆಮಿಷಗೆ ಮಣಿದು ರೆಸಾರ್ಟ್ ನಡೆಸಲು ಅವಕಾಶ ಕೊಟ್ಟ ಅಧಿಕಾರಿಗಳ ಯುರುದ್ದ ಕ್ರಮ ಕೈಗೊಳುವಂತೆ ಮ್ಯಾಗಳಮನಿ ಒತ್ತಾಯ

Magalamani demands action against officials who gave in to the lure and allowed the resort to be cleared of unauthorized resorts

ಗಂಗಾವತಿ :-28–ಗಂಗಾವ ತಿ ತಾಲ್ಲೂಕಿನ ಆನೆಗುಂದಿ ಭಾಗದ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು ಹಾಗೂ ಅವುಗಳು ಯಾವಾಗ ನಿರ್ಮಾಣಗೊಂಡಿವೆ ಅಲ್ಲಿಂದ ಇಲ್ಲಿಯವರೆಗೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಭಾಗವು ಐತಿಹಾಸಿಕ ಪ್ರದೇಶವಾಗಿರುವದರಿಂದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದೆ. ವಿದೇಶಿಗರು ಆಗಮಿಸುತ್ತಿದ್ದು ಅವರಿಗೆ ವಾಸ್ತವ್ಯ ಮಾಡುವ ನೆಪದಲ್ಲಿ ಸರಕಾರದ ಪರವಾನಿಗೆ ಇಲ್ಲದೆ ಫಲವತ್ತಾದ ಕೃಷಿ ಭೂಮಿಯಲ್ಲಿ ಹೋಮ್ ಸ್ಟೇ ಎಂಬ ಹೆಸರಿನಿಂದ ಕೃಷಿ ಭೂಮಿ ನಾಶ ಪಡಿಸಿರುವದಲ್ಲದೆ ಮಧ್ಯ, ಗಾಂಜಾ, ಅಫಿಮು ದಂದೆಯಿಂದ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಆನೆಗುಂದಿ ಹಾಗೂ ಅಂಜನಾದ್ರಿಗೆ ಕಳಂಕ ತರುವ ಕೆಲಸ ನಡೆಸಿದ್ದಾರೆ.ಇಂತಹ ರೆಸಾರ್ಟ್ ಗಳು ಪ್ರಾರಂಭ ಮಾಡುವಾಗ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರೋ? ಅಥವಾ ಹಣ ಪಡೆದುಕೊಂಡು ಮೌನ ವಹಿಸಿದ್ದರೋ ? ಎನ್ನುವದು ಯಕ್ಷ ಪ್ರಶ್ನೆ ಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು, ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಅಧಿಕಾರಿಗಳು ಅಥವಾ ಬೇರೆ ಯಾವ ಅಧಿಕಾರಿಗಳ ವ್ಯಾಪ್ತಿಗೆ ಸಂಬಂಧ ಪಡುತ್ತದೆಯೋ ಅಂತಹ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು.ಆಗ ಸುಮ್ಮನಿದ್ದು ಮಾಧ್ಯಮ ದಲ್ಲಿ ವರದಿ ಬಂದ ನಂತರ, ಸಂಘಟನೆಗಳ ಒತ್ತಾಯಕ್ಕೆ ತೆರವುಗೊಳಿಸುವ ನಾಟಕ ವಾಡಿ ಪುನಃ ಮೌನ ವಹಿಸುವ ಅಧಿಕಾರಿಗಳ ಲೋಪವು ಕಾರಣವಾಗಿದೆ.ಅವರ ಮೇಲೆ ಕ್ರಮ ಜರುಗಿಸವುದರ ಜೊತೆಗೆ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು. ವಿದೇಶಿಗರ ರಕ್ಷಣೆ ಹಾಗೂ ಅನುಕೂಲಕ್ಕಾಗಿ ಸರ್ಕಾರವೇ ಹೋಮ್ ಸ್ಟೇ ಅಥವಾ ವಿದೇಶಿಗರ ಯಾತ್ರಾ ನಿವಾಸ ನಿರ್ಮಿಸುವದರಿಂದ ಅಲ್ಲಿ ಮಧ್ಯ, ಗಾಂಜಾ, ಅಫಿಮಿನOತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತೆ ಆಗುತ್ತೆದೆ ಮತ್ತು ನಮ್ಮ ಸಂಸ್ಕೃತಿಗೆ ಆದ್ಯತೆ ನೀಡಿದಂತೆಯಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕೆಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ,ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ್ ಚನ್ನಾದಾಸರ, ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್,ಹನುಮಂತಪ್ಪ,ರವಿಕುಮಾರ್ ಮತ್ತಿತರರು ಇದ್ದರು.
ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ
High Court Justice Ravi Hosamani inaugurates mock court competition at ICFI Law School
ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ


ಬೆಂಗಳೂರು: ಅಣಕು ನ್ಯಾಯಾಲಯಗಳು ನ್ಯಾಯಾಂಗ ಕ್ಷೇತ್ರವನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ನ್ಯಾಯದಾನದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮ ನೀಡುತ್ತವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದ್ದಾರೆ.
ಐಸಿಎಫ್ಐ ಲಾ ಸ್ಕೂಲ್ನಲ್ಲಿ ಎನ್.ಜೆ. ಯಶಸ್ವಿ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯಕ್ಕೆ ಅಣಕು ನ್ಯಾಯಾಲಯಗಳು ಪ್ರೇರಣೆಯಾಗಬೇಕು. ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ನೈಜ ಚಿತ್ರಣವನ್ನು ಕಟ್ಟಿಕೊಡುತ್ತವೆ. ವಿದ್ಯಾರ್ಥಿ ಸಮುದಾಯ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
ವಿದ್ಯಾರ್ಥಿಗಳಲ್ಲಿ ವಕಾಲತ್ತು ಕೌಶಲ್ಯ ಮತ್ತು ಅನುಭವಾಧಾರಿತ ಕಾನೂನು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಇದು ಮಹತ್ವ ಹೆಜ್ಜೆ ಎಂದರು.
ಈ ಸ್ಪರ್ಧೆಯಲ್ಲಿ 10 ತಂಡಗಳು ಸಂಶೋಧನೆ, ಕರಡು ರಚನೆ, ವಾದ-ಪ್ರತಿವಾದ ಕೌಶಲ್ಯಗಳನ್ನು ಪರೀಕ್ಷಿಸುವ ಬೌದ್ಧಿಕ ಸುತ್ತುಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.
ಪ್ರೊ-ವೈಸ್ ಚಾನ್ಸಲರ್ ಡಾ. ಮುದ್ದು ವಿನಯ್, ವಿಭಾಗದ ಮುಖ್ಯಸ್ಥರಾದ ಡಾ. ರಾಜಶ್ರೀ ಪಾಟೀಲ್ ಮಾರ್ಗದರ್ಶನದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಯಿತು. ಅವರ ಮಾರ್ಗದರ್ಶನದಿಂದ ಸ್ಪರ್ಧೆ ಸುಗಮವಾಗಿ ನಡೆಯಿತು. ಸಂಸ್ಥೆಯ ಶೈಕ್ಷಣಿಕ ವಾತಾವರಣಕ್ಕೆ ಈ ಸ್ಪರ್ಧೆ ಮೆರಗು ತಂದಿತು.
ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್, ಡೀನ್ ಡಾ. ಸಂದೀಪ್ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಅನಕು ನ್ಯಾಯಾಲಯ ಸ್ಪರ್ಧೆಗಳ ಮಹತ್ವವನ್ನು ವಿವರಿಸಿ, ಈ ಸ್ಪರ್ಧೆ, ಸಮರ್ಥ, ಆತ್ಮವಿಶ್ವಾಸಿ ಮತ್ತು ಸಾಮಾಜಿಕ ಹೊಣೆಗಾರಿಕೆಯುಳ್ಳ ಕಾನೂನು ವೃತ್ತಿಪರರನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಂಶೋಧನಾ ಶ್ರೇಷ್ಠತೆ, ನೈತಿಕ ವಕಾಲತ್ತು ಮತ್ತು ವೃತ್ತಿಪರ ಅಖಂಡತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾನೂನು ಕ್ಷೇತ್ರದ ಗಣ್ಯರು ಮತ್ತು ಅಕಾಡೆಮಿಕ್ ವಲಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
ಮಾರ್ಚ್ 1ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Sri Jagadguru Renukacharya Jayanti Yugamanotsava on March 1st

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಮಾರ್ಚ್ 1ರಂದು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಇದರ ಕುರಿತು ಅಖಿಲ-ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಬಿ. ಮುಕ್ತಂಬಾ, ನಗರ ಅಧ್ಯಕ್ಷರಾದ ನವೀನ್ ಕುಮಾರ್ ಬಿಡದಿರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮನೋಹರ್ ಅಬ್ಬಿಗೆರೆರವರು ಮಾತನಾಡಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಮಹಾನ್ ಶರಣರು, ಗುರುಶೇಷ್ಠರು. ಕನ್ನಡ ಭಾಷೆಯಲ್ಲಿ ಬದುಕು ಮತ್ತು ಪುರಾಣ ತತ್ವ ಸಿದ್ದಾಂತಗಳ ಹಲವು ಪುರಾಣ, ಗ್ರಂಥಗಳು ಇದೆ. ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಗದ್ದುರು ಶ್ರೀ ರೇಣುಕಾಚಾರ್ಯ ಜಯಂತಿಯನ್ವು ಅಚರಿಸುತ್ತಿದ್ದಾರೆ.
ಶ್ರೀ ಜಗದ್ಗುರು ಶ್ರೀ ರೇಣಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಮಾರ್ಚ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 11ಗಂಟೆಗೆ ಆಯೋಜಿಸಲಾಗಿದೆ.
ಉದ್ಘಾಟನೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ದಿವ್ಯಸಾನಿಧ್ಯ ರಂಭಾಪುರಿ ಶಾಖ ಹಿರೇಮಠದ ಪೂಜ್ಯ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ , ಅಧ್ಯಕ್ಷತೆ ಶಾಸಕರಾದ ಉದಯ್ ಗರುಡಚಾರ್ ರವರು ಉದ್ಘಾಟನೆ ನೇರವೆರಿಸುವರು.
ವಿಶೇಷ ಆಹ್ವಾನಿತರಾಗಿ ವೀರಶೈವ-ಲಿಂಗಾಯಿತ ಸಮನ್ವಯ ವೇದಿಕೆ ಸಂಚಾಲಕರಾದ ಪಾಲನೇತ್ರ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ, ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ, ಬೆಂಗಳೂರುನಗರದ ಅಧ್ಯಕ್ಷರಾದ ಬಿ.ಆರ್.ನವೀನ್ ಕುಮಾರ್ ರವರು, ಯುವ ಘಟಕದ ಹರೀಶ್ ಮಹೇಶ್ ರವರು, ಭಾಗವಹಿಸಲಿದ್ದಾರೆ.
ಬೆಳಗ್ಗೆ 10ಗಂಟೆಗೆ ಹಡ್ಸನ್ ಸರ್ಕಲ್ ನಿಂದ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆಯಲ್ಲಿ ರವೀಂದ್ರ ಕಲಾಕ್ಷೇತ್ರದವರಗೆ ಮೆರವಣಿಗೆ ಸಾಗಲಿದೆ, ವೀರಗಾಸೆ, ಕಂಸಾಳೆ, ತಮಟೆವಾದ್ಯ, ನಾದಸ್ವರ ವಿವಿಧ ಕಲಾತಂಡಗಳು ಭಾಗವಹಿಸಲಿದೆ.
ಸಾಹಿತಿ ಪ್ರಶಾಂತ ರಿಪ್ಬನಪೇಟೆರವರಿಂದ ಉಪನ್ಯಾಸ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಗದ್ದುರು ಶ್ರೀ ರೇಣುಕಾಚಾರ್ಯ ಆದರ್ಶ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಸಮುದಾಯ ಪಾಲಿಸಬೇಕು ಆಗ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ.
ಮಾರ್ಚ್ 1ರ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ವಿನಂತಿ ಎಂದು ಹೇಳಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಕಾರ್ಯದರ್ಶಿ ಹೆಚ್.ಎಂ.ರೇಣುಕಾ ಪ್ರಸನ್ನ,ಮತ್ತು ವೀರಶೈವ ಲಿಂಗಾಯಿತ ಸಮಾಜದ ಮುಖಂಡರುಗಳಾದ ಗುರುಸ್ವಾಮಿ, ಬಸವರಾಜಣ್ಣ, ಅಬ್ಬಿಗೆರೆ ಮಹೇಶ್ ಪಚ್ಚಿ, ಚಿದಾನಂದ ಮಠದ್, ಹುರುಳಿ ಚಿಕ್ಕನಹಳ್ಳಿ ಮಲ್ಲಿಕಾರ್ಜುನ ಸ್ವಾಮಿರವರು ಭಾಗವಹಿಸಿದ್ದರು.
ತುಪ್ಪದಲ್ಲಿದೆ ಈ ಔಷದೀಯ ಗುಣ
ತುಪ್ಪದಲ್ಲಿದೆ ಈ ಔಷದೀಯ ಗುಣ

This medicinal property is found in ghee.

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ.? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ.
ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಈ ಕ್ರಮವನ್ನು ಅನುಸರಿಸಬಹುದು.
ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ
ಕೊಪ್ಪಳ ಮತ್ತು ಗಂಗಾವತಿ: ಅನಧಿಕೃತ ಹೋಂಸ್ಟೇ, ರೆಸಾರ್ಟಗಳ ಮೇಲೆ ಕಾನೂನು ಕ್ರಮ
ಕೊಪ್ಪಳ ಮತ್ತು ಗಂಗಾವತಿ: ಅನಧಿಕೃತ ಹೋಂಸ್ಟೇ, ರೆಸಾರ್ಟಗಳ ಮೇಲೆ ಕಾನೂನು ಕ್ರಮ

Koppal and Gangavathi: Legal action against unauthorized homestays, resorts

ಕೊಪ್ಪಳ ಫೆಬ್ರುವರಿ 27 (ಕರ್ನಾಟಕ ವಾರ್ತೆ): ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನಲ್ಲಿ ಬರುವ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ 10 ಮತ್ತು ಗಂಗಾವತಿ 3 ಸೇರಿ ಒಟ್ಟು 13 ಅಧಿಕೃತ ರೆಸಾರ್ಟಗಳಿವೆ. ಅದೇ ರೀತಿ ಕೊಪ್ಪಳ ತಾಲ್ಲೂಕಿನಲ್ಲಿ 47 ಹೋಂಸ್ಟೇ ಹಾಗೂ 40 ರೆಸಾರ್ಟಗಳು ಮತ್ತು ಗಂಗಾವತಿ ತಾಲ್ಲೂಕಿನ 6 ಹೋಂಸ್ಟೇ ಹಾಗೂ 43 ರೆಸಾರ್ಟಗಳು ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 53 ಹೋಂಸ್ಟೇಗಳು & 83 ರೆಸಾರ್ಟಗಳು ಅನಧಿಕೃತವಾಗಿದ್ದು, ಈ ಎಲ್ಲಾ ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳಿಗೆ ಸೂಕ್ತ ಕ್ರಮ ಕೈಗೋಳ್ಳಲಾಗಿದೆ.
ಕೊಪ್ಪಳ ತಾಲ್ಲೂಕಿನ 28 ಹಾಗೂ ಗಂಗಾವತಿ 87 ಸೇರಿ ಒಟ್ಟು 105 ಅನಧಿಕೃತ ಹೋಂಸ್ಟೇ ಮತ್ತು ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 37 ಹೋಂಸ್ಟೇ ಮತ್ತು ರೆಸಾರ್ಟಗಳ ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ ರದ್ದು ಪಡಿಸಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗಂಗಾವತಿ ತಾಲ್ಲೂಕಿನ 5 ರೆಸಾರ್ಟಗಳನ್ನು ತೆರವುಗೊಳಿಸಲಾಗಿದೆ. ಕೊಪ್ಪಳ ತಾಲ್ಲೂಕಿನ 5 ಮತ್ತು ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ, ರೆಸಾರ್ಟಗಳಿಗೆ ಸಂಬಂಧಿಸಿದಂತೆ 25 ಪ್ರಕರಣಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುತ್ತವೆ.
ಕೊಪ್ಪಳ ತಾಲ್ಲೂಕಿನ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ (ಎನ್.ಒ.ಸಿ) ರದ್ದಿನೊಂದಿಗೆ ಒಟ್ಟು 40 ರೆಸಾರ್ಟಗಳನ್ನು ಮತ್ತು ಒಟ್ಟು 4 ಹೋಂಸ್ಟೇಗಳನ್ನು ಬಂದ್ ಮಾಡಿ ಸೀಜ್ ಮಾಡಲಾಗಿದೆ.
ಮೇಲೆ ವಿವರಿಸಿರುವಂತೆ ಅನಧಿಕೃತವಾಗಿ ನಿರ್ಮಿಸಿದ ಕೊಪ್ಪಳ ತಾಲ್ಲೂಕಿನ ಒಟ್ಟು 49 ಹೋಂಸ್ಟೇ & ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತ ಮತ್ತು ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ರದ್ದುಪಡಿಸಿ ಸೀಜ್ ಮಾಡಲಾಗಿರುತ್ತದೆ. ಗಂಗಾವತಿ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 87 ಹೋಂಸ್ಟೇ, ರೆಸಾರ್ಟಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿರುತ್ತದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ 5 ರೆಸಾರ್ಟಗಳನ್ನು ಅರಣ್ಯ ಇಲಾಖೆಯಿಂದ ಸಂಪೂರ್ಣವಾಗಿ ತೆರವುಗೊಳಿಸಲಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಗಂಗಾವತಿ ತಾಲ್ಲೂಕಿನ 20 ಹೋಂಸ್ಟೇ & ರೆಸಾರ್ಟ ಹಾಗೂ ಕೊಪ್ಪಳ ತಾಲ್ಲೂಕಿನ 2 ಹೋಂಸ್ಟೇ ಮತ್ತು 3 ರೆಸಾರ್ಟಗಳು ಸೇರಿ ಒಟ್ಟಾರೆ 25 ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ನಿಯಾಮಾನುಸಾರ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿಯಿಂದ ಖಾಸಗಿ ಸ್ವತ್ತಿನಲ್ಲಿ ಮದರಸಾ ಚಟುವಟಿಕೆ: ಕೊತ್ತನೂರು ಪೊಲೀಸ್ ಠಾಣೆಗೆ ದೂರು
ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿಯಿಂದ ಖಾಸಗಿ ಸ್ವತ್ತಿನಲ್ಲಿ ಮದರಸಾ ಚಟುವಟಿಕೆ: ಕೊತ್ತನೂರು ಪೊಲೀಸ್ ಠಾಣೆಗೆ ದೂರು

Madrasa activity on private property by Jamia Muhammadiya Education Society: Complaint to Kothanur Police Station

ಬೆಂಗಳೂರು,ಫೆ.27: ಜಾಮಿಯಾ ಮಹಮ್ಮದೀಯ ಎಜುಕೇಶನ್ ಸೊಸೈಟಿ ಮತ್ತು ಜಾಮಿಯಾ ಮಹಮ್ಮದೀಯ ಮನ್ಸೂರ ಎಂಬ ಸಂಸ್ಥೆಗಳು ಥಣಿಸಂದ್ರ ಗ್ರಾಮದ ಕೆ ಆರ್ ಪುರಂ ಹೋಬಳಿಯ ತಮ್ಮ ಜಾಗದಲ್ಲಿ ಮಾರ್ಚ್ 1 ರಂದು ಅನುಮತಿ ಪಡೆಯದೇ ಮದರಸ ಕಾರ್ಯಕ್ರಮ ನಡೆಸಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಜಾಗದ ಮಾಲೀಕರಾದ ಮಸೀಯ ಅಹಮ್ಮದ್ ಬಿನ್ ದಸ್ತಗಿರ್ ಎಂಬುವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಂಸ್ಥೆಯ ಅರ್ಶದ್ ಮುಕ್ತಾರ್ ಅವರನ್ನು ಮದರಸಾ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅವರು, ಏರು ಧ್ವನಿಯಲ್ಲಿ ನಾವು ಕಾರ್ಯಕ್ರಮವನ್ನು ಮಾಡೇ ಮಾಡುತ್ತೇವೆ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ತಮಗೆ ದಮಕಿ ಹಾಕಿದ್ದಾರೆ. ಇದರಿಂದ ನನಗೆ ಆತಂಕವುಂಟಾಗಿದೆ. 1.16 ಎಕರೆಯ ಈ ಸ್ವತ್ತಿನಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು 2022 ರಲ್ಲೇ ನ್ಯಾಯಾಲಯ ಇಂಜೆಕ್ಷನ್ ಆದೇಶ ಹೊರಡಿಸಿದೆ. ನನ್ನ ಮತ್ತು ನಮ್ಮ ಕುಟುಂಬದ ತಂಟೆಗೆ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಜೊತೆಗೆ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮಸೀಯ ಅಹಮ್ಮದ್ ಅವರು ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
“ಏಳುಬೆಂಚಿಯಲ್ಲಿ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಸಾಂಸ್ಕೃತಿಕ
ಏಳುಬೆಂಚಿಯಲ್ಲಿ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಸಾಂಸ್ಕೃತಿಕ

Elehubenchi has a cultural program of mythological recitation, folk songs and pantomime."
ಕುರುಗೋಡು:-ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಫೆಬ್ರವರಿ 27 ರಂದು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಲಾವದರನ್ನು ಗುರುತಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರದರ್ಶನ ನೀಡಿ ಮಕ್ಕಳಿಗೆ ಕಲೆಗಳನ್ನು ಉಣ ಬಡಿಸುವ ಕೆಲಸ ಪ್ರಸ್ತುತ ಮಾಡುವುದು ನಮಗೆ ಬಹಳಷ್ಟು ಸಂತೋಷವಾಗುತ್ತದೆ ಎಂದು ತಬಲಾ ಬಾರಿಸುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ತಬಲಾ ವಾದಕರಾದ ಶ್ರೀ.ಚಾಗೆ ವರಬಸಪ್ಪ ಉದ್ಘಾಕರ ನುಡಿಯನ್ನು ಮಾತಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಿವು ಮೂಡಿಸುವ ಕೆಲಸ ಪ್ರತಿಯೋಬ್ಬರ ಜವಾಬ್ದಾರಿ ಆಗಬೇಕು ತಮ್ಮ ತಮ್ಮ ಆಸಕ್ತಿ ಅನುಸರವಾಗಿ ಮಕ್ಕಳು ಭಾಗವಹಿಸುತ್ತಾ ಹೋಗುತ್ತಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಶ್ರೀ ಎಸ್ ಎರ್ರಿಸ್ವಾಮಿ ಮಾತಾಡಿದರು.
ಹಾಡುಗಾರಿಕೆ, ಕುಣಿತ, ನಾಟಕ ,ನೃತ್ಯ ಇಂದಿನ ಮಕ್ಕಳಿಗೆ ಅದರ ಅರಿವು ಇಲ್ಲದಂತೆ ಆಗಿದೆ ಅವುಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಕೆ.ಹೇಮೇಶ್ವರ ಮಾಡುತ್ತಿದ್ದಾರೆ ಎಂದು ಬಯಲಾಟ ಹಾರ್ಮೂನಿಯಂ ಮಾಸ್ತರ್ ಶ್ರೀ. ಮಂಜುನಾಥ್ ಹೇಳಿದರು.
ನಮ್ಮ ಏಳುಬೆಂಚಿ ಗ್ರಾಮದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತೇವೆ.ಇಂದು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಚಯ ಮತ್ತು ಗ್ರಾಮೀಣ ಕಲೆಗಳನ್ನು ನೋಡುವಂತಹ ಸೌಭಾಗ್ಯ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ಜಿ.ಬಸವನಗೌಡ ಹೇಳಿದರು.
ನಮ್ಮ ಏಳುಬೆಂಚಿ ಗ್ರಾಮ ಎಂಬುದು ಸಪ್ತಸ್ವರಗಳು ನಾದಮಯ ನಮ್ಮ ಗ್ರಾಮ ಕಲೆಗಳ ತವರೂರು ನಮ್ಮ ಊರಿನಲ್ಲಿ ಅನೇಕ ಕಲಾವಿದರನ್ನು, ಸಾಹಿತ್ಯಗಳನ್ನು, ಒಳಗೊಂಡಿರುವ ನಮ್ಮ ಗ್ರಾಮ ಅದಕ್ಕಾಗಿ ನಮ್ಮ ಊರಿನಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ಕೆ.ಹೇಮೇಶ್ವರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಕಲೆಯನ್ನು ಬೆಳೆಸುತ್ತಿದ್ದಾರೆ ಎಂದು ಸರಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕರಾದ ಶ್ರೀ. ಕೆ ಮುದಿಯಪ್ಪ ಮಾತಾಡಿದರು.
ಇಂದಿನ ಮಕ್ಕಳು ಜಂಗಮವಾಣಿಗೆ ಅಥವಾ ಮೊಬೈಲ್ ಫೋನ್ಗೆ ಬಲಿಯಾಗಿದ್ದಾರೆ.ಅವರಿಗೆ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮನೆಯಲ್ಲಿ ತಂದೆ ತಾಯಿ ಮತ್ತು ಶಾಲೆಗಳಲ್ಲಿ ಗುರುಗಳು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ವೈ.ನಾಗೇಶ ಶಾಸ್ತ್ರಿ ಸಂಸ್ಥೆ ಸಂಸ್ಥಾಪಕರಾದ ಶ್ರೀ. ನಯನಗೌಡ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:- ” ಪುರಾಣ ವಾಚನ :- ಶ್ರೀ ಕರುಣಾಮೂರ್ತಿ ಶಾಸ್ತ್ರಿಗಳು ಮತ್ತು ತಂಡದವರು” ಜನಪದ ಗೀತೆಗಳು:- ಶ್ರೀ ಮಂಜುನಾಥ ಮತ್ತು ತಂಡದವರು” ಮೂಕಾಭಿನಯ:-ಶ್ರೀ. ಕು.ಉದಯಕುಮಾರ್ ಮತ್ತು ತಂಡದವರು”ನೇರವೇರಿಸಿದರು.
ಕಾರ್ಯಕ್ರಮದಲ್ಲಿ:-ಅಂಗಡಿ ಶ್ರೀ.ದೊಡ್ಡಬಸವನಗೌಡ,ಶ್ರೀ ದೊಡ್ಡಬಸಯ್ಯಸ್ವಾಮಿ,ಶ್ರೀ. ಚಂದ್ರಶೇಖರ,ಶ್ರೀ ಭರ್ಮಪ್ಪ,ಶ್ರೀ. ಸುಧಾಕರ್, ಶಿಕ್ಷಕರಾದ ಶ್ರೀ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಗ ಶ್ರೀ ಗುರುಮಹಾಂತೇಶ. ಬಿ ಕಾರ್ಯದರ್ಶಿ ಕುರುಬರ ಹೇಮೇಶ್ವರ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮತ್ತು ಶಿಕ್ಷಕರು ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ನಿರೂಪಣೆ:- ಕುರುಬರ ಹೇಮೇಶ್ವರ,ಸ್ವಾಗತ ಶ್ರೀ.ಪಂಪಾಣ್ಣ, ಶ್ರೀ ಎಸ್ ಎರ್ರಿಸ್ವಾಮಿ ವಂದಿಸಿದರು.
ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಯೋದಿಲ್ಲ : ಮಹಿಳೆಯರ ಆಕ್ರೋಶ
ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಯೋದಿಲ್ಲ : ಮಹಿಳೆಯರ ಆಕ್ರೋಶ

Today's governments are not trying to push our children into ignorance: Women's outrage

ಕೊಪ್ಪಳ:ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ಈಗ ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ. – ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯ ಆಕ್ರೋಶ
ಗುರುವಾರ ಸಂಜೆ ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಶಾಲೆಯನ್ನು ಮುಚ್ಚುವುದನ್ನ ಖಂಡಿಸಿ AIDSO ಮತ್ತು ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಸಮಿತಿ ನೇತೃತ್ವದಲ್ಲಿ ಮಾರುತೇಶ್ವರ ಗುಡಿ ಹತ್ತಿರ ಊರಿನ ಸಾರ್ವಜನಿಕರ ಪ್ರತಿಭಟನಾ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ AIDYO ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ ಕೊಪ್ಪಳ ಇಂದು ಭೀಕರ ಪರಿಸ್ಥಿಯಲ್ಲಿದೆ. ಒಂದ್ ಕಡೆ ಬೇಡದೆ ಇರುವ ಮಾಲಿನ್ಯ ಕಾರಕ ಕಾರ್ಖಾನೆಗಳನ್ನು ತೊಲಗಿಸುವ ಹೋರಾಟ ನಡೆಯುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ರಾಜ್ಯ ಸರಕಾರ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ನಮ್ಮ ಮಾನ್ಯ ಶಾಸಕರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ಕೊಪ್ಪಳದಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸುತ್ತಲು ಬರುವ ಅನೇಕ ಶಾಲೆಗಳನ್ನು ಮುಚ್ಚುವ ಈ ಬಡವರ ವಿರೋಧಿ ಯೋಜನೆಯನ್ನು ವಿರೋಧಿಸಿ ಕೊಪ್ಪಳದ ಜನರಾದ ನಾವು ಒಗ್ಗಟ್ಟಿನಿಂದ ಈ ಹೋರಾಟವನ್ನು ಬೆಳೆಸುವ ಅವಶ್ಯಕತೆಯಿದೆ ಎಂದರು.
ಜಾಗತೀಕರಣ ಉದಾರೀಕರಣ ಖಾಸಗೀಕರಣದ ನೀತಿಗಳ ಅನುಷ್ಠಾನವೇ ಈ ಕೆಪಿಎಸ್ ಮ್ಯಾಗ್ನೆಟ್ ADB ಬ್ಯಾಂಕ್ ನಿಂದ ಸಾಲ ತಂದು ಈ ಯೋಜನೆ ತರುತ್ತಿದ್ದಾರೆ. ಹಾಗೆ ನಮ್ಮ ಕಲ್ಯಾಣ ಕರ್ನಾಟಕ ಜನರ ಅಭಿವೃದ್ಧಿಗಾಗಿ ಮೀಸಲಿರುವ
ಕೆ.ಕೆ ಆರ್.ಡಿ.ಬಿ ಹಣವನ್ನು ನಮ್ಮ ಭಾಗದ ಶಾಲೆಗಳನ್ನು ಮುಚ್ಚುವುದಕ್ಕೆ ಬಳಸುತ್ತಿರುವುದು ನೋವಿನ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶದ ಮೂಲಕ ಪ್ರತಿರೋಧವನ್ನು ಬೆಳೆಸೋಣ ಎಂದರು.
ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯೊಬ್ಬರು ಮಾತನಾಡಿ ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಇದು ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ, ನಮ್ಮ ಶಾಲೆ ನಮ್ಮ ಹಕ್ಕು, ನಮ್ಮೂರಲ್ಲೇ ನಾವು ನಮ್ಮ ಮಕ್ಕಳನ್ನ ಓಡಿಸೋದು ಎಂದ್ರು ಆಕ್ರೋಶ ವ್ಯಕ್ತಪಡಿಸಿದರು.
AIDSO ವಿದ್ಯಾರ್ಥಿ ಸಂಘಟನೆ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರ್ಚ್ 14 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಪ್ರತಿರೋಧ ಸಮಾವೇಶದಲ್ಲಿ ಕೊಪ್ಪಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ AIDSO ಸಂಘಟನಾಕಾರರಾದ ಪ್ರದ್ದೀಪ್, AIDYO ಸದಸ್ಯರಾದ ಸುಭಾನ್, AIMSS ಕಾರ್ಯದರ್ಶಿ ಶಾರದಾ ಗಡ್ಡಿ, ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಚೆನ್ನವೀರಯ್ಯ ದಮ್ಮೂರು, ಉಪಾಧ್ಯಕ್ಷರಾದ – ಮಾರಿತೇಶ್ವರ ಕುರುಬರ ಸದಸ್ಯರುಗಳಾದ ರಾಮಣ್ಣ ಬೆಳಿವಿನಾಳ, ಗವಿಸಿದ್ದಪ್ಪ ಹಲಗಿ, ಶರಣಪ್ಪ ಮಡಿವಾಳ, ಯಮನೂರಪ್ಪ ಹಳ್ಳಿಕೇರಿ, ಗವಿಸಿದಪ್ಪ ಕುರುಬರ ಸಂಜೀವಪ್ಪ ಚೌದ್ರಿ, ಪವಿತ್ರ ಬೆಳವಿನಾಳ್, ರುದ್ರಮ್ಮ, ಲಲಿತವ್ವ ಗಡಿಗಿ, ನಿರ್ಮಲ ಹಿರೇಮಠ, ನಿರ್ಮಲ ಸೋಂಪುರ, ಜ್ಯೋತಿ ಮುತ್ತಾಳ್ ಸೇರಿದಂತೆ ಮುಂತಾದ ಊರಿನ ಹಿರಿಯರು, ಪೋಷಕರು, ಮಹಿಳೆಯರು ಹಾಗೂ ರೈತ ಮುಖಂಡರು ಸೇರಿ 400ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿಚಂ ದ್ರಶೇ ಖರ ಆಜಾ ದ್ಅವರ 95ನೇ ಹು ತಾ ತ್ಮ ದಿನ ಆಚರಣೆ.
ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿ
ಚಂ ದ್ರಶೇ ಖರ ಆಜಾ ದ್ಅವರ 95ನೇ ಹು ತಾ ತ್ಮ ದಿನ ಆಚರಣೆ.

Chandrashekhar Aja's 95th death anniversary celebrated at the Kranti Chakra Balang office.

ಗಂಗಾವತಿ: ನಗರದ ಕ್ರಾಂ ತಿಚಕ್ರ ಬಳಗದ ಕಾ ರ್ಯಾ ಲಯದಲ್ಲಿ ಫೆ.27 ರಂ ದು ಚಂ ದ್ರಶೇ ಖರ ಆಜಾ ದ್ಅವರ
ಹು ತಾ ತ್ಮ ದಿನದ ಆಚರಣೆಯನ್ನು ಕಾ || ಭಾ ರಧ್ವಾ ಜ್ ರವರ ನೇ ತೃತ್ವದಲ್ಲಿ ಆಚರಿಸಲಾ ಯಿತು .
ಹು ತಾ ತ್ಮ ಚಂ ದ್ರಶೇ ಖರ ಆಜಾ ದ್ರವರ ಭಾ ವಚಿತ್ರಕ್ಕೆ ಮಾ ಲಾ ರ್ಪ ಣೆ ಮಾ ಡಿ ಮಾ ತನಾ ಡಿದ ಕಾ ||
ಭಾ ರಧ್ವಾ ಜ್ಅವರು ಚಂ ದ್ರಶೇ ಖರ ಆಜಾ ದ್ಅವರು ಒಬ್ಬ ಕ್ರಾಂ ತಿಕಾ ರಿ ಸ್ವಾ ತಂ ತ್ರ್ಯ ಹೋ ರಾ ಟಗಾ ರರಾ ಗಿ
ಹು ತಾ ತ್ಮ ರಾ ಗಿದ್ದಾ ರೆ. ಅವರ ಹೋ ರಾ ಟವನ್ನು ಸ್ಮ ರಿಸಿಕೊ ಳ್ಳು ವು ದು ನಮ್ಮೆ ಲ್ಲರ ಕರ್ತ ವ್ಯ ವಾ ಗಿದೆ ಎಂ ದು ಹೇ ಳಿದರು .
ಈ ಸಂ ದರ್ಭ ದಲ್ಲಿ ಲಯನ್ಸ್ಕ್ಲಬ್ಅಧ್ಯ ಕ್ಷರಾ ದ ಡಾ || ಶಿವಕು ಮಾ ರ ಮಾ ಲಿಪಾ ಟೀ ಲ್,
ಕಾ ರ್ಯ ದರ್ಶಿ ಯಾ ದ ಜಂ ಬಣ್ಣ ಐಲಿ, ವಿಶ್ವನಾ ಥ ಸೋ ನಾ ರ್, ಇಂ ಕ್ವಿಲಾ ಬಿ ವಾ ದಿಗಳ ಬಳಗದ ಫಯಾ ಜ್
ಶಹರಾ ಜಿಧರ್ಅವರು ಗಳು ಭಾ ಗವಹಿಸಿದ್ದರು .
ಅಜೀಂ ಪ್ರೇಮ್ಜಿ ವಿವಿಯಲ್ಲಿ ಎಬಿವಿಪಿ ದಾಂಧಲೆ: ಬಂಧನಕ್ಕೆ ಎಸ್ಎಫ್ಐ ಆಗ್ರಹ
ಅಜೀಂ ಪ್ರೇಮ್ಜಿ ವಿವಿಯಲ್ಲಿ ಎಬಿವಿಪಿ ದಾಂಧಲೆ: ಬಂಧನಕ್ಕೆ ಎಸ್ಎಫ್ಐ ಆಗ್ರಹ

ABVP vandalism at Azim Premji University: SFI demands arrest

ವಿಜಯನಗರ (ಹೊಸಪೇಟೆ): ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯಕ್ಕೆ ಅಕ್ರಮ ಪ್ರವೇಶ ಮಾಡಿ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಎಬಿವಿಪಿ ಗೂಂಡಾಗಳನ್ನು ಬಂಧಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ಎಸ್ ಎಫ್ ಐ ಒತ್ತಾಯ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸರ್ಜಾಪುರ ಬಳಿಯ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ 20 ಜನರ ಎಬಿವಿಪಿ ಗುಂಡಾ ಗುಂಪು ಕ್ಯಾಂಪಸ್ಗೆ ಅಕ್ರಮವಾಗಿ ಪ್ರವೇಶ ಮಾಡಿ ವಿಶ್ವ ವಿದ್ಯಾಲಯದ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ ಹಾಗೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಎಸ್ ಎಫ್ ಐ ನಿಲ್ಲುತ್ತದೆ.
ಮಂಗಳವಾರ ಸಂಜೆ ಕಾಶ್ಮೀರದ ಬಗ್ಗೆ ಅನೌಪಚಾರಿಕ ಚರ್ಚೆ ಮಾಡಲು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಆದರೆ ಇದರ ಕುರಿತು ವಿಶ್ವ ವಿದ್ಯಾಲಯದಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ 20 ಕ್ಕೂ ಹೆಚ್ಚು ಎಬಿವಿಪಿ ಗೂಂಡಾಗಳು ವಿಶ್ವ ವಿದ್ಯಾಲಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ವಿಶ್ವವಿದ್ಯಾಲಯದ ಆಸ್ತಿಗಳನ್ನು ಧ್ವಂಸ ಮಾಡಿ, ಭದ್ರತಾ ಸಿಬ್ಬಂದಿಗಳ ಮೇಲೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ನಮ್ಮ ಕ್ಯಾಂಪಸ್ನಲ್ಲಿ ಹೊರಗಿನ ಜನರ ಗುಂಪೊಂದು ನಡೆಸಿದ ಗದ್ದಲ ಮತ್ತು ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ವಿಶ್ವವಿದ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮವು ನಡೆಯಲೇ ಇಲ್ಲ ಸ್ಪಷ್ಟಪಡಿಸಿದೆ.
ಈಗಾಗಲೇ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸಗೊಳಿಸಿ, ಕ್ಯಾಂಪಸ್ಗೆ ನುಗ್ಗಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆ ಸೇರಿದ ವಿದ್ಯಾರ್ಥಿಗಳ ಗುಂಪನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳು, ಪ್ರಸ್ತುತ ಆರ್ಥಿಕ, ಸಾಮಾಜಿಕ, ರಾಜಕೀಯ ಚರ್ಚೆ ನಡೆಸುವುದು ಸಾಮಾನ್ಯ
ಇದು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮಟ್ಟ ಹೆಚ್ಚಿಸುವುದಕ್ಕೆ ಸಹಾಯವಾಗುತ್ತದೆ. ಇದು ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವವಾಗಿದೆ. ವಿಶ್ವ ವಿದ್ಯಾಲಯಗಳಲ್ಲಿ ಕ್ಯಾಂಪಸ್ ಡೆಮಾಕ್ರಸಿ ಇರಬೇಕೆಂದು ಎಸ್ ಎಫ್ ಐ ಒತ್ತಾಯಿಸುತ್ತದೆ. ಎಬಿವಿಪಿ ವಿದ್ಯಾರ್ಥಿ ಸಂಘಟನೆ ವಿಶ್ವ ವಿದ್ಯಾಲಯಗಳಲ್ಲಿ ಕೋಮುವಾದವನ್ನು ಉಂಟು ಮಾಡುತ್ತಿದೆ. ಕಾಲೇಜು ಕ್ಯಾಂಪಸ್ ಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ಹಿಂಸೆ, ಪ್ರಚೋದನೆ ಹಾಗೂ ಉದ್ದೇಶ ಪೂರ್ವಕವಾಗಿ ಗಲಭೆಗಳನ್ನು ಸೃಷ್ಟಿಸಿ ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ನಡುವೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದೆ. JNU ಸೇರಿದಂತೆ ದೇಶದ ಹಲವು ವಿಶ್ವ ವಿದ್ಯಾಲಯಗಳಲ್ಲಿ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ಗಮನಿಸಬಹುದು. ಅದೇ ರೀತಿಯಲ್ಲಿ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಹಲ್ಲೆ ಹಾಗೂ ಗಲಭೆಗಳನ್ನು ಸೃಷ್ಟಿ ಮಾಡಲು ಮುಂದಾಗಿದೆ. ಆದರಿಂದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯಕ್ಕೆ ಅಕ್ರಮ ಪ್ರವೇಶ ಮಾಡಿ ಆಸ್ತಿಗಳನ್ನು ಧ್ವಂಸ ಮಾಡಿ, ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿರುವ ಎಬಿವಿಪಿ ಗೂಂಡಾಗಳ ಮೇಲೆ ಪ್ರಕರಣ ದಾಖಲು ಮಾಡಬೇಕು ಹಾಗೂ ತಕ್ಷಣ ಈ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಎಬಿವಿಪಿ ಗುಂಡಾಗಳನ್ನು ಬಂಧಿಸಬೇಕೆಂದು ಹಾಗೂ ಎಬಿವಿಪಿ ಗೂಂಡಾಗಳನ್ನು ಉದ್ದೇಶ ಪೂರ್ವಕವಾಗಿ ನಡೆಸಿರುವ ಈ ಹಲ್ಲೆಯ ಬಗ್ಗೆ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಪ್ರಜಾಪ್ರಭುತ್ವ ( ಕ್ಯಾಂಪಸ್ ಡೆಮಾಕ್ರಸಿ ) ಉಳಿಸಬೇಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್, ವಿಜಯನಗರ ಜಿಲ್ಲೆ ಸಮಿತಿ ಒತ್ತಾಯಿಸುತ್ತದೆ.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಜಯಸೂರ್ಯ,ಕಾರ್ಯದರ್ಶಿ
ಶಿವಾರೆಡ್ಡಿ,ಜಿಲ್ಲೆ ಜಂಟಿ ಕಾರ್ಯದರ್ಶಿ
ಕೆ.ಎ.ಪವನ ಕುಮಾರ್ ಉಪಸ್ಥಿತರಿದ್ದರು.
ಶ್ರೀ ಶಾರದಾ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ
ಶ್ರೀ ಶಾರದಾ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ

Anniversary ceremony of Shri Sharada Temple

ಗಂಗಾವತಿ.:ನಗರ ಶಂಕರ ಮಠದಲ್ಲಿ ಶುಕ್ರವಾರದಂದು
ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀಥ೯ ಮಹಾಸ್ವಾಮಿಗಳ ತತ್ಕರಕಮಲ ಸಂಜಾತ
ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳ ಇವರ ಅಮೃತ ಹಸ್ತದಿಂದ ಗಂಗಾವತಿಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜರುಗಿದ
ಶ್ರೀ ಶಾರದಾಂಬಾ ,ಶ್ರೀ ಶಕ್ತಿ ಗಣಪತಿ ಹಾಗೂ ಶ್ರೀ ಚಂದ್ರ ಮೌಳೀಶ್ವರ ಸಹೀತ ಶ್ರೀ ಶಂಕರಾಚಾಯ೯ ಮೂತಿ೯ಗಳ ಪ್ರತಿಷ್ಠಾಪನಾ ಎಂಟನೇಯ ವಾಷಿ೯ಕೋತ್ಸವವನ್ನು ಇದೇ ಶ್ರೀ ಶಕೆ 1947ನೇ ಶ್ರೀ ವಿಶ್ವಾವಸು ನಾಮ ಸಂವತ್ಸರ ಫಾಲ್ಗುಣ ಶುಧ್ಧ ಎಕಾದಶೀ ಶುಕ್ರವಾರ
ದಿನಾಂಕ 27/02/2026 ರಂದು
ಆಚರಿಸಲಾಗುತ್ತಿದ್ದು ತಾವು ಸಪರಿವಾರದೊಂದಿಗೆ ಆಗಮಿಸಿ ಜಗನ್ಮಾತೆ ಶ್ರೀ ಶಾರದಾಂಬಾ ದೇವಿಯ ಕೃಪೆಗೆ,ಹಾಗೂ ಶಂಕರ ಭಗತ್ಪಾದರ ಮತ್ತು ಉಭಯ ಪರಮಪೂಜ್ಯ ಶ್ರೀಗಳ ಪರಮಾನುಗ್ರಹಕ್ಕೆ ಪಾತ್ರರಾಗಬೆಕೆಂದು ಧರ್ಮದರ್ಶಿ ನಾರಾಯಣರಾವ್ ತಿಳಿಸಿದ್ದಾನೆ

೧೧೯ ನೇ ದಿನದ ಬಲ್ಡೋಟ ಹಟಾವೋ ಧರಣಿಗೆಸಾಹಿತಿ ಹಿರೇಮಠ ಬೆಂಬಲ
೧೧೯ ನೇ ದಿನದ ಬಲ್ಡೋಟ ಹಟಾವೋ ಧರಣಿಗೆ
ಸಾಹಿತಿ ಹಿರೇಮಠ ಬೆಂಬಲ

Sahitya Hiremath supports the 119th day of Baldota Hatao Dharani

ಕೊಪ್ಪಳ: ಭಾಗ್ಯನಗರ ಬಂದ್ ಯಶಸ್ವಿಗೊಳಿಸಿದ
ಎಲ್ಲರಿಗೂ ಕೃತಜ್ಞತಾ ಪತ್ರ ಬರೆದು ಜಿಲ್ಲಾ ಬಚಾವೋ
ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ
ಇದರ ಜಂಟಿ ಕ್ರಿಯಾ ವೇದಿಕೆ ಅಭಿನಂದಿಸಿದೆ. ಜಂಟಿ ಕ್ರಿಯಾ
ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಅವರು ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ೧೧೯ನೇ ದಿನದಂದು ಮುಂಡರಗಿ ನಿವಾಸಿ,
ಹಿರಿಯ ಸಾಹಿತಿ ಎ.ಬಿ. ಹಿರೇಮಠ ಅವರು ಧರಣಿಗೆ ಬೆಂಬಲಿಸಿ,
ಕಾರ್ಖಾನೆ ಕಟ್ಟಲು ಅಭಿವೃದ್ಧಿ ಹೆಸರೇಳುವುದು
ನಾಚಿಕೆಗೇಡಿನ ಸಂಗತಿ. ಜೀವ ಹಾರಿ ಹೋಗುವಾಗ ಆರ್ಥಿಕ
ಅಭಿವೃದ್ಧಿ ಎಂದರೆ ಏನರ್ಥ. ಜನರು ಇಷ್ಟೊಂದು ಕೆಟ್ಟ
ಪರಸ್ಥಿತಿ ಎದುರಿಸಲಾಗದೆ ಪರಿತಪಿಸುವ ಚಿತ್ರಣ ರಾಜ್ಯದ ಜನ
ನೋಡುತ್ತಿದ್ದಾರೆ, ಈಗಲಾದರೂ ಸರ್ಕಾರ ಕರುಣೆ
ತೋರದೆ ಹೋದರೆ ಬಾಧಿತರು ಏನು ಮಾಡಬೇಕು
ಎಂದರು. ಇನ್ನಷ್ಟು ಜನರ ಪರೀಕ್ಷೆ ಸರ್ಕಾರ
ಮಾಡಬಾರದು. ನಿಮ್ಮ ರಾಜಕೀಯ ಏನೇ ಇರಲಿ. ಜನರ ಜೀವ,
ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯತೆಯಾಗಲಿ
ಎಂದರು.
ಬAದ್ ಗೆ ಸಹಕರಿಸಿ ಅಂಗಡಿ ಮುಂಗಟ್ಟುಗಳನ್ನು
ಸಂಪೂರ್ಣ ಬಂದ್ ಮಾಡಿದ ಎಲ್ಲ ವರ್ತಕರಿಗೆ, ಬೀದಿಬದಿ
ವ್ಯಾಪಾರಿಗಳಿಗೆ, ಎ.ಪಿ.ಎಂ.ಸಿ ಗಂಜ್ ವರ್ತಕರ ಸಂಘಕ್ಕೆ, ಗಂಜ್
ಖರೀದಿದಾರರ ಸಂಘಕ್ಕೆ, ಜಿಲ್ಲಾ ವಕೀಲರ ಸಂಘಕ್ಕೆ, ಕಿರಾಣಿ
ವರ್ತಕರ ಸಂಘಕ್ಕೆ, ಮಾಲ್ ಮಾಲೀಕರಿಗೆ, ಹೋಟೆಲ್
ಮತ್ತು ಖಾನಾವಳಿಗಳ ಮಾಲೀಕರಿಗೆ, ೧೧೭ ದಿನ ಧರಣಿ
ಸತ್ಯಾಗ್ರಹದಲ್ಲಿ ಭಾಗವಹಿಸಿದ ಸಂಘ ಸಂಸ್ಥೆಗಳಿಗೆ,
ಅನ್ನದಾಸೋಹ ಮಾಡಿದ ಖಾನಾವಳಿ, ಹೋಟೆಲ್ ಮಾಲೀಕರಿಗೆ,
೬೦ ದಿನ ದಾಸೋಹ ಮಾಡಿದ ಸುಪ್ತ ದಾನಿಗಳಿಗೆ,
ಮೆರವಣಿಗೆಯಲ್ಲಿ ಪಾಲ್ಗೊಂಡ, ಸಾರ್ವಜನಿಕ ಸಭೆಯಲ್ಲಿ
ಪಾಲ್ಗೊಂಡ ಎಲ್ಲರಿಗೂ, ಶಾಲಾ, ಕಾಲೇಜು ಮುಚ್ಚಿ ಸಹಕರಿಸಿದ
ಕೊಪ್ಪಳ ಭಾಗ್ಯನಗರದ ಶಿಕ್ಷಣ ಸಂಸ್ಥೆಗಳ (ಎರಡು
ಒಕ್ಕೂಟಗಳಿಗೆ) ಮುಖ್ಯಸ್ಥರಿಗೆ, ಪರೀಕ್ಷೆ ಮುಂದೂಡಿ
ಸಹಕರಿಸಿದ ಕೊಪ್ಪಳ ವಿಶ್ವ ವಿದ್ಯಾಲಯಕ್ಕೆ, ಸಾರಿಗೆ ಬಂದ್ ಮಾಡಿ
ಸಹಕಾರ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ
ಮತ್ತು ಚಾಲಕ, ನಿರ್ವಾಹಕರುಗಳಿಗೆ, ೧೦ ಸಾವಿರ ಬಣ್ಣದ
ಕರಪತ್ರ ಉಚಿತವಾಗಿ ಮುದ್ರಿಸಿಕೊಟ್ಟ ಕೊಪ್ಪಳ ಆಫ್ ಸೆಟ್
ಪ್ರಿಂಟರ್ಸ್ ಅಸೋಸಿಯೇಶನ್ ಮತ್ತು ಆರಂಭದಿAದ ಅನೇಕ
ಸಲ ಉಚಿತವಾಗಿ ಕರಪತ್ರ ಮುದ್ರಿಸಿ ಸೇವೆ ಮಾಡಿದ ಐಶ್ವರ್ಯ
ಪ್ರಿಂಟರ್ಸ್ ಗೊಂಡಬಾಳ ಸಹೋದರರಿಗೆ, ಟೀ ಶರ್ಟ್ ಸೇವೆ,
ಘೋಷಣಾ ಫಲಕ ಸೇವೆ, ಅಂಚೆ ಪತ್ರ ಸೇವೆ ಮಾಡಿದ
ಮಹನೀಯರಿಗೆ ವೇದಿಕೆಯಿಂದ ಕೃತಜ್ಞತೆಗಳು
ಸಲ್ಲುತ್ತವೆ.
ಕೊಪ್ಪಳ ಭಾಗ್ಯನಗರದ ಪ್ರಮುಖರು,
ಮಾಲಿನ್ಯಕಾರಕ ಕಾರ್ಖಾನೆಗಳಿಂದ ಬಾಧಿತರಾದ ೨೦
ಗ್ರಾಮಗಳ ರೈತರು ಹತ್ತಾರು ಟ್ರಾ÷್ಯಕ್ಟರ್ ಸಮೇತ
ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ದೊಡ್ಡ ಬೆಂಬಲ ನೀಡಿದ,
ಎಲೆಮರೆ ಕಾಯಿಯಂತೆ ಹೋರಾಟ ವೇದಿಕೆಗೆ
ಗೊತ್ತಿಲ್ಲದಂತೆ ಕೆಲಸ ಮಾಡಿದ, ಬಾಧಿತ ಸುತ್ತಲ
ಗ್ರಾಮಗಳ ಜನರಿಗೆ, ಕೊಪ್ಪಳ ಭಾಗ್ಯನಗರದ
ಜಾಗೃತ ಮಹಿಳೆಯರು, ಸರ್ವ ಧರ್ಮದವರು, ಎಲ್ಲ
ರಾಜಕೀಯ ಪಕ್ಷಗಳು, ಎಲ್ಲ ಜನಪ್ರತಿನಿಧಿಗಳು ಪರಿಸರ
ಧರ್ಮ ಪರಿಪಾಲಿಸಿದ್ದಾರೆ. ಎಲ್ಲ ದಾನಿಗಳಿಗೆ, ಹೆಸರು
ಬಹಿರಂಗಪಡಿಸಲು ಇಚ್ಛಿಸದ ದಾನಿಗಳಿಗೆ, ಇಡೀ ಹೋರಾಟಕ್ಕೆ
ದೊಡ್ಡ ಆರ್ಥಿಕ ಶಕ್ತಿಯಾಗಿ ೨ ಲಕ್ಷ ರೂಪಾಯಿ ನೀಡಿದ ಮಾಜಿ
ಸಚಿವರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ
ಅಮರೇಗೌಡ ಪಾಟೀಲ್ ಬಯ್ಯಾಪುರ ಅವರಿಗೆ, ೧೦೦ನೇ ದಿನದ
ಸಮಾವೇಶ ಮತ್ತು ಬಂದ್ ದಿನದ ಮುಂಜಾನೆ ಮತ್ತು
ಮಧ್ಯಾಹ್ನ ದಾಸೋಹ ನಡೆಸಿದ ಗವಿಮಠದ ಶ್ರೀ ಅಭಿನವ
ಗವಿಸಿದ್ದೇಶ್ವರ ಸ್ವಾಮಿಗಳಿಗೆ, ಅಲ್ಲಿಯ ಪದಾಧಿಕಾರಿಗಳಿಗೆ,
ಶ್ರೀಮಠದ ಸೇವಕರಿಗೆ ವಂದಿಸುತ್ತೇವೆ.
ನಮ್ಮ ಹೋರಾಟಕ್ಕೆ ಶಕ್ತಿ ಕುಂದದAತೆ
ನೋಡಿಕೊಳ್ಳುತ್ತಾ ಬಂದಿರುವ ಎಲ್ಲಾ ಪತ್ರಿಕಾ, ಟಿವಿ
ಮಾಧ್ಯಮದವರಿಗೆ, ಸೋಸಿಯಲ್ ಮೀಡಿಯಾ ಬಳಸಿ ಪ್ರಚಾರ
ಕೈಗೊಂಡ ಎಲ್ಲರಿಗೂ, ಪೊಲೀಸ್ ಮುಖ್ಯಾಧಿಕಾರಿಗಳು,
ನಿರಂತರ ಹೋರಾಟ ಸಮಿತಿಯೊಂದಿಗೆ ಸಂಪರ್ಕ
ಇಟ್ಟುಕೊಂಡು ನಿಭಾಯಿಸಿದ ರೀತಿ ಗಮನಾರ್ಹ. ಸಭೆ
ಶಾಂತಿಯುತವಾಗಿ ನಡೆಯಲು ಸಹಕರಿಸಿದ ಪೊಲೀಸರಿಗೆ
ಹೋರಾಟ ಸಮಿತಿ ಕೃತಜ್ಞವಾಗಿದೆ. ಹೋರಾಟಕ್ಕೆ
ಅಡೆತಡೆಗಳು ಎದುರಾದಾಗ ಸಹಾಯಕ್ಕೆ ಬಂದ
ಜನಪ್ರತಿನಿಧಿಗಳಿಗೆ, ಹೋರಾಟ ಸಮಿತಿಯ ಬೆನ್ನೆಲುಬಾದ
ನಿವೃತ್ತ ನೌಕರರು, ಹಿರಿಯ ಜೀವಗಳು, ಉತ್ಸಾಹದ
ಚಿಲುಮೆಯಾದ ಮಹಿಳಾ ನಾಯಕಿಯರಿಗೆ ಮತ್ತು ಹಿರಿಯ
ನಾಗರಿಕರಿಗೆ, ಗಾಂಧಿನಗರದ ಬಂಧುಗಳಿಗೆ, ಸ್ವಚ್ಚತೆ
ಸೇವೆ ಮಾಡಿದ ಪುರಸಭೆಯ ಪೌರಾಯುಕ್ತರು ಮತ್ತು
ಪೌರ ಸೇವಕರಿಗೆ, ಪ್ರತಿದಿನ ಧರಣಿ ಸತ್ಯಾಗ್ರಹದ ಶಿಬಿರ
ಸ್ವಚ್ಛಗೊಳಿಸಿ, ಕುರ್ಚಿ ಹಾಕಿ ದಣಿವರಿಯದ ಸೇವೆ
ಸಲ್ಲಿಸುತ್ತಿರುವ ಮಕ್ಬೂಲ್ ಸಾಬ್ ರಾಯಚೂರು ಅವರಿಗೆ,
ಆಟೋ ಸಂಚಾರ ನಿಲ್ಲಿಸಿ ಸಹಕಾರ ನೀಡಿದ ಆಟೋ ಚಾಲಕರು,
ಮಾಲಿಕರಿಗೆ, ಹಮಾಲಿ ಕೆಲಸ ಸ್ಥಗಿತ ಮಾಡಿದ, ಎಲ್ಲಾ
ದುಡಿಯುವ ಹಮಾಲರುಗಳಿಗೆ, ಶ್ರಮಿಕರಾದ
ಕಾರ್ಮಿಕರಿಗೆ, ರೈತರಿಗೆ ಹೋರಾಟ ಸಮಿತಿ ಋಣಿಯಾಗಿದೆ.
ಕುಡಿಯುವ ನೀರಿನ ಸೇವೆ ಒದಗಿಸಿದ ಮಾನವ ಬಂಧುತ್ವ
ವೇದಿಕೆಗೆ, ಆರಂಭದ ದಿನದಿಂದ ಧರಣಿಗೆ ನೀರಿನ ಸೇವೆ
ಮಾಡುತ್ತಿರುವ ಮಹಾಂತೇಶ ಕೊತಬಾಳ ಅವರಿಗೆ ರಾಜ್ಯದ
ಮೂಲೆ ಮೂಲೆಗಳಿಂದ ಆಗಮಿಸಿದ ಎಲ್ಲ ಅತಿಥಿಗಳಿಗೆ,
ಸ್ವಾಮಿಗಳಿಗೆ, ಹೋರಾಟದ ಐಕ್ಯ ಶಕ್ತಿಯಾದ ಭಾಗ್ಯನಗರ
ಬಂಧುಗಳಿಗೆ, ಸರ್ವ ಧರ್ಮಗಳ, ಸರ್ವ ಸಮಾಜದ, ಸರ್ವ
ಸಮುದಾಯದ ಜನಗಳಿಗೆ ಹೋರಾಟ ಬೆಂಬಲಿಸಿದ್ದಕ್ಕಾಗಿ
ವಂದಿಸಿದರು.
೧೧೯ನೇ ದಿನದ ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ,
ಮುಂಡರಗಿಯ ಎ.ಕೆ. ಮುಲ್ಲಾನವರ, ವೀರೇಶ ಬ. ಕಟಗಾಲಿ,
ನಿವೃತ್ತ ಇಂಜಿನೀಯರ್ ಡಿ.ವಿ. ಪಾಟೀಲ್, ಸಂಚಾಲಕರಾದ
ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ,
ಎನ್.ಕೆ.ಪಿ.ಎಂ. ಶಾಲೆಯ ಸಂಸ್ಥಾಪಕ ಬಿ.ಕೆ. ಪಟ್ಟಣಶೆಟ್ಟಿ,
ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ ಕೊತಬಾಳ,
ಯಮನೂರಪ್ಪ ಹಳ್ಳಿಕೇರಿ, ರವಿ ಕಾಂತನವರ, ಬಿ. ಜಿ
ಕರಿಗಾರ, ಜಿಬಿ. ಪಾಟೀಲ್, ಬೆಟ್ಟಪ್ಪ ಯತ್ನಟ್ಟಿ ಮೂಕಪ್ಪ
ಮೇಸ್ತಿç ಬಸಾಪುರ ಇದ್ದರು.
ನೇತ್ರಾವತಿ ಹೇ ರ್ ಡ್ರೆಸಸ್ನ 25ನೇ ವಾ ರ್ಷಿ ಕೋ ತ್ಸವದ ನಿಮಿತ್ಯಬು ದ್ಧಿಮಾಂ ಧ್ಯ ಮಕ್ಕಳಿಗೆ ಉಚಿತ ಕ್ಷೌ ರ
ನೇತ್ರಾವತಿ ಹೇ ರ್ ಡ್ರೆಸಸ್ನ 25ನೇ ವಾ ರ್ಷಿ ಕೋ ತ್ಸವದ ನಿಮಿತ್ಯಬು ದ್ಧಿಮಾಂ ಧ್ಯ ಮಕ್ಕಳಿಗೆ ಉಚಿತ ಕ್ಷೌ ರ

Free haircuts for mentally challenged children on the occasion of Netravati Hairdressers' 25th anniversary

ಗಂಗಾವತಿ: ಗಂಗಾವತಿ ನಗರದ ಆನೆಗೊಂ ದಿ ರಸ್ತೆಯಲ್ಲಿರು ವ ನೇ ತ್ರಾ ವತಿ ಹೇ ರ್ ಡ್ರೆಸಸ್ ತನ್ನ
25ನೇ ವಾ ರ್ಷಿ ಕೋ ತ್ಸವದ ನಿಮಿತ್ಯ ವಾ ಗಿ ಪ್ರ ತಿವರ್ಷ ದಂ ತೆ ಈ ವರ್ಷ ವೂ ಕೂ ಡ ಫೆಬ್ರ ವರಿ-26
ರಂ ದು ಲಯನ್ಸ್ ಬು ದ್ಧಿಮಾಂ ಧ್ಯ ಶಾ ಲೆಯ ಹಾ ಗೂ ದಾ ಸನಾ ಳ ಗ್ರಾ ಮದಲ್ಲಿರು ವ ಎ.ಆರ್.ಡಿ
ಸಂ ಸ್ಥೆಯ ಬು ದ್ಧಿಮಾಂ ಧ್ಯ ಶಾ ಲೆಯನ್ನು ಸೇ ರಿ ಒಟ್ಟು ಸು ಮಾ ರು 150 ಮಕ್ಕ ಳಿಗೆ ಉಚಿತ ಕ್ಷೌ ರ
ಮಾ ಡು ವ ಮೂ ಲಕ ಎಲ್ಲಾ ಮಕ್ಕ ಳಿಗೆ ಊಟದ ವ್ಯ ವಸ್ಥೆಯನ್ನು ಮಾ ಡಲಾ ಯಿತು ಎಂ ದು
ನೇ ತ್ರಾ ವತಿ ಹೇ ರ್ ಡ್ರೆಸಸ್ನ ಮಾ ಲಿಕರಾ ದ ಹೆಚ್. ಗೋ ಪಾ ಲ್ರವರು ಪ್ರ ಕಟಣೆಯಲ್ಲಿ ತಿಳಿಸಿದರು .
ಈ ಸಂ ದರ್ಭ ದಲ್ಲಿ ವಿಶೇ ಷ ಅತಿಥಿಗಳಾ ಗಿ ಹೆರಿಗೆ ತಜ್ಞರಾ ದ ಡಾ || ವೀ ಣಾ , ಪಬ್ಲಿಕ್ಪವರ್
ಹೋ ರಾ ಟ ಸಮಿತಿಯ ಆರ್.ಬಿ ಪಾ ಟೀ ಲ್, ಸಂ ಗಾ ಪು ರ ಗ್ರಾ .ಪಂ ಮಾ ಜಿ ಸದಸ್ಯ ರು ಹಾ ಗೂ
ಕಾಂ ಗ್ರೆಸ್ ಮು ಖಂ ಡರಾ ದ ರಜನಿಕಾಂ ತ್, ಅಂ ಬಣ್ಣ, ಖಾ ಜಾ ವಲಿ, ಎ.ಆರ್.ಡಿ ಸಂ ಸ್ಥೆಯ
ಶಿಕ್ಷಕರಾ ದ ಕೇ ದಾ ರನಾ ಥಸ್ವಾ ಮಿ, ಲಯನ್ಸ್ಬು ದ್ಧಿಮಾಂ ಧ್ಯ ಮಕ್ಕ ಳ ಶಾ ಲೆಯ
ಮು ಖ್ಯೋ ಪಾ ಧ್ಯಾ ಯರಾ ದ ಪ್ರ ಭು ಹಿರೇ ಮಠ, ತಾ ವಗೇ ರಿಯ ಅಂ ಧ ವಿರೇ ಶ ಚಿಟ್ಟಿ ಸೇ ರಿದಂ ತೆ
ಇತರರು ಪಾ ಲ್ಗೊಂ ಡಿದ್ದರು ಹಾ ಗೂ ನೇ ತ್ರಾ ವತಿ ಹೇ ರ್ ಡ್ರೆಸಸ್ನ ಶಿವು ಕು ಮಾ ರ, ಆನಂ ದ,
ಶ್ರೀ ನಿವಾ ಸ, ಕಾ ಳಿಂ ಗ, ಸಂ ತೋ ಷ, ಕೊಂ ಡಯ್ಯ , ದೇ ವೆಂ ದ್ರ, ಮಾ ರೇ ಶ, ಕು ಮಾ ರ, ಆಕಾ ಶ,
ಸಾ ಯಿಕು ಮಾ ರ, ಸೇ ರಿದಂ ತೆ ಮತ್ತಿತರರು ಉಪಸ್ಥಿತರಿದ್ದರು .
ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟ
Veerakumar Gadada, the state working president of the Rashtriya Sangharsh Samiti, organized a struggle to increase pensions.

ಗಂಗಾವತಿ:ಸಮೀಪದ ಮರಳಿಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಕೊಪ್ಪಳ ಜಿಲ್ಲೆಯ ಸಭೆ ಜರುಗಿತು.
ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟದ ಮುಖಾಂತರ ಸಾಧ್ಯ ಎಂದು ತಿಳಿಸಿದರು, ಉಪಾಧ್ಯಕ್ಷರಾದ ಚನ್ನಬಸಯ್ಯ ಅವರು ದಿನಾಂಕ 9, 10 ಹಾಗೂ 11 ಮಾರ್ಚನಲ್ಲಿ ದೆಹಲಿಯ ಜಂತರ ಮಂತರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಕರೆ ನೀಡಿದರು. ಮಾಹಿತಿ ಸಂಚಾಲಕರಾದ ಅನೀಲ ಇನಾಮದಾರ ಅವರು ವಾರ್ಷಿಕ ಚಂದಾ, ಅಜೀವ ಚಂದಾದಾರರಾಗಬೇಕೆಂದು ವಿನಂತಿಸಿದರು. ಇನ್ನುಳಿದ ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ, ಎಸ್. ಎಸ್. ಅಲಸುಂಡಿ, ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಶ್ಯಾಮೀದ, ಮೌನೇಶ್ ಪತ್ತಾರ ಆಗಮಿಸಿದ್ದರು.
ಸಕ್ಕರೆ ಕಾರ್ಖಾನೆಯ ನಿವೃತ್ತ ಕಾರ್ಮಿಕರು, ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು, ಸಹಕಾರಿ ಇಲಾಖೆ ಮತ್ತು ಸಾರಿಗೆ ಇಲಾಖೆಯ ನಿವೃತ್ತ ನೌಕರದಾರರು ಭಾಗವಹಿಸಿದ್ದರು.

ಕಾರ್ಯಕ್ರಮ ರಮೇಶ್ ಕುಲಕರ್ಣಿ, ಮೌನಪ್ಪ ನಾಯಕ, ವೀರಯ್ಯಸ್ವಾಮಿ, ಮುದಗಲ್ ಬಸಪ್ಪ, ಎಂ. ಹೊನ್ನಪ್ಪ, ಬಸಪ್ಪ ಉಮಲೂಟಿ, ಆಲಮಯ್ಯ, ಶಿವರಾಜ್ ಹಾಗೂ ಸುಭಾನಿ ಇವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಿತು ಎಂದು ಸಂಘಟಕರಾದ ಶಾಂತಿನಾಥ ಪಾಟೀಲ್ ತಿಳಿಸಿದರು.
ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ಅಗ್ರಹಿಸಿ ಪ್ರತಿಭಟನೆ.
ಕೊಪ್ಪಳ: ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಲು ಅಗ್ರಹಿಸಿ ಪ್ರತಿಭಟನೆ

Protest demanding immediate halt to the process of laying off around 7,000 ASHA workers in the name of rationalization.

.
ಕೊಪ್ಪಳ:ಈ ಬರುವ ಮಾರ್ಚ್ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಬೇಕು, ಹಾಗೂ ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು
ಎಂದು ಆಗ್ರಹಿಸಿ ನಾಳೆ (ಫೆಬ್ರವರಿ 28) ಕೊಪ್ಪಳ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶರಣು ಗಡ್ಡಿ ತಿಳಿಸಿದ್ದಾರೆ.
ಈ ಮೆರವಣಿಗೆ ಕೊಪ್ಪಳ ನಗರದ ಈಶ್ವರ್ ಪಾರ್ಕ್ನಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದ್ದು, ಅಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಶಕ್ತಿಯಾಗಿದ್ದು, ಗರ್ಭಿಣಿ ಮಹಿಳೆಯರು, ನವಜಾತ ಶಿಶುಗಳು, ಲಸಿಕೆ ಅಭಿಯಾನ, ಸಾಂಕ್ರಾಮಿಕ ರೋಗ ನಿಯಂತ್ರಣ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅತ್ಯಲ್ಪ ಗೌರವಧನ, ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಉದ್ಯೋಗ ಭದ್ರತೆ ಇಲ್ಲದ ಪರಿಸ್ಥಿತಿ ಅವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಹಿಂದೆ ನೀಡಿದ ಭರವಸೆಗಳನ್ನು ಇಂದಿಗೂ ಈಡೇರಿಸದಿರುವುದು ವಿಷಾದಕರ ಸಂಗತಿಯಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಆಗ್ರಹದೊಂದಿಗೆ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಅದರ ಭಾಗವಾಗಿ ಕೊಪ್ಪಳದಲ್ಲಿ ಈ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ನಾಳೆಯ ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ
ಕುರಿ-ಮೇಕೆ ಘಟಕ ಯೋಜನೆ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ
ಕುರಿ-ಮೇಕೆ ಘಟಕ ಯೋಜನೆ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನ

Application invited for implementation of Sheep-Goat Unit Project
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2025-26 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ (10+1) ಕುರಿ-ಮೇಕೆ ಘಟಕ ಯೋಜನೆಯ ಅನುಷ್ಠಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಕ್ಕೆ 1 ಲಕ್ಷ ಘಟಕದ ವೆಚ್ಚವನ್ನು ನಿಗದಿಪಡಿಸಿ ಶೇ.90 ರಷ್ಟು ಸಹಾಯಧನ ಮತ್ತು ಶೇ.10 ರಷ್ಟು ಫಲಾನುಭವಿ ವಂತಿಕೆ ಅಥವಾ ಬ್ಯಾಂಕ್ ಸಾಲದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 17, ಪರಿಶಿಷ್ಠ ಪಂಗಡಕ್ಕೆ 10 ಗುರಿಗಳನ್ನು ನಿಗದಿ ಪಡಿಸಿದೆ.
ಅರ್ಜಿ ಸಲ್ಲಿಸಲು ಅರ್ಜಿದಾರರು ಫ್ರೂಟ್ಸ್ ಐಡಿ (ಗುರುತಿನ ಸಂಖ್ಯೆ) ಹೊಂದಿರಬೇಕು. ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಕುರಿ-ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಆರ್.ಡಿ ನಂಬರ್ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸರ್ಕಾರದ ನಿಯಮಗಳಂತೆ ವಿಧಾನ ಸಭಾ ಮತಕ್ಷೇತ್ರವಾರು ಹಾಗೂ ಮಹಿಳೆಯರಿಗೆ ಶೇ.33 ರಷ್ಟು, ವಿಶೇಷ ಚೇತನರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು. ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆ ಅಥವಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ವಿವಿಧ ಯೋಜನೆಗಳಲ್ಲಿ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಮತ್ತೆ ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದ್ದು, ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ ಪ್ರತಿ ಮತ್ತು ಫಲಾನುಭವಿ ಭಾವಚಿತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ ಇಲ್ಲಿ ಸಂಪರ್ಕಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಜಿಲ್ಲೆಯ ಅರ್ಹ ಕುರಿ-ಮೇಕೆ ಸಾಕಾಣಿಕೆದಾರರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಪ್ಲಸ್ ಅಡಿ ಅರಿವು ಕಾರ್ಯಾಗಾರ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಪ್ಲಸ್ ಅಡಿ ಅರಿವು ಕಾರ್ಯಾಗಾರ

Awareness workshop under Yuvanidhi Plus at Government First Grade College

ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಯುವನಿಧಿ ಪ್ಲಸ್ ಅಡಿಯಲ್ಲಿ ಉಚಿತವಾಗಿ ಕೌಶಲ್ಯ ತರಬೇತಿ ನೀಡಲು ಗುರುವಾರದಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗವಿಶಂಕರ್ ಕೆ., ಜಿಲ್ಲಾ ಉದ್ಯೋಗಾಧಿಕಾರಿ ಮಂಜುಳಾ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ವೈ.ಬಿ ಅಂಗಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಪ್ರಾಂಶುಪಾಲರಾದ ಮೌನೇಶ ರಾಠೋಡ್, ಸಹಾಯಕ ನಿರ್ದೇಶಕ ಮಂಜುನಾಥ ಬೆಲ್ಲದ್, ಸಿಡಾಕ್ ತರಬೇತಿ ಅಧಿಕಾರಿ ಶೋಭಾ, ಕುಕನೂರಿನ ಸರ್ಕಾರಿ ಕೈಗಾರಿಕಾ ಕೇಂದ್ರದ ಪ್ರಭಾರಿ ಪ್ರಾಂಶುಪಾಲರಾದ ಮಂಜಪ್ಪ, ಸರ್ಕಾರಿ ಕೈಗಾರಿಕಾ ಕೇಂದ್ರ ತಳಕಲ್ನ ಪ್ರಭಾರಿ ಪ್ರಾಂಶುಪಾಲರಾದ ಮಹ್ಮದ ರಫಿ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು ಮತ್ತು 250ಕ್ಕೂ ಹೆಚ್ಚು ಅಭ್ಯರ್ಥಿಗಳು, ಯುವನಿಧಿ ಫಲಾನುಭವಿಗಳು ತರಬೇತಿ ಕಾರ್ಯಾಗಾರದಲ್ಲಿ ಹಾಜರಿದ್ದು ಮಾಹಿತಿ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ
ಫೆ.28 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ

Second PUC exams begin from Feb. 28
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪರೀಕ್ಷೆಗಳು ಜಿಲ್ಲೆಯಾದ್ಯಂತ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ
ಕೊಪ್ಪಳದ 6 ಪರೀಕ್ಷಾ ಕೇಂದ್ರಗಳಲ್ಲಿ 4943 ವಿದ್ಯಾರ್ಥಿಗಳು, ಗಂಗಾವತಿಯ 9 ಪರೀಕ್ಷಾ ಕೇಂದ್ರಗಳಲ್ಲಿ 5489 ವಿದ್ಯಾರ್ಥಿಗಳು, ಕುಷ್ಟಗಿಯ 4 ಪರೀಕ್ಷಾ ಕೇಂದ್ರಗಳಲ್ಲಿ 2209 ವಿದ್ಯಾರ್ಥಿಗಳು, ಯಲಬುರ್ಗಾದ 2 ಪರೀಕ್ಷಾ ಕೇಂದ್ರಗಳಲ್ಲಿ 932 ವಿದ್ಯಾರ್ಥಿಗಳು, ಕುಕನೂರಿನ 2 ಪರೀಕ್ಷಾ ಕೇಂದ್ರಗಳಲ್ಲಿ 1078 ವಿದ್ಯಾರ್ಥಿಗಳು, ಕಾರಟಗಿಯ 1 ಪರೀಕ್ಷಾ ಕೇಂದ್ರದಲ್ಲಿ 646 ವಿದ್ಯಾರ್ಥಿಗಳು ಹಾಗೂ ಕನಕಗಿರಿಯ 1 ಪರೀಕ್ಷಾ ಕೇಂದ್ರದಲ್ಲಿ 547 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 15,844 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ನೋAದಣಿ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ರೆಗ್ಯುಲರ್ 13580, ಖಾಸಗಿ 463, ಪುನರಾವರ್ತಿತ 1794, ಫಲಿತಾಂಶ ಸುಧಾರಣೆಗೆ 7 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.1 ರಂದು ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ
ಮಾ.1 ರಂದು ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ

Sri Jagadguru Sri Renukacharya Jayanti program on March 1
ಕೊಪ್ಪಳ ಫೆಬ್ರವರಿ 26, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ(ಯುಗಮಾನೋತ್ಸವ) ಆಚರಣೆ ಕಾರ್ಯಕ್ರಮವನ್ನು ಮಾರ್ಚ್ 1 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಘನ ಉಪಸ್ಥಿತಿ ವಹಿಸುವರು. ರಾಬಕೊವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನ್ ಸಾಬ್ ನಬೀಸಾಬ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ.ಮೋಹನ್ ರಾಜ್ ಅವರು ಭಾಗವಹಿಸುವರು.
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ವಿಭಾಗದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಹಾ.ಮಾ.ನಾಗಾರ್ಜುನ ಅವರು ಜಗದ್ಗುರು ಶ್ರೀ ರೇಣುಕಾಚಾರ್ಯ ರವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿನ ದೇಶ ದ್ರೋಹ ಚಟುವಟಿಕೆ ಆರೋಪ: ತನಿಖೆಗೆ ಪ್ರೌಢ ಶಿಕ್ಷಣ ಇಲಾಖೆ ಆದೇಶ
ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿನ ದೇಶ ದ್ರೋಹ ಚಟುವಟಿಕೆ ಆರೋಪ: ತನಿಖೆಗೆ ಪ್ರೌಢ ಶಿಕ್ಷಣ ಇಲಾಖೆ ಆದೇಶ

Allegations of treasonous activities at Samara International Islamic School: Secondary Education Department orders investigation

ಬೆಂಗಳೂರು: ಧಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯಲ್ಲಿ ನಡೆಯುತ್ತಿದೆ ಎನ್ನಲಾದ ದೇಶ ದ್ರೋಹ ಚಟುವಟಿಕೆ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ [ಪ್ರೌಢ ಶಿಕ್ಷಣ] ನಿರ್ದೇಶಕರು ಆದೇಶಿಸಿದ್ದಾರೆ.
ಎಚ್.ಬಿ.ಆರ್ ಬಡಾವಣೆಯ ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಸಲಾಂ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.

ದೂರುದಾರರ ಪುತ್ರ ಇದೇ ಶಾಲೆಯಲ್ಲಿ 2025-26ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಸದರಿ ಶಾಲೆಯು ಕಾನೂನಿಗೆ ವಿರುದ್ಧವಾಗಿ ನಡೆಯುತ್ತಿದೆ. ಇಲ್ಲಿನ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಆಡಳಿತ ಮಂಡಳಿಯನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಕೋರಿದ್ದರು.
ಕಳೆದ 2019 ರ ನವೆಂಬರ್ 24 ರಂದು ಯೂ ಟ್ಯೂಬ್ ಚಾಲನ್ನ ವರದಿಯ ಪ್ರಕಾರ ಸದರಿ ಶಾಲೆಯಲ್ಲಿ ದೇಶ ವಿರೋಧಿ ಚಟುಟಿಕೆ ನಡೆಯುತ್ತಿದೆ. ಮುಸ್ಲಿಂ ಜನಾಂಗದವರ ಚರಿತ್ರೆಯನ್ನು ವಿವರಿಸುವ ಸಂದರ್ಭದಲ್ಲಿ ರಾಷ್ಟ್ರವನ್ನು ಮುಸ್ಮಾಂನರ ಆಡಳಿತಕ್ಕೆ ಒಳಪಡಿಸಬೇಕಾದ ಅಗತ್ಯಗಳ ಬಗ್ಗೆ ಪ್ರಸ್ತಾವನೆ ಮತ್ತು ಚರ್ಚೆಯನ್ನು ಜಾಮಿಯ ಮೊಹಮ್ಮದೀಯ ಮನ್ನೂರ ಎಜುಕೇಷನ್ ಸೊಸೈಟಿಯವರು ಮಾಡಿರುತ್ತಾರೆ ಎಂದು ಆಪಾದಿಸಿದ್ದಾರೆ.
ಸದರಿ ಇಸ್ಲಾಂ ಟ್ರಸ್ಟ್ ನವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾವಲ್ಲಿರುವ ಜಾಮಿಯ ಮೊಹಮ್ಮದೀಯ ಮನ್ಸೂರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ನಾಜಿಯ ಅನ್ಸಾರಿ ಬೆಂಗಳೂರಿನಲ್ಲಿ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಗೆ ಸಮಾವೇಶಕ್ಕಾಗಿ ಬಂದಿದ್ದರು. ಅವರು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿರುವ ಕಾರಣಕ್ಕಾಗಿ ಆಕೆಯ ಪತಿಯನ್ನು ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿತ್ತು ಇದಕ್ಕೆ ನೊಂದು ಸಂಸ್ಥೆ ವಿರುದ್ಧ ಮಹಾರಾಷ್ಟ್ರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ ಕಾರಣ ಆಕೆಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದು ರಾಷ್ಟ್ರದ ಏಕತೆಗೆ ಭಂಗ ಬರುವಂತಹ ವಿಷಯವಾಗಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರ ರಾಜ್ಯದಿಂದ ಬಂದ್ದ ವಿದ್ಯಾರ್ಥಿಯೊಬ್ಬ ಈ ಶಾಲೆಯಲ್ಲಿನ ಕಾನೂನು ಬಾಹಿರ ಚಟುವಟಿಕೆಗಳ ಕುರಿತು 2024ರ ಏಪ್ರಿಲ್ ನಲ್ಲಿ 25 ರಂದು ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಎಲ್ಲಾ ದೂರುಗಳನ್ನು ಪರಿಗಣಿಸಿ ಸದರಿ ದೂರನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.
ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ
ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ

43rd Punya Smaranotsavam program of Lingaykya Sri Virupaksheshwara Shivacharya Mahaswamy

ಕೊಪ್ಪಳ ಜಿಲ್ಲೆಯ ಕಾರಟಗಿ ನಗರದ ಮಹಾ ತಪೋನಿಧಿ ಸ್ವಾತಂತ್ರ್ಯ ಸಂತ,, ತ್ರಿವಿಧ ದಾಸೋಹಿ ಹಾಗೂ ಮಹಿಮಾ ಪುರುಷರಾಗಿರುವ ಪರಮಪೂಜ್ಯ ಲಿಂಗೈಕ್ಯ ಶ್ರೀ ವಿರೂಪಾಕ್ಷೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ43ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ತಲೆಕಾನ್ ಹಿರೇಮಠದಲ್ಲಿ ನಡೆಯಿತು,,, ಪರಮಪೂಜ್ಯ ಶ್ರೀ ವೀರಭದ್ರ ಶರಣರ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಕಾರಟಗಿ ಪಟ್ಟಣದ ತಲೆಕಾನ್ ಹಿರೇಮಠಕ್ಕೆ ಆಗಮಿಸಿದ್ದ ಭಕ್ತಾದಿಗಳು ಪರಮಪೂಜ್ಯರ ಆಶೀರ್ವಾದ ಪಡೆದರು
ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ
ತಿಪಟೂರನಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ದಲಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನ

Dalit woman attempts suicide after being harassed by Equitas Small Finance Bank staff in Tiptur

ವರದಿ :ಮಂಜು ಗುರುಗದಹಳ್ಳಿ
ತಿಪಟೂರು. ತಾಲ್ಲೂಕಿನ ಹರಚನಹಳ್ಳಿ ಕಾಲೋನಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಸಾಲದ ಕಂತನ್ನು ಪಾವತಿಸುವಂತೆ ತೀವ್ರ ಒತ್ತಡ ಮತ್ತು ಬೆದರಿಕೆ ಹಾಕಿದ್ದರಿಂದ ಕಳೆನಾಶಕ ಮತ್ತು ಕೆಲ ಮಾತ್ರೆಗಳನ್ನು ನುಂಗಿದ್ದಾರೆ ಎಂದು ಅವರ ಮಗ ಆರೋಪಿಸಿದ್ದಾರೆ
ಮಂಜುಳಾ ರವರ ಪತ್ನಿ ಗಂಗಾಧರಯ್ಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 10 ಲಕ್ಷ ಸಾಲ ಪಡೆದಿದ್ದು 5 ಲಕ್ಷವನ್ನು ಸಾಲದ ಕಂತನ್ನು ಕಟ್ಟಿದ್ದಾರೆ
ಆದರೆ ಮನೆ ಮಾಲೀಕ ಗಂಗಾಧರ್ ಅವರಿಗೆ ಅನಾರೋಗ್ಯ ಇರುವ ಕಾರಣ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿಲ್ಲ. ಇನ್ನು ಫೈನಾನ್ಸ್ ಸಿಬ್ಬಂದಿಯವರು ಬಡ್ಡಿಯ ಸಮೇತ 11 ಲಕ್ಷ ಕಟ್ಟಲು ಒತ್ತಡ ಏರಿದ್ದಾರೆ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ.
ದಿನೇ ದಿನೇ ರಾಜ್ಯದಲ್ಲಿ ಮುಂದುವರಿದ ಕೆಲ
ಫೈನಾನ್ಸ್ ಗಳಿಂದ ನಿಂದ ಕಿರುಕು
ಳ ಅದೆಷ್ಟೋ ಬಡ ಕುಟುಂಬಳು ಬೀದಿಗೆ ಬೀದಿವೆ
ಇನ್ನಾದರೂ ಖಾಸಗಿ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ಕ್ರಮ ಕೈಗೊಂಡು ಬಡ ಸಮುದಾಯಗಳ ಪರ ನೊಂದ ಜನಕ್ಕೆ ಕಣ್ಣೀರು ಒರೆಸುತ್ತಾ ಎಂದು ಕಾದು ನೋಡಬೇಕಾಗಿದೆ.
ವರದಿ :ಮಂಜು ಗುರುಗದಹಳ್ಳಿ
ಮೈದಾ ಹಿಟ್ಟು ಒಳ್ಳೇದಲ್ಲ ಅಂತ ಹೇಳತಾರೆ ಯಾಕೆ? ಇದರಿಂದ ದೇಹದ ಮೇಲೆ ಆಗುವ ಪರಿಣಾಮಗಳು ಏನು?
ಮೈದಾ ಹಿಟ್ಟು ಒಳ್ಳೇದಲ್ಲ ಅಂತ ಹೇಳತಾರೆ ಯಾಕೆ? ಇದರಿಂದ ದೇಹದ ಮೇಲೆ ಆಗುವ ಪರಿಣಾಮಗಳು ಏನು?

Why do you say that maida flour is not good? What are the effects of this on the body?

ಮೈದಾ ಒಳ್ಳೆಯದಲ್ಲ ಎಂದು ನಾನೂ ಕೇಳಿದ್ದೇನೆ. ಈ ವಿಷಯಕ್ಕೆ ನಾನು ಕೊಡುವ ಪ್ರಾಮುಖ್ಯತೆ – ‘ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು’ಮೈದಾ ಎಂಬುದು ಗೋಧಿಯಿಂದ ತೆಗೆದ ಹಿಟ್ಟಿನ ರಿಫೈನ್ ಮಾಡಿದ ಅಂಶ. ಇದನ್ನು ತಯಾರಿಸುವಾಗ ಶುದ್ಧೀಕರಿಸಲು, ಬೆಳ್ಳಗೆ ಮಾಡಲು ಕೆಲವು ರಾಸಾಯನಿಕಗಳನ್ನು ಬಳಸುತ್ತಾರೆ, ಇದರಿಂದ ಕ್ಯಾನ್ಸರ, ಬೊಜ್ಜು ಹಾಗೂ ಮಧುಮೇಹದಂತಹ ರೋಗಗಳು ಬರುತ್ತವೆಂದು ವರದಿಗಳು ಹೇಳಿವೆ. ಕೆನಡಾ ದೇಶದ ವಿಶ್ವವಿದ್ಯಾಲಯಗಳು ಇದರ ಮೇಲೆ ಪ್ರಯೋಗ ನಡೆಸಿದ್ದಾಗಿ ಹೇಳಿದ್ದಾರೆ.ಕೆನಡಾದ ಜನ ಬೆಳಗಿನ ತಿಂಡಿಗೆ, ಮದ್ಯಾಹ್ನದ ಊಟಕ್ಕೆ, ರಾತ್ರಿಯ ಊಟಕ್ಕೆ ವಿವಿಧ ರೀತಿಯ ಬ್ರೆಡಗಳನ್ನು ಉಪಯೋಗಿಸುತ್ತಾರೆ. ಅವರ ಬ್ರೆಡ್, ಬ್ರೆಡ ರೋಲ, ಕೇಕ್, ಬರ್ಗರ, ಪಿಜ್ಜಾ ಇತ್ಯಾದಿ ಎಲ್ಲದರಲ್ಲೂ ಮೈದಾ ಉಪಯೋಗಿಸುತ್ತಾರೆ. ಇವರು ದಿನದ ಮೂರೂ ಹೊತ್ತು ಮೈದಾ ಸೇವನೆ ಮಾಡುವವರು. ನಮ್ಮ ಈಗಿನ ಊಟದ ಪದ್ಧತಿ ನೋಡಿದರೆ ನಾವು ಮೂಲತಃ ಅಕ್ಕಿ, ಗೋಧಿ, ಜೋಳ, ರಾಗಿಯನ್ನು ಉಪಯೋಗಿಸುತ್ತೇವೆ. ನಾವು ಬ್ರೆಡ್ ಅಥವಾ ಇತರ ಮೈದಾದಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಸರಾಸರಿ ವಾರಕ್ಕೊಮ್ಮೆ ಅಥವಾ ಇನ್ನೂ ಕಡಿಮೆ. ನಮಗೂ ಅವರಿಗೂ ಮೈದಾ ಸೇವನೆಯ ವಿಷಯದಲ್ಲಿ ಅಂತರ ಬಹಳವಿದೆ.ಇಷ್ಟಕ್ಕೂ ಮೈದಾ ಸರಿಯಲ್ಲ ಎಂದು ಹೇಳುವ ಪಾಶ್ಚಾತ್ಯ ದೇಶಗಳಲ್ಲಿ ಎಷ್ಟು ದೇಶಗಳಲ್ಲಿ ಮೈದಾ ಬ್ಯಾನ ಮಾಡಿದ್ದಾರೆ ?ನಾವು ರಸ್ತೆ ಬದಿ ತಯಾರಿಸುವ, ಧೂಳು ಸೇರಿದ ಮಿರ್ಚಿಭಜಿ, ಪಾಣಿಪುರಿ, ಇತರ ತಿಂಡಿಗಳನ್ನು ತಿಂದು ಅರಗಿಸಿಕೊಳ್ಳುತ್ತೇವೆ. ಕೀಟನಾಶಕ ಸಿಂಪಡಿಸಿದ ತರಕಾರಿ, ಹಣ್ಣುಗಳನ್ನು ತಿಂದು ಅರಗಿಸಿಕೊಳ್ಳುತ್ತೇವೆ. ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಮೆಣಸು, ದಾಲ್ಚಿನ್ನಿ, ಲವಂಗ, ಕರಿಬೇವಿನಂತಹ ಔಷಧಿಯುಕ್ತ ಪದಾರ್ಥಗಳನ್ನು ಅವರಿಗಿಂತ ಹೇರಳವಾಗಿ ಸೇವಿಸುತ್ತೇವೆ. ನಾವು ದಿನನಿತ್ಯ ತಿನ್ನುವ ಮಸಾಲೆ ಭರಿತ ಸಾಮಾನುಗಳನ್ನು ಅವರಿಗೆ ಒಂದು ಹೊತ್ತೂ ತಿನಲಾಗುವುದಿಲ್ಲ. ಅವರ ಇಮ್ಯುನಿಟಿ ಲೆವಲ್ಲೇ ಬೇರೆ ನಮ್ಮ ಇಮ್ಯುನಿಟಿ ಲೆವಲ್ಲೇ ಬೇರೆ. ಅವರಿಗೆ ತೊಂದರೆ ಕೊಡಬಹುದಾದ ಮೈದಾದಲ್ಲಿನ ರಸಾಯನಿಕಗಳು ನಮಗೇನೂ ಮಾಡಲಾರವು.೫೦ ವರ್ಷಗಳ ಹಿಂದೆ ಇದ್ದ ಕೀಟನಾಶಕಗಳು ಈಗ ಪ್ರಯೋಜನವಿಲ್ಲವೆಂದು ವಿಜ್ಞಾನ ಹೇಳುತ್ತದೆ. ಏಕೆಂದರೆ ಈ ಅವಧಿಯಲ್ಲಿ ಕೀಟಗಳು ಆ ರಾಸಾಯನಿಕಕ್ಕೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಮೈದಾ ಕೆಟ್ಟದ್ದು ಎಂದು ಕೇಳಿ ಬಂದದ್ದು ಇತ್ತೀಚೆಗಷ್ಟೇ. ನಾವೆಲ್ಲ ಈ ವರಗೆ ಸಾಮಾನ್ಯ ರೀತಿಯಲ್ಲಿ ಮೈದಾ ತಿನ್ನುತ್ತಲೇ ಇದ್ದೇವೆ. ಈಗ ನನಗೆ ೬೦ ವರ್ಷ. ನಾವೂ ಮೈದಾದಲ್ಲಿರುವ ರಸಾಯನಿಕಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದೇವೆ. ಹೀಗಾಗಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
.

ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
GTTC: Invited applications for the post of Guest Lecturer
ಕೊಪ್ಪಳ ಫೆಬ್ರವರಿ 25, (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ದದೇಗಲ್ನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿ.ಟಿ.ಡಿ.ಎಮ್, ಡಿ.ಎಮ್.ಸಿ.ಹೆಚ್ ಮತ್ತು ಇ&ಸಿ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೊಮಾ ಟೂಲ್ ಮತ್ತು ಡೈ ಮೇಕಿಂಗ್(ಡಿ.ಟಿ.ಡಿ.ಎಮ್), ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್(ಪಿ.ಟಿ.ಡಿ.ಟಿ), ಎಲೆಕ್ಟಾçನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿAಗ್ ಪದವಿ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಮಾರ್ಚ್ 6 ರೊಳಗಾಗಿ ಜಿಟಿಟಿಸಿ ಕೊಪ್ಪಳ ಕಛೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಇ-ಮೇಲ್ ಐಡಿ: gttckoppal@gmail.com ಗೆ ನಿಮ್ಮ ಸ್ವ-ವಿವರವುಳ್ಳ ಬಯೋಡೆಟಾವನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ಅಥವಾ ಮೌನೇಶ್, ವಿಭಾಗದ ಮುಖ್ಯಸ್ಥರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್, ದದೇಗಲ್, ಮೊ. ಸಂಖ್ಯೆ-7507094445 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬಿಸಿಲಿನ ಪ್ರಖರತೆ ಹಾಗೂ ತೀವ್ರತೆಯಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಸಲಹೆಗಳು
ಬಿಸಿಲಿನ ಪ್ರಖರತೆ ಹಾಗೂ ತೀವ್ರತೆಯಿಂದ ಪಾರಾಗಲು ಆರೋಗ್ಯ ಇಲಾಖೆಯಿಂದ ಸಲಹೆಗಳು

Health Department's tips to avoid the harsh and intense sun

ಕೊಪ್ಪಳ ಫೆಬ್ರವರಿ 25, (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬAದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಇವರು ಸಲಹೆಗಳನ್ನು ನೀಡಿದ್ದಾರೆ.
ಬೇಸಿಗೆ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ/ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸಬೇಕು. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ/ಶಾಖ ತರಂಗ(ಹೀಟ್ ವೇವ್)ದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕು.
ಬಿಸಿಲಿನಲ್ಲಿ ಹೊರಗಡೆ ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ/ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಿ. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯಿರಿ. ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ- ಡಾ. ಸುರೇಶ ಬಿ.ಇಟ್ನಾಳ
ಹಾವು ಕಡಿತದಿಂದಾಗುವ ಜೀವ ಹಾನಿ ತಡೆಗೆ ಜಾಗೃತಿ ಮೂಡಿಸಿ- ಡಾ. ಸುರೇಶ ಬಿ.ಇಟ್ನಾಳ

Create awareness to prevent loss of life due to snakebite - Dr. Suresh B. Itnal

ಕೊಪ್ಪಳ ಫೆಬ್ರುವರಿ 25 (ಕರ್ನಾಟಕ ವಾರ್ತೆ): ಹಾವು ಕಡಿತದಿಂದ ಉಂಟಾಗುವ ಜೀವ ಹಾನಿಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಕ್ತ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ಭಾರತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೇಶ ಮತ್ತು ಶೇ.70 ಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ಅವಲಂಬಿತರಾಗಿದ್ದಾರೆ. ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ಹಾವುಗಳ ತಿರುಗಾಟ ಹೆಚ್ಚಿರುತ್ತದೆ. ಕೃಷಿ ಮತ್ತು ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂತಹ ಕೃಷಿ ಕುಲಕಸುಬುಗಳಲ್ಲಿ ತೊಡಗಿರುವ ರೈತರು ಮತ್ತು ಗ್ರಾಮೀಣ ಭಾಗದ ಜನರಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಗಳ ಕುರಿತು ಅರಿವು ಮೂಡಸಬೇಕು ಎಂದರು.
ಮನೆಗಳ ಸುತ್ತ ಮುತ್ತಲಿನ ತಾಣಗಳಲ್ಲಿ ಕಸದ ರಾಸಿ ಇದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ. ಗಿಡಗಂಟೆಗಳು ತುಂಬಿದ ದಾರಿ ಹಾವು ಕಡಿತದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾರ್ವಜನಿಕರು ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ 24*7 ಚಿಕಿತ್ಸೆಯನ್ನು ನೀಡಲು ಎಲ್ಲಾ ಆಸ್ಪತ್ರೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾವು ಕಡಿತ ಉಂಟಾದ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ನಾಟಿ ವೈದ್ಯರ ಬಳಿ ಹೋಗದೇ ಕೂಡಲೇ 40 ನಿಮಿಷದೊಳಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯದುಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ಮನೆಯ ಹೊರಗಡೆ ನೆಲದ ಮೇಲೆ ಮಲಗುವುದರಿಂದ ಹಾವು ಅಥವಾ ಇತರೆ ಕೀಟಗಳು ಸಂಚರಿಸಬಹುದು. ಹಾಗಾಗಿ ಮೇಜು, ದಿವಾನ ಕಾಟ್, ಕಟ್ಟೆ ಅಥವಾ ಎತ್ತರ ಸ್ಥಳಗಳಲ್ಲಿ ಮಲಗುವುದು ಸೂಕ್ತವಾಗಿದೆ. ಬೆಳಕಿನಲ್ಲದೆ ಬರಿಗಾಲಲ್ಲಿ ನಡೆಯುವುದು ಹಾವು ಕಡಿತದ ಸಂಭವವನ್ನು ಹೆಚ್ಚಿಸುತ್ತದೆ. ಸ್ವಚ್ಛ ವಾಗಿರದ ಹೊಲ ಗದ್ದೆಗಳು ಹಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ ಹಾಗೂ ಅಲ್ಲಿ ನಡೆದಾಡುವುದು ಅಪಾಯಕಾರಿ ಮತ್ತು ಸೌದೆಗಳ ಕಟ್ಟನ್ನು ಪರಿಶೀಲಿಸದೇ ಎತ್ತುವುದು ಅಪಾಯಕಾರಿಯಾಗಿದ್ದು, ಹಾವು ಕಡಿತದಿಂದ ಪಾರಾಗಲು ಸಾರ್ವಜನಿಕರು ಕಸವನ್ನು ಬುಟ್ಟಿಗಳಲ್ಲಿ ಹಾಕಿ, ತಮ್ಮ ಮನೆ ಸುತ್ತಮುತ್ತ ಗಿಡಗಂಟೆಗಳನ್ನು ಚಿಕ್ಕದಾಗಿ ಕತ್ತರಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಡೆದಾಡುವ ದಾರಿಗಳನ್ನು ಕಳೆ ಮುಕ್ತ ಮಾಡುವದರಿಂದ ಹಾವಿನ ಕಡಿತವನ್ನು ಕಡಿಮೆ ಮಾಡಬಹುದು. ರಾತ್ರಿ ಸಮಯದಲ್ಲಿ ಓಡಾಡುವಾಗ ಟಾರ್ಚನ್ನು ಉಪಯೋಗಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಹೆಚ್ಚು ಸುರಕ್ಷಿತ. ರೈತರು ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ಗಮ್ ಪೂನ್ (ರಬ್ಬರ ಬೂಟ್) ಉಪಯೋಗಿಸಬೇಕು. ಹೊಲ ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಬೇಕು. ಸೌದೆ ಕಟ್ಟುಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸುವ ಅಥವಾ ಎತ್ತಿಕೊಳ್ಳುವ ಮೊದಲು ಪರಿಶೀಲಿಸಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ವಿಶೇಷವಾಗಿ ರೈತರು ಈ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವು ಕಡಿತವನ್ನು ತಡೆಗಟ್ಟಬೇಕೆಂದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾ ಮಹಾಂತೇಶ ಎಸ್. ದರಗದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಆರ್.ಸಿ.ಹೆಚ್. ಅಧಿಕಾರಿ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಕಾಶ ವಿ., ಆರೋಗ್ಯ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವಿಂದ್ರನಾಥ ಎಂ.ಹೆಚ್., ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ ಪ್ರಕಾಶ ಹೆಚ್. ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಮತ್ತು ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಸ್ಥಿತರಿದ್ದರು.
ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ AIMSS ನಿಂದ ಮನವಿ
ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ AIMSS ನಿಂದ ಮನವಿ

AIMSS appeals for solutions to women and children's issues

ಕೊಪ್ಪಳ:ಇಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS)ಯ ಕೊಪ್ಪಳ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ AIMSS ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳಾ ಮಜ್ಜಿಗಿ ಅವರು ಮಾತನಾಡಿ “ಉದ್ಯೋಗದ ಸ್ಥಳಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ (ICC) ರಚಿಸಬೇಕು. ಕೊಪ್ಪಳವೂ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚುತ್ತಿರುವ
ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟಲು ಕೂಡಲೇ ಮಾನ್ಯ ಕಾಯ್ದೆಯನ್ನು ಜಾರಿಗೊಳಿಸಿಬೇಕು. ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಹಾಗೂ ಸ್ತ್ರೀ ಭ್ರೂಣ ಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಏಟು ಕೊಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳನ್ನು ಬಲಪಡಿಸಿ, ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಬೇಕು.
ಆರೋಗ್ಯದ ಖಾಸಗೀಕರಣದಿಂದಾಗಿ ಬಡ ಮತ್ತು ಕೆಳವರ್ಗದ ಹೆಣ್ಣು ಮಕ್ಕಳು ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು PHC ಗಳೂ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಮೂಲಭೂತ ಸೌಲಭ್ಯಗಳು, ತಜ್ಞ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರು ಎಲ್ಲಾ ಸಮಯದಲ್ಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಮಧ್ಯಾಹ್ನದ ಬಿಸಿ ಊಟವನ್ನು ಪದವಿ ಕಾಲೇಜು ಹಂತದವರೆಗೂ ವಿಸ್ತರಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಶ್ಲೀಲ ಸಿನಿಮಾ-ಸಾಹಿತ್ಯ, ಮದ್ಯ – ಮಾದಕ ವಸ್ತುಗಳನ್ನು ನಿಷೇಧಿಸಬೇಕು ಮತ್ತು ಅವರ ಆತ್ಮ ರಕ್ಷಣೆಗಾಗಿ ಜೋಡೋ- ಕರಾಟೆಯಂತಹ ಕೌಶಲ್ಯ ತರಬೇತಿಗಳನ್ನು ನೀಡಬೇಕು. ಶುಚಿ ವಿತರಣಾ ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಶಿಶು ಪಾಲನಾ ಕೇಂದ್ರದಂತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಇತ್ಯಾದಿ ಹಕ್ಕೊತ್ತಾಯಗಳನ್ನು ಮಹಿಳಾ ಸಮುದಾಯದ ಧ್ವನಿಯಾಗಿ AIMSS ತಮ್ಮ ಮುಂದಿಡುತ್ತಿದೆ . ಈ ಮೇಲಿನ ಹಕ್ಕೊತ್ತಾಯಗಳನ್ನು ಈಡೇರಿಸಲು 2026ರ ಮಾರ್ಚ್ ನ ರಾಜ್ಯ ಬಜೆಟ್ ನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ AIMSS ನ ಜಿಲ್ಲಾ ಕಾರ್ಯದರ್ಶಿಗಳಾದ ಶಾರದಾ ಗಡ್ಡಿ, ಸದಸ್ಯರಾದ ಪವಿತ್ರಾ, ಹುಲಿಗೆಮ್ಮ ಉಪಸ್ಥಿತರಿದ್ದರು.




