G C Kiran has won the praise of journalists by giving support to journalist Vinod who died in an accident.
ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ತಾಲ್ಲೂಕಿನ ಹಿರಿಯ ಪತ್ರಕರ್ತರಾದ ವಿನೋದ್ ರವರ ನಿಧನ ಅಗಲಿಕೆ ನಮ್ಮೇಲ್ಲರಿಗೂ ನೋವುಂಟು ಮಾಡಿದೆ,ಪ್ರತಿಯೋಬ್ಬ ಪತ್ರಕರ್ತರು ಸಾರ್ವಜನಿಕರ ಆಸ್ತಿ ಅವರಿಂದ ರಾಜಕಾರಣಿಗಳಾಗಲಿ ,ಅಧಿಕಾರಿಗಳಿಗಾಗಲಿ ಕಣ್ಣು ತೆರೆಸಿದಂತಾಗುತ್ತದೆ ಎಂದು ಕೆ ಪಿ ಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ ಸಿ ಕಿರಣ್ ತಿಳಿಸಿದರು .
ಹನೂರು ಪಟ್ಟಣದ ಜಿ ವಿ ಗೌಡ ನಗರದಲ್ಲಿರುವ ಮೃತ ಪತ್ರಕರ್ತ ವಿನೋದ್ ರ ಮನೆಗೆ ತೆರಳಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದ ನಂತರ ಮಾತನಾಡಿದ ಅವರು . ಕೇಲ ದಿನಗಳ ಹಿಂದ ಅನ್ಯ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದಾಗ ಅಪಘಾತದಲ್ಲಿ ಮೃತರಾದರು ಬಹಳ ಕಿರಿಯ ವಯಸ್ಸಿನಲ್ಲೇ ಕ್ರಿಯಾಶೀಲ ಪತ್ರಕರ್ತರಾಗಿದ್ದರು ಎಂದು ಕೆಲ ಸ್ನೇಹಿತರು ತಿಳಿಸಿದರು ಚಾಮರಾಜನಗರ ಜಿಲ್ಲೆಯಂತಹ ಗಡಿಯಂಚಿನ ಭಾಗಗಳಿಗೆ ಇಂತಹ ಪತ್ರಕರ್ತರು ಇರಬೇಕಿತ್ತು ಎಂದು ಸಂತಾಪ ಸೂಚಿಸಿದರು. ಇದೇ ಸಮಯದಲ್ಲಿ ,ಮುಖಂಡರುಗಳಾದ ಮಹೇಶ್ ,ನಟರಾಜೆಗೌಡ ,ಮಂಜೇಶ್ , ಲಿಂಗರಾಜು ಸೇರಿದಂತೆ ಇತರರು ಹಾಜರಿದ್ದರು . ಇದೇ ಸಮಯದಲ್ಲಿ ಮೃತ ಪತ್ರಕರ್ತ ವಿನೋದ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ಹಣವನ್ನು ನೀಡಿದರು .