Breaking News

ಗಂಗಾವತಿ ರಾಷ್ಟ್ರೀಯ ಬಸವದಳದವರ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾಪಠಣಾ ಅ 3, ರಿಂದಶರಣರಮನೆಯಲ್ಲಿ ಕಾರ್ಯಕ್ರಮ ಪ್ರಾರಂಭ

Under the leadership of Gangavati Rashtriya Basavadal, program started at Kalyan Kranti Samsmarane Kathapathana A 3, Rinsharanaramane.

ಜಾಹೀರಾತು

ಗಂಗಾವತಿ:ನಗರದ ರಾಷ್ಟ್ರೀಯ ಬಸವದಳದವರ ನೇತೃತ್ವದಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾಪಠಣ ಅಕ್ಟೋಬರ್ 3, ಗುರುವಾರದಿಂದ ಜರುಗಲಿದೆ. ಕ್ರಿ.ಶ.12ನೇ – ಶತಮಾನದಲ್ಲಿ ಕಲ್ಯಾಣಕ್ರಾಂತಿ ಅಪೂರ್ವ – ದಿಟ್ಟ ಹೆಜ್ಜೆಯ ಹೋರಾಟದ ಫಲಶೃತಿ ಭಾರತ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಇಬ್ಬರು ವರ್ಣೀಯರ ನಡುವೆ ನಂಟಸ್ಥಿಕೆ, ಬಸವಣ್ಣನವರ ನೇತೃತ್ವದಲ್ಲಿ ಜರುಗಿತ್ತು. ಆಘಟನೆಗೆ ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು. ಹರಳಯ್ಯ, ಮಧುವರಸ, ಶೀಲವಂತರನ್ನು ಎಹೋಟಿ ಶಿಕ್ಷೆಗೆ ಗುರಿಪಡಿಸಲಾಯಿತು.

ಈ ಎಲ್ಲಾ ಬಲಿದಾನವಾದುದು ಸ್ವಾರ್ಥಕ್ಕಾಗಿ ಅಲ್ಲ ಮತ್ತು ಹೆಣ್ಣು ಹೊನ್ನು ಮಣ್ಣಿನ ಆಸಿಗೆಅಲ್ಲ ಇವೆಲ್ಲವೂ ಸಮಾನತೆಯನ್ನು ಸಾಧಿಸಲಿಕ್ಕೆ ಎಂಬ ಅಂಶವನ್ನು ಬಿಂಬಿಸುವ ಉದ್ದೇಶವೇ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಥಾ ಪಠಣದ ಉದ್ದೇಶ. ಅಕ್ಟೋಬರ್‌ 03 ರಿಂದ 11 ಅಕ್ಟೋಬ‌ರ್ ವರೆಗೆ ಸಂಜೆ 6 ರಿಂದ 7.30 ರವರೆಗೆ ಶರಣರ ಮನೆಯಲ್ಲಿ ಕಲ್ಯಾಣ ಕ್ರಾಂತಿ ಕಥಾಪಠಣ ಜರುಗಲಿದೆ. 12ನೇ ಅಕ್ಟೋಬರ್ ದಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಮಂಟಪದಲ್ಲಿ ಕಲ್ಯಾಣ ಕ್ರಾಂತಿಯ ಕಥಾ ಪಠಣ ಮಂಗಲ ಸಮಾರೋಪ ಹಾಗೂ ಬಸವ ಧರ್ಮ ವಿಜಯೋತ್ಸವ ಜರುಗಲಿದೆ.ಎಂದು ಅಧ್ಯಕ್ಷ ದೀಲಿಪ್ ವಂದಾಲ ತಿಳಿಸಿದ್ದಾರೆ.

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *