ಶೌಚಾಲಯ ಕಟ್ಟಿಸಿಲು ವಿದ್ಯಾರ್ಥಿಗಳು ಪ್ರೇರಣೆಯಾಗಬೇಕು ಸಿ.ಇ.ಓ ರಾಹುಲ್ ರತ್ನಮ್ ಪಾಂಡೆ ಸರ್by

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಮಂಗಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ,,,,

ಜಾಹೀರಾತು

ರಾಹುಲ್ ರತ್ನಮ್ ಪಾಂಡೆ ಮಧ್ಯಾಹ್ನದ ಊಟದ ನಂತರ ಮಂಗಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕಾಲೇಜಿಗೆ ಭೇಟಿ ನೀಡಿದರು.

ನಂತರ ವಿಧ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ ಮಾನ್ಯರು ವಿದ್ಯಾರ್ಥಿಗಳ ಓದುವಾಗ ಗುರಿಯನ್ನು ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ವಿಚಾರಿಸಿದರು ಅದಕ್ಕೆ ಕೆವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಶೌಚಾಲಯ ಇರುವುದಿಲ್ಲ ಎಂದರು ಅದಕ್ಕೆ ಮಾನ್ಯರು ಸರ್ಕಾರದಿಂದ 16ಸಾವಿರ-18ಸಾವಿರ ಸಹಾಯಧನ ಸಿಗುತ್ತದೆ ಅದಕ್ಕೆ ವಿದ್ಯಾರ್ಥಿಗಳು ತಮ್ಮ ಪಾಲಕರ ರೇಷನ್ ಕಾರ್ಡ ಅಕೌಂಟ್ ನಂಬರ ನೀಡಬೇಕೆಂದು ಸೂಚಿಸಿದರು.

ಶೌಚಾಲಯ ಒಂದು ಗೌರವದ ಸಂಕೇತ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಿ ಎಂದರು. ನಂತರ ಅದೇ ಶಾಲಾ ಆವರಣದಲ್ಲಿರುವ 10 ನೇ ಅಂಗನವಾಡಿ ಕೇಂದ್ರ ಹಾಗೂ ಕೂಸಿನ ಮನೆಯನ್ನು ವೀಕ್ಷಣೆ ಮಾಡಿದರು.

ಅಂಗನವಾಡಿ ಕೇಂದ್ರದಲ್ಲಿ ಸ್ಟಾಕ್, ಅಡುಗೆ ಸಾಮಗ್ರಿಗಳು ಹಾಗೂ ಇತರೆ ಪರಿಕರಗಳ ಬಗ್ಗೆ ವಿಚಾರಿಸಿದರು.

ಸ್ಥಳದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್ , ಸಿ.ಡಿ.ಪಿ.ಓ ಬೆಟದಪ್ಪ ಮಾಳೆಕೊಪ್ಪ, ಗ್ರಾಮ ಪಂಚಾಯತಿ ಪಿಡಿಓ ರವರು ಅಂಗನವಾಡಿ ಕಾರ್ಯಕರ್ತೆಯರು, ಕೂಸಿನ‌ಮನೆ ಆರೈಕೆದಾರರು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಜರಿದ್ದರು.

Total Views: 0
Share This Article