Magalamani urges the Chief Minister to abolish the Guarantee Implementation Committee.

ಗಂಗಾವತಿ :-5- ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಯಾವ ಪ್ರಯೋಜನೆಯೂ ಇಲ್ಲಾ ಹಾಗಾಗಿ ರಾಜ್ಧ್ಯಾಧ್ಯಾOತ ರದ್ದು ಪಡಿಸುವಂತೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ಒತ್ತಾಯಿಸಿದ್ದಾರೆ. ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವದು ತಮ್ಮ ಚುನಾವಣೆ ಪ್ರಣಾಳಿಕೆಯಾಗಿದ್ದು ಇದರ ಬಗ್ಗೆ ನಮ್ಮ ಆಕ್ಷೇಪಣೆ ಇರುವದಿಲ್ಲ . ಅದರ ಸಾಧಕ -ಭಾದಕಗಳ ಬಗ್ಗೆ ಜನತೆಗೆ ಬಿಟ್ಟದ್ದು. ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಅನುಷ್ಠಾಣ ಮಾಡುತ್ತಾರೆ. ಹೀಗಿರುವಾಗ ಸಮಿತಿಯ ಅಗತ್ಯ ಇರುವದಿಲ್ಲ. ಸಮಿತಿಯು ಸಾರ್ವಜನಿಕರ ಸಭೆ ಕರೆದು ಗ್ಯಾಂರಂಟಿಗಳ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಿಲ್ಲ. ಪಡಿತರ ಕಾಳು ಸಂತೆಯಲ್ಲಿ ಮಾರಾಟ ಮಾಡುವದು, ಬಸ್ಸುಗಳ ಕೊರತೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತರುವದು.2000 ರೂಪಾಯಿ ಸರಿಯಾಗಿ ಜಮಾ ಆಗದಿರುವದು ಸೇರಿದಂತೆ ಜನತೆಯ ಸಭೆ ಕರೆಯದೇ ಕೇವಲ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡುವ ಕ್ರಮವನ್ನು ಮ್ಯಾಗಳಮನಿ ಖಂಡಿಸಿದ್ದಾರೆ. ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಈ ಜವಾಬ್ದಾರಿ ನೀಡಿದರೆ ಸಾಕಾಗಿತ್ತು. ಸಮಿತಿಯರ ಸಭೆ ಹಾಗೂ ಸಂಭಾವನೆಗೆ ಹಣ ಖರ್ಚಾಗುವದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ವಾಗುತ್ತಿದೆ. ಅದು ಜನರ ದುಡ್ಡು.ಪಂಚ ಗ್ಯಾರಂಟಿಗಳ ಜೊತೆಗೆ ಸಮಿತಿಯ ನೇಮಕವೂ ಆರನೇ ಗ್ಯಾರಂಟಿ ಆಗುತ್ತದೆ. ಆದ್ದರಿಂದ ಗ್ಯಾರಂಟಿ ಸಮಿತಿಯನ್ನು ರದ್ದುಪಡಿಸುವಂತೆ ಮ್ಯಾಗಳಮನಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ರಾಮಣ್ಣ ರುದ್ರಾಕ್ಷಿ,ದುರ್ಗೇಶ್ ಹೊಸಳ್ಳಿ,ಮಂಜುನಾಥ್ ಚನ್ನದಾಸರ,ಬಸವರಾಜ್ ನಾಯಕ, ಹಾಲಪ್ಪ, ಜಂಬಣ್ಣ, ಮುತ್ತಣ್ಣ, ನರಸಪ್ಪ, ಪಂಪಾಪತಿ, ಹುಲ್ಲೇಶ್, ಮತ್ತಿತರರು ಇದ್ದರು.