Breaking News

ಹೋರಾಟ ಧರಣಿಯಲ್ಲಿ ಪರಿಸರ ತಪಸ್ವಿ ಮೇರು ಜೀವಕ್ಕೆ ಶ್ರದ್ಧಾಂಜಲಿ

The short URL of the present article is: https://kalyanasiri.in/3kar

ಹೋರಾಟ ಧರಣಿಯಲ್ಲಿ ಪರಿಸರ ತಪಸ್ವಿ ಮೇರು ಜೀವಕ್ಕೆ ಶ್ರದ್ಧಾಂಜಲಿ

Tribute to environmental ascetic Meru Jiva during protest sit-in

whatsapp image 2025 11 15 at 6.15.05 pm


ಕೊಪ್ಪಳ: ನಗರಸಭೆ ಆವರಣದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಬಲ್ಡೋಟ ಹಾಗೂ ಇತರ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕೆಂದು ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ 16ನೇ ದಿನ ಪೂರ್ಣಗೊಳಿಸಿ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಧಾರವಾಡ ಜನ ಜಾಗೃತಿ ಅಭಿಯಾನದ ರಾಮಾಂಜನಪ್ಪ ಆಲ್ದಳ್ಳಿ ಅವರು ಬೆಳಿಗ್ಗೆಯಿಂದ ಕಾರ್ಖಾನೆ ದೂಳು ಬಾಧಿತ ಗಿಣಿಗೇರಿ, ಕನಕಾಪುರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ತಾಂಡಾ ಮುಂತಾದ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿರುವ ನೈಜ ಸ್ಥಿತಿಯನ್ನು ಅರಿಯಲು ಆ ಜನರನ್ನು ಸಂದರ್ಶನ ಮಾಡಿ ನೇರವಾಗಿ ಧರಣಿ ಸ್ಥಳಕ್ಕೆ ಬಂದು ಬಲ್ಡೋಟ ವಿಸ್ತರಣೆ ವಿರೋಧಿಸಿದ ಈ ಹೋರಾಟ ಅತ್ಯಂತ ನ್ಯಾಯಸಮ್ಮತವಾದ. ಜನಪರ ಚಹವಳಿಯಾಗಿದೆ. ಜನಗಳ ಆರೋಗ್ದ ಮೆಲೆ ತೀವ್ರ ದುಷ್ಪರಿಣಾಮವಾಗುವುದು ಗೊತ್ತಿದ್ದೂ ಕೊಪ್ಪಳ ಸುತ್ತ ಹತ್ತಾರು ಬೃಹತ್ ಕಾರ್ಖಾನೆ ಗಳಿಗೆ ಅನುಮತಿ ಕೊಟ್ಟಿರುವ ಷರ್ಕಾರದ ನಿರ್ಧಾರ ಖಂಡನಾರ್ಹವಾಗಿದೆ. ಜನಬೆಂಬಲದೊಂದಿಗೆ ಬಲಿಷ್ಠ ಚಳವಳಿಯಾಗಿ ಬೆಳೆಯುವಂತಿಗಲೀ, ನಾವೂ ನಿಮ್ಮ ಬೆಂಬಲಕ್ಕೆ ಇದ್ಧೇವೆ ಎಂದರು. ಧರಣಿ ಸ್ಥಳದ ಇಂದಿನ ನಿರ್ಣಯ: 114ರ ದೀರ್ಘಾಯುಷಿ ತನ್ನ ಬದುಕಿದ ಎಲ್ಲಾ ದಿನಗಳನ್ನು ಮರಗಳನ್ನು ಬೆಳೆಸಿ ಪ್ರಕೃತಿಗೆ ಅಪರಮಿತ ಕಾಣಿಕೆಯನ್ನು ಕೊಟ್ಟು ಚಿರಸ್ಥಾಯಿಯಾದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಪರಿಸರ ಕಾಳಜಿಯ ಪ್ರಜ್ಞೆ, ತಪಸ್ಸಿನ ಜೀವನ ತೆಗೆದ ಸಾಲುಮರದ ತಿಮ್ಮಕ್ಕ ನಮ್ಮ ಹೋರಾಟಕ್ಕೆ ಪ್ರೇರಣೆಯಾಗಿದೆ. ಈ ಹೋರಾಟ ಜಯ ಸಾಧಿಸುವ ಕೊನೆಯ ದಿನದವರೆಗೆ ಇವರ ಭಾವಚಿತ್ರ ಧರಣಿ ಟೆಂಟ್ ಸ್ಥಳದಲ್ಲಿ ಇಡಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಎಸ್.ಎ.ಗಫಾರ್, ನಿಂಗಜ್ಜ ಬಿ.ಬಂಡಿಹರ್ಲಾಪುರ, ಡಿ.ರಾಜರತ್ನಂ, ಎಸ್.ಬಿ. ರಾಜೂರ, ಶಂಭುಲಿಂಗಪ್ಪ ಹರಗೇರಿ, ಮಂಗಳೇಶ ರಾಠೋಡ್ ಎಸ್ ಮಹಾದೇವಪ್ಪ ಮಾವಿನಮಡು, ಡಿ.ರತ್ನಾ, ರಜಾಕ್ ಪೇಂಟರ್, ಬಸವರಾಜ್ ಪೆಂಟರ್, ಆಸೀಫ್ ಕಿಲ್ಲೆದಾರ ಹಾಗೂ ಕಾಲೆಜು ವಿದ್ಯಾರ್ಥಿಗಳು ಇದ್ದರು.

The short URL of the present article is: https://kalyanasiri.in/3kar

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.