Breaking News

ತೆಲುಗಿನ ಕ್ರಾಂತಿಕಾರಿ ಪ್ರಜಾ ಕವಿ ಹೋರಾಟಗಾರ ಗದ್ದರ್ ನಿಧನ ನುಡಿನಮನ

Telugu Revolutionary People's Poet Struggle Gaddar Nidhana Nudinamana


ಗಂಗಾವತಿ: ಜನಸಾಮಾನ್ಯರ ಪ್ರಜಾ ಕವಿ ಹಾಗೂ ಕ್ರಾಂತಿಕಾರ ಹೋರಾಟಗಾರ ಗದ್ದರ್ ಅವರು ಶೋಷಿತರು ತುಳಿತ್ತಕೊಳಗಾದವರ ಪರವಾಗಿ ಹಾಡು ಬರೆದು ಜನರನ್ನು ಜಾಗೃತಿ ಮಾಡಿದ್ದರು. ಭೂ ರಹಿತರ ಪರವಾಗಿ ನಿತ್ಯವೂ ಹೋರಾಟ ನಡೆಸುವ ಮೂಲಕ ಗುಲಾಮಗಿರಿ ಪದ್ಧತಿ ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸಿದ್ದರು. ಗದ್ದರ್ ನಿಧನದಿಂದ ಬಡವರು, ದೀನದಲಿತರ ಪರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಗದ್ದರ್ ಅವರ ನಿಕಟ ಸ್ನೇಹಿತರು ಹಾಗೂ ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ್ ಹೇಳಿದರು.
ಅವರು ನಗರದ ಕ್ರಾಂತಿಕೇAದ್ರದಲ್ಲಿ ಗದ್ದರ್(ಗುಮ್ಮಡಿ ವಿಠ್ಠಲ್ ರಾವ್)ನುಡಿನಮನ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಚಿತ್ರದುರ್ಗದ ಮುರುಘಾಮಠದಿಂದ ಬಸವಶ್ರೀ ಪ್ರಶಸ್ತಿ ಪಡೆದಿದ್ದ ಗದ್ದರ್ ಅವರು ರಾಯಚೂರು, ಬಳ್ಳಾರಿ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿಯೂ ತಮ್ಮ ಕ್ರಾಂತಿ ಗೀತೆಗಳು ಮತ್ತು ಕ್ರಾಂತಿಕಾರ ಎಡಪಂಥಿಯ ಹೋರಾಟ ಮೂಲಕ ಖ್ಯಾತರಾಗಿದ್ದರು. ಹಲವು ಸಲ ಜೈಲು ಸೇರಿ ಪೊಲೀಸರಿಂದ ಥಳಿತಕೊಳಗಾಗಿದ್ದರು. ಇವರ ನಿಧನ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಜಾಹೀರಾತು

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.