Breaking News

ಅಂಗನವಾಡಿಯಲ್ಲಿ ಮಕ್ಕಳಿಗಾಗಿ ವಸ್ತು ಪ್ರದರ್ಶನ

Material display for children at Anganwadi

ಗಂಗಾವತಿ: 18 ನಗರದ ಹಿರೇಜಂತಕಲ್ ಕಂಬಳಿ ಮಠ ಹಿಂದುಗಡೆ ಇರುವ ಅಂಗನವಾಡಿ ಕೇಂದ್ರದಲ್ಲಿ ಇಂದು ಚಿಕ್ಕಪುಟ್ಟ ಮಕ್ಕಳಿಗಾಗಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರೂರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರೈಮ್ ಇಯರ್ ಮತ್ತು ಹೈಸ್ಕೂಲ್ ಗಳಲ್ಲಿ ನಡೆಯುವ ಈ ವಸ್ತು ಪ್ರದರ್ಶನ ವನ್ನು ನಮ್ಮ ಅಂಗನವಾಡಿ ಮಕ್ಕಳು ಸಹ ವಸ್ತು ಪ್ರದರ್ಶನವನ್ನು ಇಷ್ಟೊಂದು ಅಚ್ಚುಕಟ್ಟಾಗಿ, ಅದ್ಭುತವಾಗಿ ಮಾಡಿದ್ದಾರೆ ಎಂದರೆ ನನಗೆ ತುಂಬಾ ಖುಷಿಯಾಗುತ್ತದೆ. ಮತ್ತು ಪ್ರೈವೇಟ್ ಶಾಲೆಯ ಎಲ್.ಕೆ.ಜಿ.ಯು.ಕೆ.ಜಿ.ಮಕ್ಕಳಿಗಿಂತ ನಮ್ಮ ಅಂಗನವಾಡಿ ಮಕ್ಕಳು ಸಹ ಹಿಂದೆ ಬಿದ್ದಿಲ್ಲ, ಅವರಿಗಿಂತ ನಾವು ಕಡಿಮೆ ಇಲ್ಲ, ಅವರಿಗೆ ಸರಿಸಮಾನ ರೀತಿಯಲ್ಲಿ ನಮ್ಮ ಪುಟ್ಟ ಮಕ್ಕಳು ತಮ್ಮ ತಮ್ಮ ಪಾಲಕರೊಂದಿಗೆ ಸೇರಿಕೊಂಡು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಜವಾಬ್ದಾರಿತನದಿಂದ ಮತ್ತು ಉತ್ಸಾಹದಿಂದ ಮಕ್ಕಳಿಗೆ ಹೊಸದಾಗಿ, ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಿರುವುದು ತುಂಬಾ ಸಂತಸದ ಕ್ಷಣ ಎಂದು ಅಧಿಕಾರಿಗಳು ಬಣ್ಣಿಸಿದರು. ಹಾಗೂ ಮುಂದಿನ ಪೀಳಿಗೆಗೆ ಸಹ ಅಂಗನವಾಡಿ ಉಳಿಸಿ ಮತ್ತು ಬೆಳೆಸಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶರಣಮ್ಮ ನಾಲಿವಾಡ ಹಿರಿಯ
ಮೇಲ್ವಿಚಾರಕರು, ವಿದ್ಯವತಿ ಹಿರಿಯ,ಮೇಲ್ವಿಚಾರಕರು,ಅಂಗನವಾಡಿ ಶಿಕ್ಷಕರಾದ ಸುನೀತಾ ಅರುಣಕಮಾರ,ನೀಲಮ್ಮ, ರೇಣುಕಾ,ಹಾಗೂ ಅಂಗನವಾಡಿ ಸಹಾಯಕರು,ಪಾಲಕರು ಸೇರಿದಂತೆ ಇತರರು ಇದ್ದರು

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.