Breaking News

ಗಮನಸೆಳೆದ ನರೇಗಾ ಮಾಹಿತಿ ಕೇಂದ್ರ

Notable NREGA Information Center

Screenshot 2025 03 27 19 05 24 52 6012fa4d4ddec268fc5c7112cbb265e7 1

ಬೂದು ನೀರು ನಿರ್ವಹಣಾ ಕಾರ್ಯಮಾದರಿ ಅಳವಡಿಕೆ

ಗಂಗಾವತಿ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನರೇಗಾ ಮಾಹಿತಿ ಕೇಂದ್ರ ತೆರೆದು ಬೂದು ನೀರು ನಿರ್ವಹಣಾ ಕಾರ್ಯಮಾದರಿ (ಲೈವ್ ಮಾಡೆಲ್ ) ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿರುವುದು ವಿಶೇಷವಾಗಿ ಕಂಡು ಬಂತು.

ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಬೂದು ನೀರು ನಿರ್ವಹಣಾ ಕಾರ್ಯಮಾದರಿ ವೀಕ್ಷಿಸಿ, ನರೇಗಾ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ಮನೆ- ಮನೆಗಳಿಂದ ಉತ್ಪತ್ತಿಯಾಗುವ ದ್ರವ ತಾಜ್ಯವನ್ನು ಸಂಸ್ಕರಿಸಿ ಬಿಡುವುದು ಬೂದು ನೀರು ನಿರ್ವಹಣೆ ಘಟಕದ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ರಾಜ್ಯದಲ್ಲಿ 500 ಗ್ರಾಮ ಪಂಚಾಯತ್ ಗಳಲ್ಲಿ ಬೂದು ನೀರು ನಿರ್ವಹಣಾ ಘಟಕ (ಜಿಡಬ್ಲ್ಯುಎಂ) ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಸಮ್ಮೇಳನದಲ್ಲಿ ಬೂದು ನೀರು ನಿರ್ವಹಣಾ ಕಾರ್ಯಮಾದರಿ ಅಳವಡಿಸಲಾಗಿತ್ತು.
ಸಾರ್ವಜನಿಕರಿಗೆ ನರೇಗಾ ಯೋಜನೆ ಮಾಹಿತಿ, ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

About Mallikarjun

Check Also

ಡಿ. 10 ರಂದು ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಡಿ. 10 ರಂದು ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ Progress review meeting of SCP, TSP …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.