Breaking News

ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ವಿರೋಧಿಯಾಗಿದೆ-ಮಾಜಿ ಶಾಸಕ ಪರಣ್ಣ ಮುನವಳ್ಳಿ,

Congress-led government is anti-farmer,,,,, former MLA Paranna Munavalli,

ಜಾಹೀರಾತು

ಗಂಗಾವತಿ 3 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ, ರೈತ ವಿರೋಧಿಯಾಗಿದೆ ಎಂದು, ಮಾಜಿ ಶಾಸಕ ಮುನವಳ್ಳಿ ಹೇಳಿದರು, ಅವರು ರವಿವಾರದಂದು ಬಿಜೆಪಿಯ ಕಾರ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಹಿಂದೆ ಬಿಜೆಪಿ ನೇತೃತ್ವದ, ಸರ್ಕಾರದ ಅವಧಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ರೈತರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಅದಕ್ಕಾಗಿ ಸಾಕಷ್ಟು ಅನುದಾನವನ್ನು ಸಹ ಕಲ್ಪಿಸಲಾಗಿತ್ತು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ, ಬಿಜೆಪಿಯ ಅವಧಿಯಲ್ಲಿನ ಎಲ್ಲಾ ರೈತರ ಯೋಜನೆಗಳನ್ನು ತಡೆಹಿಡಿದು, ರೈತರಿಗೆ ವಂಚಿಸುತ್ತದೆ, ಮಳೆಯ ಅಭಾವದಿಂದ ಉಂಟಾದ ಬರಗಾಲ ಸಮಸ್ಯೆ,, ರೈತರಿಗೆ ಬೆಳೆಯುವ ಬೆಳೆಗಳಿಗೆ ಸಮರ್ಪಕ ನೀರಿಲ್ಲದೆ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಸೌಲಭ್ಯ ಕಲ್ಪಿಸದೆ, ಬೆಳೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ, ರೈತರ ಸಂಪದ ಯೋಜನೆ ಶ್ರಮಶಕ್ತಿ ಯೋಜನೆ ರೈತ ವಿದ್ಯಾನಿಧಿ ಯೋಜನೆ, ಎಪಿಎಂಸಿ ಕಾನೂನು, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಖುಷಿ ಭೂಮಿ ಮಾರಾಟ ಕಾನೂನು ಹೀಗೆ, ಕಾಂಗ್ರೆಸ್ ನೇತೃತ್ವದ ಸರಕಾರ, ಅನುಷ್ಠಾನಗೊಳಿಸದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂ ರಿದರು, ಕಾಂಗ್ರೆಸ್ ನೇತೃತ್ವದ ಸರ್ಕಾರ, ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಈ ಕುರಿತು ಮಂಡಲ ಮಟ್ಟದಿಂದ ಎಲ್ಲಾ ಹಂತದವರೆಗೆ ಭಾರತೀಯ ಜನತಾ ಪಕ್ಷ, ರೈತರನ್ನು ಜನಜಾಗೃತಿಗೊಳಿಸಲಾಗುತ್ತದೆ ಎಂದು ತಿಳಿಸಿದ ಅವರು ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಹತ್ವ ಬದಲಾವಣೆ ಉಂಟಾಗಲಿದೆ ಎಂಬುದು ಹೇಳಿದರು, ವೀರಭದ್ರ ಪ್ಪ ನಾಯಕ್, ನರ್ಸಿಂಗ್ ರಾವ್ ಕುಲಕರ್ಣಿ, ಕಾಶಿನಾಥ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.