Former MLA Paranna Munavalli visited the hospital to inquire about the health of a BJP worker who was bitten by a snake.

ಗಂಗಾವತಿ: ವಿಧಾನಸಭಾ ಕ್ಷೇತ್ರದ ಮಲ್ಲಾಪುರ ಗ್ರಾಮದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ವೆಂಕಟೇಶ್ ಗೊಲ್ಲರ್ ಅವರಿಗೆ ಅವರ ಹೊಲದಲ್ಲಿ ಹಾವು ಕಚ್ಚಿದ ಕಾರಣ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಸಾರ್ವಜನಿಕ ಆಸ್ಪತ್ರೆಗೆ ಇಂದು ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ಭಾಜಪ ಗ್ರಾಮೀಣಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ್ ಚಿತ್ರಗಾರ, ಅಕ್ಕಿ ಚಂದ್ರಶೇಖರ್, ಶ್ರೀನಿವಾಸ ಧೂಳ್ ಉಪಸ್ಥಿತರಿದ್ದರು.