Breaking News

ಮರಳಿ ಗ್ರಾಮದಲ್ಲಿ ಕಂದಾಯಇಲಾಖೆಯಿಂದ ಪಿಂಚಣಿ ಅದಾಲತ್

Pension Adalat from the revenue department in the village again


ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಒಂದನೇ ವಾರ್ಡಿನ ಶ್ರೀ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಅನೇಕ ವಿಧವೆಯರು, ಅಂಗವಿಕಲರು, ವೃದ್ಧಾಪ್ಯ ವೇತನ ಪಡೆಯಲು ಅರ್ಹರಿರುವ ಫಲಾನುಭವಿಗಳಿಗೆ ಮಾಸಿಕ ಮಾಶಾಸನ ಮಂಜೂರಾತಿ ಆದೇಶ ಪತ್ರವನ್ನು ತಹಸಿಲ್ದಾರ್ ಅವರು ನೀಡಿದರು.
ಈ ಪಿಂಚಣಿ ಅದಾಲತ್ ಜೊತೆಗೆ ಗೃಹಲಕ್ಷ್ಮಿ ಯೋಜನೆ ಬೆಳೆ ಪರಿಹಾರ ಸ್ಮಶಾನ ಅಭಿವೃದ್ಧಿ ಭೂಮಿಯ ನಕ್ಷೆ, ಕಸ ವಿಲೇವಾರಿಗೆ ಭೂಮಿ ಗುರುತಿಸುವ ಹಾಗೂ ನೀರಿನ ಟ್ಯಾಂಕ್ ಗೆ ಸ್ಥಳಾವಕಾಶ ದ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು

ಈ ಸಮಾರಂಭದಲ್ಲಿ ನಾಡ ತಹಸಿಲ್ದಾರ್ ಮೆಹಬೂಬ್ ಅಲಿ, ಕಂದಾಯ ನಿರೀಕ್ಷಕ ಹಾಲೇಶ್, ಗ್ರಾಮ ಲೆಕ್ಕಾಧಿಕಾರಿ ನಾಗಬಿಂದು, ರಮೇಶ್ ಕುಲಕರ್ಣಿ, ಜಂಬಣ್ಣ ತಾಳೂರು, ಮೌಲಾಸಾಬ, ಯಮನೂರಪ್ಪ ಚಲುವಾದಿ ಮತ್ತು ಅನೇಕ ಫಲಾನುಭವಿಗಳು ಭಾಗವಹಿಸಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

About Mallikarjun

Check Also

ಜನ ಬಲದ ಮುಂದೆ ಹಣ ಬಲದ ಕೆಲಸ ನಡೆಯಲಿಲ್ಲಅಭಿವೃದ್ಧಿಗಾಗಿ ರೈತರು ನನ್ನ ಕೈಯಿಡಿದರು ಆರ್ ನರೇಂದ್ರ

Money power did not work before people power. Farmers put their hands on me for …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.