Breaking News

ಓದುವ ಮಕ್ಕಳಿಗೆ ದೈಹಿಕ ಶಿಕ್ಷಣ ಬಹಳ ಮುಖ್ಯ : ಪ್ರಾಂಶುಪಾಲ ಜರ್ಲಿನ್ ಕುಮಾರ ಅಭಿಮತ

Physical education is very important for school children: Principal Jarlin Kumar Abhimata

ಜಾಹೀರಾತು

ಚಾ|ನಗರ/ಸಂತೆಮರಳ್ಳಿ, :ಫೆ.೧೮:
ಓದುವ ಮಕ್ಕಳಿಗೆ ದೈಹಿಕ ಶಿಕ್ಷಣ ಬಹಳ ಮುಖ್ಯ : ಮೈಸೂರಿನ ಪರಿವರ್ತನಾ ಶಾಲೆಯ ಪ್ರಾಂಶುಪಾಲ ಜರ್ಲಿನ್ ಕುಮಾರ ಅಭಿಮತ
ಇಲ್ಲಿನ ಇನ್ಫಿನಿಟಿ ಶಾಲೆಯಲ್ಲಿ ನಡೆದ ಅನಂತೋತ್ಸವ ಪೋಷಕರ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಅವರು, ಶಾಲೆಗಳು ಮಗುವಿನ‌ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವುದು ಬಹಳ ಮುಖ್ಯ. ಬರೀ ಓದು ಬರಹಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ಕ್ರೀಡೆಗಳಿಗೂ ನೀಡಬೇಕು. ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು.

ಆವಾಗ ಮಾತ್ರ ಮಕ್ಕಳು ಸಮಗ್ರ ಅಭಿವೃದ್ಧಿ ಹೊಂದುತ್ತವೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಅವರಷ್ಟಕ್ಕೆ ಆಡಿ ಬೆಳೆಯಲು ಬಿಡದೆ, ಓದು ಓದು ಎಂದು ಒತ್ತಡವನ್ನು ಹೇರುವ ಮೂಲಕ ಅವರ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆ ತನಕ ಶಾಲೆಯಲ್ಲಿ ಓದಿ ಬಳಲಿದ ಮಗುವನ್ನು, ಸಂಜೆ ಮನೆಗೆ ಬಂದ ಕೂಡಲೇ ಮನೆಪಾಠಕ್ಕೆ ಕಳಿಸಲಾಗುತ್ತದೆ. ನಂತರ ಮನೆಗೆ ವಾಪಸು ಬಂದು ತಕ್ಷಣ ಹೋಂವರ್ಕ್ ಮಾಡು ಎಂದು ಒತ್ತಾಯ ಮಾಡಲಾಗುತ್ತದೆ. ಇದರಿಂದ ಮಕ್ಕಳಿಗೆ ಯಾವುದಕ್ಕೂ ಸರಿಯಾಗಿ ಸಮಯ ಸಿಗದೆ ಒತ್ತಡಕ್ಕೆ ಒಳಗಾಗಿ, ದೈಹಿಕವಾಗಿ, ಮಾನಸಿಕವಾಗಿ ಬಳಲುತ್ತಾರೆ. ಆಟವಾಡಲು ಅವಕಾಶವಾಗದೆ ದೈಹಿಕ ಚಟುವಟಿಕೆಗಳಿಂದ ವಂಚಿತರಾಗಿ, ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ ಅವರು, ಮಕ್ಕಳ ಬೆಳವಣಿಗೆ ಸರಿಯಾಗಿ ಆಗಬೇಕಾದರೆ, ದೈಹಿಕವಾಗಿ ಸದೃಢವಾಗಿರಬೇಕಾದರೆ, ಆಟೋಟಗಳು ಬಹಳ ಮುಖ್ಯ. ಮಕ್ಕಳ ಪೋಷಕರು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳು ಅವರಿಗಿಷ್ಟ ಬಂದಂತೆ ಆಟವಾಡಲು ಅವಕಾಶ ನೀಡಬೇಕು. ಮಕ್ಕಳಿಗೆ ಮೊಬೈಲ್ ಫೋನ್ ಗೀಳು ಹತ್ತದಂತೆ ಜಾಗ್ರತೆ ವಹಿಸಬೇಕು. ಓದು ಬರಹಕ್ಕೆ ಅನುಕೂಲವಾಗುವಂತೆ ಸ್ವಲ್ಪ ಸಮಯ ಮಾತ್ರ ಮೊಬೈಲ್‌ ನೀಡಿ, ಹೆಚ್ಚಿನ ಸಮಯವನ್ನು ದೈಹಿಕವಾಗಿ ಆಟವಾಡುವಂತೆ ನೋಡಿಕೊಳ್ಳಬೇಕು. ಕ್ರೀಡೆಗಳನ್ನು ಲಘುವಾಗಿ ಪರಿಗಣಿಸದೆ, ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಅದರಲ್ಲೇ ಸಾಧನೆ ಮಾಡಲು ಪ್ರೇರಣೆ ನೀಡಬೇಕು. ಭವಿಷ್ಯದಲ್ಲಿ ಉದ್ಯೋಗಕ್ಕೆ ಸೇರಲು ಕ್ರೀಡಾ ಸಾಧನೆಗಳು ಅವರಿಗೆ ಬಹಳ ಅನುಕೂಲವಾಗುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಸಮಾಜದಲ್ಲಿ ಬಹಳ ಗೌರವವಿರುತ್ತದೆ. ಸಾಕಷ್ಟು ಜನರು ಗುರುತಿಸುತ್ತಾರೆ, ಸನ್ಮಾನಿಸುತ್ತಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿ, ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಸಮೀಪದ ಕುರುಬೂರಿನ ಗ್ರಾಮೀಣ ಪ್ರತಿಭೆ ಕು.ಚೈತ್ರ ನಮಗೆಲ್ಲಾ ಉದಾಹರಣೆ. ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕ. ಅಂತಹ ಮಕ್ಕಳು ಎಲ್ಲಾ ಶಾಲೆಗಳಲ್ಲೂ ಹೆಚ್ಚಾಗಲಿ ಎಂದರು.
ಕಾರ್ಯಕ್ರಮ ನಿಮಿತ್ತ ಪೋಷಕರಿಗೆ ಕ್ರೀಡಾ ಕೂಟ ಆಯೋಜಿಸಲಾಗಿತ್ತು. ಪೋಷಕರು ಮಕ್ಕಳೊಂದಿಗೆ ಬಹಳ ಉತ್ಸಾಹದಿಂದ ಪಾಲ್ಗೊಂಡು, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ, ಮಕ್ಕಳನ್ನು ರಂಜಿಸಿದರು.
ಶಾಲೆಯ ಸಂಸ್ಥಾಪಕ ಡಿ ಮಂಜುನಾಥ, ಶಿಕ್ಷಣ ಸಂಯೋಜಕಿ ವಿನೂತ ಕೇಸರಿ, ಮುಖ್ಯ ಶಿಕ್ಷಕ ನಾಗೇಂದ್ರ ಪ್ರಸಾದ್, ಶಿಕ್ಷಕರು, ಪೋಷಕರು, ಮಕ್ಕಳು ನೆರೆದಿದ್ದರು.

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.