Breaking News

ವೆಂಕಟಗಿರಿ ಜೆಸ್ಕಾಂ ಕಚೇರಿಗೆ ಗಡ್ಡಿ ಭಾಗದ ರೈತರು ಮುತ್ತಿಗೆಸ್ಪಂದಿಸಿದ ಎಇಇ ಸಮರ್ಪಕ ವಿದ್ಯುತ್ ಕೊಡುವ ಭರವಸೆ

Farmers from Gaddi area besiege Venkatagiri GESCOM office, AEE responds, promises to provide adequate electricity

06 gvt 01 (2)


ಗಂಗಾವತಿ: ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಗಡ್ಡಿ ಭಾಗದ ನೂರಾರು ರೈತರು ವೆಂಕಟಗಿರಿ ಜಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಉಡುಮಕಲ್, ಗಡ್ಡಿ, ಆಗೋಲಿ, ಹಂಪಸದುರ್ಗಾ, ವೆಂಕಟಗಿರಿ, ಬಂಡ್ರಾಳ್ ಗ್ರಾಮಗಳ ನೂರಾರು ರೈತರು ವೆಂಕಟಗಿರಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಗೇಟ್ ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಿರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಸವರಾಜ್ ಹೇರೂರು ಮಾತನಾಡಿ, ಎಪ್೧ ಲೈನ್ ರೈತರಷ್ಟೆ ಅಲ್ಲದೆ ಎಲ್ಲಾ ಭಾಗಗಳಿಗು ಸಮರ್ಪಕ ವಿದ್ಯುತ್ ಕಲ್ಪಿಸಬೇಕು, ನಿಯಮದಂತೆ ಏಳು ತಾಸು ಖಡ್ಡಾಯವಾಗಿ ಕೊಡಲೇಬೇಕು, ರಿಪೇರಿ ನೆಪದಲ್ಲಿ ಬಂದ್ ಮಾಡಿದ ಅವಧಿಯ ವಿದ್ಯುತ್‌ನ್ನು ಸಹ ನಂತರ ಪೂರ್ಣಗೊಳಿಸಬೇಕು, ರೈತರ ಬೆಳೆಗಳು ಒಣಗುತ್ತಿದ್ದು, ಜಾಗರೂಕತೆಯಿಂದ ವಿದ್ಯುತ್ ಸರಬರಾಜು ಮಾಡಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯ ಬಿಸಿಗೆ ಎಚ್ಚೆತ್ತ ಎಇಇ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರೈತರ ಮನವಿಯನ್ನು ಸ್ವೀಕರಿಸಿ ಸ್ಪದಿಸುವ ಭರವಸೆ ನೀಡಿದರು. ಮುಖಂಡರಾದ ಸಿದ್ದಲಿಂಗಯ್ಯಸ್ವಾಮಿ, ಹನುಮಂತಪ್ಪ ಬೋವಿ, ನಾಗಪ್ಪ ಉಡುಮಕಲ್, ಲಿಂಗಪ್ಪ ಉಡುಮಕಲ್, ಮಲ್ಲೇಶ್ ನಾಯಕ ಬಂಡ್ರಾಳ್ ಮತ್ತು ಪಕೀರಪ್ಪ ವೆಂಕಟಗಿರಿ ಇತರರಿದ್ದರು.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.