He created a fake account in Tipatur Municipal Council, changed the account and accused the Municipal Council and the government of fraud.

ತಿಪಟೂರು ನಗರಸಭಾ ಉಪಾಧ್ಯಕ್ಷೆ ಮೇಘಶ್ರೀ ಕೆ.ಎಸ್.ಭೂಷಣ್ ಸೇರಿದಂತೆ ನಗರಸಭೆ ಅಧಿಕಾರಿಗಳು ಶಾಮೀಲಾಗಿ,ಕೋಟ್ಯಾಂತರ ಆಸ್ತಿ ಗುಳುಂ:ಲೋಕಾಯುಕ್ತಕ್ಕೆ ದೂರು.

ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ ಪತಿ ಸುಜಿತ್ ಭೂಷಣ್ ಅಧಿಕಾರದಲ್ಲಿ ಹಸ್ತಕ್ಷೇಪ.ನಗರಸಭಾ ಉಪಾಧ್ಯಕ್ಷ ಮತ್ತು ಸದಸ್ಯತ್ವದಿಂದ ವಜಾ ಮತ್ತು ರದ್ದು ಮಾಡುವಂತೆ ಹಾಗೂ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ಮೊರೆ.

ತಿಪಟೂರಿನ ವಾರ್ಡ್ ನಂಬರ್ 17ರಲ್ಲಿ, 17/12 ಪಿ 51 ರಲ್ಲಿ ಸುಮಾರು ಏಳರಿಂದ ಎಂಟು ನಿವೇಶನಗಳಲ್ಲಿ ನಕಲಿ ಖಾತೆ ಸೃಷ್ಟಿಸಿ,ಬದಲಾವಣೆ ಮಾಡಿರುವ ಶಂಕೆ.
ಈ ನಿವೇಶನಗಳ ಪುಸ್ತಕ ನಗರಸಭೆ ಕಚೇರಿಯಿಂದ ರಾತ್ರೋರಾತ್ರಿ ಮಾಯ ತನಿಖೆಗೆ ಲೋಕಾಯುಕ್ತರಗೆ ದೂರು.
ತಿಪಟೂರು: ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ ಕೆ.ಎಸ್.ಭೂಷಣ್ ಸೇರಿದಂತೆ ನಗರಸಭೆ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಖಾತೆ ಸೃಷ್ಟಿಸಿ,ಖಾತೆ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಮತ್ತು ನಗರಸಭೆಗೆ ಕೋಟ್ಯಂತರ ರೂಗಳನ್ನು ವಂಚಿಸಿದ್ದು, ಕೂಡಲೇ ತಾವುಗಳು ಉಪಾಧ್ಯಕ್ಷೇ ಮತ್ತು ಸದಸ್ಯತ್ವದಿಂದ ಅನರ್ಹಗೊಳಿಸಿ,ವಜಾ ಮಾಡುವಂತೆ ಹಾಗೂ ಈ ನಕಲಿ ಖಾತೆಗೆ ಸಹಕರಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾರನಗೆರೆ ನಿವಾಸಿ ಕೆ.ಯು. ಶಿವಲಿಂಗಮೂರ್ತಿ ಲೋಕಾಯುಕ್ತ ರವರಿಗೆ ದೂರು ಸಲ್ಲಿಸಿದರು.

ನಗರದ ವಾರ್ಡ್ ನಂಬರ್ 17ರ ಶಾರದನಗರದಲ್ಲಿರುವ 17 / 12 ಪಿ. 51 ಖಾತೆಯ ನಿವೇಶನವು ಮೂಲ ಎಂ.ಎಸ್. ಉಮಾ ಎಂಬುವರಿಗೆ ಸೇರಿದ್ದು,ಈ ಖಾತೆಯನ್ನು ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ತನ್ನ ಗಂಡ ಸುಜಿತ್ ಭೂಷಣ್ ಅಧಿಕಾರ ದುರುಪಯೋಗಪಡಿಸಿಕೊಂಡು, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ನಗರಸಭೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಈ ಖಾತೆಯನ್ನು ಸೃಷ್ಟಿಸಿ,ನಕಲಿ ದಾಖಲೆಗಳೊಂದಿಗೆ, ಪೌರಾಯುಕ್ತರ ಸಹಿಯನ್ನು ನಕಲುಗೊಳಿಸಿ, ಖಾತೆ ಬದಲಾವಣೆ ಮಾಡಿ, ಮೇಘಶ್ರೀ ಕೆ.ಎಸ್. ಭೂಷಣ್ ರವರಿಗೆ ಬದಲಾಯಿಸಿದ್ದಾರೆ. ಇದೇ ರೀತಿ ಈ ನಿವೇಶನಗಳಲ್ಲಿ ಸುಮಾರು ಏಳರಿಂದ ಎಂಟು ನಿವೇಶಗಳನ್ನು ಇದೇ ರೀತಿ ಬದಲಾಯಿಸಿಕೊಂಡು, ನಗರಸಭೆಯಲ್ಲಿ ಇದ್ದ ಈ ನಿವೇಶನದ ಪುಸ್ತಕವನ್ನು ರಾತ್ರೋ ರಾತ್ರಿ ಮಾಯವಾಗಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ತಾವುಗಳು ಕೂಡಲೇ ಈ ನಕಲಿ ಖಾತೆ ಸೃಷ್ಟಿಸಿದವರು ಮತ್ತು ನಗರಸಭೆ ಉಪಾಧ್ಯಕ್ಷರ ಮೇಲೆ ಕಾನೂನು ಕ್ರಮ ಜರುಗಿಸಿ, ಸದಸ್ಯತ್ವವನ್ನು ರದ್ದುಗೊಳಿಸಿ, ತನಿಖೆ ಆದೇಶ ಮಾಡುವಂತೆ ಸಾರ್ವಜನಿಕರ ಒತ್ತಾಯವಾಗಿದ್ದು, ಲೋಕಾಯುಕ್ತರ ಕುಂದು ಕೊರತೆ ಮತ್ತು ಸಮಸ್ಯೆಗಳ ಆಹವಾಲು ಸಭೆಯಲ್ಲಿ ಒತ್ತಾಯಿಸಿ,ದೂರು ಸಲ್ಲಿಸಿದ್ದಾರೆ.