Appreciation from Abdul Rahman to promoted Sharif
ಯಲಬುರ್ಗಾ.ನ.5.: ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿದ ಷರೀಫ್ ಕೊತ್ವಾಲ ಅವರಿಗೆ ಯಲಬುರ್ಗಾ ಪಟ್ಟಣದಲ್ಲಿ ಜೆ.ಕೆ ಎಂಟರ್ ಪ್ರೈಜಸ್ ಮಾಲಕರಾದ ಅಬ್ದುಲ್ ರೆಹಮಾನ್ ಎ ಜರಕುಂಟಿ ಅವರು ಸನ್ಮಾನಿಸಿದರು.
ಬಳಿಕ ಈ ಕುರಿತಂತೆ ಅಬ್ದುಲ್ ರೆಹಮಾನ್ ಅವರು ಮಾತನಾಡಿ ಅರಣ್ಯ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಅರಣ್ಯ ಪಾಲಕರಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಒಡನಾಟ ಹೊಂದುವ ಮೂಲಕ ಸೇವೆ ಸಲ್ಲಿಸುತ್ತಿರುವ ಷರೀಫ್ ಕೊತ್ವಾಲ್ ಅವರ ಇಲಾಖೆ ಸೇವೆಯಲ್ಲಿ ಮುಂಬಡ್ತಿ ಹೊಂದುವಲ್ಲಿ ಅರಣ್ಯ ಪಾಲಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದು ಅವರ ಸೇವೆಗೆ ಸಿಕ್ಕ ಪ್ರತಿಫಲವಾಗಿದ್ದು ಉಪ ವಲಯ ಅರಣ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಪ್ರಮುಖರು ಸೇರಿ ಇತರರು ಉಪಸ್ಥಿತರಿದ್ದರು.