Breaking News

ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಾಸವಿ ಮಹಿಳಾಮಂಡಳಿಯಿಂದಕಾಮಧೇನುಗೋಪೂಜೆ

Kamadhengopooja by Vasavi Mahilamandali on the occasion of Adhik Shravana month

ಗಂಗಾವತಿ 18 ಗಂಗಾವತಿ ಆರ್ಯವೈಶ್ಯ ಸಮಾಜದ ವಾಸವಿ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಮಂಗಳವಾರದಂದು ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಗೋಪೂಜೆ ಹಾಗೂ ಕಾಮಧೇನು ಪೂಜೆಯನ್ನು ಸುಮಾರು 75 ಅಧಿಕ ಮಹಿಳೆಯರಿಂದ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು, ಬೆಂಗಳೂರಿನ ಗುರುರಾಜ್ ಆಚಾರ್ ದಾಸರು ಗೋ ಹಾಗೂ ಕಾಮಧೇನು ಪೂಜಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು, ಇದಕ್ಕೂ ಪೂರ್ವದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷ ಜನಾ ದ್ರಿ ಲಕ್ಷ್ಮಿ ಮಾತನಾಡಿ ಜೀವನದ ಜಂಜಾಟದಲ್ಲಿ ಸ್ವಲ್ಪ ಸಮಯವನ್ನು ಧಾರ್ಮಿಕ ಆಚರಣೆಗೆ ಅವಕಾಶ ನೀಡುವುದರ ಮೂಲಕ ಭಗವಂತನ ಸೇವೆಗೆ ಮುಂದಾಗಬೇಕೆಂದು ತಿಳಿಸಿದರು ಬಳಿಕ ಕಾರ್ಯದರ್ಶಿ ರಮಾದರೋಜಿ ಸಹ ಕಾರ್ಯದರ್ಶಿ ಆಶಾ ಮುಂಡರಗಿ ಖಜಾಂಚಿ ಮಹಾಲಕ್ಷ್ಮಿ ಪ್ರಭು ಅಪರಾಜಿತ ಸಮಯ ಮಂತಲುವೀಣಾ ಕೊಶಗಿ ಗುತ್ತಿ ಸುರೇಖಾ ಪುಣ್ಯ ಮೂರ್ತಿ ಅವರುಗಳು ಗೋವುಗಳಿಗೆವಿಶೇಷ ಪೂಜೆ ಪೂಜೆ ನೆರವೇರಿಸಿದರು ಬಳಿಕ ಶ್ರೀ ಕೃಷ್ಣ ಸಹಿತ ಕಾಮದೇನು ಮೂರ್ತಿಗಳನ್ನು ಸರ್ವಲಂ ಕೃತಗೊಳಿಸಲಾಗಿತು, ಬಳಿಕ ಗುರರಾಜ್ ಆಚಾರ್ಯರು ದಾಸರು ಸಂಕಲ್ಪ ಮಹಾಗಣಪತಿ ಪೂಜೆ ಕಾಮಧೇನು ಪೂಜೆಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ನೆರೆವೇರಿಸಿದರು ಜೊತೆಗೆ ಅಧಿಕ ಮಾಸ ಶ್ರಾವಣದ ಮಹತ್ವವನ್ನು ಕುರಿತು ಈ ಮಾಸವು ಧಾರ್ಮಿಕ ಮಾಸವಾಗಿದ್ದು ದೇವರಿಗೆ ವಿಶೇಷ ಪೂಜೆಯನ್ನು ಕಲ್ಪಿಸುವ ಮಾಸವಾಗಿದೆ ಅಧಿಕ ಎಂದರೆ ಹೆಚ್ಚು ಅಥವಾ ಕೂಡಿಸಿ ಎಂದು ಅರ್ಥ ಯಾವ ವ್ಯಕ್ತಿ ಧಾನ ಧರ್ಮದಲ್ಲಿ ತೊಡಗುತ್ತಾರೆ ಅಂತಹ ವ್ಯಕ್ತಿಗಳಿಗೆ ದೇವರು ಎರಡರಷ್ಟು ಅನುಗ್ರಹ ಆಶೀರ್ವಾದವನ್ನು ಕಲ್ಪಿಸುತ್ತಾನೆ ಎಂದು ತಿಳಿಸಿದರು, ಬಳಿಕ ಭಜನೆ ಮಂಗಳಾರತಿ ಪ್ರಸಾದ ದೊಂದಿಗೆ ಸಂಪನ್ನಗೊಂಡಿತು,, ಅಧಿಕಮಾಸದ ಪ್ರಯುಕ್ತ ದಿನಂಪ್ರತಿ ಸಂಜೆ ಪ್ರವಚನ ಕೀರ್ತನೆ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು ಸರ್ವರೂ ಭಾಗವಹಿಸುವಂತೆ ಮತ್ತೊಮ್ಮೆ ಉಪಾಧ್ಯಕ್ಷೆ ಲತಾ ಕಲ್ಕಿ ಭಕ್ತಾದಿಗಳಲ್ಲಿಮನವಿ ಮಾಡಿದರು,,

About Mallikarjun

Check Also

ಕಿಡಿಗೇಡಿಗಳಿಂದ ಜೋಳದ ಕಡ್ಡಿಗೆ ಬೆಂಕಿ ರೈತರಿಗೆ ನಷ್ಟ

ವರದಿ : ಬಂಗಾರಪ್ಪ ಸಿ .ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಳ್ಳೆಗೌಡ ಮಾದಪ್ಪ ರವರ ಮಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.