Protest with students from Yuva Uttejan Sena Pade Gangavati Taluk unit opposite Tehsildar office.
ಗಂಗಾವತಿ:ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 23/11/2023 ರಿಂದ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರವನ್ನು ಕೈಗೊಂಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಪಠ್ಯೇತರ ಚಟುವಟಿಕೆಗಳು ನಡೆಯದ ಕಾರಣ ರಾಜ್ಯದ ಸುಮಾರು 2,35000ಹೆಚ್ಚು ಬಡ ಮತ್ತು ಪ್ರತಿಭಾವಂತ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಾಗೂ |ಆರ್ಥಿಕವಾಗಿ ಸಮಸ್ಯೆ ಉದ್ದವವಾಗಿದೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇಕಡ 70%ರಷ್ಟು ಅತಿಥಿ ಉಪನ್ಯಾಸಕರಿಂದ ಕಾಲೇಜುಗಳಲ್ಲಿ ಪಠ್ಯ ಮತ್ತು ಪತ್ಯೇತರ ಕಾಯ್ರಗಳು ನಡೆಯುತ್ತವೆ, ಕಾರಣಮಾನ್ಯ ಮುಖ್ಯಮಂತ್ರಿಗಳು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅತಿಥಿ ಉಪನ್ಮಾಸಕರು ಸಕಾ೯ರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆಯು ತಮ್ಮಲ್ಲಿ ಆಗ್ರಹಿಸುತ್ತದೆ. ಜೊತೆಗೆ ಲಕ್ಷಾಂತರ ವಿದ್ಯಾಥಿ೯ಗಳ ಭವಿಷ್ಯಕ್ಕೆ ತೊಂದರೆಯಾದಲ್ಲಿ ಸರ್ಕಾರವೇ ನೇರಹೊಣೆ ಆಗಿರುತ್ತದೆ. ಎಂದು
ಯುವ ಉತ್ತೇಜನ ಸೇನಾ ಪಡೆ ತಾಲೂಕು ಘಟಕದಿಂದ ತಹಸಿಲ್ದಾರ್ ಕಚೇರಿ ಎದುರುಗಡೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕೆಂದು ಮತ್ತು. ಕಾಲೇಜುಗಳಲ್ಲಿ ತರಗತಿಗಳನ್ನು ಪ್ರಾರಂಭಿಸಬೇಕೆಂದು. ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಯಿತು. ಕಾರ್ಯಕರ್ತರ ಪ್ರಾಣೇಶ್ ಬಿ ಗೌರವಾಧ್ಯಕ್ಷರು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವ ಚೇತನ್ ಅಚ್ಚಪ್ಪ.ಜಿಲ್ಲಾಧ್ಯಕ್ಷರಾದ ಸರ್ವಜ್ಞ ಮೂರ್ತಿ ತಾಲೂಕು ಘಟಕ ಅಧ್ಯಕ್ಷರಾದ ಆಂಜನೇಯ ಅಯ್ಯನಗೌಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೌಸ್ತುಬ್ ದಂಡಿನ್ ಪ್ರಜ್ವಲ್ ದೇವಲಾಪುರ ಮಠ ಭೂಮಿಕಾ. ಶಿವನಗೌಡ ಜಂತಕಲ್ .ಕಲ್ಲೇಶ್ ವಿಕಾಸ್ ವಾಸುದೇವ ಯಶವಂತ್ ಪುನೀತ್ ಇನ್ನಿತರದಿದ್ದರು.
.
.