Breaking News

ವಿಜಯ ವಿರಾಟ ಸೌಹಾರ್ದ ಸಹಕಾರಿ ನಿಯಮಿತ 6ನೇ ವಾರ್ಷಿಕ ಸಾಮಾನ್ಯ ಸಭೆ

Vijay Virata Souharda Sahakari Regular 6th Annual General Meeting

ಸಿಂಧನೂರು ನಗರದ ಸಂಗಮೇಶ್ವರ ಚಿತ್ರಮಂದಿರ ಹತ್ತಿರವಿರುವ ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ 6ನೇ ವಾರ್ಷಿಕ ಮಹಾಸಭೆ ನಡೆಯಿತು.

ವಿಜಯ ವಿರಾಟ ಸಹಕಾರಿ ಸಂಘ 8.31 ಲಕ್ಷ ನಿವ್ವಳ ಲಾಭ ಸದಸ್ಯರ ಪರಿಶ್ರಮದಿಂದ ವಿಜಯ ವಿರಾಟ ಸಹಕಾರಿಗೆ 6 ವರ್ಷಗಳ ಅವಧಿಯಲ್ಲಿ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭ ಪಡೆದಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷತೆಯನ್ನು ವಹಿಸಿದ್ದ ಟಿ.ಅಯ್ಯಪ್ಪ ಹೇಳಿದರು.

ಸಿಂಧನೂರು ಪಟ್ಟಣದ ವಿಜಯ ವಿರಾಟ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ ಬುಧವಾರದಂದು ನಡೆದ 6ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಹಕಾರಿಯೂ ಒಟ್ಟು 1371 ಸದಸ್ಯರನ್ನು ಒಳಗೊಂಡಿದ್ದು, ಹಾಗೂ 18.66 ಲಕ್ಷ ರೂ. ಬಂಡವಾಳ ಹೊಂದಿದ್ದು, 3.17.ಕೋಟಿ ರೂ ಠೇವಣಿಗಳು,3.54 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು
ಹಾಗೂ ಸಾಲ ಮತ್ತು ಮುಂಗಡಗಳು 3.12 ಕೋಟಿ ರೂ ಸೇರಿದಂತೆ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭಗಳಿಸಿದ್ದು 98% ಸಾಲ ವಸೂಲತಿ ಮಾಡಿದೆ ಎಂದು ತಿಳಿಸಿದರು.ಸಹಕಾರಿಯ ಉಪಾಧ್ಯಕ್ಷರಾದ ಟಿ. ಅಯ್ಯಪ್ಪ ಇವರ ಅಧ್ಯಕ್ಷತೆ ಯನ್ನು ಮಾತನಾಡಿದರು. 2017 ರಲ್ಲಿ ಪ್ರಾರಂಭಗೊಂಡ ನಮ್ಮ ಸಹಕಾರಿ ಸಂಘವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಹಾರ್ದಿಕ ಪುನಶ್ಚೇತನ ಆದ್ಯತೆ ನೀಡಲಾಗಿದೆಯಂದರು,ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘ ನಿ.,ಆಡಳಿತ ಸದಸ್ಯರ ಆಶಯದಂತೆ ಸಿಂಧನೂರು ಮತ್ತು ಕಾರಟಗಿ ನಗರದಲ್ಲಿ ಎರಡು ಶಾಖೆಗಳನ್ನಾಗಿ ವಿಸ್ತಾರಿಸಲಾಗಿದೆ.

ಸಹಕಾರಿಯ CEO ಮನೋಜ ಕುಮಾರ ಹಾಗೂ ವೀರೇಂದ್ರ ಬಡಿಗೇರ ವಾರ್ಷಿಕ ವರದಿಯನ್ನು ಮಂಡಿಸಿದರು.

ನಿರ್ದೇಶಕರಾದ ಬಿ.ಅಂಬಣ್ಣ ಗೊರೆಬಾಳ,ವೀರನಗೌಡ ನೆಲಗಲದಿನ್ನಿ,ಶೇಖರಪ್ಪ ತಾಳಿಕೋಟೆ, ಮೌನೇಶ ಲಿಂಗಸೂಗೂರು,ವೀರೇಶ ಗೊರೆಬಾಳ,ವಿನಯಕುಮಾರ ಬಡಿಗೇರ,ಪರಮೇಶಪ್ಪ ವಿ.ಬಿ, ಮೌನೇಶ ತಿಡಿಗೋಳ, ಬಸವರಾಜ ಅಲಬನೂರ, ಕಾನೂನು ಸಲಹೆಗಾರರಾದ ರವಿಕುಮಾರ ವಿ ಹಂಚಿನಾಳ, ವೀರೇಶ ಕೋಟೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರು ಇದ್ದರು.ನೂತನ ನಿರ್ದೇಶಕರನ್ನಾಗಿ ವೀರೇಶ ಕುಮಾರ,ವಿರುಪಣ್ಣ ಹೊಸೂರ,ಶ್ರೀಮತಿ ಸೌಮ್ಯ, ದೇವರಾಜ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.