A de-addiction center for addicts – Hebbala. Mr

ಗಂಗಾವತಿ ತಾಲೂಕಿನ ಢಣಾಪೂರ ಗ್ರಾಮದ ನವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ ಯು ಸುಮಾರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುತ್ತ್ತ ಬಂದಿದ್ದು..ಪ್ರಸ್ತುತ ಸಮಾಜದಲ್ಲಿ ಅದು ನಮ್ಮ ಭಾಗದಲ್ಲಿ ಮಧ್ಯಪಾನ ,ಧೂಮಪಾನ ಹಾಗೂ ಇನ್ನಿತರೆ ದುಶ್ಚಟಗಳಿಗೆ ಸಾರ್ವಜನಿಕರು ದಾಸರಾಗಿ ತಾವು ತಮ್ಮ ಕುಟುಂಬದ ಅರಿವಿಲ್ಲದೆ ವ್ಯಸನಿಗಳಾಗಿದ್ದಾರೆ ಇದರಿಂದ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ
ಆದ್ದರಿಂದ ನಮ್ಮ ಭಾಗದ ಮಧ್ಯ ವ್ಯಸನಿಗಳು ದೂರ ದೂರದ ಜಿಲ್ಲೆಗಳಿಗೆ ಹೋಗಿ ವ್ಯಸನಮುಕ್ತ ಕೇಂದ್ರಗಳಿಗೆ ಹೋಗಿ ಬರುತ್ತಿದ್ದಾರೆ ಇದನ್ನರಿತ ನವೋದಯ ಸಂಸ್ಥೆಯವರು ನಮ್ಮ ಹತ್ತಿರದಲ್ಲಿ ಆದಷ್ಟು ನಮ್ಮ ಕಾರಟಗಿ ಕನಕಗಿರಿ ಮತ್ತು ಗಂಗಾವತಿ ಗೆ ಸಮೀಪ ಇರುವ ಮರಳಿ ಟೋಲ್ ಗೇಟ್ ಬಳಿ ಶ್ರೀ ರಾಘವೇಂದ್ರ ಆಶ್ರಮ ಎದುರು RG ರಸ್ತೆ ಮರಳಿ ಇಲ್ಲಿ ಮಧ್ಯವ್ಯಸನಿಗಳಿಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗುವ ಹಿತದೃಷ್ಟಿಯಿಂದ ನವೋದಯ ಸಮಗ್ರ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇದು ಹೆಬ್ಬಾಳಮಠದ ಶ್ರೀಗಳಿಂದ ಉದ್ಘಾಟನೆಗೊಂಡಿದ್ದು…ಈ ಕೇಂದ್ರವು ಸುಸಜ್ಜಿತ ಸುರಕ್ಷತಾ ಕಟ್ಟಡ, ಒಳ್ಳೆಯ ಸಂಸ್ಕಾರ, ಯೋಗ ಧ್ಯಾನ ಇದಕ್ಕೆ ತಕ್ಕ ಹಾಗೆ 1 ಎಕರೆ ಜಾಗದಲ್ಲಿ ಉತ್ತಮ ವಾತಾವರಣ ನಿರ್ಮಾಣ ಹಾಗೂ ಕುಡಿತದಿಂದ ಮುಕ್ತರಾಗಲು ಬೇಕಾಗುವ ಎಲ್ಲಾ ಪೂರಕ ಸೌಲಭ್ಯಗಳನ್ನು ನೀಡುತ್ತಿದೆ ಇಲ್ಲಿ ನುರಿತ ಅನುಭವಿ ಮತ್ತು ಅರ್ಹತೆಯನ್ನು ಹೊಂದಿದ ತಂಡವಿದ್ದು ಆದ್ದುದ್ದರಿಂದ ನಮ್ಮ ಭಾಗದ ಮಧ್ಯವ್ಯಸನಿಗಳು ಈ ಕೇಂದ್ರದ ಸೌಲಭ್ಯವನ್ನು ಪಡೆದುಕೊಂಡು ಮಧ್ಯಪಾನದಿಂದ ಮುಕ್ತರಾಗಿ ಬನ್ನಿ ಬದಲಾಗಿ ಇರುವಷ್ಟು ದಿವಸ ಕುಟುಂಬದವರೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಿ…