Breaking News

ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಸನ್ಮಾನ

Honorable Mrs. Asha Venkataswamy, the great mother of Muktidam

ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಇವರು ವಿಶೇಷವಾಗಿ ಅನಾಥ ಹಾಗೂ ಬಡ ಸುಮಾರು 5000 ಶವಗಳಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಅಂತ್ಯ ಸಂಸ್ಕಾರಕ್ಕೆ ಬಹಳಷ್ಟು ಸಹಾಯ ನೀಡಿದ್ದಾರೆ ಇವರು ಆಂಬುಲೆನ್ಸ್ ಡ್ರೈವರ್ ಆಗಿ ಸಹ ಕೆಲಸ ನಿರ್ವಹಿಸಿದ್ದಾರೆ ಇಂತಹ ಕೆಲಸ ಮಾಡುವುದಕ್ಕೆ ಅವರ ಗಂಡ ಹಾಗೂ ಅತ್ತೆ ಮಾವ ಮನೆಯವರು ಸಹ ಅವರನ್ನು ಹೊರಹಾಕಿ ಕೈಬಿಟ್ಟಿದ್ದರು ತಮ್ಮ ಸ್ವ ಇಚ್ಛಾಶಕ್ತಿಯಿಂದ ಅನೇಕ ಅನಾಥ ಶಿವಗಳಿಗೆ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಇವರು ರಾಮನಗರ ಜಿಲ್ಲೆಯಿಂದ ವಿಶೇಷ ಅತಿಥಿಯಾಗಿ ಬಂದಿದ್ದರು ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚಿಕ್ಕಪ್ಪ ಹಾದಿಮನಿ ವಹಿಸಿಕೊಂಡಿದ್ದರು, ಮಾಜಿ ಸೈನಿಕ ಎಂ ಡಿ ಚಿಕ್ಕಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ವಿಷ್ಣುಕಾಂತ ಬೆನ್ನೂರ ಒಂದನಾರ್ಪನೆ ಮಾಡಿದರು ಶ್ರೀ ಶಂಕರ ಕುಸಗುರ ಅವರು ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ಸಲಹಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಶಾಸಕ ಶ್ರೀ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶ ಗೌಡ ಪಾಟೀಲ ,ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀ ರವಿ ಕೋರವರ ತಾಲೂಕ ತಹಸೀಲ್ದಾರರು, ಪುರಸಭೆ ಮುಖ್ಯ ಅಧಿಕಾರಿಗಳು, ಪುರಸಭೆಯ ಚುನಾಯಿತ ಸದಸ್ಯರು ಸುರೇಶ ಅಸಾದಿ, ಎಸ್ ಎನ್ ಯಮನಕ್ಕನವರ, ಕಲಾವತಿ ಬಡಿಗೇರ, ಪಕೀರಮ್ಮ ಚಲವಾದಿ, ಸುಭಾಸ ಮಾಳಗಿ, ರಾಮಣ್ಣ ಕೋಡಿಹಳ್ಳಿ, ಹೊನ್ನುರಪ್ಪ ಕಾಡಸಾಲಿ ಇನ್ನಿತರರು ಉಪಸ್ಥಿತರಿದ್ದರು

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.