Breaking News

ಯಲಬುರ್ಗಾ ಕ್ಷೇತ್ರದ ಅಭಿವೃದ್ದಿಗೆರಾಯರಡ್ಡಿಯವರ ಕೊಡುಗೆ ಅಪಾರ : ಸಂಸದ ರಾಜಶೇಖರ್ ಹಿಟ್ನಾಳ

Rayareddy’s contribution to the development of Yelaburga constituency is immense: MP Rajashekar Hitnal

ಜಾಹೀರಾತು

ಕಲ್ಯಾಣಸಿರಿ ವಾರ್ತೆ ಕೊಪ್ಪಳ.

ಕುಕನೂರು : ರಾಜ್ಯದಲ್ಲಿ ಕ್ಷೇತ್ರಗಳ ಅಭಿವೃದ್ದಿಯಾಗಬೇಕಾದರೇ ಜನಪ್ರತಿನಿಧಿಗಳ ಇಚ್ಚಾಶಕ್ತಿಯಿಂದ ಮಾತ್ರ ಸಾಧ್ಯ ಆ ಕಾರ್ಯ ಇಂದು ರಾಯರಡ್ಡಿಯವರು ಮಾಡುತ್ತಿದ್ದಾರೆ. ಯಲಬುರ್ಗಾ ಕ್ಷೇತ್ರ ರಾಜ್ಯದಲ್ಲಿಯೇ ಅಭಿವೃದ್ದಿಯಲ್ಲಿ ಮಂಚೂಣಿಯಲ್ಲಿದೆ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.

ಪಟ್ಟಣದ ಕೆಎಸ್ ಆರ್ ಟಿಸಿ ಡಿಪೋದ ಹತ್ತಿರದಲ್ಲಿ ಎನ್. ಎಚ್ (ಓ ) ಇಪಿಸಿ ಮೋಡ್ ನ ಅಡಿಯಲ್ಲಿ ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿ -367 (ಭಾನಾಪೂರ-ಗದ್ದನಕೇರಿ ಸೆಕ್ಷನ್) ರಲ್ಲಿ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡ ಪಟ್ಟಣಗಳಿಗೆ ಬೈಪಾಸ್ ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ನಂತರ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಯಲಬುರ್ಗಾ ಕ್ಷೇತ್ರದ ಅಭಿವೃದ್ದಿಯ ಕುರಿತು ರಾಯರಡ್ಡಿಯವರಿಗೆ ದೂರ ದೃಷ್ಟಿ ಇದೆ. ಈ ಕ್ಷೇತ್ರದಂತೆ ರಾಜ್ಯದಲ್ಲಿ ಯಾವ ಕ್ಷೇತ್ರವು ಅಭಿವೃದ್ದಿ ಹೊಂದಿಲ್ಲಾ, ಈ ಕ್ಷೇತ್ರವು ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ದಿಯಾಗಿದೆ. ಕುಡಿಯುವ ನೀರಿನ ಅಭಾವ ಸಾಕಷ್ಟಿತ್ತು, ಅದನ್ನು ಸಹ ನಿಭಾಯಿಸಿದ್ದಾರೆ. ಅಂತರ್ಜಲ ಹೆಚ್ಚಳಕ್ಕೆ ತಾಲೂಕಿನಾದ್ಯಂತ 26 ಬೃಹತ್ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶಗಳು ಮಳೆಯಾಶ್ರಿತ ಪ್ರದೇಶಗಳಾಗಿದ್ದು, ಉದ್ಯೋಗಕ್ಕಾಗಿ ಇಲ್ಲಿನ ಜನತೆ ಪರದಾಡುವಂತಾಗಿದ್ದು, ಈ ಭಾಗದ ಜನತೆ ದುಡಿಮೆ ಕಂಡುಕೊಳ್ಳಲು ರೈಲ್ವೇ ಸಂಚಾರವು ಕೂಡಾ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.

ಈ ವೇಳೆ ಅಧ್ಯಕ್ಷತೆ ವಹಿಸಿದ ರಾಯರಡ್ಡಿ ಮಾತನಾಡಿ ಸಿಂಗಟಾಲೂರ ಏತ ನೀರಾವರಿ ಮೂಲಕ ನಮ್ಮ ಭಾಗದ ತಳಕಲ್, ಬನ್ನಿಕೊಪ್ಪ, ಅಡವಿಹಳ್ಳಿ ಕೆರೆಗಳನ್ನು ನೀರಾವರಿ ಮಾಡಲಾಗುತ್ತದೆ ಎಂದರು.

ಸಾರ್ವಜನಿಕರು ಕೆರೆಗಳ ನಿರ್ಮಾಣಕ್ಕೆ ಭೂಮಿಯನ್ನು ನೀಡಿದರೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಹೆಚ್ಚಳವಾಗುತ್ತದೆ ಇದರಿಂದ ರೈತಾಪಿ ವರ್ಗಕ್ಕೆ ಅನೂಕೂಲವಾಗಲಿದೆ ಎಂದರು.

ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದಲ್ಲಿ ವಾಣಿಜ್ಯ, ವ್ಯಾಪಾರಕ್ಕಾಗಿ ತಳಕಲ್ ನಿಂದ ಹುಬ್ಬಳ್ಳಿ, ಮೂಲಕ ಗೋವಾ ಹಾಗೂ ತಳಕಲ್ ನಿಂದ ಕುಕನೂರು, ಕುಷ್ಟಗಿ ಮಾರ್ಗವಾಗಿ ಬಾದಾಮಿಯಿಂದ ನಿಪ್ಪಾಣಿ ಮೂಲಕ ಸೊಲ್ಲಪೂರ ಮಾರ್ಗವಾಗಿ ಮುಂಬೈಗೆ ಹೋಗಲು ಅನೂಕೂಲವಾಗುತ್ತದೆ. ಈ ಕಾಮಗಾರಿ ಎರಡು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದರು.

ಈ ರಾಷ್ಟ್ರೀಯ ಹೆದ್ದಾರಿಯು ಕುಕನೂರನಲ್ಲಿ 6.5 ಕಿ. ಲೋ ಮೀಟರ್, ಯಲಬುರ್ಗಾ 5.5 ಕಿ. ಲೋ ಮೀಟರ್, ಗಜೇಂದ್ರಗಡ 7. ಕಿ. ಲೋ ಉದ್ದದ
ಒಟ್ಟು ಮೂರು ಬೈಪಾಸ್ ರಸ್ತೆಯ 169 ಕೋಟಿಗೆ ಟೆಂಡರ್ ಆಗಿದೆ, ಭೂಮಿ ಖರೀದಿಗೆ ರಾಜ್ಯ ಸರ್ಕಾರವು 48.57 ಲಕ್ಷ ಕೇಂದ್ರ ಸರ್ಕಾರ 48.57 ಲಕ್ಷ ರೂಪಾಯಿಗಳ ಹಣ ನೀಡಲಿದೆ ಎಂದರು.

ಈ ಬೈಪಾಸ್ ರಸ್ತೆಯು ಸಂಚಾರಕ್ಕೆ ತೊಂದರೆಯಾಗದಂತೆ ಎರಡು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಗುದ್ನೇಪ್ಪನಮಠದ ರೋಡ್ ಹಾಗೂ ಯಲಬುರ್ಗಾದ ಮುಧೋಳ ರಸ್ತೆಗೆ ಇನ್ನೊಂದು
ಫ್ಲೈ ಓವರ್ ನಿರ್ಮಾಣ ನಿರ್ಮಿಸಲಾಗುತ್ತದೆ. 16 ಮೈನರ್ ಜಂಕ್ಸನ್, 10ಮೇಜರ್ ಜಂಕ್ಸನ್, 7ಹೊಸ ಬ್ರಿಡ್ಜ್, 6.8ಕೀ.ಮಿ ಡ್ರೇನ್, 2 ಬಾಕ್ಸ್ ಕಲ್ವರ್ಟ್, 19 ಪೈಪ್ ಕಲ್ವರ್ಟ್ ನಿರ್ಮಿಸಲಾಗುತ್ತದೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಜಮೆಯಾಗುತಿದ್ದು, ಇನ್ನೂ ಶೇ.20ರಷ್ಟು ಭೂ ಸ್ವಾಧಿನ ಹಣ ಜಮೆ ಪ್ರಕ್ರಿಯೇ ಉಳಿದಿದೆ. ಸದ್ಯ 35 ಕೋಟಿ ರೂಪಾಯಿ ರೈತರ ಖಾತೆಗೆ ಜಮೆಯಾಗಿದೆ. ಕುಕನೂರಿನ ಬೈಪಾಸಿಗೆ 73ಎಕರೆ, ಯಲಬುರ್ಗಾದಲ್ಲಿ 53ಎಕರೆ ಭೂಮಿ ಸ್ವಾಧಿನ ಪಡಿಸಿಕೊಳ್ಳಲಾಗುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ಚಲಿಸುವ ಭಾರಿ ಗಾತ್ರದ ವಾಹನಗಳು ಕುಕನೂರು, ಯಲಬುರ್ಗಾದ ಮೂಲಕ ಹೊರ ವಲಯದಲ್ಲಿಯೇ ಚಲಿಸಲಿವೆ ಎಂದರು.

ಸಾರ್ವಜನಿಕರ ಅಸಮಾಧಾನ,,
ಶಿಸ್ತಿಗೆ ಹೆಸರಾದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿಯವರು, ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಗೆ 10.30ಕ್ಕೆ ಆಗಮಿಸಬೇಕಿತ್ತು, ಆದರೆ 1ಗಂಟೆಗೆ ನೆರವೇರಿದ್ದರಿಂದ ಅಭಿಮಾನಿಗಳ, ಸಾರ್ವಜನಿಕರ, ಪತ್ರಿಕಾ ಮಾಧ್ಯಮದವರ ಬೇಸರಕ್ಕೆ ಕಾರಣವಾಯಿತು.

ಸುಮ್ನೆ ಏನೋ ಒಂದ್ಸಾರಿ ಲಾಟ್ರಿಯಲ್ಲಿ ಶಾಸಕರಾದವರ ಬಾಯಿಗೆ ಏನು ಬರುತ್ತೋ ಅದರಂತೆ ಮಾತಾಡ್ತಾರೆ, ಆದರೆ ರಾಜಕಾರಣದ ತಳ ಬುಡ ಗೊತ್ತಿರಲ್ಲಾ,,,ಆದರೆ ನಮ್ಮ ಹಿಟ್ನಾಳ ಸಹೋದರರು ಕ್ಷೇತ್ರಗಳ ಅಭಿವೃದ್ದಿ ಕೆಲಸದಲ್ಲಿ ನನ್ನ ಜೊತೆ ಚರ್ಚಿಸಿ ಸಲಹೆ ಪಡೆಯುತ್ತಾರೆ ನಿಜವಾಗಲು ಇದು ಸ್ವಾಗತಾರ್ಹ.ರಾಯರಡ್ಡಿ.

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ್, ಮುಖಂಡರಾದ ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೇಮನಿ, ವೆಂಕಣ್ಣ ಯರಾಶಿ, ಹನುಮಂತಗೌಡ ಚಂಡೂರ, ತಿಮ್ಮಣ್ಣ ಚೌಡ್ಕಿ, ಸಿರಾಜ್ ಕರಮುಡಿ, ಎಮ್.ವಿ.ದೇಸಾಯಿ, ಬೆಳದಡಿ ಸರ್, ರಾಮಣ್ಣ ಬಂಕದಮನಿ, ನೂರುದ್ದಿನ್ ಸಾಬ ಗುಡಿಹಿಂದಲ್, ಡಾ.ಶಿವನಗೌಡ ದಾನರಡ್ಡಿ, ಸಂಗಮೇಶ ಗುತ್ತಿ, ಮಂಜುನಾಥ ಯಡಿಯಾಪೂರ, ಶರಣಪ್ಪ ವೀರಾಪೂರ ಕಾರ್ಯಕ್ರಮ ನಿರ್ವಹಿಸಿದರು.

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.