Breaking News

ಉದಯನಿಧಿ ಸ್ಟಾಲಿನ್‌ರವರ ಸನಾತನ ಧರ್ಮದ ಹೇಳಿಕೆಗೆ ನಮ್ಮ ಬೆಂಬಲ-ಭಾರಧ್ವಾಜ್

Our support for Udayanidhi Stalin’s Sanatana Dharma statement-Bharadhwaj



ಗಂಗಾವತಿ:ಆರ್ಯರು ಬಂದಾಗಿನಿಂದಲೂ ಮೂಲನಿವಾಸಿ ದ್ರಾವಿಡರ ವಿರುದ್ಧ ಹೋರಾಟ ಮಾಡುತ್ತಾ ಸಾವಿರಾರು ಜನರನ್ನು ಕೊಂದಿದ್ದಾರೆ. ಸನಾತನ ಧರ್ಮ ಮಹಿಳೆಯರನ್ನು, ಶೂದ್ರರನ್ನು ಹೀನಾಯವಾಗಿ ನೋಡುತ್ತಿದೆ. ಇದನ್ನು ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಪಟ್ಟ ಕಟ್ಟುತ್ತಿದ್ದಾರೆ. ಮುಂದುವರೆದು ಮೂಲನಿವಾಸಿಗಳಲ್ಲಿ ಅನೇಕ ಮೂಢನಂಬಿಕೆಗಳು ಮಹಿಳೆಯರ ವಿರುದ್ಧ ಹಾಗೂ ದ್ರಾವಿಡರಲ್ಲಿ ಕೆಲವರನ್ನು ಓಲೈಸಿಕೊಂಡು ಉದಾಹರಣೆಗೆ: ಹನುಮಂತ, ಸುಗ್ರೀವ, ವಿಭೀಷಣ ಇಂತಹ ದ್ರಾವಿಡ ಮುಖಂಡರನ್ನು ತಮ್ಮ ಮೂಲಸಿದ್ಧಾಂತಗಳಿAದ ಹೊರತಂದಿದ್ದಾರೆ.
ತಮಿಳುನಾಡು ಜನರು ಮಾತ್ರ ದ್ರಾವಿಡತನಕ್ಕೆ ಹೊಂದಿಕೊAಡು ದ್ರಾವಿಡರಾಗಿ ಉಳಿದಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಅಂತವರು ಸನಾತನ ಧರ್ಮದ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಈಗ ವಿರೋಧ ಪಕ್ಷಗಳ ಐಕ್ಯತೆಯನ್ನು ಒಡೆಯಲು ಸನಾತನಿಗಳು ಉದಯನಿಧಿಯವರ ಹೇಳಿಕೆಯನ್ನು ಮುಂದಿಟ್ಟುಕೊAಡು ವಿಮರ್ಶೆ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ನಿಜವಾದ ದ್ರಾವಿಡರು, ಶೂದ್ರರು ಬ್ರಾಹ್ಮಣರ ಹೇಳಿಕೆಗಳಿಗೆ ಬೆಂಬಲಿಸುತ್ತಿರುವುದು ಖಂಡನೀಯ ಎಂದು ಭಾರಧ್ವಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.