Bharatiya Janata Party wins in three states
ಗಂಗಾವತಿ ಬಿಜೆಪಿಯಿಂದ ವಿಜಯೋತ್ಸವ,,, ನಗರದ ಮಹಾತ್ಮ ಗಾಂಧಿ ವ್ರತದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಅವುಗಳಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅತ್ಯಂತ ಜಯಭೇರಿ ಪಡೆದ ಹಿನ್ನೆಲೆಯಲ್ಲಿ ಗಂಗಾವತಿ ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ, ವಿವಿಧ ಘಟಕದ ಪದಾಧಿಕಾರಿಗಳು ಮಹಾತ್ಮ ಗಾಂಧಿಗೆ ಮಾಲಾರ್ಪಣೆ ಮಾಡುವುದರ ಮೂಲಕ ವಿಜಯೋತ್ಸವವನ್ನು ಆಚರಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ನಿರೀಕ್ಷೆಯಂತೆ ಮಧ್ಯಪ್ರದೇಶ ರಾಜಸ್ಥಾನ್ ಚಂಡಿಗಡದಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಯಶಸ್ಸು ಕಂಡಿದ್ದು ಅಲ್ಲಿನ ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದಕ್ಷತೆ ಪ್ರಾಮಾಣಿಕತೆ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಗೆಲುವು ಸಾಧಿಸಲು ಕಾರಣಿಭೂತರಾಗಿದ್ದಾರೆ ಇದು ಮುಂಬರುವ ಲೋಕಸಭಾ ಚುನಾವಣೆಗೆ ಪುನಹ ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು, ಬಳಿಕ ಸಿಹಿ ಹಂಚಿ ಈ ಸಂದರ್ಭದಲ್ಲಿ ಹೆಚ್ ಗಿರಿ ಗೌಡ, ಕಾಶಿನಾಥ್ ಚಿತ್ರಗಾರ, ರಾಘವೇಂದ್ರ ಶೆಟ್ಟಿ, ಮಹಾಲಿಂಗಪ್ಪ ಬನ್ನಿಕೊಪ್ಪ ವೀರಭದ್ರಪ್ಪ ನಾಯಕ್ ನಗರಸಭಾ ಸದಸ್ಯ ವಾಸ್ ದೇವ್ನಳ್ಳಿ ಇತರೆ ಸದಸ್ಯರು ಮಹಿಳಾ ಸದಸ್ಯರುಗಳಾದ ರಾಧಾಬಾಯಿ ಇತರರು ಪಾಲ್ಗೊಂಡಿದ್ದರು