Srinivas Devikeri appointed as Taluk President of Karnataka Journalists Association
ಕೊಪ್ಪಳ:- ಕರ್ನಾಟಕ ಪತ್ರಕರ್ತರ ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತರು ಹಾಗೂ ಶತಾಯು ನ್ಯೂಸ್ ಪತ್ರಿಕೆಯ ಸಂಪಾದಕರು ಆದ ಶ್ರೀಯುತ ಶ್ರೀನಿವಾಸ್ ದೇವಿಕೆರೆ ಇವರನ್ನು
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಕೇರಾ ರವರ ಸೂಚನೆಯ ಮೇರೆಗೆ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಆರ್ ಶರಣಪ್ಪ ರವರು ದಿನಾಂಕ 15-3-2024 ಶುಕ್ರವಾರ ನೇಮಕ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಸಂಘಟನಾತ್ಮಕ ಜವಾಬ್ದಾರಿಯನ್ನು ವಹಿಸಿ, ಸಂಘದ ಸದಸ್ಯರುಗಳನ್ನೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಎಂದು ತಿಳಿಸಲಾಗಿದೆ ಎಂದರು.