Breaking News

ನಗರ ಪೋಲಿಸ್ ಠಾಣೆಯ ಗಂಗಾರಾಮ್ ಸಿಂಗ್ ನಿಧನ:

Death of Gangaram Singh of Nagar Police Station:

ಗಂಗಾವತಿ: ನಗರದ ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾರಾಮ್ ಸಿಂಗ್ ಬಸವಂತ ಸಿಂಗ್ (45) ಇವರು ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಮೃತರಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಧರ್ಮ ಪತ್ನಿ ಮತ್ತು ಒಬ್ಬ ಮಗಳು, ಒಬ್ಬ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಿಂಗ ಅವರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪೊಲೀಸ ಇಲಾಖೆಯಲ್ಲಿ ಕೊಪ್ಪಳ, ಕುಕನೂರು,ಗಂಗಾವತಿ, ಬೇವೂರು,ಸೇರಿದಂತೆ ತಮ್ಮ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿದ್ದಾರೆ, ಯಾರೇ ಬಡವರು ಹಾಗೂ ಅನಾಥ ಶವಗಳಿಗೆ ತಮ್ಮ ವೈಯಕ್ತಿಕವಾಗಿ ದುಡ್ಡ ಖರ್ಚು ಮಾಡಿ ಅಂತ್ಯಸಂಸ್ಕಾರ ಮಾಡುವುದರಲ್ಲಿ ಇವರದು ಯಾವಾಗಲೂ ಒಂದು ಕೈ ಮುಂದೆ ಇರುತ್ತದೆ. ಸದಾ ಸರಳ ಸಜ್ಜನಿಕೆಗೆ ಸ್ನೇಹಜೀವಿಯಾಗಿದ್ದ, ಇಲಾಖೆಯಲ್ಲಿ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಅವರಿವರು ಹೇಳುತ್ತಿದ್ದದ್ದನ್ನು ಕೇಳಿ ನೆರೆದವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.