Breaking News

ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿದ ಅಮಿತ್ ಶಾ ರಾಜಿನಾಮೆಗೆ CPIML ಲಿಬರೇಶನ್ ಒತ್ತಾಯ

CPIML Liberation demands resignation of Amit Shah who spoke lightly about Ambedkar

ಜಾಹೀರಾತು

ಗಂಗಾವತಿ: ಅಂಬೇಡ್ಕರ್ ರವರ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ನಮ್ಮ CPIML ಲಿಬರೇಶನ್ ಪಕ್ಷದಿಂದ ಇಂದು ಗಂಗಾವತಿ ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರರಾದ ಜೆ ಭಾರದ್ವಾಜ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ನೀಡಿದ ಭೀಕ್ಷೇಯಿಂದ ಇಂದು ಕೇಂದ್ರ ಗೃಹ ಮಂತ್ರಿ ಸ್ಥಾನ ಪಡೆದ ಅಮಿತ್ ಶಾ ಆ ಸ್ಥಾನದ ಘನತೆ,ಗೌರವವನ್ನು ಹಾಳು ಮಾಡಿದ್ದಾರೆ ಹಾಗಾಗಿ ಅವರು ಕೂಡಲೇ ತಮ್ಮ ಗೃಹಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರೂ.

ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ ಗುಜರಾತ್ ನಲ್ಲಿ ಯಾವುದೋ ಒಂದು ಗುಜರಿ ಅಂಗಡಿಯಲ್ಲಿ ಗುಜರಿ ಮಾರಾಟ ಮಾಡಬೇಕಾಗಿದ್ದ ವ್ಯಕ್ತಿ ಇಂದು ಕೇಂದ್ರದ ಗೃಹಮಂತ್ರಿ ಸ್ಥಾನದಲ್ಲಿ ಇದ್ದಾರೆ ಅಂದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕಾರಣ ಅದನ್ನು ಅಮಿತ್ ಶಾ ಅವರು ಯಾವತ್ತೂ ಮರೆಯಬಾರದು. ಅವರು ಹೇಳಿದಂತೆ ದೇವರ ಹೆಸರು ಹೇಳಿಕೊಂಡ ನಾವು ಸಾವಿರಾರು ವರ್ಷಗಳಿಂದ ನರಕದಲ್ಲಿ ಇದ್ದವು ಇಂದು ಅಂಬೇಡ್ಕರ್ ರಚಿಸಿದ ಸಂವಿಧಾನ ಎನ್ನುವ ಸ್ವರ್ಗದಲ್ಲಿ ಇದ್ದೆವೆ ನಮ್ಮಗೆ ಬೇರೆ ಯಾವ ಸ್ವರ್ಗದ ಅವಶ್ಯಕತೆ ಇಲ್ಲ ನೀವು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಇತ್ತಾಯಿಸಿದರು
ನಂತರ ಮಾತನಾಡಿದ CPIML ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಸಣ್ಣ ಹನುಮಂತಪ್ಪ ಹುಲಿಹೈದರ ನಿಮ್ಮ ಮನು ಸಂವಿಧಾನದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ,ಶೂದ್ರ ಎಂಬ ನಾಲ್ಕು ವರ್ಣಗಳನ್ನು ಮಾಡಿ ಸಾವಿರಾರು ವರ್ಷಗಳಿಂದ ಶೂದ್ರರನ್ನು ಗುಲಾಮರಂತೆ ನಡೆಸಿಕೊಂಡಿದ್ದ ನಿಮ್ಮ ಮನು ಸಂವಿಧಾನಕ್ಕೆ ಅಂಬೇಡ್ಕರ್ ರವರು ಎಂದೂ ಬೆಂಕಿ ಇಟ್ಟು ಬೂದಿ ಮಾಡಿದ್ದಾರೆ.
ಮತ್ತೆ ನಿಮ್ಮ ಮನುವಾದಿ ಆರ್ ಎಸ್ ಎಸ್ ಕೈಗೊಂಬೆ ಬಿಜೆಪಿ ಸರ್ಕಾರ ಮನು ಸಂವಿಧಾನ ಜಾರಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ತರದ ಉದ್ದಟತನದ ಮಾತುಗಳನ್ನು ನಿಮ್ಮಂದ ಮಾತನಾಡಿಸುತ್ತಿದೆ.ಸಂವಿಧಾನ ಇಲ್ಲದೆ ಇದ್ದರೆ ನೀವು ಕೂಡ ಗುಲಾಮರಾಗಿ ಬದುಕಬೇಕಿತ್ತು ಅದನ್ನು ಅರ್ಥಮಾಡಿಕೊಂಡು ನಿಮ್ಮ ಮಾತನು ವಾಪಸು ಪಡೆದು ಈ ದೇಶದ ಜರನ ಕ್ಷೇಮೆ ಕೇಳಬೇಕು ಇಲ್ಲದಿದ್ದರೆ ಮುಂದೆ ದೇಶಾದ್ಯಂತ ಬೃಹತ್ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದರೂ.
ಈ ಸಂದರ್ಭದಲ್ಲಿ ಪಾಮಣ್ಣ ಅರಳಿಗನೂರ್,ವೆಂಕಟೇಶ ನೀರಲೂಟಿ,ಕೆಂಚಪ್ಪ ಹೀರೆ ಖೇಡಾ,ಬಾಬರ್,ಚಾಂದ್ ಪಾಷಾ,ರಮೇಶ.ಕೆ,ಪರುಶುರಾಮ,ರೇಣುಕಮ್ಮ,ದ್ಯಾವಮ್ಮ
ಈರಪ್ಪ ರಾಘು ಮಂಡಿ ವೀರೆಷ ಖಾದರ್ ಬಾಷಾ ಬಸವರಾಜ ಶಿವರಾಜ್ ಇತರರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *