Breaking News

ಭೀಮ ಕೊರೆಗಾಂವ್ ವಿಜಯೋತ್ಸವಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ

Bhima Koregaon Victory celebrations kick off with floral tributes to Dr BR Ambedkar’s portrait

ಜಾಹೀರಾತು


ಕೊಟ್ಟೂರು: ಇತಿಹಾಸದಲ್ಲಿ ಯುದ್ಧಗಳು ಹೆಣ್ಣು ಮಣ್ಣು ಸಾಮ್ರಾಜ್ಯ ಸ್ಥಾಪನೆಗೆ ಯುದ್ಧಗಳು ನಡೆದಿದ್ದಾವೆ. ಆದರೆ ಆತ್ಮ ಗೌರವ ಸ್ವಾಭಿಮಾನಕ್ಕಾಗಿ ನಡೆದಿರುವ ಇದ್ದವೇ ಭೀಮ ಕೊರೆಗಾಂವ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಹೇಳಿದರು.

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾದ್ವಾರ ಬಾಗಿಲು ಹತ್ತಿರ ದಲಿತ ಸಂಘಟನೆಯಿಂದ ಆಯೋಜಿಸಿದ್ದ ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ ನೀಡಿ ನಂತರ ಮಾತನಾಡಿದರು ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕಾಲವಾಗಿತ್ತು ಆಗಿನ ಸಂದರ್ಭದಲ್ಲಿ ಮಹಾರ್ (ದಲಿತರು)ಜನರನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದ ಮಹರ್ (ದಲಿತರು) ಜನರ ನಾಯಕನಾದ ಸಿದ್ಧಿ ನಾಯಕ ಮತ್ತು ಎರಡನೇ ಬಾಜಿರಾಯ ವಿರುದ್ಧ ಯುದ್ಧ ಸಾರಿ 28 ಸಾವಿರ ಪೇಶ್ವೆ ಗಳ ಸೈನಿಕರು ಕೇವಲ 500 ದಲಿತ ಸೈನಿಕರು ಸೇರಿಕೊಂಡು ಸೋಲಿಸದ ಇದ್ದವೇ ಭೀಮ ಕೊರೆಗಾಂವ್ ವಿಜಯೋತ್ಸವ ಎಂದು ಹೇಳಿದರು.

ನಂತರ ದಲಿತ ಮುಖಂಡರುಗಳಾದ ಬಿ ಮರಿಸ್ವಾಮಿ ಮತ್ತು ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು ಮೇಲ್ಜಾತಿಯ ದೌರ್ಜನ್ಯಕ್ಕೆ ಒಳಗಾದ ಶೋಷಿತ ಸಮುದಾಯವು ತಮ್ಮ ಹಕ್ಕಿಗಾಗಿ ಸಮಾನತೆಗಾಗಿ ಮಾನವಿತೆಯ ಮೌಲ್ಯಗಳನ್ನು ಪಡೆದುಕೊಳ್ಳಲು ಕೆಚ್ಚೆದೆಯ ಹೋರಾಟ ಸಾಹಸ ಮಹರ್ ಸೈನಿಕರು ನಡೆಸಿದ ಯುದ್ದವೇ ಭೀಮ ಕೋರಂಗಾವ್ ಯುದ್ಧ ಎಂದು ಇತಿಹಾಸದಲ್ಲಿ ಪ್ರಸಿದ್ಧಿ ಹೊಂದಿದೆ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಬಿ ರೇಖಾ ರಮೇಶ್, ಡಿ ವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಟಿ, ಪಿ ಎಸ ಐ ಗೀತಾಂಜಲಿ ಸಿಂಧೆ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಬುಗ್ಗಳಿ ಕೊಟ್ರೇಶ್, ಯುವ ಮುಖಂಡ ಎಂ ಎಂ ಜೆ ಶೋಬಿತ್, ಹಾಲಿ ಪ. ಪಂ. ಸದಸ್ಯರುಗಳಾದ ತೆಗ್ಗಿನಕೇರಿ ಜಗದೀಶ್, ಕೆಂಗಪ್ಪ, ದಲಿತ ಮುಖಂಡಗಳಾದ ಟಿ. ಹನುಮಂತಪ್ಪ ವಕೀಲರು, ಬಿ ದುರುಗೇಶ್, ಬಣಕರ್ ಕುಮಾರಪ್ಪ, ಟಿ ಸುರೇಶ್, ಶಿವು, ಬಿ ಪರಶುರಾಮ್, ಕೊಲ್ಲಾರಿ, ವೀರಭದ್ರಪ್ಪ, ದಡೇರಪ್ಪ, ಕೆ ಶಿವರಾಜ್, ಮಣಿಕಂಠ, ತಿಮಲಾಪುರ ಮೈಲಪ್ಪ, ಇತರರು ಉಪಸ್ಥಿತರಿದ್ದರು.

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.