ಆಗಸ್ಟ್ 10 ರಿಂದ ಡಿ.ಇಎಲ್.ಇಡಿ ಪರೀಕ್ಷೆ : ನಿಷೇಧಾಜ್ಞೆ ಜಾರಿ
D.El.Ed. exams from August 10: Prohibitory orders imposed. ಆಗಸ್ಟ್ 10 ರಿಂದ ಡಿ.ಇಎಲ್.ಇಡಿ ಪರೀಕ್ಷೆ : ನಿಷೇಧಾಜ್ಞೆ ಜಾರಿ ಕೊಪ್ಪಳ ಆಗಸ್ಟ್ 07, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಆಗಸ್ಟ್ 10 ರಿಂದ ಆಗಸ್ಟ್ 21 ರವರೆಗೆ ಡಿ.ಇಎಲ್.ಇಡಿ ಪರೀಕ್ಷೆಗಳು…
ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ’ ವೃತ್ತಿ ಮಾರ್ಗದರ್ಶನ
Path to the Future' Career Guidance for SSLC and PUC Female Students ಎಸ್.ಎಸ್.ಎಲ್.ಸಿ & ಪಿಯುಸಿ ವಿದ್ಯಾರ್ಥಿನಿಯರಿಗೆ `ಭವಿಷ್ಯದ ದಾರಿ' ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್,…
ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ: ಸಂತೋಷ ಕುಮಾರ ಸೂಚನೆ
Prioritize the protection of children's rights: Santhosh Kumar's directive ಕೊಪ್ಪಳ ಜಿಲ್ಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಸದಸ್ಯರ ಭೇಟಿ * ವಸತಿ ನಿಲಯ, ಶಾಲೆ, ಪೊಲೀಸ್ ಠಾಣೆ, ಆಸ್ಪತ್ರೆಗಳ ಪರಿಶೀಲನೆ * ನ್ಯೂನತೆಗಳನ್ನು ತ್ವರಿತವಾಗಿ…
ಮೃತರಇಬ್ಬರುಮಕ್ಕಳಿಗೆತಲಾ 7.50 ಲಕ್ಷರೂ.ದಂತೆ 15 ಲಕ್ಷರೂಪರಿಹಾರ
Compensation of ₹15 lakh—₹7.50 lakh each—for the two children of the deceased. ಮೃತರ ಇಬ್ಬರು ಮಕ್ಕಳಿಗೆ ತಲಾ 7.50 ಲಕ್ಷ ರೂ.ದಂತೆ 15 ಲಕ್ಷ ರೂ ಪರಿಹಾರ * ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರಿಗೆ ಚಿಕಿತ್ಸಾ ವೆಚ್ಚ ಪಾವತಿಗೆ ಸೂಚನೆ ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮರಣ ಹೊಂದಿದ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರ ಭೇಟಿ; ಸಾಂತ್ವನ ಕೊಪ್ಪಳ ಆಗಸ್ಟ್ 07:(ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗುಡ್ಡ ಕುಸಿತ ದುರಂತ (ಭೂಕುಸಿತದಿಂದ) ಮರಣ ಹೊಂದಿದ ಕೊಪ್ಪಳ ಜಿಲ್ಲೆಯ ಕಕ್ಕರಗೋಳ ಗ್ರಾಮದ ಕುಟುಂಬಸ್ಥರ ಮನೆಗೆ ಸಚಿವರಾದ ಶಿವರಾಜ ತಂಗಡಗಿ ಅವರು ಆಗಸ್ಟ್ 07ರಂದು ಭೇಟಿ ನೀಡಿ, ಸಾಂತ್ವನ ಹೇಳಿದರು. ತಹಸೀಲ್ದಾರ ಶಿವಮೊಗ್ಗ ಇವರ ವಿಪತ್ತು ನಿರ್ವಹಣಾ ಖಾತೆಯಿಂದ ಪಾವತಿ ಮಾಡಲಾದ 15 ಲಕ್ಷ ರೂ.ಗಳನ್ನು ಮೃತರ ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, ಮೃತರ ಹೆಣ್ಣು ಮಕ್ಕಳಾದ ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ತಹಸೀಲ್ದಾರ ಶಿವಮೊಗ್ಗ ಇವರು ತಲಾ 7,50,000 ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ ರಸೀದಿಯನ್ನು ಸಚಿವರು ದಿವ್ಯ ಹಾಗೂ ಮಹಾಲಕ್ಷ್ಮಿ ಅವರಿಗೆ ಅವರ ಗಂಡಜ್ಜಿ ಗೌರಮ್ಮ ಸಮ್ಮುಖದಲ್ಲಿ ವಿತರಣೆ ಮಾಡಿದರು. *ವಿದ್ಯಾಭ್ಯಾಸಕ್ಕೆ ಅನುಕೂಲ:* ದಿವ್ಯ ಏಳು ವರ್ಷದವಳಿದ್ದು 1ನೇ ತರಗತಿಯಲ್ಲಿ ಹಾಗೂ ಮಹಾಲಕ್ಷ್ಮಿ 9 ವರ್ಷದವಳಿದ್ದು ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿ ಎಂದು ಕುಟುಂಬಸ್ಥರು ಸಚಿವರಲ್ಲಿ ಮನವಿ ಮಾಡಿದರು. ಕುಟುಂಬದವರು ಒಪ್ಪಿದಲ್ಲಿ ಬಾಲಕಿಯರ ಬಾಲ ಮಂದಿರದಲ್ಲಿದ್ದು ಓದಲು ಎಲ್ಲ ರೀತಿಯ ಸೌಕರ್ಯ ಒದಗಿಸಿ ಕೊಡುತ್ತೇವೆ. ಕುಟುಂಬದವರು ಒಪ್ಪದಿದ್ದಲ್ಲಿ ದಿವ್ಯ ಮತ್ತು ಮಹಾಲಕ್ಷ್ಮಿ ಇಬ್ಬರಿಗೆ ತಿಂಗಳಿಗೆ ತಲಾ 4000 ರೂ ಗಳಂತೆ 3 ವರ್ಷ ಪ್ರಾಯೋಜಕ್ವತಡಿ ಇಬ್ಬರಿಗೂ ಸಹಾಯಧನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಮೃತ ಕುಟುಂಬದವರು ಬಡವರಾಗಿದ್ದಾರೆ. ಅವರಿಗೆ ವಾಸಿಸಲು ಮನೆ ನೀಡಬೇಕು ಎಂದು ಗ್ರಾಮಸ್ಥರು ಕೋರಿದರು. ಪಂಚಾಯಿತಿ ಅಧಿಕಾರಿಗಳಿಗೆ ಹೇಳಿ ಮನೆ ಕೊಡಿಸುವುದಾಗಿ ಸಚಿವರು ತಿಳಿಸಿದರು. *ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಪಾವತಿ:* ತೀರ್ಥಹಳ್ಳಿಗೆ ದುಡಿಯಲು ಹೋಗಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಸಿಲುಕಿ ತೀವ್ರ ಗಾಯಗೊಂಡ ಕಕ್ಕರಗೋಳದ ಹನುಮಂತ ತಂದೆ ಫಕೀರಪ್ಪ ಹಾಗೂ ಮುಕ್ಕುಂದದ ಅಮೃತ ಗಂಡ ರಾಮಣ್ಣ ಅವರು ಸಚಿವರಿಗೆ ಭೇಟಿ ಮಾಡಿ ಪರಿಹಾರ ಕೋರಿದರು. ಗಾಯಗೊಂಡವರಿಗೆ ಸಹ ನಿಯಮಾನುಸಾರ ಚಿಕಿತ್ಸಾ ವೆಚ್ಚ ಪಾವತಿಗೆ ಮತ್ತು ಇನ್ನೀತರ ಪರಿಹಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವರು ತಿಳಿಸಿದರು. ಈ ವೇಳೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ, ಇಓ ಲಕ್ಷ್ಮೀದೇವಿ ಯಾದವ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ (ಯಲಿಗಾರ) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು, ಮೃತರ ಕುಟುಂಬಸ್ಥರು ಹಾಗೂ ಕಕ್ಕರಗೋಳ ಗ್ರಾಮಸ್ಥರು ಉಪಸ್ಥಿತರಿದ್ದರು. *ಶಿವಮೊಗ್ಗ ತಹಸೀಲ್ದಾರ ವಿಪತ್ತು ನಿರ್ವಹಣಾ ಖಾತೆಯಿಂದ ಪರಿಹಾರ:* ತೀರ್ಥಹಳ್ಳಿ ತಾಲೂಕಿನ ಇಂದಿರಾ ನಗರದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಕಾರಟಗಿ ತಾಲೂಕಿನ ಕಕ್ಕರಗೋಳ ಗ್ರಾಮದ ಒಂದೇ ಕುಟುಂಬದ 3 ಜನ ಮೃತಪಟ್ಟಿದ್ದರು. ಮೃತರ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು ಪರಿಹಾರ 15 ಲಕ್ಷ ರೂ.ಗಳನ್ನು ತಹಸೀಲ್ದಾರ ಶಿವಮೊಗ್ಗ ವಿಪತ್ತು ನಿರ್ವಹಣಾ ಖಾತೆಯಿಂದ ಪರಿಹಾರ ವಿತರಣೆ ಮಾಡಲು ಶಿವಮೋಗ್ಗ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಮೈಲಾಪುರ ಬಳಿಯ 46ನೇ ಮೈಲು ಸೈಡ್ ಲೈನಿಂಗ್ ಕಾಲುವೆ ಕುಸಿತ; ಕಾಮಗಾರಿ ಪೂರ್ಣಗೊಳಿಸಲು ಆಗಸ್ಟ್ 9ರವರೆಗೆ ಗಡುವು
Collapse of side-lining canal at 46th mile near Mylapura; deadline set for August 9 to complete the work. ಘಟನಾ ಸ್ಥಳಕ್ಕೆ ಸಚಿವರಾದ ಶಿವರಾಜ ತಂಗಡಗಿ ಭೇಟಿ ಮೈಲಾಪುರ ಬಳಿಯ 46ನೇ ಮೈಲು ಸೈಡ್ ಲೈನಿಂಗ್…
ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ ಕುಷ್ಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕರೆ
Kushtagi Senior Assistant Director of Horticulture calls upon farmers to avail benefits of the 'Vikasita Bharat' scheme. ವಿಕಸಿತ ಭಾರತ ಜಿ ರಾಮ್ ಜಿ’ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ ಕುಷ್ಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ…
ಗಂಗಾವತಿ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ
Applications invited for the post of guest instructor at the Government ITI, Gangavathi. ಗಂಗಾವತಿ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಗಂಗಾವತಿಯ ಸರ್ಕಾರಿ ಕೈಗಾರಿಕಾ…
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅಂತಿಮದಿನಾಂಕವಿಲ್ಲ: ಅರ್ಹ ನಿರುದ್ಯೋಗಿಗಳಿಗೆ ಅವಕಾಶ
No deadline for submitting applications for the Yuvanidhi scheme: Opportunity for eligible unemployed individuals. ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅಂತಿಮದಿನಾಂಕವಿಲ್ಲ: ಅರ್ಹ ನಿರುದ್ಯೋಗಿಗಳಿಗೆ ಅವಕಾಶ ಕೊಪ್ಪಳ ಆಗಸ್ಟ್ 07 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ…
ಅತಿಯಾದ ಚಟದಿಂದ ಛಟ್ಟ ಕಟ್ಟುವದು ಗ್ಯಾಂರಟಿ : ದಾನಕೈ
Excessive addiction guarantees a trip to the funeral pyre: Daanakai ಅತಿಯಾದ ಚಟದಿಂದ ಛಟ್ಟ ಕಟ್ಟುವದು ಗ್ಯಾಂರಟಿ : ದಾನಕೈ ಯಲಬುರ್ಗಾ: ಮೊದಲು ಮೋಜು ಮಸ್ತಿಗಾಗಿ ಪ್ರಾರಂಭವಾದ ಚಟ ,ನಿರಂತರ ಹವ್ಯಾಸವಾಗಿ ಬೆಳೆದು ಅತಿಯಾದ ಚಟದಿಂದ ಛಟ್ಟಕಟ್ಟಿ ನಮ್ಮ…
ರೀಡ್ಸ್ ಸಂಸ್ಥೆಯಿಂದ ಹಣವಾಳ ಗ್ರಾಮದಲ್ಲಿ ಕಿಶೋರಿಯರಿಗೆಉಚಿತ ಹೊಲಿಗೆ ತರಬೇತಿಗೆ ಚಾಲನೆ.
Free tailoring training for adolescent girls launched by the Reeds organization in Hanavala village. ರೀಡ್ಸ್ ಸಂಸ್ಥೆಯಿಂದ ಹಣವಾಳ ಗ್ರಾಮದಲ್ಲಿ ಕಿಶೋರಿಯರಿಗೆಉಚಿತ ಹೊಲಿಗೆ ತರಬೇತಿಗೆ ಚಾಲನೆ. ಗಂಗಾವತಿ: ಇಂದು ಆಗಸ್ಟ್-7 ಶುಕ್ರವಾರ ರೀಡ್ಸ್ ಸಂಸ್ಥೆ ವತಿಯಿಂದ ಹಣವಾಳ…
