ಗಂಗಾವತಿ.09:ಇತ್ತೀಚಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೊದಲನೇ ಹಂತದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು,
ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸಂಗಮೇಶ ಬಾದವಡಿಗಿ ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಮಯದಲ್ಲಿ ಆಯ್ಕೆಯ ಗಂಗಾವತಿ
ತಾಲೂಕು ಅಧ್ಯಕ್ಷರನ್ನಾಗಿ ವೆಂಕಟೇಶ ಈಡಿಗೇರ್ ಆದೇಶ ಹೊರಡಿಸಿದ್ದಾರೆ.
ಸಂಸ್ಥಾಪಕ ರಾಜ್ಯಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿಯವರ ಸೂಚನೆಯ ಮೇರೆಗೆ ವೆಂಕಟೇಶ್ ಈಡಿಗೇರ್ ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ವೆಂಕಟೇಶ ಈಡಿಗೇರ್ ಜಬ್ಬಲಗುಡ್ಡ ಮಾತನಾಡಿ ನನಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಕರ್ತವ್ಯ ನಿರ್ವಹಿಸುವೆ ಎಂದರು
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರುರೂ,ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಡಿಗಿ, ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಡಿ.ಕೆ.ಆಗೋಲಿ,ವಿರೇಶ ಬಲಗುಂದಿ,ಯಮನೂರ ಚೌಡ್ಕಿ,ನಾಗರಾಜ ಚಳಗೇರಿ,ಹೊಸಮಲಿ ರಮೇಶ ನಾಯಕ,ಚಂದ್ರು,ಚನ್ನವೀರಗೌಡ,ಉಡಮಲಕ್,ವಿರೇಶ ಸುಳೇಕಲ್,ಲಿಂಗನಗೌಡ,ಆನಂದಗೌಡ,ಶಂಕರ್ ಬಾಳೇಕಾಯಿ,ಚಿನ್ನಪ್ಪ ವಡ್ಡರಹಟ್ಡಿ,ರಾಘವೇಂದ್ರ ವೆಂಕಟಗಿರಿ,ಸೇರಿದಂತೆ ಇತರರು ಇದ್ದರು