A request to the Minister to repair the deteriorated Jagirapannur road and start bus service
![](https://i0.wp.com/kalyanasiri.in/wp-content/uploads/2024/12/IMG-20241224-WA0197-1.jpg?fit=1280%2C867&ssl=1)
![](https://i0.wp.com/kalyanasiri.in/wp-content/uploads/2024/07/IMG-20240716-WA0001.jpg?fit=1131%2C1600&ssl=1)
![](https://i0.wp.com/kalyanasiri.in/wp-content/uploads/2024/08/IMG-20240830-WA0317.jpg?resize=300%2C169&ssl=1)
ಮಾನ್ವಿ : ತಾಲೂಕಿನ ಜಾಗೀರಪನ್ನೂರು ರಸ್ತೆ ತುಂಬಾ ಹದಗೆಟ್ಟಿದೆ, ದುರಸ್ತಿ ಹಾಗೂ ಸ್ಥಗಿತಗೊಂಡ ಬಸ್ ಸಂಚಾರ ಪುನ: ಆರಂಭಿಸಲು ಒತ್ತಾಯಿಸಿ ಜಾಗೀರ ಪನ್ನೂರು ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗುರುವಾರ ಮಾನ್ವಿಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಬೋಸರಾಜು ಅವರಿಗೆ ಮನವಿ ಸಲ್ಲಿಸಿದರು.
![](https://i0.wp.com/kalyanasiri.in/wp-content/uploads/2024/08/IMG-20240830-WA0316.jpg?resize=618%2C278&ssl=1)
ಚೀಕಲಪರ್ವಿ ಗ್ರಾಮದಿಂದ ಯಡಿವಾಳ, ಜಾಗೀರ ಪನ್ನೂರು ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಬಹಳಷ್ಟು ಹದಗೆಟ್ಟಿದ್ದರಿಂದ 20 ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿದ್ದಾರೆ.
ತಾತ್ಕಾಲಿಕವಾಗಿ ರಸ್ತೆ :
ಸಂಚಾರಕ್ಕೆ ತೊಂದರೆಯಾಗಿತ್ತು. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದುರಸ್ತಿ ಮಾಡಲು ವಿನಂತಿ ಮಾಡಿಕೊಂಡ ಮೇರೆಗೆ ತಾತ್ಕಾಲಿಕವಾಗಿ ರಸ್ತೆಗೆ ಮರಮ್ ಹಾಕಿರುತ್ತಾರೆ. ಆದರೆ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಾಮ ಬಸ್ ಘಟಕ ವ್ಯವಸ್ಥಾಪಕರು ಈ ಮಾರ್ಗವಾಗಿ ಓಡಾಡುವ ಬಸ್ಸುಗಳ ಸಂಚಾರವನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಾರಣ ಯಡಿವಾಳ, ಚೀಕಲಪರ್ವಿ ಗ್ರಾಮದ ಜನರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಸ್ತೆಯನ್ನು ಶೀಘ್ರವೇ ಶಾಶ್ವತ ದುರಸ್ತಿ ಮಾಡಿ ಬಸ್ ಸಂಚಾರ ಪುನರಾರಂಭಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದ ವಿದ್ಯಾರ್ಥಿಗಳು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಶಾಂತ, ವಿಜಯ ಕುಮಾರ, ಮರಿಸ್ವಾಮಿ, ವಿನೋದ, ಪ್ರಮೋದ, ಅಶೋಕ, ಈರಣ್ಣ ಹಾಜರಿದ್ದರು.