Breaking News

ಬಾನು ಮುಷ್ತಾಕ್ ಇವರಿಂದ ದಸರಾ ಉತ್ಸವ ಉದ್ಘಾಟನೆ ಸ್ವಾಗತಾರ್ಹ: ಭಾರಧ್ವಾಜ್

Banu Mushtaq's inauguration of Dussehra festival is welcome: Bharadwaj
Screenshot 2025 08 25 20 22 02 13 E307a3f9df9f380ebaf106e1dc980bb63734347413924388317 757x1024

ಗಂಗಾವತಿ: ತಮ್ಮ ಪ್ರಗತಿಪರ ಬರಹದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಬೂಕರ್ ಪ್ರಶಸ್ತಿ ಪುರಸ್ಕೃತೆ ಭಾನು ಮುಷ್ತಾಕ್ ಅವರಿಂದ ದಸರಾ ಉತ್ಸವ ಉದ್ಘಾಟಿಸಲು ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಆದರೆ ಹಿಂದುತ್ವವಾದಿ ಮುನಿರತ್ನ ಸೇರಿದಂತೆ ಕೆಲವು ರಾಜಕೀಯ ಧುರೀಣರು ಭಾನು ಮುಷ್ತಾಕ್ ಅವರ ಬಗ್ಗೆ ಧರ್ಮಾಧಾರಿತ ಅವಹೇಳನಕಾರಿಯಾಗಿ ಮಾತನಾಡುತ್ತಾ, ಅವರು ಪ್ರಗತಿಪರರು, ಜಾತ್ಯಾತೀತವಾದಿಗಳು ಆಗಿದ್ದಲ್ಲಿ ಹಣೆಗೆ ಕುಂಕುಮ ಇಟ್ಟು, ಹೂವು ಮುಡಿದುಕೊಂಡು ದಸರಾ ಉತ್ಸವ ಉದ್ಘಾಟಿಸಲಿ ಎಂದು ಅವರ ಘನತೆಗೆ ಚ್ಯುತಿವುಂಟು ಮಾಡುವ ರೀತಿಯಲ್ಲಿ ಮಾತನಾಡುತ್ತಿರುವುದು ಬೇಸರ ತಂದಿದೆ.
ಸರ್ಕಾರ ಯಾವುದೇ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಭಾನು ಮುಷ್ತಾಕ್ ಅವರಿಂದಲೇ ದಸರಾ ಉತ್ಸವ ಉದ್ಘಾಟಿಸಲಿ ಎಂದು ಕ್ರಾಂತಿಚಕ್ರ ಬಳಗ ಸರ್ಕಾರಕ್ಕೆ ಆಗ್ರಹಿಸುತ್ತದೆ.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.