
ಗುಂಡಮ್ಮ ಕ್ಯಾಂಪ್: ವಾರ್ಡ್ ಮುಖಂಡರಿಂದ ಶಾಲಾ ಅಭಿವೃದ್ಧಿ ಸಭ

ಗಂಗಾವತಿ:ದಿ,2-2-2026 ಸೋಮವಾರ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ನಿವಾಸ್ ,ನೇತೃತ್ವ ದಲ್ಲಿ ಮತ್ತು ವಾರ್ಡ್ ನ ಮುಖಂಡರ ನೇತೃತ್ವದ ಲ್ಲಿ ಶಾಲಾ ಅಭಿವೃದ್ಧಿ ಸಭೆ ಜರುಗಿತು.
ಈಸಭೆಯಲ್ಲಿ ಮುಖ್ಯವಾಗಿ ಶಾಲೆಗೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಅಗಿರುದರ ಬಗ್ಗೆ ಚೆರ್ಚಿಸಲಾಯಿತು.ಮತ್ತು ಶೌಚಾಲಯ, ಆಟದ ಮೈದಾನ ಸ್ವಚ್ಚವಾಗಿಡಲು ,ಮೇತಿಂಗಳಿನಿಂದ ಮನೆ ಮನೆಗೆ ತೆರಳಿ ಪಾಲಕರಿಗೆ ಶಾಲೆಯ ಮಾಹಿತಿ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಪಡಬೇಕು , ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ಸೇರಿದ ಸೇರಲು ತೀರ್ಮಾನಿಸಲಾಯಿತು.ಮುಂದಿನ ಸಭೆ ದಿ,16-2-2026 ಸೇರಲು ತೀರ್ಮಾನಿಸಿ ಸಭೆ ಮುಂದೂಡಲಾಯಿತು.
ಆಗಮಿಸಿ ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಂಡು,ಅತ್ಯಂತ ಉಪಯುಕ್ತ ಸಲಹೆ,ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿ ಸಭೆಯನ್ನು ಯಶಸ್ವಿಗೊಳಿಸಿದ ಎಲ್ಲಾ ಮುಖಂಡರಿಗೆ ಶಿಕ್ಷಕರಾದ ಪ್ರಕಾಶ ಸರ್ ಧನ್ಯವಾದಹೇಳಿದರು.
ಈ ಸಭೆಯಲ್ಲಿ ಇಜಾಪ್,ಎಂ. ಎಸ್ ಉಲ್ಲಾಸ, ಆಸಿಪಾ.ಕೆ ಸನ್ನಿಕ್,ಹುಸೇನ್ ಸಾಬ್,ಮೌಲಾಹುಸೇನ್,ಸೇಖಮೈಬುಬ,ಮೆಹಬೂಬ್,ಹೆಚ್.ಮಲ್ಲಿಕಾರ್ಜುನ ಹೊಸಕೇರಾ ಇತರರು ಭಾಗವಹಿದಿದ್ದರು.


