Special Puja at Sringeri under the supervision of Shri Sharada Shankar Bhakta Mandali
ಗಂಗಾವತಿ: ಶ್ರೀ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ನೇತೃತ್ವದಲ್ಲಿ ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಶೃಂಗೇರಿಯ ಶಾರದಾ ಪೀಠದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಶೃಂಗೇರಿ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಹಾಗೂ ಅಧ್ಯಕ್ಷರು, ಸದಸ್ಯರು, ಮಹಿಳೆಯರು ಶಾರದಾದೇವಿಗೆ ಉಡೀ ತುಂಬುವುದು, ಸುಮಾರು ೪೦ಕ್ಕೂ ಅಧಿಕ ಅಖಂಡ ಭಜನೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಗಾಯಿತ್ರಿ ಹಾಗೂ ಶಕುಂತಲಾ ಮಾತನಾಡಿದರು, ಧರ್ಮದರ್ಶಿ ನಾರಾಯಣರಾವ್ ವೈದ್ಯ, ರಾಘವೇಂದ್ರ ಅಳವಂಡಿಕರ, ಇತರರು ಪಾಲ್ಗೊಂಡಿದ್ದರು, ಉಭಯ ಜಗದ್ಗುರುಗಳಿಂದ ಆಶೀರ್ವಾದ ಪಡೆದುಕೊಳ್ಳಲಾಯಿತು.