Breaking News

ಎಸ್ ಕೆ ಪೌಂಡೇಷನ್ ವತಿಯಿಂದಅಂಬೇಡ್ಕರ್ ಭಾವ ಚಿತ್ರ ಸಹಿತ ನೋಟ್ ಬುಕ್ ವಿತರಣೆ

Distribution of notebook with Ambedkar Bhava picture by SK Foundation.





ವರದಿ : ಬಂಗಾರಪ್ಪ ಸಿ

ಹನೂರು :ಕಾಡಂಚಿನ ಗ್ರಾಮಗಳ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಿಗೆ ನಮ್ಮ ಸಂಸ್ಥೆಯಿಂದ ಸಣ್ಣ ಪುಟ್ಟ ಕಿರು ಸಹಾಯ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಕಿರಾಳು ಗ್ರಾಮದ
ಸಂತೋಷ್ ತಿಳಿಸಿದರು . ತಾಲ್ಲೋಕಿನ ಕೊಣನ ಕೆರೆಯ ಗಿರಿಜನ ಆಶ್ರಮ ಶಾಲೆಯಲ್ಲಿ ನೊಟ್ ಪುಸ್ತಕ ಹಾಗೂ ಅಂಭೆಡ್ಕರ್ ಭಾವ ಚಿತ್ರ ಸಹಿತ ಪುಸ್ತಕ ನೀಡಿದ ನಂತರ ಮಾತನಾಡಿದ ಅವರು ಅಂಬೇಡ್ಕರ್ ವ್ಯಕ್ತಿತ್ವವನ್ನು ಎಲ್ಲಾರು ಮೈಗೂಡಿಸಿಗೊಳ್ಳಬೇಕು ಅವರ ಆದರ್ಶವನ್ನು ನಾವು ನೀವೆಲ್ಲ ಪಾಲಿಸೋಣ ಮಕ್ಕಳೆ ನಿಮ್ಮ ಓದು ಮುಂದಿನ ವಿಧ್ಯಾರ್ಥಿಗಳಿಗೆ ಮಾದರಿಯಾಗಲಿ ಹಾಗೂ ಶಾಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೆಳೆ ಮುಖ್ಯೋಪದ್ಯಾಯರಾದ ಅಂಕಪ್ಪ ಮಾತನಾಡಿ ಇವರು ನೀಡುವ ಪುಸ್ತಕವನ್ನು ಮಕ್ಕಳು ಅದರ ಜ್ಝಾನಾರ್ಜನೆ ಮಾಡಲಿಕ್ಕೆ ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು
ಇದೇ ಸಮಯದಲ್ಲಿ ಗಿರಿಜನರು ಕಾಡಂಚಿನ ಗ್ರಾಮದಲ್ಲಿ ಸಾಕಷ್ಟು ಶ್ರಮ ಜೀವಿಗಳಾಗಿದ್ದು ಅವರ ಮಕ್ಕಳೆಲ್ಲ ಇಂದು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶ್ಲಾಗಿಸಿದರು .
ಇದೇ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಎಸ್ ಕೆ ಫೌಂಡೇಶನ್ ವತಿಯಿಂದ ಉಚಿತವಾಗಿ ಅಂಬೇಡ್ಕರ್ ಜೀವನ ಆಧಾರಿತ ಹಾಗೂ ನೋಟ್ ಬುಕ್ ಪೆನ್ ವಿತರಿಸಲಾಯಿತು. ಇದೇ ಸಮಯದಲ್ಲಿ
ಮುಖಂಡರಾದ ಜಿಲ್ಲಾ ಬುಡಕಟ್ಟು ನಿರ್ದೇಶಕರಾದ ಜೆ ಮಹಾದೆವಸ್ವಾಮಿ , ಕೋಣನಕೆರೆ ಆಶ್ರಮ ಶಾಲೆಯ ಮುಖ್ಯಾಶಿಕ್ಷಕರಾದ ಅಂಕಪ್ಪ , ಶಿಕ್ಷಕರುಗಳಾದ ಸಿದ್ದರಾಜು ,ಸಮ್ಮುನಿ ,ಸೇರಿದಂತೆ, ಎಸ್. ಕೆ ಫೌಂಡೇಶನ್ ಅಧ್ಯಕ್ಷರಾದ ಸಂತೋಷ್ ಕಿರಾಳು, ಹಿಂದುಳಿದ ವರ್ಗದ ನಾಯಕ ಕಾಳೇಗೌಡ್ರು,ಯುವ ಮುಖಂಡರುಗಳಾದ ವಿಜಯಕುಮಾರ್ (ಆಯರಹಳ್ಳಿ ), ಕಿರಾಳು ಗ್ರಾಮದ ಯುವ ಮುಖಂಡರುಗಳಾದ ವಿಶು, ಶಿವು, ರಾಹುಲ್, ಆದರ್ಶ್ ಇನ್ನಿತರರು ಹಾಜರಿದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.