Breaking News

ಮೋದಿಜಿ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷಿತ: ಸುಗ್ರೀವಾ


ಗಂಗಾವತಿ.ಏ.27: ಭಾರತದ ಸರ್ವಾಂಗೀಣ ಅಭಿವೃದ್ಧಿಯೇ ಮೋದಿ ಗ್ಯಾರಂಟಿ. ಬಿಜೆಪಿಗೆ ನೀಡುವ ಒಂದೊಂದು ಮತವು ಭಾರತ ವಿಕಾಸಕ್ಕೆ ಶಕ್ತಿ ತುಂಬುತ್ತವೆ ಎಂದು ಬಿಜೆಪಿ ಯುವ ಮುಖಂಡ ಸಂಗಮೇಶ್ ಸುಗ್ರೀವಾ ತಿಳಿಸಿದರು.
ಬಿಜೆಪಿ ನಿಯೋಜಿತ ಕೊಪ್ಪಳ ಲೋಕಸಭಾ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಇಲಕಲ್ ಗಡ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸುಗ್ರೀವಾ ಅವರು, ಭಾರತೀಯ ಜನತಾ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಗೆ ವೇಗ ನೀಡಿದೆ. ವಿಶ್ವದಲ್ಲಿ ಭಾರತವನ್ನು ಐದನೇಯ ಅತಿ ದೊಡ್ಡ ಆರ್ಥಿಕ ಸದೃಢ ದೇಶವನ್ನಾಗಿ ಮಾಡಿದೆ. ಭಾರತದ ಗಡಿಗಳ ಮೇಲೆ ಕಣ್ಣು ಹಾಕುವ ನೆರೆಹೊರೆಯ ರಾಷ್ಟ್ರಗಳಿಗೆ, ಉಗ್ರವಾದಿಗಳಿಗೆ ಎದುರೇಟು ನೀಡುವ ಮೂಲಕ ದೇಶದ ಭದ್ರತೆಗೆ ಬಲ ತುಂಬಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಭಾರತೀಯರ 500 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದೆ. ಸನಾತನ ಧರ್ಮವನ್ನು ಜಗತ್ತಿಗೆ ಪರಿಚಯಿಸಿ ಭಾರತಕ್ಕೆ ವಿಶ್ವ ಗುರು ಪಟ್ಟಕ್ಕೇರಿಸಿದೆ. ಕಾಂಗ್ರೆಸ್ ನ ಉಚಿತ ಭಾಗ್ಯಗಳು ತಾತ್ಕಾಲಿಕ ಹಾಗೂ ದೇಶವನ್ನು ದಿವಾಳಿತನಕ್ಕೆ ದೂಡುವ ಭಾಗ್ಯಗಳಾಗಿವೆ. ನರೇಂದ್ರ ಮೋದಿಯಂತಹ ಸದೃಢ ಪ್ರಧಾನಿಯ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷಿತವಾಗಿರಲು ಸಾಧ್ಯ. ಯುವ ಸಮೂಹ ನವ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಬೆಂಬಲಿಸಿ ಮೋದಿಜಿ ಪರ ಅಭ್ಯರ್ಥಿಗೆ ಮತ ನೀಡಬೇಕು ಎಂದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.