Megharaj Reddy Hosamani selected for Navodaya Residential School: Honor.

ಕಾರಟಗಿ:, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಸತಿ ಶಾಲೆಗೆ ಆಯ್ಕೆ ಆಗಿರುವ ಸಿದ್ಧಾಪುರದ ಮೇಘರಾಜ್ ರೆಡ್ಡಿ ಹೊಸಮನಿ ಅವರನ್ನು ಉತ್ತೀರ್ಣರಾಗುವಂತೆ ತರಬೇತಿ ನೀಡಿದ ಎಸ್.ಡಿ.ಎಮ್. ಕೋಚಿಂಗ್ ಕ್ಲಾಸಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ನವೋದಯ ತರಬೇತಿ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷರಾದ ಸಿದ್ದು ವಳಕಲದಿನ್ನಿ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಸಿದ್ಧಾಪುರ ಗ್ರಾಮದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಮಲ್ಲಿಕಾರ್ಜುನಗೌಡ ಹೊಸಮನಿ ಅವರ ದ್ವಿತೀಯ ಸುಪುತ್ರ ಮೇಘರಾಜ್ ರೆಡ್ಡಿ ಹೊಸಮನಿ ಅವರು ನವೋದಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ನವೋದಯ ವಸತಿ ಶಾಲೆಗೆ ಆಯ್ಕೆಯಾಗಿರುವುದು ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳಿವೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸೌಲಭ್ಯವನ್ನು ಸರ್ಕಾರಗಳು ಕಲ್ಪಿಸಿದಲ್ಲಿ ಇಂತಹ ಅನೇಕ ಪ್ರತಿಭೆಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದರು.
ಮೇಘರಾಜ್ ರೆಡ್ಡಿ ಒಬ್ಬ ಪ್ರತಿಭಾನ್ವಿತ ಹಾಗೂ ಅತ್ಯಂತ ಚುರುಕು ಬುದ್ಧಿ ಮತ್ತು ನೆನಪಿನ ಶಕ್ತಿ ಹೊಂದಿರುವ ವಿದ್ಯಾರ್ಥಿಯಾಗಿದ್ದು, ಕಷ್ಟಪಟ್ಟು ವ್ಯಾಸಂಗ ಮಾಡಿ ಇಂದು ಕಠಿಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವ ನವೋದಯ ಪರೀಕ್ಷೆ ಉತ್ತಿರ್ಣರಾಗಿದ್ದಾರೆ. ಕಳೆದ ವರ್ಷವೂ ಕೂಡ ಮಲ್ಲಿಕಾರ್ಜುನಗೌಡ ಅವರ ಹಿರಿಯ ಪುತ್ರ, ಮೇಘರಾಜ್ ರೆಡ್ಡಿ ಅವರ ಸಹೋದರ ಪೃಥ್ವಿರಾಜ್ ರೆಡ್ಡಿ ಹೊಸಮನಿ ಅವರು ಸಹ ನಮ್ಮಲ್ಲಿ ತರಬೇತಿ ಪಡೆದು, ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತೀರ್ಣರಾಗಿ, ನಾನಾ ವಸತಿ ಶಾಲೆಗಳಿಗೆ ಆಯ್ಕೆಯಾಗಿ, ಹೊಸಪೇಟೆಯ ಶ್ರೀ ಸತ್ಯಸಾಯಿ ವಿದ್ಯಾನಿಕೇತನಂ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು, ಹಾಗೇಯೆ ಪ್ರತಿಭಾನ್ವಿತರಾಗಿರುವ ಈ ಇಬ್ಬರ ಮುಂದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮೇಘರಾಜ್ ರೆಡ್ಡಿ ಅವರ ತಂದೆ ಮಲ್ಲಿಕಾರ್ಜುನಗೌಡ ಹೊಸಮನಿ, ತಾಯಿ ಭಾಗ್ಯಲಕ್ಷ್ಮೀ ಹೊಸಮನಿ, ಸಹೋದರ ಪೃಥ್ವಿರಾಜ್ ರೆಡ್ಡಿ ಸೇರಿದಂತೆ ಎಸ್.ಡಿ.ಎಮ್. ಕೋಚಿಂಗ್ ಕ್ಲಾಸಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರಟಗಿ: ನವೋದಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ನವೋದಯ ವಸತಿ ಶಾಲೆಗೆ ಆಯ್ಕೆ: . . . . .
ಮೇಘರಾಜ್ ರೆಡ್ಡಿ ಹೊಸಮನಿ ಅವರಿಗೆ ಸನ್ಮಾನ.
ಕಾರಟಗಿ:, ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ವಸತಿ ಶಾಲೆಗೆ ಆಯ್ಕೆ ಆಗಿರುವ ಸಿದ್ಧಾಪುರದ ಮೇಘರಾಜ್ ರೆಡ್ಡಿ ಹೊಸಮನಿ ಅವರನ್ನು ಉತ್ತೀರ್ಣರಾಗುವಂತೆ ತರಬೇತಿ ನೀಡಿದ ಎಸ್.ಡಿ.ಎಮ್. ಕೋಚಿಂಗ್ ಕ್ಲಾಸಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ನವೋದಯ ತರಬೇತಿ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷರಾದ ಸಿದ್ದು ವಳಕಲದಿನ್ನಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಸಿದ್ಧಾಪುರ ಗ್ರಾಮದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಮಲ್ಲಿಕಾರ್ಜುನಗೌಡ ಹೊಸಮನಿ ಅವರ ದ್ವಿತೀಯ ಸುಪುತ್ರ ಮೇಘರಾಜ್ ರೆಡ್ಡಿ ಹೊಸಮನಿ ಅವರು ನವೋದಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ನವೋದಯ ವಸತಿ ಶಾಲೆಗೆ ಆಯ್ಕೆಯಾಗಿರುವುದು ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳಿವೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸೌಲಭ್ಯವನ್ನು ಸರ್ಕಾರಗಳು ಕಲ್ಪಿಸಿದಲ್ಲಿ ಇಂತಹ ಅನೇಕ ಪ್ರತಿಭೆಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದರು.
ಮೇಘರಾಜ್ ರೆಡ್ಡಿ ಒಬ್ಬ ಪ್ರತಿಭಾನ್ವಿತ ಹಾಗೂ ಅತ್ಯಂತ ಚುರುಕು ಬುದ್ಧಿ ಮತ್ತು ನೆನಪಿನ ಶಕ್ತಿ ಹೊಂದಿರುವ ವಿದ್ಯಾರ್ಥಿಯಾಗಿದ್ದು, ಕಷ್ಟಪಟ್ಟು ವ್ಯಾಸಂಗ ಮಾಡಿ ಇಂದು ಕಠಿಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವ ನವೋದಯ ಪರೀಕ್ಷೆ ಉತ್ತಿರ್ಣರಾಗಿದ್ದಾರೆ. ಕಳೆದ ವರ್ಷವೂ ಕೂಡ ಮಲ್ಲಿಕಾರ್ಜುನಗೌಡ ಅವರ ಹಿರಿಯ ಪುತ್ರ, ಮೇಘರಾಜ್ ರೆಡ್ಡಿ ಅವರ ಸಹೋದರ ಪೃಥ್ವಿರಾಜ್ ರೆಡ್ಡಿ ಹೊಸಮನಿ ಅವರು ಸಹ ನಮ್ಮಲ್ಲಿ ತರಬೇತಿ ಪಡೆದು, ಹಲವಾರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತೀರ್ಣರಾಗಿ, ನಾನಾ ವಸತಿ ಶಾಲೆಗಳಿಗೆ ಆಯ್ಕೆಯಾಗಿ, ಹೊಸಪೇಟೆಯ ಶ್ರೀ ಸತ್ಯಸಾಯಿ ವಿದ್ಯಾನಿಕೇತನಂ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು, ಹಾಗೇಯೆ ಪ್ರತಿಭಾನ್ವಿತರಾಗಿರುವ ಈ ಇಬ್ಬರ ಮುಂದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮೇಘರಾಜ್ ರೆಡ್ಡಿ ಅವರ ತಂದೆ ಮಲ್ಲಿಕಾರ್ಜುನಗೌಡ ಹೊಸಮನಿ, ತಾಯಿ ಭಾಗ್ಯಲಕ್ಷ್ಮೀ ಹೊಸಮನಿ, ಸಹೋದರ ಪೃಥ್ವಿರಾಜ್ ರೆಡ್ಡಿ ಸೇರಿದಂತೆ ಎಸ್.ಡಿ.ಎಮ್. ಕೋಚಿಂಗ್ ಕ್ಲಾಸಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.