Breaking News

ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಹೆಬ್ಬಾಳ ಶ್ರೀ ಉದ್ಘಾಟನೆ

Inauguration of Government Ration Distributors Association and Workshop Hebbala Shri

ಗಂಗಾವತಿ;ದಿ, 9.4.2024 ಮಂಗಳವಾರ ಬೆಳಿಗ್ಗೆ 10. ಗಂಟೆಗೆ ರಾಯಚೂರು ರಸ್ತೆಯಲ್ಲಿ ಇರುವ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆಯನ್ನ ಹೆಬ್ಬಾಳದ ಶ್ರೀ ನಾಗಭೂಷಣ್ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೇರವೆರಿಸಲಾಯಿತು”. ಹಾಗೂ ಸದರಿ ಉದ್ಘಾಟನೆಗೆ ತಾಲೂಕಿನ ಗಣ್ಯಮಾನ್ಯರು ಪಾಲ್ಗೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು.

ಈ ಸಂಧರ್ಭದಲ್ಲಿ ನೂತನವಾಗಿ ಸಂಘಕ್ಕೆ ಆಯ್ಕೆಗೊಂಡ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಪಡಿತರ ವಿತರಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ.ಮಂಜುನಾಥ ಇವರು ಮಾತನಾಡಿ ಸದರಿ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘವನ್ನು ನೋಂದಣಿ ಮಾಡಿಸಿರುವುದು ಮತ್ತು ಸಂಘದ ಕಾರ್ಯಾಲಯವನ್ನು ಸ್ಥಾಪಿಸಿರುವುದು ಇದೇ ಮೊದಲನೇಯದ್ದಾಗಿದೆ ಎಂದು ಮಾತನಾಡುತ್ತಾ ಸದರಿ ಸಂಘಕ್ಕೆ ಆಯ್ಕೆ ಎಲ್ಲಾ ಪದಾಧಿಕಾರಿಗಳು ಹಾಗೂ ವಿತರಕರು ಒಗ್ಗಟ್ಟಿನಿಂದ ನಡೆಯಲು ಕೋರಿದರು. ಹಾಗೂ ಸದರಿ ಸಾರ್ವಜನಿಕ ವಲಯದಲ್ಲಿ ಪಡಿತರ ವಿತರಣೆಯನ್ನು ಸರಿಯಾದ ರೀತಿಯಲ್ಲಿ ವಿತರಿಸಿ ಸಂಘಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತರಲು ಶ್ರಮಿಸಬೇಕೆಂದು ತಿಳಿಸಿದರು. ನಂತರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಟಿ.ಎಮ್.ಚನ್ನಬಸವಶಾಸ್ತ್ರಿಯವರು ಟಿ.ಎ.ಪಿ.ಸಿ.ಎಂ.ಎಸ್ (ರಿ) ಹಾಗೂ ವಿ.ಎಸ್.ಎಸ್.ಎನ್. ಸಂಘಗಳು (ರಿ) ಒಗ್ಗಟ್ಟಾಗಿ ತಾಲೂಕಿನ ಎಲ್ಲಾ ವಿತರಕರು ಸೇರಿಕೊಂಡು ಸರಿಯಾದ ಕ್ರಮದಲ್ಲಿ ಕೆಲಸವನ್ನು ಮಾಡುವ ಮೂಲಕ ಸಂಘಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಹೇಳಿ ಶುಭಕೋರಿದರು. ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಶ್ರೀ ಎಮ್.ಪಿ.ಪಂಪನಗೌಡ, ಕಾರ್ಯದರ್ಶಿಯಾದ ಶ್ರೀ ಎಮ್.ಡಿ.ಫಯಾಜ್, ಸಹಕಾರ್ಯದರ್ಶಿಯಾದ ಶ್ರೀ ಎಚ್.ವೀರಭದ್ರಪ್ಪ, ಖಜಾಂಚಿಯಾದ ಶ್ರೀ ಬಿ.ರಾಜಶೇಖರ, ನಿರ್ದೇಶಕರಾದ ಶ್ರೀ ವಾಜೆಂದ್ರರಾವ್ ದೇಶಪಾಂಡೆ, ಶ್ರೀ ಎಮ್.ಲಿಂಗಪ್ಪಮಠದ, ಶ್ರೀ ಬಸವರಾಜ, ಶ್ರೀಮತಿ ದೊಡ್ಡಬಸಮ್ಮ, ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಸರಸ್ವತಿ, ಶ್ರೀಮತಿ ಶ್ವೇತಾ, ಶ್ರೀಮತಿ ಶಿವಬಸಮ್ಮ, ಶ್ರೀ ಶಂಕರ, ಹಾಗೂ ಶ್ರೀ ಚನ್ನಯ್ಯಸ್ವಾಮಿ, ನಾಗರಾಜ ನಾಯಕ, ಸಲೀಂ ಖಾನ್, ವಸಂತಗೌಡ, ಅನ್ವರ ವೆಂಕಟಗಿರಿ ಇನ್ನೂ ಅನೇಕ ಮುಖಂಡರು ಉಪತಿಸ್ಥರಿದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.