Breaking News
ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ಧಾರಿ ರಾಷ್ಟ್ರೀಯಅಭಿಯಾನದ ಸಮಾರೋಪಸಮಾರಂಭ

Concluding ceremony of National Campaign for Women Safety Collective Responsibility

ಗಂಗಾವತಿ, 03: ನಗರದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಹಮ್ಮಿಕೊಂಡಿದ್ದ “ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ಧಾರಿ” ರಾಷ್ಟ್ರೀಯ ಅಭಿಯಾನದ ಸಮಾರೋಪಸಮಾರಂಭದಲ್ಲಿಅನುಮೋದನೆಗೊಂಡ ನಿರ್ಣಯಗಳು.ಮಹಿಳಾ ಕೈದಿಗಳಿಗೆ ವಿಳಂಬವಾದ ವಿಚಾರಣೆಗಳು ಮತ್ತು ಜಾಮೀನಿನ ನಿರಾಕರಣೆ:
ಭಾರತದ ಕಾನೂನು ವ್ಯವಸ್ಥೆಯು ಮಹಿಳೆಯರ ಹೋರಾಟಗಳನ್ನು ವಿಫಲಗೊಳಿಸುವುದನ್ನು ಮುಂದುವರೆಸಿದೆ.ವಿಶೇಷವಾಗಿ ಯುಎಪಿಎ
ಕಾನೂನುಗಳ ಅಡಿಯಲ್ಲಿ ಬಂಧಿತವಾಗಿರುವ ಪ್ರಕರಣಗಳು. ನ್ಯಾಯಾಂಗ ವಿಳಂಬದ ಸಮಯದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಜಾಮೀನು ಸುಧಾರಣೆಗಳನ್ನು ಜಾರಿಗೊಳಿಸಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ.
UAPA ಯಂತಹ ಕಾನೂನುಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಮಹಿಳಾ ಕೈದಿಗಳಿಗೆ ತ್ವರಿತ ವಿಚಾರಣೆಗಳನ್ನು ಖಚಿತಪಡಿಸಿಕೊಳ್ಳಲು ಖಾತ್ರಿಪಡಿಸುವುದು.
ಲಿಂಚಿಂಗ್ ಬಲಿಪಶುಗಳ ಮಹಿಳೆಯರು ಮತ್ತು ಮಕ್ಕಳು:
ಹತ್ಯೆಗೀಡಾದವರ ಕುಟುಂಬಗಳು ದೀರ್ಘಾವಧಿಯ ಸಾಮಾಜಿಕ, ಭಾವನಾತ್ಮಕ ಮತ್ತು ಆರ್ಥಿಕ ಆಘಾತವನ್ನು ಎದುರಿಸುತ್ತವೆ. ಮಹಿಳೆಯರು ಮತ್ತು ಮಕ್ಕಳು ಜವಾಬ್ದಾರಿಯ ಭಾರವನ್ನು ಹೊರುತ್ತಾರೆ. ನ್ಯಾಯ ವ್ಯವಸ್ಥೆಯ ನಿಧಾನಗತಿಯ ಪ್ರತಿಕ್ರಿಯೆಯನ್ನು ವ್ಯವಸ್ಥಾಪಿತವಾಗಿ ಸಂಯೋಜಿಸಲಾಗಿದೆ.
ಸಾಮಾಜಿಕ ಕಳಂಕ, ಈ ಕುಟುಂಬಗಳನ್ನು ಮತ್ತಷ್ಟು ಕಡೆಗಣಿಸುತ್ತದೆ.
ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತದೆ.ವಿಧವಾ ಮಹಿಳೆಯರು ಮತ್ತು ಅನಾಥ ಮಕ್ಕಳಿಗೆ ಸಾಮಾಜಿಕ ಪುನರ್ವಸತಿ ಕಾರ್ಯಕ್ರಮಗಳು,ತ್ವರಿತ ನ್ಯಾಯಾಲಯಗಳ ಸ್ಥಾಪನೆ ಮತ್ತು ಹತ್ಯೆ ಪ್ರಕರಣಗಳಲ್ಲಿ ವಿಳಂಬವಾಗದಂತೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕಾನೂನು ರಕ್ಷಣೆಗಳನ್ನು ನಾವು ಒತ್ತಾಯಿಸುತ್ತೇವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪೋಲೀಸರ ಸಂವೇದನಾಶೀಲತೆಯ ಕೊರತೆ ಮತ್ತು ಪಕ್ಷಪಾತ:ಕಾನೂನುಗಳು ಮತ್ತು ಕಾನೂನು ಸುಧಾರಣೆಗಳ ಹೊರತಾಗಿಯೂ, ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರಿಗೆ ನ್ಯಾಯಕ್ಕೆ ಪೋಲಿಸ್ ನಿಷ್ಕ್ರಿಯತೆ ಮತ್ತು ಪಕ್ಷಪಾತವು ಪ್ರಮುಖ ಅಡೆತಡೆಗಳಾಗಿ ಉಳಿದಿದೆ. ಹಲವಾರು ಪ್ರಮುಖ ಪ್ರಕರಣಗಳಲ್ಲಿ, ಎಫ್‌ಐಆರ್‌ಗಳನ್ನು ದಾಖಲಿಸುವಲ್ಲಿನ ವಿಳಂಬಗಳು, ಕಳಪೆ ತನಿಖೆಗಳು ಮತ್ತು ಪೊಲೀಸ್ ನಿರಾಸಕ್ತಿಯು ನ್ಯಾಯಕ್ಕಾಗಿ ಮಹಿಳೆಯರ ಹಕ್ಕುಗಳನ್ನು ದುರ್ಬಲಗೊಳಿಸಿದೆ.
ಬೇಡಿಕೆ: ಭಾರತದಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ಲಿಂಗ-ಸೂಕ್ಷ್ಮ ತರಬೇತಿ, ಅತ್ಯಾಚಾರ ಮತ್ತು ಹಿಂಸಾಚಾರ ಪ್ರಕರಣಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ತ್ವರಿತವಾಗಿ ಹಾಗೂ ನ್ಯಾಯಯುತವಾಗಿ ಕಾರ್ಯನಿರ್ವಹಿಸಲು ವಿಫಲರಾದ ಅಧಿಕಾರಿಗಳಿಗೆ ಉತ್ತರದಾಯಿತ್ವದ ಕ್ರಮಗಳಿಗೆ ನಾವು ಕರೆ ನೀಡುತ್ತೇವೆ. ಕಾನೂನು ಜಾರಿಗಾಗಿ ಸರ್ಕಾರವು ಕಟ್ಟುನಿಟ್ಟಾದ ಲಿಂಗ-ಸೂಕ್ಷ್ಮತೆಯ ತರಬೇತಿಯನ್ನು ಜಾರಿಗೊಳಿಸಬೇಕು ಮತ್ತು ಹೆಚ್ಚಿನ ಮಹಿಳಾ ಅಧಿಕಾರಿಗಳ ನೇಮಕಾತಿಯನ್ನು ಖಚಿತಪಡಿಸಿಕೊಳ್ಳಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.
ಮಹಿಳೆಯರಿಗಾಗಿ ಏಕ-ಪಾಯಿಂಟ್ ಕೇಂದ್ರಗಳಿಗೆ ಬೇಡಿಕೆ:ಭಾರತದಾದ್ಯಂತ
ಮಹಿಳೆಯರ ಮೇಲಿನ ದೌರ್ಜನ್ಯದ ಹೆಚ್ಚುತ್ತಿರುವ ಕಳವಳಗಳನ್ನು ಪರಿಹರಿಸಲು, ನಾವು ಭಾರತದಾದ್ಯಂತ ಏಕ-ಪಾಯಿಂಟ್ ಕೇಂದ್ರಗಳ ರಚನೆಗೆ ಬಲವಾಗಿ ಪ್ರತಿಪಾದಿಸುತ್ತೇವೆ. ಈ ಕೇಂದ್ರಗಳನ್ನು ಮಹಿಳೆಯರು ಸಂಪರ್ಕಿಸಬಹುದಾದ ಸಮಗ್ರ ಬೆಂಬಲ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಬೇಕು:
*ಹಿಂಸೆಯ ದೂರುಗಳನ್ನು ಸಲ್ಲಿಸುವುದು
*ತಕ್ಷಣಮತ್ತು ಮಾನಸಿಕ ವೈದ್ಯಕೀಯ ಸಹಾಯವನ್ನು ಪಡೆಯುವುದು
*ಕಾನೂನು ನೆರವು ಮತ್ತು ಗುಪ್ತ ಸಮಾಲೋಚನೆಯನ್ನು ನಡೆಸುವುದು
*ಕುಂದುಕೊರತೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳುವುದು
ಬಿಕ್ಕಟ್ಟಿನಲ್ಲಿರುವ ಮಹಿಳೆಯರಿಗೆ ಸಮಗ್ರ ಮತ್ತು ಸಮಯೋಚಿತ ಬೆಂಬಲವನ್ನು ಒದಗಿಸಲು ಈ ಕೇಂದ್ರಗಳು ಮಹಿಳಾ ಪೊಲೀಸ್ ಅಧಿಕಾರಿಗಳು, ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಕಾನೂನು ಸಲಹೆಗಾರರನ್ನು ಒಳಗೊಂಡಂತೆ ಲಿಂಗ-ಸೂಕ್ಷ್ಮ ಸಿಬ್ಬಂದಿಗಳನ್ನು ಕಡ್ಡಾಯ ವಾಗಿ ಹೊಂದಿರಬೇಕು. ಒನ್ ಸ್ಟಾಪ್ ಸೆಂಟರ್‌ಗಳಂತಹ ಅಸ್ತಿತ್ವದಲ್ಲಿರುವ ಮಾದರಿಗಳನ್ನು ವಿಸ್ತರಿಸಬೇಕು ಮತ್ತು ಹೆಚ್ಚು ಮಹಿಳಾಸ್ನೇಹಿಯಾಗಿರುವಂತೆ ಮಾಡಬೇಕು, ಪ್ರತಿಯೊಬ್ಬ ಮಹಿಳೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ನ್ಯಾಯ ಮತ್ತು ಚಿಕಿತ್ಸೆ ಪಡೆಯಲು ಸುರಕ್ಷಿತ ಮತ್ತು ಬೆಂಬಲ ವಾತಾವರಣವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಬೇಕು.
ಶಾಲಾ ಪಠ್ಯಕ್ರಮಗಳಲ್ಲಿ ಮಹಿಳೆಯರಿಗೆ ಗೌರವವನ್ನು ಸೇರಿಸುವುದು:
ಚಿಕ್ಕಂದಿನಿಂದಲೇ ಯುವ ಮನಸ್ಸಿನಲ್ಲಿ ಹೆಣ್ಣಿನ ಬಗ್ಗೆ ಗೌರವ ಮೂಡಬೇಕು. ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ಲಿಂಗ ಸಂವೇದನೆ, ಸಮಾನತೆ ಮತ್ತು ಮಹಿಳೆಯರಿಗೆ ಗೌರವದ ಮೇಲೆ ಮಾಡ್ಯೂಲ್‌ಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳು ತಮ್ಮ ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಅಥವಾ ಸಮಾಜದಲ್ಲಿ ಎಲ್ಲ ಮಹಿಳೆಯರನ್ನು ಗೌರವಿಸಲು ಕಲಿಸುತ್ತಾರೆ ಎಂದು ಇದು ಖಚಿತಪಡಿಸುತ್ತದೆ.
ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಹಿಂಸೆಯ ಕುರಿತು ಚರ್ಚೆ ಮತ್ತು ವ್ಯಾಪಕ ಜನಜಾಗೃತಿ
ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ಕುರಿತು ಚರ್ಚೆಗಳು ಘಟನೆಗಳು ಸಂಭವಿಸಿದಾಗ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ಹಂತದಲ್ಲೂ ನಿರಂತರ ಪ್ರಕ್ರಿಯೆಯಾಗಬೇಕು. ಇಂತಹ ಸಂವಾದವು ಜಾಗೃತಿ, ಜಾಗರೂಕತೆ ಮತ್ತು ಲಿಂಗ-ಆಧಾರಿತ ಹಿಂಸಾಚಾರವನ್ನು ಪರಿಹರಿಸಲು ಪೂರ್ವಭಾವಿ ವಿಧಾನವನ್ನು ಉತ್ತೇಜಿಸುತ್ತದೆ.ಅಂತಹ ಸಮಸ್ಯೆಗಳಿಗೆ ಹೆಚ್ಚು ಎಚ್ಚರಿಕೆಯ ಮತ್ತು ಸ್ಪಂದಿಸುವ ಸಮಾಜವನ್ನು ರಚಿಸಲು ಸಹಾಯ ಮಾಡುತ್ತದೆ.
8.ಮಹಿಳಾ ಪೀಡನೆಗಳು ಹೆಚ್ಚಾಗಿ ಮಧ್ಯಪಾನದ ಸಮಯದಲ್ಲಿ ನಡೆಯುವುದರಿಂದ ಮಧ್ಯಪಾನ -ಮಾದಕ ದ್ರವ್ಯಗಳು -ಅಮಲು ಪದಾರ್ಥಗಳನ್ನು ನಿಷೇಧಿಸಬೇಕು. ಜೊತೆಗೆ ಅಶ್ಲೀಲ ಚಿತ್ರ -ವೆಬ್ಸೈಟ್‌ಗಳು ಸಂಪೂರ್ಣವಾಗಿ ನಿಷೇಧಿಸಬೇಕು.

ಬುಡಕಟ್ಟು ಶಾಲಾ ಮಕ್ಕಳಿಗೆ ಧಾನಿಗಳಾದ ದಂತ ವೈದ್ಯ ಅನಿಲ್ ಕುಮಾರ್ ಶೆಟ್ಟಿರವರ ಬಳಗದಿಂದ ಕಲಿಕಾ ಹಾಗು ಕ್ರೀಡಾ ಸಾಮಗ್ರಿಗಳ ವಿತರಣೆ.

Distribution of educational and sports materials to tribal school children by Dr. Anil Kumar Shetty’s team.


ವರದಿ: ಬಂಗಾರಪ್ಪ ಸಿ.
ಹನೂರು : ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಬ್ಯಾಸ ಮತ್ತು ಸೂಕ್ತ ಸಾಮಾಗ್ರಿಗಳನ್ನು ತಲುಪಿಸುವ ಪ್ರಯತ್ನ ಮಾಡಿದರೆ ಮುಂದಿನ‌ದಿನಗಳಲ್ಲಿ ಅವರ ವಿದ್ಯಾಭ್ಯಾಸವು ಉನ್ನತ ಮಟ್ಟದಲ್ಲಿರುತ್ತದೆ ಎಂದು ಸಮಾಜ ಸೇವಕರು ಹಾಗೂ ಖಾಸಗಿ ಬ್ಯಾಂಕ್ ಶಾಖೆಯ ಮುಖ್ಯಸ್ಥರಾದ ಲೊಕ್ಕನಳ್ಳಿ ಸತೀಶ್ ಕುಮಾರ್ ತಿಳಿಸಿದರು.
ಹನೂರು ತಾಲ್ಲೂಕಿನ ವ್ಯಾಪ್ತಿಯ ಪಿಜಿ ಪಾಳ್ಯ ಗ್ರಾಮ ಪಂಚಾಯತಿಗೆ ಸೇರಿದ ಅತ್ತಿಖಾನೆ ಮತ್ತು ನೆಲ್ಲಿಖಾತ್ರಿ .ಎಂಬ ಪೋಡಿಗಳಿಗೆ ಲೇಖನ ಸಾಮಾಗ್ರಿಗಳನ್ನು ನೀಡಿದ ನಂತರ ಮಾತನಾಡಿದ
ಚಾಮರಾಜನಗರ ಪಟ್ಟಣದ ಹೆಸರಾಂತ ದಂತ ವೈದ್ಯರಾದಂತಹ ಅನಿಲ್ ಕುಮಾರ್ ಶೆಟ್ಟಿ ರವರು ಪಟ್ಟಣಗಳಿಂದ ದೂರದಲ್ಲಿರುವ ಕಾಡಂಚಿನ ಪ್ರದೇಶದಲ್ಲಿ ಓದುವ ಮಕ್ಕಳಿಗೆ ನಮ್ಮಕೈಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರೆ ಸಾಕು, ನಾವುಗಳು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈಗಿನ ಕಾಲಘಟ್ಟಗಳೇ ಬೇರೆ ಸರ್ಕಾರಗಳು ಹಾಗೂ ಕೆಲ ಸಂಘ-ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಗಳನ್ನು ನೀಡುತ್ತಿವೆ . ಪಟ್ಟಣಗಳಲ್ಲಿ ವಾಸಿಸುವಂತಹ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಮುಂತಾದ ಕಲಿಕೆ ಸಾಮಗ್ರಿಗಳು ಹಾಗೂ ಆಟವಾಡಲು ಬೇಕಾಗಿರುವ ಕ್ರೀಡಾ ಸಾಮಗ್ರಿಗಳು ಬೇಕು ಎನ್ನುವ ಸಮಯಕ್ಕೆ ಸಿಗುತ್ತವೆ, ಆದರೆ ಓಡಾಡಲು ಒಂದು ಸಾರಿಗೆ ವ್ಯವಸ್ಥೆಯು ಇಲ್ಲದಂತಹ ಇಂತಹ ಹಾಡಿಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ಹೆಚ್ಚು ,ಇಂತಹ ಕಷ್ಟದ ಸಂದರ್ಭಗಳಲ್ಲೂ ತಮ್ಮ ಮಕ್ಕಳು ತಮ್ಮಂತಾಗದೆ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಒಳ್ಳೆ ಕೆಲಸಕ್ಕೆ ಹೋಗಲಿ ಎಂದು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವಂತಹ ಬುಡಕಟ್ಟು ಜನಾಂಗದವರಿಗೆ ನನ್ನ ಅನಂತಾನಂತ ಧನ್ಯವಾದಗಳು ಎಂದು ತಿಳಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬೇಕಾಗುವಂತಹ ಪೌಷ್ಟಿಕ ಆಹಾರಗಳನ್ನು ನೀಡುವಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಸಮಾಜ ಸೇವಕರಾದ ಗುರುಸ್ವಾಮಿ ಮಾತನಾಡಿ ನಮ್ಮ ಸ್ನೇಹ ಬಳಗವು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಬುಡಕಟ್ಟು ಶಾಲಾ ಮಕ್ಕಳಿಗೆ ಕಲಿಕೆಗೆ ಬೇಕಾಗಿರುವ ಪುಸ್ತಕಗಳು ಪೆನ್ನು ಪೆನ್ಸಿಲ್ ಮುಂತಾದವುಗಳನ್ನು ಒಳಗೊಂಡಂತಹ ಕಲಿಕಾ ಸಾಮಗ್ರಿಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದೆವೆ ಎಂದರು .
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರುಗಳಾದ ಹರೀಶ್ ,ವಿಜಯ್ ಕುಮಾರ್ ಸೇರಿದಂತೆ ಇನ್ನಿತರ ಶಿಕ್ಷಕರು ಹಾಜರಿದ್ದರು.

ಅದ್ದೂರಿಯಾಗಿ ಜರುಗಿದ ಗೂತ್ತೂರು ಮಾರುತೇಶ್ವರ ಜಾತ್ರಾ ಮಹೋತ್ಸವ,

Guttur Maruteshwar Jatra Mahotsav,

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುತ್ತೂರಿನ ಮಾರುತೇಶ್ವರನ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆಯ ಮಾರನೆ ದಿನ ಸೋಮವಾರದಂದು ನೆರೆದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಜಯ ಘೋಶದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಕಾರ್ತಿಕ ಮಾಸದಲ್ಲಿ ಬರುವ ಈ ಜಾತ್ರಾ ಮಹೋತ್ಸವಕ್ಕೆ ಹಾಗೂ ಕಾರ್ತಿಕೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು ಒಂದು ದಿನ ಮೊದಲೇ ಆಗಮಿಸಿ ಕಾರ್ತಿಕೋತ್ಸವದಲ್ಲಿ ದೀಪಗಳನ್ನು ಮುಡಿಯುವದು ನೋಡುವದೇ ಒಂದು ಸೊಗಸು. ಸಾವಿರಾರು ಭಕ್ತಾಧಿಗಳು ಪ್ರಣತಿಗಳಲ್ಲಿ ದೀಪ ಹಚ್ಚಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರದಂದು ಆಗಮಿಸಿದ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಕಮೀಟಿಯವರು ಆಯೋಜಿಸಿದ್ದರು.

ಈ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು ಪ್ರತಿ ಶನಿವಾರ, ಅಮವಾಸ್ಯೆ, ಹುಣ್ಣಿಮೆಗಳಂದು ದೇವಸ್ಥಾನದಲ್ಲಿ ನೂರಾರು ಭಕ್ತರು ಬೀಡು ಬಿಟ್ಟಿರುವುದು ಕಂಡು ಬರುತ್ತದೆ.

ಹೌದು ಇಲ್ಲಿಗೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ ಮಾರುತೇಶನ ಆಗಾದ ಶಕ್ತಿಯಾಗಿದ್ದು, ಬೇಡಿ ಬಂದ ಭಕ್ತರ ಇಷ್ಟಾರ್ಥ ಪೂರೈಸುವ ಕಾಮಧೇನುವಾಗಿ ನೆಲೆ ನಿಂತಿದ್ದಾನೆ.

ಇಲ್ಲಿನ ಮಾರುತೇಶನಲ್ಲಿಗೆ ನಾಡಿನ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ತಮ್ಮ ಹರೆಕೆ ಇಡೇರುವವರೆಗೂ ಅಲ್ಲಿಯೇ ಇದ್ದು ತಮ್ಮ ಸಮಸ್ಯೆಗಳು ಸಂಪೂರ್ಣ ಗುಣ ಮುಖವಾದ ನಂತರ ತೆರಳುತ್ತಾರೆ.

ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಗಾಳಿ ಸೋಕಿದವರು, ದೆವ್ವ, ಭೂತ ಹಿಡಿದವರು, ಮಾಟ ಮಂತ್ರಗಳಿಗೆ ಒಳಗಾದವರು ಆಗಮಿಸಿ ಗರ್ಭಗುಡಿಯ ಮುಂದೆ ಕುಳಿತುಕೊಳ್ಳುತ್ತಿದ್ದಂತೆ ದೆವ್ವ, ಭೂತ, ಪೀಡೆ ಇದ್ದವರು ಕೇ ಕೇ ಹಾಕುವುದು, ಚಿರಾಡುವುದು ನೋಡಿದರೇ ಮೈ ಜುಂ ಎಂದು ಭಯ ಬಂದಂತಾಗುತ್ತದೆ.

ಆದರೂ ಮಾರುತೇಶನಲ್ಲಿ ಬಂದೊಡನೆ ಒಳಗಿರುವ ದುಷ್ಟ ಶಕ್ತಿಗಳು ವಿಲ ವಿಲ ಒದ್ದಾಡಿದ ದೃಷ್ಯ ಸಾಮಾನ್ಯವಾಗಿ ಕಾಣಬಹುದು ಮತ್ತು ಇದರ ಜೊತೆಗೆ ಗುಣ ಮುಖರಾಗಿ, ಹರಕೆ ತೀರಿಸಿ ಹೋಗುತ್ತಾರೆ. ಜೊತೆಗೆ ಪ್ರತಿ ಶನಿವಾರ ಇಲ್ಲವೇ ಅಮವಾಸ್ಯೆ, ಹುಣ್ಣಿಮೆಗೆ ಬಂದ ಕಾಯಿ, ಕರ್ಪೂರ ಮಾಡಿಸಿಕೊಂಡು ಹೋಗುತ್ತಾರೆ.

ಇಲ್ಲಿಯವರೆಗೆ ಈ ಮಾರುತೇಶನಿಗೆ ನಡೆದುಕೊಂಡವರು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿಯಿಂದ ಜೀವನ ನಡೆಸುತ್ತೀರುವುದು ಸ್ತುತ್ಯಾರ್ಹವಾಗಿದೆ. ಒಟ್ಟಾರೇ ಆಂಜನೇಯ, ಮಾರುತಿಯ ಶಕ್ತಿಯೇ ಅಗಾದವಾದದು ಎಂದು ಹೇಳುತ್ತಾ ಇಲ್ಲಿಗೆ ಈ ಸ್ಟೋರಿ ಮುಗಿಸ್ತೇವೆ.

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested

ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ

ಗಂಗಾವತಿ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದ ಯುವ ಮತದಾರರು ಡಿ.14ರೊಳಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವಂತೆ ತಹಸಿಲ್ ಕಚೇರಿಯ ಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ ಅವರು ಸಲಹೆ ನೀಡಿದರು.

ನಗರದ ಜಿಎಚ್ ಎನ್ ಕಾಲೇಜಿನಲ್ಲಿ ಕಾಲೇಜು ಆಡಳಿತ ಮಂಡಳಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೊಜಿಸಿದ್ದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ನಮೂನೆ- 6 ಅರ್ಜಿಯೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ಯುವ ಮತದಾರರು ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕು. ಜೊತೆಗೆ ಕುಟುಂಬ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ನೋಂದಣಿ ಆಗದ ಅರ್ಹ ಮತದಾರರರು ಕೂಡಲೇ ಸೇರ್ಪಡೆ ಮಾಡಿಕೊಳ್ಳುವಂತೆ ತಿಳಿಸಿದರು.

ವೋಟರ್ ಹೆಲ್ಪ್ ಲೈನ್ ಆ್ಯಪ್ ಮುಖಂತಾರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ, ಗುರುತಿನ ಚೀಟಿ ತಿದ್ದುಪಡಿ ಕುರಿತು ಮಾಹಿತಿ ನೀಡಿದರು.

ಜಿಎಚ್ ಎನ್ ಕಾಲೇಜು ಪ್ರಾಚಾರ್ಯರಾದ ಜಿ.ಬಸವರಾಜ ಅಯೋಧ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದ ಹಕ್ಕು ಪಡೆದುಕೊಳ್ಳಬೇಕು. ಯಾರು ಕೂಡ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.

ತಾ.ಪಂ. ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಉಪನ್ಯಾಸಕರಾದ ಎಸ್ .ಕೆ. ಸೋಮನಗೌಡ, ಜಗದೀಶ, ಮಾರುತಿ, ನೀಲಮ್ಮ ಪಾಟೀಲ್ , ಲೀಲಾವತಿ, ಯರಿಸ್ವಾಮಿ, ಸಿಬ್ಬಂದಿ ಅಬ್ದುಲ್ ಸೇರಿ ಇತರರು ಇದ್ದರು.

ಲಿಂಗಾಯತ ಮಹಾಸಭಾ ಎಚ್ಚರಿಕೆ : ಶಾಸಕ ಯತ್ನಾಳ್ ಬಂಧಿಸಲು ಆಗ್ರಹ

Lingayat Mahasabha Alert: MLA Yatnal Demands Arrest

ಮಂಡ್ಯ : ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಹೆಸರಲ್ಲೇ ಗೆದ್ದು ಬಂದು ಅಧಿಕಾರ ಹಿಡಿಯುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಮನಸ್ಸೋಇಚ್ಚೆ ಮಾತನಾಡಿದರೆ ಅವರ ನಾಲಿಗೆಯನ್ನು ಸೀಳಬೇಕಾಗುತ್ತದೆ ಎಂದು ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡುತ್ತಿದೆ.
ಹನ್ನೆರಡನೇ ಶತಮಾನದಲ್ಲಿ ಮೌಢ್ಯತೆ, ಅಸಮಾನತೆ, ಜಾತಿ ಶೋಷಣೆಯ ವಿರುದ್ಧ ಸಿಡಿದೆದ್ದು ಸರ್ವರನ್ನೂ ಸಮಭಾವದಿಂದ ಒಪ್ಪಿ ಅಪ್ಪಿಕೊಂಡ ವಿಶ್ವಸಂವಿಧಾನ ಶಿಲ್ಪಿ ಬಸವಣ್ಣನವರನ್ನು `ಹೊಳೆಗೆ ಹಾರಿಕೊಂಡರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಂಧಿಸಿ ಶಾಸಕಸ್ಥಾನವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇವೆ.
ಒಂದು ವರ್ಗವನ್ನು ಒಲೈಸಿಕೊಳ್ಳಲು ಬಸವಣ್ಣನವರನ್ನೇ ಹೀಯಾಳಿಸಿದ ಹಿಂದೂ ಇಲಿ ಯತ್ನಾಳ್ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಸಹಾಯಕ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಬಸವಣ್ಣನವರು ಬೇಕು ಆದರೆ ಅವರನ್ನು ಹೀಯಾಳಿಸಿದಾಗ ಮೌನವಹಿಸಿರುವ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಜನ ಜಾಗೃತರಾಗಿ ಪಾಠ ಕಲಿಸಬೇಕಾಗುತ್ತದೆ.
ಕಾಯಕಯೋಗಿ ವಿಶ್ವಗುರು ಮಹಾನ್ ಮಾನವತಾವಾದಿ ಬಸವಣ್ಣನವರು ವಿಶ್ವಕ್ಕೆ ದಾರಿದೀಪವಾಗಿದ್ದಾರೆ. ಬಿಜೆಪಿ ನಾಯಕರು ಬಸವಣ್ಣನವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ ಅವರನ್ನು ಅವಹೇಳನ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯಿಂದ ಉಚ್ಛಾಟಿಸುವ ಶಕ್ತಿಯನ್ನು ಕರ್ನಾಟಕ ಹಾಗೂ ಕೇಂದ್ರದ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ,
ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ. ಬಸವಣ್ಣನವರ ಹೆಸರನ್ನ ಇಟ್ಟುಕೊಂಡಿರುವ ಯತ್ನಾಳ್ ಅಣ್ಣನವರ ಆದರ್ಶಗಳನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಬಸವತತ್ವ ವಿರೋಧಿ ಬಸವನಗೌಡ ಪ್ರಚಾರಕ್ಕಾಗಿ ಬಸವಣ್ಣನವರನ್ನು ಹೀಯಾಳಿಸುವಷ್ಟರ ಮಟ್ಟಿಗೆ ಮಾತನಾಡುವುದು ಇವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಕೂಡಲೇ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು.
ಬಸವಣ್ಣನವರ ಅನುಯಾಯಿಯಾಗಿದ್ದರೆ ಅವರು ಹಣೆಯಲ್ಲಿ ವಿಭೂತಿ ಧರಿಸಿ ಕೊರಳಲ್ಲಿ ಇಷ್ಟಲಿಂಗ ಧರಿಸಬೇಕಿತ್ತು. ಆದರೆ, ಬಸವತತ್ವ ವಿರೋಧಿಯಾಗಿರುವ ಅವರು, ಹಣೆಯಲ್ಲಿ ಕುಂಕುಮದ ನಾಮವನ್ನು ಹಾಕಿಕೊಂಡು ನಕಲಿ ಹಿಂದೂ ನಾಯಕರಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಬಸವತತ್ವದ ಮಹತ್ವವನ್ನೇ ತಿಳಿಯದೆ ಮೂಡನಂಬಿಕೆಯ ದಾಸರಾಗಿ, ಯಾವುದೋ ಒಂದು ಸಂಘಟನೆಯನ್ನು ಮೆಚ್ಚಿಸಲು ವೈಯಕ್ತಿಕ ಬದುಕಿಗೆ ಗೋಮುಖ ವ್ಯಾಗ್ರದ ವೇಶವನ್ನ ಧರಿಸಿ ರಾಜಕಾರಣ ಮಾಡುತ್ತಿರುವ ಯತ್ನಾಳ್ ಧರ್ಮವನ್ನ ಗಿರವಿ ಇಡುವ ಕೆಲಸ ಮಾಡಬಾರದು. ಯತ್ನಾಳ್ ಅಂತ ರಾಜಕಾರಣಿಗಳು ಬಸವಣ್ಣನವರ ಆದರ್ಶ ತತ್ವಗಳನ್ನು ತಮ್ಮ ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈದ ಸಂಗತಿ.
ರಾಜ್ಯಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದನ್ನು ಸಹಿಸಲಾಗದ ಬಿಜೆಪಿ ನಾಯಕರು ಹಿಂದುತ್ವದ ಸೋಗಿನಲ್ಲಿ ಅಣ್ಣಬಸವಣ್ಣನವರ ಆಶಯಗಳನ್ನು ಹತ್ತಿಕ್ಕಲು ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು. ಇಂತಹ ಘಟನೆಗಳು ಮರುಕಳಿಸಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ವಿಧಾನಸಭೆಯ ಸಭಾಧ್ಯಕ್ಷರು ಈ ಕೂಡಲೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡಿರುವ ಯತ್ನಾಳ್ ಅವರ ಶಾಸಕಸ್ಥಾನವನ್ನು ವಜಾಗೊಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ಶಾಸಕ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದೇವೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಶಾಸಕರನ್ನು ವಜಾಗೊಳಿಸಬೇಕೆಂದು ವಿಧಾನಸಭೆಯ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಈಸಂರ್ಭದಲ್ಲಿ ಡಿ.ಹಲಸಹಳ್ಳಿ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರ್ ಸ್ವಾಮೀಜಿ, ಲಿಂಗಾಯತ ಮಹಾಸಭಾ ಅಧ್ಯಕ್ಷರು ಎಂ. ಎಸ್.ಮಂಜುನಾಥ್, ಕೆನ್ನಾಳು ಚಿಕ್ಕಣ್ಣಮದ್ದೂರು ಶಿವರುದ್ರಸ್ವಾಮಿ ಮಂಡ್ಯ ಶಿವಲಿಂಗಪ್ಪಅಧ್ಯಕ್ಷರುಬೆಳ್ಳಪ್ಪತಾವರಗೆರೆವೀರಭದ್ರಯ್ಯ ಹಲಸಹಳ್ಳಿಆನಂದ್ ಕೊನ್ನಾಪುರಮಂಜುನಾಥ ಹಲಸಹಳ್ಳಿ ಮುಂತಾದವರಿದ್ದರು.