Breaking News

ಸವಿತಾ ಸಮಾಜದವತಿಯಿಂದಶ್ರೀ ಶಂಕುಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೩ನೇ ವರ್ಷದ ಹನುಮಾನ್ ಜಯಂತ್ಯೋತ್ಸವ

By Savita Samajwathy
23rd Hanuman Jayantyotsava at Sri Shankuchakra Anjaneya Swamy Temple

ಗಂಗಾವತಿ: ಗಂಗಾವತಿಯ ಸವಿತಾ ಸಮಾಜದ ಬಾಂಧವರಿAದ ಇಂದು ಮಂಗಳವಾರ ಶ್ರೀ ಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೩ನೇ ವರ್ಷದ ಹನುಮಾನ್ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಒಃBS ಪದವಿಯನ್ನು ಪಡೆದಿರುವಂತಹ ಗಂಗಾವತಿಯ ಕುಮಾರ್ ಡಾಕ್ಟರ್ ನವೀನ್ ನಸಲಾಯ ತಂದೆ ವಿಶ್ವನಾಥ ನಸಲಾಯ ಹಾಗೂ ಕಾರಟಗಿಯ ಕುಮಾರಿ ಡಾಕ್ಟರ್ ವೆನ್ನೆಲ್ಲಾ ತಂದೆ ಜಯರಾಮ್ ಇವರಿಗೆ ಅಭಿನಂದನೆ (ಸನ್ಮಾನ) ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ಈ. ಮಾರೇಶ, ಗಂಗಾವತಿ ತಾಲೂಕ ಅಧ್ಯಕ್ಷರಾದ ಹೆಚ್. ಗೋಪಾಲ್ ಹಾಗೂ ಕಾರಟಗಿಯ ಉಪನ್ಯಾಸಕರಾದ ರಾಮಾಂಜನೇಯಲು ಮಾತನಾಡಿ, ನಮ್ಮ ಸವಿತಾ ಸಮಾಜದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಬೇಕು, ಆ ಮೂಲಕ ಸಮಾಜದ ಶ್ರೇಯೋಭಿವೃದ್ಧಿ ಆಗಲಿದೆ. ನಮ್ಮ ಸಮಾಜವೂ ಕೂಡಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕು ಅಧ್ಯಕ್ಷರಾದ ಮಾರುತಿ ಸೂಗೂರು, ಕೊಪ್ಪಳ ಜಿಲ್ಲಾ ಗೌರವಧ್ಯಕ್ಷರಾದ ಓ.ಙ ಮಹಾಬಲೇಶ್ವರ, ಕೊಪ್ಪಳ ಜಿಲ್ಲಾ ಸಂಘಟಕರಾದ ಏ.ಇ.ಃ ಮೋಹನ್, ಗಂಗಾವತಿ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಈ ತಾಯಪ್ಪ ಹಾಗೂ ಗಂಗಾವತಿಯ ಪದಾಧಿಕಾರಿಗಳಾದ ಇ. ಶ್ರೀನಿವಾಸ್ ಪೊಲೀಸ್, ಆಂಜನೇಯ, ಎಸ್. ಭೀಮೇಶ, ಎಸ್. ನಾಗೇಶ, ದೇವರಾಜ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

About Mallikarjun

Check Also

ರಾಷ್ಟ್ರೀಯ ಪಕ್ಷ ಬಿಎಸ್ಪಿಗೆ ಅವಕಾಶನೀಡಿ:ಎಂ.ಕೃಷ್ಣಮೂರ್ತಿ

ಕೊಪ್ಪಳ.ಮೇ.04: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಿ ಬಿಎಸ್ ಪಿ ಪಕ್ಷವನ್ನು ಬೆಂಬಲಿಸುವಂತೆ ಬಹುಜನ ಸಮಾಜ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.