ಭೋಜನಪ್ರಿಯರ ಪರಿಷತ್ತಲ್ಲ.ಸಾಹಿತಿಗಳಿಗೆ ಅವಮಾನ ಮಾಡುವ ಚಾಳಿ ಬಿಟ್ಟುಬಿಡಿ.

H.Mallikarjun
H.Mallikarjun - Kalyanasiri
1 Min Read

Not a Bhojapriyar Parishad. Leave the way of insulting literary people.

ಜಾಹೀರಾತು

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಸಾಹಿತಿಗಳ ಪರಿಷತ್ತು. ಭೋಜನಪ್ರಿಯರ ಪರಿಷತ್ತಲ್ಲ. ಸಾಹಿತಿಗಳಿಗೆ ಅವಮಾನ ಮಾಡುವ ಚಾಳಿ ಬಿಟ್ಟುಬಿಡಿ. ಸಾಹಿತಿಗಳು ಸೌಜನ್ಯ ಮತ್ತು ಸಾತ್ವಿಕ ನಡೆಯವರು. ರೌಡಿಶೀಟರ್ಗಳ ತಂಡ ಕಟ್ಟಿಕೊಂಡು ಕನ್ನಡವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದವರು ಮಾತನಾಡುವ ವೈಖರಿ ಕನ್ನಡ ನಾಡಿಗೆ ಅಪಮಾನ ಮಾಡುತ್ತಿರುವುದು ಅತ್ಯಂತ ದುಃಖದ ಸಂಗತಿ. ಮತ್ತು ಖಂಡನಾರ್ಹವಾದುದು. ನಿಮ್ಮಂತೆ ನಾವು ನಿಮ್ಮನ್ನು ಅವಮಾನಿಸುವುದಿಲ್ಲ. ಸಾಹಿತಿಗಳ ಮನಸ್ಸು ಹೂವಿನಂತಹುದು. ಮುಳ್ಳಿನ ಆಶ್ರಯ ಪಡೆಯುವ ಗುಲಾಬಿ ಧರಿಸುವವರು ಮುಳ್ಳನ್ನು ಕಿತ್ತೊಗೆಯುತ್ತಾರೆ. ಈ ಸತ್ಯ ಮನುಷ್ಯ ಮಾತ್ರರಿಗೆ ಅರ್ಥವಾಗಲು ಸಾಧ್ಯ. ಸಾಹಿತಿಗಳ ಅವಮಾನ ಮಾಡುವುದು ನಾಡಿಗೆ ಅವಮಾನ ಮಾಡುವುದು ಎರಡೂ ಒಂದೇ…. ರೌಡಿಶೀಟರ್ ಜೊತೆಗಿಟ್ಟುಕೊಳ್ಳುವ ಪರಿ ಅತ್ಯಂತ ಶೋಚನೀಯ. ನೈತಿಕತೆ ಇದ್ದರೆ ರಾಜೀನಾಮೆ ಕೊಡಿ.

Total Views: 0
Share This Article