Breaking News

ಅಂತಾರಾಷ್ಟ್ರೀಯ ವ್ಯಾಪಾರ ವೆದಿಕೆ ನವಟೈಟಿಸ್ ಸಂಸ್ಥೆ

International trade forum Novatis Institute.


ಮಂಗಳೂರು:ನೂತನ ವಿದೇಶಿ ವ್ಯಾಪಾರಿ ನೀತಿಯನ್ನು ವ್ಯಾಪಾರಸ್ತರಿಗೆ ಪರಿಚಯಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯಾಗಿರುವ ಬೆಂಗಳೂರು ಮೂಲದ ನವಟೈಸ್ ಸಂಸ್ಥೆ (NavaTies) ಯು ಭಾರತದಲ್ಲಿ ನೀವು ರಫ್ತು ಮಾಡಲು ಸಿದ್ಧರಿದ್ದೀರಾ?’ (Are You Export Ready?) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳ ರಫ್ತು ಸಿದ್ಧತೆಯನ್ನು ನಿರ್ಣಯಿಸಲು ಸಮಗ್ರ ಮೌಲ್ಯಮಾಪನ ಸಾಧನವನ್ನು ಒಳಗೊಂಡಿರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸಂಪೂರ್ಣ ಉಚಿತ ಮೌಲ್ಯಮಾಪನದ ಮೂಲಕ ದೇಶದ ೧ ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳನ್ನು ರಫ್ತುದಾರರನ್ನಾಗಿ ಮಾಡುವುದು ನವಟೈಸ್ ಸಂಸ್ಥೆಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (Kanara Chamber of Commerce and Industry) ಕಚೇರಿಯಲ್ಲಿ ಮಂಗಳೂರು ಮತ್ತು ದಕ್ಷಿಣ ಕನ್ನಡ ರಫ್ತುದಾರರನ್ನು ಬೆಂಬಲಿಸಲು ರಫ್ತು ಅಭಿಯಾನವನ್ನು ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆನರಾ ಸಂಸ್ಥೆಯ ಖಜಾಂಚಿಯಾದ ಶ್ರೀ ಅಬ್ದುರ್ ರಹ್ಮಾನ್ ಮುಸ್ಟಾ ಮತ್ತು ನಿರ್ದೇಶಕ ಹಾಗು ಅಂತರರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಜೀತನ್ ಅಲೆನ್ ಸಿಕ್ವೆರಾ ಮತ್ತು ಇತರರು ಪಾಲ್ಗೊಂಡಿದ್ದರು
ನೀವು ರಸ್ತೆಗೆ ಸಿದ್ಧರಿದ್ದೀರಾ? ಅಭಿಯಾನವು ಭಾರತೀಯ ವ್ಯವಹಾರಗಳಿಗೆ ತಮ್ಮ ರಫ್ತು ಸಿದ್ಧತೆಯನ್ನು ೩೬- ಅಂಶಗಳಲ್ಲಿ ಮೌಲ್ಯಮಾಪನ ಮಾಡಲು ಅವಕಾಶವನ್ನು ನೀಡುತ್ತದೆ. ಮುಖ್ಯವಾಗಿ ನಿಯಂತ್ರಕ ಅನುಸರಣೆ, ದಸ್ತಾವೇಜು, ಪ್ರಮಾಣೀಕರಣ, ಸಾಮರ್ಥ್ಯ ನಿರ್ಮಾಣ, ಲಾಜಿಸ್ಟಿಕ್ಸ್, ಹಣಕಾಸಿನ ಲಭ್ಯತೆ, ಮಾರುಕಟ್ಟೆ, ಮತ್ತು ಇತರ ಸಂಪನ್ಮೂಲಗಳನ್ನು ಸೇರಿದಂತೆ ರಫ್ತು ಮಾಡುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
ರಫ್ತು ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲು, ಅವುಗಳನ್ನು ರಸ್ತೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸರಕಾರಿ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ರೈತ ಉತ್ಪನ್ನ ಸಂಸ್ಥೆಗಳು ಇತ್ಯಾದಿಗಳೊಂದಿಗೆ ನವಟೈಸ್ (www.navaties.com) ಕೆಲಸ ಮಾಡುತ್ತದೆ.
ಆಸಕ್ತರು ೦೭೯-೪೧೦೫-೦೭೨೭ಕ್ಕೆ (079-4105-0727) ಮಿಸ್ ಕಾಲ್ ನೀಡಿದರೆ ಸಂಸ್ಥೆಯವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಮೌಲ್ಯಮಾಪನ ಸಾಧನವು ವ್ಯಾಪಾರಿಗಳಿಗೆ ತಮ್ಮ ರಫ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ರಫ್ತು ಸಿದ್ಧತೆಯ ಮಾರ್ಗಸೂಚಿಯನ್ನು ಒದಗಿಸುತ್ತದೆ.
ಹೊಸ ರಫ್ತುದಾರರು, ಉತ್ಪಾದಕರು, ವ್ಯಾಪಾರಿಗಳು, ಸೇವಾ ಪೂರೈಕೆದಾರರು, ಎಫ್‌ ಪಿಒಗಳು, ರೈತರು ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಅನ್ವೇಷಿಸಲು ಬಯಸುವ ಇತರ ಆಸಕ್ತರು ೦೭೯-೪೧೦೫-೦೨೭ಗೆ (079-4105-0727) ಮಿಸ್ಟ್ ಕಾಲ್ ನೀಡುವ ಮೂಲಕ ಈ ಅಭಿಯಾನಕ್ಕೆ ನೋಂದಾಯಿಸಿಕೊಳ್ಳಬಹುದು.
ಈ ಕುರಿತು ಮಾತನಾಡಿದ ನವಟೈಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಸತೀಶ್ ಕೋಟ ‘೨೦೨೨-೨೩ರಲ್ಲಿ ದಕ್ಷಿಣ ಕನ್ನಡ ಸುಮಾರು ೬೯,೪೦೦ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ. ಪ್ರಾಥಮಿಕ ಸರಕು ರಾಫ್ತುಗಳು ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ ಗುಳಿಗೆ, ಗೋಡಂಬಿ, ಮಸಾಲೆಗಳು, ಕಾಫಿ, ಮೀನುಗಾರಿಕೆ ಇತ್ಯಾದಿಗಳು. ಆದರೆ ಜಿಲ್ಲೆಯಲ್ಲಿ ರಫ್ತು ಹೆಚ್ಚಿಸಲು ಹಲಸು, ಪ್ಲಾಸ್ಟಿಕ್, ಯಂತ್ರೋಪಕರಣಗಳು, ಇತ್ಯಾದಿಗಳಿಗೆ ಅವಕಾಶಗಳಿವೆ.’ ಎಂದರು.
ಅವರು ‘ರಫ್ತು ಭಾರತದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ ಮತ್ತು ಹೊಸ ವಿದೇಶಿ ವ್ಯಾಪಾರ ನೀತಿ ೨೦೨೩ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಅನೇಕ ಹೊಸ ಮಾರ್ಗಗಳನ್ನು ನೀಡುತ್ತದೆ. ದೇಶದಲ್ಲಿರುವ ೬೩ ಕೋಟಿ ಸಣ್ಣ ಕೈಗಾರಿಕೆಗಳಲ್ಲಿ ಶೇ. ೧ರಷ್ಟು ಮಾತ್ರ ರಫ್ತುದಾರರಾಗಿದ್ದಾರೆ. ಆದ್ದರಿಂದ ದೇಶದ ರಫ್ತು ಉದ್ಯಮಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಾವು ಸ್ಥಳೀಯ ವ್ಯಾಪಾರಿಗಳು ತಮ್ಮ ದೇಶೀಯ ಮಾರುಕಟ್ಟೆಯನ್ನು ಮೀರಿ ವ್ಯಾಪ್ತಿ ವಿಸ್ತರಣೆಯಲ್ಲಿ ತೊಡಗಿಕೊಳ್ಳುವುದನ್ನು ಬೆಂಬಲಿಸಲು ಬಯಸುತ್ತೇವೆ. ೧ಲಕ್ಷ ವ್ಯವಹಾರಗಳಿಗೆ ರಫ್ತು ವಿಚಾರದಲ್ಲಿ ಸುಧಾರಣೆಗಳನ್ನು ಗುರುತಿಸಲು, ಅವರಿಗೆ ಅಗತ್ಯವಿರುವ ಪರಿಕರ, ಸಂಪನ್ಮೂಲಗಳನ್ನು ಒದಗಿಸಲು ಮತ್ತು ಯಶಸ್ವಿ ರಫ್ತುದಾರರಾಗಲು ತಜ್ಞರನ್ನು ಸಂಪರ್ಕಿಸಲು ಸಹಾಯ ಮಾಡುವ ಉದ್ದೇಶದೊಂದಿಗೆ ನೀವು ರಫ್ತು ಮಾಡಲು ಸಿದ್ಧರಿದ್ದೀರಾ? ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ’ ಎಂದರು.

About Mallikarjun

Check Also

BJP ಸೋಲಿಸಿ ಭಾರತ ಉಳಿಸಿ-ಎಸ್.ಎಫ್.ಐ

ಹೊಸಪೇಟೆ: ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಆದ್ದರಿಂದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.