Breaking News

ವಾತ್ಸಲ್ಯಯೋಜನೆಯಡಿಯಲ್ಲಿ ಮನೆ ಮಂಜೂರು

Allotment of house under Vatsalya scheme

ಯಲಬುರ್ಗಾ:ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕಳಕಮ್ಮ ರಾಮಶೆಟ್ಟಿರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ಮಂಜೂರಾಗಿದ್ದು ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಭೂಮಿ ಪೂಜೆ ನೇರೆವೇರಿಸಿ ಮಾತನಾಡಿ ಮಾತೃಶ್ರೀ ಡಾ ಹೇಮಾವತಿ ಅಮ್ಮನವರ ಅದ್ಭುತವಾದ ಕಾರ್ಯಕ್ರಮ ಇದಾಗಿದ್ದು ಯಲಬುರ್ಗಾ ತಾಲೂಕಿಗೆ 2 ಮನೆ ಮತ್ತು 1 ಶೌಚಾಲಯ ಮಂಜೂರಾಗಿದೆ . ಮುರುಡಿಯ ಮಹಾದೇವಮ್ಮ ನವರಿಗೂ ಮನೆ ನಿರ್ಮಿಸಿಕೊಳ್ಳಲು 1 ಲಕ್ಷರೂಗಳನ್ನು ಹಾಗೂ ಶೌಚಾಲಯ ನಿರ್ಮಿಸಿಕೊಳ್ಳಲು ಹಿರೇ ಮ್ಯಾಗೇರಿಯ ಶಾಲಿನಿಬಾಯಿ ಜೋಶಿರವರಿಗೆ 20 ಸಾವಿರ ರೂಗಳನ್ನು ಮಂಜೂರಿಮಾಡಲಾಗಿದೆ ಎಂದು ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳಾದ ಸತೀಶ್ , ಸಮನ್ವಯಾಧಿಕಾರಿ ಗೀತಾ ಊರಿನ ಗಣ್ಯರು ಯೋಜನೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಫಲಾನುಭವಿ ಕಳಕಮ್ಮ ಪ್ರತಿಕ್ರಿಯಿಸಿ ಆಶ್ರಯವಿಲ್ಲದ ನನಗೆ ಧರ್ಮಸ್ಥಳ ಸಂಸ್ಥೆಯವರು ಸೂರು ಕಲ್ಪಿಸಲು ಸುಮಾರು 1 ಲಕ್ಷ ರೂ ಉಚಿತವಾಗಿ ನೀಡಿ ಆಶ್ರಯ ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು

ವರದಿ —ವೀರಣ್ಣ ನಿಂಗೋಜಿ

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.