ಸತೀಶ ಜಾರಕಿಹೊಳಿ ಭೇಟಿ ; ಮಹಿಳಾ ಕಾಂಗ್ರೆಸ್ ಬಲವರ್ಧನೆಗೆ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Visit Satish Jarakiholi; Appeal for strengthening Mahila Congress

ಜಾಹೀರಾತು

ಕೊಪ್ಪಳ: ನಗರಕ್ಕೆ ಲೋಕೋಪಯೋಗಿ, ಬಂದರು ಖಾತೆ ಸಚಿವ, ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ ಮುಖಂಡರೊಂದಿಗೆ ಮಾತನಾಡಿದರು. ಈ ವೇಳೆ ಮಹಿಳಾ‌ ಕಾಂಗ್ರೆಸ್ ಮುಖಂಡರಾದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ನೇತೃತ್ವದಲ್ಲಿ ಸಚಿವರೊಂದಿಗೆ ಚರ್ಚಿಸಿ ಮಹಿಳಾ ಕಾಂಗ್ರೆಸ್ ಜಿಲ್ಲೆಯಲ್ಲಿ ಉತ್ತಮ ಕೆಲಸ‌ ಮಾಡುತ್ತಿದ್ದು, ಮುಂದಿನ ನಾಮನಿರ್ದೇಶನಗಳಲ್ಲಿ ಸೂಕ್ತ ಸ್ಥಾನಗಳಿಗೆ ಪರಿಗಣಿಸುವಂತೆ ಜೊತೆಗೆ ಪ್ರಮುಖ ಮುಂಚೂಣಿ ಕಾರ್ಯಕರ್ತರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕೋರಿದರು. ಈ ಸಂದರ್ಭದಲ್ಲಿ ಶಾಸಕ‌ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ಮುಖಂಡರುಗಳಾದ ಟಿ. ರತ್ನಾಕರ, ಹನುಮೇಶ‌ ನಾಯಕ, ಮಂಜುನಾಥ ಜಿ. ಗೊಂಡಬಾಳ, ರಾಮಣ್ಣ ಕಲ್ಲನವರ, ವೀರಭದ್ರಪ್ಪ ನಾಯಕ ಇತರರು ಇದ್ದರು.

Total Views: 0
Share This Article