Breaking News

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled Caste Census: Yallappa Kattimani

ಜಾಹೀರಾತು

ನೀಡಿದರು.: ಕರ್ನಾಟಕ ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಠ ಜಾತಿ ಒಳಮೀಸಲಾತಿ ವರ್ಗೀಕರಣ ಸಂಬAಧ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಯ ಕುಟುಂಬಗಳ ಮನೆಬಾಗಿಲಿಗೆ ಸರಕಾರದಿಂದ ನೇಮಿಸಿರುವ ಗಣತಿದಾರರು ಬರುವರು. ಆ ಸಮಯದಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ, ಎಸ್.ಸಿ ಹರಿಜನ ಎಂದು ಬರೆಸಬೇಡಿ, ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಿ ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಜಾತಿ ಗಣತಿಯು ಇದೇ ಏಪ್ರಿಲ್-೬ ಶುಕ್ರವಾರದಿಂದ ಏಪ್ರಿಲ್-೨೬ ಶನಿವಾರದವರೆಗೆ ನಡೆಯಲಿದೆ. ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳು ಮಾದಿಗ ಎಂದು ಹೇಳಿ ಹಾಗೂ ಮಾದಿಗ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಹಾಗೂ ಅವರ ಉಪ ಜಾತಿಯನ್ನು ಕೂಡ ಬರೆಯಿಸಬೇಕು. ರಾಜ್ಯದಲ್ಲಿ ತಮ್ಮ ಜಾತಿಯ ಹೆಸರು ಹೇಳಿಕೊಳ್ಳದೆ ಇರುವ, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಎಸ್.ಸಿ ಹರಿಜನ ಎಂದು ಪ್ರಮಾಣ ಪತ್ರ ಪಡೆದಿರುವ ಜನರು ತಮ್ಮ ಜಾತಿಯ ಹೆಸರನ್ನು ಬರೆಸದೆ ಗೊಂದಲದಲ್ಲಿರುವ ಕಾರಣ ನಿಖರವಾದ ಜಾತಿಯ ಮಾಹಿತಿಗಾಗಿ ಸಮೀಕ್ಷೆಯನ್ನು ಸರ್ಕಾರ ನಡೆಸಲು ಮುಂದಾಗಿದೆ. ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ, ಎಸ್.ಸಿ ಹರಿಜನ ಮತ್ತು ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳ ಜನಸಂಖ್ಯೆ ಕುಟುಂಬಗಳ ಸಂಖ್ಯೆ ಅವರ ಶಿಕ್ಷಣ, ವೃತ್ತಿ, ವಾಸಿಸುತ್ತಿರುವ ಪ್ರದೇಶ, ಮನೆಯ ಆದಾಯ, ಭೂಮಿಯ ಒಡೆತನ, ಮಾನವ ಅಭಿವೃದ್ಧಿ ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಸಮಗ್ರ ವರದಿಯನ್ನು ತಯಾರಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಯ ಸಮುದಾಯದವರು ಅತ್ಯಂತ ಜಾಗೃತಿಯಿಂದ ಸರಕಾರಿ ಅಧಿಕಾರಿಗಳಿಗೆ / ಗಣತಿದಾರರಿಗೆ / ಸಿಬ್ಬಂದಿಗೆ ಸಹಕಾರ ನೀಡಿ, ತಮ್ಮ ಕೌಟುಂಬಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಇತ್ಯಾದಿಗಳ ಅಂಶಗಳಿಗೆ ದಾಖಲಿಸಲು ಮಾಹಿತಿ ನೀಡಬೇಕು. ತಮ್ಮ ಆಧಾರ, ರೇಷನ್ ಕಾರ್ಡ್, ಪಾನ್ ಕಾರ್ಡ್, ನೀವು ಓದಿರುವ ಪ್ರಮಾಣಪತ್ರಗಳು, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಸಿಲಿಂಡರ್ ಕಾರ್ಡ್, ಕೆ.ಪಿ.ಟಿ.ಸಿ.ಎಲ್ ಬಿಲ್ಲು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತ್ಯಾದಿ ಕುಟುಂಬದ ಮೂಲ ದಾಖಲಾತಿ ಪ್ರಮಾಣಪತ್ರಗಳನ್ನು ಗಣತಿದಾರರಿಗೆ ತೋರಿಸಬೇಕು.
ಗಣತಿ ಅಥವಾ ಸರ್ವೆ ಮಾಡುವ ೦೫ ಪುಟಗಳಿದ್ದು, ಒಟ್ಟು ೪೫ ಕಾಲಂಗಳು ಇವೆ. ಮುಖ್ಯ ಅಂಶಗಳಿಗೆ ಗಣತಿದಾರರು ಪ್ರಶ್ನೆ ಮಾಡಿ ತಮ್ಮಿಂದ ಉತ್ತರ ಪಡೆದು ವಿವರಗಳನ್ನು ದಾಖಲಿಸಿಕೊಳ್ಳುವರು. ಗಣತಿದಾರರು ಮನೆ ಬಾಗಿಲಗೆ ಬಂದಾಗ ದಾಖಲೆಗಳನ್ನು ಹುಡುಕಾಡದೇ ಕಾಯ್ದಿರಿಸಿಕೊಳ್ಳಬೇಕು, ಸಾಧ್ಯವಾದರೆ, ಗಣತಿ / ಸರ್ವೆ ಪುಟಗಳನ್ನು ಝರಾಕ್ಸ್ ಮಾಡಿಸಿ ನಿಮಗೆ ತಿಳಿದಷ್ಟು ನಿಖರ ಅಂಶಗಳನ್ನು ಭರ್ತಿ ಮಾಡಿಟ್ಟುಕೊಳ್ಳಲು ಸಲಹೆ ನೀಡಿದರು

About Mallikarjun

Check Also

ಮಂತ್ರಾಲಯದಿಂದ ವಾಪಸ್ ಬರುವಾಗ ಆಂಧ್ರದ ಕರ್ನೂಲ್ ಬಳಿ ಭೀಕರ ಅಪಘಾತ ಮೂವರ ದುರ್ಮರಣ.

Three people died in a horrific accident near Kurnool, Andhra Pradesh, while returning from Mantralaya. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.