ಗಂಗಾವತಿ:ಗಂಗಾವತಿ ನಗರದ 34 ನೇ ವಾರ್ಡ್ ಹಿರೇಜಂತಕಲ್ 3ನೇ ಕೇಂದ್ರ ಅಂಗನವಾಡಿ ಶಾಲೆಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 16 ಚೇರಗಳನ್ನು ಶ್ರೀಮತಿ ಶ್ರೀದೇವಿ ಗಂಡ ಶರಣಬಸವ ಕುಟುಂಬದಿಂದ ಚೇರ್ ವಿತರಣೆ ಮಾಡಲಾಯಿತು.ನಂತರ ಮಾತನಾಡಿ ಶ್ರೀದೇವಿ ಅವರು ಈ ಒಂದು ಅಂಗನವಾಡಿ ಶಾಲೆಯಲ್ಲಿ ನಮ್ಮ ಮಗುಕೂಡ ಈ ಶಾಲೆಯಲ್ಲಿ ಓದುತ್ತಿರುವದರಿಂದ ಈ ಶಾಲೆಗೆ ಬರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಇಲ್ಲಿಯ ಶಿಕ್ಷಕಿ ಬಹಳಷ್ಟು ಕ್ರಿಯಾಶೀಲರಾಗಿ ಮಕ್ಕಳ ಜೊತೆಗೆ ಮಗುವಿನಂತೆ ಇರುವ ಈ ಶಾಲೆಯ ಶಿಕ್ಷಕಿ ಸುನೀತಾ ಅವರು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆಯುತ್ತಾರೆ ಎಂದು ನಮಗೆ ನಂಬಿಕೆ ಇದೆ ಮತ್ತು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಕುರ್ಚೆ ಆಟ ಆಡಿಸಲು ಚೇರ ಅವಶ್ಯಕತೆ ಇದೆ ಎಂದು ನಮ್ಮ ಗಮನಕ್ಕೆ ಬಂದಿದ್ದು ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲೆಂದು ನಮ್ಮ ಕೈಯಲ್ಲಿ ಎಷ್ಟು ಸಾದ್ಯ ಅಷ್ಟು ಸಹಾಯ ಮತ್ತು ಸಹಕಾರ ಇರುತ್ತದೆ ಎಂದು ವಿಶ್ವನಾಥ ಅವರ ಪೋಷಕರಾದ ಶ್ರೀಮತಿ ಶ್ರೀದೇವಿ ಅವರು ಮಾತನಾಡಿದರು ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಸುನೀತಾ, ನೀಲಮ್ಮ.ಕಲಾವತಿ.ಶರಣಮ್ಮ.ರೇಣುಕಾ. ಹಾಗೂ ಅಂಗನವಾಡಿ ಸಹಾಯಕಿಯಾದ ಮಂಜಮ್ಮ ಸೇರಿದಂತೆ ಇತರರು ಇದ್ದರು
Tags kalyanasiri News
Check Also
ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ
Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …