Breaking News

ಗಂಗಾವತಿಯವಿರುಪಾಪುರ ನಗರದಲ್ಲಿಶ್ರೀ ಶಿವಯೋಗಿಸಿದ್ದರಾಮೇಶ್ವರ ೮೫೨ನೇ ಜಯಂತಿ ಆಚರಣೆ.

In Virupapura city of Gangavati Sri Shivayogi Siddarameshwar 852nd Jayanti Celebration

ಗಂಗಾವತಿ: ಇಂದು ಗಂಗಾವತಿ ನಗರದ ವಿರುಪಾಪುರ ನಗರದಲ್ಲಿನ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೧:೦೦ ಗಂಟೆಗೆ ನಾಡಿನ ಸಮಸ್ತ ಜನತೆಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ೮೫೨ನೇ ಜಯಂತಿಯ ಹಾಗೂ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳನ್ನು ಕೋರಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಮಾಜದ ಹಿರಿಯರು, ಮುಖಂಡರು, ಯುವಕರು, ದಲಿತಪರ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಭೋವಿ, ಗಂಗಾವತಿ ತಾಲೂಕು ಅಧ್ಯಕ್ಷರಾದ ಗುನ್ನಾಳ ನಾಗೇಶ್, ಸಮಾಜದ ಜೆ.ಕೆ ಶ್ರೀಧರ್, ಸಮಾಜದ ಪ್ರಧಾನ ಕಾರ್ಯದರ್ಶಿ ರಾಘು ದತ್ತ, ಸಮಾಜ ತಾಲೂಕು ಹುಲ್ಲೇಶ್ ಬಂಡಿ ವಿರುಪಾಪುರ ನಗರ, ಸಮಾಜದ ಮುಖಂಡರು ಗುನ್ನಾಳ್ ತಿಮ್ಮಣ್ಣ, ಸಮಾಜದ ಯುವ ಮುಖಂಡರು ರಾಘವೇಂದ್ರ ಮಲ್ಲಾಪುರ್, ಯುವ ಮುಖಂಡರಾದ ರಾಘವೇಂದ್ರ ವಿರುಪಾಪುರನಗರ, ಹಿರಿಯ ಮುಖಂಡ ಸಮಾಜದ ಉರುಕುಂದಿ, ದೊಡ್ಡ ದುರ್ಗಪ್ಪ ಬೋವಿ, ರಾಮು ಭೋವಿ ಸಂಗಾಪುರ್, ಕುಮಾರ ಬಸಾಪಟ್ಟಣ, ಹಳ್ಳಪ್ಪ ಬಸಪಟ್ಟಣ, ಪರಶುರಾಮ್, ಗುರುಸ್ವಾಮಿ ಭೋವಿ, ಕಲ್ಲಪ್ಪ ಭೋವಿ, ಪರಶುರಾಮ್ ಒಡೆಯರ್ ವಕೀಲರು, ಆಐ ರಮೇಶ್, ಡಿ.ಎಸ್.ಎಸ್ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ ಬರಗೂರು, ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರಾದ ಯಲ್ಲಪ್ಪ, ವೆಂಕಿ, ನಾಗರಾಜ ಚಳಗೇರಿ, ಕೃಷ್ಣಪ್ಪ ಟೈಲರ್ ಹಾಗೂ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರೆಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.