MP Anantakumar Hegder should be exiled from Karnataka. Bhardwaj
ಗಂಗಾವತಿ: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಂಸದ ಅನಂತಕುಮಾರ ಹೆಗ್ಡೆಯವರನ್ನು ಕರ್ನಾಟಕದಿಂದ ಗಡಿಪಾರು ಮಾಡಲು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಒತ್ತಾಯಿಸಿದ್ದಾರೆ.
ಹಿಂದಿನ ದಿನಗಳಲ್ಲಿ ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿದ ಅನಂತಕುಮಾರ ಹೆಗ್ಡೆ ವಿವಾದಕ್ಕೀಡಾಗಿ, ಕಳೆದ ಮೂರು ವರ್ಷಗಳಿಂದ ಕಾಣೆಯಾಗಿ, ಈಗ ಲೋಕಸಭೆ ಚುನಾವಣೆ ಸನಿಹ ಬಂದಿರುವುದರಿAದ, ಬ್ರಾಹ್ಮಣರನ್ನು ಓಲೈಸುವುದಕ್ಕಾಗಿ ಹೊರಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನದಲ್ಲಿ ಮಾತನಾಡುತ್ತಿರುವುದು ಖಂಡನೀಯವಾಗಿದೆ.
ಮಾನ್ಯ ಸಿದ್ದರಾಮಯ್ಯನವರು ಜನಪರ ಕೆಲಸ ಮಾಡುತ್ತಾ, ಸಂವಿಧಾನದ ಪರವಾಗಿ ಇದ್ದಾರೆ. ಸಿದ್ದರಾಮಯ್ಯನವರಿಗೆ ತೊಂದರೆ ಕೊಟ್ಟರೆ ನಾಲ್ಕು ಕೋಟಿ ಶೂದ್ರ ದಲಿತರು ಒಂದಾಗಿ ಹೋರಾಟ ಮಾಡಲಿದ್ದಾರೆ. ಸಿದ್ದರಾಮಯ್ಯನವರು ಅಹಿಂದ ಮುಖಂಡರಾಗಿದ್ದು, ಜನರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರ ತಂಟೆಗೆ ಯಾವುದೇ ಪಕ್ಷದ ಮುಖಂಡರು ಬಂದರೆ ದುಡಿಯುವ ವರ್ಗಗಳು ಅವರನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಡಿ.ಹೆಚ್. ಪೂಜಾರ, ಡಿ. ವಿಜಯ್, ಕೃಷ್ಣ ಬುಡ್ಗಜಂಗಮ, ವಿದ್ಯಾರ್ಥಿ ಘಟಕ ಮುಖಂಡ ಇಂಕಿಲಾಬ್ ಫಯಾಜ್ ಸೇರಿದಂತೆ ಇನ್ನಿತರರು ಇದ್ದರು.
ಅನಂತಕುಮಾರ ಹೆಗ್ಡೆಯವರ ಹೇಳಿಕೆ ಖಂಡಿಸಿ ಪ್ರತಿಭಟಿಸಿದ ಚಿತ್ರಗಳು: