Breaking News

ಹಿಂದೂ ಮುಸ್ಲಿಂ ಬಾಂಧವರು  ಎನ್ನದೇ ಶ್ರೀಗುರುಕೊಟ್ಟೂರೇಶ್ವರ ಲಕ್ಷದೀಪೋತ್ಸವಕ್ಕೆ  ಭಾವೈಕ್ಯದ ಸ್ಪರ್ಶ



A touch of sentimentality for Sri Guru Kottureswar Lakshdeepotsava is Hindu Muslim relations

ಜಾಹೀರಾತು

ಕೊಟ್ಟೂರು : ಪಟ್ಟಣದ ಆರಾಧ್ಯ ದೈವ, ಕ್ಷೇತ್ರನಾಥ ಶ್ರೀ ಗುರುಬಸವೇಶ್ವರ ಸ್ವಾಮಿ ಲಕ್ಷ ದೀಪೋತ್ಸವದ ಅಂಗವಾಗಿ ನಡೆಯುವ ಕಾರ್ತೀಕೋತ್ಸವದ ಪ್ರಯುಕ್ತ ದೀಪಗಳನ್ನು ಹಸಿರು ಹೊನಲು ತಂಡ ಮತ್ತು ಹಳೆ ಕೊಟ್ಟೂರು ತಂಡಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಪಟ್ಟಣದ ಬಸ್ ನಿಲ್ದಾಣದಿಂದ ರಥ ಬೀದಿಯವರೆಗೆ ಅಕ್ಕಪಕ್ಕದಲ್ಲಿ ದೀಪಗಳನ್ನು ಇಡುವ ಕೆಲಸದಲ್ಲಿ ಮುಸ್ಲಿಂ ಬಾಂಧವ ಸದಸ್ಯರು ಭಾಗವಹಿಸಿದ್ದು ಭಾವೈಕ್ಯದ ಸಂಕೇತದಂತೆ ಗೋಚರಿಸಿತ್ತು. ಅಲ್ಲದೇ ದೀಪಗಳನ್ನಷ್ಟೇ ಅಲ್ಲದೆ, ಕಸ ವಿಲೇವಾರಿಯನ್ನು ಸಹ ಸೋಮವಾರ ದಂದು ಮಾಡಲಾಗಿರುತ್ತದೆ. ಎರಡೂ ತಂಡಗಳ ಎಲ್ಲಾ ಸದಸ್ಯರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ ಶ್ರೀಸ್ವಾಮಿಯ ಸೇವೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಂ ಶ್ರೀನಿವಾಸ್,ಶಿರಿಬಿ ಕೊಟ್ರೇಶ್, ಹೆಚ್ ವಿಜಯ ಕುಮಾರ್, ಕೆ ಕೊಟ್ರೇಶ್, ತಗ್ಗಿನಕೇರಿ ಕೊಟ್ರೇಶ್, ಅನಿಲ್, ಅಕ್ಷಯ್,ಪಿ ಗಣೇಶ್,ಗೌಸ್,ಬಿ ಮಂಜುನಾಥ್, ಸುಭಾನ್, ದಾದಾಪೀರ್, ಎಸ್ ಪರಶುರಾಮ್,ಬಿ ಆರ್ ವಿಕ್ರಂ, ಬಂಜಾರ್ ನಾಗರಾಜ್, ಯಲ್ಲಪ್ಪ, ನಾಗರಾಜ್, ಪ್ರಕಾಶ್ ಮಂಡಕ್ಕಿ, ಎರಡು ತಂಡಗಳ ಸದಸ್ಯರು ಇದ್ದರು

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *