Breaking News

ಮರಳಿ ಗ್ರಾಮದಲ್ಲಿ ಕಂದಾಯಇಲಾಖೆಯಿಂದ ಪಿಂಚಣಿ ಅದಾಲತ್

Pension Adalat from the revenue department in the village again


ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಒಂದನೇ ವಾರ್ಡಿನ ಶ್ರೀ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜಂಬಣ್ಣ ಹಾಗೂ ತಹಸೀಲ್ದಾರ್ ಮಂಜುನಾಥ್ ಅವರ ನೇತೃತ್ವದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಅನೇಕ ವಿಧವೆಯರು, ಅಂಗವಿಕಲರು, ವೃದ್ಧಾಪ್ಯ ವೇತನ ಪಡೆಯಲು ಅರ್ಹರಿರುವ ಫಲಾನುಭವಿಗಳಿಗೆ ಮಾಸಿಕ ಮಾಶಾಸನ ಮಂಜೂರಾತಿ ಆದೇಶ ಪತ್ರವನ್ನು ತಹಸಿಲ್ದಾರ್ ಅವರು ನೀಡಿದರು.
ಈ ಪಿಂಚಣಿ ಅದಾಲತ್ ಜೊತೆಗೆ ಗೃಹಲಕ್ಷ್ಮಿ ಯೋಜನೆ ಬೆಳೆ ಪರಿಹಾರ ಸ್ಮಶಾನ ಅಭಿವೃದ್ಧಿ ಭೂಮಿಯ ನಕ್ಷೆ, ಕಸ ವಿಲೇವಾರಿಗೆ ಭೂಮಿ ಗುರುತಿಸುವ ಹಾಗೂ ನೀರಿನ ಟ್ಯಾಂಕ್ ಗೆ ಸ್ಥಳಾವಕಾಶ ದ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು

ಈ ಸಮಾರಂಭದಲ್ಲಿ ನಾಡ ತಹಸಿಲ್ದಾರ್ ಮೆಹಬೂಬ್ ಅಲಿ, ಕಂದಾಯ ನಿರೀಕ್ಷಕ ಹಾಲೇಶ್, ಗ್ರಾಮ ಲೆಕ್ಕಾಧಿಕಾರಿ ನಾಗಬಿಂದು, ರಮೇಶ್ ಕುಲಕರ್ಣಿ, ಜಂಬಣ್ಣ ತಾಳೂರು, ಮೌಲಾಸಾಬ, ಯಮನೂರಪ್ಪ ಚಲುವಾದಿ ಮತ್ತು ಅನೇಕ ಫಲಾನುಭವಿಗಳು ಭಾಗವಹಿಸಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

About Mallikarjun

Check Also

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ

ತೆರಿಗೆ  ನೋಟೀಸ್‌  ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ  ಬೆಂಗಳೂರು,ಜು.15: ವಾರ್ಷಿಕ …

Leave a Reply

Your email address will not be published. Required fields are marked *