Breaking News

ರೈತ ಸಂಘದಿಂದ ಡಿ ಎಫ್ ಒ ವಿರುದ್ದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ದೂರು

Complaint by farmers association against DFO to Chief Conservator of Forests.


ವರದಿ : ಬಂಗಾರಪ್ಪ ಸಿ ಹನೂರು .
ಹನೂರು : ಹಲವಾರು ವರ್ಷಗಳಿಂದ ಅರಣ್ಯ ಇಲಾಖೆ ಕಚೇರಿಯ ಮುಂದೆ ಹಲವರಿಂದ ಜಪ್ತಿ ಮಾಡಿಕೊಂಡ ವಾಹನಗಳಿದ್ದವು ಆದರೆ ಇಲ್ಲಿನ ಡಿ ಎಪ್ ಒ ಸಂತೋಷ್ ಕುಮಾರ್ ಪತ್ರಿಕೆ ಪ್ರಕಟಣೆಯನ್ನು ಮಾಡದೆ ತಮ್ಮದೆ ತಮ್ಮಕಚೇರಿ ಸಿಬ್ಬಂದಿ ಹಾಗೂ ತಮಗೆ ಬೇಕಾದವರಿಗೆ ಕಡಿಮೆ ದರದಲ್ಲಿ ವೀಲೆ ಮಾಡಿದ್ದಾರೆ . ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಹೆಬ್ಬಸೂರು ಬಸವಣ್ಣ ತಿಳಿಸಿದರು .
ಚಾಮರಾಜನಗರ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳಿಗೆ ದೂರು ಸಲ್ಲಿಸಿ ಮಾತನಾಡಿದ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷರಾದ ಗೌಡೇಗೌಡ ಮಾತನಾಡಿ ಅರಣ್ಯ ಇಲಾಖೆಯಲ್ಲಿದ್ದ ವಿವಿಧ ಪ್ರಕರಣಗಳಿಗೆ ಸಂಭಂದಿಸಿದ ಹಾಗೆ ಹಲವು ವಾಹನಗಳನ್ನು ಜಪ್ತಿ ಮಾಡಿದ ವಾಹನಗಳಗಳನ್ನು ಕಾನೂನು ಬಾಹಿರವಾಗಿ ವಾಹನಗಳನ್ನು ವೀಲೆವಾರಿ ಮಾಡಿದ್ದಾರೆ ಇದರಲ್ಲಿ ಸರ್ಕಾರಕ್ಕೆ ಬಹಳಷ್ಟು ನಷ್ಟ ಮಾಡಿದ್ದಾರೆ ಅಲ್ಲದೆ ಕೆಲವು ಮುಟ್ಟು ಗೋಲು ವಾಹನವನ್ನು ಅಕ್ರಮವಾಗಿ ಮಾರಿದ್ದಾರೆ ಈ ಕೂಡಲೇ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿಗಳು ತನಿಕೆ ನಡೆಸಬೇಕೆಂದು ತಿಳಿಸಿದರು .ಇದೇ ಸಮಯದಲ್ಲಿ ಚಾನಗರ ಜಿಲ್ಲಾ ಗೌರವಾಧ್ಯಕ್ಷ ಶಿವರಾಮು .ಹನೂರು ತಾಲ್ಲೂಕು ಅಧ್ಯಕ್ಷ ಅಹ್ಮದ್ ಖಾನ್ ಪತ್ರ ಬರೆದು ಒತ್ತಾಯಿಸಿದ್ದಾರೆ

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.