Breaking News

ರಾಜಶೇಖರ್ ಹಿಟ್ನಾಳ್ ಬಗ್ಗೆ ಜನಾರ್ಧನ್ ರೆಡ್ಡಿಗೆ ಭಯ ಯಾಕೇ ಮ್ಯಾಗಳಮನಿ ಪ್ರಶ್ನೆ

Screenshot 2025 07 05 09 23 05 24 6012fa4d4ddec268fc5c7112cbb265e72407214666327331897
Why is Janardhan Reddy afraid of Rajashekhar Hitnal, asks Magalamani

ಗಂಗಾವತಿ :-5-ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಮುಂಬರುವ ವಿಧಾನ ಸಭೆ ಚುನಾವಣೆ ಯಲ್ಲಿ ಗಂಗಾವತಿ ಗಂಗಾವತಿಯ ಆಕಾಂಕ್ಷಿ ಎಂದು ನಗರಸಭೆಯ ಕಾರ್ಯಕ್ರಮವೂ0ದರಲ್ಲಿ ಶಾಸಕ ಗಾಲಿ ಜನಾರ್ಧನ್ ರಡ್ಡಿಯ ಹೇಳಿಕೆಯೂ ರಾಜಶೇಖರ್ ಹಿಟ್ನಾಳ್ ರಿಂದ ಭಯ ಕಾಡುತ್ತಿದೆಯಾ? ಎಂದು ಕೊಪ್ಪಳ ಜಿಲ್ಲಾ ಸರ್ವಾ O ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಹಿಟ್ನಾಳ್ ಕೊಪ್ಪಳ ಕ್ಷೇತ್ರದ ಸಂಸದರು ಗಂಗಾವತಿ ಕ್ಷೇತ್ರ ಅವರ ವ್ಯಾಪ್ತಿಯಲ್ಲಿ ಬರುತ್ತಿದೆ. ಸಕ್ರಿಯವಾಗಿ ಓಡಾಡುತ್ತಾರೆ. ಅನುದಾನ ತರಲು ಅಧಿಕಾರವಿದೆ. ಇದರಿಂದ ನೀವು ಭಯ ಪಡುವ ಅಗತ್ಯವಿಲ್ಲ, ನೀವು ಗಂಗಾವತಿಯಲ್ಲಿ ಸರಿಯಾಗಿ ವಾಸ ಮಾಡಿ ಜನರೊಂದಿಗೆ ಬೇರೆಯಿರಿ, ನಿಮ್ಮ ವಚನದಂತೆ ಆಂಜನಾದ್ರಿಗೆ ಸ್ವಂತ ಹಣ ಐದು ಸಾವಿರ ಕೋಟಿ ನೀಡಬೇಕು ಜನರಿಗೆ ಡಬಲ್ ಬೆಡ್ ರೂಮ್ ಕಟ್ಟಿ ಕೊಡಬೇಕು. ಜನರಿಗೆ ಉದ್ಯೋಗ ಒದಗಿಸಬೇಕು.ಗಂಗಾವತಿಯನ್ನು ಸಿಂಗಾಪುರ್ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಒಬ್ಬ ರಾಜಶೇಖರ್ ಅಲ್ಲಾ ಹತ್ತು ಜನ ಹಿಟ್ನಾಳ್ ಬಂದರು ನಿಮ್ಮನ್ನು ಏನು ಮಾಡಕ್ಕಾಗಲ್ಲ. ಅದು ಬಿಟ್ಟು ಕ್ರಿಯಾಶೀಲತೆಯಿಂದ ಜನರೊಂದಿಗೆ ಸರಳವಾಗಿ ಬೆರೆಯುವ ಯುವಕ ಅಭಿವೃದ್ಧಿ ಮಾಡುವ ಸಂಸದರ ಬಗ್ಗೆ ಹಗುರವಾಗಿ ಮಾತನಾಡುವ ತಮ್ಮಂತ ದೊಡ್ಡವರಿಗೆ ಶೋಭೆಯಲ್ಲ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ್ ಚನ್ನದಾಸರ, ಹಾಲಪ್ಪ ನರಸಪ್ಪ,, ಮುತ್ತಣ್ಣ,ಜಂಬಣ್ಣ, ಪಂಪಾಪತಿ, ಹುಲ್ಲೇಶ್, ಮತ್ತಿತರರು ಇದ್ದರು.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.